ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ರೀಲ್ಸ್‌ ಗೀಳಿಗೆ ಪತ್ನಿಯನ್ನೇ ಕೊಂದ; ಬೆಂಗಳೂರಿನಿಂದ ಬಿಹಾರಕ್ಕೆ ಓಡಿ ಹೋಗಿದ್ದ ಪತಿ ಬಂಧನ

Crime News: ಪತ್ನಿಯನ್ನು ಕೊಂದು ತನ್ನ ತವರು ರಾಜ್ಯಕ್ಕೆ ಪರಾರಿಯಾಗಿದ್ದ ಆರೋಪದ ಮೇಲೆ 24 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಕೊಲೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ಬೆಂಗಳೂರು ಪೊಲೀಸರು ಬಿಹಾರಕ್ಕೆ ತೆರಳಿ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ನಂತರ ವಿಚಾರಣೆಗಾಗಿ ಕುಂಬಳಗೋಡಿಗೆ ಕರೆತಂದರು.

ಪತ್ನಿಯನ್ನು ಕೊಂದು ಬಿಹಾರಕ್ಕೆ ಓಡಿ ಹೋಗಿದ್ದ ಪತಿ ಬಂಧನ

ಪತ್ನಿಯನ್ನು ಕೊಂದು ಬಿಹಾರಕ್ಕೆ ಓಡಿ ಹೋಗಿದ್ದ ಪತಿ ಬಂಧನ -

Priyanka P
Priyanka P Aug 7, 2026 8:49 PM

ಬೆಂಗಳೂರು, ಆ.7: ಪತ್ನಿಯನ್ನು ಕೊಂದು ತನ್ನ ತವರು ರಾಜ್ಯಕ್ಕೆ ಪರಾರಿಯಾಗಿದ್ದ ಆರೋಪದ ಮೇಲೆ 24 ವರ್ಷದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಪದೇ ಪದೇ ಕೌಟುಂಬಿಕ ಕಲಹಗಳು ನಡೆದ ಕಾರಣ ಪತ್ನಿಯನ್ನು ಕತ್ತು ಹಿಸುಕಿ ಕೊಂದಿರುವುದಾಗಿ ಆರೋಪಿಯು ಒಪ್ಪಿಕೊಂಡಿದ್ದಾನೆ. ಬೆಂಗಳೂರಿನ (Bengaluru) ಕುಂಬಳಗೋಡಿನಲ್ಲಿ ಜುಲೈ 25 ರಂದು ಈ ಘಟನೆ ನಡೆದಿದ್ದು, ಆರೋಪಿ ಧೀರಜ್ ಕುಮಾರ್ ಎಂಬಾತ ತನ್ನ ಪತ್ನಿ ರೀಮಾ ಕುಮಾರಿಯನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ನಂತರ ಆಕೆಯ ದೇಹವನ್ನು ಬೆಡ್‌ಶೀಟ್‌ನಲ್ಲಿ ಸುತ್ತಿ ಸ್ಥಳದಿಂದ ಪರಾರಿಯಾಗಿದ್ದ (Crime News).

ಕೊಲೆ ಪ್ರಕರಣ ಬೆಳಕಿಗೆ ಬಂದ ಕೂಡಲೇ ಬೆಂಗಳೂರು ಪೊಲೀಸರು ಬಿಹಾರಕ್ಕೆ ತೆರಳಿ ಆತನನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ನಂತರ ವಿಚಾರಣೆಗಾಗಿ ಕುಂಬಳಗೋಡಿಗೆ ಕರೆತಂದರು. ಪ್ರೀತಿಸಿ ವಿವಾಹವಾಗಿದ್ದ ಈ ಜೋಡಿ ಕಳೆದ 10 ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಕೊಲೆಯಾದ ರೀಮಾ ತನ್ನ ಕುಟುಂಬಕ್ಕೆ ತಿಳಿಸದೆ ಬೆಂಗಳೂರಿಗೆ ಪತಿಯೊಂದಿಗೆ ಬಂದಿದ್ದಳು.

ಬೆಂಗಳೂರಿಗೆ ಬಂದ ನಂತರ ರೀಮಾ ತನ್ನಲ್ಲಿ ಆಸಕ್ತಿ ಕಳೆದುಕೊಂಡಿದ್ದಾಳೆ ಎಂದು ಧೀರಜ್ ತನಿಖಾಧಿಕಾರಿಗಳಿಗೆ ಹೇಳಿದ್ದಾನೆ. ಅವಳು ಮನೆಯಲ್ಲಿ ರೀಲ್‌ಗಳನ್ನು ಮಾಡುವುದರಲ್ಲಿಯೇ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಳು. ಲೈಂಗಿಕ ಸಂಬಂಧದಲ್ಲಿ ತೊಡಗಿಸಿಕೊಳ್ಳಲು ಇಷ್ಟವಿರಲಿಲ್ಲ ಎಂದು ಹೇಳಿದ್ದಾನೆ. ಅಲ್ಲದೆ, ರೀಮಾ ತನಗಾಗಿ ಮಾತ್ರ ಅಡುಗೆ ತಯಾರಿಸುತ್ತಿದ್ದಳು. ಮನೆಗೆ ಹಿಂದಿರುಗಿದಾಗ ತನಗೆ ಊಟ ಬಡಿಸುತ್ತಿರಲಿಲ್ಲ ಎಂದು ಧೀರಜ್ ಹೇಳಿದ್ದಾನೆ. ಇದು ದಂಪತಿಗಳ ನಡುವೆ ಆಗಾಗ ಜಗಳಗಳಿಗೆ ಕಾರಣವಾಗಿದ್ದವು ಎನ್ನಲಾಗಿದೆ.

Bengaluru News: ಸಲಿಂಗ ಪ್ರೀತಿಗೆ ಮನೆಯವರ ವಿರೋಧ; ಮನನೊಂದು ಒಂದೇ ಮರಕ್ಕೆ ನೇಣು ಬಿಗಿದುಕೊಂಡ ಇಬ್ಬರು ಯುವತಿಯರು!

ರೀಮಾ ಬಿಹಾರಕ್ಕೆ ಮರಳಲು ಒತ್ತಾಯಿಸಿದ್ದರಿಂದ ಅವರ ಸಂಬಂಧ ಮತ್ತಷ್ಟು ಹದಗೆಟ್ಟಿತು ಎನ್ನಲಾಗಿದೆ. ಕೊಲೆಯಾದ ದಿನ ಧೀರಜ್ ಮನೆಗೆ ಹಿಂತಿರುಗಿದಾಗ ತನಗಾಗಿ ಯಾವುದೇ ಆಹಾರವನ್ನು ತಯಾರಿಸಲಾಗಿಲ್ಲ ಎಂದು ತಿಳಿದುಬಂದಿದೆ. ದಂಪತಿಗಳ ನಡುವೆ ಸಣ್ಣಪುಟ್ಟ ಜಗಳ ನಡೆದು ನಂತರ ಅದು ಹೆಚ್ಚಾಯಿತು. ಬಳಿಕ ಧೀರಜ್, ರೀಮಾಳನ್ನು ಮಲಗಲು ಹೇಳಿದ್ದಾನೆ. ಆದರೆ ಅವಳು ನಿರಾಕರಿಸಿದಳು. ರೀಮಾ ಮೊದಲು ಮರದ ಕೋಲಿನಿಂದ ಅವನ ಮೇಲೆ ಹಲ್ಲೆ ಮಾಡಿದಳು, ನಂತರ ಧೀರಜ್ ದುಪಟ್ಟಾ ಬಳಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾಗಿ ಹೇಳಿದ್ದಾನೆ.

ಕೊಲೆಯ ನಂತರ, ಧೀರಜ್ ಮುಖವನ್ನು ಪ್ಲಾಸ್ಟಿಕ್‌ನಿಂದ ಸುತ್ತಿ, ಶವವನ್ನು ಬೆಡ್ ಶೀಟ್‌ನಿಂದ ಮುಚ್ಚಿ, ಬಾಡಿಗೆ ಕೋಣೆಯೊಳಗೆ ಬಿಟ್ಟು, ಬಿಹಾರಕ್ಕೆ ಪರಾರಿಯಾಗಿದ್ದಾನೆ. ಜುಲೈ 29 ರಂದು ರೀಮಾ ಅವರ ಪರಿಚಯಸ್ಥರೊಬ್ಬರು ದಂಪತಿಗಳ ಕೋಣೆಯಿಂದ ಕೆಟ್ಟ ವಾಸನೆ ಬರುತ್ತಿದೆ ಎಂದು ಕಟ್ಟಡದ ಮಾಲೀಕರಿಗೆ ಮಾಹಿತಿ ನೀಡಿದಾಗ ಈ ಅಪರಾಧ ಬೆಳಕಿಗೆ ಬಂದಿತು. ಕೋಣೆಗೆ ಪ್ರವೇಶಿಸಿದಾಗ, ಶೌಚಾಲಯದ ಬಳಿ ಬೆಡ್ ಶೀಟ್‌ನಲ್ಲಿ ಸುತ್ತಿದ ರೀಮಾಳ ಕೊಳೆತ ದೇಹವು ಪತ್ತೆಯಾಗಿದ್ದು, ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದರು. ದೂರಿನ ಆಧಾರದ ಮೇಲೆ, ಕುಂಬಳಗೋಡು ಪೊಲೀಸರು ಕೊಲೆ ಮತ್ತು ಸಾಕ್ಷ್ಯನಾಶದ ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ಆರಂಭಿಸಿದರು.

ವಿಚಾರಣೆಯ ಸಮಯದಲ್ಲಿ ಧೀರಜ್ ಅಪರಾಧವನ್ನು ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ತನಿಖಾಧಿಕಾರಿಗಳು ತನಿಖೆಯ ಭಾಗವಾಗಿ ವೈಜ್ಞಾನಿಕ ಸಾಕ್ಷ್ಯಗಳು ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಹ ಸಂಗ್ರಹಿಸಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ.