ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿ ನೇಮಕವಾದ ಮಳ್ಳೂರು ಶಿವಣ್ಣನವರಿಗೆ ಸನ್ಮಾನ

ಇಂತಹ ಕಷ್ಟ ಪರಿಸ್ಥಿತಿಯಲ್ಲಿ ರೈತಪರ ಹೋರಾಟಗಳಿಂದಲೇ ಮೇಲೆ ಬಂದ ಮಳ್ಳೂರು ಶಿವಣ್ಣ ರವರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೇಂದ್ರ ರೇಷ್ಮೆ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ರೇಷ್ಮೆ ಕೃಷಿ ಕ್ಷೇತ್ರಕ್ಕೆ ಒಳಿತಾಗಲಿದೆ. ಪ್ರಮುಖವಾಗಿ ರೇಷ್ಮೆ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸರ್ಕಾರದ ಸೌಲಭ್ಯಗಳು ಮತ್ತು ತಂತ್ರಜ್ಙಾನ ರೈತರಿಗೆ ತಲುಪಲು ಸಾಧ್ಯ ವಾಗುತ್ತಿಲ್ಲ.

ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯ ಮಳ್ಳೂರು ಶಿವಣ್ಣನವರಿಗೆ ಸನ್ಮಾನ

Profile Ashok Nayak Jun 29, 2025 10:27 PM

ಚಿಕ್ಕಬಳ್ಳಾಪುರ: ಕೇಂದ್ರ ರೇಷ್ಮೆ ಮಂಡಳಿಯ ಸದಸ್ಯರಾಗಿ ನೇಮಕಗೊಂಡ ರೈತಪರ ಹೋರಾಟ ಗಾರ ಮಳ್ಳೂರು ಶಿವಣ್ಣರವರನ್ನು ,ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿಯ ವತಿಯಿಂದ ಸನ್ಮಾನಿಸಲಾಯಿತು. ಸಮಿತಿಯ ಪದಾಧಿಕಾರಿಗಳು ಮಳ್ಳೂರಿನ ಅವರ ಸ್ವಗೃಹದಲ್ಲಿ ಭೇಟಿ ಮಾಡಿ ಸಮಸ್ತ ರೇಷ್ಮೆಕೃಷಿಕರ ಪರವಾಗಿ ಅವರನ್ನು ಸನ್ಮಾನಿಸಲಾಯಿತು ಸಲಾಯಿತು. 

ಈ ಸಂದರ್ಭದಲ್ಲಿ ಜಿಲ್ಲಾ ರೇಷ್ಮೆ ಕೃಷಿ ಹಿತರಕ್ಷಣಾ ಸಮಿತಿಯ ಅಧ್ಯಕ್ಷರಾದ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ,ಬಯಲು ಸೀಮೆ ಜಿಲ್ಲೆಗಳ ಜೀವನಾಡಿಯಾದ ರೇಷ್ಮೆ ಕೃಷಿ ಕ್ಷೇತ್ರ ಹಲವಾರು ಸಮಸ್ಯೆ ಗಳನ್ನು ಎದುರಿಸಿತ್ತಿದ್ದು, ಅದನ್ನು ನಂಬಿ ಜೀವನ ಸಾಗಿಸುತ್ತಿರುವ ರೈತರು ಈಗಿನ ಪರಿಸ್ಥಿತಿ ಯಲ್ಲಿ ಹಲವಾರು ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ.

ಇಂತಹ ಕಷ್ಟ ಪರಿಸ್ಥಿತಿಯಲ್ಲಿ ರೈತಪರ ಹೋರಾಟಗಳಿಂದಲೇ ಮೇಲೆ ಬಂದ ಮಳ್ಳೂರು ಶಿವಣ್ಣ ರವರನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಕೇಂದ್ರ ರೇಷ್ಮೆ ಮಂಡಳಿ ಸದಸ್ಯರನ್ನಾಗಿ ಆಯ್ಕೆ ಮಾಡಿರುವುದು ರೇಷ್ಮೆ ಕೃಷಿ ಕ್ಷೇತ್ರಕ್ಕೆ ಒಳಿತಾಗಲಿದೆ. ಪ್ರಮುಖವಾಗಿ ರೇಷ್ಮೆ ಕೃಷಿ ಇಲಾಖೆಯಲ್ಲಿ ಸಿಬ್ಬಂದಿ ಕೊರತೆಯಿಂದ ಸರ್ಕಾರದ ಸೌಲಭ್ಯಗಳು ಮತ್ತು ತಂತ್ರಜ್ಙಾನ ರೈತರಿಗೆ ತಲುಪಲು ಸಾಧ್ಯವಾಗುತ್ತಿಲ್ಲ.ರೇಷ್ಮೆ ಕೃಷಿ ಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ನೂರಾರು ರೈತರ ಮಕ್ಕಳು ನಿರುದ್ಯೋಗಿಗಳಾಗಿದ್ದಾರೆ.

ಇದನ್ನೂ ಓದಿ: Chikkamagaluru to Tirupati Train: ತಿಮ್ಮಪ್ಪನ ಭಕ್ತರಿಗೆ ಗುಡ್‌ ನ್ಯೂಸ್‌; ಚಿಕ್ಕಮಗಳೂರು-ತಿರುಪತಿ ನೂತನ ರೈಲು ಸಂಚಾರ ಆರಂಭ

ಕೂಡಲೇ ರೇಷ್ಮೆ ಇಲಾಖೆಯ ಲ್ಲಿ ಹೊಸ ನೇಮಕಾತಿ ಮಾಡಲು ಒತ್ತಡ ಏರುವಂತೆ ,ಅದೇ ರೀತಿ ರೇಷ್ಮೆ ಬೆಳೆಯುವ ಜಿಲ್ಲೆಗಳಲ್ಲಿ ರೇಷ್ಮೆಕೃಷಿ ಉತ್ಪನ್ನಗಳ ಮೌಲ್ಯವರ್ಧನೆಗೆ ಕೈಗಾರಿಕರಣ ಸ್ಥಾಪನೆ ಮಾಡುವುದು,ವಿದೇಶಿ ರೇಷ್ಮೆಮೇಲೆ ಆಮದು ಸುಂಕ ಹೆಚ್ಚಿಸುವುದು ಸೇರಿದಂತೆ ಎರಡೂ ಜಿಲ್ಲೆಯ ಸಂಸದರು ಮತ್ತು ಶಾಸಕರ ಸಹಕಾರದಿಂದ ರೇಷ್ಮೆ ಕೃಷಿ ಅಭಿವೃದ್ಧಿಗೆ ಹೆಚ್ಚಿನ ಜವಾಬ್ದಾರಿ ವಹಿಸಿಕೊಳ್ಳಬೇಕೆಂದು ಒತ್ತಾಯಿಸಲಾಯಿತು.

ಈ ಸಂದರ್ಭದಲ್ಲಿ ಕೃಷಿ ಪಂಡಿತ ಪ್ರಶಸ್ತಿ ಪುರಸ್ಕೃತ ಹಿತ್ತಲಹಳ್ಳಿ ಗೋಪಾಲಗೌಡ ಮಾತನಾಡಿ, ಮದುವೆ ಮತ್ತಿತರ ಸಮಾರಂಭಗಳಿಗೆ ಈ ಭಾಗದ ಜನರು ರೇಷ್ಮೆ ಸೀರೆಗಳನ್ನು ಕೊಳ್ಳಲು ದೂರದ ತಮಿಳು ನಾಡಿನ ಕಂಚಿಗೆ ಹೋಗುತ್ತಾರೆ,ರೇಷ್ಮೆ ಬೆಳೆಯುವ ನಮ್ಮಲ್ಲಿಯೇ ಕೆ.ಎಸ್ ಐ.ಸಿ ವತಿಯಿಂದ ರೇಷ್ಮೆ ಕೈಗಾರಿಕಾ ವಲಯ ಸ್ಥಾಪಿಸುವಂತೆ ಎರಡೂ ಸಂಸದರ ತಂಡದೊಂದಿಗೆ ಕೇಂದ್ರ ಕೈಗಾರಿಕಾ ಸಚಿವರರಾದ ಎಚ್ ಡಿ ಕುಮಾರಸ್ವಾಮಿಯವರನ್ನು ಭೇಟಿಮಾಡಲು ನಿಯೋಗ ಹೋಗಲು ಸಲಹೆ ನೀಡಿದರು. ಅದರ ನೇತ್ರತ್ವವನ್ನು ವಹಿಸಿಕೊಳ್ಳುವಂತೆ ಮಳ್ಳೂರು ಶಿವಣ್ಣರವರಿಗೆ ಜವಾಬ್ದಾರಿ ನೀಡಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಳ್ಳೂರು ಶಿವಣ್ಣ, ರೇಷ್ಮೆ ಕೃಷಿ ಅಭಿವೃದ್ಧಿಗೆ ಕೈಲಾದ ಎಲ್ಲಾ ನೆರವನ್ನು ನೀಡುವುದಾಗಿ ಭರವಾಸೆ ನೀಡಿ, ಈ ಕುರಿತು ರಾಜ್ಯ ಮತ್ತು ಕೇಂದ್ರ ಸರ್ಕರದ ಸಂಬಂಧಿ ಸಿದ ಅಧಿಕಾರಿಗಳ ಸಭೆ ಕರೆದು ರೈತರ ಮತ್ತು ರೇಷ್ಮೆ ಕೃಷಿ ಅಭಿವೃದ್ಧಿಗೆ ಶ್ರಮಿಸುವುದಾಗಿ ಚರ್ಚಿಸಿ ಯೋಜನೆಗಳನ್ನು ರೂಪಿಸುತ್ತೇನೆಂದು ತಿಳಿಸಿದರು.

ಈ ಸಂದರ್ಭದಲ್ಲಿ ಸಮಿತಿಯ ಗೌರವಾಧ್ಯಕ್ಷರಾದ ಭೋದಗೂರು ಆಂಜನಪ್ಪ, ಡಿ.ಕೆ.ಶ್ರೀರಾಮ್, ಅಜ್ಜವಾರ ಕೆ.ಆರ್.ರೆಡ್ಡಿ,ಬಾಗೇಪಲ್ಲಿ ಅಶೋಕರೆಡ್ಡಿ,ಆಜ್ಜವಾರ ಎ.ಎನ್.ಶ್ರೀನಿವಾಸ್,ಬೆಳ್ಳೂಟಿ ವೆಂಕಟೇಶ್, ಹಿತ್ತಲಹಳ್ಳಿ ಸುರೇಶ್,ಬೈರಸಂದ್ರ ಆಂಜನೇಯ ರೆಡ್ಡಿ, ವೆಂಕಟಸ್ವಾಮಿರೆಡ್ಡಿ, ವಿಜಯಪುರ ವೀರಭದ್ರಪ್ಪ,ಬೂದಾಳ ರಾಮಾಂಜನಪ್ಪ,ಪಟ್ರೇನಹಳ್ಳಿ ಮುನಿರಾಜು,ಯಲುವಹಳ್ಳಿ ಅಮೃತಕುಮಾರ್ ಇತರರು ಹಾಜರಿದ್ದರು.