Thalapathy Vijay: ಸಂಗೀತ -ವಿಜಯ್ ಅವರದ್ದು ಮುಗಿದುಹೋದ ಕಥೆ; ಡಿವೋರ್ಸ್ ಬಗ್ಗೆ ತಂದೆ ಹೇಳಿದ್ದೇನು?
Thalapathy Vijay: ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನೊಂದು ದಿನ ಬಾಕಿಯಿದೆ. ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ವಿಜಯ್ ತಮಿಳುನಾಡಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ. ಇದೀಗ ವಿಜಯ್ ಡಿವೋರ್ಸ್ ವಿಚಾರದ ಬಗ್ಗೆಯೂ ತಂದೆ ಚಂದ್ರಶೇಖರ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.ವಿಜಯ್ ರಾಜಕೀಯಕ್ಕೆ ಕಾಲಿಟ್ಟಾಗಿನಿಂದ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಎಸ್ಎಸಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ .
ದಳಪತಿ ವಿಜಯ್ ತಂದೆ -
ಟಿವಿಕೆ ಮುಖ್ಯಸ್ಥರನ್ನು (Vijay) ಗುರಿಯಾಗಿಸಿಕೊಂಡು ನಡೆಯುತ್ತಿರುವ ಇತ್ತೀಚಿನ ರಾಜಕೀಯ ದಾಳಿಗಳು ಮತ್ತು ವಿವಾದಗಳನ್ನು ಎದುರಿಸುತ್ತಿರುವ ತಮ್ಮ ಮಗ, ನಟ-ರಾಜಕಾರಣಿ ವಿಜಯ್ ಅವರನ್ನು ಹಿರಿಯ ಚಲನಚಿತ್ರ ನಿರ್ಮಾಪಕ ಎಸ್ಎ ಚಂದ್ರಶೇಖರ್ (ಎಸ್ಎಸಿ) (S. A. Chandrasekhar (SAC) ) ಬೆಂಬಲಿಸಿದ್ದಾರೆ . ವಿಜಯ್ (TVK chief) ಡಿವೋರ್ಸ್ ವಿಚಾರದ ಬಗ್ಗೆಯೂ ತಂದೆ ಚಂದ್ರಶೇಖರ್ ಸಂದರ್ಶನವೊಂದರಲ್ಲಿ ಪ್ರತಿಕ್ರಿಯಿಸಿದ್ದಾರೆ.
ವಿಜಯ್ ರಾಜಕೀಯಕ್ಕೆ ಕಾಲಿಟ್ಟಾಗಿನಿಂದ ಎದುರಿಸುತ್ತಿರುವ ಸವಾಲುಗಳ ಬಗ್ಗೆ ಎಸ್ಎಸಿ ಸ್ಪಷ್ಟ ಹೇಳಿಕೆ ನೀಡಿದ್ದಾರೆ . ವಿರೋಧ ಪಕ್ಷಗಳು ವಿಜಯ್ ಅವರ ವೈಯಕ್ತಿಕ ಜೀವನವನ್ನು ಸಾರ್ವಜನಿಕ ವಲಯಕ್ಕೆ ಎಳೆದುತರುವ ಮೂಲಕ ಉದ್ದೇಶಪೂರ್ವಕವಾಗಿ ಅವರನ್ನು ಗುರಿಯಾಗಿಸಿಕೊಂಡಿವೆ ಎಂದು ಅವರು ಆರೋಪಿಸಿದ್ದಾರೆ. ಅವರ ಪ್ರಕಾರ, ವಿಜಯ್ ಅವರ ಹಿಂದಿನ ವಿಚ್ಛೇದನದಂತಹ ವಿಷಯಗಳನ್ನು ನಿಜವಾದ ಟೀಕೆಗಿಂತ ಹೆಚ್ಚಾಗಿ ರಾಜಕೀಯ ಸೇಡಿನ ಸಾಧನಗಳಾಗಿ ಬಳಸಲಾಗುತ್ತಿದೆ.
ಇದನ್ನೂ ಓದಿ: Amruthadhaare Serial: ಗೌತಮ್ - ಭೂಮಿಕಾ ಪ್ರೀತಿ ಸವಾರಿ; ಅತ್ತ ಜಯದೇವ್ ಬಾಳಲ್ಲಿ ಕತ್ತಲು
ಮುಗಿದು ಹೋಗಿರುವ ಕಥೆ
"ಇಂಗ್ಲೀಷ್ನಲ್ಲಿ Character Assassination ಅಂತಾರೆ. ಕತ್ತಿ ಹಿಡಿದು ಯುದ್ಧ ಮಾಡಲ್ಲ, ವ್ಯಕ್ತಿತ್ವವನ್ನು ಕೊಲ್ಲುವ ಪ್ರಯತ್ನ ಮಾಡ್ತಾರೆ. ವಿಜಯ್ ವ್ಯಕ್ತಿತ್ವವನ್ನು ಕೆಳಗಿಳಿಸುವ ಪ್ರಯತ್ನ ಮಾಡ್ತಾರೆ. ಯಾವಾಗಲೋ ವಿಜಯ್- ಸಂಗೀತಾ ನಡುವೆ ಭಿನ್ನಾಭಿಪ್ರಾಯ ಮೂಡಿ, ಮಾತುಕತೆ ಎಲ್ಲಾ ನಡೆದು ಒಪ್ಪಂದಕ್ಕೆ ಸಹಿ ಹಾಕಿ, ಎಲ್ಲಾ ಮುಗಿದು ಹೋಗಿರುವುದನ್ನು ಬಹಳ ಚೆನ್ನಾಗಿ ಈಗ ಬಳಸಿಕೊಳ್ಳುತ್ತಿದ್ದಾರೆ ಎಂದು ಚಂದ್ರಶೇಖರ್ ಸ್ಪಷ್ಟಪಡಿಸಿದ್ದಾರೆ.
ಮುಗಿದು ಹೋಗಿರುವ ವಿಚಾರವನ್ನು ಈಗ ಬೇಕಂತಲೇ ಕೆದಕಿದ್ದಾರೆ. ಅದನ್ನು ಇಂತಹ ಸಮಯದಲ್ಲಿ ಬಳಸಿಕೊಂಡಿದ್ದಾರೆ. ಕುಟುಂಬದವರೇ ಇದಕ್ಕೆಲ್ಲಾ ಆಸ್ಪದ ಮಾಡಿಕೊಡುತ್ತಿದ್ದಾರಾ ಎನ್ನುವ ಬಗ್ಗೆ ನಾನು ಮಾತನಾಡುವುದಿಲ್ಲ" ಎಂದಿದ್ದಾರೆ. ವಿಜಯ್ ಮಾನಸಿಕವಾಗಿ ಸದೃಢರಾಗಿದ್ದಾರೆ ಎಂದು ಎಸ್ಎಸಿ ಹೇಳುತ್ತಾರೆ.
#SAC:
— AmuthaBharathi (@CinemaWithAB) April 20, 2026
"In politics character assassination is what happening like, Vijay is against ladies, Family, Parents etc. That personal incident happened long back, they both mutually signed and sorted. What's the reason behind bringing the incident at this time❓" pic.twitter.com/2YIxXuZLa8
ವಿಜಯ್ ದೃಢವಾಗಿದ್ದಾನೆ
ನಿರಂತರ ವಿವಾದಗಳ ಹೊರತಾಗಿಯೂ, ವಿಜಯ್ ದೃಢವಾಗಿದ್ದಾನೆ ಮತ್ತು ಪ್ರಭಾವಿತನಾಗಿಲ್ಲ ಎಂದು ಹೇಳಿದರು . ತಮ್ಮ ಮಗ ಮಾನಸಿಕವಾಗಿ ಬಲಿಷ್ಠನಾಗಿದ್ದು, ಬರುವ ಪ್ರತಿಯೊಂದು ಅಡೆತಡೆಗಳನ್ನು ಎದುರಿಸಲು ಸಿದ್ಧನಿದ್ದಾನೆ ಎಂದು ಅವರು ಒತ್ತಿ ಹೇಳಿದರು. "ಅವನು ಯಾವುದಕ್ಕೂ ಹೆದರುವುದಿಲ್ಲ". ರಾಜಕೀಯ ಕ್ಷೇತ್ರಕ್ಕೆ ಪ್ರವೇಶಿಸುವ ಮೊದಲೇ ವಿಜಯ್ ಅಂತಹ ಅಡೆತಡೆಗಳನ್ನು ನಿರೀಕ್ಷಿಸಿದ್ದರು ಎಂದು ಹೇಳಿದರು.
ಜನ ನಾಯಗನ್ಗೆ ಸಂಬಂಧಿಸಿದ ವರದಿಯಾದ ಸೋರಿಕೆಯ ಬಗ್ಗೆ ಮಾತನಾಡಿದ SAC, ಯೋಜನೆಗೆ ಸಹಿ ಹಾಕುವ ಸಮಯದಲ್ಲಿ ವಿಜಯ್ ನಿರ್ಮಾಪಕರಿಗೆ ಸವಾಲುಗಳ ಬಗ್ಗೆ ಎಚ್ಚರಿಕೆ ನೀಡಿದ್ದರು ಎಂದು ಬಹಿರಂಗಪಡಿಸಿದರು .
ಇದನ್ನೂ ಓದಿ: Kapil Sharma show: ಕಪಿಲ್ ಶರ್ಮಾ ಶೋ ಬಗ್ಗೆ ನಟ ಪರೇಶ್ ರಾವಲ್ ಹೇಳಿದ್ದೇನು?
ತಮಿಳುನಾಡು ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನೊಂದು ದಿನ ಬಾಕಿಯಿದೆ. ಮೇ 4ರಂದು ಫಲಿತಾಂಶ ಹೊರ ಬೀಳಲಿದೆ. ವಿಜಯ್ ತಮಿಳುನಾಡಿನ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದಾರೆ.