MLA S.R. Srinivas: ಸರಿ ಸಮಾಜ ಸೃಷ್ಟಿಯಲ್ಲಿ ಪತ್ರಕರ್ತರ ಪಾತ್ರ ಗಣನೀಯ: ಶಾಸಕ ಎಸ್.ಆರ್.ಶ್ರೀನಿವಾಸ್
ವೃತ್ತಿ ಧರ್ಮ ಪಾಲಿಸುವ ಪತ್ರಕರ್ತರಿಗೆ ಗೌರವ ಸಿಗಬೇಕಾದಲ್ಲಿ ಮೊದಲು ರೋಲ್ ಕಾಲ್ ಪತ್ರಕರ್ತರನ್ನು ದೂರವಿಡಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ಬೆದರಿಸುವವರ ವಿರುದ್ಧ ಸಂಘವೇ ಕ್ರಮ ಕೈಗೊಳ್ಳಬೇಕು ಎಂದ ಅವರು ತಾಲ್ಲೂಕು ಸಂಘದ ಪತ್ರಿಕಾ ಭವನ ನಿರ್ಮಾಣಕ್ಕೆ ಸಿಎ ಸೈಟ್ ನೀಡಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ಜೊತೆಗೆ ನಿವೇಶನರಹಿತ ಪತ್ರಕರ್ತರಿಗೆ ಸೈಟ್ ಮಂಜೂರು ಆಯಾ ಗ್ರಾಮದಲ್ಲಿಯೇ ಮಾಡಲು ಸರ್ಕಾರ ಜೊತೆ ಮಾತ ನಾಡುತ್ತೇನೆ.
-
ಗುಬ್ಬಿ: ಸಮಾಜದ ಅಂಕುಡೊಂಕು ತಿದ್ದುವ ವೃತ್ತಿ ಧರ್ಮವನ್ನು ಎತ್ತಿ ಹಿಡಿದು ಪತ್ರಕರ್ತ ರು ರಾಜಕಾರಣಿಗಳು ಹಾಗೂ ಅಧಿಕಾರಿಗಳಲ್ಲಿ ಭಯ ಹುಟ್ಟಿಸಿ ಸರಿ ಸಮಾಜ ಸೃಷ್ಟಿಗೆ ಕಾರಣವಾಗಬೇಕು ಎಂದು ಶಾಸಕ ಹಾಗೂ ರಾಜ್ಯ ಸಾರಿಗೆ ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್(MLA S.R. Srinivas)ತಿಳಿಸಿದರು.
ಪಟ್ಟಣದ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಆರಂಭವಾದ ಕಾರ್ಯನಿರತ ಪತ್ರ ಕರ್ತರ ಸಂಘದ ನೂತನ ಕಚೇರಿ ಹಾಗೂ 2025-28ನೇ ಸಾಲಿನ ನೂತನ ಪದಾಧಿಕಾರಿ ಗಳ ಪದಗ್ರಹಣ ಸಮಾರಂಭ ಉದ್ಘಾಟಿಸಿ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾಗಿ ಬಿಂಬಿಸುವ ಪತ್ರಕರ್ತರ ನಡವಳಿಕೆ ಬರವಣಿಗೆ ಮೂಲಕ ಸಮಾಜವನ್ನು ತಿದ್ದಬೇಕು. ಆದರೆ ರೋಲ್ ಕಾಲ್ ಪತ್ರಕರ್ತರ ಸಂಖ್ಯೆ ಹೆಚ್ಚಾಗಿ ನೈಜ ಪತ್ರಕರ್ತರಿಗೂ ಕೆಟ್ಟ ಹೆಸರು ಬಂದಿದೆ ಎಂದು ವಿಷಾಧಿಸಿದರು.
ರಾಜಕಾರಣಿಗಳು ಹಾಗೂ ಪತ್ರಕರ್ತರ ಕೆಲಸ ಎರಡೂ ಸಮಾಜಸೇವೆಯಾಗಿವೆ. ಇತ್ತೀಚೆಗೆ ವಸೂಲಿ ಮಾಡುವವರ ಬಗ್ಗೆ ದೂರುಗಳು ಬಂದ ಹಿನ್ನಲೆ ತಾಲ್ಲೂಕಿನ ಅಧಿಕಾರಿ ವರ್ಗಕ್ಕೆ ಬೆಂಬಲವಾಗಿ ನಿಂತು ಕೆಲಸ ಮಾಡಲು ಅನುವು ಮಾಡಿದ್ದೇನೆ. ಬಡವರ ಪರ, ಕಾನೂನು ಪ್ರಕಾರ ಕೆಲಸ ಮಾಡುವ ಅಧಿಕಾರಿಗಳಿಗೆ ಬೆದರಿಸುವ ಪ್ರವೃತ್ತಿಯ ಪತ್ರಕರ್ತರ ಬಗ್ಗೆ ಸಂಘ ಕೂಡಾ ಗಂಭೀರ ಕ್ರಮ ಕೈಗೊಳ್ಳಬೇಕು ಎಂದ ಅವರು ಅಧಿಕೃತ ಕಾರ್ಡ್ ವಿತರಣೆ ಮಾಡು ವಾಗಲೇ ಎಲ್ಲವನ್ನೂ ಗಮನಿಸಬೇಕಿದೆ.
ಇದನ್ನೂ ಓದಿ; Gubbi News: ಕೋಟೆ ಶ್ರೀ ದುರ್ಗಾಪರಮೇಶ್ವರಿ ಜಾತ್ರಾ ಮಹೋತ್ಸವ
ವೃತ್ತಿ ಧರ್ಮ ಪಾಲಿಸುವ ಪತ್ರಕರ್ತರಿಗೆ ಗೌರವ ಸಿಗಬೇಕಾದಲ್ಲಿ ಮೊದಲು ರೋಲ್ ಕಾಲ್ ಪತ್ರಕರ್ತರನ್ನು ದೂರವಿಡಬೇಕು. ಪ್ರಾಮಾಣಿಕ ಅಧಿಕಾರಿಗಳನ್ನು ಬೆದರಿಸುವವರ ವಿರುದ್ಧ ಸಂಘವೇ ಕ್ರಮ ಕೈಗೊಳ್ಳಬೇಕು ಎಂದ ಅವರು ತಾಲ್ಲೂಕು ಸಂಘದ ಪತ್ರಿಕಾ ಭವನ ನಿರ್ಮಾಣಕ್ಕೆ ಸಿಎ ಸೈಟ್ ನೀಡಲು ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ. ಈ ಜೊತೆಗೆ ನಿವೇಶನರಹಿತ ಪತ್ರಕರ್ತರಿಗೆ ಸೈಟ್ ಮಂಜೂರು ಆಯಾ ಗ್ರಾಮದಲ್ಲಿಯೇ ಮಾಡಲು ಸರ್ಕಾರ ಜೊತೆ ಮಾತನಾಡುತ್ತೇನೆ. ಗ್ರಾಮೀಣ ಪತ್ರಕರ್ತರ ಬಸ್ ಪಾಸ್ ಬಗ್ಗೆ ವ್ಯವಸ್ಥಾಪಕ ನಿರ್ದೇಶಕರ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವ ಬಗ್ಗೆ ಸೂಚನೆ ನೀಡುವುದಾಗಿ ಭರವಸೆ ನೀಡಿದರು.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಮಾತನಾಡಿ ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭವಾದ ಪತ್ರಿಕೋದ್ಯಮ ಬದ್ಧತೆಯಲ್ಲಿ ಸಾಗಬೇಕಿದೆ. ನೈಜ ವರದಿ ಜೊತೆಗೆ ಉತ್ತಮ ಸಮಾಜ ನಿರ್ಮಾಣಕ್ಕೆ ಆದ್ಯತೆ ನೀಡಬೇಕು. ಸರ್ಕಾರದ ಯಾವುದೇ ಕಾರ್ಯಕ್ರಮ ಹಾಗೂ ಯೋಜನೆ ಸಫಲವಾಗಲು ಪತ್ರಕರ್ತರ ಸಹಕಾರ ಅಗತ್ಯವಿದೆ. ಜನರಲ್ಲಿ ಜಾಗೃತಿ ಮೂಡಿಸುವ ಜೊತೆಗೆ ಸರ್ಕಾರದ ಉದ್ದೇಶವನ್ನು ತಿಳಿಸುವ ಪತ್ರಿಕಾ ಕ್ಷೇತ್ರ ಗ್ರಾಮೀಣ ಭಾಗದಲ್ಲಿ ಹರಡಿದೆ. ಈಗ ಸಾಮಾಜಿಕ ಜಾಲತಾಣ ಸಹ ಹೆಚ್ಚಾಗಿ ಕೆಲಸ ಮಾಡುತ್ತಿದೆ. ಆದರೆ ವಾಸ್ತವ ಸತ್ಯವನ್ನು ಪತ್ರಿಕೆಗಳು ಮಾತ್ರ ಬಿಂಬಿಸುತ್ತವೆ ಎಂದ ಅವರು ಕಂದಾಯ ಗ್ರಾಮ ರಚನೆಯಲ್ಲಿ ರಾಜ್ಯಕ್ಕೆ ಮೊದಲ ಸ್ಥಾನ ಪಡೆದ ತುಮಕೂರು ಜಿಲ್ಲೆಯಲ್ಲಿ 22 ಸಾವಿರ ಹಕ್ಕುಪತ್ರ ವಿತರಣೆ ಮಾಡಲಾಗಿದೆ. ಈ ಪೈಕಿ ಗುಬ್ಬಿ ತಾಲ್ಲೂಕು ಅತ್ಯಧಿಕ ಹಕ್ಕುಪತ್ರ ನೀಡಿದೆ. ಸರ್ಕಾರಿ ಯೋಜನೆ ಪಡೆಯಲು ಈ ಕಂದಾಯ ಗ್ರಾಮ ರಚನೆಗೆ ಜಿಲ್ಲಾ ಸಚಿವರ ಸೂಚನೆ ಇತ್ತು. ಇದೇ ಮಾದರಿಯಲ್ಲಿ ಪವತಿ ಖಾತೆ ಆಂದೋಲನದಲ್ಲಿ ನಮ್ಮ ಜಿಲ್ಲೆ ಎರಡನೇ ಸ್ಥಾನ ಪಡೆದಿದೆ. 75 ಸಾವಿರ ಆರ್ ಟಿಸಿ ರಚನೆಯಾಗಿದೆ. 10 ಲಕ್ಷ ಹೆಕ್ಟೇರ್ ಕೃಷಿ ಭೂ ಪ್ರದೇಶದಲ್ಲಿ 2 ಸಾವಿರ ಹೆಕ್ಟೇರ್ ಪ್ರದೇಶ ಭೂ ಸ್ವಾಧೀನ ಮಾಡಿ 352 ಕಿಮೀ ನೀರಾವರಿ ಯೋಜನೆ ಸಿದ್ಧಪಡಿಸಲಾಗಿದೆ ಎಂದು ವಿವರಿಸಿದರು.
ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಹಿಮಂತರಾಜು ಮಾತನಾಡಿ ರಾಜ್ಯ ಸರ್ಕಾರ ಹಿರಿಯ ಪತ್ರಕರ್ತರಿಗೆ ಪಿಂಚಣಿ ವ್ಯವಸ್ಥೆ ಮಾಡಿದೆ. ರಾಜ್ಯದಲ್ಲಿ ಹತ್ತು ಸಾವಿರ ಮಂದಿ ಈ 15 ಸಾವಿರ ಪಿಂಚಣಿ ಪಡೆಯುತ್ತಿದ್ದಾರೆ. ಈ ಜೊತೆಗೆ ಸ್ಮಾರ್ಟ್ ಕಾರ್ಡ್ ಪಡೆದ ಪತ್ರಕರ್ತರಿಗೆ ರಾಜ್ಯದಲ್ಲಿ ಉಚಿತ ಬಸ್ ಪ್ರಯಾಣ ಮಾಡಲು ಅವಕಾಶ ನೀಡ ಲಾಗಿದೆ. ರಾಜ್ಯ ಸರ್ಕಾರ ಈ ಬಾರಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ನೀಡಲು ನೈಜ ಫಲಾನುಭವಿಗಳ ಆಯ್ಕೆಗೆ ರಚಿಸಿದ್ದ ನಿಯಮ ಸರಳೀಕರಣಕ್ಕೆ ಒತ್ತಾಯವಿದೆ. ಸದ್ಯ ದಲ್ಲೇ ಕ್ರಮ ಕೈಗೊಳ್ಳಲಿದ್ದಾರೆ ಎಂದರು.
ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ಮಾತನಾಡಿ 91 ವರ್ಷ ಸುದೀರ್ಘ ನಡೆದು ಬಂದ ನಮ್ಮ ಸಂಘ ತನ್ನದೇ ವಿಶೇಷತೆ ಗಳಿಸಿಕೊಂಡಿದೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ನಮ್ಮ ಸಂಘ ಅರ್ಹ, ಪ್ರಾಮಾಣಿಕ ಪತ್ರಕರ್ತರನ್ನು ಗುರುತಿಸಿ ಸಂಘದ ಸದಸ್ಯತ್ವ ನೀಡಿದೆ. ಜಿಲ್ಲೆಯ ಹತ್ತು ತಾಲ್ಲೂಕಿನಲ್ಲಿ ನೈಜ ಪತ್ರಕರ್ತರನ್ನು ಸಂಘ ಒಗ್ಗೂಡಿಸಿಕೊಂಡು ಸಾಗಿದೆ. ಹೊಸ ಸದಸ್ಯತ್ವ ಬಗ್ಗೆ ಸಹ ಶಿಸ್ತಿನ ಕ್ರಮ ಕೈಗೊಳ್ಳಲಾಗು ವುದು. ಪ್ರತಿ ತಾಲ್ಲೂಕಿನಲ್ಲಿ ಪತ್ರಿಕಾ ಭವನ ನಿರ್ಮಾಣಕ್ಕೆ ಸ್ಥಳೀಯ ಆಡಳಿತ ಸಹಕಾರ ನೀಡಬೇಕು. ಜನಪ್ರತಿನಿಧಿಗಳ ಸಹಾಯ ಕೂಡಾ ಅಗತ್ಯವಿದೆ ಎಂದರು.
ಸಂಘದ ನೂತನ ಕಾರ್ಯಾಲಯವನ್ನು ಎಲ್ಲಾ ಗಣ್ಯರು ಉದ್ಘಾಟಿಸಿದರು. ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಪ್ರಮಾಣಪತ್ರ ವಿತರಿಸಿದ ಜಿಲ್ಲಾಧ್ಯಕ್ಷ ಎಲ್.ಯೋಗೇಶ್ ಪ್ರತಿಜ್ಞಾ ವಿಧಿ ಬೋಧಿಸಿದರು. ತಾಲ್ಲೂಕು ಸಂಘದ ಅಧ್ಯಕ್ಷ ಡಿ.ಮಂಜುನಾಥ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ವೇದಿಕೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್, ತಹಶೀಲ್ದಾರ್ ಆರತಿ.ಬಿ, ತಾಪಂ ಇಓ ರಂಗನಾಥ್, ಪಪಂ ಮುಖ್ಯಾಧಿಕಾರಿ ಮಂಜುಳಾದೇವಿ, ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಉಪಾಧ್ಯಕ್ಷ ಪ್ರಸನ್ನ ದೊಡ್ಡಗುಣಿ, ಜಿಲ್ಲಾ ಕಾರ್ಯದರ್ಶಿ ಸತೀಶ್ ಹಾರೋಗೆರೆ, ಜಿಲ್ಲಾ ನಿರ್ದೇಶಕರಾದ ಯೋಗೀಶ್ ಮೆಳೆಕಲ್ಲಹಳ್ಳಿ, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಕೆ.ಸಂಜಯ್, ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ದೇಶಕ ಆಂಜಿ ನಪ್ಪ ಸೇರಿದಂತೆ ಜಿಲ್ಲಾ ನಿರ್ದೇಶಕರು, ತಾಲ್ಲೂಕು ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಇದ್ದರು.