ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಲೆಬನಾನ್‌ ಮತ್ತೆ ಮೇಲೆ ದಾಳಿ; ಇಡೀ ಹಳ್ಳಿಯನ್ನೇ ಸ್ಫೋಟ ಮಾಡಿದ ಇಸ್ರೇಲ್‌!

ಅಮೆರಿಕ ಹಾಗೂ ಇರಾನ್‌ ನಡುವಿನ ಶಾಂತಿ ಒಪ್ಪಂದ ಮುರಿದು ಬಿದ್ದ ಬೆನ್ನಲ್ಲೇ ಲೆಬನಾನ್‌ ಮೇಲೆ ಇಸ್ರೇಲ್‌ ಮತ್ತೆ ತನ್ನ ದಾಳಿಯನ್ನು ಶುರು ಮಾಡಿದೆ. ಇಸ್ರೇಲಿ ಸೇನೆಯು ದಕ್ಷಿಣ ಲೆಬನಾನ್‌ನಲ್ಲಿರುವ ಸಂಪೂರ್ಣ ಹಳ್ಳಿಗಳನ್ನು ವ್ಯವಸ್ಥಿತವಾಗಿ ನೆಲಸಮ ಮಾಡಿತು.

ಲೆಬನಾನ್‌ ಮೇಲೆ ದಾಳಿ; ಇಡೀ ಹಳ್ಳಿಯನ್ನೇ ಸ್ಫೋಟ ಮಾಡಿದ ಇಸ್ರೇಲ್‌!

ಸಂಗ್ರಹ ಚಿತ್ರ -

Vishakha Bhat Heggar
Vishakha Bhat Heggar Apr 12, 2026 6:36 PM

ಬೈರುತ್‌: ಅಮೆರಿಕ ಹಾಗೂ ಇರಾನ್‌ ನಡುವಿನ ಶಾಂತಿ ಒಪ್ಪಂದ ಮುರಿದು ಬಿದ್ದ ಬೆನ್ನಲ್ಲೇ ಲೆಬನಾನ್‌ ಮೇಲೆ ಇಸ್ರೇಲ್‌ ಮತ್ತೆ ತನ್ನ ದಾಳಿಯನ್ನು ಶುರು ಮಾಡಿದೆ. ಇಸ್ರೇಲಿ ಸೇನೆಯು ದಕ್ಷಿಣ (Israel air strike on Lebanon) ಲೆಬನಾನ್‌ನಲ್ಲಿರುವ ಸಂಪೂರ್ಣ ಹಳ್ಳಿಗಳನ್ನು ವ್ಯವಸ್ಥಿತವಾಗಿ ನೆಲಸಮ ಮಾಡಿತು. ಗಾರ್ಡಿಯನ್ ಪ್ರಕಾರ, ಇಸ್ರೇಲಿ ಮಿಲಿಟರಿ ಮನೆಗಳಿಗೆ ಸ್ಫೋಟಕಗಳನ್ನು ತುಂಬಿಸಿ, ನಂತರ ದೊಡ್ಡ ಪ್ರಮಾಣದ ರಿಮೋಟ್-ನಿಯಂತ್ರಿತ ಸ್ಫೋಟಗಳಲ್ಲಿ ಅವುಗಳನ್ನು ಸ್ಫೋಟಿಸುವ ಮೂಲಕ ಹಳ್ಳಿಯನ್ನು ನಾಶ ಮಾಡಲಾಗಿದೆ.

ತೈಬೆ, ನಕೌರಾ ಮತ್ತು ಡೀರ್ ಸೆರಿಯಾನ್ ಗಡಿ ಗ್ರಾಮಗಳಲ್ಲಿ ಸ್ಫೋಟ ಸಂಭವಿಸಿದೆ. ಲೆಬನಾನಿನ ಮಾಧ್ಯಮಗಳು ಹೆಚ್ಚುವರಿ ಗಡಿ ಹಳ್ಳಿಗಳಲ್ಲಿ ಇದೇ ರೀತಿಯ ಸಾಮೂಹಿಕ ಸ್ಫೋಟಗಳನ್ನು ವರದಿ ಮಾಡಿವೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಗಾಜಾದ ರಫಾ ಮತ್ತು ಬೀಟ್ ಹನೌನ್‌ನಲ್ಲಿ ಬಳಸಿದ ವಿಧಾನವನ್ನು ಆಧರಿಸಿ ಗಡಿ ಗ್ರಾಮಗಳಲ್ಲಿರುವ "ಎಲ್ಲಾ ಮನೆಗಳನ್ನು" ನಾಶಮಾಡಲು ಸಾರ್ವಜನಿಕ ಕರೆ ನೀಡಿದ ನಂತರ ಈ ಧ್ವಂಸಗಳು ನಡೆದಿವೆ ಎಂದು ತಿಳಿದು ಬಂದಿದೆ.

ಇರಾನ್ ಬೆಂಬಲಿತ ಗುಂಪಾದ ಹೆಜ್ಬೊಲ್ಲಾದಿಂದ ಬಂದ ರಾಕೆಟ್ ದಾಳಿಗೆ ಪ್ರತಿಕ್ರಿಯೆಯಾಗಿ ಇಸ್ರೇಲಿ ಸೇನೆಯು ಲೆಬನಾನ್‌ನಲ್ಲಿ ದಾಳಿ ಮತ್ತು ನೆಲದ ಮೇಲೆ ಆಕ್ರಮಣ ನಡೆಸಿದೆ. ಲೆಬನಾನ್ ಮಾಧ್ಯಮ ವರದಿಗಳ ಪ್ರಕಾರ, ಶನಿವಾರ ದೇಶದ ದಕ್ಷಿಣದಲ್ಲಿ ಇಸ್ರೇಲಿ ನಡೆಸಿದ ದಾಳಿಯಲ್ಲಿ 18 ಜನರು ಸಾವನ್ನಪ್ಪಿದ್ದಾರೆ. ಯುದ್ಧ ಪ್ರಾರಂಭವಾದಾಗಿನಿಂದ ಲೆಬನಾನ್‌ನಲ್ಲಿ ಇಸ್ರೇಲ್ ನಡೆಸಿದ ಕಾರ್ಯಾಚರಣೆಗಳಲ್ಲಿ ಒಟ್ಟು ಸಾವಿನ ಸಂಖ್ಯೆ 2,000 ಕ್ಕಿಂತ ಹೆಚ್ಚಾಗಿದೆ.

ಮಾತುಕತೆ ವಿಫಲ

ಯುದ್ಧವನ್ನು ನಿಲ್ಲಿಸಲು ಇರಾನ್‌ ಮತ್ತು ಅಮೆರಿಕ ನಡುವೆ ಪಾಕಿಸ್ತಾನದಲ್ಲಿ ನಡೆದ ಮಾತುಕತೆ ವಿಫಲವಾಗಿದೆ. ಪಾಕಿಸ್ತಾನದಲ್ಲಿ ಇರಾನ್ ಜೊತೆ ನಡೆದ 21 ಗಂಟೆಗಳ ಮಾತುಕತೆಯಲ್ಲಿ ಯಾವುದೇ ಪ್ರಗತಿ ಕಂಡುಬಂದಿಲ್ಲ ಎಂದು ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಭಾನುವಾರ ಹೇಳಿದ್ದಾರೆ. ಮೂರು ಸುತ್ತಿನ ಮಾತುಕತೆಗಳ ನಂತರ, ವ್ಯಾನ್ಸ್ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ‘ಅವರು ನಮ್ಮ ಷರತ್ತುಗಳನ್ನು ಒಪ್ಪಿಕೊಂಡಿಲ್ಲ. ಡೊನಾಲ್ಡ್‌ ಟ್ರಂಪ್‌ ಅವರು, ನಾವು ಉತ್ತಮ ನಂಬಿಕೆಯಿಂದ ಬಂದು ಒಪ್ಪಂದ ಮಾಡಿಕೊಳ್ಳಲು ಪ್ರಯತ್ನಿಸಬೇಕು ಎಂದು ಹೇಳಿದ್ದರು. ದುರದೃಷ್ಟವಶಾತ್ ಯಾವುದೇ ಪ್ರಗತಿಯಾಗಲಿಲ್ಲ ಎಂದು ತಿಳಿಸಿದ್ದಾರೆ.