ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಶೋಕ್ ರೆಡ್ಡಿ

14 ವರ್ಷ ಒಳಪಟ್ಟು ವಯೋಮಾನದ ವಿದ್ಯಾರ್ಥಿಗಳು ಮತ್ತು 17 ವರ್ಷ ಒಳಪಟ್ಟು ವಯೋಮಾನದ ವಿದ್ಯಾರ್ಥಿಗಳು ಎಂದು ಎರಡು ವಿಭಾಗಗಳಾಗಿ ಮಾಡಿರುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಭಾಗವಹಿಸುವುದು ಕಷ್ಟಕರವಾದ್ದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ. ಈ ಹಿಂದೆ ಕ್ರೀಡೆಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟಗಳು ಪ್ರತ್ಯೇಕವಾಗಿ ನಡೆಸು ತ್ತಿದ್ದಂತೆ ನಡೆಸಬೇಕೆಂದ ಒತ್ತಾಯ ಮಾಡಿದರು.

ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಚಾಲನೆ ನೀಡಿದ ಅಶೋಕ್ ರೆಡ್ಡಿ

ನೂತನ ಕ್ರೀಡಾ ನಿಯಮಗಳಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿಸಲು ತೊಂದರೆಯಾಗುತ್ತಿದ್ದು,ಹಳೆ ಕ್ರೀಡಾ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಒತ್ತಾಯಿಸಿದರು.

Ashok Nayak Ashok Nayak Aug 18, 2025 11:27 PM

ಚಿಂತಾಮಣಿ: ನೂತನ ಕ್ರೀಡಾ ನಿಯಮಗಳಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಭಾಗವಹಿ ಸಲು ತೊಂದರೆಯಾಗುತ್ತಿದ್ದು,ಹಳೆ ಕ್ರೀಡಾ ನಿಯಮಗಳನ್ನು ಜಾರಿಗೊಳಿಸಬೇಕು ಎಂದು ಸರ್ಕಾರಿ ನೌಕರ ಸಂಘದ ಅಧ್ಯಕ್ಷ ಅಶೋಕ್ ಕುಮಾರ್ ಒತ್ತಾಯಿಸಿದರು.

ಕಸಬಾ ಹೋಬಳಿ ಮಟ್ಟದ ಕ್ರೀಡಾಕೂಟಗಳನ್ನು ಗುಂಡು ಎಸೆಯುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ೧೪ ವರ್ಷ ಒಳಪಟ್ಟು ವಯೋಮಾನದ ವಿದ್ಯಾರ್ಥಿಗಳು ಮತ್ತು ೧೭ ವರ್ಷ ಒಳ ಪಟ್ಟು ವಯೋಮಾನದ ವಿದ್ಯಾರ್ಥಿಗಳು ಎಂದು ಎರಡು ವಿಭಾಗಗಳಾಗಿ ಮಾಡಿರುವುದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಪ್ರೌಢಶಾಲಾ ವಿದ್ಯಾರ್ಥಿಗಳೊಂದಿಗೆ ಭಾಗವಹಿಸುವುದು ಕಷ್ಟಕರವಾದ್ದರಿಂದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳು ಕ್ರೀಡೆಗಳಿಂದ ವಂಚಿತರಾಗುತ್ತಿದ್ದಾರೆ ಈ ಹಿಂದೆ ಕ್ರೀಡೆಗಳನ್ನು ಪ್ರಾಥಮಿಕ ಮತ್ತು ಪ್ರೌಢಶಾಲಾ ಕ್ರೀಡಾಕೂಟಗಳು ಪ್ರತ್ಯೇಕವಾಗಿ ನಡೆಸು ತ್ತಿದ್ದಂತೆ ನಡೆಸಬೇಕೆಂದ ಒತ್ತಾಯ ಮಾಡಿದರು.

ಇದನ್ನೂ ಓದಿ: Chikkaballapur News: ಶ್ರೀ ಕೃಷ್ಣ ದೇವಾಲಯ ಸ್ಥಾಪನೆಯ 3ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮ

ವಿದ್ಯಾರ್ಥಿಗಳು ಕ್ರೀಡೆಗಳಲ್ಲಿ ಭಾಗವಹಿಸುವುದರಿಂದ ದೈಹಿಕವಾಗಿ ಉಲ್ಲಾಸ ಉತ್ಸಾಹ, ಆರೋಗ್ಯ ವಂತರಾಗಿರಬಹುದು,ಸ್ವರ್ಧಾಮನೋಭಾವ ಬೆಳೆಸಿಕೊಳ್ಳಬಹುದು ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆಗಳು,ಪ್ರತಿಭಾ ಕಾರಂಜಿಗಳು,ಕಲಿಕಾ ಹಬ್ಬಗಳು, ಕಲಿಕೋತ್ಸವಗಳಲ್ಲಿ ಭಾಗವಹಿಸುವುದರ ಮೂಲಕ ತಮ್ಮ ಪ್ರತಿಭೆಯನ್ನ ವ್ಯಕ್ತಪಡಿಸಲು ಸಹಕಾರಿಯಾಗುತ್ತವೆ.

ಕಸಬಾ ಹೋಬಳಿ ವಿದ್ಯಾರ್ಥಿಗಳು ತಾಲೂಕು ಮಟ್ಟದಲ್ಲಿ ವಿಜೇತರಾಗಿ ಕಸಬಾ ಹೋಬಳಿಗೆ ಹೆಸರು ತರಬೇಕೆಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ತಾಲೂಕ್ ದೈಹಿಕ ಶಿಕ್ಷಣಾಧಿಕಾರಿ ನರಸಿಂಹಪ್ಪ, ಕ್ರೀಡಾಕೂಟದ ಉಸ್ತುವಾರಿ ಗಳಾದ ದೈಹಿಕ ಶಿಕ್ಷಕರಾದ ಉಪೇಂದ್ರ,ನಗರ ಸಿಆರ್‌ಪಿ ಬಾಸ್ಕರ್ ರೆಡ್ಡಿ, ಬೂರಗಮಾಕಲ ಹಳ್ಳಿ ಸಿಆರ್ಪಿ ನಾಗರಾಜ್,ನಗರ ಸೆಕೆಂಡ್ ಸಿಆರ್ ಪಿ ಲಕ್ಷ್ಮಣ್ ರೆಡ್ಡಿ,ಆನೂರು ಸಿಆರ್ ಪಿ ಮೆನಸಪ್ಪ, ದೈಹಿಕ ಶಿಕ್ಷಕರು ಹಾಗೂ ವಿದ್ಯಾರ್ಥಿ ಕ್ರೀಡಾಪಟುಗಳು ಹಾಜರಿದ್ದರು.