ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

“ವೃತ್ತಿ ಜೀವನವೇ ಮುಗಿಯಿತೆಂದು ಭಾವಿಸಿದ್ದೆ”: ಚೀನಾ ಸೈನಿಕರು ತಮ್ಮ ತಂಡವನ್ನು ಬಂಧಿಸಿದ ಘಟನೆ ನೆನಪಿಸಿಕೊಂಡ ಅಜಿತ್ ದೋವಲ್

Ajit Doval Recalls Mission: ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಗುಪ್ತಚರ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿನ ರೋಚಕ ಘಟನೆಯೊಂದು ಇದೀಗ ಗಮನ ಸೆಳೆದಿದೆ. ಸಿಕ್ಕಿಂನಲ್ಲಿ ಅವರಿಗೆ ವಹಿಸಲಾಗಿದ್ದ ಅತ್ಯಂತ ಸೂಕ್ಷ್ಮ ಕಾರ್ಯಾಚರಣೆಯೊಂದು ಅವರ ವೃತ್ತಿ ಜೀವನವೇ ಅಪಾಯಕ್ಕೆ ಸಿಲುಕುವಂತಹ ಪರಿಸ್ಥಿತಿ ತಂದಿತ್ತು. ಈ ಬಗ್ಗೆ ಇಲ್ಲಿದೆ ವಿವರ.

ವೃತ್ತಿ ಜೀವನವೇ ಮುಗಿಯಿತೆಂದು ಭಾವಿಸಿದ್ದೆ: ಅಜಿತ್ ದೋವಲ್

ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (ಸಂಗ್ರಹ ಚಿತ್ರ) -

Priyanka P
Priyanka P Sep 19, 2026 8:37 PM

ನವದೆಹಲಿ, ಸೆ. 19: ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ತಮ್ಮ ಗುಪ್ತಚರ ವೃತ್ತಿ ಜೀವನದ ಆರಂಭಿಕ ದಿನಗಳಲ್ಲಿನ ವೈಯಕ್ತಿಕ ಅನುಭವವೊಂದನ್ನು ಹಂಚಿಕೊಂಡಿದ್ದಾರೆ. ಸಿಕ್ಕಿಂನಲ್ಲಿ (Sikkim) ನಡೆದ ಆ ಕಾರ್ಯಾಚರಣೆಯು ತಮ್ಮ ವೃತ್ತಿ ಜೀವನವನ್ನೇ ಬಹುತೇಕ ಅಂತ್ಯಗೊಳಿಸುವ ಹಂತಕ್ಕೆ ತಲುಪಿತ್ತು ಎಂದು ಅವರು ಹೇಳಿದ್ದಾರೆ. ಅಜಿತ್ ದೋವಲ್ ಗುಪ್ತಚರ ವೃತ್ತಿ ಜೀವನಕ್ಕೆ ಕಾಲಿಟ್ಟಾಗ ಅವರಿಗೆ 20 ವರ್ಷ. ಈ ಸಂದರ್ಭದಲ್ಲಿ ಅವರಿಗೆ ಚೀನಾ ಗಡಿಯ ಸಮೀಪ ಒಂದು ಮಹತ್ವದ ಕಾರ್ಯಾಚರಣೆಯನ್ನು ವಹಿಸಲಾಗಿತ್ತು.

ಆ ಕಾರ್ಯಾಚರಣೆ ಯೋಜನೆಯಂತೆ ನಡೆಯದೆ ಸಮಸ್ಯೆ ಎದುರಾಯಿತು. ಇದರಿಂದ ದೋವಲ್ ತಮ್ಮ ವೃತ್ತಿ ಜೀವನವೇ ಅಂತ್ಯವಾಗಬಹುದು ಎಂದು ಭಯಪಟ್ಟಿದ್ದರು. ಆದರೆ ಆ ಘಟನೆ ಅವರ ವೃತ್ತಿ ಜೀವನವನ್ನು ಅಂತ್ಯಗೊಳಿಸುವ ಬದಲು, ಅವರಿಗೆ ಜೀವನಪೂರ್ತಿ ನೆನಪಿನಲ್ಲಿ ಉಳಿಯುವಂತಹ ಮಹತ್ವದ ಪಾಠವೊಂದನ್ನು ಕಲಿಸಿತು.

ಏನಿದು ಕಾರ್ಯಾಚರಣೆ?

ಸಾಮಾನ್ಯವಾಗಿ ತಮ್ಮ ವೈಯಕ್ತಿಕ ಅನುಭವಗಳನ್ನು ಹೆಚ್ಚು ಹಂಚಿಕೊಳ್ಳದ ದೋವಲ್ ಇತ್ತೀಚೆಗೆ ಐಐಟಿ ರೂರ್ಕಿ ಘಟಿಕೋತ್ಸವದಲ್ಲಿ ಆ ಸಾಹಸ ಕಾರ್ಯಾಚರಣೆಯ ಬಗ್ಗೆ ಮಾತನಾಡಿದ್ದಾರೆ. ಆ ಸಮಯದಲ್ಲಿ, ದೋವಲ್ ಅವರನ್ನು ಸಿಕ್ಕಿಂನಲ್ಲಿ ಗುಪ್ತಚರ ವಿಭಾಗದ ಉಸ್ತುವಾರಿಯಾಗಿ ನೇಮಿಸಲಾಗಿತ್ತು. ಗಡಿ ಪ್ರದೇಶಗಳ ಮೇಲೆ ನಿಗಾ ಇಡುವುದು ಮತ್ತು ಚೀನಾದ ಪೀಪಲ್ಸ್ ಲಿಬರೇಶನ್ ಆರ್ಮಿಯ (PLA) ಚಲನವಲನಗಳು ಮತ್ತು ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸುವುದು ಅವರ ಜವಾಬ್ದಾರಿಯಾಗಿತ್ತು.

ಪಹಲ್ಗಾಮ್ ಭಯೋತ್ಪಾದಕ ದಾಳಿ ಬಳಿಕ ಪ್ರಧಾನಿ ನರೇಂದ್ರ ಮೋದಿ ಮೊದಲು ಕೇಳಿದ್ದೇನು? ಕುತೂಹಲದ ಮಾಹಿತಿ ಬಹಿರಂಗಪಡಿಸಿದ ಅಜಿತ್ ದೋವಲ್

“ಆಗ ನನಗೆ 20 ವರ್ಷ. ಸಿಕ್ಕಿಂನಲ್ಲಿ ಗುಪ್ತಚರ ವಿಭಾಗದ ಜವಾಬ್ದಾರಿ ಹೊತ್ತಿದ್ದೆ. ಆ ಸಮಯದಲ್ಲಿ ಸಿಕ್ಕಿಂ ಭಾರತದ ಭಾಗವಾಗಿರಲಿಲ್ಲ. ಭಾರತದ ಭಾಗವಾಗುವ ಪ್ರಕ್ರಿಯೆ ನಡೆಯುತ್ತಿತ್ತು. ಸಿಕ್ಕಿಂ ಭಾರತಕ್ಕೆ ವಿಲೀನವಾಗುವ ಆ ಪ್ರಕ್ರಿಯೆಯಲ್ಲೇ ನಾನು ಭಾಗಿಯಾಗಿದ್ದೆ” ಎಂದು ಹೇಳಿದರು.

ಸಿಕ್ಕಿಂ ಒಂದು ಕಾಲದಲ್ಲಿ ನಮ್ಗ್ಯಾಲ್ ರಾಜವಂಶದ ಚೋಗ್ಯಲ್‌ಗಳಿಂದ ಮೂರು ಶತಮಾನಗಳಿಗೂ ಹೆಚ್ಚು ಕಾಲ ಆಳಲ್ಪಟ್ಟ ಸ್ವತಂತ್ರ ರಾಜ್ಯವಾಗಿತ್ತು. ಭಾರತ ಸ್ವಾತಂತ್ರ್ಯ ಪಡೆದ ನಂತರ 1950ರಲ್ಲಿ ಸಿಕ್ಕಿಂ ಭಾರತೊಂದಿಗೆ ಒಪ್ಪಂದ ಮಾಡಿಕೊಂಡಿತು. ಆ ಒಪ್ಪಂದದ ಪ್ರಕಾರ ಸಿಕ್ಕಿಂ ಭಾರತದ ರಕ್ಷಣಾತ್ಮಕ ಆಶ್ರಯದಲ್ಲಿರುವ ರಾಜ್ಯವಾಯಿತು. ಅಂದರೆ ಸಿಕ್ಕಿಂ ತನ್ನ ಆಂತರಿಕ ಆಡಳಿತವನ್ನು ತಾನೇ ನಡೆಸುತ್ತಿದ್ದರೂ, ರಕ್ಷಣಾ ಮತ್ತು ವಿದೇಶಾಂಗ ವ್ಯವಹಾರಗಳ ಮೇಲಿನ ನಿಯಂತ್ರಣವನ್ನು ಭಾರತ ಸರ್ಕಾರ ಮಾಡುತ್ತಿತ್ತು.

ಸಿಕ್ಕಿಂ 1975ರಲ್ಲಿ ಅಧಿಕೃತವಾಗಿ ಭಾರತದ ಭಾಗವಾಯಿತು. ಆದರೆ ಈ ವಿಲೀನದ ಪ್ರಕ್ರಿಯೆಯು ಇಂದಿಗೂ ನಿಗೂಢತೆಯಿಂದ ಕೂಡಿದೆ. ಈ ಐತಿಹಾಸಿಕ ವಿಲೀನದ ಹಿಂದೆ ಭಾರತದ ಗುಪ್ತಚರ ಸಂಸ್ಥೆಯಾದ ‘ರಾ’ ಎರಡು ವರ್ಷಗಳಿಗೂ ಹೆಚ್ಚು ಕಾಲ ನಡೆಸಿದ ಅತ್ಯಂತ ರಹಸ್ಯ ಕಾರ್ಯಾಚರಣೆಯೊಂದು ಅಡಗಿತ್ತು.

ಈ ವಿಲೀನದ ಅವಧಿಯಲ್ಲಿಯೇ ದೋವಲ್ ಅವರನ್ನು ಹಿಮಾಲಯನ್ ರಾಜ್ಯಕ್ಕೆ ಕಳುಹಿಸಲಾಯಿತು. ಅಂತಹ ಒಂದು ಕಾರ್ಯಾಚರಣೆಯ ಸಮಯದಲ್ಲಿ, ಗುಪ್ತಚರ ಸಂಗ್ರಹಣೆಗಾಗಿ ಗಡಿಯ ಬಳಿ ತಂಡವನ್ನು ಕಳುಹಿಸಿದ್ದಾಗಿ ದೋವಲ್ ನೆನಪಿಸಿಕೊಂಡರು. ಅವರು ಎಂಟು ದಿನಗಳಲ್ಲಿ ಹಿಂತಿರುಗುವ ನಿರೀಕ್ಷೆಯಿತ್ತು. ಅಂದರೆ, ತಂಡ ಏಕಾಏಕಿ ಸಂಪರ್ಕಕ್ಕೆ ಸಿಗದೆ ಹೋದದ್ದು ದೋವಲ್ ಅವರಿಗೆ ದೊಡ್ಡ ಚಿಂತೆಗೆ ಕಾರಣವಾಗಿತ್ತು. ಈ ಕಾರ್ಯಾಚರಣೆಯ ಸಮಯದಲ್ಲಿ ಯಾವುದೇ ನೈಸರ್ಗಿಕ ವಿಕೋಪಗಳ ವರದಿಗಳು ಇರಲಿಲ್ಲ.

ಈ ವೇಳೆ ದೋವಲ್ ಅವರಿಗೆ ಮುಖ್ಯ ಕಚೇರಿಯಿಂದ ಕರೆ ಬಂತು. ಅವರ ಮೇಲಾಧಿಕಾರಿ, “ನೀವು ಕೆಲವರನ್ನು ಗಡಿಯಾಚೆಗೆ ಕಳುಹಿಸಿದ್ದೀರಾ?” ಎಂದು ಕೇಳಿದರು. ಆದರೆ ನಂತರ ದೋವಲ್ ಅವರ ಭಯ ನಿಜವಾಯಿತು. ಅವರ ತಂಡವನ್ನು ಚೀನಾ ಸೇನೆ ಹಿಡಿದುಕೊಂಡಿತ್ತು ಎಂಬ ಮಾಹಿತಿ ಸಿಕ್ಕಿತು. ಚೀನಾ ಸೇನೆಯವರು ತಂಡದ ಸದಸ್ಯರನ್ನು ವಿಚಾರಣೆಯೂ ನಡೆಸಿದ್ದರು.

ಅಜಿತ್ ದೋವಲ್ ಒತ್ತಡದ ಬಳಿಕ ಒಟ್ಟಾವಾದಲ್ಲಿ ಖಲಿಸ್ತಾನಿ ಉಗ್ರನ ಬಂಧನ

ಕೆಲವು ದಿನಗಳ ನಂತರ ಭಾರತೀಯ ಗುಪ್ತಚರ ಸಿಬ್ಬಂದಿಯನ್ನು ಚೀನಾ ಸೇನೆ ಬಿಡುಗಡೆ ಮಾಡಿತು. ದೋವಲ್ ಅವರ ಪ್ರಕಾರ, ಬಹುಶಃ “ಯಾವುದೋ ಒಪ್ಪಂದ ನಡೆದಿರಬಹುದು”. ಬಿಡುಗಡೆಯಾಗಿ ಹಿಂದಿರುಗಿದ ತಮ್ಮ ತಂಡದ ಸ್ಥಿತಿಯನ್ನು ನೆನಪಿಸಿಕೊಂಡ ಅವರು, “ಅವರು ಸಂಪೂರ್ಣವಾಗಿ ಕುಗ್ಗಿಹೋಗಿದ್ದರು. ತುಂಬಾ ಹದಗೆಟ್ಟ ಸ್ಥಿತಿಯಲ್ಲಿ ಮರಳಿದ್ದರು” ಎಂದು ಹೇಳಿದರು.

ಈ ಘಟನೆ ಕುರಿತು ತನಿಖೆ ಆರಂಭವಾಯಿತು. ತಮ್ಮ ವೃತ್ತಿ ಜೀವನವೇ ಮುಗಿಯಿತು ಎಂದು ದೋವಲ್ ಭಾವಿಸಿದರು. “ನನ್ನ ವೃತ್ತಿ ಜೀವನ ಮುಗಿಯಿತು. ಈಗ ಬೇರೆ ವೃತ್ತಿ ಆರಂಭಿಸಬೇಕಾಗಬಹುದು. ನಾನು ಮಾಡಿದ ಕೆಲಸ ವೃತ್ತಿಪರವಾಗಿ ತಪ್ಪಾಗಿದೆ ಎಂದು ಭಾವಿಸಿದೆ” ಎಂದು ಅವರು ನೆನಪಿಸಿಕೊಂಡರು. ಆದರೆ, ನಂತರ ನಡೆದ ತನಿಖೆಯಲ್ಲಿ ದೋವಲ್ ಅವರ ತಪ್ಪಿಲ್ಲ ಎಂದು ಸ್ಪಷ್ಟವಾಯಿತು. ಅವರ ತಂಡಕ್ಕೆ ಮುಖ್ಯ ಕಚೇರಿಯಿಂದ ನೀಡಲಾಗಿದ್ದ ನಕ್ಷೆಗಳು ಮತ್ತು ರೇಖಾಚಿತ್ರಗಳಲ್ಲೇ ತಪ್ಪುಗಳಿದ್ದವು.

ಹೀಗಾಗಿ ದೋವಲ್ ಅವರಿಗೆ ಕ್ಲೀನ್ ಚಿಟ್ ಸಿಕ್ಕಿತು. ಅಂದರೆ ಅವರನ್ನು ತಪ್ಪಿತಸ್ಥರೆಂದು ಪರಿಗಣಿಸಲಿಲ್ಲ. ಆದರೂ ಈ ಘಟನೆ ಅವರನ್ನು ತುಂಬಾ ದುಃಖಕ್ಕೆ ದೂಡಿತು ಎಂದು ಹೇಳಿದರು. ಆಗ ಅವರೊಂದಿಗೆ ಗುಪ್ತಚರ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದ ಟಿಬೆಟಿಯನ್ ಶೆರ್ಪಾ ಒಬ್ಬರು ಒಂದು ಸರಳ ಸಲಹೆ ನೀಡಿದರು. ಆ ಶೆರ್ಪಾ ಹಲವು ವರ್ಷಗಳಿಂದ ಹಿಮದಿಂದ ಆವೃತವಾದ ಪರ್ವತ ಪ್ರದೇಶಗಳಲ್ಲಿ ದಾರಿ ಹುಡುಕುವ ಕೆಲಸ ಮಾಡಿದ್ದ ವ್ಯಕ್ತಿಯಾಗಿದ್ದರು.