ಮಕ್ಕಳಿಗೆ ಬುದ್ಧಿವಾದ ಹೇಳಿದ್ದೇ ತಪ್ಪಾಯ್ತಾ? ಮೂವರು ಸಹೋದರಿಯರ ಆತ್ಮಹತ್ಯೆ ಕುರಿತು ತಂದೆ ಹೇಳಿದ್ದೇನು?
ಗಾಜಿಯಾಬಾದ್ ಆತ್ಮಹತ್ಯೆ ಕುರಿತು ತನಿಖೆ ನಡೆಯುತ್ತಿದ್ದು, ಹಲವು ವಿಷಯಗಳು ಬಹಿರಂಗಗೊಂಡಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ ಮೂವರು ಮಕ್ಕಳ ತಂದೆ ಚೇತನ್ ಕುಮಾರ್ ಇದೀಗ ತಮ್ಮ ಮಕ್ಕಳ ಸಾವಿನ ಕುರಿತು ಮಾತನಾಡಿದ್ದಾರೆ. ಸದ್ಯ ಘಟನೆ ಕುರಿತು ತನಿಖೆ ನಡೆಸುತ್ತಿದ್ದು, ಚೇತನ್ ಅವರಿಗೆ ಮೂವರು ಹೆಂಡತಿಯರಿದ್ದಾರೆ ಎಂದು ತಿಳಿದು ಬಂದಿದೆ.
ಸಂಗ್ರಹ ಚಿತ್ರ -
ಲಖನೌ: ಗಾಜಿಯಾಬಾದ್ ಆತ್ಮಹತ್ಯೆ ಕುರಿತು ತನಿಖೆ ನಡೆಯುತ್ತಿದ್ದು, ಹಲವು ವಿಷಯಗಳು ಬಹಿರಂಗಗೊಂಡಿದೆ. ಆತ್ಮಹತ್ಯೆ ಮಾಡಿಕೊಂಡಿದ್ದ (Ghaziabad sisters self harming) ಮೂವರು ಮಕ್ಕಳ ತಂದೆ ಚೇತನ್ ಕುಮಾರ್ ಇದೀಗ ತಮ್ಮ ಮಕ್ಕಳ ಸಾವಿನ ಕುರಿತು ಮಾತನಾಡಿದ್ದಾರೆ. (Koreans Games) ಘಟನೆಯ ಕುರಿತು ಮಾತನಾಡಿದ ಕುಮಾರ್, ತಾನು ಮೂವರು ಮಕ್ಕಳನ್ನು ತುಂಬಾ ಪ್ರೀತಿಸುತ್ತಿದ್ದೆ ಮತ್ತು ಮೂವರು ಹುಡುಗಿಯರು ಕೋಣೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿರುವುದನ್ನು ತನ್ನ ಪತ್ನಿ ಹೇಳಿದ ಬಳಿಕ ತನಗೆ ತಿಳಿಯಿತು ಎಂದು ಭಾವುಕರಾದರು. ನಿಶಿಕಾ (16), ಪ್ರಾಚಿ (14) ಮತ್ತು ಪಖಿ (12) ಎಂಬ ಮೂವರು ಹುಡುಗಿಯರು ಒಬ್ಬರ ನಂತರ ಒಬ್ಬರು ಕಿಟಕಿಯಿಂದ ಹೊರಗೆ ಹಾರುವ ಮೊದಲು ಕೋಣೆಯೊಳಗೆ ಬೀಗ ಹಾಕಿಕೊಂಡಿದ್ದರು ಎಂದು ತಿಳಿದು ಬಂದಿದೆ.
"ನಾನು ನನ್ನ ಮಕ್ಕಳನ್ನು ತುಂಬಾ ಮುದ್ದಿಸುತ್ತಿದ್ದೆ. ಅವರು ಕೊರಿಯನ್ ನಾಟಕಗಳು, ಕೊರಿಯನ್ ಆಟಗಳು ಮತ್ತು ಕೊರಿಯನ್ ರೀಲ್ಗಳನ್ನು ನೋಡುತ್ತಿದ್ದರು. ಅವರ ಕಣ್ಣುಗಳು ಊದಿಕೊಂಡಿದ್ದವು, ಅದಕ್ಕಾಗಿಯೇ ನಾನು ಅವರ ಫೋನ್ಗಳನ್ನು ಕಿತ್ತುಕೊಂಡೆ. ಅವರು ಅದರ ಬಗ್ಗೆ ಕೋಪಗೊಂಡಿದ್ದರು. ನಿಮ್ಮ ಮಗುವಿನ ಫೋನ್ ಅನ್ನು ಕಿತ್ತುಕೊಳ್ಳುವುದು ಪಾಪವೇ? ಅವರ ಕಣ್ಣುಗಳು ಊದಿಕೊಂಡಿದ್ದ ಕಾರಣ ನಾನು ಅವರ ಫೋನ್ಗಳನ್ನು ಕಿತ್ತುಕೊಂಡೆ ಎಂದು ಚೇತನ್ ಹೇಳಿದ್ದಾರೆ. ಸುಮಾರು 10 ದಿನಗಳ ಹಿಂದೆ ಸಹೋದರಿಯರ ತಂದೆಗೆ ಈ ಸೋಶಿಯಲ್ ಮೀಡಿಯಾ ಖಾತೆಗಳ ಬಗ್ಗೆ ಗೊತ್ತಾಯಿತು.
ತಕ್ಷಣವೇ ಅವುಗಳನ್ನು ಡಿಲೀಟ್ ಮಾಡಿ, ತಮ್ಮ ಮಕ್ಕಳಿಂದ ಮೊಬೈಲ್ ಫೋನ್ಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಸುಮಾರು 2 ಕೋಟಿ ರೂ.ವರೆಗೂ ಸಾಲವನ್ನು ಹೊಂದಿದ್ದ ತಂದೆ ಚೇತನ್ ಕುಮಾರ್, ವಿದ್ಯುತ್ ಬಿಲ್ ಕಟ್ಟಲು ಫೋನ್ಗಳನ್ನು ಮಾರಾಟ ಮಾಡಿದ್ದಲ್ಲದೆ, ತನ್ನ ಮಕ್ಕಳಿಗೆ ಮದುವೆ ಮಾಡಿಬಿಡುವುದಾಗಿಯೂ ಬೆದರಿಕೆ ಹಾಕಿದ್ದ ಎಂದು ತಿಳಿದು ಬಂದಿದೆ.
ಸದ್ಯ ಘಟನೆ ಕುರಿತು ತನಿಖೆ ನಡೆಸುತ್ತಿದ್ದು, ಚೇತನ್ ಅವರಿಗೆ ಮೂವರು ಹೆಂಡತಿಯರಿದ್ದಾರೆ ಎಂದು ತಿಳಿದು ಬಂದಿದೆ. ಕೋವಿಡ್ -19 ಸಾಂಕ್ರಾಮಿಕ ರೋಗದಿಂದ ಕುಟುಂಬವು ಆರ್ಥಿಕ ಸಂಕಷ್ಟದಲ್ಲಿದೆ, ಸಾಲಗಳು ಅವರ ಒಂಟಿತನವನ್ನು ಇನ್ನಷ್ಟು ಹೆಚ್ಚಿಸಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಹೋದರಿಯರು ತಮ್ಮ ತಾಯಿಗಿಂತ ತಮ್ಮ ತಂದೆಯೊಂದಿಗೆ ಹೆಚ್ಚು ಭಾವನಾತ್ಮಕ ಸಂಬಂಧ ಹೊಂದಿದ್ದರು ಎಂದು ತಿಳಿದು ಬಂದಿದೆ.