ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Avinash GR

Senior Digital Content Editor

[email protected]

ಅವಿನಾಶ್‌ ಜಿ ಆರ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯವನ್ನು ಪಡೆದುಕೊಂಡಿದ್ದಾರೆ. ಕಳೆದ ೧೪ ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ 2 ವರ್ಷ ಸಿನಿಮಾ ವರದಿಗಾರನಾಗಿ, 4 ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದಾರೆ. ʻವಿಜಯ ಕರ್ನಾಟಕʼ ವೆಬ್‌ನಲ್ಲಿ 6 ವರ್ಷ ಎಂಟರ್‌ಟೇನ್‌ಮೆಂಟ್ ವಿಭಾಗದಲ್ಲಿ ‌ʻಸೀನಿಯರ್ ಡಿಜಿಟಲ್‌ ಕಂಟೆಂಟ್ ಪ್ರೊಡ್ಯೂಸರ್ʼ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನಗಳು, ಸಿನಿಮಾ ವಿಮರ್ಶೆಗಳು, ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣೆ, ಅಂಕಣಗಳನ್ನು ಬರೆದಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ರಾಜಕೀಯ, ಪ್ರವಾಸ, ಓದು ಇವರ ಆಸಕ್ತಿಗಳಾಗಿವೆ. ಪ್ರಸ್ತುತ ʻವಿಶ್ವವಾಣಿʼ ಡಿಜಿಟಲ್‌ನಲ್ಲಿ ʻಸೀನಿಯರ್‌ ಡಿಜಿಟಲ್‌ ಕಂಟೆಂಟ್‌ ಎಡಿಟರ್‌ʼ ಆಗಿ ಕೆಲಸ ಮಾಡುತ್ತಿದ್ದಾರೆ.

Articles
ಡೇಟಿಂಗ್‌ ಗಾಸಿಪ್‌ ನಡುವೆಯೇ ಮೃಣಾಲ್‌ ಠಾಕೂರ್‌ಗೆ ದೊಡ್ಡ ಆಫರ್‌ ಕೊಟ್ಟ ನಟ ಧನುಷ್!‌ ಏನಿದು ಹೊಸ ನ್ಯೂಸ್?

ಧನುಷ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರಕ್ಕೆ ಮೃಣಾಲ್ ನಾಯಕಿ?

ಡೇಟಿಂಗ್ ವದಂತಿಗಳ ನಡುವೆಯೇ ನಟ ಧನುಷ್ ತಮ್ಮ ಮುಂದಿನ ಐತಿಹಾಸಿಕ ಮಹಿಳಾ ಪ್ರಧಾನ ಚಿತ್ರಕ್ಕೆ ಮೃಣಾಲ್ ಠಾಕೂರ್ ಅವರನ್ನು ಆಯ್ಕೆ ಮಾಡಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಅವರ ವಂಡರ್‌ಬಾರ್ ಫಿಲ್ಮ್ಸ್ ಅಡಿಯಲ್ಲಿಯೇ ಈ ಸಿನಿಮಾ ನಿರ್ಮಾಣವಾಗುವ ಸಾಧ್ಯತೆಯಿದೆ.

NTR - ಪ್ರಶಾಂತ್ ನೀಲ್ ಸಿನಿಮಾದ ರಿಲೀಸ್‌ ಡೇಟ್‌ ಕೊನೆಗೂ ಫಿಕ್ಸ್; ತಾರಕ್‌ ದರ್ಶನಕ್ಕೆ 14 ತಿಂಗಳು ಕಾಯಲೇಬೇಕು ಫ್ಯಾನ್ಸ್!‌

ಪವರ್‌ಫುಲ್ ಪೋಸ್ಟರ್ ಮೂಲಕ ರಿಲೀಸ್ ಡೇಟ್ ತಿಳಿಸಿದ ‌NTR - ಪ್ರಶಾಂತ್ ನೀಲ್

ಎನ್‌ಟಿಆರ್‌ ಅಭಿನಯದ ಹೊಸ ಸಿನಿಮಾದ ಬಿಡುಗಡೆ ದಿನಾಂಕ ಕೊನೆಗೂ ಘೋಷಣೆಯಾಗಿದ್ದು, 2027ರ ಜೂನ್ 11ರಂದು ತೆರೆಕಾಣಲಿದೆ. ಪ್ರಶಾಂತ್ ನೀಲ್ ನಿರ್ದೇಶನದ ಈ ಮಾಸ್ ಆಕ್ಷನ್ ಚಿತ್ರದಲ್ಲಿ ಎನ್‌ಟಿಆರ್ ಪವರ್‌ಫುಲ್ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದು, ಮೇ 20ರಂದು ಅವರ ಹುಟ್ಟುಹಬ್ಬದ ಅಂಗವಾಗಿ ವಿಶೇಷ ಗ್ಲಿಂಪ್ಸ್ ಕೂಡ ಬಿಡುಗಡೆಯಾಗಲಿದೆ.

ʻಶೇರ್‌ʼ ಆಗಿ ಗರ್ಜಿಸಲಿದ್ದಾರೆ ನಟ ಕಿರಣ್‌ ರಾಜ್;‌ ಪೊಲೀಸ್‌ ಆಫೀಸರ್‌ ರೋಲ್‌ನಲ್ಲಿ ಮಿಂಚಲಿದ್ದಾರೆ ತನಿಷಾ ಕುಪ್ಪಂಡ

ಕಿರಣ್ ರಾಜ್ ನಟನೆಯ 'ಶೇರ್' ಸಿನಿಮಾದ ರಿಲೀಸ್‌ ಡೇಟ್‌ ಘೋಷಣೆ

'ಕನ್ನಡತಿ' ಧಾರಾವಾಹಿ ಖ್ಯಾತಿಯ ಕಿರಣ್‌ ರಾಜ್‌ ನಟನೆಯ ʻಶೇರ್‌ʼ ಚಿತ್ರವು ಮೇ 15ರಂದು ರಾಜ್ಯಾದ್ಯಂತ ತೆರೆಗೆ ಬರಲು ಸಜ್ಜಾಗಿದೆ. ಈ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಅನಾಥ ಹುಡುಗನಾಗಿ ಕಿರಣ್ ರಾಜ್ ಕಾಣಿಸಿಕೊಂಡಿದ್ದು, ಬಿಗ್ ಬಾಸ್ ಖ್ಯಾತಿಯ ತನಿಷಾ ಕುಪ್ಪಂಡ ಖಡಕ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಬಣ್ಣ ಹಚ್ಚಿದ್ದಾರೆ.

160 ಕೋಟಿಗೆ ಸೇಲ್‌ ಆಯ್ತು 'ಜೈಲರ್ 2' OTT ರೈಟ್ಸ್;‌ ಬಿಡುಗಡೆಗೂ ಮುನ್ನವೇ ದಾಖಲೆ ಬರೆದ ರಜನಿಕಾಂತ್ ಸಿನಿಮಾ!‌ ಖರೀದಿ ಮಾಡಿದ್ಯಾರು?

ರಿಲೀಸ್‌ಗೂ ಮುನ್ನವೇ ʻಜೈಲರ್ 2ʼ ದಾಖಲೆ; ಭಾರಿ ಮೊತ್ತಕ್ಕೆ OTT ರೈಟ್ಸ್ ಸೇಲ್

ಜೈಲರ್‌ 2 ಸಿನಿಮಾದ ಒಟಿಟಿ ಹಕ್ಕುಗಳು ಬಿಡುಗಡೆಗೂ ಮುನ್ನವೇ ಬರೋಬ್ಬರಿ ಅಮೇಜಾನ್ ಪ್ರೈಮ್ ವಿಡಿಯೋ ಪಾಲಾಗಿವೆ. ಇದು ತಮಿಳು ಚಿತ್ರರಂಗದ ಇತಿಹಾಸದಲ್ಲೇ ಅತ್ಯಂತ ದುಬಾರಿ ಮೊತ್ತದ ಡೀಲ್ ಆಗಿದ್ದು, ರಜನಿಕಾಂತ್ ಅವರ ಸ್ಟಾರ್ ಪವರ್ ಏನೆಂಬುದನ್ನು ಸಾಬೀತುಪಡಿಸಿದೆ. ನೆಲ್ಸನ್ ನಿರ್ದೇಶನದ ಈ ಚಿತ್ರವು 2026ರ ಆಗಸ್ಟ್‌ನಲ್ಲಿ ತೆರೆಕಾಣುವ ನಿರೀಕ್ಷೆಯಿದೆ.

ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ ಪ್ರಕಾಶ್‌ ರಾಜ್‌ ವಿರುದ್ಧ ಚಿರು ಸಹೋದರ ನಾಗ ಬಾಬು ವಾಗ್ದಾಳಿ!

ರಾಮಾಯಣ ವಿವಾದ: ಪ್ರಕಾಶ್ ರಾಜ್ ವಿರುದ್ಧ ಚಿರಂಜೀವಿ ಸಹೋದರ ತೀವ್ರ ವಾಗ್ದಾಳಿ

ರಾಮಾಯಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ನಟ ಪ್ರಕಾಶ್ ರಾಜ್ ವಿರುದ್ಧ ಮೆಗಾಸ್ಟಾರ್ ಚಿರಂಜೀವಿ ಸಹೋದರ ನಾಗ ಬಾಬು ತೀವ್ರವಾಗಿ ಕಿಡಿಕಾರಿದ್ದಾರೆ. ರಾಮನನ್ನು ಕೀಳಾಗಿ ಕಾಣುವುದು ವೈಚಾರಿಕತೆಯಲ್ಲ, ಅದು ಕೇವಲ ಅಹಂಕಾರ ಎಂದು ಅವರು ಟೀಕಿಸಿದ್ದಾರೆ.

ಐತಿಹಾಸಿಕ ಸಿನಿಮಾದ ಮೂಲಕ ಮರಳಿದ ʻನೆನಪಿರಲಿʼ ಪ್ರೇಮ್; ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್

ಮಾಸ್ ಅವತಾರದಲ್ಲಿ ʼನೆನಪಿರಲಿʼ ಪ್ರೇಮ್; ಐತಿಹಾಸಿಕ ಚಿತ್ರದಲ್ಲಿ ರಗಡ್ ಲುಕ್

ಲವೀ ಸ್ಟಾರ್‌ ಪ್ರೇಮ್‌ ಅವರು ತಮ್ಮ ಹುಟ್ಟುಹಬ್ಬದ ಅಂಗವಾಗಿ ಒಂದು ಗಿಫ್ಟ್‌ ನೀಡಿದ್ದಾರೆ. ತಮ್ಮ ಮುಂದಿನ ಐತಿಹಾಸಿಕ ಸಿನಿಮಾವನ್ನು ಘೋಷಣೆ ಮಾಡಿದ್ದಾರೆ. ರಮೇಶ್ ಬೇಗಾರ್ ನಿರ್ದೇಶನದ ಈ ಚಿತ್ರವು ಜಾಣಗೆರೆ ವೆಂಕಟರಾಮಯ್ಯ ಅವರ ಕಾದಂಬರಿ ಆಧರಿಸಿದ್ದು, ಇದರ ಫಸ್ಟ್‌ ಲುಕ್‌ನಲ್ಲಿ ಪ್ರೇಮ್ ಕೈಯಲ್ಲಿ ಕತ್ತಿ ಹಿಡಿದು ರಗಡ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ʻಮೈಸಾ' ಚಿತ್ರಕ್ಕಾಗಿ ಬ್ಯಾಂಕಾಕ್‌ನಲ್ಲಿ ರಶ್ಮಿಕಾ ಮಂದಣ್ಣ ಕಠಿಣ ತಯಾರಿ; ಪ್ರತಿದಿನ 8 ಗಂಟೆ ಶ್ರಮಿಸುತ್ತಿರುವ ʻನ್ಯಾಷನಲ್‌ ಕ್ರಶ್‌ʼ!

'ಮೈಸಾ' ಚಿತ್ರಕ್ಕಾಗಿ ಬ್ಯಾಂಕಾಕ್‌ನಲ್ಲಿ ರಶ್ಮಿಕಾ ಮಂದಣ್ಣ ಫೈಟಿಂಗ್‌ ತರಬೇತಿ

ಮೈಸಾ ಚಿತ್ರಕ್ಕಾಗಿ ರಶ್ಮಿಕಾ ಮಂದಣ್ಣ ಬ್ಯಾಂಕಾಕ್‌ನಲ್ಲಿ ಕಠಿಣ ತಯಾರಿ ನಡೆಸುತ್ತಿದ್ದಾರೆ. ಆಕ್ಷನ್ ಥ್ರಿಲ್ಲರ್ 'ಮೈಸಾ' ಚಿತ್ರದಲ್ಲಿ 'ಗೋಂಡ್' ಸಮುದಾಯದ ಮಹಿಳೆಯಾಗಿ ನಟಿಸುತ್ತಿರುವ ರಶ್ಮಿಕಾ, ಪಾತ್ರದ ನೈಜತೆಗಾಗಿ ಪ್ರತಿದಿನ 8 ಗಂಟೆಗಳ ಕಾಲ ಮಾರ್ಷಲ್ ಆರ್ಟ್ಸ್ ಮತ್ತು ಹ್ಯಾಂಡ್-ಟು-ಹ್ಯಾಂಡ್ ಕಂಬಾಟ್ ತರಬೇತಿ ಪಡೆಯುತ್ತಿದ್ದಾರೆ.

41ನೇ ವಯಸ್ಸಿಗೆ ಪ್ರಾಣಬಿಟ್ಟ ಕಿರುತೆರೆ ನಟ ಸಿದ್ದಾರ್ಥ್‌ ವೇಣುಗೋಪಾಲ್;‌ ಈ ಸಾವಿಗೆ ಕಾರಣವೇನು?

41ನೇ ವಯಸ್ಸಿಗೆ ಇಹಲೋಕ ತ್ಯಜಿಸಿದ ಕಿರುತೆರೆ ನಟ ಸಿದ್ಧಾರ್ಥ್ ವೇಣುಗೋಪಾಲ್

ಮಲಯಾಳಂ ಕಿರುತೆರೆಯ ಖ್ಯಾತ ನಟ ಮತ್ತು ನಿರೂಪಕ ಸಿದ್ಧಾರ್ಥ್ ವೇಣುಗೋಪಾಲ್ (41) ಅವರು ಕ್ಯಾನ್ಸರ್‌ನಿಂದಾಗಿ ಏಪ್ರಿಲ್ 18ರಂದು ನಿಧನರಾಗಿದ್ದಾರೆ. 'ಕಸ್ತೂರಿಮಾನ್', 'ಭಾಗ್ಯಜಾತಕಂ' ಅಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಮನೆಮಾತಾಗಿದ್ದ ಇವರುನ್ನು ಕಳೆದ ಎರಡು ವರ್ಷಗಳಿಂದ ಕ್ಯಾನ್ಸರ್‌ ಮಹಾಮಾರಿ ಕಾಡುತಿತ್ತು.

ಮೋಹನ್‌ಲಾಲ್‌ ಮಗ ಪ್ರಣವ್ ಜೊತೆ ಕಲ್ಯಾಣಿ ಕಲ್ಯಾಣ; ʻಇದೆಲ್ಲಾ ಶುದ್ಧ ಸುಳ್ಳುʼ ಎಂದ ನಟಿಯ ತಾಯಿ ಲಿಸ್ಸಿ

ಮೋಹನ್‌ಲಾಲ್ ಪುತ್ರನ ಜೊತೆ ಕಲ್ಯಾಣಿ ಮದುವೆ? ವದಂತಿಗಳಿಗೆ ಇಲ್ಲಿದೆ ಉತ್ತರ

ಪ್ರಣವ್ ಮೋಹನ್‌ಲಾಲ್ ಮತ್ತು ಕಲ್ಯಾಣಿ ಪ್ರಿಯದರ್ಶನ್‌ ಅವರ ಮದುವೆ ಸುದ್ದಿಯು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ಈ ಬಗ್ಗೆ ಕಲ್ಯಾಣಿ ಅವರ ತಾಯಿ ಲಿಸ್ಸಿ ಸ್ಪಷ್ಟನೆ ನೀಡಿದ್ದಾರೆ. ಪ್ರಣವ್ ಮೋಹನ್‌ಲಾಲ್ ಮತ್ತು ಕಲ್ಯಾಣಿ ದಾಂಪತ್ಯ ಬದುಕಿಗೆ ಕಾಲಿಡುತ್ತಿದ್ದಾರೆ ಎಂಬುದು ಕೇವಲ ವದಂತಿ ಎಂದು ಅವರು ತಿಳಿಸಿದ್ದಾರೆ.

ಬಿಗ್‌ ಬಾಸ್‌ನಿಂದ ಎರಡ್ಮೂರು ಸಲ ಆಫರ್‌ ಬಂದರೂ ‌ʻರಾಮಾಚಾರಿʼ ನಟ ರಿತ್ವಿಕ್ ಹೋಗದಿರಲು ಕಾರಣವೇನು?

2 ಬಾರಿ ಆಫರ್ ಬಂದರೂ ಬಿಗ್‌ ಬಾಸ್‌ಗೆ ನೋ ಅಂದಿದ್ದಕ್ಕೆ ರಾಮಾಚಾರಿ?

'ರಾಮಾಚಾರಿ' ಖ್ಯಾತಿಯ ನಟ ರಿತ್ವಿಕ್ ಕೃಪಾಕರ್ ಅವರು ಬಿಗ್ ಬಾಸ್ ಕನ್ನಡದಿಂದ ಬಂದ ಆಫರ್‌ಗಳನ್ನು ತಿರಸ್ಕರಿಸಿದ್ದ ಬಗ್ಗೆ ವಿಶ್ವವಾಣಿ ಟಿವಿಗೆ ನೀಡಿದ ಸಂದರ್ಶನದಲ್ಲಿ ಸ್ಪಷ್ಟನೆ ನೀಡಿದ್ದಾರೆ. ಎರಡ್ಮೂರು ಸೀಸನ್‌ನಿಂದಲೂ ತಮಗೆ ಆಹ್ವಾನವಿತ್ತು, ಆದರೆ 'ರಾಮಾಚಾರಿ' ಧಾರಾವಾಹಿಗಾಗಿ ತಾವು ಹೋಗಲಿಲ್ಲ ಎಂದು ತಿಳಿಸಿದ್ದಾರೆ.

Yash: ʻಅಡಲ್ಟ್‌ ಕಂಟೆಂಟ್‌ ಅಂದ್ರೆ ಬರೀ ಅದೇ ಅಲ್ಲ..ʼ; ʻಟಾಕ್ಸಿಕ್‌ʼ ಕಥೆ ಬಗ್ಗೆ ಇಂಟರೆಸ್ಟಿಂಗ್‌ ವಿಚಾರ ಬಿಚ್ಚಿಟ್ಟ ಅನುರಾಗ್‌ ಕಶ್ಯಪ್‌

ʻಅಡಲ್ಟ್ ಅಂದ್ರೆ ಬರೀ ಲೈಂಗಿಕತೆಯಲ್ಲʼ; 'ಟಾಕ್ಸಿಕ್' ರಹಸ್ಯ ಹೇಳಿದ ಅನುರಾಗ್

ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ಅವರು ನಟ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ ಕುರಿತು ಕುತೂಹಲಕಾರಿ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. "ಎ ಫೇರಿಟೇಲ್ ಫಾರ್ ಗ್ರೋನಪ್ಸ್" ಎಂದರೆ ಅದು ಕೇವಲ ಲೈಂಗಿಕತೆಯಲ್ಲ, ಬದಲಿಗೆ ಪರಿಪೂರ್ಣ ವಯಸ್ಕರಿಗೆ ಸರಿಹೊಂದುವ ಗಂಭೀರ ಮತ್ತು ಬೋಲ್ಡ್ ಕಂಟೆಂಟ್ ಎಂದು ಅವರು ತಿಳಿಸಿದ್ದಾರೆ.

ʻಜನ ನಾಯಗನ್‌ʼ ಆಯ್ತು, ಈಗ ʻಜೈಲರ್ 2ʼ ಸರದಿ; ಸೋಶಿಯಲ್ ಮೀಡಿಯಾದಲ್ಲಿ ರಜನಿಕಾಂತ್‌ ಸಿನಿಮಾದ ಶೂಟಿಂಗ್‌ ಸೆಟ್‌ ವಿಡಿಯೋ ಲೀಕ್

ಜನ ನಾಯಗನ್ ಬೆನ್ನಲ್ಲೇ ಜೈಲರ್ 2ಗೆ ಪೈರಸಿ ಶಾಕ್; ಮೇಕಿಂಗ್ ವಿಡಿಯೋ ಲೀಕ್

ನಟ ವಿಜಯ್ ಅವರ 'ಜನ ನಾಯಗನ್' ಸಿನಿಮಾ ಲೀಕ್‌ ಆದ ಬೆನ್ನಲ್ಲೇ ಈಗ ರಜನಿಕಾಂತ್ ಅಭಿನಯದ 'ಜೈಲರ್ 2' ಚಿತ್ರದ ಶೂಟಿಂಗ್ ಸೆಟ್ ವಿಡಿಯೋ ಆನ್‌ಲೈನ್‌ನಲ್ಲಿ ಸೋರಿಕೆಯಾಗಿದೆ. ಚಿತ್ರದ ಬಿಟಿಎಸ್ ದೃಶ್ಯಗಳು ವೈರಲ್ ಆಗುತ್ತಿದ್ದಂತೆ ಎಚ್ಚೆತ್ತುಕೊಂಡಿರುವ ಸನ್ ಪಿಕ್ಚರ್ಸ್ ಸಂಸ್ಥೆ, ವಿಡಿಯೋ ಹಂಚಿಕೊಳ್ಳುವ ಸೋಶಿಯಲ್ ಮೀಡಿಯಾ ಅಕೌಂಟ್‌ಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದೆ.

'ಟಾಪ್ ನಾಚ್ ಸುಂದರಿ' ಫಸ್ಟ್ ಲುಕ್ ರಿಲೀಸ್ ಮಾಡಿದ ಡಾ. ಜಯಮಾಲಾ; ಆಲ್ಬಂ ಸಾಂಗ್‌ ಮೂಲಕ ಎಂಟ್ರಿ ಕೊಟ್ಟ ನಿರೂಪಕ ಯಶವಂತ್

'ಟಾಪ್ ನಾಚ್ ಸುಂದರಿ' ಮೂಲಕ ಹೊಸ ಜರ್ನಿ ಆರಂಭಿಸಿದ ನಿರೂಪಕ ಯಶವಂತ್

'ಟಾಪ್ ನಾಚ್ ಸುಂದರಿ' ಹೆಸರಿನ ಹೊಸ ಕನ್ನಡ ಮ್ಯೂಸಿಕ್ ವಿಡಿಯೋ ಮೂಲಕ ನಿರೂಪಕ ಯಶವಂತ್ ಈಗ ನಟನಾಗಿ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷೆ ಡಾ. ಜಯಮಾಲಾ ಅವರು ಇತ್ತೀಚೆಗೆ ಈ ಹಾಡಿನ ಪೋಸ್ಟರ್ ಬಿಡುಗಡೆ ಮಾಡಿ ತಂಡಕ್ಕೆ ಶುಭ ಹಾರೈಸಿದ್ದಾರೆ.

ʻಹುಚ್ಚʼ ಸಿನಿಮಾ ಹೀರೋ ಥರ ಹೊಸ ಧಾರಾವಾಹಿಯಲ್ಲಿ ಮಿಂಚಲು ರೆಡಿಯಾದ ʻರಾಮಾಚಾರಿʼ ನಟ ರಿತ್ವಿಕ್ ಕೃಪಾಕರ್

'ಹುಚ್ಚ' ಸುದೀಪ್‌ ಥರ ಮಾಸ್ ಅವತಾರದಲ್ಲಿ ಮಿಂಚಲಿದ್ದಾರೆ ʻರಾಮಾಚಾರಿʼ ನಟ

'ರಾಮಾಚಾರಿ' ಧಾರಾವಾಹಿಯ ಮೂಲಕ ಮನೆಮಾತಾಗಿದ್ದ ನಟ ರಿತ್ವಿಕ್ ಕೃಪಾಕರ್, ಈಗ ಏಕಕಾಲದಲ್ಲಿ ಕಿರುತೆರೆ ಮತ್ತು ಹಿರಿತೆರೆಗೆ ಎಂಟ್ರಿ ಕೊಡಲು ಸಜ್ಜಾಗಿದ್ದಾರೆ. ಜೂನ್ ಕೊನೆಯ ವಾರದಲ್ಲಿ ಜನಪ್ರಿಯ ವಾಹಿನಿಯೊಂದರಲ್ಲಿ ರಿತ್ವಿಕ್‌ ಅವರ ಹೊಸ ಧಾರಾವಾಹಿ ಆರಂಭವಾಗಲಿದ್ದು, ಇಲ್ಲಿ ಅವರು 'ಹುಚ್ಚ' ಚಿತ್ರದ ಸುದೀಪ್ ಮಾದರಿಯ ರಗಡ್ ಲೋಕಲ್ ಹುಡುಗನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಸುಕೇಶ್ ಚಂದ್ರಶೇಖರ್ ಅಕ್ರಮ ಹಣ ವರ್ಗಾವಣೆ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್; 'ಮಾಫಿ ಸಾಕ್ಷಿ'ಯಾಗಲು ನಟಿ ಜಾಕ್ವೆಲಿನ್ ಫರ್ನಾಂಡಿಸ್ ನಿರ್ಧಾರ

ಸುಕೇಶ್ ಕೇಸ್‌ನಲ್ಲಿ ಟ್ವಿಸ್ಟ್: ಮಾಫಿ ಸಾಕ್ಷಿಯಾಗಲು ಜಾಕ್ವೆಲಿನ್ ನಿರ್ಧಾರ

ವಂಚಕ ಸುಕೇಶ್ ಚಂದ್ರಶೇಖರ್ ವಿರುದ್ಧದ 200 ಕೋಟಿ ರೂ. ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ನಟಿ ಜಾಕ್ವೆಲಿನ್ ಫರ್ನಾಂಡಿಸ್ 'ಮಾಫಿ ಸಾಕ್ಷಿ' (Approver) ಆಗಲು ನಿರ್ಧರಿಸಿದ್ದಾರೆ. ತಮ್ಮ ಮೇಲಿನ ಕ್ರಿಮಿನಲ್ ಆರೋಪಗಳಿಂದ ಮುಕ್ತಿ ಪಡೆಯಲು ಜಾಕ್ವೆಲಿನ್ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ʻಟಾಕ್ಸಿಕ್‌ʼ ಸಿನಿಮಾದಲ್ಲಿ ತಂದೆ - ಮಗನ ಸೇಡಿನ ಸ್ಟೋರಿ;  ಸಿಂಪಲ್‌ ಆಗಿ ಕಥೆ ಎಳೆಯನ್ನ ಬಾಯಿಬಿಟ್ಟ ʻರಾಯʼ ಯಶ್‌!

ʻಟಾಕ್ಸಿಕ್ʼ ಕಥೆ ರಿವೀಲ್ ಮಾಡಿದ ಯಶ್! ಇದು ರಾಯ- ಟಿಕೆಟ್‌ ರಿವೆಂಜ್‌ ಸ್ಟೋರಿ

ಸಿನಿಮಾಕಾನ್ 2026ರಲ್ಲಿ ಭಾಗಿಯಾಗಿರುವ ನಟ ಯಶ್ ಅವರು, ಅಲ್ಲಿ ನೀಡಿದ ಸಂದರ್ಶನದಲ್ಲಿ 'ಟಾಕ್ಸಿಕ್' ಚಿತ್ರದ ಕಥೆಯ ಎಳೆಯನ್ನು ಬಹಿರಂಗಪಡಿಸಿದ್ದಾರೆ. ಇದೊಂದು ತಂದೆ ಮತ್ತು ಮಗನ ನಡುವಿನ ಸೇಡಿನ ಕಥೆಯಾಗಿದ್ದು, ಗೋವಾದ ಹಿನ್ನೆಲೆಯಲ್ಲಿ ನಡೆಯುವ ಕಾಲ್ಪನಿಕ ಗ್ಯಾಂಗ್‌ಸ್ಟರ್ ಕಥೆಯಾಗಿದೆ ಎಂದು ಯಶ್ ತಿಳಿಸಿದ್ದಾರೆ.

ಸಿನಿಮಾಕಾನ್ ವೇದಿಕೆಯಲ್ಲಿ 'ಟಾಕ್ಸಿಕ್' ಚಿತ್ರದ 9 ನಿಮಿಷಗಳ ಪ್ರಿವ್ಯೂ ಪ್ರದರ್ಶನ; ಹಾಲಿವುಡ್ ಮಟ್ಟದಲ್ಲಿ ಯಶ್ ಸಿನಿಮಾ ಹವಾ!

'ಟಾಕ್ಸಿಕ್' ಚಿತ್ರದ 9 ನಿಮಿಷಗಳ ಪ್ರಿವ್ಯೂ ಪ್ರದರ್ಶನ; ನೋಡಿದವರು ಏನಂದ್ರು?

ಲಾಸ್ ವೇಗಾಸ್‌ನಲ್ಲಿ ನಡೆದ 'ಸಿನಿಮಾಕಾನ್ 2026' ವೇದಿಕೆಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅಭಿನಯದ 'ಟಾಕ್ಸಿಕ್' ಚಿತ್ರದ 9 ನಿಮಿಷಗಳ ವಿಶೇಷ ಪ್ರಿವ್ಯೂ ಪ್ರದರ್ಶಿಸಲಾಗಿದೆ. ಗೀತು ಮೋಹನ್ ದಾಸ್ ನಿರ್ದೇಶನದ ಈ ಚಿತ್ರವು 1940 ರಿಂದ 1970 ರ ಕಾಲಘಟ್ಟದ ಕಥೆಯನ್ನು ಹೊಂದಿದ್ದು, ಜೂನ್ 4 ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿರುವ ಈ ಚಿತ್ರದ ಆಕ್ಷನ್ ಮತ್ತು ಮಾಸ್ ಅಪೀಲ್ ಅಂತರಾಷ್ಟ್ರೀಯ ಮಟ್ಟದ ವೀಕ್ಷಕರನ್ನು ಬೆರಗುಗೊಳಿಸಿದೆ.

ʻಕಾಲಿಗೆ ಟ್ರೀಟ್‌ಮೆಂಟ್‌ ತೆಗೆದುಕೊಳ್ಳೋಕೆ ಟೈಮಿಲ್ಲ, ಡೇಟಿಂಗ್‌ ಯಾವಾಗ ಮಾಡಲಿ?ʼ; ವದಂತಿ ಹಬ್ಬಿಸಿದವರಿಗೆ ಮೃಣಾಲ್‌ ಠಾಕೂರ್‌ ತಿರುಗೇಟು!

ʻಕಾಲಿನ ಚಿಕಿತ್ಸೆಗೇ ಟೈಮಿಲ್ಲ, ಡೇಟಿಂಗ್ ಯಾವಾಗ ಮಾಡ್ಲಿʼ- ಮೃಣಾಲ್ ಠಾಕೂರ್

ನಟಿ ಮೃಣಾಲ್ ಠಾಕೂರ್ ಅವರು ತಮಿಳು ನಟ ಧನುಷ್ ಅವರೊಂದಿಗೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿಗೆ ತೆರೆ ಎಳೆದಿದ್ದಾರೆ. ತಮಗೆ ಕಾಲಿನ ಲಿಗಮೆಂಟ್ ಹರಿದಿದ್ದು, ಚಿಕಿತ್ಸೆ ಪಡೆಯಲೂ ಸಮಯವಿಲ್ಲದಿರುವಾಗ ಡೇಟಿಂಗ್ ಮಾಡಲು ಎಲ್ಲಿಂದ ಟೈಮ್ ಸಿಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ನಟ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಕೇಸ್‌ ದಾಖಲು!

ರಾಮಾಯಣದ ಬಗ್ಗೆ ವಿವಾದಾತ್ಮಕ ಹೇಳಿಕೆ; ನಟ ಪ್ರಕಾಶ್ ರಾಜ್‌ ಮೇಲೆ ಕೇಸ್ ದಾಖಲು

Prakash Raj Controversy: ರಾಮಾಯಣದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಆರೋಪದ ಮೇಲೆ ನಟ ಪ್ರಕಾಶ್ ರಾಜ್ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದೆ ಎಂಬ ಮಾಹಿತಿ ಕೇಳಿಬಂದಿದೆ. ಕಾರ್ಯಕ್ರಮವೊಂದರಲ್ಲಿ ರಾಮನನ್ನು 'ಉತ್ತರ ಭಾರತೀಯ' ಎಂದು ಕರೆದಿದ್ದಲ್ಲದೆ, ರಾಮಾಯಣದ ಘಟನೆಗಳನ್ನು ಜಿಎಸ್‌ಟಿ ಮತ್ತು ಡಿಸ್ಕೌಂಟ್‌ಗೆ ಹೋಲಿಸಿ ಪ್ರಕಾಶ್‌ ರಾಜ್‌ ವ್ಯಂಗ್ಯವಾಡಿದ್ದರು.

ದರ್ಶನ್‌ ಮ್ಯಾನೇಜರ್‌ ಮಲ್ಲಿಕಾರ್ಜುನ್‌ ಸುಳ್ಳು ಹೇಳಿದ್ರಾ? ತೂಗುದೀಪ ಮಾಜಿ ಅಕೌಂಟೆಂಟ್ ದೀಪಕ್ ಗಂಗಾಧರ್‌ ಬಿಚ್ಚಿಟ್ಟ ರಹಸ್ಯವೇನು?

ʻಪ್ರೇಮ ಬರಹʼ ವಿವಾದ: ಮಲ್ಲಿಕಾರ್ಜುನ್ ಮೇಲೆ ಅಕೌಂಟೆಂಟ್ ಮಾಡಿದ ಆರೋಪವೇನು?

ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ್ ಅವರು 'ಪ್ರೇಮ ಬರಹ' ಚಿತ್ರದ ಲೆಕ್ಕಾಚಾರದಲ್ಲಿ ಅಕೌಂಟೆಂಟ್ ತಪ್ಪು ಮಾಡಿದ್ದಾರೆ ಎಂಬ ಹೇಳಿಕೆಯನ್ನು ಮಾಜಿ ಅಕೌಂಟೆಂಟ್ ದೀಪಕ್ ಗಂಗಾಧರ್ ತೀವ್ರವಾಗಿ ಖಂಡಿಸಿದ್ದಾರೆ. ತೂಗುದೀಪ ಸಂಸ್ಥೆಯಲ್ಲಿ ಮಲ್ಲಿಕಾರ್ಜುನ್ ಅವರು ಹೇಳಿದಂತೆಯೇ ತಾವು ಲೆಕ್ಕ ಬರೆದಿರುವುದಾಗಿ ದೀಪಕ್ ಸ್ಪಷ್ಟಪಡಿಸಿದ್ದಾರೆ.

16 ವರ್ಷದ ಹಿಂದಿನ ಕೇಸ್‌ನಲ್ಲಿ ನಟಿ ತಮನ್ನಾಗೆ ಹಿನ್ನಡೆ; ಪವರ್ ಸೋಪ್ ವಿರುದ್ಧದ ಕೇಸ್‌ ವಜಾ ಮಾಡಿದ ಮದ್ರಾಸ್ ಹೈಕೋರ್ಟ್

ನಟಿ ತಮನ್ನಾಗೆ ಮದ್ರಾಸ್ ಹೈಕೋರ್ಟ್ ಶಾಕ್: ಪವರ್ ಸೋಪ್ಸ್ ವಿರುದ್ಧದ ಕೇಸ್ ವಜಾ

16 ವರ್ಷಗಳ ಹಳೆಯ ಕಾನೂನು ಹೋರಾಟದಲ್ಲಿ ನಟಿ ತಮನ್ನಾ ಭಾಟಿಯಾ ಅವರಿಗೆ ಮದ್ರಾಸ್ ಹೈಕೋರ್ಟ್‌ನಲ್ಲಿ ಹಿನ್ನಡೆಯಾಗಿದೆ. ಪವರ್ ಸೋಪ್ಸ್ ಕಂಪನಿಯು ಒಪ್ಪಂದದ ಅವಧಿ ಮುಗಿದ ನಂತರವೂ ತನ್ನ ಫೋಟೋಗಳನ್ನು ಅನಧಿಕೃತವಾಗಿ ಬಳಸಿಕೊಂಡಿದೆ ಎಂದು ಆರೋಪಿಸಿ ತಮನ್ನಾ 1 ಕೋಟಿ ರೂ. ಪರಿಹಾರ ಕೋರಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.

ʻಬಿಗ್‌ ಬಾಸ್ʼ ವಿನ್ನರ್ ಗಿಲ್ಲಿ ನಟನ ಹೊಸ ಸಿನಿಮಾದಲ್ಲಿ ನಾಯಕಿ ಆಗ್ತಾರಾ ಯಶಸ್ವಿನಿ? ಹೊರಬಿತ್ತು ಗುಡ್‌ ನ್ಯೂಸ್

‌'ಬಿಗ್ ಬಾಸ್' ವಿನ್ನರ್ ಗಿಲ್ಲಿ ನಟನ ಸಿನಿಮಾಗೆ ನಾಯಕಿಯಾಗ್ತಾರಾ ಯಶಸ್ವಿನಿ?

ʻಬಿಗ್‌ ಬಾಸ್ʼ ಗಿಲ್ಲಿ ನಟನ ಚಿತ್ರದಲ್ಲಿ ಅಭಿನಯಿಸುವ ಕುರಿತು ಯಶಸ್ವಿನಿ ಕೆ. ಸ್ವಾಮಿ ಅವರು ವಿಶ್ವವಾಣಿ ಟಿವಿಯ ಸಂದರ್ಶನದಲ್ಲಿ ಆಸಕ್ತಿದಾಯಕ ವಿಷಯಗಳನ್ನು ಹಂಚಿಕೊಂಡಿದ್ದಾರೆ. ಬಿಗ್ ಬಾಸ್‌ಗೂ ಮುನ್ನವೇ ಸಿನಿಮಾವೊಂದರ ಮಾತುಕತೆ ನಡೆದಿತ್ತು, ಪಾತ್ರ ಚೆನ್ನಾಗಿದ್ದರೆ ಗಿಲ್ಲಿ ಜೊತೆ ನಟಿಸಲು ನಾನು ಸಿದ್ಧ ಎಂದು ಅವರು ತಿಳಿಸಿದ್ದಾರೆ.

ʻದಳಪತಿʼ ವಿಜಯ್‌ ‌ʻಜನ ನಾಯಗನ್‌ʼ ಲೀಕ್: ಸೈಬರ್ ಕ್ರೈಂ ಪೊಲೀಸರ ಬಲೆಗೆ ಬಿದ್ದ ಪ್ರಕರಣದ ಮಾಸ್ಟರ್‌ ಮೈಂಡ್‌, ಈ ಸಿನಿಮಾ ಪೈರಸಿ ಆಗಿದ್ದೇಗೆ?

ʻಜನ ನಾಯಗನ್ʼ ಲೀಕ್ ಪ್ರಕರಣ: ಸೈಬರ್ ಪೊಲೀಸರ ಬಲೆಗೆ ಬಿದ್ದ ಮಾಸ್ಟರ್‌ಮೈಂಡ್

ʻಜನ ನಾಯಗನ್‌ʼ ಸಿನಿಮಾ ಲೀಕ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ಸೈಬರ್ ಕ್ರೈಂ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಎಡಿಟಿಂಗ್ ಸ್ಟುಡಿಯೋವೊಂದರಲ್ಲಿ ಫ್ರೀಲ್ಯಾನ್ಸ್ ಸಹಾಯಕ ಎಡಿಟರ್ ಆಗಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೇ ಚಿತ್ರದ ಪ್ರಮುಖ ದೃಶ್ಯಗಳನ್ನು ಅನಧಿಕೃತವಾಗಿ ಕಾಪಿ ಮಾಡಿ ಹಂಚಿಕೊಂಡಿರುವುದು ಪತ್ತೆಯಾಗಿದೆ.

ʻಸರಿಗಮಪ ಲಿಟಲ್ ಚಾಂಪ್ಸ್ʼ ಶೋ ಆರಂಭಕ್ಕೆ ಮುಹೂರ್ತ ಫಿಕ್ಸ್: ಜೀ ಕನ್ನಡದಲ್ಲಿ ಪುಟಾಣಿಗಳ ಸ್ವರ ಸಂಭ್ರಮ

ʻಸರಿಗಮಪ ಲಿಟಲ್ ಚಾಂಪ್ಸ್ʼ ಆರಂಭಕ್ಕೆ ದಿನಗಣನೆ; ಮತ್ತೆ ಶುರು ಸಂಗೀತದ ಸುಧೆ

ʻಸರಿಗಮಪ ಲಿಟಲ್ ಚಾಂಪ್ಸ್ʼ ಹೊಸ ಆವೃತ್ತಿಯು ಏಪ್ರಿಲ್ 18ರಿಂದ ಜೀ ಕನ್ನಡ ವಾಹಿನಿಯಲ್ಲಿ ಅದ್ಧೂರಿಯಾಗಿ ಚಾಲನೆಗೊಳ್ಳಲಿದೆ. 3ರಿಂದ 15 ವರ್ಷದೊಳಗಿನ ಅಪ್ರತಿಮ ಪ್ರತಿಭೆಗಳನ್ನು ಗುರುತಿಸುವ ಈ ರಿಯಾಲಿಟಿ ಶೋನಲ್ಲಿ ರಾಜೇಶ್ ಕೃಷ್ಣನ್, ವಿಜಯ್ ಪ್ರಕಾಶ್ ಮತ್ತು ಅರ್ಜುನ್ ಜನ್ಯ ತೀರ್ಪುಗಾರರಾಗಿ ಪುಟಾಣಿಗಳಿಗೆ ಮಾರ್ಗದರ್ಶನ ನೀಡಲಿದ್ದಾರೆ.

Loading...