Mark OTT: ಒಟಿಟಿಗೆ ಬರುತ್ತಿದೆ ಕಿಚ್ಚನ ‘ಮಾರ್ಕ್’ ಸಿನಿಮಾ; ಸ್ಟ್ರೀಮಿಂಗ್ ಎಲ್ಲಿ?
Sudeep: ಕಿಚ್ಚ ಸುದೀಪ್ ಆಕ್ಷನ್ ಥ್ರಿಲ್ಲರ್ ಚಿತ್ರ ಮಾರ್ಕ್ ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಿದರು. 2025 ರ ಕ್ರಿಸ್ಮಸ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಜಯ್ ಕಾರ್ತಿಕೇಯ ನಿರ್ದೇಶನದ ಈ ಚಿತ್ರವು ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ ನಟ ಮತ್ತು ಚಲನಚಿತ್ರ ನಿರ್ಮಾಪಕರ ಎರಡನೇ ಸಹಯೋಗವನ್ನು ಗುರುತಿಸಿತು. ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ ಬರುತ್ತಿದೆ ‘ಮಾರ್ಕ್’ಸಿನಿಮಾ.
ಕಿಚ್ಚ ಸುದೀಪ್ -
ಕಿಚ್ಚ ಸುದೀಪ್ (kichcha sudeep) ಆಕ್ಷನ್ ಥ್ರಿಲ್ಲರ್ ಚಿತ್ರ ಮಾರ್ಕ್ (Mark Movie) ಮೂಲಕ ಮತ್ತೆ ದೊಡ್ಡ ಪರದೆಗೆ ಮರಳಿದರು. 2025 ರ ಕ್ರಿಸ್ಮಸ್ ಸಮಯದಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ವಿಜಯ್ ಕಾರ್ತಿಕೇಯ (vijay karthikeyan) ನಿರ್ದೇಶನದ ಈ ಚಿತ್ರವು ಮ್ಯಾಕ್ಸ್ ಚಿತ್ರದ ಯಶಸ್ಸಿನ ನಂತರ ನಟ ಮತ್ತು ಚಲನಚಿತ್ರ ನಿರ್ಮಾಪಕರ ಎರಡನೇ ಸಹಯೋಗವನ್ನು ಗುರುತಿಸಿತು. ಇನ್ನೂ ಪ್ರದರ್ಶನ ಕಾಣುತ್ತಿರುವಾಗಲೇ ಒಟಿಟಿಗೆ (OTT) ಬರುತ್ತಿದೆ ‘ಮಾರ್ಕ್’ಸಿನಿಮಾ.
ಎಲ್ಲಿ ಸ್ಟ್ರೀಮಿಂಗ್?
ಸುದೀಪ್ ನಟನೆಯ ‘ಮಾರ್ಕ್’ ಸಿನಿಮಾ ಜಿಯೋ ಹಾರ್ಟ್ಸ್ಟಾರ್ನಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಒಟಿಟಿ ಬಿಡುಗಡೆಯ ಜಾಹೀರಾತುಗಳು ಈಗಾಗಲೇ ಪ್ರಸಾರವಾಗುತ್ತಿದ್ದು, ಜಿಯೋ ಹಾಟ್ಸ್ಟಾರ್ನಲ್ಲಿ ಜನವರಿ 23 ರಂದು ‘ಮಾರ್ಕ್ಸಿನಿಮಾ ಸ್ಟ್ರೀಮಿಂಗ್ ಆರಂಭ ಮಾಡಲಿದೆ.
ಮಾರ್ಕ್ ಕನ್ನಡ, ತೆಲುಗು, ಹಿಂದಿ, ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಲಭ್ಯವಿರುತ್ತದೆ, ಮಾರ್ಕ್ ಬಾಕ್ಸ್ ಆಫೀಸ್ನಲ್ಲಿ ಸ್ವಲ್ಪ ಉತ್ತಮ ಪ್ರದರ್ಶನ ನೀಡಿದ್ದರೂ, ಯಾವುದೇ ಚಿತ್ರವು ಅಸಾಧಾರಣ ಸಂಖ್ಯೆಗಳನ್ನು ನೀಡಲಿಲ್ಲ.
‘ಮಾರ್ಕ್’ ಸಿನಿಮಾ ಬಿಡುಗಡೆಗೆ ಮುಂಚೆಯೇ ಸಿನಿಮಾಕ್ಕೆ ಪೈರಸಿ ಮಾಡುವ ಬೆದರಿಕೆ ಹಾಕಲಾಗಿತ್ತು, ಅಲ್ಲದೆ ಸಿನಿಮಾದ ಬಗ್ಗೆ ನೆಗಟಿವ್ ಪ್ರಚಾರ ಇನ್ನಿತರೆಗಳನ್ನು ಸಹ ಮಾಡಲಾಗಿತ್ತು, ಅದೆಲ್ಲವನ್ನೂ ಮೀರಿ ‘ಮಾರ್ಕ್’ ಸಿನಿಮಾ ಒಳ್ಳೆಯ ಪ್ರದರ್ಶನ ಕಾಣುವಲ್ಲಿ ಯಶಸ್ವಿ ಆಗಿದೆ.
‘ಮ್ಯಾಕ್ಸ್’ ಸಿನಿಮಾ ನಿರ್ದೇಶಿಸಿದ್ದ ವಿಜಯ್ ಕಾರ್ತಿಕೇಯ ಅವರೇ ‘ಮಾರ್ಕ್’ ಸಿನಿಮಾವನ್ನು ಸಹ ನಿರ್ದೇಶನ ಮಾಡಿದ್ದಾರೆ. ಸಿನಿಮಾನಲ್ಲಿ ಸುದೀಪ್ ಜೊತೆಗೆ ತಮಿಳಿನ ಯೋಗಿ ಬಾಬು, ಮಲಯಾಳಂನ ಶೈನ್ ಟಾಮ್ ಚಾಕೊ, ನವೀನ್ ಚಂದ್ರ, ನಾಯಕಿಯಾದ ನಿಶ್ವಿಕಾ ನಾಯ್ಡು, ರೋಷಿನಿ ಪ್ರಕಾಶ್ ಅವರುಗಳು ನಟಿಸಿದ್ದಾರೆ.
45 ಸಿನಿಮಾ ಕೂಡ ಒಟಿಟಿಗೆ
ಇನ್ನು ಅದೇ ದಿನ ಕನ್ನಡದ 45 ಸಿನಿಮಾ ಕೂಡ ಒಟಿಟಿಗೆ ಬರ್ತಿದೆ. ಸಂಕ್ರಾಂತಿ ಹಬ್ಬಕ್ಕೆ ಕನ್ನಡ ಜೀ5ನಿಂದ ವಿಶೇಷ ಉಡುಗೊರೆ' ಎಂದು ಬರೆದುಕೊಂಡು, ಜ.23 ರಿಂದ ಜೀ5ನಲ್ಲಿ 45 ಸಿನಿಮಾ ವೀಕ್ಷಣೆಗೆ ಸಿಗುತ್ತಿದೆ ಎಂದು ಮಾಹಿತಿ ನೀಡಿದೆ. ಇದರ ಜತೆಗೆ 45 ಸಿನಿಮಾದ ಟ್ರೇಲರ್ ಹಂಚಿಕೊಂಡಿದೆ.ಇದೊಂದು ಫ್ಯಾಂಟಸಿ ಸಿನಿಮಾ.
ಇದನ್ನೂ ಓದಿ: Bigg Boss Kannada 12: ಈ ಸೀಸನ್ ವಿನ್ನರ್ಗೆ ಬಂದಿದೆ ಬರೋಬ್ಬರಿ 37 ಕೋಟಿಗೂ ಅಧಿಕ ವೋಟುಗಳು! ಯಾರದು?
ಮನುಷ್ಯನ ಸಾವು, ಸಾವಿನ ನಂತರದ ಆತ್ಮದ ಪ್ರಯಾಣ, ಗರುಡಪುರಾಣ, ವಿಧಿ, ಪಾಪ-ಕರ್ಮ, ಕಾಯುವವನು, ಕೊಲ್ಲುವವನು ಜೊತೆಗೆ ಒಬ್ಬ ನಾರ್ಮಲ್ ಮನುಷ್ಯ.. ಇದೆಲ್ಲವನ್ನು ಇಟ್ಟುಕೊಂಡು, ಒಂದು ಹೊಸ ಲೋಕವನ್ನೇ ಸೃಷ್ಟಿಸಿದ್ದಾರೆ ಅರ್ಜುನ್ ಜನ್ಯ. ಅವರ ಈ ಕನಸಿಗೆ ಧಾರಾಳವಾಗಿ ಹಣ ಹಾಕಿದ್ದಾರೆ ರಮೇಶ್ ರೆಡ್ಡಿ.