Ranbir Kapoor: ರಾಮಾಯಣ ಕಥೆ ಹೇಳುವಾಗ ಮಗಳ ಪ್ರತಿಕ್ರಿಯೆ ಏನು? ರಣಬೀರ್ ಹೇಳಿದ್ದೇನು?
Ranbir Kapoor: ಬಾಲಿವುಡ್ ನಟ ರಣಬೀರ್ ಕಪೂರ್ ನಿತೇಶ್ ತಿವಾರಿ ಅವರ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ ಅನ್ನು ಆಯ್ದ ಪ್ರೇಕ್ಷಕರಿಗಾಗಿ ತಯಾರಕರು ಪ್ರದರ್ಶಿಸಿದರು. ನಂತರ, ತಂಡವು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಮಾತುಕತೆ ವೇಳೆ, ರಣಬೀರ್ ತನ್ನ ಮಗಳು ರಾಹಾಗೆ ರಾಮಾಯಣ ಕಥೆಗಳನ್ನು ಹೇಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ವಿಶೇಷ ವಿಚಾರವನ್ನು ಹಂಚಿಕೊಂಡಿದ್ದಾರೆ.
ರಣಬೀರ್ ಕಪೂರ್ -
ಬಾಲಿವುಡ್ ನಟ ರಣಬೀರ್ ಕಪೂರ್ (Ranbir Kapoor) ನಿತೇಶ್ ತಿವಾರಿ (Nitesh Tiwari) ಅವರ ರಾಮಾಯಣದಲ್ಲಿ ರಾಮನ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ನಡೆದ ಅದ್ಧೂರಿ ಕಾರ್ಯಕ್ರಮದಲ್ಲಿ ಚಿತ್ರದ ಟೀಸರ್ (Teaser) ಅನ್ನು ಆಯ್ದ ಪ್ರೇಕ್ಷಕರಿಗಾಗಿ ತಯಾರಕರು ಪ್ರದರ್ಶಿಸಿದರು. ನಂತರ, ತಂಡವು ಮಾಧ್ಯಮಗಳೊಂದಿಗೆ ಸಂವಾದ ನಡೆಸಿದರು. ಮಾತುಕತೆ ವೇಳೆ, ರಣಬೀರ್ (Ranbir) ತನ್ನ ಮಗಳು ರಾಹಾಗೆ ರಾಮಾಯಣ ಕಥೆಗಳನ್ನು ಹೇಳುತ್ತಿದ್ದೆ ಎಂದು ಹೇಳಿಕೊಂಡಿದ್ದಾರೆ. ಈ ವೇಳೆ ವಿಶೇಷ ವಿಚಾರವನ್ನು ಹಂಚಿಕೊಂಡಿದ್ದಾರೆ.
ರಾಹಾಗೆ ರಾಮಾಯಣದ ಕಥೆಗಳನ್ನು ಹೇಳುತ್ತಿದ್ದೆ
"ನಾನು ತಂದೆಯಾಗುವ ಸಮಯದಲ್ಲೇ ಈ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ ಎಂದು ರಣಬೀರ್ ಹೇಳಿದರು. ಒಂದೆಡೆ, ನಾನು ಕೆಲಸ ಮಾಡಲು ಮತ್ತು ರಾಮನ ಪಾತ್ರ ಮಾಡಲು ಹೋಗುತ್ತೇನೆ, ಆದರೆ ನಾನು ಮನೆಗೆ ಹೋಗಿ ನನ್ನ ಮಗಳು ರಾಹಾಗೆ ರಾಮಾಯಣದ ಕಥೆಗಳನ್ನು ಹೇಳುತ್ತಿದ್ದೇನೆ. ನೀವು ಇಂದು ಹನುಮಂತನ ಜೊತೆ ಚಿತ್ರೀಕರಣ ಮಾಡಿದ್ದೀರಾ? ಇಂದು ಸೀತೆಯ ಜೊತೆ ಶೂಟ್ ಮಾಡಿದ್ರಾ? ಇಂದು ನೀವು ಏನು ಮಾಡಿದ್ದೀರಿ?' ಎಂದು ಅವಳು ಕೇಳುತ್ತಾಳೆ.
ಇದನ್ನೂ ಓದಿ: Fauzi: ಫೌಜಿ ಸಿನಿಮಾ ಸೆಟ್ನ ಫೋಟೋಗಳು ಲೀಕ್; ಕಟ್ಟುನಿಟ್ಟಿನ ಎಚ್ಚರಿಕೆ ಕೊಟ್ರು ಡೈರೆಕ್ಟರ್
"ಈ ರಾಮಾಯಣ ಕಥೆ ಬಗ್ಗೆ ರಾಹಾಗೆ ತುಂಬಾ ಆಸಕ್ತಿ ಇದೆ. ಇದು ನಮ್ಮ ಡಿಎನ್ಎಯಲ್ಲಿದೆ ಎಂದು ಅನ್ನಿಸುತ್ತೆ. ಈ ಸಂಸ್ಕೃತಿ ನಮ್ಮನ್ನು ಆವರಿಸಿದೆ. ಪ್ರೀತಿ ಮತ್ತು ಆಸಕ್ತಿ ನಮಗೆ ತುಂಬಾ ಸ್ವಾಭಾವಿಕವಾಗಿ ಬರುತ್ತದೆ. ನಾವು ನಿಜವಾಗಿಯೂ ಅದು ಹೆಚ್ಚಿನ ಪ್ರೇಕ್ಷಕರನ್ನು ಮತ್ತು ಜಾಗತಿಕ ಪ್ರೇಕ್ಷಕರನ್ನು ಆಕರ್ಷಿಸಬೇಕೆಂದು ಬಯಸುತ್ತೇವೆ ಎಂದು ಅವರು ಹೇಳಿದರು.
ಲಾಸ್ ಏಂಜಲೀಸ್ ನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಣಬೀರ್, ರಾಮನ ಪಾತ್ರದಲ್ಲಿ ನಟಿಸಲು ತಾನು ಸಿದ್ಧನಿಲ್ಲ ಎಂದು ಭಾವಿಸಿ ಆರಂಭದಲ್ಲಿ ಚಿತ್ರವನ್ನು ತಿರಸ್ಕರಿಸಿದ್ದಾಗಿ ಬಹಿರಂಗಪಡಿಸಿದ್ದರು. ಆದರೆ, ಮಗಳ ಜನನ ನಂತರ ಆ ಯೋಚನೆ ಬದಲಾಯಿಸಿತು. ಈ ಚಿತ್ರದಲ್ಲಿ ತಾವು ದ್ವಿಪಾತ್ರದಲ್ಲಿ ನಟಿಸುತ್ತಿರುವುದಾಗಿ ನಟ ಇತ್ತೀಚೆಗೆ ದೃಢಪಡಿಸಿದರು. ರಾಮನ ಜೊತೆಗೆ, ಈ ಚಿತ್ರದಲ್ಲಿ ಅವರು ಪರಶುರಾಮನ ಪಾತ್ರವನ್ನೂ ನಿರ್ವಹಿಸಲಿದ್ದಾರೆ.
ರಾಮಾಯಣದ ಬಗ್ಗೆ
ನಿತೇಶ್ ತಿವಾರಿ ನಿರ್ದೇಶನದ ಈ ಎರಡು ಭಾಗಗಳ ಚಿತ್ರವನ್ನು ನಮಿತ್ ಮಲ್ಹೋತ್ರಾ ನಿರ್ಮಿಸಿದ್ದಾರೆ ಮತ್ತು ₹ 4,000 ಕೋಟಿ ಬಜೆಟ್ನಲ್ಲಿ ನಿರ್ಮಿಸಲಾಗಿದೆ . ಈ ಚಿತ್ರದಲ್ಲಿ ರಣಬೀರ್ ಕಪೂರ್ ರಾಮನಾಗಿ, ರಾವಣನಾಗಿ ಯಶ್, ಸೀತೆಯಾಗಿ ಸಾಯಿ ಪಲ್ಲವಿ, ಹನುಮಂತನಾಗಿ ಸನ್ನಿ ಡಿಯೋಲ್ ಮತ್ತು ಲಕ್ಷ್ಮಣನಾಗಿ ರವಿ ದುಬೆ ನಟಿಸಿದ್ದಾರೆ. ಇದು ಇದುವರೆಗೆ ನಿರ್ಮಿಸಲಾದ ಅತ್ಯಂತ ದುಬಾರಿ ಭಾರತೀಯ ಚಿತ್ರವಾಗಿದೆ. ರಾಮಾಯಣ ಭಾಗ ಒಂದು ಅಕ್ಟೋಬರ್ 2026 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದ್ದು, ಎರಡನೇ ಭಾಗ 2027 ರಲ್ಲಿ ಬಿಡುಗಡೆಯಾಗಲಿದೆ.
ಇದನ್ನೂ ಓದಿ: Bhagyalakshmi Serial: 16 ವರ್ಷ ನರಕ! ಮದುವೆಗೆ ರೆಡಿಯಾದ ಭಾಗ್ಯ; ಗೆದ್ದೇ ಬಿಟ್ಟನಾ ತಾಂಡವ್?
ಈ ಟೀಸರ್ ರಣಬೀರ್ ಕಪೂರ್ ಅವರನ್ನು ರಾಮನ ಪಾತ್ರದಲ್ಲಿ ಪರಿಚಯಿಸಿತು. ಭಾರತದಾದ್ಯಂತ 14 ನಗರಗಳಲ್ಲಿ ಇದನ್ನು ಬಿಡುಗಡೆ ಮಾಡಲಾಯಿತು, ಮುಂಬೈ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ನಿತೇಶ್ ತಿವಾರಿ ಮತ್ತು ನಿರ್ಮಾಪಕ ನಮಿತ್ ಮಲ್ಹೋತ್ರಾ ಹಾಜರಿದ್ದರು.