ರಾಮ ಮಂದಿರದಿಂದ ರಕ್ಷಣಾ ರಫ್ತುವರೆಗೆ: ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿನ 11 ಮಹತ್ವದ ಸಾಧನೆಗಳಿವು
Narendra Modi Birthday: 12 ವರ್ಷಗಳಲ್ಲಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಹಾಗೂ ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವ ಉದ್ದೇಶದಿಂದ ಹಲವು ಪ್ರಮುಖ ಸುಧಾರಣೆಗಳು, ಯೋಜನೆಗಳು ಮತ್ತು ಉಪಕ್ರಮಗಳನ್ನು ಜಾರಿಗೆ ತರಲಾಗಿದೆ ಎಂದು ಬಿಜೆಪಿ ಉಲ್ಲೇಖಿಸಿದೆ. ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನದ ಪ್ರಯುಕ್ತ ಇಲ್ಲಿವೆ ಬಿಜೆಪಿ ಮಾಡಿರುವ 11 ಸಾಧನೆಗಳ ಪಟ್ಟಿ.
ಪ್ರಧಾನಿ ನರೇಂದ್ರ ಮೋದಿ (ಸಂಗ್ರಹ ಚಿತ್ರ) -
ನವದೆಹಲಿ, ಸೆ. 17: ಪ್ರಧಾನಿ ನರೇಂದ್ರ ಮೋದಿ (PM Narendra Modi) ನೇತೃತ್ವದ ಸರ್ಕಾರವು 2014ರ ಮೇಯಲ್ಲಿ ಅಧಿಕಾರಕ್ಕೆ ಬಂದು 12 ವರ್ಷಗಳನ್ನು ಪೂರ್ಣಗೊಳಿಸಿರುವ ಸಂದರ್ಭದಲ್ಲಿ, ಭಾರತದಲ್ಲಿನ ಆರ್ಥಿಕ, ಮೂಲಸೌಕರ್ಯ ಹಾಗೂ ಸಾಮಾಜಿಕ-ರಾಜಕೀಯ ಕ್ಷೇತ್ರಗಳ ಮೇಲೆ ಗಮನಾರ್ಹ ಪರಿಣಾಮ ಬೀರಿದ ಪ್ರಮುಖ ಸಾಧನೆಗಳನ್ನು ಭಾರತೀಯ ಜನತಾ ಪಕ್ಷ ಉಲ್ಲೇಖಿಸಿದೆ. ರಾಮ ಮಂದಿರದಿಂದ (Ram Mandir) ದಾಖಲೆಯ ರಕ್ಷಣಾ ರಫ್ತುವರೆಗೆ, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ 11 ಪರಿವರ್ತನಾ ಮೈಲಿಗಲ್ಲುಗಳು ಇಲ್ಲಿವೆ.
12 ವರ್ಷಗಳಲ್ಲಿ ದೇಶವನ್ನು ಜಾಗತಿಕ ಮಟ್ಟದಲ್ಲಿ ಸ್ಪರ್ಧಾತ್ಮಕ ಹಾಗೂ ಸ್ವಾವಲಂಬಿ ರಾಷ್ಟ್ರವನ್ನಾಗಿ ರೂಪಿಸುವ ಉದ್ದೇಶದಿಂದ ಹಲವು ಪ್ರಮುಖ ಸುಧಾರಣೆಗಳು, ಯೋಜನೆಗಳು ಮತ್ತು ಉಪಕ್ರಮಗಳನ್ನು ಜಾರಿಗೆ ತರಲಾಗಿದೆ. ಇವುಗಳಲ್ಲಿ ಕೆಲವು ಮಹತ್ವದ ಮೈಲಿಗಲ್ಲುಗಳು ಭಾರತದ ಆರ್ಥಿಕತೆ, ಮೂಲಸೌಕರ್ಯ ಮತ್ತು ಸಾಮಾಜಿಕ-ರಾಜಕೀಯ ಕ್ಷೇತ್ರಗಳಲ್ಲಿ ಬದಲಾವಣೆಗಳನ್ನು ತಂದಿವೆ. ಇಲ್ಲಿವೆ ಬಿಜೆಪಿ ಮಾಡಿರುವ 11 ಸಾಧನೆಗಳ ಪಟ್ಟಿ:
ಭಾರತವು ಜಾಗತಿಕವಾಗಿ ನಾಲ್ಕನೇ ಅತಿ ದೊಡ್ಡ ಆರ್ಥಿಕತೆಯಾಗಿ ಹೊರಹೊಮ್ಮಿದೆ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತವು ಜಾಗತಿಕವಾಗಿ ನಾಲ್ಕನೇ ಅತಿ ದೊಡ್ಡ ಶಕ್ತಿಯಾಗಿ ಹೊರಹೊಮ್ಮಿದೆ.
ರಾಮ ಮಂದಿರ ಉದ್ಘಾಟನೆ: ಭಾರತದ ಬಹುನಿರೀಕ್ಷಿತ ಧಾರ್ಮಿಕ ಯೋಜನೆಗಳಲ್ಲಿ ಒಂದಾದ ಅಯೋಧ್ಯೆಯಲ್ಲಿ ರಾಮ ಮಂದಿರವನ್ನು ಜನವರಿ 2024ರಲ್ಲಿ ಉದ್ಘಾಟಿಸಲಾಯಿತು. ಮಂದಿರದ ಮುಖ್ಯ ಗರ್ಭಗುಡಿಯಲ್ಲಿ ನಡೆದ ಪ್ರಾಣಪ್ರತಿಷ್ಠಾಪನಾ ಮಹೋತ್ಸವವು ವಿಶ್ವಾದ್ಯಂತ ಇರುವ ಕೋಟ್ಯಂತರ ಹಿಂದೂಗಳಿಗೆ ಒಂದು ಐತಿಹಾಸಿಕ ಕ್ಷಣವಾಗಿ ಮೂಡಿಬಂದಿತು.
ಸಾಮಾನ್ಯ ಜನರ ಕಷ್ಟ ಅರಿಯಲು ಭಿಕ್ಷುಕನ ವೇಷ ಧರಿಸಿ ಬೀದಿಗೆ ಇಳಿದ ಮುಂಬೈಯ ಬಿಜೆಪಿ ಶಾಸಕ
70 ನೇ ವಿಧಿಯ ರದ್ದು: 2019ರ ಆಗಸ್ಟ್ನಲ್ಲಿ ಸರ್ಕಾರವು ಜಮ್ಮು ಮತ್ತು ಕಾಶ್ಮೀರದ 370ನೇ ವಿಧಿಯನ್ನು ರದ್ದುಗೊಳಿಸಿತು. ಆ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಹಿಂಪಡೆದು, ಅದನ್ನು ಭಾರತೀಯ ಒಕ್ಕೂಟದೊಂದಿಗೆ ಸಂಯೋಜಿಸಿತು. ಇದು ದೇಶದ ಅತ್ಯಂತ ಪ್ರಮುಖ ಸಾಂವಿಧಾನಿಕ ಸುಧಾರಣೆಗಳಲ್ಲಿ ಒಂದು.
ತ್ರಿವಳಿ ತಲಾಖ್ ನಿಷೇಧ: ವಿವಾದಾತ್ಮಕ ತ್ರಿವಳಿ ತಲಾಖ್ ಪದ್ಧತಿಯನ್ನು 2017ರಲ್ಲಿ ಸುಪ್ರೀಂ ಕೋರ್ಟ್ ಅಸಾಂವಿಧಾನಿಕ ಎಂದು ಘೋಷಿಸಿತು. ನಂತರ ಮೋದಿ ಸರ್ಕಾರವು ಈ ಪದ್ಧತಿಯನ್ನು ನಿಷೇಧಿಸುವ ಕಾನೂನನ್ನು ಜಾರಿಗೆ ತಂದಿತು. ಮುಸ್ಲಿಂ ಮಹಿಳೆಯರಿಗೆ ನ್ಯಾಯ ಮತ್ತು ಸಮಾನತೆಯನ್ನು ದೊರಕಿಸಿತು.
ಪ್ರಧಾನ ಮಂತ್ರಿ ಜನ್ ಧನ್ ಯೋಜನೆ (PMJDY): 2014ರಲ್ಲಿ ಪ್ರಾರಂಭವಾದ ಈ ಹಣಕಾಸು ಸೇರ್ಪಡೆ ಅಭಿಯಾನವು 50 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲು ಕಾರಣವಾಗಿದೆ. ಕೋಟ್ಯಂತರ ಭಾರತೀಯರನ್ನು ಮೊದಲ ಬಾರಿಗೆ ಅಧಿಕೃತ ಬ್ಯಾಂಕಿಂಗ್ ವ್ಯವಸ್ಥೆಯೊಂದಿಗೆ ಜೋಡಿಸಿದೆ.
ಸರಕು ಮತ್ತು ಸೇವಾ ತೆರಿಗೆ (GST) ಅನುಷ್ಠಾನ: 2017ರಲ್ಲಿ ಮೋದಿ ಸರ್ಕಾರವು ಜಿಎಸ್ಟಿಯನ್ನು ಜಾರಿಗೆ ತಂದಿತು. ಆ ಮೂಲಕ ದೇಶದಲ್ಲಿ ಏಕರೂಪದ ತೆರಿಗೆ ರಚನೆಯನ್ನು ಸೃಷ್ಟಿಸಿತು. ಒಂದು ದೇಶ, ಒಂದು ತೆರಿಗೆ (One Nation, One Tax) ಎಂಬ ಪರಿಕಲ್ಪನೆಯನ್ನು ಉತ್ತೇಜಿಸಿತು.
ಭಾರತೀಯ ರೈಲ್ವೆಯ ಆಧುನೀಕರಣ: ವಂದೇ ಭಾರತ್ ರೈಲುಗಳ ಪರಿಚಯದಿಂದ ಹಿಡಿದು ಹಳೆಯ ರೈಲು ನಿಲ್ದಾಣಗಳ ನವೀಕರಣದವರೆಗೆ, ಕಳೆದ ದಶಕದಲ್ಲಿ ಭಾರತದ ರೈಲ್ವೆ ಜಾಲವು ಆಧುನೀಕರಣಕ್ಕೆ ಒಳಗಾಗಿದೆ.
ಉಡಾನ್ ಯೋಜನೆಯಡಿಯಲ್ಲಿ ವಿಮಾನ ನಿಲ್ದಾಣ ಮೂಲಸೌಕರ್ಯ ವಿಸ್ತರಣೆ: 2016ರಲ್ಲಿ ಪ್ರಾರಂಭಿಸಲಾದ ಉಡಾನ್ ಯೋಜನೆಯು ಲಕ್ಷಾಂತರ ಜನರಿಗೆ ವಿಮಾನ ಪ್ರಯಾಣವನ್ನು ಲಭ್ಯವಾಗುವಂತೆ ಮಾಡಿದೆ. ಪ್ರಾದೇಶಿಕ ಸಂಪರ್ಕವನ್ನು ಬೆಂಬಲಿಸುವ ಮೂಲಕ 70 ಕ್ಕೂ ಹೆಚ್ಚು ವಿಮಾನ ನಿಲ್ದಾಣಗಳನ್ನು ಸೇರಿಸಲಾಗಿದೆ ಅಥವಾ ಪುನರುಜ್ಜೀವನಗೊಳಿಸಲಾಗಿದೆ.
ಹೊಸ ಸಂಸತ್ತು ಕಟ್ಟಡ ಉದ್ಘಾಟನೆ: 2023ರಲ್ಲಿ ಭಾರತವು ತನ್ನ ನೂತನ ಸಂಸತ್ತಿನ ಕಟ್ಟಡವನ್ನು ಅನಾವರಣಗೊಳಿಸಿತು. ಇದು ಆಧುನಿಕ ವಾಸ್ತುಶಿಲ್ಪವನ್ನು ಪ್ರತಿಬಿಂಬಿಸುವುದರ ಜತೆಗೆ ಹೆಚ್ಚುತ್ತಿರುವ ಶಾಸಕಾಂಗ ಸದಸ್ಯರ (ಸಂಸದರ) ಸಂಖ್ಯೆಗೆ ಅನುಗುಣವಾಗಿ ಆಸನ ವ್ಯವಸ್ಥೆಯನ್ನು ಕಲ್ಪಿಸುವ ಸಾಮರ್ಥ್ಯವನ್ನು ಹೊಂದಿದೆ.
ಹೆದ್ದಾರಿ ಅಭಿವೃದ್ಧಿ ಮತ್ತು ಮೂಲಸೌಕರ್ಯಕ್ಕೆ ಒತ್ತು: ಮೋದಿ ಸರ್ಕಾರವು ರಾಷ್ಟ್ರೀಯ ಹೆದ್ದಾರಿ ಜಾಲವನ್ನು ಆಕ್ರಮಣಕಾರಿಯಾಗಿ ವಿಸ್ತರಿಸಿದೆ. ಇದು ದೇಶದ ಆರ್ಥಿಕ ಬೆಳವಣಿಗೆಗೆ ಮತ್ತು ವಿವಿಧ ರಾಜ್ಯಗಳ ನಡುವಿನ ಸಂಪರ್ಕವನ್ನು ಬಲಪಡಿಸಲು ಪ್ರಮುಖ ಕೊಡುಗೆ ನೀಡಿದೆ.
ದಾಖಲೆಯ ರಕ್ಷಣಾ ರಫ್ತು: 2024-25ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು ₹ 23,622 ಕೋಟಿಗೆ ತಲುಪಿದ್ದು, ಇದು ಇದುವರೆಗಿನ ಗರಿಷ್ಠ ದಾಖಲೆಯಾಗಿದೆ. ಈ ಬಾರಿಯ ಜಿಗಿತವು ರಕ್ಷಣಾ ವಲಯದಲ್ಲಿ ಕೇಂದ್ರ ಸರ್ಕಾರದ ಮೇಕ್ ಇನ್ ಇಂಡಿಯಾ ಅಭಿಯಾನವನ್ನು ಮತ್ತಷ್ಟು ಬಲಪಡಿಸಿದೆ.