ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chirag Paswan: ಚುನಾವಣೆಗೂ ಮುನ್ನವೇ ಮೈತ್ರಿಯಲ್ಲಿ ಬಿರುಕು; ನಿತೀಶ್‌ ಕುಮಾರ್‌ ವಿರುದ್ಧ ಕಿಡಿ ಕಾರಿದ ಪಾಸ್ವಾನ್‌

ಬಿಹಾರದ ಚುನಾವಣೆಗೂ ಮುನ್ನ ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆಗಳು ಗರಿದೆರಿದೆ. ಈ ಕುರಿತು ಬಿಹಾರದ ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ ಹೊಸ ಹೇಳಿಕೆಯೊಂದನ್ನು ನೀಡಿದ್ದಾರೆ. ನಾನು ತರಕಾರಿಗಳ ಮೇಲೆ ಉಪ್ಪಿನಂತೆ, ನಾನು ಪ್ರತಿ ಕ್ಷೇತ್ರದಲ್ಲಿ 20,000 ರಿಂದ 25,000 ಮತದಾರರ ಮೇಲೆ ಪ್ರಭಾವ ಬೀರಬಲ್ಲೆ ಎಂದು ಅವರು ಹೇಳಿದ್ದಾರೆ.

ನಿತೀಶ್‌ ಕುಮಾರ್‌ ವಿರುದ್ಧ ಕಿಡಿ ಕಾರಿದ ಪಾಸ್ವಾನ್‌

-

Vishakha Bhat Vishakha Bhat Sep 16, 2025 4:57 PM

ನವದೆಹಲಿ: ಬಿಹಾರದ ಚುನಾವಣೆಗೂ (Bihar Election) ಮುನ್ನ ಕ್ಷೇತ್ರದಲ್ಲಿ ಚುನಾವಣಾ ಚಟುವಟಿಕೆಗಳು ಗರಿದೆರಿದೆ. ಈ ಕುರಿತು ಬಿಹಾರದ ಕೇಂದ್ರ ಸಚಿವ ಹಾಗೂ ಎಲ್‌ಜೆಪಿ ಮುಖ್ಯಸ್ಥ ಚಿರಾಗ್‌ ಪಾಸ್ವಾನ್‌ (Chirag Paswan) ಹೊಸ ಹೇಳಿಕೆಯೊಂದನ್ನು ನೀಡಿದ್ದಾರೆ. ನಾನು ತರಕಾರಿಗಳ ಮೇಲೆ ಉಪ್ಪಿನಂತೆ... ನಾನು ಪ್ರತಿ ಕ್ಷೇತ್ರದಲ್ಲಿ 20,000 ರಿಂದ 25,000 ಮತಗಳ ಮೇಲೆ ಪ್ರಭಾವ ಬೀರಬಲ್ಲೆ ಎಂದು ಅವರು ಹೇಳಿದ್ದಾರೆ. ಬಿಹಾರದ 243 ಸ್ಥಾನಗಳಲ್ಲಿ ಹೆಚ್ಚಿನ ಸ್ಥಾನಕ್ಕಾಗಿ ಪಾಸ್ವಾನ್ ತೀವ್ರ ಪೈಪೋಟಿ ನಡೆಸುತ್ತಿದ್ದಾರೆ; 2020 ರ ಚುನಾವಣೆಯಲ್ಲಿ ಎಲ್ಜೆಪಿ (ಅವರ ತಂದೆ ರಾಮ್ ವಿಲಾಸ್ ಅವರ ಮರಣದ ನಂತರವೂ ನಾವು ಹೋರಾಡಿದ್ದೇವೆ. ಆಗ ಒಂದು ಸ್ಥಾನವಿತ್ತು, ಇದೀಗ ಅದನ್ನು ಐದಕ್ಕೇರಿಸಿದ್ದೇವೆ ಎಂದು ಅವರು ಹೇಳಿದರು.

ನನಗೆ ಯೋಗ್ಯ ಸಂಖ್ಯೆಯ ಸ್ಥಾನಗಳು ಬೇಕು... ನನ್ನ ಮನಸ್ಸಿನಲ್ಲಿ ಒಂದು ಸಂಖ್ಯೆ ಇದೆ ಮತ್ತು ನನಗೆ ಗುಣಮಟ್ಟದ ಸ್ಥಾನಗಳು ಬೇಕು. ಆದರೆ ಸಾರ್ವಜನಿಕ ವೇದಿಕೆಯಲ್ಲಿ ಆ ಮಾಹಿತಿಯನ್ನು ಬಹಿರಂಗಪಡಿಸಲು ನಾನು ಬಯಸುವುದಿಲ್ಲ. ಅದು ಸಮ್ಮಿಶ್ರ ಪಾಲುದಾರ ಪಕ್ಷಕ್ಕೆ ಅನ್ಯಾಯ ಮಾಡಿದ ರೀತಿ ಆಗುತ್ತದೆ. ಬಿಜೆಪಿ ನೇತೃತ್ವದ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟವು ಸೀಟು ಹಂಚಿಕೆ ಮಾತುಕತೆಗಳನ್ನು ಔಪಚಾರಿಕವಾಗಿ ಪ್ರಾರಂಭಿಸಿಲ್ಲ ಎಂದು ಅವರು ಹೇಳಿದರು.

ನನ್ನ ಬೆಂಬಲಿಗರು ನನ್ನನ್ನು ಮುಖ್ಯಮಂತ್ರಿಯಾಗಿ ನೋಡಲು ಬಯಸುತ್ತಾರೆ. ನಾನು ಬಿಹಾರದಲ್ಲಿ ಎನ್‌ಡಿಎ ಸರ್ಕಾರದ ಭಾಗವಾಗಿಲ್ಲ. ನಾನು ಸರ್ಕಾರವನ್ನು ಬೆಂಬಲಿಸುತ್ತಿದ್ದೇನೆ. ನಾನು ಕೇಂದ್ರದಲ್ಲಿ ಮಾತ್ರ ಎನ್‌ಡಿಎಯ ಭಾಗವಾಗಿದ್ದೇನೆ" ಎಂದು ಅವರು ಅವರು ಹೇಳಿದ್ದಾರೆ. ಇನ್ನೇನು ಕೆಲವೇ ತಿಂಗಳಲ್ಲಿ ಬಿಹಾರ ವಿಧಾನಸಭೆಗೆ ಚುನಾವಣೆ ನಡೆಯಲಿದ್ದು, ನಿತೀಶ್‌ಕುಮಾರ್‌ ನೇತೃತ್ವದ ಮೈತ್ರಿಕೂಟವು ಮತ್ತೆ ಅಧಿಕಾರ ಹಿಡಿಯಲು ಯತ್ನ ನಡೆಸುತ್ತಿದೆ. ಈ ನಡುವೆ, ಅದೇ ಮೈತ್ರಿಕೂಟದ ಭಾಗವಾಗಿರುವ ಎಲ್‌ಜೆಪಿಯ ಚಿರಾಗ್‌ ಪಾಸ್ವಾನ್‌ ಬಿಹಾರಕ್ಕೆ ಮರಳುವ ಅನಿವಾರ್ಯತೆ ಎದುರಾಗಿದೆ ಎಂದಿದ್ದಾರೆ.

ಈ ಸುದ್ದಿಯನ್ನೂ ಓದಿ: Viral News: ಬಿಹಾರದ ಮಹಿಳೆಗೆ 200 ರೂ. ವಂಚನೆ; ತೇಜಸ್ವಿ ಯಾದವ್ ಸೇರಿದಂತೆ ಇತರರ ವಿರುದ್ಧ ದೂರು, ಎಫ್ಐಆರ್ ದಾಖಲು

ನಿತೀಶ್‌ ಕುಮಾರ್‌ ಸರ್ಕಾರವನ್ನು ಟೀಕಿಸಿದ ಪಾಸ್ವಾನ್‌, ಕಾನೂನು ಮತ್ತು ಸುವ್ಯವಸ್ಥೆ ವಿಷಯದಲ್ಲಿ ನಾನು ನಿತೀಶ್ ಕುಮಾರ್ ಅವರ ಸರ್ಕಾರವನ್ನು ಟೀಕಿಸುತ್ತೇನೆ, ರಾಜ್ಯದಲ್ಲಿ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರಬಬೇಕು ಎಂದು ಹೇಳಿದರು.