ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಸಂಕಷ್ಟಕ್ಕೆ ಹಿಮ್ಮೆಟ್ಟದೆ ಒಗ್ಗೂಡಿ ಶ್ರಮಿಸೋಣ : ಮಧ್ಯಪ್ರಾಚ್ಯದ ಸಂಕಟಕ್ಕೆ ಮಿಡಿದ ಸದ್ಗುರು ಶ್ರೀ ಮಧುಸೂದನ ಸಾಯಿ

ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಜನರಿಗೆ ಜೀವನವು ಸುಲಭವಾಗಿಲ್ಲ. ನಾಳೆ ನೋಡುತ್ತೇವೆಯೇ ಎನ್ನುವುದೇ ಅವರಿಗೆ ಪ್ರಶ್ನೆ. ಮುಂದಿನ ಊಟ, ಔಷಧಿ ಸಿಗುತ್ತದೆಯೇ ಎಂಬುದರ ಖಾತರಿ ಇರುವು ದಿಲ್ಲ. ಮತ್ತೆ ಮಕ್ಕಳು ಶಾಲೆಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರವೇ ಸಿಗದ ಪರಿಸ್ಥಿತಿಯಲ್ಲಿ ಅಲ್ಲಿ ಬದುಕು ಸಾಗುತ್ತಿದೆ

'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ'

-

Ashok Nayak Ashok Nayak Sep 7, 2025 12:59 AM

ಚಿಕ್ಕಬಳ್ಳಾಪುರ : ನಮ್ಮ ಜೀವನದಲ್ಲಿ ಬರುವ ಕಷ್ಟಗಳೇ ನಾವು ದೇವರ ಕಡೆಗೆ ತಿರುಗಲು ಮತ್ತು ನಮ್ಮ ಜೀವನಕ್ಕೆ ಹೆಚ್ಚಿನ ಅರ್ಥವನ್ನು ಕಂಡುಕೊಳ್ಳಲು ಕಾರಣವಾಗುತ್ತವೆ.ಆದ್ದರಿಂದ ಸಂಕಷ್ಟಕ್ಕೆ ಹಿಮ್ಮೆಟ್ಟದೆ ಒಗ್ಗೂಡಿ ಶ್ರಮಿಸೋಣ  ಎಂದು ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದರು.

ತಾಲ್ಲೂಕು ಮುದ್ದೇನಹಳ್ಳಿಯಲ್ಲಿ ಶನಿವಾರ ಪ್ಯಾಲಸ್ತೀನ್‌ನಲ್ಲಿ ಸಂಕಷ್ಟಕ್ಕೆ ಒಳಗಾಗಿರುವ ಕುಟುಂಬ ಗಳು, ಮಹಿಳೆಯರು ಮತ್ತು ಮಕ್ಕಳ ಕಲ್ಯಾಣಕ್ಕಾಗಿ ಸೇವೆ ಸಲ್ಲಿಸುತ್ತಿರುವ ಯೋಗ ಶಿಕ್ಷಕಿ ಸಮರ್ ಝಘಾ ಅವರಿಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಒಂದು ಜಗತ್ತು ಒಂದು ಕುಟುಂಬ ಮಾನವೀಯ ಪುರಸ್ಕಾರ' ನೀಡಿ ಗೌರವಿಸಿ ಅವರು ಮಾತನಾಡಿದರು.

'ದೇವರಿಂದ ನೀವು ಓಡಿ ಹೋದರೆ ಯಾರೂ ನಿಮಗೆ ಸಹಾಯ ಮಾಡುವುದಿಲ್ಲ. ತಪ್ಪುಗಳನ್ನು ಮಾಡಿ ದೋಷಿಯಾಗಿ ದೇವರ ಬಳಿಗೆ ಬಂದರೂ ಆತನು ನಿಮ್ಮನ್ನು ಸ್ವೀಕರಿಸುತ್ತಾನೆ. ಏಕೆಂದರೆ ದೇವರಲ್ಲಿ ಅಂದು ಪ್ರೀತಿ ಇರುತ್ತದೆ. ಆ ಪ್ರೀತಿಯನ್ನು ಎಲ್ಲರಲ್ಲೂ ಕಾಣಲು ಬಯಸುತ್ತಾನೆ' ಎಂದು ವಿವರಿಸಿದರು.

ಇದನ್ನೂ ಓದಿ: Chinthamani News: ಮುರುಗಮಲ್ಲ ದರ್ಗಾಗೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದ ಮಾಜಿ ಶಾಸಕ ಜೆಕೆ ಕೃಷ್ಣಾರೆಡ್ಡಿ

ಮಧ್ಯಪ್ರಾಚ್ಯದ ಅನೇಕ ದೇಶಗಳಲ್ಲಿ ಜನರಿಗೆ ಜೀವನವು ಸುಲಭವಾಗಿಲ್ಲ. ನಾಳೆ ನೋಡುತ್ತೇವೆಯೇ ಎನ್ನುವುದೇ ಅವರಿಗೆ ಪ್ರಶ್ನೆ. ಮುಂದಿನ ಊಟ, ಔಷಧಿ ಸಿಗುತ್ತದೆಯೇ ಎಂಬುದರ ಖಾತರಿ ಇರುವು ದಿಲ್ಲ. ಮತ್ತೆ ಮಕ್ಕಳು ಶಾಲೆಗೆ ಹೋಗುತ್ತಾರಾ ಎನ್ನುವ ಪ್ರಶ್ನೆಗಳಿಗೆ ಉತ್ತರವೇ ಸಿಗದ ಪರಿಸ್ಥಿತಿಯಲ್ಲಿ ಅಲ್ಲಿ ಬದುಕು ಸಾಗುತ್ತಿದೆ ಎಂದು ವಿವರಿಸಿದರು.

ಆ ದೇಶಗಳಲ್ಲಿಂದ ಬಂದಿರುವ ಭಕ್ತರು ಮತ್ತು ಗಣ್ಯರು ಉತ್ತಮ ಭವಿಷ್ಯದ ಬಗ್ಗೆ ಸಾಕಷ್ಟು ವಿಶ್ವಾಸ ಮತ್ತು ಭರವಸೆಗಳನ್ನು ವ್ಯಕ್ತಪಡಿಸಿದ್ದಾರೆ. ಒಗ್ಗಟ್ಟು ಮತ್ತು ಸೌಹಾರ್ದದ ಬಗ್ಗೆ ಮಾತನಾಡಿರು ವುದು ನನ್ನ ಹೃದಯವನ್ನು ಮುಟ್ಟಿದೆ.  ನಾವು ಸಮಸ್ಯೆಗಳನ್ನು ಕಂಡು ಹಿಮ್ಮೆಟ್ಟಬಾರದು. ಬದುಕು ಸುಗಮಗೊಳಿಸಲು ಒಗ್ಗೂಡಿ ಕೆಲಸ ಮಾಡಬೇಕಾಗಿರುವುದು ತುಂಬಾ ಮುಖ್ಯ. ಇದನ್ನು ಹೇಳುವುದು ತುಂಬಾ ಸುಲಭ, ಆದರೆ ಕಾರ್ಯರೂಪಕ್ಕೆ ತರುವುದು ತುಂಬಾ ಕಷ್ಟ ಎಂದು ಸಲಹೆ ಮಾಡಿದರು.

'ಮಾನವೀಯ ಪುರಸ್ಕಾರ' ಸ್ವೀಕರಿಸಿ ಮಾತನಾಡಿದ ಸಮರ್ ಝಘಾ, ಸತ್ಯಸಾಯಿ ಬಾಬಾ ಅವರ ಷರತ್ತುಗಳು ಇಲ್ಲದ ಪ್ರೀತಿ ನಮ್ಮನ್ನು ಇಲ್ಲಿಗೆ ತಂದು ನಿಲ್ಲಿಸಿದೆ. ಯಾವುದೇ ಪ್ರತಿಫಲ ನಿರೀಕ್ಷೆ ಮಾಡದೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು ಸೇವೆ ಸಲ್ಲಿಸುತ್ತಿದ್ದಾರೆ. ನಮ್ಮ ಕಾರ್ಯಗಳಿಗೆ ಅವರ ಬೆಂಬಲ ಮುಂದುವರಿಯಲಿ ಎಂದು ಕೋರಿದರು.

ಶ್ರೀಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ನ ಟಸ್ಟಿ ಮತ್ತು ಸಿಇಒ ಆನಂದ್ ಕಡಲಿ ಮಾತನಾಡಿ, ಅನ್ನ ಪೂರ್ಣ ಯೋಜನೆ ಮೂಲಕ ಪ್ರಸ್ತುತ ೧ ಕೋಟಿ ೮೦ ಲಕ್ಷ ಮಕ್ಕಳಿಗೆ ಬೆಳಗಿನ ಪೌಷ್ಟಿಕ ಆಹಾರ ವನ್ನು ವಿತರಿಸುತ್ತಿದ್ದೇವೆ. ಕೆಲ???ಂದು ಸಮಾನ ಮನಸ್ಕ ಸಂಸ್ಥೆಗಳ ಸಹಯೋಗದಲ್ಲಿ ೨೦೨೮ರ ವೇಳೆಗೆ ಸದ್ಗುರು ಶ್ರೀ ಮಧುಸೂದನ ಸಾಯಿ ಅವರ ಮಾರ್ಗದರ್ಶದಲ್ಲಿ ೮ ಕೋಟಿ ಮಕ್ಕಳಿಗೆ ಬೆಳಗಿನ ಪೌಷ್ಟಿಕ ಆಹಾರವನ್ನು ನೀಡುವ ಗುರಿ ???ಂದಿದ್ದೇವೆ ಎಂದು ಭವಿಷ್ಯದ ಕನಸು ಹಂಚಿಕೊಂಡರು.

ಜೋರ್ಡಾನ್ ಸಾಧಕಿಗೆ ಗೌರವ

ಸತ್ಯ ಸಾಯಿ ಗ್ರಾಮದಲ್ಲಿ ಶನಿವಾರ ಮುಂಜಾನೆ ನಡೆದ ಕಾರ್ಯಕ್ರಮದಲ್ಲಿ ಜೋರ್ಡಾನ್‌ನ ಅಧ್ಯಾತ್ಮ ಸಾಧಕಿ ಹಾಗೂ ಯೋಗ ಶಿಕ್ಷಕಿ ಶೋರೌಕ್ ಮೊಹಮದ್ ರಂಜಾನ್ ಅವರನ್ನು ಪ್ರಶಾಂತಿ ಬಾಲಮಂದಿರ ಟ್ರಸ್ಟ್ನ ಟ್ರಸ್ಟಿ ಡಾ ಸಾಯಿ ಲೀಲಾ ಗೌರವಿಸಿದರು. 'ನಮ್ಮ ವೈವಿಧ್ಯಗಳು ಪರಸ್ಪರ ರನ್ನು ದೂರ ಇರಿಸಲು ಕಾರಣ ಆಗಬೇಕಿಲ್ಲ. ಅವು ನಮ್ಮನ್ನು ಬೆಸೆಯುವ ಸೇತುವೆಗಳಾಗಬೇಕು. ಜಗತ್ತಿನ ಮೂಲೆಮೂಲೆಯಲ್ಲಿರುವ ಜನರನ್ನು ಒಗ್ಗೂಡಿಸಲು ಸದ್ಗುರು ಶ್ರೀ ಮಧುಸೂದನ ಸಾಯಿ ಪ್ರಯತ್ನಿಸುತ್ತಿದ್ದಾರೆ. ಅವರ ಮಾನವೀಯ ಪ್ರಯತ್ನಗಳಿಗೆ ನಮ್ಮ ಬೆಂಬಲ ಸದಾ ಇರುತ್ತದೆ' ಎಂದು ಶೋರೌಕ್ ಹೇಳಿದರು.

ಸತ್ಯ ಸಾಯಿ ಬಾಬಾ ಅವರ ೧೦೦ ನೇ ಜನ್ಮದಿನೋತ್ಸವದ ಅಂಗವಾಗಿ ನಡೆಯುತ್ತಿರುವ ಸಾಂಸ್ಕೃ ತಿಕ ಕಾರ್ಯಕ್ರಮಗಳ ಭಾಗವಾಗಿ ಸದ್ಗುರು ಶ್ರೀ ಮಧುಸೂದನ ಸಾಯಿ ಅವರು 'ಅಷ್ಟಾವಕ್ರಗೀತೆ' ಉಪನ್ಯಾಸ ಸರಣಿಯಲ್ಲಿ ಮಾತನಾಡಿದರು.