ಝಳಪಿಸಿದ ಕತ್ತಿ, ಧಾರ್ಮಿಕ ಘೋಷ ವಾಕ್ಯಗಳು: ಜಂತರ್ ಮಂತರ್ನಲ್ಲಿನ ಸಿಜೆಪಿಯ ಪ್ರತಿಭಟನೆ ಹೈಜಾಕ್ ಆಗಿದೆಯೇ?
CJP Protest at Jantar Mantar: ಜಂತರ್ ಮಂತರ್ನಿಂದ ಕೆಲವೇ ಮೀಟರ್ಗಳ ದೂರದಲ್ಲಿರುವ ಟಾಲ್ಸ್ಟಾಯ್ ಮಾರ್ಗ್ ಬಳಿ, ಸಿಖ್ ಯೋಧರ ಶ್ರೇಣಿಯ ಸದಸ್ಯರಾದ ನಿಹಾಂಗ್ಗಳು, ದೆಹಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಯ ಮುಂದೆ ಕತ್ತಿಗಳು, ಧಾರ್ಮಿಕ ವಿಧಿವಿಧಾನಗಳಲ್ಲಿ ಬಳಸುವ ಕಿರ್ಪಾನ್ಗಳು ಮತ್ತು ಉದ್ದನೆಯ ಭರ್ಜಿಗಳನ್ನು ಹಿಡಿದು ನಿಂತಿದ್ದರು.
ಜಂತರ್ ಮಂತರ್ನಲ್ಲಿನ ಸಿಜೆಪಿಯ ಪ್ರತಿಭಟನೆ -
ನವದೆಹಲಿ, ಜು.23: ಬುಧವಾರ (ಜು.22) ರಾತ್ರಿ 10.30 ರ ಸುಮಾರಿಗೆ ನವದೆಹಲಿಯ ಜಂತರ್ ಮಂತರ್ (Jantar Mantar) ನಲ್ಲಿ ಧ್ವನಿವರ್ಧಕದಲ್ಲಿ, ಮುಸಲ್ಮಾನರು ಜೈ ಶ್ರೀ ರಾಮ್ ಎಂದು ಹೇಳುವುದಿಲ್ಲ, ಭಾರತ್ ಮಾತಾ ಕಿ ಜೈ ಎಂದು ಹೇಳುವುದಿಲ್ಲ ಎಂಬ ಧ್ವನಿ ಮೊಳಗಿತು. ಕೆಲವೇ ಕ್ಷಣಗಳಲ್ಲಿ, ಅಲ್ಲಿದ್ದ ಗುಂಪು “ನರಾ-ಎ-ತಕ್ಬೀರ್, ಅಲ್ಲಾಹು ಅಕ್ಬರ್, ಜೈ ಶ್ರೀ ರಾಮ್ ಮತ್ತು ಭಾರತ್ ಮಾತಾ ಕಿ ಜೈ” ಎಂಬ ಘೋಷಣೆಗಳೊಂದಿಗೆ ಪ್ರತಿಕ್ರಿಯಿಸಿತು. ನೂರಾರು ಜನರು ವೀಕ್ಷಿಸುತ್ತಿದ್ದಂತೆ ಘೋಷಣೆಗಳು ಹಲವಾರು ನಿಮಿಷಗಳ ಕಾಲ (CJP Protest) ಮುಂದುವರೆದವು. ಈ ದೃಶ್ಯವನ್ನು ಹಲವರು ತಮ್ಮ ಮೊಬೈಲ್ ಫೋನ್ಗಳಲ್ಲಿ ರೆಕಾರ್ಡ್ ಮಾಡಿದರು .
ಅದೇ ಸಮಯದಲ್ಲಿ, ಜಂತರ್ ಮಂತರ್ನಿಂದ ಕೆಲವೇ ಮೀಟರ್ಗಳ ದೂರದಲ್ಲಿರುವ ಟಾಲ್ಸ್ಟಾಯ್ ಮಾರ್ಗ್ ಬಳಿ, ಸಿಖ್ ಯೋಧರ ಶ್ರೇಣಿಯ ಸದಸ್ಯರಾದ ನಿಹಾಂಗ್ಗಳು, ದೆಹಲಿ ಪೊಲೀಸರು ಮತ್ತು ಕ್ಷಿಪ್ರ ಕಾರ್ಯಪಡೆ ಸಿಬ್ಬಂದಿಯ ಮುಂದೆ ಕತ್ತಿಗಳು, ಧಾರ್ಮಿಕ ವಿಧಿವಿಧಾನಗಳಲ್ಲಿ ಬಳಸುವ ಕಿರ್ಪಾನ್ಗಳು ಮತ್ತು ಉದ್ದನೆಯ ಭರ್ಜಿಗಳನ್ನು ಹಿಡಿದು ನಿಂತಿದ್ದರು. ಅವರಲ್ಲಿ ಕೆಲವರು ತಮ್ಮ ಶಸ್ತ್ರಾಸ್ತ್ರಗಳನ್ನು ಪ್ರದರ್ಶಿಸುವ ರೀತಿಯಲ್ಲಿ ಎತ್ತಿದರೆ, ಇನ್ನು ಕೆಲವರು ಫೋಟೋಗಳಿಗೆ ಪೋಸ್ ನೀಡಿದರು. ಈ ಪ್ರದರ್ಶನಕ್ಕೆ ಪ್ರತಿಭಟನಾಕಾರರ ಗುಂಪಿನಲ್ಲಿದ್ದ ಕೆಲವರು ಚಪ್ಪಾಳೆ ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದರು.
ಇಲ್ಲಿದೆ ವಿಡಿಯೊ:
SHOCKING - CJP protesters showed a sword to the police at Jantar Mantar today and chased them away.
— News Algebra (@NewsAlgebraIND) July 21, 2026
pic.twitter.com/iLyLd2e2ds
ಆದರೆ, ಅತಿಯಾದ ಬಲಪ್ರಯೋಗ ನಡೆದಿದೆ ಎಂಬ ಆರೋಪದ ನಡುವೆ ಜುಲೈ 20ರಂದು ಸಂಸತ್ಗೆ ನಡೆಸಲು ಉದ್ದೇಶಿಸಿದ್ದ ಮೆರವಣಿಗೆಯನ್ನು ತಡೆದ ಬಳಿಕ, ಜಂತರ್ ಮಂತರ್ನಲ್ಲಿನ ಪ್ರತಿಭಟನಾ ಸ್ಥಳದ ಪರಿಸ್ಥಿತಿ ಬದಲಾಗಿದೆ. ಈಗ ಪರಿಸ್ಥಿತಿ ಎಷ್ಟರ ಮಟ್ಟಿಗೆ ಬದಲಾಗಿದೆಯೆಂದರೆ, ಇದು ಇನ್ನು ಮುಂದೆ ಸಿಜೆಪಿ ನೇತೃತ್ವದ ಪ್ರತಿಭಟನೆಯಂತೆ ಕಾಣುತ್ತಿಲ್ಲ. ಪ್ರತಿಭಟನೆ ಮತ್ತಷ್ಟು ವ್ಯಾಪಕವಾಗಿದ್ದು, ಸಿಜೆಪಿ ನಾಯಕತ್ವವು ಇನ್ನು ಮುಂದೆ ಪ್ರತಿಭಟನೆಯ ಮೇಲೆ ನಿಯಂತ್ರಣ ಹೊಂದಿರುವಂತೆ ಕಾಣುತ್ತಿಲ್ಲ. ಪ್ರತಿಭಟನೆ ಈಗಾಗಲೇ ಬೇರೆಯವರ ಕೈವಶವಾಗಿದ್ದರೆ ಅಥವಾ ಇನ್ನೂ ಆಗದಿದ್ದರೂ, ಅದು ಹೈಜಾಕ್ ಆಗುವ ಅಪಾಯವಿದೆ.
ಪ್ರಧಾನಿ ನಿವಾಸದ ಬಳಿ ನಡೆದ ಕಾಂಗ್ರೆಸ್ ಪ್ರತಿಭಟನೆಯನ್ನೇ ಟೀಕಿಸಿದ ಸೋನಮ್ ವಾಂಗ್ಚುಕ್ ಪತ್ನಿ! ಕಾರಣವೇನು?
2016 ರಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ವಿರುದ್ಧ ಉರಿ ಸರ್ಜಿಕಲ್ ಸ್ಟ್ರೈಕ್ ಯೋಜನೆಯನ್ನು ರೂಪಿಸಿದ ಲೆಫ್ಟಿನೆಂಟ್ ಜನರಲ್ ಸತೀಶ್ ದುವಾ (ನಿವೃತ್ತ) ಈ ಆತಂಕವನ್ನು ವ್ಯಕ್ತಪಡಿಸಿದರು. ಸಂವಹನದ ಕೊರತೆಯಿಂದಾಗಿ, ಶಾಂತಿಯುತವಾಗಿ ಮತ್ತು ನಿರ್ದಿಷ್ಟ ವಿಚಾರವನ್ನು ಮುಂದಿಟ್ಟುಕೊಂಡು ನಡೆಯುತ್ತಿದ್ದ ಯುವಜನರ ಪ್ರತಿಭಟನೆಯನ್ನು ಪರಿಸ್ಥಿತಿಯ ದುರುಪಯೋಗ ಪಡೆಯಲು ಬಯಸುವ ಹೊರಗಿನ ಶಕ್ತಿಗಳು ತಮ್ಮ ಕೈವಶ ಮಾಡಿಕೊಳ್ಳುವ ಸಾಧ್ಯತೆಯಿದೆ. ದೆಹಲಿಯಲ್ಲಿ ಆರಂಭವಾದ ಪ್ರತಿಭಟನೆ ಈಗ ದೇಶಾದ್ಯಂತ ಹರಡುತ್ತಿದೆ ಎಂದು ಜನರಲ್ ದುವಾ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.
ಬುಧವಾರ (ಜು. 22) ರಾತ್ರಿ ಯೂಟ್ಯೂಬರ್ ಒಬ್ಬರ ಮೇಲೆ ಕ್ರೂರವಾಗಿ ಥಳಿಸಿ, ಅವರನ್ನು ಬಹುತೇಕ ಹತ್ಯೆ ಮಾಡುವ ಹಂತಕ್ಕೆ ಕರೆದೊಯ್ಯಲಾಗಿತ್ತು. ಗುರುವಾರ (ಜು.23) ಜಂತರ್ ಮಂತರ್ನಲ್ಲಿ ಪ್ರತಿಭಟನಾಕಾರರು ನಿಹಾಂಗ್ಗಳ ಗುಂಪಿನೊಂದಿಗೆ ಘರ್ಷಣೆ ನಡೆಸಿದರು. ಇದರ ಜೊತೆಗೆ, ಕರ್ತವ್ಯದಲ್ಲಿರುವ ದೆಹಲಿ ಪೊಲೀಸ್ ಮತ್ತು ಆರ್ಎಎಫ್ ಸಿಬ್ಬಂದಿಯನ್ನು ಪ್ರತಿಭಟನಾಕಾರರು ನಿರಂತರವಾಗಿ ನಿಂದಿಸುತ್ತಿದ್ದಾರೆ.