ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಮೈಸೂರು

ತೆಲಂಗಾಣ, ಕರ್ನಾಟಕ ಮೂಲದ ಇಬ್ಬರು ಗಲ್ಫ್ ರಾಷ್ಟ್ರಗಳಲ್ಲಿ ಅರೆಸ್ಟ್‌: ಇವರು ಎಸಗಿದ ಅಪರಾಧವೇನು?

ಇಬ್ಬರು ಭಾರತೀಯರು ಗಲ್ಫ್ ರಾಷ್ಟ್ರಗಳಲ್ಲಿ ಬಂಧನ

Two Youths Arrested in Gulf Countries: ತೆಲಂಗಾಣದ ಹೈದರಾಬಾದ್ ಹಾಗೂ ಮೈಸೂರು ಮೂಲದ ಇಬ್ಬರನ್ನು ಸೌದಿ ಅರೇಬಿಯಾ ಮತ್ತು ದುಬೈಯಲ್ಲಿ ಬಂಧಿಸಲಾಗಿದೆ. ಹೈದರಾಬಾದ್‌ನ ಯಾಕುತ್‌ಪುರ ನಿವಾಸಿಯಾದ ಮೊಹಮ್ಮದ್ ಅಫ್ರೋಜ್‌ನನ್ನು ಸೌದಿಯಲ್ಲಿ ಮತ್ತು ಪ್ರತ್ಯೇಕ ಪ್ರಕರಣದಲ್ಲಿ, ಮೈಸೂರಿನ ಸಲ್ಮಾನ್ ಫಾರಿಜ್‌ನನ್ನು ದುಬೈನಲ್ಲಿ ಬಂಧಿಸಲಾಗಿದೆ.

ಟಿ ನರಸೀಪುರ ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಗಣಪತಿ ಪ್ರತಿಷ್ಠಾಪನೆ!  ಶೋಭಾಯಾತ್ರೆಗೆ ಸಜ್ಜು

ಟಿ ನರಸೀಪುರ ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಗಣಪತಿ ಪ್ರತಿಷ್ಠಾಪನೆ!

ಟಿ. ನರಸೀಪುರದಲ್ಲಿ ಗಣೇಶೋತ್ಸವ ವಿವಾದದ ಕಿಚ್ಚು ಹೆಚ್ಚಾಗಿದ್ದು, , ಪೊಲೀಸ್ ಠಾಣೆಯ 200 ಮೀಟರ್ ಅಂತರದಲ್ಲೇ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆಯನ್ನು ಮಾಡಿದೆ. ಅಲ್ಲದೇ, ಸೆಪ್ಟೆಂಬರ್ 18 ರಂದು ಲಿಂಕ್ ರಸ್ತೆಯಲ್ಲಿ ಹಿಂದೂ ಶೋಭಾ ಯಾತ್ರೆ ನಡೆಸಲು ಹಿಂದೂ ಪರ ಸಂಘಟನೆ ನಿರ್ಧರಿಸಿದೆ.

ಮಾಡೆಲ್‌ ಮೇಲೆ ಅತ್ಯಾಚಾರ, ದಲಿತ ಯುವಕರ ಮೇಲೆ ಹಲ್ಲೆ; ಟಿ.ನರಸೀಪುರ ಇನ್ಸ್‌ಪೆಕ್ಟರ್ ಹಳೇ ಪ್ರಕರಣಗಳು ಬೆಳಕಿಗೆ!

ಟಿ.ನರಸೀಪುರ ಇನ್ಸ್‌ಪೆಕ್ಟರ್ ಧನಂಜಯ ಹಳೇ ಪ್ರಕರಣಗಳು ಬೆಳಕಿಗೆ!

T Narasipura Inspector Dhananjay: ಗಣೇಶೋತ್ಸವ ಸಮಿತಿಯ ಯುವಕರಿಗೆ ಧಮ್ಕಿ ಹಾಕಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿರುವ ಟಿ ನರಸೀಪುರ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರ ಹಳೆಯ ದರ್ಪದ ನಡವಳಿಕೆಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಮತ್ತೆ ಭಾರೀ ಸದ್ದು ಮಾಡುತ್ತಿವೆ.

ಬಿಜೆಪಿ ಹೇಳಿದಂತೆ ಟಿ.ನರಸೀಪುರ ಇನ್ಸ್‌ಪೆಕ್ಟರ್‌ನ ಸಸ್ಪೆಂಡ್‌ ಮಾಡಕ್ಕಾಗಲ್ಲ: ಗೃಹ ಸಚಿವ ಪ್ರಿಯಾಂಕ್‌ ಖರ್ಗೆ

ಬಿಜೆಪಿ ಹೇಳಿದಂತೆ ಇನ್ಸ್‌ಪೆಕ್ಟರ್‌ನ ಸಸ್ಪೆಂಡ್‌ ಮಾಡಕ್ಕಾಗಲ್ಲ

ರಾಜ್ಯದಲ್ಲಿ ಗಣೇಶೋತ್ಸವ ಮತ್ತು ಈದ್ ಸೇರಿದಂತೆ ಎಲ್ಲ ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಲು ಸರ್ಕಾರ ಹಾಗೂ ಪೊಲೀಸ್ ಇಲಾಖೆ ಸರ್ವ ರೀತಿಯ ಮುನ್ನೆಚ್ಚರಿಕೆ ಕ್ರಮ ಕೈಗೊಂಡಿದೆ. ಹಬ್ಬಗಳ ವಿಚಾರದಲ್ಲಿ ವಿರೋಧ ಪಕ್ಷಗಳು ಅನಗತ್ಯವಾಗಿ ಹುಳಿ ಹಿಂಡುವ ಕೆಲಸ ಬಿಡಬೇಕು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಟೀಕಿಸಿದ್ದಾರೆ.

BJP Protest in T Narasipura: ಟಿ.ನರಸೀಪುರ ಠಾಣೆ ಮುಂದೆ ಅಹೋರಾತ್ರಿ ಧರಣಿಗೆ ಮುಂದಾದ ಬಿಜೆಪಿ ನಾಯಕರು; ಪ್ರತಾಪ್ ಸಿಂಹ, ಅಶೋಕ್, ಯದುವೀರ್ ಸೇರಿ ಹಲವರು ಪೊಲೀಸರ ವಶಕ್ಕೆ

ಟಿ.ನರಸೀಪುರ ಠಾಣೆ ಮುಂದೆ ಪ್ರತಿಭಟನೆ; ಬಿಜೆಪಿ ನಾಯಕರು ಪೊಲೀಸರ ವಶಕ್ಕೆ

ಟಿ.ನರಸೀಪುರದ ಪೊಲೀಸ್ ಇನ್‌ಸ್ಪೆಕ್ಟರ್ ಧನಂಜಯ್ ಅವರು ಗಣೇಶ ಮೆರವಣಿಗೆ ವೇಳೆ ಮಸೀದಿ ಮುಂದೆ ಪಟಾಕಿ ಸಿಡಿಸಿದರೆ ಗ್ರಹಚಾರ ಬಿಡಿಸುತ್ತೇನೆ ಎಂದು ಎಚ್ಚರಿಕೆ ನೀಡಿದ್ದರು. ಈ ವಿಡಿಯೊ ವೈರಲ್‌ ಆದ ಬಳಿಕ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇದೀಗ ಬಿಜೆಪಿ ನಾಯಕರು ಟಿ.ನರಸೀಪುರ ಠಾಣೆ ಮುಂದೆ ಅಹೋರಾತ್ರಿ ಧರಣಿ ನಡೆಸಲು ಮುಂದಾದಾಗ ಪೊಲೀಸರು ವಶಕ್ಕೆ ಪಡೆದಿದ್ದಾರೆ.

T. Narasipur Ganesha festival: ಟಿ.ನರಸೀಪುರದಲ್ಲಿ ಗಣೇಶ ಮೆರವಣಿಗೆಗೆ ಯಾವುದೇ ನಿರ್ಬಂಧವಿಲ್ಲ: ಎಸ್‌ಪಿ ಬಾಲದಂಡಿ

ಟಿ.ನರಸೀಪುರದಲ್ಲಿ ಪ್ರತಿ ವರ್ಷದಂತೆ ಗಣೇಶ ಮೆರವಣಿಗೆಗೆ ಅವಕಾಶವಿದೆ: ಎಸ್‌ಪಿ

ಮಸೀದಿ ಇರುವ ರಸ್ತೆಯಲ್ಲಿ ಗಣೇಶ ಮೆರವಣಿಗೆ ಹೋದರೆ ಗ್ರಹಚಾರ ಬಿಡಿಸುತ್ತೇನೆ ಎಂಬ ಟಿ.ನರಸೀಪುರ ಇನ್‌ಸ್ಪೆಕ್ಟರ್‌ ಧನಂಜಯ ಅವರ ಹೇಳಿಕೆ ವ್ಯಾಪಕ ಟೀಕೆಗೆ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಸ್ಪಷ್ಟನೆ ನೀಡಿದ್ದು, ಮೆರವಣಿಗೆ ಹೊಸ ನಿರ್ಬಂಧಗಳು ಇಲ್ಲ, ಈ ಮೊದಲಿನಿಂದ ನಡೆಯುವ ಮಾರ್ಗಗಳಲ್ಲಿ ಗಣೇಶ ಮೆರವಣಿಗೆಗೆ ಅವಕಾಶ ಇದೆ ಎಂದು ಹೇಳಿದ್ದಾರೆ.

BJP Protest in T Narasipura: ಟಿ.ನರಸೀಪುರ ಠಾಣೆ ಮುಂದೆ ಹೈಡ್ರಾಮಾ; ಇನ್ಸ್‌ಪೆಕ್ಟರ್‌ ಧನಂಜಯ್ ವಿರುದ್ಧ ಕ್ರಮಕ್ಕೆ ಬಿಜೆಪಿ ನಾಯಕರ ಪಟ್ಟು

ಟಿ.ನರಸೀಪುರ ಠಾಣೆ ಮುಂದೆ BJP ಪ್ರತಿಭಟನೆ; ಇನ್ಸ್‌ಪೆಕ್ಟರ್‌ ಕ್ಷಮೆಗೆ ಪಟ್ಟು

T Narasipura Inspector Dhananjay: ಟಿ.ನರಸೀಪುರ ಇನ್ಸ್‌ಪೆಕ್ಟರ್‌ ಧನಂಜಯ್ ರಾಜೀನಾಮೆಗೆ ಪಟ್ಟು ಹಿಡಿದಿರುವ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಭಾರಿ ಹೈಡ್ರಾಮಾ ನಡೆದಿದ್ದು, ಪರಿಸ್ಥಿತಿಯನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದಾರೆ.

Pratap Simha: ಪೊಲೀಸಪ್ಪಾ ಮಸೀದಿ ರೋಡಲ್ಲಿ ಹೋದ್ರೆ ಗ್ರಹಚಾರ ಬಿಡಿಸ್ತೀರಾ?; ಸ್ಟೇಷನ್‌ಗೆ ನುಗ್ತೀನಿ ಎಂದು ಪ್ರತಾಪ್‌ ಸಿಂಹ ಕಿಡಿ

ಮಸೀದಿ ರೋಡಲ್ಲಿ ಹೋದ್ರೆ ಗ್ರಹಚಾರ ಬಿಡಿಸ್ತೀರಾ?: ಪ್ರತಾಪ್‌ ಸಿಂಹ ಕಿಡಿ

T Narasipura Inspector Dhananjaya: ಅಸಹಾಯಕ ಹುಡುಗರ ಮುಂದೆ ನರಸೀಪುರದ ಇನ್ಸ್‌ಪೆಕ್ಟರ್‌ ವೀರಾವೇಶದಿಂದ ಮಾತನಾಡಿದ್ದು, ಬ್ರಿಟಿಷರ ಕಾಲದ ಅಧಿಕಾರಿಗಳಂತೆ ದರ್ಪ ಮೆರೆದಿದ್ದಾರೆ. ಮಸೀದಿಯಲ್ಲಿ ಅವರ ದೇವರು ಬಿಟ್ಟರೆ ಯಾರು ಇಲ್ಲಾ ಎಂದು ಕೂಗುತ್ತಾರೆ. ಮೊದಲು ಅವರ ಮೈಕ್‌ಗಳನ್ನು ನಿಲ್ಲಿಸುವ ತಾಕತ್‌ ಇದೆಯೇ ಎಂದು ಮಾಜಿ ಸಂಸದ ಪ್ರತಾಪ್‌ ಸಿಂಹ ಪ್ರಶ್ನಿಸಿದ್ದಾರೆ.

ಸಾತಗಳ್ಳಿಯಲ್ಲಿ ಭರದ ಸಿದ್ಧತೆ, 175 ಜತೆ ಕೋಣಗಳಿಗೆ ಅವಕಾಶ: ದಸರಾ ಅಂಗಳದಲ್ಲಿ ಕರಾವಳಿ ಕಂಬಳದ ಸಪ್ಪಳ

ದಸರಾ ಅಂಗಳದಲ್ಲಿ ಕರಾವಳಿ ಕಂಬಳದ ಸಪ್ಪಳ

ತುಳುನಾಡಿನ ಸಾಂಪ್ರದಾಯಿಕ ವೀರಕ್ರೀಡೆ ಕಂಬಳ ಆಯೋಜನೆಗೆ ಸಿಎಂ ಗ್ರೀನ್ ಸಿಗ್ನಲ್ ಕೊಟ್ಟ ಬೆನ್ನಲ್ಲೇ ಮೈಸೂರಿನಲ್ಲಿ ಕಂಬಳ ಚಟುವಟಿಕೆಗಳು ಗರಿಗೆದರಿವೆ. ಈ ಬಾರಿಯ ದಸರಾದಲ್ಲಿ ಕೋಣಗಳ ಸದ್ದು ಕೇಳಿಸಲಿದ್ದು, ಸಾತಗಳ್ಳಿ ಸಮೀಪ ಕಂಬಳದ ಅಖಾಡ ಸಿದ್ಧಗೊಳ್ಳುತ್ತಿದೆ. ಟ್ರ್ಯಾಕ್ ನಿರ್ಮಾಣ ಸೇರಿದಂತೆ ಅಗತ್ಯ ಸಿದ್ಧತಾ ಕಾರ್ಯಗಳು ಭರದಿಂದ ಸಾಗುತ್ತಿವೆ.

ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯ, ಸಾವಯವ ಉತ್ಪನ್ನಗಳಿಗೆ ವಿಶೇಷ ಆದ್ಯತೆ: ಮಹಾರಾಜ ಮೈದಾನದಲ್ಲಿ ಅ.11ರಿಂದ 25ರವರೆಗೆ ಆಯೋಜನೆ

ದಸರಾ ಆಹಾರ ಮೇಳದಲ್ಲಿ ಸಿರಿಧಾನ್ಯ, ಸಾವಯವ ಉತ್ಪನ್ನಗಳಿಗೆ ವಿಶೇಷ ಆದ್ಯತೆ

ದಸರಾ ಪ್ರವಾಸಕ್ಕೆ ಮೈಸೂರಿಗೆ ಆಗಮಿಸುವ ಜನರಿಗೆ ವಿವಿಧ ಪ್ರದೇಶಗಳ ಆಹಾರ ಸಂಸ್ಕೃತಿಯನ್ನು ಒಂದೇ ಸ್ಥಳದಲ್ಲಿ ಪರಿಚಯಿಸುವುದು ಈ ಬಾರಿಯ ಮೇಳದ ಪ್ರಮುಖ ಉದ್ದೇಶ. ದಕ್ಷಿಣ ಹಾಗೂ ಉತ್ತರ ಕರ್ನಾಟಕದ ಸಾಂಪ್ರದಾಯಿಕ ಖಾದ್ಯಗಳೊಂದಿಗೆ ಭಾರತದ ವಿವಿಧ ರಾಜ್ಯಗಳ ಪ್ರಸಿದ್ಧ ಆಹಾರಗಳನ್ನು ಸವಿಯುವ ಅವಕಾಶವೂ ಇರಲಿದೆ.

ಬೆಂಗಳೂರಿಗೆ ತೆರಳುತ್ತಿದ್ದ ಬಳಿ ಕೆಎಸ್​ಆರ್​ಟಿಸಿ ಬಸ್​ಗೆ ಬೆಂಕಿ​: ಚಾಲಕನ ಸಮಯಪ್ರಜ್ಞೆಯಿಂದ ಪ್ರಯಾಣಿಕರು ಪಾರು

ಬೆಂಗಳೂರಿಗೆ ತೆರಳುತ್ತಿದ್ದ ಬಳಿ ಕೆಎಸ್​ಆರ್​ಟಿಸಿ ಬಸ್​ಗೆ ಬೆಂಕಿ

Bus Fire Accident: ವಿರಾಜಪೇಟೆಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ 'ಇವಿ ಪವರ್ ಪ್ಲಸ್' ಎಸಿ ಸ್ಲೀಪರ್ ಎಲೆಕ್ಟ್ರಿಕ್ ಬಸ್ ಶನಿವಾರ ಸಂಜೆ ಮೈಸೂರು ಬಳಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ.

ವೃದ್ಧಾಪ್ಯ, ಮಾರಣಾಂತಿಕ ಕಾಯಿಲೆಗಳಿಂದ ಬಳಲುವವರ ಬಗ್ಗೆ ತುರ್ತಾಗಿ ಗಮನಕೊಡಬೇಕು: ಸದ್ಗುರು ಶ್ರೀ ಮಧುಸೂದನ ಸಾಯಿ

ವೃದ್ಧಾಪ್ಯ, ಕಾಯಿಲೆಗಳಿಂದ ಬಳಲುವವರ ಬಗ್ಗೆ ತುರ್ತಾಗಿ ಗಮನಕೊಡಬೇಕು

Sadguru Sri Madhusudan Sai: ಅಮೆರಿಕದಲ್ಲಿ ವೃದ್ಧಾಪ್ಯ ಮತ್ತು ಮಾರಣಾಂತಿಕ ಕಾಯಿಲೆಗಳಿಂದ ಬಳಲುವವರ ಚಿಕಿತ್ಸೆಗಾಗಿ ತಿಂಗಳಿಗೆ ಐದು ಸಾವಿರ ಡಾಲರ್ ಸಹಾಯಧನ ಕೊಡುವ ಯೋಜನೆಯಿದೆ. ಜಪಾನ್‌ ಮತ್ತು ಯೂರೋಪ್‌ನ ಹಲವು ದೇಶಗಳಲ್ಲಿ ಇಂಥದ್ದೇ ಯೋಜನೆಗಳಿವೆ. ನಮ್ಮ ಸರ್ಕಾರಗಳೂ ಈ ಕುರಿತು ಯೋಚಿಸಬೇಕಾದ ಸಂದರ್ಭ ಎದುರಾಗಿದೆ ಎಂದು ಒನ್ ವರ್ಲ್ಡ್ ಒನ್ ಫ್ಯಾಮಿಲಿ ಮಿಷನ್ ಸಂಸ್ಥಾಪಕ ಸದ್ಗುರು ಶ್ರೀ ಮಧುಸೂದನ ಸಾಯಿ ಹೇಳಿದ್ದಾರೆ.

Mysuru Dasara 2026: ಮೈಸೂರು ದಸರಾ ನಿಶಾನೆ ಆನೆಯಾಗಿ ʼಅಭಿಮನ್ಯುʼ ಆಯ್ಕೆ; ಸುದೀರ್ಘ ಸೇವೆಗೆ ರಾಜ್ಯ ಸರ್ಕಾರದಿಂದ ಗೌರವ

ಮೈಸೂರು ದಸರಾ ನಿಶಾನೆ ಆನೆಯಾಗಿ ʼಅಭಿಮನ್ಯುʼ ಆಯ್ಕೆ

Nishane elephant Abhimanyu: 60 ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ಅಭಿಮನ್ಯುವಿಗೆ ಈ ಬಾರಿ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿಯಿಂದ ನಿವೃತ್ತಿ ನೀಡಿ, ಗೌರವಯುತ ಬೀಳ್ಕೊಡುಗೆ ನೀಡಲಾಗಿತ್ತು. ದಸರಾದಲ್ಲಿ ಹಲವು ವರ್ಷಗಳ ಅಮೂಲ್ಯ ಸೇವೆಯನ್ನು ಪರಿಗಣಿಸಿ ಈ ಬಾರಿ ಅಭಿಮನ್ಯುವನ್ನು ನಿಶಾನೆ ಆನೆಯನ್ನಾಗಿ

ಬೇರೆಯವರ ಬಳಿ ಆಟ ಆಡಿದಂಗೆ ನನ್ನ ಬಳಿ ಆಡಬೇಡಿ; ಎಕ್ಸ್‌ನಲ್ಲಿ ಕೆಣಕಿದ ಪ್ರಿಯಾಂಕ್‌ ಖರ್ಗೆಗೆ ಎಚ್‌ಡಿಕೆ ತಿರುಗೇಟು

ಬೇರೆಯವರ ಬಳಿ ಆಟ ಆಡಿದಂಗೆ ನನ್ನ ಬಳಿ ಆಡಬೇಡಿ: ಎಚ್‌ಡಿಕೆ

ಗೃಹ ಸಚಿವರು ಕ್ಯಾಮೆರಾ ಮುಂದೆ ಮಾತನಾಡದೆ ಎಕ್ಸ್ ವೇದಿಕೆಯಲ್ಲಿ ಮಾತನಾಡಿದ್ದಾರೆ. ನನ್ನನ್ನು ಆರ್‌ಎಸ್‌ಎಸ್, ಬಿಜೆಪಿಯವರನ್ನು ಆಟ ಆಡಿಸಿದಂತೆ ನನ್ನ ಹತ್ತಿರ ಆಟ ಆಡೋಕೆ ಆಗಲ್ಲ. ಮಿಸ್ಟರ್ ಪ್ರಿಯಾಂಕ್ ಖರ್ಗೆ ನಾನು ಕದ್ದು ಹೋಗುವವನಲ್ಲ, ಪಲಾಯನ ಮಾಡಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಅವರು ಕಿಡಿಕಾರಿದ್ದಾರೆ.

MUDA case: 2019 ರಿಂದ 2023ರ ಅವಧಿಯಲ್ಲಿ ಹಂಚಿಕೆಯಾದ ಎಲ್ಲಾ ಮುಡಾ ಸೈಟ್‌ಗಳು ರದ್ದು!

2019 ರಿಂದ 2023ರ ಅವಧಿಯಲ್ಲಿ ಹಂಚಿಕೆಯಾದ ಮುಡಾ ಸೈಟ್‌ಗಳು ರದ್ದು!

Mysuru News: ರಸ್ತೆ ನಿರ್ಮಾಣಕ್ಕೆ ತಮ್ಮ ಜಮೀನು ನೀಡಿ ಈಗಾಗಲೇ ಪರಿಹಾರ ಪಡೆದುಕೊಂಡಿದ್ದ ಮಾಲೀಕರು ಸಹ ಮುಡಾದಿಂದ ಮತ್ತೆ ನಿವೇಶನಗಳನ್ನು ಪಡೆದಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇನ್ನು 2018ಕ್ಕಿಂತ ಮೊದಲು ಹಂಚಿಕೆಯಾದ ನಿವೇಶನಗಳ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದ್ದು, ಅಲ್ಲೂ ಅಕ್ರಮಗಳು ನಡೆದಿರುವುದು ಕಂಡುಬಂದರೆ ಆ ಸೈಟುಗಳನ್ನೂ ಸಹ ರದ್ದುಗೊಳಿಸುವುದಾಗಿ ನಗರಾಭಿವೃದ್ಧಿ ಸಚಿವ ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇಂದು ಅರಮನೆಗೆ ಗಜಪಡೆ ಪ್ರವೇಶ

ಇಂದು ಅರಮನೆಗೆ ಗಜಪಡೆ ಪ್ರವೇಶ

ಕಾಡಿನಿಂದ ನಾಡಿಗೆ ಬಂದ ಗಜಪಡೆ ಈಗ ಅರಮನೆಯ ಅಂಗಳ ಸೇರಲಿದ್ದು, ದಸರಾ ಜಂಬೂ ಸವಾರಿಯ ಸಿದ್ಧತೆಗೆ ಮೈಸೂರಿನ ರಾಜಬೀದಿಗಳು ಮತ್ತಷ್ಟು ಕಳೆಗಟ್ಟಲಿವೆ. ಅಭಿಮನ್ಯು ಜಾಗದಲ್ಲಿ ಮಹೇಂದ್ರ: ಅರಣ್ಯ ಭವನದ ಆನೆ ಬೀಡಿನಲ್ಲಿ ಗಜಪಡೆಯನ್ನು ಪ್ರತ್ಯೇಕ ಸ್ಥಳಗಳಲ್ಲಿ ಕಟ್ಟಿ ಹಾಕಲಾಗಿತ್ತು.

Mysore News: ನಂಜನಗೂಡಿನಲ್ಲಿ ಆರ್‌ವಿ ವಿಶ್ವವಿದ್ಯಾಲಯದ ಮೈಸೂರು ಕ್ಯಾಂಪಸ್‌ಗೆ ಚಾಲನೆ

ಆರ್‌ವಿ ವಿಶ್ವವಿದ್ಯಾಲಯದ ಮೈಸೂರು ಕ್ಯಾಂಪಸ್‌ಗೆ ಚಾಲನೆ

ಆರ್‌ವಿ ವಿಶ್ವವಿದ್ಯಾಲಯವು ಅತ್ಯಂತ ಉತ್ತಮ ಹೆಸರು ಹೊಂದಿದೆ. ಮೈಸೂರು ಮತ್ತು ನಂಜನ ಗೂಡಿನ ಪ್ರತಿಭಾನ್ವಿತ ವಿದ್ಯಾರ್ಥಿಗಳು ಬೇರೆಡೆ ವಿಶ್ವವಿದ್ಯಾಲಯಗಳಿಗೆ ತೆರಳುತ್ತಿದ್ದರು. ಈಗ ನಮ್ಮ ಊರಿಗೆ ವಿಶ್ವವಿದ್ಯಾಲಯ ಬಂದಿದೆ. ಉದ್ಯೋಗದ ಮೇಲೆ ಪರಿಣಾಮ ಬೀರುವ AI ಮತ್ತು ಹವಾಮಾನ ಬದಲಾವಣೆಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಬಗ್ಗೆ ನಾವು ಕೇಳಿದ್ದೇವೆ

ಇಂದು ಮೈಸೂರಿಗೆ ಗಜಪಡೆ ಆಗಮನ

ಇಂದು ಮೈಸೂರಿಗೆ ಗಜಪಡೆ ಆಗಮನ

ಅರಣ್ಯದಿಂದ ಅರಮನೆಯತ್ತ: ಮೈಸೂರು ಮಹಾ ರಾಜರ ಕಾಲದಿಂದಲೂ ದಸರಾ ಆನೆಗಳನ್ನು ಅರಣ್ಯ ಶಿಬಿರಗಳಲ್ಲಿ ಪಳಗಿಸಿ, ಶುಭದಿನದಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ಕಾಲ್ನಡಿಗೆಯಲ್ಲಿ ಮೈಸೂರಿಗೆ ಕರೆತರುವ ಸಂಪ್ರದಾಯ ನಡೆದುಕೊಂಡು ಬಂದಿದೆ. ಕಾಲ ಬದಲಾದಂತೆ ರಸ್ತೆ ಸಂಚಾರ ಹೆಚ್ಚಳ ಸೇರಿದಂತೆ ಹಲವು ಕಾರಣಗಳಿಂದ ಆನೆಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡುವ ಅಗತ್ಯ ಎದುರಾಯಿತು

60ರ ಗಡಿ ದಾಟಿದ ಅಭಿಮನ್ಯುವಿಗೆ ವಿಶ್ರಾಂತಿ

60ರ ಗಡಿ ದಾಟಿದ ಅಭಿಮನ್ಯುವಿಗೆ ವಿಶ್ರಾಂತಿ

ಅಂಬಾರಿ ಹೊತ್ತ ದಸರೆಯ ರಾಜನಾಗಿ, ಕಾಡಾನೆಗಳ ಸೆರೆ ಕಾರ್ಯಾಚರಣೆಯ ‘ಎಕೆ-47’ ಆಗಿ, ನರಹಂತಕ ಹುಲಿಗಳ ಸೆರೆ ಕಾರ್ಯಾಚರಣೆಯ ಧೈರ್ಯ ಶಾಲಿ ಗಜರಾಜನಾಗಿ ಮತ್ತು ಸಂಕಷ್ಟದಲ್ಲಿರುವ ಆನೆಗಳ ಅಪತ್ಬಾಂಧವನಾಗಿ ಅಭಿಮನ್ಯು ಹಲವು ಪಾತ್ರಗಳನ್ನು ನಿರ್ವಹಿಸಿದ್ದಾನೆ. ಇದೀಗ ವಯಸ್ಸು ಆತನಿಗೆ ವಿಶ್ರಾಂತಿ ನೀಡಿದೆ.

ಮುಡಾ ಹಗರಣ: 2 ಸಾವಿರ ಕೋಟಿ ರುಪಾಯಿ ಮೌಲ್ಯದ 1,100 ನಿವೇಶನಗಳ ಹಂಚಿಕೆ ರದ್ದುಪಡಿಸಿ ಸರ್ಕಾರದಿಂದ ಆದೇಶ

ಮುಡಾ ಹಗರಣ: ಸರ್ಕಾರದಿಂದ ಮಹತ್ವದ ಆದೇಶ

Muda Scam: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಿಯಮಗಳನ್ನ ಉಲ್ಲಂಘಿಸಿ 50:50 ಅನುಪಾತದ ಅಡಿಯಲ್ಲಿ ಮಾಡಲಾಗಿದ್ದ1,100 ಬದಲಿ ನಿವೇಶನಗಳ ಹಂಚಿಕೆಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿದೆ. ಈ ಕುರಿತ ಆದೇಶವನ್ನು ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹೊರಡಿಸಿದ್ದಾರೆ.

ವಿಆರ್‌ʼಎಲ್‌ ಸಂಸ್ಥೆಗೆ ಸುವರ್ಣ ಸಂಭ್ರಮ

ವಿಆರ್‌ʼಎಲ್‌ ಸಂಸ್ಥೆಗೆ ಸುವರ್ಣ ಸಂಭ್ರಮ

ಕನಸು, ಪರಿಶ್ರಮ, ನಂಬಿಕೆ, ಸವಾಲುಗಳನ್ನು ಮೆಟ್ಟಿ ನಿಂತು ಐದು ದಶಕಗಳ ಯಶಸ್ವಿ ಸೇವೆಯನ್ನು ಪೂರೈಸಿದ ವಿಆರ್‌ಎಲ್ ಲಾಜಿಸ್ಟಿಕ್ಸ್ ಲಿಮಿಟೆಡ್‌ನ ಸುವರ್ಣ ಮಹೋತ್ಸವ ಸಮಾರಂಭ ಮೈಸೂರಿನಲ್ಲಿ ಸಂಭ್ರಮದಿಂದ ಜರುಗಿತು. ಸಂಸ್ಥೆಗೆ ಸುವರ್ಣ ಮಹೋತ್ಸವದ ಜತೆಗೆ ನಗರದ ಬನ್ನಿಮಂಟಪ ಬಡಾವಣೆಯ ಜೋಡಿ ತೆಂಗಿನಮರ ರಸ್ತೆ ಬಳಿ ನೂತನವಾಗಿ ನಿರ್ಮಾಣವಾಗಿರುವ ವಿಆರ್‌ಎಲ್(VRL) ಕಟ್ಟಡ, ಬೃಹತ್ ಗೋದಾಮು ಕಟ್ಟಡ ಲೋಕಾರ್ಪಣೆ ಸಹ ಇದೇ ವೇಳೆ ನೆರವೇರಿಸಲಾಯಿತು.

Isha Gramotsava: ಈಶ ಗ್ರಾಮೋತ್ಸವ: ಮೈಸೂರಿನಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳ ಸಮಾಗಮ

ಈಶ ಗ್ರಾಮೋತ್ಸವ: ಮೈಸೂರಿನಲ್ಲಿ ಗ್ರಾಮೀಣ ಕ್ರೀಡಾ ಪ್ರತಿಭೆಗಳ ಸಮಾಗಮ

ತೀವ್ರ ಪೈಪೋಟಿಯಿಂದ ಕೂಡಿದ್ದ ಪುರುಷರ ವಾಲಿಬಾಲ್ ವಿಭಾಗದಲ್ಲಿ ಚಾಮರಾಜನಗರ ಜಿಲ್ಲೆಯ ರಾಮಾಪುರದ ಬುದ್ಧ ಸೂಪರ್ ಟೀಂ ವಿಭಾಗೀಯ ಚಾಂಪಿಯನ್ ಪಟ್ಟ ಅಲಂಕರಿಸಿತು. ನಂಜನಗೂಡಿ ನ ಕಡಕೋಳದ ಚಾಮುಂಡಿ ಬಾಯ್ಸ್ ದ್ವಿತೀಯ, ಚಿಕ್ಕಬಳ್ಳಾಪುರದ ಮಾಸ್ತೇನ ಹಳ್ಳಿಯ ಅಪ್ಪು ಬಾಯ್ಸ್ ತೃತೀಯ ಹಾಗೂ ಕೋಲಾರದ ಮಾರ್ಜೇನಹಳ್ಳಿಯ ಎಂ.ಆರ್.ಜೆ ಬ್ರದರ್ಸ್ ನಾಲ್ಕನೇ ಸ್ಥಾನ ಪಡೆದವು.

ಮದುವೆ ನಿಶ್ಚಯವಾಗಿದ್ದ ಎಸ್‌ಬಿಐ ಉದ್ಯೋಗಿ ಜೋಡಿಯ ದುರಂತ ಅಂತ್ಯ: ಮೈಸೂರಿನಲ್ಲಿ ಯುವತಿ, ಕೇರಳದಲ್ಲಿ ಯುವಕ ಆತ್ಮಹತ್ಯೆ!

ಮದುವೆ ನಿಶ್ಚಯವಾಗಿದ್ದ ಎಸ್‌ಬಿಐ ಉದ್ಯೋಗಿ ಜೋಡಿ ದುರಂತ ಅಂತ್ಯ!

ಪ್ರೀತಿಸಿ ಮದುವೆಯಾಗಲು ಸಿದ್ಧಾಗಿದ್ದ ಜೋಡಿ ಆತ್ಮಹತ್ಯೆಗೆ ಶರಣಾಗಿದೆ. ಡಿಸೆಂಬರ್‌ನಲ್ಲಿ ಈ ಜೋಡಿಯ ಮದುವೆ ನಡೆಯಬೇಕಿತ್ತು. ಆದರೆ, ಮದುವೆಗೂ ಕೆಲವೇ ತಿಂಗಳು ಬಾಕಿ ಇರುವಾಗ ಜೋಡಿಯ ಬದುಕು ದುರಂತದಲ್ಲಿ ಅಂತ್ಯವಾಗಿದೆ. ಮೈಸೂರು ಜಿಲ್ಲೆಯ ಹುಣಸೂರಿನಲ್ಲಿ ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಕೇರಳದಲ್ಲಿ ಯುವಕ ಸಾವಿಗೆ ಶರಣಾಗಿದ್ದಾನೆ.

ಉದ್ಯೋಗದ ಸ್ಥಳದಲ್ಲಿ ಮಾನಸಿಕ ಕಿರುಕುಳ: ಡೆತ್‌ನೋಟ್‌ನಲ್ಲಿ ಸೂಪರ್‌ವೈಸರ್ ಹೆಸರು ಬರೆದಿಟ್ಟು ಮಹಿಳೆ ಆತ್ಮಹತ್ಯೆ

ಸೂಪರ್‌ವೈಸರ್ ಹೆಸರು ಬರೆದಿಟ್ಟು ಮಹಿಳೆ ಆತ್ಮಹತ್ಯೆ

Self-harming: ಉದ್ಯೋಗದ ಸ್ಥಳದಲ್ಲಿ ಕಿರುಕುಳ ತಾಳಲಾರದೆ 45 ವರ್ಷದ ಮಹಿಳೆಯೊಬ್ಬರು ತಮ್ಮ ನಿವಾಸದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮೈಸೂರಿನಲ್ಲಿ ನಡೆದಿದೆ. ಘಟನಾ ಸ್ಥಳದಿಂದ ವಶಪಡಿಸಿಕೊಂಡ ಡೆತ್‌ನೋಟ್‌ನಲ್ಲಿ, ಹೊಸದಾಗಿ ನೇಮಕಗೊಂಡ ಡಾಲಿ ಎಂಬ ಮೇಲ್ವಿಚಾರಕನಿಂದ ತೀವ್ರ ಮಾನಸಿಕ ಕಿರುಕುಳವನ್ನು ಅನುಭವಿಸಿರುವುದಾಗಿ ಆರೋಪಿಸಿದ್ದಾರೆ.

Loading...