ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Avinash GR

Senior Digital Content Editor

[email protected]

ಅವಿನಾಶ್‌ ಜಿ ಆರ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯವನ್ನು ಪಡೆದುಕೊಂಡಿದ್ದಾರೆ. ಕಳೆದ ೧೪ ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ 2 ವರ್ಷ ಸಿನಿಮಾ ವರದಿಗಾರನಾಗಿ, 4 ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದಾರೆ. ʻವಿಜಯ ಕರ್ನಾಟಕʼ ವೆಬ್‌ನಲ್ಲಿ 6 ವರ್ಷ ಎಂಟರ್‌ಟೇನ್‌ಮೆಂಟ್ ವಿಭಾಗದಲ್ಲಿ ‌ʻಸೀನಿಯರ್ ಡಿಜಿಟಲ್‌ ಕಂಟೆಂಟ್ ಪ್ರೊಡ್ಯೂಸರ್ʼ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನಗಳು, ಸಿನಿಮಾ ವಿಮರ್ಶೆಗಳು, ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣೆ, ಅಂಕಣಗಳನ್ನು ಬರೆದಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ರಾಜಕೀಯ, ಪ್ರವಾಸ, ಓದು ಇವರ ಆಸಕ್ತಿಗಳಾಗಿವೆ. ಪ್ರಸ್ತುತ ʻವಿಶ್ವವಾಣಿʼ ಡಿಜಿಟಲ್‌ನಲ್ಲಿ ʻಸೀನಿಯರ್‌ ಡಿಜಿಟಲ್‌ ಕಂಟೆಂಟ್‌ ಎಡಿಟರ್‌ʼ ಆಗಿ ಕೆಲಸ ಮಾಡುತ್ತಿದ್ದಾರೆ.

Articles
ʻಮಗನಿಗೆ ನನ್ನ ಸಿನಿಮಾಗಳಿಂದ ಮುಜುಗರ ಆಗಬಾರದುʼ; ಬೋಲ್ಡ್‌ ಇಂಟಿಮೇಟ್ ದೃಶ್ಯಗಳಿಗೆ 'ನೋ' ಎಂದ ಕಾಜಲ್ ಅಗರ್ವಾಲ್

ʻಮಗನಿಗೆ ನನ್ನ ಸಿನಿಮಾ ನೋಡಿ ಮುಜುಗರ ಆಗಬಾರದುʼ ಎಂದ ನಟಿ ಕಾಜಲ್ ಅಗರ್ವಾಲ್

ದಕ್ಷಿಣ ಭಾರತದ ಖ್ಯಾತ ನಟಿ ಕಾಜಲ್ ಅಗರ್‌ವಾಲ್ ಚಿತ್ರರಂಗದಲ್ಲಿ ಎಷ್ಟೇ ದೊಡ್ಡ ಅವಕಾಶ ಬಂದರೂ ಪರದೆಯ ಮೇಲೆ ಬೋಲ್ಡ್ ಹಾಗೂ ಇಂಟಿಮೇಟ್ ದೃಶ್ಯಗಳಲ್ಲಿ ಅಭಿನಯಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ತಮ್ಮ ನಾಲ್ಕು ವರ್ಷದ ಮಗ ನೀಲ್ ಬೆಳೆದು ದೊಡ್ಡವನಾದ ಮೇಲೆ ತಮ್ಮ ಸಿನಿಮಾಗಳನ್ನು ನೋಡಿ ಮುಜುಗರ ಪಟ್ಟುಕೊಳ್ಳಬಾರದು ಎಂಬ ಕಾರಣಕ್ಕೆ ಈ ವೈಯಕ್ತಿಕ ಗಡಿಗಳನ್ನು ವಿಧಿಸಿಕೊಂಡಿರುವುದಾಗಿ ತಿಳಿಸಿದ್ಧಾರೆ.

ರಿಷಬ್ ಶೆಟ್ಟಿಯ ʻಛತ್ರಪತಿ ಶಿವಾಜಿʼ ಸಿನಿಮಾ ಬಜೆಟ್‌ 500 ಕೋಟಿ! ಈ ಚಿತ್ರಕ್ಕಾಗಿ ಭಾರತಕ್ಕೆ ಬರಲಿದೆ 'ಗೇಮ್ ಆಫ್ ಥ್ರೋನ್ಸ್' ಸ್ಟಂಟ್ ಟೀಮ್

ʻಛತ್ರಪತಿ ಶಿವಾಜಿʼ ಚಿತ್ರಕ್ಕೆ ʻಗೇಮ್ ಆಫ್ ಥ್ರೋನ್ಸ್ʼ ಟೀಮ್‌ ಎಂಟ್ರಿ

'ಕಾಂತಾರ' ನಟ ರಿಷಬ್ ಶೆಟ್ಟಿ ನಟನೆಯ 'ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್' ಚಿತ್ರವು ಬರೋಬ್ಬರಿ 500 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗುತ್ತಿದೆ. 'ಗೇಮ್ ಆಫ್ ಥ್ರೋನ್ಸ್' ಖ್ಯಾತಿಯ ಹಾಲಿವುಡ್ ಸ್ಟಂಟ್ ತಂಡ ಯುದ್ಧ ದೃಶ್ಯಗಳಿಗೆ ಸಾಥ್ ನೀಡಲಿದ್ದು, ಈ ಚಿತ್ರ ಎರಡು ಭಾಗಗಳಲ್ಲಿ ಮೂಡಿಬರಲಿದೆ.

'ಲಾಕ್ ಅಪ್ 2' ಶೋನಲ್ಲಿ ಒಂದು ಮುತ್ತಿನ ಕಥೆ! ಕಿಸ್ ಕೊಟ್ಟ ರಾಮ್ ಕಪೂರ್ ವಿರುದ್ಧ ಶ್ರೇಯಾ ಕಾಲ್ರಾ ಗರಂ, ಪತಿ ಪರ ಬ್ಯಾಟ್‌ ಬೀಸಿದ ಗೌತಮಿ ಕಪೂರ್

ಅನುಮತಿ ಇಲ್ಲದೇ ಕಿಸ್‌ ಕೊಟ್ಟ ನಟ ರಾಮ್ ಕಪೂರ್ ವಿರುದ್ಧ ಶ್ರೇಯಾ ಕಾಲ್ರಾ ಗರಂ

'ಲಾಕ್ ಅಪ್: ಸಚ್ ಯಾ ಸಜಾ' ಸೀಸನ್ 2 ರಿಯಾಲಿಟಿ ಶೋನಲ್ಲಿ ಹಿರಿಯ ನಟ ರಾಮ್ ಕಪೂರ್ ತಮ್ಮ ಅನುಮತಿಯಿಲ್ಲದೆ ಅಸಭ್ಯವಾಗಿ ಮುತ್ತು ನೀಡಿದ್ದಾರೆ ಎಂದು ಸಹ-ಸ್ಪರ್ಧಿ ಶ್ರೇಯಾ ಕಾಲ್ರಾ ಗಂಭೀರ ಆರೋಪ ಮಾಡಿದ್ದಾರೆ. ಈ ವಿವಾದ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ, ರಾಮ್ ಪತ್ನಿ ಗೌತಮಿ ಕಪೂರ್ ತಮ್ಮ ಪತಿಯ ಪರ ಮಾತನಾಡಿದ್ದಾರೆ.

ʻವಾರಣಾಸಿʼ ಡೈರೆಕ್ಟರ್‌ ರಾಜಮೌಳಿ ಸಿನಿಮಾದಲ್ಲಿ ಆಕ್ಟಿಂಗ್‌ ಚಾನ್ಸ್‌ ಕೇಳಿದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು!

ರಾಜಮೌಳಿ ಸಿನಿಮಾದಲ್ಲಿ ಆಕ್ಟಿಂಗ್ ಚಾನ್ಸ್ ಕೇಳಿದ‌ ಪಿ. ವಿ. ಸಿಂಧು!

ಭಾರತದ ಬ್ಯಾಡ್ಮಿಂಟನ್ ತಾರೆ ಪಿ. ವಿ. ಸಿಂಧು ಜಪಾನ್ ಓಪನ್ ಸೂಪರ್-750 ಟೂರ್ನಮೆಂಟ್‌ನಲ್ಲಿ ಪ್ರಶಸ್ತಿ ಗೆದ್ದು ಐತಿಹಾಸಿಕ ದಾಖಲೆ ಬರೆದಿದ್ದಾರೆ. ಎರಡು ವರ್ಷಗಳ ಸುದೀರ್ಘ ಫಾರ್ಮ್ ಕೊರತೆಯ ನಂತರ ಯಮಗುಚಿ ವಿರುದ್ಧ ಭರ್ಜರಿ ಜಯ ಗಳಿಸಿದ ಸಿಂಧು ಅವರಿಗೆ ನಿರ್ದೇಶಕ ಎಸ್. ಎಸ್. ರಾಜಮೌಳಿ ಟ್ವೀಟ್ ಮೂಲಕ ಅಭಿನಂದಿಸಿದ್ದಾರೆ.

ʻಬಿಗ್‌ ಬಾಸ್‌ ಕನ್ನಡʼ ಶೋ ಆರಂಭದ ಬಗ್ಗೆ ಇಲ್ಲಿದೆ ಬಿಗ್‌ ಅಪ್ಡೇಟ್‌; ಕಿರುತೆರೆಯ ಈ ಅತಿದೊಡ್ಡ ಶೋ ಮೂಲಕ ನಿರೂಪಕರಾದ ಸೌರವ್‌ ಗಂಗೂಲಿ

ʻಬಿಗ್‌ ಬಾಸ್‌' ಪ್ರಿಯರಿಗೆ ಇಲ್ಲಿದೆ ಬಿಗ್ ಅಪ್ಡೇಟ್; ಈ ಶೋ ಯಾವಾಗ ಶುರು?

ಜಿಯೋಸ್ಟಾರ್ ಸಂಸ್ಥೆಯು ಪ್ರೇಕ್ಷಕರಿಗೆ ಸಿಹಿ ಸುದ್ದಿ ನೀಡಿದ್ದು, ಕಿಚ್ಚ ಸುದೀಪ್ ಸಾರಥ್ಯದ 'ಬಿಗ್ ಬಾಸ್ ಕನ್ನಡ' ಸೇರಿದಂತೆ ಆರು ಪ್ರಾದೇಶಿಕ ಭಾಷೆಗಳ ಹೊಸ ಸೀಸನ್‌ಗಳು ಮುಂಬರುವ ಸೆಪ್ಟೆಂಬರ್‌ನಿಂದ ಜಿಯೋಹಾಟ್‌ಸ್ಟಾರ್ ಒಟಿಟಿ ಹಾಗೂ ಜಿಯೋಸ್ಟಾರ್ ಟೆಲಿವಿಷನ್‌ನಲ್ಲಿ ಪ್ರಸಾರವಾಗಲಿವೆ.

ಬಾಕ್ಸ್ ಆಫೀಸ್‌ನಲ್ಲಿ ಹೊಸ ಇತಿಹಾಸ ಬರೆದ ‘ದಿ ಒಡಿಸ್ಸಿ’: ಮೂರೇ ದಿನಗಳಲ್ಲಿ ಸಾವಿರಾರು ಕೋಟಿ ಬಾಚಿಕೊಂಡ ಕ್ರಿಸ್ಟೋಫರ್ ನೋಲನ್ ಸಿನಿಮಾ!

ಮೂರೇ ದಿನಕ್ಕೆ 2,500 ಕೋಟಿ ಬಾಚಿದ ʻದಿ ಒಡಿಸ್ಸಿʼ; ಇದು ನೋಲನ್ ಮ್ಯಾಜಿಕ್‌

ಹಾಲಿವುಡ್‌ ನಿರ್ದೇಶಕ ಕ್ರಿಸ್ಟೋಫರ್ ನೋಲನ್ ನಿರ್ದೇಶನದ ‘ದಿ ಒಡಿಸ್ಸಿ’ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಬಿಡುಗಡೆಯಾದ ಮೂರೇ ದಿನಗಳಲ್ಲಿ ಬರೋಬ್ಬರಿ 2,546 ಕೋಟಿ ರೂಪಾಯಿ ಗಳಿಸಿ ದಾಖಲೆ ಬರೆದಿದೆ. ಸುಮಾರು 2 ಸಾವಿರ ಕೋಟಿ ಬಜೆಟ್‌ನಲ್ಲಿ ನಿರ್ಮಾಣಗೊಂಡಿದ್ದ ಈ ಗ್ರೀಕ್ ಪುರಾಣ ಆಧರಿತ ಕಲ್ಪಿತ ಕಥೆಯ ಚಿತ್ರವು ಮೊದಲ ವಾರಾಂತ್ಯದಲ್ಲೇ ಲಾಭದತ್ತ ಮುಖ ಮಾಡಿದೆ.

OTT ವೀಕ್ಷಕರಿಗೆ ಭರ್ಜರಿ ಗುಡ್ ನ್ಯೂಸ್ ಕೊಟ್ಟ ಜೀ5; 7 ಭಾಷೆಯಲ್ಲಿ ಹೊಸ ವೆಬ್ ಸಿರೀಸ್, ಸಿನಿಮಾಗಳ ಘೋಷಣೆ!

OTT ವೀಕ್ಷಕರಿಗೆ ಜೀ5 ಸಿಹಿ ಸುದ್ದಿ; ಹೊಸ ಸೀರೀಸ್‌, ಸಿನಿಮಾಗಳ ಘೋಷಣೆ

ಭಾರತೀಯ ಪ್ರಾದೇಶಿಕ ಮನರಂಜನಾ ಲೋಕದಲ್ಲಿ ಕ್ರಾಂತಿ ಸೃಷ್ಟಿಸಲು ಮುಂದಾಗಿರುವ 'ಜೀ5' ಒಟಿಟಿ ವೇದಿಕೆಯು ಏಕಕಾಲಕ್ಕೆ ಕನ್ನಡ, ಹಿಂದಿ, ತಮಿಳು ಸೇರಿದಂತೆ 7 ಭಾಷೆಗಳಲ್ಲಿ ಹೊಸ ವೆಬ್ ಸರಣಿಗಳು, ಚಿತ್ರಗಳು ಹಾಗೂ ಎಐ ಬೆಂಬಲಿತ ಕಥೆಗಳನ್ನು ಘೋಷಣೆ ಮಾಡಿದೆ.

ನಟಿ ಅನುಪಮಾ ಪರಮೇಶ್ವರನ್ ಬ್ರೇಕಪ್ ಪೋಸ್ಟ್ ವೈರಲ್: ಧ್ರುವ್ ವಿಕ್ರಮ್‌ ಜೊತೆಗಿನ ಸಂಬಂಧಕ್ಕೆ ಬಿತ್ತಾ ಫುಲ್‌ಸ್ಟಾಪ್?

ಧ್ರುವ್ ವಿಕ್ರಮ್ ಜತೆ ಬ್ರೇಕಪ್? ʻಯಾರ ಅನುಮತಿಯೂ ಬೇಕಿಲ್ಲʼ ಎಂದ ನಟಿ ಅನುಪಮಾ

ದಕ್ಷಿಣ ಭಾರತದ ಖ್ಯಾತ ನಟಿ ಅನುಪಮಾ ಪರಮೇಶ್ವರನ್ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ಸುದೀರ್ಘ ಭಾವುಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸುದ್ದಿಯಲ್ಲಿದ್ದಾರೆ. ಇನ್ಮುಂದೆ ತಮ್ಮ ಜೀವನದ ನಿರ್ಧಾರಗಳಿಗೆ ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಬರೆದುಕೊಂಡಿರುವ ನಟಿ, ನಟ ಧ್ರುವ್ ವಿಕ್ರಮ್ ಅವರನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಅನ್‌ಫಾಲೋ ಮಾಡಿದ್ದಾರೆ.

Yash: 'ಟಾಕ್ಸಿಕ್' ಸಿನಿಮಾದ ಟ್ರೇಲರ್‌ ರಿಲೀಸ್‌ಗೆ ಮುಹೂರ್ತ ಫಿಕ್ಸ್;‌ ಬೆಂಗಳೂರಿನಲ್ಲಿ ನಡೆಯಲಿದೆ ಅದ್ದೂರಿ ಸಮಾರಂಭ

Yash: ʻಟಾಕ್ಸಿಕ್ʼ ಚಿತ್ರದ ಟ್ರೇಲರ್ ರಿಲೀಸ್‌ಗೆ ಮುಹೂರ್ತ ಫಿಕ್ಸ್

ಯಶ್ ನಟನೆಯ, ಗೀತು ಮೋಹನ್‌ದಾಸ್ ನಿರ್ದೇಶನದ 'ಟಾಕ್ಸಿಕ್' ಚಿತ್ರದ ಟ್ರೇಲರ್ ಆಗಸ್ಟ್ 8 ರಂದು ಬೆಂಗಳೂರಿನಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಲಿದೆ ಎಂಬ ಮಾಹಿತಿ ಇದೆ. ಈ ಚಿತ್ರ ಆಗಸ್ಟ್ 26ಕ್ಕೆ ತೆರೆಗೆ ಬರಲಿದೆ. ಸದ್ಯ ಯಶ್‌ ಅವರ ಅಭಿಮಾನಿಗಳ ಗಮನ ಟಾಕ್ಸಿಕ್ ಟ್ರೇಲರ್‌ ಮೇಲಿದೆ.

ಬಿಗಿ ಭದ್ರತೆಯ ನಡುವೆಯೂ 'ರಾಮಾಯಣ' ಚಿತ್ರದ ಟ್ರೇಲರ್ ಲೀಕ್‌, ಚಿತ್ರತಂಡಕ್ಕೆ ಬಿಗ್ ಶಾಕ್!‌ ಸೋಶಿಯಲ್‌ ಮೀಡಿಯಾದಲ್ಲಿ ಸಖತ್‌ ವೈರಲ್

ಬಿಗಿ ಭದ್ರತೆಯ ನಡುವೆಯೂ ʻರಾಮಾಯಣʼ ಟ್ರೇಲರ್ ಲೀಕ್; ಚಿತ್ರತಂಡಕ್ಕೆ ಶಾಕ್!

ನಿರ್ದೇಶಕ ನಿತೇಶ್ ತಿವಾರಿ ಅವರ ಭಾರಿ ಬಜೆಟ್‌ನ 'ರಾಮಾಯಣ' ಚಿತ್ರದ ಟ್ರೇಲರ್‌ ಪ್ರದರ್ಶನ ದೆಹಲಿಯಲ್ಲಿ ನಡೆದಿದೆ. ಬಿಗಿ ಭದ್ರತೆಯ ನಡುವೆಯೂ ಟ್ರೇಲರ್‌ ಇಂಟರ್ನೆಟ್‌ನಲ್ಲಿ ಸೋರಿಕೆಯಾಗಿದೆ. ಲೀಕ್ ಆದ ಕಳಪೆ ಗುಣಮಟ್ಟದ ವಿಡಿಯೋದಲ್ಲಿ ರಾವಣನಾಗಿ ರಾಕಿಂಗ್ ಸ್ಟಾರ್ ಯಶ್ ಅಬ್ಬರ ಹಾಗೂ ರಾಮನಾಗಿ ರಣಬೀರ್ ಕಪೂರ್ ಝಲಕ್ ಕಾಣಿಸಿದ್ದು, ಚಿತ್ರದ ಮೇಲಿನ ಕುತೂಹಲ ದುಪ್ಪಟ್ಟುಗೊಳಿಸಿದೆ.

ಕರ್ನಾಟಕದಲ್ಲಿ ʻಜನ ನಾಯಗನ್‌ʼ ಸಿನಿಮಾ ಟಿಕೆಟ್‌ ದರ 1000 ರೂ.! ಆದರೆ, ತಮಿಳುನಾಡಿನಲ್ಲಿ 190 ರೂ. ದಾಟೋದಿಲ್ಲವೇಕೆ? ಇಲ್ಲಿದೆ ಮಾಹಿತಿ

ತಮಿಳುನಾಡಿನಲ್ಲಿ ‘ಜನ ನಾಯಗನ್‌’ ಟಿಕೆಟ್‌ ದರ 190 ರೂ. ಫಿಕ್ಸ್! ಕಾರಣವೇನು?

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಚಿತ್ರ ಜುಲೈ 23 ರಂದು ಬಿಡುಗಡೆಯಾಗಲಿದ್ದು, ಕರ್ನಾಟಕದಲ್ಲಿ ಟಿಕೆಟ್ ದರ 1,000 ರೂಪಾಯಿಗೆ ತಲುಪಿದೆ. ಆದರೆ ತಮಿಳುನಾಡಿನಲ್ಲಿ ಸರ್ಕಾರಿ ನಿಯಮಾವಳಿಗಳ ಕಾರಣದಿಂದಾಗಿ ಟಿಕೆಟ್ ದರ 190 ರೂಪಾಯಿ ಮೀರದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

‘ರಾಮಾಯಣ’ ಸಿನಿಮಾದ ತಾರಾಗಣದ ಬಗ್ಗೆ ನಟ ಅನ್ನು ಕಪೂರ್ ಅಸಮಾಧಾನ: ನಟಿ ಸಾಯಿ ಪಲ್ಲವಿ ಆಯ್ಕೆಯನ್ನು ಪ್ರಶ್ನೆ ಮಾಡಿದ್ದೇಕೆ?

ರಾಮಾಯಣದಲ್ಲಿ ಸಾಯಿ ಪಲ್ಲವಿ ಸೀತೆನಾ? ತಾರಾಗಣದ ಬಗ್ಗೆ ಅನ್ನು ಕಪೂರ್ ಪ್ರಶ್ನೆ

ನಿತೇಶ್ ತಿವಾರಿ ನಿರ್ದೇಶನದ ಬೃಹತ್ ಬಜೆಟ್‌ನ ‘ರಾಮಾಯಣ’ ಸಿನಿಮಾದ ತಾರಾಗಣದ ಆಯ್ಕೆ ಕುರಿತು ಹಿರಿಯ ನಟ ಅನ್ನು ಕಪೂರ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸೀತಾ ದೇವಿಯ ಪಾತ್ರಕ್ಕೆ ನಟಿ ಸಾಯಿ ಪಲ್ಲವಿ ಅವರನ್ನು ಆಯ್ಕೆ ಮಾಡಿರುವುದನ್ನು ಪ್ರಶ್ನಿಸಿರುವ ಅವರು, ಧಾರ್ಮಿಕ ಮತ್ತು ಸಾಂಸ್ಕೃತಿಕ ಮಹತ್ವವನ್ನು ಚಿತ್ರತಂಡ ಮರೆತಿದೆ ಎಂದಿದ್ದಾರೆ.

Photos: ನಟಿ ಶರ್ಮಿಳಾ ಮಾಂಡ್ರೆ ಈಗ ʻಮಿಸಸ್‌  ಸುಂದರಂʼ; ತಮಿಳು ನಿರ್ಮಾಪಕನ ಜೊತೆ ಕನ್ನಡ ನಟಿಯ ಮದುವೆಯ ಸುಂದರ ಕ್ಷಣಗಳು

ತಮಿಳು ನಿರ್ಮಾಪಕನ ಜತೆ ಶರ್ಮಿಳಾ ಮಾಂಡ್ರೆ ಕಲ್ಯಾಣ; ಇಲ್ಲಿವೆ ಮದುವೆ ಫೋಟೋಗಳು

ಸ್ಯಾಂಡಲ್‌ವುಡ್‌ ನಟಿ ಶರ್ಮಿಳಾ ಮಾಂಡ್ರೆ ಈಚೆಗೆ ತಮಿಳು ನಿರ್ಮಾಪಕ ಸುಧನ್‌ ಸುಂದರಂ ಅವರನ್ನ ಮದುವೆಯಾದರು. ಜೈಪುರದಲ್ಲಿ ಅದ್ದೂರಿಯಾಗಿ ಇವರಿಬ್ಬರ ಕಲ್ಯಾಣ ಮಹೋತ್ಸವ ನಡೆದಿತ್ತು. ಇದೀಗ ತಮ್ಮ ಮದುವೆಯ ಅದ್ದೂರಿ ಫೋಟೋಗಳನ್ನ ಸೋಶಿಯಲ್‌ ಮೀಡಿಯಾದಲ್ಲಿ ಶರ್ಮಿಳಾ ಮಾಂಡ್ರೆ ಶೇರ್‌ ಮಾಡಿಕೊಂಡಿದ್ದಾರೆ. "From Ms Mandre to Mrs Sundaram" ಎಂದು ಕ್ಯಾಪ್ಷನ್‌ ಬರೆದುಕೊಂಡಿದ್ದಾರೆ. ಇಲ್ಲಿವೆ ನೋಡಿ ಅವರ ಮದುವೆಯ ಸುಂದರ ಫೋಟೋಗಳು.

ʻಅಯ್ಯಯ್ಯೋ, ಸಲ್ಲು ಭಾಯ್‌ಗೆ ಏನಾಗಿಹೋಯ್ತು?ʼ; ಸಲ್ಮಾನ್‌ ಖಾನ್‌ ಲುಕ್‌ ನೋಡಿ ಗಾಬರಿಬಿದ್ದ ಅಭಿಮಾನಿಗಳು!

ಭಾಯ್‌ಜಾನ್‌ಗೆ ಏನಾಯ್ತು?; ಸಲ್ಮಾನ್ ಖಾನ್ ಹೊಸ ಲುಕ್ ನೋಡಿ ಫ್ಯಾನ್ಸ್ ಶಾಕ್!

ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂಬೈನ ಸ್ಲಮ್ ರಿಹ್ಯಾಬಿಲಿಟೇಶನ್ ಅಥಾರಿಟಿ ಕಚೇರಿಯ ಐಟಿ ಸರ್ವರ್ ರೂಮ್ ಉದ್ಘಾಟನೆ ವೇಳೆ ತೀರಾ ಭಿನ್ನವಾದ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಂಪೂರ್ಣ ಕ್ಲೀನ್ ಶೇವ್ ಹಾಗೂ ಸಿಂಪಲ್ ಶರ್ಟ್ ಧರಿಸಿದ್ದ ಸಲ್ಮಾನ್ ಅವರ ವಯಸ್ಸಾದ ಲುಕ್ ನೋಡಿ ಆತಂಕಗೊಂಡಿರುವ ಅಭಿಮಾನಿಗಳು, ಅವರ ಆರೋಗ್ಯದ ಸ್ಥಿತಿಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

ದೆಹಲಿಯಲ್ಲಿ ನಡೆದ ‘ರಾಮಾಯಣ’ ಸಿನಿಮಾದ ಅದ್ದೂರಿ ಕಾರ್ಯಕ್ರಮ; ಜುಲೈ 24ರಂದು ಬರಲಿದೆ ಪ್ಯಾನ್‌ ವರ್ಲ್ಡ್‌ ಟ್ರೇಲರ್!‌

Yash: ದೆಹಲಿಯಲ್ಲಿ ‘ರಾಮಾಯಣ’ ಸಿನಿಮಾಗೆ ಅದ್ದೂರಿ ಕಾರ್ಯಕ್ರಮ

ಭಾರತೀಯ ಸಂಸ್ಕೃತಿಯ ಮಹಾಕಾವ್ಯ ‘ರಾಮಾಯಣ’ ಚಿತ್ರದ ಜಾಗತಿಕ ಪಯಣಕ್ಕೆ ದೆಹಲಿಯ ‘ಪ್ರಥಮ ಸಂಕಲ್ಪ’ ಇವೆಂಟ್ ಮೂಲಕ ಅಧಿಕೃತ ಚಾಲನೆ ಸಿಕ್ಕಿದೆ. ನಿತೇಶ್ ತಿವಾರಿ ನಿರ್ದೇಶನದ ಈ ಸಿನಿಮಾದಲ್ಲಿ ರಣಬೀರ್ ಕಪೂರ್, ಸಾಯಿ ಪಲ್ಲವಿ ಹಾಗೂ ರಾಕಿಂಗ್ ಸ್ಟಾರ್ ಯಶ್ ಪ್ರಮುಖ ಪಾತ್ರಗಳಲ್ಲಿದ್ದಾರೆ.

ಡಾ. ವಿ. ನಾಗೇಂದ್ರ ಪ್ರಸಾದ್‌ಗೆ 50ನೇ ಹುಟ್ಟುಹಬ್ಬ; ಜುಲೈ 19ರಂದು 'ಕವಿರತ್ನ ಸಾರ್ಥಕ ಸುವರ್ಣ' ಮಹಾಸಂಭ್ರಮ

ʻಕವಿರತ್ನʼ ನಾಗೇಂದ್ರ ಪ್ರಸಾದ್‌ಗೆ 50ರ ಸಂಭ್ರಮ; ಜು.19ಕ್ಕೆ ಮಹಾ ಸಂಭ್ರಮ

ಕನ್ನಡ ಚಿತ್ರರಂಗದಲ್ಲಿ ಮೂರು ದಶಕಗಳಿಂದ 3,000ಕ್ಕೂ ಹೆಚ್ಚು ಅದ್ಭುತ ಹಾಡುಗಳನ್ನು ಹೆಣೆದಿರುವ ಜನಪ್ರಿಯ ಗೀತ ಸಾಹಿತಿ ಡಾ. ವಿ. ನಾಗೇಂದ್ರ ಪ್ರಸಾದ್ ಅವರ 50ನೇ ಹುಟ್ಟುಹಬ್ಬದ ಅಂಗವಾಗಿ ಜುಲೈ 19ರಂದು 'ಕವಿರತ್ನ ಸಾರ್ಥಕ ಸುವರ್ಣ' ಮಹಾಸಂಭ್ರಮ ಆಯೋಜಿಸಲಾಗಿದೆ.

ʻಜನ ನಾಯಗನ್‌ʼ ಸಿನಿಮಾಗೆ ರೂ. 1,000, ʻದಿ ಒಡಿಸ್ಸಿʼಗೆ ರೂ. 1,950! ದುಬಾರಿ ಟಿಕೆಟ್‌ ದರದಿಂದಾಗಿ ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ಹಗಲು ದರೋಡೆ!

ಅಬ್ಬಬ್ಬಾ! ಬೆಂಗಳೂರಿನಲ್ಲಿ ʻಜನ ನಾಯಗನ್‌ʼ ಟಿಕೆಟ್‌ ರೇಟ್‌ 1,000 ರೂ.!

ಬೆಂಗಳೂರಿನಲ್ಲಿ ಪರಭಾಷಾ ಚಿತ್ರಗಳ ದುಬಾರಿ ಟಿಕೆಟ್ ದರದಿಂದಾಗಿ ಪ್ರೇಕ್ಷಕರ ರಾಜಾರೋಷ ಸುಲಿಗೆ ನಡೆಯುತ್ತಿದೆ. ತಮಿಳು ನಟ ವಿಜಯ್ ಅಭಿನಯದ 'ಜನ ನಾಯಗನ್' ಸಿಂಗಲ್ ಸ್ಕ್ರೀನ್‌ಗಳಲ್ಲೇ ಬರೋಬ್ಬರಿ 1000 ರೂ.ಗೆ ಮಾರಾಟವಾಗುತ್ತಿದ್ದು, ಕೇವಲ 42 ಶೋಗಳಿಂದ 1.90 ಕೋಟಿ ರೂ. ಮುಂಗಡ ಬುಕಿಂಗ್ ಮಾಡಿದೆ. ಇತ್ತ ಹಾಲಿವುಡ್ ಚಿತ್ರ 'ದಿ ಒಡಿಸ್ಸಿ' ಟಿಕೆಟ್ ದರ 1950 ರೂ. ತಲುಪಿದ್ದು, ಸಿನಿಮಾ ಪ್ರೇಮಿಗಳ ಆಕ್ರೋಶಕ್ಕೆ ಕಾರಣವಾಗಿದೆ.

'ಕರಾವಳಿ' ಚಿತ್ರದ ಪವರ್‌ಫುಲ್ ಕವರ್ ಸಾಂಗ್ ಬಿಡುಗಡೆ; ʻಸು ಫ್ರಮ್ ಸೋʼ ಮಾದರಿಯಲ್ಲೇ ರಾಜ್ಯಾದ್ಯಂತ ಭರ್ಜರಿ ಪ್ರೀಮಿಯರ್‌ ಶೋಗಳಿಗೆ ಪ್ಲ್ಯಾನ್!‌

ʻಸು ಫ್ರಂ ಸೋʼ ಮಾದರಿಯಲ್ಲೇ 'ಕರಾವಳಿ' ಚಿತ್ರಕ್ಕೆ ಪೇಯ್ಡ್ ಪ್ರೀಮಿಯರ್‌ ಶೋ

ಪ್ರಜ್ವಲ್ ದೇವರಾಜ್ - ರಾಜ್ ಬಿ. ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ, ಗುರುದತ್ ಗಾಣಿಗ ನಿರ್ದೇಶನದ 'ಕರಾವಳಿ' ಚಿತ್ರದ ಬಿಡುಗಡೆಗೆ ದಿನಗಣನೆ ಆರಂಭವಾಗಿದ್ದು, ಜುಲೈ 24ರ ರಿಲೀಸ್‌ಗೂ ಮುನ್ನ 'ಸು ಫ್ರಮ್ ಸೋ' ಮಾದರಿಯಲ್ಲೇ ರಾಜ್ಯಾದ್ಯಂತ ಪೇಯ್ಡ್ ಪ್ರೀಮಿಯರ್ ಶೋಗಳನ್ನು ಆಯೋಜಿಸಲಾಗಿದೆ.

Thalapathy Vijay: 'ಜನ ನಾಯಗನ್' ಸಿನಿಮಾದ ಅಂಬೇಡ್ಕರ್ ಕುರಿತ ಡೈಲಾಗ್‌ಗೆ ಕತ್ತರಿ ಹಾಕಿದ ಸೆನ್ಸಾರ್ ಮಂಡಳಿ; ನಿರ್ಮಾಪಕ ಕೆವಿಎನ್‌ ಹೇಳಿದ್ದಿಷ್ಟು!

ʻಜನ ನಾಯಗನ್ʼ ಚಿತ್ರದಿಂದ ಅಂಬೇಡ್ಕರ್ ಕುರಿತ ಡೈಲಾಗ್‌ ಕಟ್‌ ಆಗಿದ್ದೇಕೆ?

ತಮಿಳುನಾಡು ಸಿಎಂ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ 'ಜನ ನಾಯಗನ್' ಬಿಡುಗಡೆಗೆ ದಿನಗಣನೆ ಆರಂಭವಾಗಿರುವಾಗಲೇ ಈ ಚಿತ್ರದಲ್ಲಿದ್ದ ಅಂಬೇಡ್ಕರ್ ಅವರ ಸಂವಿಧಾನ ಮತ್ತು ವಿಜಯ್ ಅವರ 'ಟಿವಿಕೆ' ಪಕ್ಷವನ್ನು ಉಲ್ಲೇಖಿಸುವ ಪ್ರಮುಖ ಡೈಲಾಗ್‌ಗಳನ್ನು ತೆಗೆದುಹಾಕಲಾಗಿದ್ದು, ಈ ಬಗ್ಗೆ ನಿರ್ಮಾಪಕ ಕೆ. ವೆಂಕಟ ನಾರಾಯಣ ಪ್ರತಿಕ್ರಿಯೆ ನೀಡಿದ್ದಾರೆ.

ʻದಳಪತಿʼ ವಿಜಯ್ ಪುತ್ರನ ʻಸಿಗ್ಮಾʼ ಸಿನಿಮಾ ರಿಲೀಸ್‌ಗೆ ರೆಡಿ; ತಮಿಳುನಾಡು ಸಿಎಂ ಮಗ ಜೇಸನ್‌ ಸಂಜಯ್‌ ಡೈರೆಕ್ಟರ್‌ ಆಗಿದ್ದೇಕೆ?

ಸಿಎಂ ವಿಜಯ್ ಪುತ್ರ ಜೇಸನ್ ಸಂಜಯ್ ನಿರ್ದೇಶನದ 'ಸಿಗ್ಮಾ' ರಿಲೀಸ್‌ಗೆ ರೆಡಿ!

ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ ಅವರ ಪುತ್ರ ಜೇಸನ್ ಸಂಜಯ್ ತಮ್ಮ ಚೊಚ್ಚಲ ನಿರ್ದೇಶನದ 'ಸಿಗ್ಮಾ' ಚಿತ್ರದ ಮೂಲಕ ಚಿತ್ರರಂಗಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡುತ್ತಿದ್ದಾರೆ. ಲೈಕಾ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಸಂದೀಪ್ ಕಿಶನ್ ನಾಯಕನಾಗಿ ನಟಿಸಿರುವ ಈ ಸಿನಿಮಾ ಈಗಾಗಲೇ ಬಿಡುಗಡೆಗೆ ಸಿದ್ಧವಾಗಿದೆ.

ಕಾನೂನು ಹೋರಾಟದಲ್ಲಿ ʻಬಾಸ್‌ʼ ಚಿತ್ರತಂಡಕ್ಕೆ ಗೆಲುವು; ಸಿನಿಮಾ ಬಿಡುಗಡೆಗೆ ಹೈಕೋರ್ಟ್ ಹಸಿರು ನಿಶಾನೆ, ರಿಲೀಸ್‌ ಯಾವಾಗ?

ಹೈಕೋರ್ಟ್‌ನಲ್ಲಿ ‘ಬಾಸ್’ ಚಿತ್ರಕ್ಕೆ ಜಯ; ಟ್ರೇಲರ್‌ ರಿಲೀಸ್‌ಗೆ ಕ್ಷಣಗಣನೆ!

ʻಚಾಲೆಂಜಿಂಗ್ ಸ್ಟಾರ್ʼ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಲ್ಲಿಸಿದ್ದ ತಡೆಯಾಜ್ಞೆ ಅರ್ಜಿಯನ್ನು ವಜಾಗೊಳಿಸುವ ಮೂಲಕ ಕರ್ನಾಟಕ ಹೈಕೋರ್ಟ್ 'ಬಾಸ್' ಸಿನಿಮಾದ ಬಿಡುಗಡೆಗೆ ಮುಕ್ತ ಅನುಮತಿ ನೀಡಿದೆ. ಒಂದೂವರೆ ತಿಂಗಳ ಕಠಿಣ ಕಾನೂನು ಹೋರಾಟದ ನಂತರ ಸಿಕ್ಕ ಈ ಜಯವನ್ನು ಸಂವಿಧಾನದ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಸಂದ ಜಯ ಎಂದು ಚಿತ್ರತಂಡ ಬಣ್ಣಿಸಿದೆ.

K. N. Ganeshaiah: ʻಪುಣ್ಯಕೋಟಿ ಶತಕರುಣಿʼ ದೃಶ್ಯಕಾವ್ಯ ಲೋಕಾರ್ಪಣೆ; ಸುಧಾಮೂರ್ತಿ, ರಮೇಶ್ ಅರವಿಂದ್ ಶ್ಲಾಘನೆ

ʻಪುಣ್ಯಕೋಟಿ ಶತಕರುಣಿʼ ದೃಶ್ಯಕಾವ್ಯದ ಲೋಕಾರ್ಪಣೆ ಮಾಡಿದ ಸುಧಾಮೂರ್ತಿ-ರಮೇಶ್

ಕನ್ನಡಿಗರ ನೆಚ್ಚಿನ ‘ಧರಣಿ ಮಂಡಲ ಮಧ್ಯದೊಳಗೆ’ ಕಥೆಯನ್ನು ಹೊಸ ದೃಷ್ಟಿಕೋನದೊಂದಿಗೆ ಪರಿಸರ ವಿಜ್ಞಾನ ಮತ್ತು ಇತಿಹಾಸದ ಹಿನ್ನೆಲೆಯಲ್ಲಿ ಕೆ.ಎನ್. ಗಣೇಶಯ್ಯ ಅವರು ಮರುಸೃಷ್ಟಿಸಿದ್ದಾರೆ. ಬಾಲು ಚಂದ್ರಶೇಖರ್ ನಿರ್ದೇಶನದ "ಪುಣ್ಯಕೋಟಿ ಶತಕರುಣಿ" ದೃಶ್ಯಕಾವ್ಯವನ್ನು ಸುಧಾಮೂರ್ತಿ ಹಾಗೂ ರಮೇಶ್ ಅರವಿಂದ್ ಬಿಡುಗಡೆಗೊಳಿಸಿದ್ದಾರೆ.

ʻಲೈಫ್‌ ಟುಡೇʼ ಸಿನಿಮಾದ ಟ್ರೇಲರ್‌ ರಿಲೀಸ್;‌ ಲೇಖಾ ಚಂದ್ರ ನಟನೆಗೆ ರಾಷ್ಟ್ರ ಪ್ರಶಸ್ತಿ ಬರಬೇಕು ಎಂದ ತಬಲಾ ನಾಣಿ

ಲೇಖಾ ಚಂದ್ರ - ಕಿರಣ್‌ ನಟನೆಯ ʻಲೈಫ್ ಟುಡೇʼ ಸಿನಿಮಾ ಟ್ರೇಲರ್ ರಿಲೀಸ್‌

ಇಂದಿನ ಯುವ ಪೀಳಿಗೆಯ ಪ್ರೀತಿ ಹಾಗೂ ಸಂಬಂಧಗಳ ಏಳುಬೀಳುಗಳ ಕಥಾಹಂದರ ಹೊಂದಿರುವ, ಕಾಂತ ಕನ್ನಲ್ಲಿ ನಿರ್ದೇಶನದ ‘ಲೈಫ್ ಟುಡೇ’ ಚಿತ್ರದ ಟ್ರೇಲರ್ ಅಧಿಕೃತವಾಗಿ ಅನಾವರಣಗೊಂಡಿದೆ. ಕಿರಣ್ ಆದಿತ್ಯ ಹಾಗೂ ಲೇಖಾ ಚಂದ್ರ ಮುಖ್ಯ ಪಾತ್ರದಲ್ಲಿರುವ ಈ ಚಿತ್ರವು ಆಗಸ್ಟ್ 6 ರಂದು ರಾಜ್ಯಾದ್ಯಂತ ಅದ್ಧೂರಿಯಾಗಿ ಬಿಡುಗಡೆಯಾಗಲಿದೆ.

ʻರಾಗಿಣಿ MMS 3' ಸಿನಿಮಾಗೆ ನಾಯಕಿಯಾದ ನಟಿ ತಮನ್ನಾ ಭಾಟಿಯಾ; ಲಂಡನ್‌ನಲ್ಲಿ ಶೂಟಿಂಗ್‌ ಶುರು

ʻರಾಗಿಣಿ MMS 3' ಚಿತ್ರಕ್ಕೆ ತಮನ್ನಾ ಭಾಟಿಯಾ ನಾಯಕಿ

ಬಾಲಾಜಿ ಮೋಷನ್ ಪಿಕ್ಚರ್ಸ್ ಸಂಸ್ಥೆಯು ತನ್ನ ಯಶಸ್ವಿ ಹಾರರ್ ಫ್ರಾಂಚೈಸಿ ‘ರಾಗಿಣಿ MMS’ನ ಮೂರನೇ ಭಾಗವನ್ನು ಅಧಿಕೃತವಾಗಿ ಪ್ರಕಟಿಸಿದೆ. ಶಶಾಂಕ ಘೋಷ್ ನಿರ್ದೇಶನದ ಈ ಡೇಟ್ ನೈಟ್ ಹಾರರ್ ಸಿನಿಮಾದಲ್ಲಿ ತಮನ್ನಾ ಭಾಟಿಯಾ ಮತ್ತು ಜುನೈದ್ ಖಾನ್ ಮೊದಲ ಬಾರಿಗೆ ಜೋಡಿಯಾಗಿ ನಟಿಸುತ್ತಿದ್ದಾರೆ.

Loading...