ಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರ ಕೇಸ್: ವಾದ ಮಂಡನೆಗೆ ತಾನೇ ವಕೀಲೆಯಾಗಿ ಹೈಕೋರ್ಟ್ಗೆ ಎಂಟ್ರಿ ಕೊಟ್ಟ ಮಮತಾ!
Post-Poll Violence Case in West Bengal: ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಕಪ್ಪು ವಕೀಲರ ಗೌನ್ ಧರಿಸಿ ಕೋಲ್ಕತ್ತಾ ಹೈಕೋರ್ಟ್ಗೆ ಆಗಮಿಸಿದರು. ಚುನಾವಣಾ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಾದ ಮಂಡಿಸಲು ಅವರು ನ್ಯಾಯಾಲಯಕ್ಕೆ ಆಗಮಿಸಿದರು. ಈ ವೇಳೆ ಅವರ ವಿರುದ್ಧ ತೀವ್ರ ಘೋಷಣೆ ಹಾಗೂ ಪ್ರತಿಭಟನೆಗಳು ನಡೆದವು.
ವಕೀಲರ ನಿಲುವಂಗಿಯಲ್ಲಿ ಹೈಕೋರ್ಟ್ಗೆ ಆಗಮಿಸಿದ ಮಮತಾ ಬ್ಯಾನರ್ಜಿ -
ಕೋಲ್ಕತ್ತಾ, ಮೇ 14: ಪಶ್ಚಿಮ ಬಂಗಾಳದಲ್ಲಿ ಹೈಡ್ರಾಮ ಸದ್ಯ ನಿಲ್ಲುವ ಲಕ್ಷಣಗಳು ಕಾಣುತ್ತಿಲ್ಲ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ (Mamata Banerjee) ಅವರು ಕಪ್ಪು ವಕೀಲರ ಗೌನ್ ಧರಿಸಿ ಕೋಲ್ಕತ್ತಾ ಹೈಕೋರ್ಟ್ಗೆ (Calcutta High Court) ಆಗಮಿಸಿದರು. ಚುನಾವಣಾ ನಂತರದ ಹಿಂಸಾಚಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ವಾದ ಮಂಡಿಸಲು ಅವರು ನ್ಯಾಯಾಲಯಕ್ಕೆ ಆಗಮಿಸಿದರು. ಮಮತಾ ನ್ಯಾಯಾಲಯದ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ ಜೋರಾದ ಘೋಷಣೆಗಳು ಕೇಳಿಬಂದವು.
ಇತ್ತೀಚೆಗೆ ನಡೆದ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಟಿಎಂಸಿ ಸೋತು ಸುಣ್ಣವಾಯಿತು. ಫಲಿತಾಂಶದ ಬಳಿಕ ರಾಜ್ಯದೆಲ್ಲೆಡೆ ವ್ಯಾಪಕ ಹಿಂಸಾಚಾರದಂತಹ ಘಟನೆಗಳು ನಡೆಯುತ್ತಿವೆ. ಹಿಂಸಾಚಾರದ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ಪರವಾಗಿ ಸ್ವತಃ ವಾದ ಮಂಡಿಸಲು ಅವರು ನ್ಯಾಯಾಲಯಕ್ಕೆ ಹಾಜರಾಗಿದ್ದರು. ಈ ವೇಳೆ ಅವರ ವಿರುದ್ಧ ತೀವ್ರ ಘೋಷಣೆ ಹಾಗೂ ಪ್ರತಿಭಟನೆಗಳು ನಡೆದವು.
ಬಂಗಾಳದಾದ್ಯಂತ ಬಿಜೆಪಿ ನಡೆಸಿದ ವ್ಯಾಪಕ ಚುನಾವಣೋತ್ತರ ಹಿಂಸಾಚಾರಕ್ಕೆ ಸಂಬಂಧಿಸಿದ ವಿಷಯದಲ್ಲಿ ವಾದಿಸಲು ಮಮತಾ ಬ್ಯಾನರ್ಜಿ ಇಂದು ಕೋಲ್ಕತ್ತಾ ಹೈಕೋರ್ಟ್ಗೆ ತೆರಳಿದ್ದಾರೆ ಎಂದು ಟಿಎಂಸಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದೆ. ಅವರು ಮತ್ತೊಮ್ಮೆ ತಾವು ಉಳಿದವರಿಗಿಂತ ಹೇಗೆ ಭಿನ್ನ ಎಂಬುದನ್ನು ಸಾಬೀತುಪಡಿಸಿದ್ದಾರೆ ಎಂದು ಪೋಸ್ಟ್ನಲ್ಲಿ ತಿಳಿಸಿದೆ.
ಇಲ್ಲಿದೆ ವಿಡಿಯೊ:
Our Hon’ble Chairperson Smt @MamataOfficial personally reached the Calcutta High Court today to argue in a matter concerning the widespread post-poll violence unleashed across Bengal by @BJP4Bengal.
— All India Trinamool Congress (@AITCofficial) May 14, 2026
Once again, she has shown what truly sets her apart -
She NEVER abandons the… pic.twitter.com/8OkszMxaYa
Former Chief Minister Mamata Banerjee today faced heavy sloganeering at Calcutta High Court. She was there to appear in a case seeking measures against post-election violence in WB. pic.twitter.com/h2IHs7BPfF
— Bar and Bench (@barandbench) May 14, 2026
ಬಂಗಾಳದ ಜನರನ್ನು ಅವರ ಕಷ್ಟದ ಸಮಯದಲ್ಲಿ ಮಮತಾ ಬ್ಯಾನರ್ಜಿ ಎಂದಿಗೂ ಕೈಬಿಡುವುದಿಲ್ಲ. ಸತ್ಯ, ನ್ಯಾಯ ಮತ್ತು ಸಾಂವಿಧಾನಿಕ ಮೌಲ್ಯಗಳಿಗಾಗಿ ಹೋರಾಡುವುದನ್ನು ಅವರು ಎಂದಿಗೂ ನಿಲ್ಲಿಸುವುದಿಲ್ಲ. ಸಹಾನುಭೂತಿ, ಧೈರ್ಯ ಮತ್ತು ದೃಢನಿಶ್ಚಯದಿಂದ ದ್ವೇಷದ ರಾಜಕೀಯವನ್ನು ಮೀರಿ ನಿಲ್ಲುತ್ತಾರೆ ಎಂದು ಟಿಎಂಸಿ ತಿಳಿಸಿದೆ.
ನಂದಿಗ್ರಾಮವನ್ನು ಬಿಟ್ಟುಕೊಟ್ಟ ಬಂಗಾಳ ಸಿಎಂ ಸುವೇಂದು ಅಧಿಕಾರಿ: ಭವಾನಿಪುರ ಶಾಸಕರಾಗಿ ಪ್ರಮಾಣ ವಚನ
ಎಸ್ಐಆರ್ನ ಅನ್ಯಾಯವನ್ನು ಎದುರಿಸುತ್ತಿರಲಿ ಅಥವಾ ಬಿಜೆಪಿಯ ಅಶಿಸ್ತಿನ ನಡವಳಿಕೆಯ ವಿರುದ್ಧ ದೃಢವಾಗಿ ನಿಲ್ಲುವುದಿರಲಿ, ಇಂದು ದೇಶದಲ್ಲಿ ಅವರಂತಹ ಶ್ರೇಷ್ಠ ನಾಯಕಿ ಯಾರೂ ಇಲ್ಲ ಎಂದು ಅವರು ಸಾಬೀತುಪಡಿಸುತ್ತಲೇ ಇದ್ದಾರೆ ಎಂದು ಪಕ್ಷ ಹೇಳಿದೆ.
ವಿಚಾರಣೆಯ ಸಮಯದಲ್ಲಿ ಮಮತಾ ಬ್ಯಾನರ್ಜಿ ಅವರು ಕೆಲವು ಫೋಟೋಗಳನ್ನು ನ್ಯಾಯಾಲಯಕ್ಕೆ ಪ್ರಸ್ತುತಪಡಿಸಿದರು. ಹಿಂಸಾಚಾರದಲ್ಲಿ ಮಕ್ಕಳು ಮತ್ತು ಮಹಿಳೆಯರನ್ನು ಸಹ ಬಿಡುತ್ತಿಲ್ಲ ಎಂದು ಭಾವುಕರಾಗಿ ಕೋರ್ಟ್ ಮುಂದೆ ತಿಳಿಸಿದರು. ಪೊಲೀಸರ ಮುಂದೆಯೇ ಮನೆಗಳನ್ನು ಮತ್ತು ಕಚೇರಿಗಳನ್ನು ವಶಪಡಿಸಿಕೊಳ್ಳಲಾಗುತ್ತಿದೆ. ಜನರನ್ನು ಲೂಟಿ ಮಾಡಲಾಗುತ್ತಿದೆ. ಇದಕ್ಕೆ ಸಂಬಂಧಿಸಿದ ಚಿತ್ರಗಳನ್ನು ನಾನು ಈಗಾಗಲೇ ನೀಡಿದ್ದೇನೆ. ತಕ್ಷಣವೇ ಜನರಿಗೆ ರಕ್ಷಣೆ ನೀಡಬೇಕೆಂದು ಅವರು ವಾದಿಸಿದರು.
ದಯವಿಟ್ಟು ಬಂಗಾಳದ ಜನರನ್ನು ರಕ್ಷಿಸಿ. ಇದು ಬುಲ್ಡೋಜರ್ ರಾಜ್ಯವಲ್ಲ ಎಂದು ಅವರು ಮನವಿ ಮಾಡಿದರು. ಘರ್ಷಣೆ, ಹಿಂಸಾಚಾರಗಳು ಪೊಲೀಸರ ಸಮ್ಮುಖದಲ್ಲೇ ನಡೆಯುತ್ತಿದೆ ಎಂದು ಅವರು ನ್ಯಾಯಾಲಯದಲ್ಲಿ ಆರೋಪಿಸಿದರು. ಅನಧಿಕೃತ ಕಟ್ಟಡವನ್ನೇ ಕೆಡವುತ್ತಿದ್ದರೂ ಸಹ, ಸಂಬಂಧಪಟ್ಟ ವ್ಯಕ್ತಿಗಳಿಗೆ ತಮ್ಮ ವಾದ ಮಂಡಿಸಲು ಹಕ್ಕಿರುತ್ತದೆ ಎಂದು ಅವರು ಹೇಳಿದರು.
ಇನ್ನು ಮಮತಾ ಬ್ಯಾನರ್ಜಿ ಕೊಲ್ಕತ್ತಾ ಹೈಕೋರ್ಟ್ಗೆ ಆಗಮಿಸಿದ ಬಗ್ಗೆ ಟೀಕಿಸಿದ ಬಿಜೆಪಿ ವಕ್ತಾರ ಎನ್ವಿ ಸುಭಾಷ್, ತೃಣಮೂಲ ಕಾಂಗ್ರೆಸ್ಗೆ ಸೋಲನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದರು.