Chikkaballapur News: ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ
ಯಾವುದೇ ಆದೇಶವಿಲ್ಲದಿದ್ದರೂ ತರಕಾರಿ ಮತ್ತು ಹೂವಿನ ಮಾರುಕಟ್ಟೆ ವರ್ತಕರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ, ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೇ ರಾಗಿ ಮತ್ತು ತೊಗರಿ ಮಾರಾಟ ಕೇಂದ್ರ ದೊಡ್ಡ ಜಾನುವಾರಗಳ ಸಂತೆ, ಹಾಗೂ ವಾರದ ಸಂತೆಯನ್ನು ಪ್ರಾರಂಭ ಮಾಡ ಬೇಕು ಹಾಗೂ ರೈತರ ಜ್ವಲಂತ ಬೇಡಿಕೆಗಳನ್ನು ಈ ಕೂಡಲೆ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು


ಗೌರಿಬಿದನೂರು : ನಗರದ ಹೊರವಲಯದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಅಧಿಕಾರಿಗಳು, ರೈತರ ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಆರೋಪಿಸಿ ಅಖಿಲ ಕರ್ನಾಟಕ ರೈತ ಸಂಘದ ವತಿಯಿಂದ ಪ್ರತಿಭಟನೆ ಯನ್ನು ಹಮ್ಮಿಕೊಳ್ಳಲಾಗಿತ್ತು.
ಸಂಘದ ಅಧ್ಯಕ್ಷ ರವಿಚಂದ್ರ ರೆಡ್ಡಿ ಮಾತನಾಡಿ, ನಗರದ ತೊಗರಿ ಗಿರಣಿಗಳಲ್ಲಿ ರೈತರು ಉತ್ತಮ ತೊಗರಿ ನೀಡಿದರು ಸಹ ಗಿರಣಿ ಮಾಲೀಕರು ಹೆಚ್ಚಿನ ಶೇಕಡವಾರು ತೆಗೆದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ, ನಗರದ ವರ್ತಕರಿಗೆ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ಗೋದಾಮುಗಳನ್ನು ನೀಡಿದ್ದರು, ಅವರು ಅವುಗಳನ್ನು ಬಳಸದೆ, ನಗರದ ಬಜಾರ್ ರಸ್ತೆಯಲ್ಲಿ ಬಾರಿ ವಾಹನಗಳಲ್ಲಿ ಸರಕುಗಳನ್ನು ತರಿಸಿಕೊಳ್ಳುತ್ತಿರುವುದರಿಂದ, ಈ ರಸ್ತೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ, ಶಾಲಾ ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ.
ಇದನ್ನೂ ಓದಿ: IPL 2025: ಈ ಒಂದೇ ಒಂದು ಕಾರಣದಿಂದಾಗಿ ಭಾರತಕ್ಕೆ ಮರಳಲು ಸಾಧ್ಯವಾಗಿಲ್ಲ ಎಂದ ಮಿಚೆಲ್ ಸ್ಟಾರ್ಕ್!
ಯಾವುದೇ ಆದೇಶವಿಲ್ಲದಿದ್ದರೂ ತರಕಾರಿ ಮತ್ತು ಹೂವಿನ ಮಾರುಕಟ್ಟೆ ವರ್ತಕರಿಂದ ಸುಂಕ ವಸೂಲಿ ಮಾಡಲಾಗುತ್ತಿದೆ, ರೈತರ ಅನುಕೂಲಕ್ಕಾಗಿ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿಯೇ ರಾಗಿ ಮತ್ತು ತೊಗರಿ ಮಾರಾಟ ಕೇಂದ್ರ ದೊಡ್ಡ ಜಾನುವಾರಗಳ ಸಂತೆ, ಹಾಗೂ ವಾರದ ಸಂತೆಯನ್ನು ಪ್ರಾರಂಭ ಮಾಡಬೇಕು ಹಾಗೂ ರೈತರ ಜ್ವಲಂತ ಬೇಡಿಕೆಗಳನ್ನು ಈ ಕೂಡಲೆ ಈಡೇರಿಸಬೇಕು ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ನಂತರ ತಹಶೀಲ್ದಾರ್ ಮಹೇಶ್ ಎಸ್ ಪತ್ರಿಗೆ ಮನವಿ ಪತ್ರ ಸಲ್ಲಿಸಿದರು, ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅವರು ಈ ಕೂಡಲೆ ಅಧಿಕಾರಿಗಳಿಗೆ ಭೇಡಿಕೆಗಳ ಈಡೇರಿಕೆಗೆ ಸೂಚನೆ ನೀಡಿ ಶೀಘ್ರ ದಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಪ್ರತಿಭಟನೆಯಲ್ಲಿ ರೈತ ಮುಖಂಡರಾದ ಶಾನ್ವಾಜ್, ಲಕ್ಷ್ಮೀ ನಾರಾಯಣ್ ರೆಡ್ಡಿ, ನಟರಾಜ್ ಪ್ರಭು, ಕೃಷ್ಣಗೌಡ, ಸತ್ಯನಾರಾಯಣ್ ರೆಡ್ಡಿ ಜಯಚಂದ್ರರೆಡ್ಡಿ, ನಂದೀಶ್, ವೆಂಕಟರಮಣಪ್ಪ ಮುಂತಾದವರು ಹಾಜರಿದ್ದರು.