ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ʻಶೋಕಿಗೋಸ್ಕರ ಸಿನಿಮಾ ಮಾಡಬಾರದುʼ; ʻಜಾಲಿʼ ಚಿತ್ರದ ಟ್ರೇಲರ್‌ ಲಾಂಚ್‌ನಲ್ಲಿ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಕಿವಿಮಾತು

ಯುವ ಪ್ರತಿಭೆಗಳ 'ಜಾಲಿ' ಚಿತ್ರದ ಟ್ರೇಲರ್ ಬಿಡುಗಡೆ ಮಾಡಿ ಮಾತನಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ, ಕೇವಲ ಶೋಕಿಗಾಗಿ ಸಿನಿಮಾ ಮಾಡದೆ ಜವಾಬ್ದಾರಿಯಿಂದ ಕಥೆ ಮತ್ತು ಬಜೆಟ್ ಸ್ಪಷ್ಟತೆಯೊಂದಿಗೆ ಸಿನಿಮಾ ನಿರ್ಮಿಸಿ ಎಂದು ಚಿತ್ರತಂಡಗಳಿಗೆ ಕಿವಿಮಾತು ಹೇಳಿದ್ದಾರೆ.

‘ಜಾಲಿ’ ಟ್ರೇಲರ್ ರಿಲೀಸ್‌ ಮಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ

-

Avinash GR
Avinash GR Jul 22, 2026 12:07 PM

ಯುವ ಪ್ರತಿಭೆಗಳ ಕಾಂಬಿನೇಷನ್‌ನಲ್ಲಿ ಮೂಡಿಬಂದಿರುವ ‘ಜಾಲಿ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದ್ದು, ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದೆ. ಟ್ರೇಲರ್ ಆನಾವರಣಗೊಳಿಸಿ ಮಾತನಾಡಿದ ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ, ಚಿತ್ರತಂಡಕ್ಕೆ ಶುಭ ಹಾರೈಸುವ ಜೊತೆಗೆ ಹೊಸಬರಿಗೆ ಪ್ರಮುಖ ಕಿವಿಮಾತು ಹೇಳಿದರು.

ಜವಾಬ್ದಾರಿಯಿಂದ ಸಿನಿಮಾ ನಿರ್ಮಿಸಬೇಕು

"ಸಿನಿಮಾ ರಂಗದಲ್ಲಿ ಕೋಟಿಗಟ್ಟಲೆ ಹಣ ಹೂಡುವ ನಿರ್ಮಾಪಕರೇ ನಿಜವಾದ ಹೀರೋಗಳು. ಅವರಿಗೆ ತಕ್ಕ ಗೌರವ ಸಿಗಬೇಕು. ಪ್ರತಿವರ್ಷ 300 ರಿಂದ 400 ಸಿನಿಮಾಗಳು ತೆರೆಗೆ ಬರುತ್ತಿದ್ದು, ಕೇವಲ ಶೋಕಿಗಾಗಿ ಸಿನಿಮಾ ಮಾಡಬಾರದು. ಕಥೆ ಮತ್ತು ಬಜೆಟ್ ಕುರಿತ ಸ್ಪಷ್ಟತೆಯೊಂದಿಗೆ ಜವಾಬ್ದಾರಿಯಿಂದ ಸಿನಿಮಾ ನಿರ್ಮಿಸಬೇಕು" ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಕಿವಿಮಾತು ಹೇಳಿದರು.

Maatonda Heluve: 'ಟ್ರೇಲರ್ ಡಿಕೋಡ್' ಸ್ಪರ್ಧೆ ಮೂಲಕ ಕೂತೂಹಲ ಹುಟ್ಟಿಸಿದ್ದ 'ಮಾತೊಂದ ಹೇಳುವೆ' ಚಿತ್ರದ ಟ್ರೇಲರ್ ಬಿಡುಗಡೆ

"ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಹಾಗೂ ಬಿಗ್‌ ಬಾಸ್‌ಗಳ ಮೂಲಕ ಬೆರಳ ತುದಿಯಲ್ಲೇ ಮನರಂಜನೆ ಸಿಗುತ್ತಿದೆ. ಇಂತಹ ಸಂದರ್ಭದಲ್ಲಿ ಜನರನ್ನು ಚಿತ್ರಮಂದಿರಕ್ಕೆ ಕರೆತರುವುದು ದೊಡ್ಡ ಸವಾಲು" ಎಂದು ನಿರ್ಮಾಪಕ ಉಮಾಪತಿ ಶ್ರೀನಿವಾಸ್‌ ಗೌಡ ಹೇಳಿದರು.

ವಿಚ್ಛೇದನ ಕುರಿತ ಸಂದೇಶ

ಚಿತ್ರದ ನಿರ್ದೇಶಕ ಹಾಗೂ ನಟ ತಾರುಷ್ ಮಾತನಾಡಿ, "ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ವಿಚ್ಛೇದನ ಮತ್ತು ಸಂಬಂಧಗಳ ಭಿನ್ನಾಭಿಪ್ರಾಯಗಳ ಸುತ್ತ ಕಥೆ ಹೆಣೆಯಲಾಗಿದ್ದು, ಕೊನೆಯಲ್ಲಿ ಉತ್ತಮ ಸಂದೇಶವಿದೆ. ಕಾಮಿಡಿ, ಆಕ್ಷನ್ ಹಾಗೂ ಅಪ್ಪ-ಮಗಳ ಎಮೋಷನ್ ಚಿತ್ರದ ಪ್ರಮುಖ ಆಕರ್ಷಣೆ" ಎಂದರು. ರಂಗಭೂಮಿ ಹಿನ್ನೆಲೆಯ ತಾರುಷ್, ಈ ಚಿತ್ರಕ್ಕೆ ಎಡಿಟಿಂಗ್ ಹಾಗೂ ಸಾಹಿತ್ಯದ ಜವಾಬ್ದಾರಿಯನ್ನೂ ಹೊತ್ತಿದ್ದಾರೆ.

ಪ್ರೇಕ್ಷಕರು ಕನ್ನಡ ಸಿನಿಮಾ ನೋಡಬೇಕು

ನಿತಿನ್ ರಾಜ್ ಸಂಗೀತ ಸಂಯೋಜನೆಯ 6 ಹಾಡುಗಳಿದ್ದು, ಯೋಗರಾಜ್ ಭಟ್ ಹಾಗೂ ಕಿನ್ನಲ್ ರಾಜ್ ಸಾಹಿತ್ಯ ಬರೆದಿದ್ದಾರೆ. ಹಿರಿಯ ಕಲಾವಿದರಾದ ರೇಖಾ ದಾಸ್ ಮತ್ತು ಶೋಭರಾಜ್ ಮುಖ್ಯ ಪಾತ್ರಗಳಲ್ಲಿದ್ದಾರೆ. ಹೊಸ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪ್ರೇಕ್ಷಕರು ತಿಂಗಳಿಗೆ ಕನಿಷ್ಠ 1-2 ಸಿನಿಮಾಗಳನ್ನಾದರೂ ಥಿಯೇಟರ್‌ನಲ್ಲಿ ನೋಡಬೇಕೆಂದು ಚಿತ್ರತಂಡ ಮನವಿ ಮಾಡಿದೆ. ಈ ಚಿತ್ರವು ಜುಲೈ 31 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.