ಮಂಗಳೂರು ಎಸ್ಡಿಎಂ ಸ್ನಾತಕೋತ್ತರ ಕೇಂದ್ರದಿಂದ ಎಐ ಮತ್ತು ಇಂಡಸ್ಟ್ರಿ 5.0 ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣ
ತಾಂತ್ರಿಕವಾಗಿ ಮುಂದುವರಿದ ಮತ್ತು ಮಾನವ ಕೇಂದ್ರಿತ ಭವಿಷ್ಯವನ್ನು ನಿರ್ಮಿಸುವಲ್ಲಿ ಕೃತಕ ಬುದ್ಧಿಮತ್ತೆಯು ವಿಕಸನಗೊಳ್ಳುತ್ತಿರುವುದರ ಕುರಿತು ಚರ್ಚಿಸಲು ಶೈಕ್ಷಣಿಕ ತಜ್ಞರು, ಉದ್ಯಮ ಮುಖಂಡರು, ನೀತಿ ನಿರೂಪಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರುವುದು ಈ ವಿಚಾರಸಂಕಿರಣದ ಮುಖ್ಯ ಗುರಿಯಾಗಿದೆ.
-
ಮಂಗಳೂರು: ಮಂಗಳೂರಿನ ಎಸ್ಡಿಎಂ ಬಿಸಿನೆಸ್ ಮ್ಯಾನೇಜ್ಮೆಂಟ್ ಕಾಲೇಜಿನ ಸ್ನಾತಕೋತ್ತರ ನಿರ್ವಹಣಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರವು (SDM PG Centre), ಏಪ್ರಿಲ್ 30, 2026ರಂದು "Synergising AI and Industry 5.0: Human-Machine Collaboration for a Smarter Future" ಎಂಬ ವಿಷಯದ ಕುರಿತು ಒಂದು ದಿನದ ರಾಷ್ಟ್ರೀಯ ವಿಚಾರಸಂಕಿರಣವನ್ನು ಆಯೋಜಿಸಿದೆ. ಪದ್ಮವಿಭೂಷಣ ಡಾ. ಡಿ. ವೀರೇಂದ್ರ ಹೆಗ್ಗಡೆ(Padma Vibhushan Dr. D. Veerendra Heggade) ಅವರ ಮಾರ್ಗದರ್ಶನದಲ್ಲಿ ವಿಚಾರ ಸಂಕಿರಣ ನಡೆಯಲಿದೆ.
ತಾಂತ್ರಿಕವಾಗಿ ಮುಂದುವರಿದ ಮತ್ತು ಮಾನವ ಕೇಂದ್ರಿತ ಭವಿಷ್ಯವನ್ನು ನಿರ್ಮಿಸುವಲ್ಲಿ ಕೃತಕ ಬುದ್ಧಿಮತ್ತೆಯು ವಿಕಸನಗೊಳ್ಳುತ್ತಿರುವುದರ ಕುರಿತು ಚರ್ಚಿಸಲು ಶೈಕ್ಷಣಿಕ ತಜ್ಞರು, ಉದ್ಯಮ ಮುಖಂಡರು, ನೀತಿ ನಿರೂಪಕರು ಮತ್ತು ವಿದ್ಯಾರ್ಥಿಗಳನ್ನು ಒಂದೇ ವೇದಿಕೆಗೆ ತರುವುದು ಈ ವಿಚಾರಸಂಕಿರಣದ ಮುಖ್ಯ ಗುರಿಯಾಗಿದೆ.
ಇದನ್ನೂ ಓದಿ: Hemavati Veerendra Heggade: ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಹುಟ್ಟುಹಬ್ಬ: ನಿರ್ಗತಿಕರಿಗೆ ಹಣ್ಣು ಹಂಪಲು ವಿತರಣೆ
ಸಂಸ್ಥೆಯ ನಿರ್ದೇಶಕರಾದ ಡಾ. ಸೀಮಾ ಎಸ್. ಶೆಣೈ ಕಾರ್ಯಕ್ರಮದ ಉದ್ಘಾಟನಾ ಅಧ್ಯಕ್ಷತೆ ವಹಿಸಲಿದ್ದಾರೆ. ಎಬಿಬಿ ಇಂಡಿಯಾ ಲಿಮಿಟೆಡ್ನ ಡಿಜಿಟಲ್ ವಿಭಾಗದ ಉಪಾಧ್ಯಕ್ಷರಾದ ಪ್ರಸನ್ನ ದೇಶಪಾಂಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ವಿಚಾರ ಸಂಕಿರಣ ಉದ್ಘಾಟಿಸಲಿದ್ದಾರೆ.
ಮುಂಬೈನ ಕೌರ್ಸೆರಾ (Coursera) ಸಂಸ್ಥೆಯ ಜಾಗತಿಕ ಗ್ರಾಹಕ ವಕಾಲತ್ತು ಮುಖ್ಯಸ್ಥೆ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿನಿ ಶಿಲ್ಪಾ ಶೆಟ್ಟಿ ಸಿ. ಅವರು ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ.
ಟಾಟಾ ಟ್ರಸ್ಟ್'ನ ಮಾಜಿ ಸಿಒಒ ಡಾ. ಹರೀಶ್ ಕೃಷ್ಣಸ್ವಾಮಿ ಅವರು ದಿಕ್ಸೂಚಿ ಭಾಷಣ ಮಾಡಲಿದ್ದು, ಕೈಗಾರಿಕಾ ಬೆಳವಣಿಗೆಯೊಂದಿಗೆ ಸುಧಾರಿತ ತಂತ್ರಜ್ಞಾನವನ್ನು ಸಂಯೋ ಜಿಸುವ ಕುರಿತು ಒಳನೋಟಗಳನ್ನು ನೀಡಲಿದ್ದಾರೆ.
"ಭಾರತದ ಸಬಲೀಕರಣ: ಸುಸ್ಥಿರತೆಗಾಗಿ ಎಐ" ವಿಷಯದ ಕುರಿತು ಸಂವಾದ ನಡೆಯಲಿದೆ. ಇದರ ಸಂಚಾಲಕತ್ವವನ್ನು ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ (ಕೆಡಿಇಎಂ) ಕ್ಲಸ್ಟರ್ ಮುಖ್ಯಸ್ಥ ವೈಶಾಖ್ ಪೈ ಕೆ. ವಹಿಸಲಿದ್ದಾರೆ. ಮಂಗಳೂರಿನ ಯೆನೆಪೋಯ ಆಸ್ಪತ್ರೆಯ ಮೂಳೆಚಿಕಿತ್ಸೆ ಮತ್ತು ರೊಬೊಟಿಕ್ ಕೀಲು ಬದಲಿ ಶಸ್ತ್ರಚಿಕಿತ್ಸಕ ಡಾ. ದೀಪಕ್ ರೈ, ಮಂಗಳೂರಿನ ಶ್ರೀ ಗರೋಡಿ ಸ್ಟೀಲ್ಸ್ನ ವ್ಯವಸ್ಥಾಪಕ ಪಾಲುದಾರ ಬೀಮಾ ಮನೋಜ್ ಮತ್ತು ಬೆಂಗಳೂರಿನ ಸೆವೆನ್ ಟೆಕ್ನಾಲಜೀಸ್ನ ಸಂಸ್ಥಾಪಕ ರಾಜೇಶ್ ಪ್ರಭು ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ.
ಮಧ್ಯಾಹ್ನದ ಅವಧಿಯಲ್ಲಿ ಅಧ್ಯಾಪಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ಪದವಿ ಮತ್ತು ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಸಂಶೋಧನಾ ಪ್ರಬಂಧ ಸ್ಪರ್ಧೆಗಳು ನಡೆಯ ಲಿವೆ. ಜೊತೆಗೆ, ಷೇರು ಮಾರುಕಟ್ಟೆಯ ಅರಿವು ಮತ್ತು ವಿಶ್ಲೇಷಣಾ ಸಾಮರ್ಥ್ಯ ಅಳೆಯಲು ಸೆನ್ಸೆಕ್ಸ್ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ.
ಡಾ.ಸೀಮಾ ಎಸ್.ಶೆಣೈ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಇನ್ಫೋಸಿಸ್ ಮಂಗಳೂರಿನ ಹಿರಿಯ ತಾಂತ್ರಿಕ ವಾಸ್ತುಶಿಲ್ಪಿ ಶಂಕರಸುಬ್ಬು ಅರುಣಾಚಲಂ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಇನ್ಫೋಸಿಸ್ ಮುಡಿಪು ಘಟಕದ ಅಸೋಸಿ ಯೇಟ್ ಲೀಡ್ ಸ್ನೇಹಲ್ ಗೌರವ ಅತಿಥಿಗಳಾಗಿ ಉಪಸ್ಥಿತರಿರುವರು.
ಈ ವಿಚಾರಸಂಕಿರಣವು ಸಂಶೋಧನಾ ಪ್ರಬಂಧಗಳ ಪ್ರಕಟಣೆಗೆ ಉತ್ತಮ ಅವಕಾಶ ನೀಡಲಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ಪ್ರಾಧ್ಯಾಪಕರು, ಸಂಶೋಧಕರು ಮತ್ತು ವಿದ್ಯಾರ್ಥಿ ಗಳು ಭಾಗವಹಿಸಬೇಕೆಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.