ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

IND vs AFG: ಮೂರನೇ ಒಡಿಐನಿಂದ ಕೆಎಲ್‌ ರಾಹುಲ್‌ ಹೊರಗುಳಿಯಲು ಕಾರಣ ಇಲ್ಲಿದೆ!

India vs Afghanistan: ಭಾರತ ಹಾಗೂ ಅಫ್ಘಾನಿಸ್ತಾನ ತಂಡಗಳ ನಡುವಣ ಮೂರನೇ ಏಕದಿನ ಪಂದ್ಯ ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿದೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ XIನಲ್ಲಿ ಮೂರು ಬದಲಾವಣೆಯನ್ನು ತರಲಾಗಿದೆ. ಅದರಲ್ಲಿ ಪ್ರಮುಖವಾಗಿ ಕೆಎಲ್‌ ರಾಹುಲ್‌ಗೆ ವಿಶ್ರಾಂತಿ ನೀಡಲಾಗಿದೆ. ಇದಕ್ಕೆ ಕಾರಣವನ್ನು ಇಲ್ಲಿ ವಿವರಿಸಲಾಗಿದೆ.

IND vs AFG ಮೂರನೇ ಒಡಿಐನಲ್ಲಿ ಕೆಎಲ್‌ ರಾಹುಲ್‌ ಏಕೆ ಆಡುತ್ತಿಲ್ಲ?

ಮೂರನೇ ಒಡಿಐನಲ್ಲಿ ಕೆಎಲ್‌ ರಾಹುಲ್‌ ಏಕೆ ಆಡುತ್ತಿಲ್ಲ? -

Profile
Ramesh Kote Jun 20, 2026 2:53 PM

ಚೆನ್ನೈ: ಇಲ್ಲಿನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಮೂರನೇ ಹಾಗೂ ಏಕದಿನ ಸರಣಿಯ ಕೊನೆಯ ಪಂದ್ಯದಲ್ಲಿ ಭಾರತ ಹಾಗೂ ಅಫ್ಘಾನಿಸ್ತಾನ (IND vs AFG) ತಂಡಗಳು ಕಾದಾಟ ನಡೆಸುತ್ತಿವೆ. ಈ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್‌ Xiನಲ್ಲಿ ಪ್ರಮುಖ ಮೂರು ಬದಲಾವಣೆಗಳನ್ನು ತರಲಾಗಿದ್ದು, ಇದರಲ್ಲಿ ಮುಖ್ಯವಾಗಿ ಕೆಎಲ್‌ ರಾಹುಲ್‌ (KL Rahul) ಅವರನ್ನು ಕೈ ಬಿಡಲಾಗಿದೆ. ಇದಕ್ಕೆ ಕಾರಣವೇನೆಂದು ಇಲ್ಲಿ ವಿವರಿಸಲಾಗಿದೆ. ಅಂದ ಹಾಗೆ ಆರಂಭಿಕ ಎರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ಭಾರತ ತಂಡ, ಇನ್ನೂ ಒಂದು ಪಂದ್ಯ ಬಾಕಿ ಇರುವಾಗಲೇ 2-0 ಅಂತರದಲ್ಲಿ ಏಕದಿನ ಸರಣಿಯನ್ನು ವಶಪಡಿಸಿಕೊಂಡಿದೆ.

ಶುಭಮನ್‌ ಗಿಲ್‌ ನಾಯಕತ್ವದ ಭಾರತ ತಂಡ, ಕೊನೆಯ ಪಂದ್ಯವನ್ನೂ ಗೆದ್ದು ಏಕದಿನ ಸರಣಿಯನ್ನು ಕ್ಲೀನ್‌ ಸ್ವೀಪ್‌ ಮಾಡಿಕೊಳ್ಳಲು ಎದುರು ನೋಡುತ್ತಿದೆ. ಆದರೆ, ಇದು ಕೊನೆಯ ಪಂದ್ಯವಾದ ಕಾರಣ, ಬೆಂಚ್‌ ಆಟಗಾರರಿಗೂ ಅವಕಾಶ ಕಲ್ಪಿಸುವ ಉದ್ದೇಶದಲ್ಲಿ ತಂಡದಲ್ಲಿ ಬದಲಾವಣೆಯನ್ನು ತಂದಿದೆ. ಅದರಂತೆ ಪಂದ್ಯದ ಟಾಸ್‌ ವೇಳೆ ನಾಯಕ ಶುಭಮನ್‌ ಗಿಲ್‌, ಆಡುವ ಬಳಗದ ಬಗ್ಗೆ ಮಾಹಿತಿ ನೀಡಿದ್ದಾರೆ. ಎರಡನೇ ಪಂದ್ಯದಲ್ಲಿ ಬೆಂಚ್‌ ಕಾದಿದ್ದ ನಿತೀಶ್‌ ಕುಮಾರ್‌ ರೆಡ್ಡಿ, ಹರ್ಷ್‌ ದುಬೇ ಹಾಗೂ ಪ್ರಸಿಧ್‌ ಕೃಷ್ಣ ಪ್ಲೇಯಿಂಗ್‌ xIಗೆ ಮರಳಿದ್ದಾರೆಂದು ಮಾಹಿತಿ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೆಎಲ್‌ ರಾಹುಲ್‌, ಅರ್ಷದೀಪ್‌ ಸಿಂಗ್‌ ಹಾಗೂ ಕುಲ್ದೀಪ್‌ ಯಾದವ್‌ ಅವರನ್ನು ಕೈ ಬಿಡಲಾಗಿದೆ.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಆಫ್ಘಾನ್‌; ಭಾರತ ಪರ ಮೂರು ಬದಲಾವಣೆ

ಕೆಎಲ್‌ ರಾಹುಲ್‌ ಅವರನ್ನು ಕೈ ಬಿಟ್ಟಿಲ್ಲ. ಇದಕ್ಕೆ ನೈಜ ಕಾರಣ ಏನೆಂದರೆ ಭಾರತ ತಂಡ ಈಗಾಗಲೇ ಏಕದಿನ ಸರಣಿಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ. ಹಾಗಾಗಿ ಬೆಂಚ್‌ ಸಾಮರ್ಥ್ಯವನ್ನು ಪರೀಕ್ಷಿಸುವ ಸಲುವಾಗಿ ರಾಹುಲ್‌, ಅರ್ಷದೀಪ್‌ ಹಾಗೂ ಕುಲ್ದೀಪ್‌ಗೆ ವಿಶ್ರಾಂತಿ ನೀಡಲಾಗಿದೆ. ಇನ್ನು ಇತ್ತೀಚೆಗೆ ಭಾರತ ಏಕದಿನ ತಂಡಕ್ಕೆ ಮರಳಿದ ಹರ್ಷಿತ್‌ ರಾಣಾ ಅವರು ಈ ಪಂದ್ಯದಲ್ಲಿ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ.



ಟಾಸ್‌ ವೇಳೆ ಮಾತನಾಡಿದ ಗಿಲ್‌, "ಪಿಚ್‌ ನೋಡಲು ತುಂಬಾ ಚೆನ್ನಾಗಿ ಕಾಣುತ್ತಿದೆ. ನಾವು ಕೂಡ ಮೊದಲು ಬ್ಯಾಟ್‌ ಮಾಡಬೇಕೆಂದು ಬಯಿಸಿದ್ದೆವು. ಕಳೆದ ಪಂದ್ಯದಲ್ಲಿ ಹವಾಮಾನ ತುಂಬಾ ಬಿಸಿಯಾಗಿತ್ತು ಹಾಗೂ ಅಲ್ಲಿ ಆಡುವುದು ಸ್ವಲ್ಪ ಸವಾಲುದಾಯಕವಾಗಿತ್ತು. ಆದರೆ, ಇಲ್ಲಿ ಸಂಪೂರ್ಣ ವಿಭಿನ್ನವಾಗಿದೆ. ನಾವು ಗಮನಹರಿಸಿರುವ ಕ್ಷೇತ್ರಗಳಲ್ಲಿ ಸ್ಥಿರತೆಯನ್ನು ಕಾಯ್ದುಕೊಳ್ಳುವುದು ಮುಖ್ಯವಾಗಿದೆ. ಈ ಪಂದ್ಯದಲ್ಲಿ ನಾವು ಗುರಿ ಬೆನ್ನಟ್ಟಲಿದ್ದೇವೆ. ದೊಡ್ಡ ಮೊತ್ತದ ಗುರಿಗಳನ್ನು ನಿರಂತರವಾಗಿ ಮತ್ತು ಸುಲಭವಾಗಿ ಬೆನ್ನಟ್ಟುವಲ್ಲಿ ನಾವು ಇನ್ನೂ ಸಂಪೂರ್ಣ ಯಶಸ್ಸು ಸಾಧಿಸಿಲ್ಲ. ಆದ್ದರಿಂದ ಇಂದು ಅದೇ ಅಂಶದ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದೇವೆ. ತಂಡದಲ್ಲಿ ಮೂರು ಬದಲಾವಣೆಗಳನ್ನು ಮಾಡಲಾಗಿದೆ. ಪ್ರಸಿಧ್‌ ಕೃಷ್ಣ, ಹರ್ಷ್‌ ದುಬೇ ಮತ್ತು ನಿತೀಶ್‌ ಕುಮಾರ್‌ ರೆಡ್ಡಿ ಮತ್ತೆ ತಂಡಕ್ಕೆ ಮರಳಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.

IND vs ENG: ಇಂಗ್ಲೆಂಡ್‌ ವಿರುದ್ಧದ ಏಕದಿನ ಸರಣಿಯಲ್ಲಿ ಆಡಲಿರುವ ವಿರಾಟ್‌ ಕೊಹ್ಲಿ?

ಮೂರನೇ ಏಕದಿನ ಪಂದ್ಯಕ್ಕೆ ಉಭಯ ತಂಡಗಳ ಪ್ಲೇಯಿಂಗ್‌ XI

ಭಾರತ: ಯಶಸ್ವಿ ಜೈಸ್ವಾಲ್‌, ರೋಹಿತ್‌ ಶರ್ಮಾ, ಶುಭಮನ್‌ ಗಿಲ್‌ (ನಾಯಕ), ಶ್ರೇಯಸ್‌ ಅಯ್ಯರ್‌, ಇಶಾನ್‌ ಕಿಶನ್‌ (ವಿಕೆಟ್‌ ಕೀಪರ್‌), ನಿತೀಶ್‌ ಕುಮಾರ್‌ ರೆಡ್ಡಿ, ವಾಷಿಂಗ್ಟನ್‌ ಸುಂದರ್‌, ಹರ್ಷ್‌ ದುಬೇ, ಗುರ್ನೂರ್‌ ಬ್ರಾರ್‌, ಪ್ರಸಿಧ್‌ ಕೃಷ್ಣ, ಪ್ರಿನ್ಸ್‌ ಯಾದವ್‌

ಅಫ್ಘಾನಿಸ್ತಾನ: ರಹಮಾನ್‌ವುಲ್ಲಾ ಗುರ್ಬಾಝ್‌ (ವಿಕೆಟ್‌ ಕೀಪರ್‌), ಇಬ್ರಾಹಿಂ ಝರ್ಡಾನ್‌, ರಹಮತ್‌ ಶಾ, ಹಷಮತ್‌ವುಲ್ಲಾ ಶಾಹಿಡಿ (ನಾಯಕ), ದಾರ್ವಿಸ್‌ ರಸೋಲಿ, ಮೊಹಮ್ಮದ್‌ ನಬಿ, ಅಝಮತ್‌ ಒಮರ್ಜಾಯ್‌, ರಶೀದ್‌ ಖಾನ್‌, ಎಎಂ ಘಝನ್ಫರ್‌, ಝಿಯಾ ಉರ್‌ ರೆಹಮಾನ್‌ ಶರಿಫಿಮ ಫರೀದ್‌ ಅಹ್ಮದ್‌ ಮಲಿಕ್‌