Kichcha Sudeep: ರಾಜಮೌಳಿಯ ‘ವಾರಣಾಸಿ’ ಸಿನಿಮಾದಲ್ಲಿ ಸುದೀಪ್? ಪಾತ್ರ ಏನು?
Sudeep: ನಿರ್ದೇಶಕ ಎಸ್.ಎಸ್. ರಾಜಮೌಳಿ ಅವರ ಮುಂಬರುವ ಚಿತ್ರ 'ವಾರಣಾಸಿ'ಯ ತಾರಾಗಣ ಮತ್ತು ಚಿತ್ರೀಕರಣದ ಸುತ್ತ ಭಾರಿ ಚರ್ಚೆ ನಡೆಯುತ್ತಿರುವಂತೆಯೇ, ಹೊಸ ಮಾಹಿತಿಯೊಂದು ಹೊರಬೀಳುತ್ತಿದೆ. ನಟ ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳು ನಿಜವೇ ಎಂಬುದನ್ನು ತಯಾರಕರು ಇನ್ನೂ ದೃಢಪಡಿಸಿಲ್ಲ. 'ಬಾಹುಬಲಿ; ದಿ ಬಿಗಿನಿಂಗ್" ಚಿತ್ರದಲ್ಲಿ ಅಸ್ಲಾಂ ಖಾನ್ ಆಗಿ ಸುದೀಪ್ ಮಿಂಚಿದ್ದರು. ಇಡೀ 'ಬಾಹುಬಲಿ' ಸರಣಿ ಸಿನಿಮಾ ಶುರುವಾಗುವುದೇ ಕಟ್ಟಪ್ಪ ಹಾಗೂ ಅಸ್ಲಾಂ ಖಾನ್ ಭೇಟಿ ಸನ್ನಿವೇಶದಿಂದ.
ಕಿಚ್ಚ ಸುದೀಪ್ -
ನಿರ್ದೇಶಕ ಎಸ್.ಎಸ್. ರಾಜಮೌಳಿ (SS Rajamouli) ಅವರ ಮುಂಬರುವ ಚಿತ್ರ 'ವಾರಣಾಸಿ'ಯ ತಾರಾಗಣ ಮತ್ತು ಚಿತ್ರೀಕರಣದ ಸುತ್ತ ಭಾರಿ ಚರ್ಚೆ ನಡೆಯುತ್ತಿರುವಂತೆಯೇ, ಹೊಸ ಮಾಹಿತಿಯೊಂದು ಹೊರಬೀಳುತ್ತಿದೆ. ನಟ ಕಿಚ್ಚ ಸುದೀಪ್ (Sudeep) ಈ ಚಿತ್ರದಲ್ಲಿ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ತಿಳಿದುಬಂದಿದೆ. ವರದಿಗಳು ನಿಜವೇ ಎಂಬುದನ್ನು ತಯಾರಕರು ಇನ್ನೂ ದೃಢಪಡಿಸಿಲ್ಲ. 'ಬಾಹುಬಲಿ; ದಿ ಬಿಗಿನಿಂಗ್" ಚಿತ್ರದಲ್ಲಿ ಅಸ್ಲಾಂ ಖಾನ್ ಆಗಿ ಸುದೀಪ್ (sudeep) ಮಿಂಚಿದ್ದರು. ಇಡೀ 'ಬಾಹುಬಲಿ' ಸರಣಿ ಸಿನಿಮಾ ಶುರುವಾಗುವುದೇ ಕಟ್ಟಪ್ಪ ಹಾಗೂ ಅಸ್ಲಾಂ ಖಾನ್ ಭೇಟಿ ಸನ್ನಿವೇಶದಿಂದ. ಪಾರ್ಟ್-2 ಚಿತ್ರದಲ್ಲೂ ಸುದೀಪ್ ನಟಿಸುತ್ತಾರೆ ಎನ್ನುವ ಗುಸುಗುಸು ಕೇಳಿಬಂದಿತ್ತು.
ವಾರಣಾಸಿಯ ಪಾತ್ರವರ್ಗದ ಸುತ್ತಲಿನ ಹಲವು ಊಹಾಪೋಹಗಳ ನಡುವೆ , ಇಂಡಿಯಾ ಟುಡೇ ಹೊಸ ವರದಿಯ ಪ್ರಕಾರ, ನಟ ಕಿಚ್ಚ ಸುದೀಪ್ ಅವರನ್ನು ಪ್ರಮುಖ ಪಾತ್ರದಲ್ಲಿ ನಟಿಸಲು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: Kannada Serial TRP: ಟಿಆರ್ಪಿ ಜಿದ್ದಾಜಿದ್ದಿನಲ್ಲಿ ಗೆದ್ದ ಸೀರಿಯಲ್ ಯಾವುದು?
ವಿಜಯೇಂದ್ರ ಪ್ರಸಾದ್ ಕಥೆ
'ವಾರಣಾಸಿ' ಚಿತ್ರಕ್ಕೆ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆ ಬರೆದಿದ್ದಾರೆ. ಪಿ. ಎಸ್ ವಿನೋದ್ ಛಾಯಾಗ್ರಹಣ, ಎಂ. ಎಂ ಕೀರವಾಣಿ ಸಂಗೀತ ಚಿತ್ರಕ್ಕಿದೆ. ಕಲಿಯುಗದಿಂದ ತ್ರೇತಾಯುಗದವರೆಗೆ ಹೋಗಿ ಬರುವಂತಹ ಕಾಲ್ಪನಿಕ ಕಥೆ ಚಿತ್ರದಲ್ಲಿದೆ. ದೇಶ ವಿದೇಶಗಳಲ್ಲಿ ಸಿನಿಮಾ ಕಥೆ ಸಾಗುತ್ತದೆ. ಈ ಹಿಂದೆ ಚಿಯಾನ್ ವಿಕ್ರಂ ಚಿತ್ರದ ಪ್ರಮುಖ ಪಾತ್ರದಲ್ಲಿ ನಟಿಸುತ್ತಾರೆ ಎನ್ನುವ ಊಹಾಪೋಹ ಶುರುವಾಗಿತ್ತು. ಅದೇ ಪಾತ್ರದಲ್ಲಿ ಸುದೀಪ್ ನಟಿಸುತ್ತಾರೆ ಎನ್ನುವ ಅಂತೆ ಕಂತೆ ಸುದ್ದಿ ಹರಿದಾಡ್ತಿದೆ.
According to the sources, @KicchaSudeep Boss will be doing the role in #Varanasi only if @urstrulyMahesh anna does an cameo in #BRBFirstBlood.
— Abhi (@karur_abhi) February 19, 2026
He stated in a recent interview about other industry actor's cameo in #KFI . #KicchaSudeep𓃵 #MaheshBabupic.twitter.com/9uVj4Em6XW
ಈ ವಿಶ್ವಪ್ರಯಾಣ ಚಲನಚಿತ್ರವು ಭಾರತೀಯ ಮಹಾಕಾವ್ಯ ರಾಮಾಯಣವನ್ನು ಎಸ್.ಎಸ್. ರಾಜಮೌಳಿ ಅವರ ಶೈಲಿಯಲ್ಲಿ ಹೆಣೆಯುತ್ತದೆ. ಇದರಲ್ಲಿ ಮಹೇಶ್ ಬಾಬು ನಿರ್ವಹಿಸಿದ ಮುಖ್ಯ ಪಾತ್ರ ರುದ್ರ, ರಾಮನ ಅಂಶಗಳನ್ನು ತನ್ನ ಪಾತ್ರದಲ್ಲಿ ಸಾಕಾರಗೊಳಿಸುತ್ತಾನೆ, ಭೂಮಿಯ ಮೇಲಿನ ಮಾನವಕುಲವನ್ನು ಉಳಿಸಲು ವಿಭಿನ್ನ ಸಮಯಗಳಿಗೆ ಪ್ರಯಾಣಿಸುತ್ತಾನೆ. ಈ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ನಾಯಕಿಯಾಗಿ ಮಂದಾಕಿನಿಯಾಗಿ ಮತ್ತು ಪೃಥ್ವಿರಾಜ್ ಸುಕುಮಾರನ್ ವೀಲ್ಚೇರ್ನಲ್ಲಿ ವಾಸಿಸುವ ಕುಂಭ ಎಂಬ ಪ್ರತಿಸ್ಪರ್ಧಿಯಾಗಿ ನಟಿಸಿದ್ದಾರೆ .
1000 ಕೋಟಿ ಬಜೆಟ್
ಈ ಸಿನಿಮಾಕ್ಕೆ ಸುಮಾರು 1000 ಕೋಟಿ ಬಜೆಟ್ ಹೂಡಲಾಗಿದ್ದು, ಸಿನಿಮಾವನ್ನು ಪಿವಿಆರ್ ಕ್ಯಾಮೆರಾಗಳನ್ನು ಬಳಸಿ ಚಿತ್ರೀಕರಿಸಿರುವುದು ವಿಶೇಷ. ಸಿನಿಮಾಕ್ಕಾಗಿ ಕೆಲವು ಹಾಲಿವುಡ್ ಸಂಸ್ಥೆಗಳು ಸಹ ಕೆಲಸ ಮಾಡಿವೆ. ಸಿನಿಮಾಕ್ಕೆ ಆಸ್ಕರ್ ವಿಜೇತ ಎಂಎಂ ಕೀರವಾಣಿ ಅವರು ಸಂಗೀತ ನೀಡಿದ್ದಾರೆ.
ಇದನ್ನೂ ಓದಿ: Shiva Rajkumar: ಶಿವರಾಜ್ ಕುಮಾರ್ಗೆ 40 ವರ್ಷಗಳ ಸಿನಿ ಪಯಣದ ಸಂಭ್ರಮ! ಗೀತಾ ಪಿಕ್ಚರ್ಸ್ ಸ್ಪೆಷಲ್ ಪೋಸ್ಟ್
ಇತ್ತೀಚೆಗೆ, ಪ್ರಕಾಶ್ ರಾಜ್ ಈ ಚಿತ್ರದಲ್ಲಿ ಮತ್ತೊಬ್ಬ ನಟನಾಗಿ 'ಶಿವಭಕ್ತ'ನಾಗಿ ನಟಿಸಿದ್ದಾರೆ ಎಂದು ಬಹಿರಂಗವಾಯಿತು. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿರುವಾಗ, ವಾರಣಾಸಿ ಪ್ರಸ್ತುತ ನಿರ್ಮಾಣ ಹಂತದಲ್ಲಿದ್ದು, ಏಪ್ರಿಲ್ 7, 2027 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಯಿದೆ.