ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad
Profile

Avinash GR

Senior Digital Content Editor

[email protected]

ಅವಿನಾಶ್‌ ಜಿ ಆರ್ ಅವರು ಕುವೆಂಪು ವಿಶ್ವವಿದ್ಯಾಲಯದಲ್ಲಿ ಚಿನ್ನದ ಪದಕದೊಂದಿಗೆ ಪತ್ರಿಕೋದ್ಯಮ ಸ್ನಾತಕೋತ್ತರ ಪದವಿಯವನ್ನು ಪಡೆದುಕೊಂಡಿದ್ದಾರೆ. ಕಳೆದ ೧೪ ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದಾರೆ. ವಿಜಯವಾಣಿ ಪತ್ರಿಕೆಯಲ್ಲಿ 2 ವರ್ಷ ಸಿನಿಮಾ ವರದಿಗಾರನಾಗಿ, 4 ವರ್ಷ ಸಿನಿಮಾ ವಿಭಾಗದ ಮುಖ್ಯಸ್ಥನಾಗಿ ಕೆಲಸ ಮಾಡಿದ್ದಾರೆ. ʻವಿಜಯ ಕರ್ನಾಟಕʼ ವೆಬ್‌ನಲ್ಲಿ 6 ವರ್ಷ ಎಂಟರ್‌ಟೇನ್‌ಮೆಂಟ್ ವಿಭಾಗದಲ್ಲಿ ‌ʻಸೀನಿಯರ್ ಡಿಜಿಟಲ್‌ ಕಂಟೆಂಟ್ ಪ್ರೊಡ್ಯೂಸರ್ʼ ಆಗಿ ಕೆಲಸ ಮಾಡಿದ್ದಾರೆ. ಸಂದರ್ಶನಗಳು, ಸಿನಿಮಾ ವಿಮರ್ಶೆಗಳು, ಚಿತ್ರರಂಗ ಮತ್ತು ಕಿರುತೆರೆ ಕ್ಷೇತ್ರಕ್ಕೆ ಸಂಬಂಧಿಸಿದ ವಿಶ್ಲೇಷಣೆ, ಅಂಕಣಗಳನ್ನು ಬರೆದಿದ್ದಾರೆ. ಸಿನಿಮಾ ವರದಿಗಾರಿಕೆ ಜೊತೆಗೆ ರಾಜಕೀಯ, ಪ್ರವಾಸ, ಓದು ಇವರ ಆಸಕ್ತಿಗಳಾಗಿವೆ. ಪ್ರಸ್ತುತ ʻವಿಶ್ವವಾಣಿʼ ಡಿಜಿಟಲ್‌ನಲ್ಲಿ ʻಸೀನಿಯರ್‌ ಡಿಜಿಟಲ್‌ ಕಂಟೆಂಟ್‌ ಎಡಿಟರ್‌ʼ ಆಗಿ ಕೆಲಸ ಮಾಡುತ್ತಿದ್ದಾರೆ.

Articles
‘ಉಳಿದದ್ದನ್ನು ಕಾಲ, ಕರ್ಮಕ್ಕೆ ಬಿಡುತ್ತೇನೆ’; ನಟ ʻದುನಿಯಾʼ ವಿಜಯ್‌ಗೆ ಡಿವೋರ್ಸ್ ನೀಡಿದ ಬಳಿಕ ನಾಗರತ್ನ ಸುದೀರ್ಘ ಪತ್ರ!

ಡಿವೋರ್ಸ್ ಬಳಿಕ 'ದುನಿಯಾ' ವಿಜಯ್‌ ಮಾಜಿ ಪತ್ನಿ ನಾಗರತ್ನ ಶಾಕಿಂಗ್‌ ಪೋಸ್ಟ್‌

‌ʻದುನಿಯಾʼ ವಿಜಯ್ ಪ್ರಕರಣದಲ್ಲಿ 27 ವರ್ಷಗಳ ಸುದೀರ್ಘ ದಾಂಪತ್ಯಕ್ಕೆ ಹೈಕೋರ್ಟ್ ಕಾನೂನಾತ್ಮಕ ಅಂತ್ಯ ಹಾಡಿದೆ. ತೀರ್ಪಿನ ಬೆನ್ನಲ್ಲೇ ಮಾಜಿ ಪತ್ನಿ ನಾಗರತ್ನ ಮಕ್ಕಳ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಸುದೀರ್ಘ ಪತ್ರ ಬರೆದು ತಮ್ಮ ಆಕ್ರೋಶ ಹೊರಹಾಕಿದ್ದಾರೆ. ಅನೈತಿಕ ಸಂಬಂಧವನ್ನು ಅಧಿಕೃತಗೊಳಿಸಲು ವಿಚ್ಛೇದನ ಪಡೆಯಲಾಗಿದೆ ಎಂದು ಆಪಾದಿಸಿದ್ದಾರೆ.

‘ಯಶ್ ನಮ್ ಹುಡುಗ, ಅವ್ನು ಸಾಧನೆ ಮಾಡಿದ್ರೆ, ನನ್ನ ತಮ್ಮ ಸಾಧಿಸಿದಂತೆ..’: ‘ಟಾಕ್ಸಿಕ್‌’ ಚಿತ್ರಕ್ಕೆ ಶಿವರಾಜ್‌ಕುಮಾರ್ ಫುಲ್‌ಮಾರ್ಕ್ಸ್‌!

‘ಮೇಕಿಂಗ್ ಅದ್ಭುತ, ಯಶ್ ಸೂಪರ್'; `ಟಾಕ್ಸಿಕ್' ಚಿತ್ರಕ್ಕೆ ಶಿವಣ್ಣ ಬಹುಪರಾಕ್

ಯಶ್‌ ನಟನೆಯ ʻಟಾಕ್ಸಿಕ್‌ʼ ಸಿನಿಮಾವನ್ನ ವೀಕ್ಷಿಸಿದ ʻಹ್ಯಾಟ್ರಿಕ್ ಹೀರೋʼ ಶಿವರಾಜ್‌ಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸ್ವತಃ ಟಿಕೆಟ್ ಖರೀದಿಸಿ ಚಿತ್ರ ವೀಕ್ಷಿಸಿದ ಅವರು, ಯಶ್ ತಮ್ಮನಿದ್ದಂತೆ, ಆತನ ಸಾಧನೆ ತಮಗೆ ಹೆಮ್ಮೆ ತಂದಿದೆ ಎಂದಿದ್ದಾರೆ. ಚಿತ್ರದ ಮೇಕಿಂಗ್ ಹಾಗೂ ಕೊನೆಯ ಇಪ್ಪತ್ತು ನಿಮಿಷಗಳ ನಿರೂಪಣೆಯನ್ನು ಕೊಂಡಾಡಿದ ಶಿವಣ್ಣ, ಚಿತ್ರಮಂದಿರದಲ್ಲೇ ಸಿನಿಮಾ ನೋಡಲು ಕರೆ ನೀಡಿದ್ದಾರೆ.

ಯಶ್‌ ನಟನೆಯ ʻಟಾಕ್ಸಿಕ್‌ʼ ಇಂಗ್ಲಿಷ್‌ ವರ್ಷನ್‌ ರಿಲೀಸ್‌ಗೆ ಕೂಡಿಬಂತು ಮೂಹೂರ್ತ; ರನ್‌ಟೈಮ್‌ನಲ್ಲಿ 17 ನಿಮಿಷ ಕಟ್‌ ಮಾಡಿದ್ದೇಕೆ?

Yash: ʻಟಾಕ್ಸಿಕ್‌ʼ ಇಂಗ್ಲಿಷ್‌ ವರ್ಷನ್‌ ರಿಲೀಸ್‌ಗೆ ಕೂಡಿಬಂತು ಮೂಹೂರ್ತ!

Yash: ʻಟಾಕ್ಸಿಕ್‌ʼ ಸಿನಿಮಾದ ಇಂಗ್ಲಿಷ್‌ ವರ್ಷನ್‌ ಅನ್ನು ಭಾರತದ ಆಯ್ದ ಚಿತ್ರಮಂದಿರಗಳಲ್ಲಿ ಸೆಪ್ಟೆಂಬರ್ 4 ರಂದು ರಿಲೀಸ್‌ ಮಾಡಲು ಚಿತ್ರತಂಡ ಸಜ್ಜಾಗಿದೆ. ಜಾಗತಿಕ ವೀಕ್ಷಕರ ಅಭಿರುಚಿಗೆ ತಕ್ಕಂತೆ ಭಾರತೀಯ ಆವೃತ್ತಿಗಿಂತ 17 ನಿಮಿಷಗಳನ್ನು ಕತ್ತರಿಸಿ 2 ಗಂಟೆ 57 ನಿಮಿಷಗಳಿಗೆ ಸಿನಿಮಾದ ಅವಧಿಯನ್ನು ಇಳಿಸಲಾಗಿದೆ.

Photos: ಸದ್ದಿಲ್ಲದೇ ಕರಾವಳಿ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ʻಜೋಡಿ ಹಕ್ಕಿʼ ಸೀರಿಯಲ್‌ ಖ್ಯಾತಿಯ ಚೈತ್ರಾ ರಾವ್‌

Photos: ʻಜೋಡಿ ಹಕ್ಕಿʼ ಧಾರಾವಾಹಿ ಖ್ಯಾತಿಯ ನಟಿ ಚೈತ್ರಾ ರಾವ್‌ಗೆ ಮದುವೆ

ಕಿರುತೆರೆಯ ಜನಪ್ರಿಯ ನಟಿ ಚೈತ್ರಾ ರಾವ್ ಸದ್ದಿಲ್ಲದೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಕರಾವಳಿ ಸಂಪ್ರದಾಯದಂತೆ ದೇವಾಲಯವೊಂದರಲ್ಲಿ ಅತ್ಯಂತ ಸರಳವಾಗಿ ಸಪ್ತಪದಿ ತುಳಿದಿದ್ದಾರೆ. 'ಜೋಡಿ ಹಕ್ಕಿ' ಧಾರಾವಾಹಿಯ 'ಜಾನಕಿ ಟೀಚರ್' ಎಂದೇ ಪ್ರಸಿದ್ಧಿ ಪಡೆದು ಕನ್ನಡಿಗರ ಮನಗೆದ್ದ ಪ್ರತಿಭಾವಂತ ನಟಿ ಚೈತ್ರಾ ರಾವ್. ಅಷ್ಟೇ ಅಲ್ಲದೆ, ಇತ್ತೀಚೆಗಷ್ಟೇ ಮುಕ್ತಾಯಗೊಂಡ 'ಭಾರ್ಗವಿ ಎಲ್‌ಎಲ್‌ಬಿ' ಧಾರಾವಾಹಿಯಲ್ಲೂ 'ಬೃಂದಾ' ಎಂಬ ನೆಗೆಟಿವ್ ಪಾತ್ರದ ಮೂಲಕ ಗಮನ ಸೆಳೆದಿದ್ದರು. ಈ ಧಾರಾವಾಹಿ ಅಂತ್ಯಗೊಂಡ ಬೆನ್ನಲ್ಲೇ, ಚೈತ್ರಾ ರಾವ್ ತಮ್ಮ ಬದುಕಿನ ಹೊಸ ಪಯಣವನ್ನು ಆರಂಭಿಸುವ ಮೂಲಕ ಅಭಿಮಾನಿಗಳಿಗೆ ಸಿಹಿ ಸುದ್ದಿ ನೀಡಿದ್ದಾರೆ. ಅವರ ಮದುವೆಯ ಸುಂದರ ಕ್ಷಣಗಳ ಫೋಟೋ ಆಲ್ಬಂ ಇಲ್ಲಿದೆ ನೋಡಿ...

ನಟ ನಿರಂಜನ್‌ ಸುಧೀಂದ್ರಗೆ ʻಸ್ಯಾಂಡಲ್‌ವುಡ್‌ ಹೃತಿಕ್‌ ರೋಷನ್‌ʼ ಅಂತ ಹೇಳಿದ್ಯಾರು? ʻಸ್ಪಾರ್ಕ್‌ʼ ಚಿತ್ರದ ಹೊಸ ಹಾಡು ರಿಲೀಸ್‌

ನಿರಂಜನ್‌ ಸುಧೀಂದ್ರ ನಟನೆಯ ʻಸ್ಪಾರ್ಕ್‌ʼ ಚಿತ್ರದ ಹೊಸ ಹಾಡು ರಿಲೀಸ್‌

ಕಾರ್ಯಕ್ರಮದಲ್ಲಿ ನಿರಂಜನ್ ಸುಧೀಂದ್ರ ಹಾಗೂ ರಚನಾ ಇಂದರ್ ನಟನೆಯ ʻಸ್ಪಾರ್ಕ್‌ʼ ಚಿತ್ರದ 'ಮಧುರ ಮುಗುಳುನಗೆ' ಗೀತೆಯನ್ನು ಉಪೇಂದ್ರ ಅವರ ತಾಯಿ ಅನಸೂಯಮ್ಮ ಲೋಕಾರ್ಪಣೆಗೊಳಿಸಿದರು. ನಿರಂಜನ್ ಅವರ ನೃತ್ಯ ಹಾಗೂ ಸಾಹಸ ಮೆಚ್ಚಿದ ಡಾರ್ಲಿಂಗ್ ಕೃಷ್ಣ ಅವರನ್ನು ಕನ್ನಡದ ಹೃತಿಕ್ ರೋಷನ್ ಎಂದು ಕರೆದರೆ, ಪ್ರಿಯಾಂಕಾ ಉಪೇಂದ್ರ ತಮ್ಮ ಮಗನಿಗೂ ನಿರಂಜನ್ ಮಾದರಿ ಎಂದರು.

ಪ್ರಭಾಸ್‌ ನಟನೆಯ 'ಸ್ಪಿರಿಟ್‌' ಸಿನಿಮಾದಲ್ಲಿ ವಾಸುಕಿ ವೈಭವ್‌ ಹಾಡು; ಕನ್ನಡದ ಪ್ರತಿಭೆಗೆ ಟಾಲಿವುಡ್‌ನಲ್ಲಿ ಭಾರಿ ಮೆಚ್ಚುಗೆ

ಪ್ರಭಾಸ್‌ ನಟನೆಯ 'ಸ್ಪಿರಿಟ್‌' ಚಿತ್ರಕ್ಕೆ ಹಾಡು ಸಂಯೋಜಿಸಿದ ವಾಸುಕಿ ವೈಭವ್‌

ಪ್ರಭಾಸ್‌ ನಟನೆಯ ಬಹುನಿರೀಕ್ಷಿತ ʻಸ್ಪಿರಿಟ್ʼ‌ ಸಿನಿಮಾಕ್ಕೆ ಕನ್ನಡದ ವಾಸು‌ಕಿ ವೈಭವ್ ಎಂಟ್ರಿ ಕೊಟ್ಟಿದ್ದಾರೆ. ʻಸ್ಪಿರಿಟ್ʼ‌ ಸಿನಿಮಾದಲ್ಲಿ ವಾಸುಕಿ ಸಂಯೋಜಿಸಿರುವ ಹಾಡೊಂದು ಇರಲಿದ್ದು, ಅದು ಚಿತ್ರಮಂದಿರಗಳಲ್ಲಿ ದೊಡ್ಡ ಸಂಚಲನ ಸೃಷ್ಟಿಸಲಿದೆ ಎಂದು ನಿರ್ದೇಶಕ ಸಂದೀಪ್‌ ರೆಡ್ಡಿ ವಂಗಾ ಭರವಸೆ ವ್ಯಕ್ತಪಡಿಸಿದ್ದಾರೆ.

ʻಇಲ್ಲಿಂದ ಹೊಸ ಬದುಕಿನ ಪ್ರಯಾಣದತ್ತ ಹೆಜ್ಜೆ ಹಾಕುತ್ತಿದ್ದೇನೆ..ʼ; ವಿಚ್ಛೇದನ ತೀರ್ಪು ಬಂದ ಮೇಲೆ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ಪತ್ನಿಯಿಂದ ವಿಚ್ಛೇದನ ಸಿಕ್ಕ ಮೇಲೆ ನಟ ʻದುನಿಯಾʼ ವಿಜಯ್‌ ಮೊದಲ ಪ್ರತಿಕ್ರಿಯೆ

ʻದುನಿಯಾʼ ವಿಜಯ್‌ ಅವರ ವಿಚ್ಛೇದನ ಪ್ರಕರಣ ಕೊನೆಗೂ ಹೈಕೋರ್ಟ್ ವಿಭಾಗೀಯ ಪೀಠದಲ್ಲಿ ಇತ್ಯರ್ಥಗೊಂಡಿದ್ದು, ದಂಪತಿಗೆ ವಿಚ್ಛೇದನ ಮಂಜೂರಾಗಿದೆ. ಪತ್ನಿ ನಾಗರತ್ನ ಅವರಿಗೆ 2 ಕೋಟಿ ರೂ. ಖಾಯಂ ಜೀವನಾಂಶ ಪಾವತಿಸಲು ನ್ಯಾಯಾಲಯ ಸೂಚಿಸಿದೆ. ತೀರ್ಪಿಗೆ ತಲೆಬಾಗಿ ಗೌರವ ವ್ಯಕ್ತಪಡಿಸಿರುವ ನಟ ವಿಜಯ್, ತಮ್ಮ ಮೇಲಾದ ಮಾನಸಿಕ ಕ್ರೌರ್ಯವನ್ನು ಕೋರ್ಟ್ ಪರಿಗಣಿಸಿದೆ ಎಂದಿದ್ದಾರೆ.

ಯುಕೆ, ಕೆನಡಾ, ಸಿಂಗಾಪುರಕ್ಕೆ ಜಿಯೋಹಾಟ್‌ಸ್ಟಾರ್‌ ಲಗ್ಗೆ: ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸ್ಟ್ರೀಮಿಂಗ್‌ ಕ್ರಾಂತಿ

ಜಾಗತಿಕ ಮಾರುಕಟ್ಟೆಗೆ ಲಗ್ಗೆ ಇಟ್ಟ ಜಿಯೋಹಾಟ್‌ಸ್ಟಾರ್‌

ಜಿಯೋಹಾಟ್‌ಸ್ಟಾರ್‌ ಸ್ಟ್ರೀಮಿಂಗ್ ವೇದಿಕೆ ಯುಕೆ, ಕೆನಡಾ ಮತ್ತು ಸಿಂಗಾಪುರ ದೇಶಗಳಿಗೆ ಅಧಿಕೃತವಾಗಿ ವಿಸ್ತರಣೆಯಾಗಿದ್ದು, ಜಾಗತಿಕ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಮೂಡಿಸಿದೆ. 12ಕ್ಕೂ ಹೆಚ್ಚು ಭಾಷೆಗಳಲ್ಲಿ ಬರೋಬ್ಬರಿ 1.60 ಲಕ್ಷ ಗಂಟೆಗಳ ಭಾರತೀಯ ಕಾರ್ಯಕ್ರಮಗಳನ್ನು ಹೊತ್ತು ತಂದಿದೆ.

ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್' ಸಿನಿಮಾಗೆ ಸಾಥ್ ನೀಡಿದ ಹೊಂಬಾಳೆ ಫಿಲ್ಮ್ಸ್; ಕನ್ನಡ ಸಂಸ್ಥೆಯ ಮಡಿಲಿಗೆ ವಿದೇಶಿ ಹಕ್ಕುಗಳು!

ಬ್ಲಾಕ್‌ಬಸ್ಟರ್ 'ಹನುಮಾನ್ ಅಂಶ್' ಸಿನಿಮಾಗೆ ಹೊಂಬಾಳೆ ಫಿಲ್ಮ್ಸ್ ಸಾಥ್!

ಹೊಂಬಾಳೆ ಫಿಲ್ಮ್ಸ್ ಸಂಸ್ಥೆಯು ನೀಮ್ ಕರೋಲಿ ಬಾಬಾ ಅವರ ಜೀವನಾಧಾರಿತ ‘ಹನುಮಾನ್ ಅಂಶ್’ ಚಿತ್ರದ ಅಂತಾರಾಷ್ಟ್ರೀಯ ಹಕ್ಕುಗಳನ್ನು ಪಡೆದುಕೊಂಡಿದೆ. ದೇಶಿಯ ಗಲ್ಲಾಪೆಟ್ಟಿಗೆಯಲ್ಲಿ ಬರೋಬ್ಬರಿ 63.82 ಕೋಟಿ ರೂಪಾಯಿ ಗಳಿಸಿ ಸದ್ದು ಮಾಡಿರುವ ಈ ಭಕ್ತಿಪ್ರಧಾನ ಸಿನಿಮಾ, ಸೆಪ್ಟೆಂಬರ್ 11ರಂದು ವಿಶ್ವದಾದ್ಯಂತ ತೆರೆಕಾಣಲಿದೆ.

ನಟ ‘ದುನಿಯಾ’ ವಿಜಯ್ - ನಾಗರತ್ನ ದಾಂಪತ್ಯ ಬದುಕಿಗೆ ಅಂತ್ಯ: ವಿಚ್ಛೇದನ ಮಂಜೂರು ಮಾಡಿದ ಹೈಕೋರ್ಟ್‌, 2 ಕೋಟಿ ಜೀವನಾಂಶಕ್ಕೆ ಆದೇಶ!

‘ದುನಿಯಾ’ ವಿಜಯ್ - ನಾಗರತ್ನ ದಂಪತಿಗೆ ಡಿವೋರ್ಸ್‌ ಮಂಜೂರು ಮಾಡಿದ ಹೈಕೋರ್ಟ್

ʻದುನಿಯಾʼ ವಿಜಯ್‌ ವಿಚ್ಚೇದನ ಪ್ರಕರಣಕ್ಕೆ ಹೈಕೋರ್ಟ್ ವಿಭಾಗೀಯ ಪೀಠವು ಅಧಿಕೃತವಾಗಿ ಮುಕ್ತಾಯ ಹಾಡಿದೆ. ದೀರ್ಘಾವಧಿಯ ಕೌಟುಂಬಿಕ ಬಿರುಕು ಹಾಗೂ ಕಾನೂನು ಪ್ರಕ್ರಿಯೆಯನ್ನು ಪರಿಶೀಲಿಸಿದ ನ್ಯಾಯಾಲಯ, ಪತ್ನಿ ನಾಗರತ್ನ ಅವರಿಗೆ ಎರಡು ಕೋಟಿ ರೂಪಾಯಿ ಪರಿಹಾರ ಧನ ನೀಡುವಂತೆ ನಟನಿಗೆ ವಿಧಿಸಿದೆ.

'ಬಿಗ್‌ ಬಾಸ್‌' ಖ್ಯಾತಿಯ ರಾಶಿಕಾ ಶೆಟ್ಟಿಗೆ ತಂದೆಯಾದ ರವಿಚಂದ್ರನ್;‌ 'ಪ್ಯಾರ್‌' ಚಿತ್ರದಲ್ಲಿದೆ ಅಪ್ಪ-ಮಗಳ ಎಮೋಷನಲ್‌ ಕಥೆ

ʻಪ್ಯಾರ್‌ʼ ಚಿತ್ರದಲ್ಲಿ ʻಬಿಗ್‌ ಬಾಸ್‌ʼ ರಾಶಿಕಾಗೆ ತಂದೆಯಾದ ನಟ ರವಿಚಂದ್ರನ್

ʻಪ್ಯಾರ್‌ʼ ಸಿನಿಮಾದ ಟೀಸರ್‌ ಬಿಡುಗಡೆಯಾಗಿದ್ದು, ʻಕ್ರೇಜಿ ಸ್ಟಾರ್ʼ ರವಿಚಂದ್ರನ್ ಹಾಗೂ ಬಿಗ್ ಬಾಸ್ ಖ್ಯಾತಿಯ ರಾಶಿಕಾ ಶೆಟ್ಟಿ ಅಪ್ಪ-ಮಗಳಾಗಿ ಕಾಣಿಸಿಕೊಂಡಿದ್ದಾರೆ. ಎಸ್. ಸುಪ್ರೀತ್ ನಿರ್ದೇಶನದ ಈ ಚಿತ್ರದಲ್ಲಿ ತಂದೆಗಾಗಿ ಜೀವವನ್ನೇ ಪಣಕ್ಕಿಡುವ ಮಗಳ ಎಮೋಷನಲ್‌ ಕಥೆಯಿದೆ.

ನಟ 'ದುನಿಯಾ' ವಿಜಯ್ ಪುತ್ರ ಸಾಮ್ರಾಟ್‌ ವಿರುದ್ಧ FIR! ಯಾವೆಲ್ಲಾ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್‌ ದಾಖಲು?

'ದುನಿಯಾ' ವಿಜಯ್ ಪುತ್ರ ಸಾಮ್ರಾಟ್ ‌ಮೇಲೆ ದೂರು! ಎಫ್‌ಐಆರ್‌ನಲ್ಲಿ ಏನೇನಿದೆ?

ಸ್ಯಾಂಡಲ್‌ವುಡ್ ನಟ ದುನಿಯಾ ವಿಜಯ್ ಪುತ್ರ ಸಾಮ್ರಾಟ್ ವಿರುದ್ಧ ಅಪಹರಣ ಹಾಗೂ ಹಲ್ಲೆ ಆರೋಪ ಹೊರಿಸಲಾಗಿದೆ. ಓವರ್‌ಟೇಕ್ ಜಗಳಕ್ಕೆ ಸಂಬಂಧಿಸಿ ಮನೀಶ್ ಗೌಡ ಎಂಬ ವಿದ್ಯಾರ್ಥಿಯನ್ನು ಎಳೆದೊಯ್ದು, ತಲೆ, ಎದೆಗೆ ಹೊಡೆದು ಗಾಯಗೊಳಿಸಿದ ಆರೋಪದಡಿ ಕೆಂಗೇರಿ ಠಾಣೆಯಲ್ಲಿ ವಿವಿಧ ಸೆಕ್ಷನ್‌ಗಳಡಿ ಕೇಸ್ ದಾಖಲಾಗಿದೆ.

‘ನಂದಗೋಕುಲ’ ಧಾರಾವಾಹಿಗೆ ನಟ ಯಶವಂತ್‌ ಗುಡ್‌ಬೈ ಹೇಳೋದಕ್ಕೆ ʻಬಿಗ್‌ ಬಾಸ್‌ʼ ಶೋ ಕಾರಣವೇ? ದೊಡ್ಮನೆಯಿಂದ ಕೇಶವನಿಗೆ ಬಂದೈತಾ ಆಫರ್?

ʻಬಿಗ್‌ ಬಾಸ್‌ 13ʼ ಶೋಗಾಗಿ ‘ನಂದಗೋಕುಲ’ ಧಾರಾವಾಹಿ ಬಿಟ್ರಾ ನಟ ಯಶವಂತ್‌?

‘ನಂದಗೋಕುಲ’ ಧಾರಾವಾಹಿಯಿಂದ ನಟ ಯಶವಂತ್‌ ಹೊರಬಂದಿದ್ದು, ಬಿಗ್ ಬಾಸ್ ಮನೆಗೆ ಹೋಗುವ ವದಂತಿಗಳಿಗೆ ತೆರೆ ಎಳೆದಿದ್ದಾರೆ. ರಿಯಾಲಿಟಿ ಶೋ ಪ್ರವೇಶಿಸಿದರೆ ನಟನ ನೈಜ ಸ್ವಭಾವವೇ ಬಯಲಾಗಿ ಕಲಾ ಬದುಕು ಅಂತ್ಯಗೊಳ್ಳುತ್ತದೆ ಎಂದಿರುವ ಅವರು, ಯಾವುದೇ ಪ್ರಚಾರದ ಗೀಳಿಲ್ಲದೆ, ಬೆಳ್ಳಿತೆರೆಯಲ್ಲಿ ನೆಲೆ ಕಂಡುಕೊಳ್ಳುವ ಇರಾದೆಯನ್ನು ಹೊಂದಿದ್ದಾರೆ.

ʻಜೋಗಿʼ ಪ್ರೇಮ್ - `ಕಿಚ್ಚ' ಸುದೀಪ್ ಕಾಂಬಿನೇಷನ್‌ನಲ್ಲಿ ಹೊಸ ಸಿನಿಮಾ ಘೋಷಣೆ; ಅಕ್ಟೋಬರ್ 20ಕ್ಕೆ ಅದ್ಧೂರಿ ಮುಹೂರ್ತ!‌

ಸುದೀಪ್ -ʻಜೋಗಿʼ ಪ್ರೇಮ್ ಧಮಾಕಾ; ಕಿಚ್ಚನ ಬರ್ತ್‌ಡೇಗೆ ಸಿಕ್ತು ಸಖತ್ ಗಿಫ್ಟ್

ಕಿಚ್ಚ ಸುದೀಪ್‌ ಮತ್ತು ʻಜೋಗಿʼ ಪ್ರೇಮ್‌ ಜೋಡಿ ಮತ್ತೆ ಒಂದಾಗಿದೆ. ಪ್ರೇಮ್ ನಿರ್ದೇಶನದ 10ನೇ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದ್ದು, ನಟ ಸುದೀಪ್ ಜನ್ಮದಿನದ ಪ್ರಯುಕ್ತ ಈ ಸರ್ಪ್ರೈಸ್ ಸಿಕ್ಕಿದೆ. ಅಕ್ಟೋಬರ್ 20ರಂದು ಅದ್ಧೂರಿ ಮುಹೂರ್ತ ನಿಗದಿಯಾಗಿದೆ. ಇಂದಿನ ತಲೆಮಾರಿನ ಕೌಟುಂಬಿಕ ಎಮೋಷನಲ್ ಕಥೆಯನ್ನು ತೆರೆಗೆ ತರಲು ಸಜ್ಜಾಗಿದ್ದಾರೆ ಪ್ರೇಮ್.

‘Mr. ಜಾಕ್’ ಆಗಿ ತೆರೆಮೇಲೆ ಮೋಡಿ ಮಾಡಲು ಬಂದ ‘ಫಸ್ಟ್ ರ‍್ಯಾಂಕ್ ರಾಜು’ ಖ್ಯಾತಿಯ ನಟ ಗುರುನಂದನ್‌!

‘Mr. ಜಾಕ್’ ಚಿತ್ರದ ಮೂಲಕ ನಿರ್ಮಾಪಕರಾದ ನಟ ಗುರುನಂದನ್‌

ನಟ ಗುರುನಂದನ್‌ ಅವರು ‘Mr. ಜಾಕ್’ ಚಿತ್ರದ ಮೂಲಕ ಮರಳಿದ್ದು, ಗೆಳೆಯರೊಡನೆ ‘ಮಂಡಿಮನೆ ಟಾಕೀಸ್’ ಸ್ಥಾಪಿಸಿ ಸ್ವತಃ ನಿರ್ಮಾಪಕರಾಗಿದ್ದಾರೆ. ಸುಮಂತ್ ಗೌಡ ನಿರ್ದೇಶನದ ಈ ಕೌಟುಂಬಿಕ ಹಾಸ್ಯ ಕಥೆಯಲ್ಲಿ ವೈವಾಹಿಕ ಬದುಕಿನ ಏರಿಳಿತ, ವಿಚ್ಛೇದನದ ಗಂಭೀರ ವಿಷಯ ಹಾಸ್ಯದ ಮೂಲಕ ಹೇಳಲಾಗಿದೆಯಂತೆ. ನಾಯಕಿಯಾಗಿ ತಪಸ್ವಿನಿ ಪೂಣಚ್ಛ ನಟಿಸಿದ್ದಾರೆ.

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ರಿಲೀಸ್; ಚಿತ್ರತಂಡಕ್ಕೆ ನಟ ಪ್ರಮೋದ್ ಶೆಟ್ಟಿ ಶುಭ ಹಾರೈಕೆ

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ರಿಲೀಸ್ ಮಾಡಿದ ಪ್ರಮೋದ್ ಶೆಟ್ಟಿ

‘ಅನಿರೀಕ್ಷಿತ ಅತಿಥಿಗಳು’ ಚಿತ್ರದ ಟ್ರೇಲರ್ ಲೋಕಾರ್ಪಣೆಗೊಂಡಿದ್ದು, ನಟ ಪ್ರಮೋದ್ ಶೆಟ್ಟಿ ಶುಭಕೋರಿದ್ದಾರೆ. ಚಿತ್ರಕ್ಕೆ 'ಎ' ಪ್ರಮಾಣಪತ್ರ ದೊರೆತಿದ್ದರೂ ಪ್ರತಿಯೊಬ್ಬರ ನೈಜ ಬದುಕಿನ ಎಚ್ಚರಿಕೆಯ ಪಾಠವಿದು ಎಂದಿದ್ದಾರೆ ನಿರ್ದೇಶಕ ಮನೋಜ್. ಪುನೀತ್ ರಾಜ್‌ಕುಮಾರ್ ಆಶೀರ್ವಾದ ನೆನೆದು ನಾಯಕ ಜಗ್ಗಿ ಭಾವುಕರಾಗಿದ್ದು, ಸಂಪ್ರತಿ ಆಳ್ವಾ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ನಟ ದರ್ಶನ್‌ಗೆ ಸಣ್ಣ ರಿಲೀಫ್: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್; ಅಷ್ಟಕ್ಕೂ ಆಗಿದ್ದೇನು?

Darshan Case: ಸಾಕ್ಷಿ ಹೇಳಲು ಕೋರ್ಟ್‌ತನಕ ಬಂದು ಜೈಲಿಗೆ ವಾಪಸಾದ ಪ್ರದೋಷ್!

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಮಾಫಿ ಸಾಕ್ಷಿಯಾಗಿರುವ ಎ-14 ಆರೋಪಿ ಪ್ರದೋಷ್ ಸಾಕ್ಷಿ ಹೇಳುವ ಪ್ರಕ್ರಿಯೆ ಸದ್ಯ ಮುಂದೂಡಿಕೆ ಆಗಿದೆ. ದರ್ಶನ್ ಪರ ವಕೀಲರ ತುರ್ತು ಅರ್ಜಿಯ ತೀರ್ಪನ್ನು ಹೈಕೋರ್ಟ್ ಕಾಯ್ದಿರಿಸಿದ ಹಿನ್ನೆಲೆಯಲ್ಲಿ, ಹೇಳಿಕೆ ದಾಖಲಿಸಲು ನ್ಯಾಯಾಲಯಕ್ಕೆ ಬಂದಿದ್ದ ಪ್ರದೋಷ್ ಮತ್ತೆ ಪರಪ್ಪನ ಅಗ್ರಹಾರ ಜೈಲಿಗೆ ಮರಳಿದ್ದಾರೆ.

'ಅಲ್ಲು ಅರವಿಂದ್ ಮಾತನ್ನು ವಿವಾದ ಮಾಡುವವರು ಅಹಂ ಇರುವ ಜನರು ಮಾತ್ರ'; ಯಶ್‌ ತಾಯಿ ಹೇಳಿಕೆಗೆ ರಾಮ್‌ ಗೋಪಾಲ್‌ ವರ್ಮಾ ತಿರುಗೇಟು!

ನಟ ಯಶ್ ತಾಯಿ ಮಾತಿಗೆ ಆರ್‌ಜಿವಿ ತಿರುಗೇಟು; ಅಲ್ಲು ಅರವಿಂದ್‌ಗೆ ಸಪೋರ್ಟ್!

ʻಕೆಜಿಎಫ್ʼ ಚಿತ್ರಕ್ಕೂ ಮೊದಲು ಯಶ್ ಅಪರಿಚಿತರಾಗಿದ್ದರು ಎಂಬ ಅಲ್ಲು ಅರವಿಂದ್ ಹೇಳಿಕೆಗೆ ಯಶ್ ತಾಯಿ ಆಕ್ರೋಶ ಹೊರಹಾಕಿದ್ದರು. ಆದರೆ ಇದೀಗ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಈ ವಿಷಯದ ಬಗ್ಗೆ ಮಾತನಾಡಿದ್ದಾರೆ. ಅಲ್ಲು ಅರವಿಂದ್‌ ಹೇಳಿಕೆಯನ್ನು ವೈಯಕ್ತಿಕವಾಗಿ ತೆಗೆದುಕೊಂಡು ವಿವಾದ ಸೃಷ್ಟಿಸುವವರಲ್ಲಿ ಅತಿಯಾದ ಅಹಂಕಾರವಿದೆ ಎಂದು ನೇರವಾಗಿ ತಿರುಗೇಟು ನೀಡಿದ್ದಾರೆ.

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು: ಕಾರಣವೇನು?

‘ಬಿಗ್ ಬಾಸ್‌’ ಶೋಗೆ ಅನುಮತಿ ನೀಡದಂತೆ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು!

‘ಬಿಗ್ ಬಾಸ್‌’ ಕನ್ನಡ ಸೀಸನ್ 13 ಆರಂಭಕ್ಕೂ ಮುನ್ನವೇ ಪರಿಸರ ಮತ್ತು ಕಾನೂನು ಸಂಕಷ್ಟಕ್ಕೆ ಸಿಲುಕಿದೆ. ಬೆಂಗಳೂರು ಬಳಿಯ ಜಾಲಿವುಡ್ ಸ್ಟುಡಿಯೋದಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ನಿರಾಕ್ಷೇಪಣಾ ಪತ್ರ (NOC) ನೀಡದಂತೆ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸಿದ್ದಾರೆ.

Devaraaya Movie: ‘ಕಿಚ್ಚ’ ಸುದೀಪ್ ಜನ್ಮದಿನಕ್ಕೆ ಭರ್ಜರಿ ಗಿಫ್ಟ್: 'ಶ್ರೀ ಕೃಷ್ಣದೇವರಾಯ'ನಾಗಿ ತೆರೆಮೇಲೆ ಮಿಂಚಲಿದ್ದಾರೆ ʻಅಭಿನಯ ಚಕ್ರವರ್ತಿʼ!

Devaraaya: ಶ್ರೀಕೃಷ್ಣದೇವರಾಯನ ಪಾತ್ರದಲ್ಲಿ ಮಿಂಚಲಿದ್ದಾರೆ ನಟ ಸುದೀಪ್

ʻದೇವರಾಯʼ ಸಿನಿಮಾದಲ್ಲಿ ಕಿಚ್ಚ ಸುದೀಪ್‌ ಅವರು ವಿಜಯನಗರದ ಸಾರ್ವಭೌಮ ಶ್ರೀಕೃಷ್ಣದೇವರಾಯರಾಗಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸುದೀಪ್‌ ಜನ್ಮದಿನದಂದು ಈ ಐತಿಹಾಸಿಕ ಪ್ಯಾನ್-ಇಂಡಿಯಾ ಪ್ರಾಜೆಕ್ಟ್ ಅಧಿಕೃತವಾಗಿ ಘೋಷಣೆಯಾಗಿದೆ. ಪೀಪಲ್ ಮೀಡಿಯಾ ಫ್ಯಾಕ್ಟರಿ ಹಾಗೂ ಸುಪ್ರಿಯಾನ್ವಿ ಸ್ಟುಡಿಯೋಸ್ ಜಂಟಿಯಾಗಿ ಈ ಚಿತ್ರವನ್ನು ನಿರ್ಮಿಸುತ್ತಿವೆ.

ಕಾರು ಓವರ್‌ಟೇಕ್‌ ವಿಚಾರಕ್ಕೆ ಕಿರಿಕ್‌: ‘ದುನಿಯಾ’ ವಿಜಯ್ ಪುತ್ರನಿಂದ ವಿದ್ಯಾರ್ಥಿ ಅಪಹರಿಸಿ ಹಲ್ಲೆ ಆರೋಪ, ದೂರು ದಾಖಲು!

‘ದುನಿಯಾ’ ವಿಜಯ್ ಪುತ್ರ ಸಾಮ್ರಾಟ್‌ನಿಂದ ವಿದ್ಯಾರ್ಥಿ ಮೇಲೆ ಹಲ್ಲೆ ಆರೋಪ!

ನಟ ʻದುನಿಯಾʼ ವಿಜಯ್‌ ಪುತ್ರ ಸಾಮ್ರಾಟ್ ಕಾರು ಓವರ್‌ಟೇಕ್ ಮಾಡಿದ ವಿಚಾರಕ್ಕೆ ಕಾಲೇಜು ವಿದ್ಯಾರ್ಥಿಯೊಬ್ಬನನ್ನು ಅಪಹರಿಸಿ, ಚಲಿಸುವ ಕಾರಿನಲ್ಲಿ ಹಲ್ಲೆ ನಡೆಸಿರುವ ಆರೋಪ ಎದುರಿಸುತ್ತಿದ್ದಾರೆ. ‌ವಿದ್ಯಾರ್ಥಿ ಮನೀಶ್ ಗೌಡ ನೀಡಿದ ದೂರಿನನ್ವಯ ಕೆಂಗೇರಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಪರಪ್ಪನ ಅಗ್ರಹಾರ ಜೈಲಿಗೆ ಬಂದ ಜಮೀರ್‌ ಪುತ್ರ, ನಟ ಝೈದ್‌ ಖಾನ್‌

ದರ್ಶನ್‌ ಭೇಟಿಗಾಗಿ ಎಂಎಲ್‌ಎ ಜೊತೆ ಜೈಲಿಗೆ ಬಂದ ಜಮೀರ್‌ ಪುತ್ರ ಝೈದ್‌ ಖಾನ್‌

ರೇಣುಕಾಸ್ವಾಮಿ ಕೇಸ್‌ನಲ್ಲಿ ಪ್ರಮುಖ ಆರೋಪಿ ಆಗಿರುವ ನಟ ದರ್ಶನ್‌ ತೂಗುದೀಪ ಅವರನ್ನು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪತ್ನಿ ವಿಜಯಲಕ್ಷ್ಮಿ, ನಟ ಝೈದ್ ಖಾನ್ ಹಾಗೂ ಶಾಸಕ ದರ್ಶನ್ ಪುಟ್ಟಣ್ಣಯ್ಯ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ.

'ಗುಡ್ಡದ ಭೂತ' ಸಿನಿಮಾಕ್ಕಾಗಿ ಪೊಲೀಸ್ ಅಧಿಕಾರಿಯಾದ ಪಿ. ಲಂಕೇಶ್ ಮೊಮ್ಮಗ ಸಮರ್ಜಿತ್! ಸದ್ದಿಲ್ಲದೆ ಶೂಟಿಂಗ್‌ ಕಂಪ್ಲೀಟ್‌

'ಗುಡ್ಡದ ಭೂತ' ಸಿನಿಮಾದಲ್ಲಿ ಪೊಲೀಸ್ ಅಧಿಕಾರಿಯಾದ ಸಮರ್ಜಿತ್ ಲಂಕೇಶ್‌

ಸಮರ್ಜಿತ್‌ ಲಂಕೇಶ್‌ ಅವರು 'ಗುಡ್ಡದ ಭೂತ' ಎಂಬ ಸಸ್ಪೆನ್ಸ್ ಇನ್ವೆಸ್ಟಿಗೇಟಿವ್ ಥ್ರಿಲ್ಲರ್ ಚಿತ್ರದಲ್ಲಿ 'ಎಸ್‌ಐ ಅಲೋಕ್' ಎಂಬ ದಕ್ಷ ಪೊಲೀಸ್ ಅಧಿಕಾರಿಯ ಪಾತ್ರ ಮಾಡುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವನ್ನು ಸದ್ದಿಲ್ಲದೆ ಪೂರ್ಣಗೊಳಿಸಿದ್ದು, 1987ರ ಪುತ್ತೂರಿನಲ್ಲಿ ನಡೆದ ನೈಜ ಘಟನೆಯೊಂದನ್ನು ಆಧರಿಸಿ ಈ ಸಿನಿಮಾ ಮಾಡಲಾಗಿದೆ.

ʻಬಿಗ್‌ ಬಾಸ್‌ ಕನ್ನಡ 13ʼ ಶೋ ಆರಂಭಿಸಲು ಜಿಲ್ಲಾಡಳಿತಕ್ಕೆ ಸಲ್ಲಿಕೆಯಾಗಿಲ್ಲ ಅರ್ಜಿ! ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಹೇಳಿದ್ದೇನು‌?

ʻಬಿಗ್ ಬಾಸ್ 13ʼ ಆರಂಭಿಸಲು ಜಿಲ್ಲಾಡಳಿತಕ್ಕೆ ಅರ್ಜಿಯನ್ನೇ ಸಲ್ಲಿಸಿಲ್ಲ!

ʻಬಿಗ್‌ ಬಾಸ್‌ ಕನ್ನಡ 13ʼ ಪ್ರಸಾರಕ್ಕೆ ದಿನಗಣನೆ ಆರಂಭವಾಗಿರುವ ಹೊತ್ತಲ್ಲೇ ಕಾನೂನು ಸಂಕಷ್ಟ ಎದುರಾಗುವ ಸಾಧ್ಯತೆಗಳು ಕಾಣಿಸುತ್ತಿವೆ. ಮಾಲಿನ್ಯ ನಿಯಂತ್ರಣ ನಿಯಮ ಮೀರಿದರೆ ಕಠಿಣ ಕ್ರಮ ಕೈಗೊಳ್ಳುವುದಾಗಿ ಪರಿಸರ ಸಚಿವರು ಎಚ್ಚರಿಸಿದ ಬೆನ್ನಲ್ಲೇ, "ಶೋ ನಡೆಸಲು ಯಾವುದೇ ಅಧಿಕೃತ ಅರ್ಜಿ ಬಂದಿಲ್ಲ" ಎಂದು ಬೆಂಗಳೂರು ದಕ್ಷಿಣ ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದಾರೆ.

Loading...