ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder Case: ಸೋನಮ್‌, ಮುಸ್ಕನ್ ರಸ್ತೋಗಿ...ಪ್ರಿಯಕರನಿಗಾಗಿ ಪತಿಯನ್ನೇ ಕೊಂದ ಪತ್ನಿಯರು ಇವರು

ದೇಶವನ್ನೇ ಬೆಚ್ಚಿ ಬೀಳಿಸಿದ್ದು ರಾಜಾ ರಘುವಂಶಿ ಕೊಲೆ ಪ್ರಕರಣವೊಂದೇ ಅಲ್ಲ. ಈ ವರ್ಷ ಸೌರಭ್ ರಜಪೂತ್, ದಿಲೀಪ್ ಯಾದವ್, ಪ್ರವೀಣ್... ಇವರೆಲ್ಲರ ಕೊಲೆಯಾಗಿರುವುದು ಪತ್ನಿಯರಿಂದಲೇ. ಅದೂ ಅವರು ತಮ್ಮ ಪ್ರಿಯಕರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ.

ಈ ವರ್ಷ ದೇಶವನ್ನೇ ಬೆಚ್ಚಿ ಬೀಳಿಸಿದ ಕೊಲೆ ಪ್ರಕರಣಗಳಿವು

ಇಂದೋರ್: ದೇಶವನ್ನೇ ಬೆಚ್ಚಿಬೀಳಿಸಿರುವ ರಾಜಾ ರಘುವಂಶಿ (Raja Raghuvanshi murder case) ಕೊಲೆವೊಂದೇ (Murder Case) ಅಲ್ಲ ಈ ವರ್ಷ ಸೌರಭ್ ರಜಪೂತ್ (Saurabh Rajput murder case), ದಿಲೀಪ್ ಯಾದವ್, ಪ್ರವೀಣ್... ಇವರೆಲ್ಲರ ಕೊಲೆಯಾಗಿರುವುದು ಪತ್ನಿಯರಿಂದಲೇ. ಅದೂ ಅವರು ತಮ್ಮ ಪ್ರಿಯಕರೊಂದಿಗೆ ಸೇರಿ ಈ ಕೃತ್ಯ ಎಸಗಿದ್ದಾರೆ. ರಾಜಾ ರಘುವಂಶಿ ಕೊಲೆಯಾದ ಬಳಿಕ ಈ ಎಲ್ಲ ಕೊಲೆ ಪ್ರಕರಣಗಳ ಕುರಿತು ಚರ್ಚೆ ತೀವ್ರವಾಗಿದೆ. ಅಪರಾಧ ಕಥೆಗಳು ಒಂದಕ್ಕಿಂತ ಇನ್ನೊಂದು ಹೆಚ್ಚು ಭಿನ್ನವಾಗಿ ಇರದೇ ಇದ್ದರೂ ಇದು ಸಾಗಿದ ದಾರಿಗಳು ಸಾಕಷ್ಟು ಕುತೂಹಲಕಾರಿಯಾಗಿದೆ. ತನಿಖೆಯ ಅಂಶ ಹಲವು ವಿಚಾರಗಳ ಬಗ್ಗೆ ಯೋಚಿಸುವಂತೆ ಮಾಡಿದೆ.

ಇತ್ತೀಚೆಗೆ ನಡೆದ ಕೊಲೆ ಪ್ರಕರಣದಲ್ಲಿ ರಾಜಾ ರಘುವಂಶಿ ಮತ್ತು ಸೌರಭ್ ರಜಪೂತ್ ಅವರ ಹತ್ಯೆ ಪ್ರಕರಣ ದೇಶವೇ ಬೆಚ್ಚಿಬೀಳುವಂತೆ ಮಾಡಿದೆ. ಈ ಬಗ್ಗೆ ಸಾಮಾಜಿಕ ಮಾಧ್ಯಮದ ಮೂಲಕ ಅನೇಕರು ತಮ್ಮತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಸಾಕಷ್ಟು ಮಂದಿ ನಂಬಿಕೆಯೇ ಆಧಾರವಾಗಿರುವ ಮದುವೆಯ ಬಗ್ಗೆ ಚರ್ಚೆಯನ್ನೂ ಪ್ರಾರಂಭಿಸಿದ್ದಾರೆ.

ಮೀರತ್ ಬ್ಲೂ ಡ್ರಮ್ ಪ್ರಕರಣ

ಮೀರತ್‌ನ ಬ್ರಹ್ಮಪುರಿಯಲ್ಲಿ ಮಾರ್ಚ್ 19ರಂದು ಸೌರಭ್ ರಜಪೂತ್ ಎಂಬಾತನನ್ನು ಪತ್ನಿ ಮುಸ್ಕನ್ ರಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಸೇರಿ ಕೊಂದಿದ್ದರು. ರಜಪೂತ್ ದೇಹವನ್ನು ಆತನ ಮನೆಯಲ್ಲೇ 15 ತುಂಡುಗಳಾಗಿ ಕತ್ತರಿಸಿ ಸೀಲ್ ಮಾಡಿದ, ಸಿಮೆಂಟ್ ತುಂಬಿದ ನೀಲಿ ಡ್ರಮ್‌ಗೆ ಹಾಕಲಾಗಿತ್ತು. ತನಿಖೆ ವೇಳೆ ಸೌರಭ್ ರಜಪೂತ್ ಗೆ ಮಾದಕ ದ್ರವ್ಯ ನೀಡಿ ಹಲವು ಬಾರಿ ಚಾಕುವಿನಿಂದ ಇರಿದು ಕೊಲೆ ಮಾಡಿರುವುದಾಗಿ ತಿಳಿದುಬಂದಿತ್ತು. ಸೌರಭ್ ಅವರ ಆರು ವರ್ಷದ ಮಗಳು ತನ್ನ ಅಜ್ಜಿಗೆ "ಅಪ್ಪ ಡ್ರಮ್‌ನಲ್ಲಿದ್ದಾರೆ" ಎಂದು ಹೇಳಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಸ್ತುತ ಆರೋಪಿಗಳು ಮೀರತ್ ಜೈಲಿನಲ್ಲಿದ್ದಾರೆ. ಮುಸ್ಕಾನ್ ಗರ್ಭಿಣಿಯಾಗಿರುವುದು ಕೂಡ ಇತ್ತೀಚಿಗೆ ದೃಢಪಟ್ಟಿದೆ.

ಔರೈಯದ ಕೊಲೆ ಪ್ರಕರಣ

ವಿವಾಹವಾದ ಕೆಲವೇ ಕೆಲವು ದಿನಗಳ ಬಳಿಕ 25 ವರ್ಷದ ದಿಲೀಪ್ ಯಾದವ್ ಕೊಲೆಯಾಗಿದ್ದಾನೆ. ಆತನನ್ನು ಪತ್ನಿ ಪ್ರಗತಿ ಯಾದವ್ ಉತ್ತರ ಪ್ರದೇಶದ ಔರೈಯ ಜಿಲ್ಲೆಯಲ್ಲಿ ತನ್ನ ಪ್ರಿಯಕರ ಅನುರಾಗ್ ಜತೆಗೂಡಿ ಕೊಲೆ ಮಾಡಿದ್ದಾಳೆ. ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ದಿಲೀಪ್ ಗೋಧಿ ಗದ್ದೆಯಲ್ಲಿ ಪತ್ತೆಯಾಗಿದ್ದು ಬಳಿಕ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಆತ ಸಾವನ್ನಪ್ಪಿದ. ಮರಣೋತ್ತರ ಪರೀಕ್ಷೆಯಲ್ಲಿ ದಿಲೀಪ್ ಗೆ 315 ಬೋರ್ ಪಿಸ್ತೂಲಿನಿಂದ ತಲೆಗೆ ಗುಂಡು ಹಾರಿಸಿರುವುದು ದೃಢಪಟ್ಟಿತ್ತು.

ಭಿವಾನಿಯ ಕೊಲೆ ಪ್ರಕರಣ

ಇನ್‌ಸ್ಟಾಗ್ರಾಮ್‌ನಲ್ಲಿ 34,000ಕ್ಕೂ ಹೆಚ್ಚು ಅನುಯಾಯಿಗಳನ್ನು ಹೊಂದಿರುವ ಸಾಮಾಜಿಕ ಮಾಧ್ಯಮ ಪ್ರಭಾವಿ ರವೀನಾ ತನ್ನ ಪ್ರೇಮಿ ಸುರೇಶ್‌ನ ಜತೆಗೂಡಿ ಹರಿಯಾಣದ ಭಿವಾನಿಯಲ್ಲಿ ಗಂಡ ಪ್ರವೀಣ್‌ನನ್ನು ಕೊಂದಿದ್ದಾಳೆ. ಹೆಂಡತಿಯ ಅಕ್ರಮ ಸಂಬಂಧದ ಬಗ್ಗೆ ತಿಳಿದ ಪತಿಯ ಕುತ್ತಿಗೆಗೆ ಶಾಲ್‌ನಿಂದ ಬಿಗಿದು ರವೀನಾ ಕೊಂದಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಆರೋಪಿಗಳು ತಪ್ಪೊಪ್ಪಿಕೊಂಡಿದ್ದು, ಸದ್ಯ ಜೈಲಿನಲ್ಲಿದ್ದಾರೆ.

ಇದನ್ನೂ ಓದಿ: Aamir Khan: ನಿರ್ದೇಶಕ ಲೋಕೇಶ್ ಕನಗರಾಜ್ ಹೊಸ ಚಿತ್ರದ ಆಫರ್ ಬಗ್ಗೆ ಸ್ಪಷ್ಟನೆ ನೀಡಿದ ನಟ ಆಮೀರ್‌ ಖಾನ್

ಮೇಘಾಲಯ ಹನಿಮೂನ್ ಕೊಲೆ ಪ್ರಕರಣ

ಇದು ಈ ವರ್ಷದಲ್ಲಿ ನಡೆದ ಆಘಾತಕಾರಿ ಕೊಲೆ ಪ್ರಕರಣ. ಮದುವೆಯಾಗಿ ಪತಿ ರಾಜಾ ರಘುವಂಶಿಯನ್ನು ಹನಿಮೂನ್‌ಗೆ ಕರೆದುಕೊಂಡು ಹೋದ ಸೋನಮ್ ರಘುವಂಶಿ ತನ್ನ ಪ್ರಿಯಕರ ರಾಜ್‌ ಸಹಾಯದಿಂದ ಆತನನ್ನು ಕೊಲೆ ಮಾಡಿರುವುದು ತನಿಖೆ ವೇಳೆ ಬಹಿರಂಗವಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಸೋನಮ್‌ ಮತ್ತು ಆಕೆಯ ಪ್ರಿಯಕರ ಸೇರಿದಂತೆ ನಾಲ್ವರನ್ನು ಬಂಧಿಸಲಾಗಿದೆ. ಪ್ರಸ್ತುತ ಈ ಪ್ರಕರಣದ ತನಿಖೆ ನಡೆಸಲಾಗುತ್ತಿದೆ.