ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Operation Sindoor: ಆಪರೇಷನ್‌ ಸಿಂದೂರ್‌ನಲ್ಲಿ ಭಾರತ ಯುದ್ಧ ವಿಮಾನಗಳನ್ನು ಕಳೆದುಕೊಳ್ತಾ? ಸೇನಾಧಿಕಾರಿ ಹೇಳಿದ್ದೇನು?

ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ಏರ್ಪಟ್ಟಿತ್ತು. ಭಾರತ ಪಾಕಿಸ್ತಾನದ 11 ವಾಯುನೆಲೆಗಳನ್ನು (Operation Sindoor) ಧ್ವಂಸಗೊಳಿಸಿತ್ತು. ಅದರ ಹಲವಾರು ಫೋಟೋಗಳು ಕೂಡ ವೈರಲ್‌ ಆಗಿದ್ದವು. ಇದೀಗ ಮೊದಲ ಬಾರಿಗೆ ತನಗಾದ ನಷ್ಟದ ಕುರಿತು ಭಾರತ ಮಾತನಾಡಿದೆ

ಭಾರತ ಯುದ್ಧ ವಿಮಾನಗಳನ್ನು ಕಳೆದುಕೊಂಡಿದ್ದು ನಿಜ; ಸೇನಾಧಿಕಾರಿ

Profile Vishakha Bhat May 31, 2025 3:01 PM

ಸಿಂಗಾಪುರ: ಭಾರತ ಹಾಗೂ ಪಾಕಿಸ್ತಾನದ ನಡುವೆ ಕದನ ಏರ್ಪಟ್ಟಿತ್ತು. ಭಾರತ ಪಾಕಿಸ್ತಾನದ 11 ವಾಯುನೆಲೆಗಳನ್ನು (Operation Sindoor) ಧ್ವಂಸಗೊಳಿಸಿತ್ತು. ಅದರ ಹಲವಾರು ಫೋಟೋಗಳು ಕೂಡ ವೈರಲ್‌ ಆಗಿದ್ದವು. ಇದೀಗ ಮೊದಲ ಬಾರಿಗೆ ತನಗಾದ ನಷ್ಟದ ಕುರಿತು ಭಾರತ ಮಾತನಾಡಿದೆ. ಸಿಂಗಾಪುರದಲ್ಲಿ ಶಾಂಗ್ರಿ-ಲಾ ಸಂವಾದದಲ್ಲಿ ಭಾಗವಹಿಸಿದ್ದ ಸಶಸ್ತ್ರ ಪಡೆಗಳ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಅನಿಲ್ ಚೌಹಾಣ್ ಅವರು ಮಾತನಾಡಿದರು. ನಾಲ್ಕು ದಿನಗಳ ಸಂಘರ್ಷವು ಪರಮಾಣು ಯುದ್ಧದ ಹಂತಕ್ಕೆ ಹೋಗಿರಲಿಲ್ಲ ಎಂದು ಅವರು ದೃಢಪಡಿಸಿದ್ದಾರೆ.

ಫೈಟರ್ ಜೆಟ್‌ಗಳನ್ನು ಕಳೆದುಕೊಂಡಿರುವುದನ್ನು ಅವರು ದೃಢಪಡಿಸಿದ್ದಾರೆ. ಭಾರತದ ಆರು ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂಬ ಪಾಕಿಸ್ತಾನದ ಹೇಳಿಕೆಯನ್ನು ಅವರು ತಳ್ಳಿ ಹಾಕಿದ್ದಾರೆ. ಆದರೆ ಭಾರತ ಎಷ್ಟು ಜೆಟ್‌ಗಳನ್ನು ಕಳೆದುಕೊಂಡಿತು ಎಂಬುದನ್ನು ನಿರ್ದಿಷ್ಟಪಡಿಸಲು ಅವರು ನಿರಾಕರಿಸಿದರು. ಮೇ 7 ರಂದು ಭುಗಿಲೆದ್ದ ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಭಾರತದ ಯುದ್ಧ ವಿಮಾನಗಳ ಭವಿಷ್ಯದ ಬಗ್ಗೆ ಭಾರತ ಸರ್ಕಾರ ಅಥವಾ ಮಿಲಿಟರಿ ಅಧಿಕಾರಿಯೊಬ್ಬರು ಹೇಳಿರುವ ಅತ್ಯಂತ ನೇರವಾದ ಹೇಳಿಕೆ ಇದು.

ಈ ತಿಂಗಳ ಆರಂಭದಲ್ಲಿ, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ತಮ್ಮ ದೇಶವು ಆರು ಭಾರತೀಯ ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದೆ ಎಂದು ಹೇಳಿದ್ದರು. ಆದರೆ ಇದೀಗ ಸೇನಾಧಿಕಾರಿ ಆ ಸುದ್ದಿಯನ್ನು ಅಲ್ಲಗೆಳೆದಿದ್ದಾರೆ.

ಈ ಸುದ್ದಿಯನ್ನೂ ಓದಿ: Shahid Afridi: ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿಯನ್ನು ಸ್ವಾಗತಿಸಿದ ಕೇರಳ ಸಮುದಾಯ; ಕಿಡಿಕಾರಿದ ನೆಟ್ಟಿಗರು

ಸಂಘರ್ಷದ ಸಮಯದಲ್ಲಿ ಪಾಪಿ ಪಾಕಿಸ್ತಾನದ 10 ಸೇನಾ ನೆಲೆಗಳನ್ನು ಭಾರತವು ಬ್ರಹ್ಮೋಸ್ (Brahmos) ಮೂಲಕ 90 ನಿಮಿಷಗಳಲ್ಲಿ ನಾಶ ಮಾಡಿದೆ. , ಪಾಕಿಸ್ತಾನದ ಭೋಲಾರಿ, ಸುಕ್ಕೂರ್, ಜಾಕೋಬಾಬಾದ್, ಸರ್ಗೋಧಾ, ರಫಿಕಿ, ಚುನಿಯನ್, ಪಸ್ರೂರ್, ಮುರಿದ್, ಸಿಯಾಲ್ಕೋಟ್, ನೂರ್ಖಾನ್ ಮತ್ತು ಸ್ಕಾರ್ಡು ಸೇನಾ ನೆಲೆಗಳನ್ನು ಭಾರತ SCALP, AASM HAMMER ಹಾಗೂ ಬ್ರಹ್ಮೋಸ್ ಮೂಲಕ 90 ನಿಮಿಷಗಳಲ್ಲಿ ನಾಶ ಮಾಡಿದೆ. ಇದರೊಂದಿಗೆ ಪಾಕಿಸ್ತಾನದ ಅರ್ಧದಷ್ಟು ಏರ್​ಬೇಸ್​ಗಳು ಪುಡಿಪುಡಿಯಾಗಿದ್ದವು. ನೂರ್ ಖಾನ್ ವಾಯುನೆಲೆ ಮೇಲೆ ಭಾರತ ತನ್ನ ಬ್ರಹ್ಮೋಸ್ ಕ್ಷಿಪಣಿಯ ಮೂಲಕ ದಾಳಿ ಮಾಡಿದ ನಂತರ ಪಾಪಿ ಪಾಕ್ ಕದನ ವಿರಾಮಕ್ಕಾಗಿ ಅಮೆರಿಕದ ಬಳಿ ಹೋಗಿತ್ತು.