Janhvi Kapoor: ತಿರುಪತಿಯಲ್ಲಿ ಬರಿಗಾಲಲ್ಲಿ 3550 ಮೆಟ್ಟಿಲು ಹತ್ತಿದ ಜಾನ್ವಿ ಕಪೂರ್; ಭಕ್ತಿಗೆ ಮೆಚ್ಚಿದ ಅಭಿಮಾನಿಗಳು
Tirumala Temple: ಬಾಲಿವುಡ್ ನಟಿ ಜಾಹ್ನವಿ ಕಪೂರ್ ಹುಟ್ಟುಹಬ್ಬದ ಪ್ರಯುಕ್ತ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ ಪಡೆಯಲು ಆಗಮಿಸಿದ್ದರು. 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟಿ. ಬರೋಬ್ಬರಿ 3,550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಅವರ ಭಕ್ತಿಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
ನಟಿ ಜಾಹ್ನವಿ ಕಪೂರ್ -
ಬಾಲಿವುಡ್ ನಟಿ ಜಾಹ್ನವಿ ಕಪೂರ್ (Janhvi Kapoor) ಹುಟ್ಟುಹಬ್ಬದ ಪ್ರಯುಕ್ತ ಆಂಧ್ರಪ್ರದೇಶದ ಪ್ರಸಿದ್ಧ ತಿರುಮಲ ವೆಂಕಟೇಶ್ವರ ಸ್ವಾಮಿಯ ದರ್ಶನ (Tirumala Temple) ಪಡೆಯಲು ಆಗಮಿಸಿದ್ದರು. 29ನೇ ವಸಂತಕ್ಕೆ ಕಾಲಿಟ್ಟಿದ್ದಾರೆ ನಟಿ. ಬರೋಬ್ಬರಿ 3,550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತುವ ಮೂಲಕ ತಮ್ಮ ಭಕ್ತಿಯನ್ನು ಮೆರೆದಿದ್ದಾರೆ. ವೀಡಿಯೊಗಳು ಮತ್ತು ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ (Social Media) ವೈರಲ್ ಆಗಿದ್ದು, ಅವರ ಭಕ್ತಿಗೆ ಅಭಿಮಾನಿಗಳಿಂದ ಪ್ರಶಂಸೆ ವ್ಯಕ್ತವಾಗಿದೆ.
ಸೆಲ್ಫಿಗಳಿಗೆ ಪೋಸ್
ತಮ್ಮ ಭದ್ರತಾ ಸಿಬ್ಬಂದಿಯೊಂದಿಗೆ ಮುಂಜಾನೆ ದೇವಸ್ಥಾನಕ್ಕೆ ಆಗಮಿಸಿದ್ದರು. ಜನಸಂದಣಿಯ ನಡುವೆಯೂ, ಅವರು ಆಗಾಗ್ಗೆ ಸೆಲ್ಫಿಗಳಿಗೆ ಪೋಸ್ ಕೂಡ ನೀಡಿದ್ದಾರೆ. ತಿರುಪತಿ ಬೆಟ್ಟ ಹತ್ತುವಾಗ ಜಾನ್ವಿ ಅವರು ಬಿಳಿ ಬಣ್ಣದ ಫ್ಲೋರಲ್ ಕುರ್ತಾ ಧರಿಸಿದ್ದರು. ಈ ಬಾರಿ ಶಿಖರ್ ಬದಲಿಗೆ ಜಾನ್ವಿ ಬೇರೆ ಸ್ನೇಹಿತರೊಂದಿಗೆ ಬೆಟ್ಟ ಹತ್ತಿರುವುದು ವಿಶೇಷವಾಗಿತ್ತು.
ಇದನ್ನೂ ಓದಿ: Amruthadhaare serial Kannada: ಶಕುಂತಲಾ ಎದುರೇ ಜೈದೇವ್ ಅಹಂಕಾರದ ಮಾತು! ಗೌತಮ್ ದಿವಾನ್ ಮುಂದಿನ ಹೆಜ್ಜೆ ಏನು?
ಪ್ರಶಂಸೆಯ ಸುರಿಮಳೆ
ಅವರ ಯಾತ್ರೆಗೆ ಅಭಿಮಾನಿಗಳು ಬೇಗನೆ ಪ್ರತಿಕ್ರಿಯಿಸಿದರು. ಒಬ್ಬರು ಬರೆದಿದ್ದಾರೆ, "ನೋಡಲು ತುಂಬಾ ಸಂತೋಷ. ಸುಲಭವಾಗಿ ವಿಐಪಿ ದರ್ಶನ ಪಡೆಯಬಹುದಿತ್ತು. ಆದರೆ ಜಾನ್ವಿ ಕಪೂರ್ ತಿರುಮಲದಲ್ಲಿ ವೆಂಕಟೇಶ್ವರ (ಬಾಲಾಜಿ) ಅವರ ಆಶೀರ್ವಾದ ಪಡೆಯಲು ಅಲಿಪಿರಿ ಪಾದಚಾರಿ ಮಾರ್ಗದಲ್ಲಿ 3550 ಮೆಟ್ಟಿಲುಗಳನ್ನು ಬರಿಗಾಲಿನಲ್ಲಿ ಹತ್ತಲು ಆಯ್ಕೆ ಮಾಡಿಕೊಂಡರು. ಖುಷಿಯ ಸಂಗತಿ ಇದು ಎಂದು ಕಮೆಂಟ್ ಮಾಡಿದ್ದಾರೆ.
ನಟಿ ವಿಶೇಷ ಸಂದರ್ಭಗಳಲ್ಲಿ ತಿರುಮಲದಲ್ಲಿ ಆಗಾಗ್ಗೆ ಆಶೀರ್ವಾದ ಪಡೆಯುತ್ತಾರೆ. ಕಳೆದ ವರ್ಷ, ಅವರು ತಮ್ಮ ದಿವಂಗತ ತಾಯಿ ಶ್ರೀದೇವಿ ಅವರ ಜನ್ಮ ವಾರ್ಷಿಕೋತ್ಸವದಂದು ಸಹನಟ ಸಿದ್ಧಾರ್ಥ್ ಮಲ್ಹೋತ್ರಾ ಅವರೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದರು.
ಕಳೆದ ಬಾರಿ ನಟಿ ʻನನಗೆ ವೆಂಕಟೇಶ್ವರ ಸ್ವಾಮಿಯ ಮೇಲೆ ಅಪಾರ ನಂಬಿಕೆ. ಯಾವಾಗ ಒಳಗಿನಿಂದ ಕರೆ ಬರುತ್ತದೆಯೋ, ಆಗ ನಾನು ತಿರುಪತಿಗೆ ಬಂದು ಮೆಟ್ಟಿಲು ಹತ್ತಿ ದೇವರ ದರ್ಶನ ಪಡೆಯುತ್ತೇನೆ’ ಎಂದು ಹೇಳಿಕೊಂಡಿದ್ದರು.
Janhvi Kapoor climbing over 3500 steps barefoot to offer prayers at Tirumala Tirupati
— Sheetal Chopra 🇮🇳 (@SheetalPronamo) March 6, 2026
Dear Genz, Don’t just be swayed by the glamour, as that’s part of her job. If you seek inspiration, let her faith, belief, dedication and devotion guide you.
Govindrao Govinda 🙏🏼 pic.twitter.com/Zlg6iGt9zw
ಸಿನಿಮಾ ವಿಚಾರಕ್ಕೆ ಬರೋದಾದರೆ, ಜಾಹ್ನವಿ ಇತ್ತೀಚೆಗೆ ಶಶಾಂಕ್ ಖೈತಾನ್ ನಿರ್ದೇಶನದ ಕೌಟುಂಬಿಕ ನಾಟಕ ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿಯಲ್ಲಿ ಕಾಣಿಸಿಕೊಂಡರು, ಇದರಲ್ಲಿ ವರುಣ್ ಧವನ್, ಸನ್ಯಾ ಮಲ್ಹೋತ್ರಾ ಮತ್ತು ರೋಹಿತ್ ಸರಾಫ್ ಸಹ-ನಟರಾಗಿದ್ದಾರೆ. ಏಪ್ರಿಲ್ 30, 2026 ರಂದು ಬಿಡುಗಡೆಯಾಗಲಿರುವ ರಾಮ್ ಚರಣ್ ಜೊತೆ ಮುಂಬರುವ ತೆಲುಗು ಚಿತ್ರ ಪೆದ್ದಿಯಲ್ಲಿಯೂ ಅವರು ಕಾಣಿಸಿಕೊಳ್ಳಲಿದ್ದಾರೆ.
ಇದನ್ನೂ ಓದಿ: Ranveer Singh: ʻಧುರಂಧರ್ 2ʼ ಚಿತ್ರಕ್ಕಾಗಿ ಹೊಸ ಪ್ಲ್ಯಾನ್ ಮಾಡಿದ ನಿರ್ದೇಶಕ ಆದಿತ್ಯ ಧರ್; ಮಾ.7ಕ್ಕೆ ಬರ್ತಿದೆ ಟ್ರೇಲರ್!
ರಾಮ್ ಚರಣ್ ನಟನೆಯ 'ಪೆದ್ದಿ' ಚಿತ್ರಕ್ಕಾಗಿ ನಟಿ ಜಾನ್ವಿ ಕಪೂರ್ ಸುಮಾರು 6 ಕೋಟಿ ರೂಪಾಯಿಗಳನ್ನು ಸಂಭಾವನೆಯಾಗಿ ಪಡೆದಿದ್ದಾರೆ ಎಂದು ವರದಿಯಾಗಿದೆ. ಜಾನ್ವಿ ತಮ್ಮ ಮೊದಲ ದಕ್ಷಿಣ ಭಾರತದ ಚಿತ್ರ 'ದೇವರ'ಗಾಗಿ 5 ಕೋಟಿ ರೂಪಾಯಿ ಪಡೆದಿದ್ದರು. ಈಗ 'ಪೆದ್ದಿ' ಚಿತ್ರಕ್ಕಾಗಿ ತಮ್ಮ ಸಂಭಾವನೆಯನ್ನು 1 ಕೋಟಿ ರೂ. ಹೆಚ್ಚಿಸಿಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯ ಬಾಲಿವುಡ್ಗಿಂತ ಸೌತ್ನಲ್ಲೇ ಹೆಚ್ಚು ಬ್ಯುಸಿ ಆಗುತ್ತಿದ್ದಾರೆ ಅವರು.