Indi (Vijayapura) News: ವಿಕಲಚೇತನರಿಗೆ, ವಯೋವೃದ್ದರಿಗೆ ಕಾಳಜಿ ವಹಿಸಿ: ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ
ಇಂದು ೨೨ ಅರ್ಜಿಗಳು ಸ್ವೀಕರಿಸಿದ್ದು ೨೨ ಅರ್ಜಿಗಳು ಮಂಜೂರಾತಿ ನೀಡಿದೆ ಅದರಲ್ಲಿ ವಯೋವೃದ್ದ ರಿಗೆ ಮಾಶಾಸನ ೧೫ ವಿಕಲಚೇತನ ೧ ಸೇರಿದಂತೆ ೨೨ ಮಂಜೂರಾತಿ ನೀಡಲಾಗಿದೆ ಎಂದರು. ಗ್ರೇಡ್ ೨ ತಹಶೀಲ್ದಾರ ಧನಪಾಲ ದೇವೂರ ,ಎ.ಎ ಗುನ್ನಾಪೂರ ಮಾತನಾಡಿದರು.

ಗೋಗಿ ಗ್ರಾಮದಲ್ಲಿ ಹಮ್ಮಿಕೊಂಡ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಮಾತನಾಡುತ್ತಿರುವುದು.

ಇಂಡಿ: ಸರಕಾರವು ಬಡವರಿಗಾಗಿ ವೃದ್ದರಿಗಾಗಿ ,ವಿಕಲಚೇತನರಿಗಾಗಿ ಅನೇಕ ಯೋಜನೆಗಳು ಮಾಡಿದ್ದು ಅಧಿಕಾರಿಗಳು ಪ್ರಮಾಣಿಕವಾಗಿ ತಲುಪಿಸಿ ಇಂತಹ ಜನಸಮುದಾಯಕ್ಕೆ ಬಹಳ ಕಾಳಜಿ ವಹಿಸಿ ಎಂದು ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ ಹೇಳಿದರು.
ಸಂಗೋಗಿ ಗ್ರಾಮದಲ್ಲಿ ಹಮ್ಮಿಕೊಂಡ ಪಿಂಚಣಿ ಅದಾಲತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂದು ೨೨ ಅರ್ಜಿಗಳು ಸ್ವೀಕರಿಸಿದ್ದು ೨೨ ಅರ್ಜಿಗಳು ಮಂಜೂರಾತಿ ನೀಡಿದೆ ಅದರಲ್ಲಿ ವಯೋವೃದ್ದರಿಗೆ ಮಾಶಾಸನ ೧೫ ವಿಕಲಚೇತನ ೧ ಸೇರಿದಂತೆ ೨೨ ಮಂಜೂರಾತಿ ನೀಡಲಾಗಿದೆ ಎಂದರು. ಗ್ರೇಡ್ ೨ ತಹಶೀಲ್ದಾರ ಧನಪಾಲ ದೇವೂರ ,ಎ.ಎ ಗುನ್ನಾಪೂರ ಮಾತನಾಡಿದರು. ಅಭಿವೃದ್ದಿ ಅಧಿಕಾರಿ ಅಶೋಕ ಹೊನ್ನವಾಡ ಸ್ವಾಗತಿಸಿ, ಪ್ರಸ್ತಾವಿಕ ಮಾತನಾಡಿದರು.
ಮಲ್ಲು ಪೂಜಾರಿ, ಗ್ರಾ.ಪಂ ಅಭಿವೃದ್ದಿ ಅಧಿಕಾರಿ ಅಶೋಕ ಹೊನವಾಡ, ಎನ್ ಕೆ ಪೂಜಾರಿ, ಚೌಡಪ್ಪ ಕುಂಬಾರ, ಅಶೋಕಗೌಡ ಬಿರಾದಾರ, ಬಳಾಸಾಹೇಬ ಪಾಟೀಲ, ಎನ್.ಜಿ ಬಿಸನಾಳ, ಎಚ್.ಡಿ ಗೌರ, ಸಿದ್ದು ಕುಂಬಾರ, ರಮೇಶ ಕುಂಬಾರ, ಶ್ರೀಶೈಲ ಬಿರಾದಾರ, ನಿಂಗು ಭಂಡಾರಿ ಸೇರಿದಂತೆ ಗ್ರಾಮಸ್ಥರು ಗ್ರಾ.ಪಂ ಅಧ್ಯಕ್ಷರು ಸದಸ್ಯರು ಇದ್ದರು.