ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ

ಓದುಗರ ಓಣಿ

Readers Colony: ಕಥೆಗಾರರ ಪಡಿಪಾಟಲು

Readers Colony: ಕಥೆಗಾರರ ಪಡಿಪಾಟಲು

‘ಲವ್ ಮಾಕ್‌ಟೈಲ್-3’ ಚಿತ್ರದ ಕಥೆಯು 1990ರಲ್ಲಿ ಬಿಡುಗಡೆಯಾಗಿದ್ದ ‘ಮತ್ತೆ ಹಾಡಿತು ಕೋಗಿಲೆ’ ಚಿತ್ರದ ಕಥೆಯನ್ನು ಹೋಲುವಂತಿದೆ ಎಂದು ಅಂಕಣಕಾರರು ತಿಳಿಸಿದ್ದಾರೆ; ಈ ಚಿತ್ರದ ನಿರ್ದೇಶಕರಾದ ಭಾರ್ಗವ ಅವರು ಈ ಕುರಿತಂತೆ ಸ್ಪಷ್ಟನೆ ನೀಡಿದರೆ ಒಳಿತು. ಕಿರುತೆರೆ ಯೂ ಇದಕ್ಕೆ ಹೊರತಾಗಿಲ್ಲ, ಅಲ್ಲಂತೂ ಕೇಳುವವರೇ ಇಲ್ಲ

Readers Colony: ಹೊಸ ಮನ್ವಂತರ

Readers Colony: ಹೊಸ ಮನ್ವಂತರ

‘ನೋಟ್ ಬ್ಯಾನ್ ನೆನಪಿಸಿದ ಧುರಂಧರ್’ ಶೀರ್ಷಿಕೆಯ ಮೋಹನ್ ವಿಶ್ವ ಅವರ ಅಂಕಣ ಬರಹ (ಮಾ.21) ತುಂಬಾ ಪ್ರಸ್ತುತವಾಗಿದೆ. ಭಾರತದ ಆರ್ಥಿಕತೆಯನ್ನು ಅಭದ್ರಗೊಳಿಸುವ ಯೋಜನೆ ಗಳು ನೆರೆಯ ಪಾಕಿಸ್ತಾನದಲ್ಲಿ ಬಹಳ ವರ್ಷಗಳಿಂದ ರೂಪುಗೊಳ್ಳುತ್ತಲೇ ಇವೆ. ಅವುಗಳಲ್ಲಿ ಮುಖ್ಯವಾದುದು ನಕಲಿ ನೋಟಿನ ದಂಧೆ.

Readers Colony: ಥ್ಯಾಂಕ್ಯೂ ವಾಟ್ಸಾಪ್!

Readers Colony: ಥ್ಯಾಂಕ್ಯೂ ವಾಟ್ಸಾಪ್!

ಒಂದು ಮೆಸೇಜ್ ಈ ಕಡೆಯಿಂದ ಫಾರ್ವರ್ಡ್ ಆದ್ರ, ‘ಧಡಕ್’ ಅಂತ ಇನ್ನೊಂದು ಫಾರ್ವರ್ಡ್ ಆ ಕಡೆಯಿಂದ ಬರ್ತದ! ಒಂಥರಾ ಲಗ್ನದಾಗ ಕೊಟ್ಟಂಥ ರವಿಕೆ ಖಣಾ ಇದ್ದಂಗ.. ಪ್ಯೂರ್‌ಲೀ ದಾಟಸ್ಲಿಕ್ಕೇ. ಮೆಸೇಜುಗಳ ಜಾವಕ-ಆವಕ ಸರಿಯಾಗಿ ಟ್ಯಾಲಿ ಆದ್ರ ಸಾಕು! ಯಾವುದೇ ಸಾರ್ವಜನಿಕ ಭೇಟಿ ಇಲ್ಲ, ಸಾಮೂಹಿಕ ಪ್ರಾರ್ಥನೆ ಇಲ್ಲ, ನಿಗದಿತ ಸಮಯ-ಸ್ಥಳ ಅನ್ನೋದೇ ಇಲ್ಲ, ನಿರ್ದಿಷ್ಟ ಉಡುಪೂ ಇಲ್ಲ, ಸೆಕ್ಯುಲರ್ ಹಿಂದೂಗಳು ನಾವು ಅದಕ್ಕ.

Readers Colony: ಕೇರಳ ಮಾದರಿಯಾಗಲಿ

Readers Colony: ಕೇರಳ ಮಾದರಿಯಾಗಲಿ

ಜನರಿಗೆ ‘ಉಚಿತ’ಗಳ ಭಾಗ್ಯವನ್ನು ನೀಡುವುದಕ್ಕಿಂತ, ಉಚಿತ ಶಿಕ್ಷಣ ಮತ್ತು ಆರೋಗ್ಯ ಚಿಕಿತ್ಸೆ ಯ ಭಾಗ್ಯವನ್ನು ನೀಡಬೇಕು ಎನ್ನುವ ಕೂಗು ಬಹುದಿನಗಳಿಂದ ಅಲ್ಲಿ ಕೇಳಿ ಬರುತ್ತಿತ್ತು; ಈ ಪೈಕಿ ಇನ್ನೊಂದು ಬೇಡಿಕೆಯೂ ಈಡೇರಲಿದೆ ಎಂಬ ಆಶಾಭಾವನೆ ಯಲ್ಲಿದ್ದಾರೆ ಅಲ್ಲಿನ ಜನರು

Readers Colony: ಮನುಷ್ಯನಿಗೆ ಜೇನು ಅಮೃತ, ನಾಯಿಯ ಪಾಲಿಗೆ ಯಮ!

ಮನುಷ್ಯನಿಗೆ ಜೇನು ಅಮೃತ, ನಾಯಿಯ ಪಾಲಿಗೆ ಯಮ!

ಆಯುರ್ವೇದದಲ್ಲಿ, ಜೇನು ತುಪ್ಪವನ್ನು ಅಮೃತ ಅಂತಲೇ ಪರಿಗಣಿಸುತ್ತಾರೆ. ಆದರೆ ಅಚ್ಚರಿಯ ಸಂಗತಿ ಅಂದರೆ, ಅದೇ ಜೇನನ್ನು ನೆಕ್ಕಿದರೆ ನಾಯಿ ಸಾಯುತ್ತದೆ. ದೇಸೀ ಹಸುವಿನ ತುಪ್ಪ ಬಹಳಷ್ಟು ಔಷಧಿ ಗುಣಗಳನ್ನು ಹೊಂದಿದೆ. ಆದರೆ ಸದಾ ಕೊಳಕನ್ನೇ ತಿನ್ನುವ ನೊಣ ಇದೇ ತುಪ್ಪದ ರುಚಿ ನೋಡಲು ಬಯಸಿದರೆ, ನೋವಿನಿಂದ ವಿಲಾ-ವಿಲಾ ಒದ್ದಾಡಿಕೊಂಡು ಸಾಯುತ್ತದೆ.

Readers Colony: ಬದುಕಲು ಪ್ರೇರಣೆ

Readers Colony: ಬದುಕಲು ಪ್ರೇರಣೆ

ನಮ್ಮೊಳಗಿನ ಮೌನವನ್ನು ಆಲಿಸುವುದನ್ನು ಈ ಲೇಖನ ಕಲಿಸುತ್ತದೆ. ಸಾಮಾನ್ಯವಾಗಿ ನಾವು ನಮ್ಮ ಜೀವನದ ಸಂಕಷ್ಟಗಳನ್ನು ಕಂಡು ಮರುಗುತ್ತೇವೆ; ಆದರೆ ‘ಗಾಯಗಳೇ ಬೆಳಕು ಪ್ರವೇಶಿ ಸುವ ದ್ವಾರಗಳು’ ಎಂಬ ರೂಮಿಯವರ ಮಾರ್ಮಿಕ ಮಾತುಗಳು ಕಷ್ಟಗಳನ್ನು ಕಾರಾತ್ಮಕವಾಗಿ ಸ್ವೀಕರಿಸುವ ದಾರಿಯನ್ನು ತೋರಿಸಿವೆ

Readers Colony: ದಂಡ ಕಟ್ಟಿದರೆ ಸಕ್ರಮವೇ?

Readers Colony: ದಂಡ ಕಟ್ಟಿದರೆ ಸಕ್ರಮವೇ?

ಕಟ್ಟಡಗಳ ಸೆಟ್‌ಬ್ಯಾಕ್ ಉಲ್ಲಂಘನೆ ಕುರಿತಂತೆ ಈ ಮೊದಲಿದ್ದ ಶೇ.5ರಷ್ಟು ದಂಡವನ್ನು ಈಗ ಶೇ.15ಕ್ಕೆ ಹೆಚ್ಚಿಸುವ ತೀರ್ಮಾನಕ್ಕೆ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಬಂದಿದ್ದು, ಈಗ ನಿರ್ಮಾಣವಾಗುತ್ತಿರುವ ಮತ್ತು ಮುಂದಿನ ದಿನಗಳಲ್ಲಿ ನಿರ್ಮಾಣವಾಗುವ 5000 ಚದರಡಿಗಳ ನಿವೇಶ ನದ ಕಟ್ಟಡಕ್ಕೆ ಇದು ಅನ್ವಯ ಎಂದು ವರದಿಯಾಗಿದೆ.

Readers Colony: ಹಿಂದೂಗಳ ಮೇಲಿನ ದಬ್ಬಾಳಿಕೆ ಇನ್ನಾದರೂ ನಿಲ್ಲಲಿ

ಹಿಂದೂಗಳ ಮೇಲಿನ ದಬ್ಬಾಳಿಕೆ ಇನ್ನಾದರೂ ನಿಲ್ಲಲಿ

ಖುದ್ದು ಯುನೂಸ್ ಸರ್ಕಾರವೇ ಕಳೆದ ವರ್ಷದ ಅವಧಿಯಲ್ಲಿ ಹಿಂದೂಗಳಿಗೆ ಸಂಬಂಧಿ ಸಿದ 645 ಹಿಂಸಾಚಾರಗಳಾಗಿವೆ ಅಂತ ಮಾಹಿತಿ ಕೊಟ್ಟಿದೆ. ಎಲೆಕ್ಷನ್ ನಡೆಯೋವಾಗಲು ಇಬ್ಬರು ಹಿಂದೂಗಳ ಹತ್ಯೆಯಾಗಿದೆ. ಆದರೀಗ ಅಲ್ಲಿ ಜನರಿಂದ ಆಯ್ಕೆಯಾದ ಬಿಎನ್‌ಪಿ ಪಕ್ಷ ಅಿಕಾರಕ್ಕೆ ಬಂದಿದೆ. ಜನರ ಮೇಲೆ ಹತ್ಯಾಕಾಂಡ ಮಾಡಿಸಿದ್ದಾರೆ ಅಂತೇಳಿ ಹಸೀನಾ ಅವರ ಅವಾಮಿ ಲೀಗ್ ಪಕ್ಷಕ್ಕೆ ಈ ಸಲ ಚುನಾವಣೆಗೆ ಬ್ಯಾನ್ ಹೇರಲಾಗಿತ್ತು.

Readers Colony: ಇದು ಕಾಲದ ಮಹಿಮೆ!

Readers Colony: ಇದು ಕಾಲದ ಮಹಿಮೆ!

ಇನ್ನು ಅಂಕಣಕಾರರು ವಿವರಿಸಿರುವಂತೆ, ಒಂದು ಟೇಬಲ್ ಲ್ಯಾಂಪ್ ಎಷ್ಟೊಂದು ದೂರದಿಂದ, ಅದೆಷ್ಟು ಕಡಿಮೆ ಅವಧಿಯಲ್ಲಿ ಬಂದು ತಲುಪುತ್ತದೆ ಎಂಬುದು ಎಷ್ಟು ಅಚ್ಚರಿದಾಯಕವೋ, ಅದೇ ವಸ್ತುವಿಗೆ ಬೇಕಾದ ಕಚ್ಚಾವಸ್ತುಗಳೂ ಎಲ್ಲೆಲ್ಲಿಂದಲೋ ಬಂದು, ಎಲ್ಲೋ ಒಂದು ಕಡೆ ಜೋಡಣೆ ಗೊಂಡು ಪಕ್ಕಾ ಉತ್ಪನ್ನವಾಗಿ ಗ್ರಾಹಕರ ಕೈಸೇರುತ್ತವೆ ಎಂಬುದೂ ಕುತೂಹಲಕಾರಿಯೇ!

Readers Colony: ಎಚ್ಚರಿಸುವ ಲೇಖನ

Readers Colony: ಎಚ್ಚರಿಸುವ ಲೇಖನ

ವಿನಾಯಕ ಭಟ್ಟ ಅಂಬ್ಲಿಹೊಂಡ ಅವರ ‘ವಿದ್ಯಮಾನ’ ಅಂಕಣಬರಹ (ಜ.4) ಸಕಾಲಿಕ ವಾಗಿದೆ. ನಮ್ಮ ರಾಜ್ಯವು ಛತ್ರವಾಗುತ್ತಿದೆ. ಯಾರು ಎಲ್ಲಿಂದ ಬೇಕಾದರೂ ಬಂದು ಇಲ್ಲಿ ಠಿಕಾಣಿ ಹೂಡಿ ದರ್ಪ-ಧಿಮಾಕು ತೋರಿಸಬ ಹುದು ಎನ್ನುವಂತಾಗಿದೆ. ಬಾಂಗ್ಲಾ ನುಸುಳುಕೋರರು ಕರ್ನಾಟಕದಲ್ಲಿ ಗಣನೀಯ ಸಂಖ್ಯೆಯಲ್ಲಿ ಜಮಾಯಿಸುತ್ತಿದ್ದಾರೆ.

Readers Colony: ಇದು ವಿಶಿಷ್ಠ ನಡೆ

Readers Colony: ಇದು ವಿಶಿಷ್ಠ ನಡೆ

ವಿವಿಧ ಕ್ಷೇತ್ರಗಳ ತಜ್ಞರು, ಜನಸಾಮಾನ್ಯರು, ವಿದ್ಯಾರ್ಥಿಗಳು ಜತೆಯಾಗಿ ಹಳ್ಳಿಗಳಿಗೆ ಸಾಗಿ ಅಲ್ಲಿಯ ಜನರೊಡನೆ ಬೆರೆತು ಅವರ ಸಂವೇದನೆ-ವೇದನೆಗಳಿಗೆ ಕಿವಿಯಾಗುವ ‘ನಮ್ಮ ನಡೆ, ಅಂತರಂಗದ ಕಡೆಗೆ’ ಹೆಸರಿನ ಪಾದಯಾತ್ರೆಯೊಂದು ಡಿ.27ರಂದು ಧಾರವಾಡ ನಗರದಿಂದ ಆರಂಭವಾಗಿದೆ. ಈ ನಡೆ ಅತ್ಯಂತ ಸ್ವಾಗತಾರ್ಹವಾದುದು.

Readers Colony: ಅಪೂರ್ವ ಕಥಾನಕ

Readers Colony: ಅಪೂರ್ವ ಕಥಾನಕ

ಶ್ರೀವತ್ಸ ಜೋಶಿಯವರು ಪ್ರತಿ ವಾರವೂ ಒಂದಿಂದು ಹೊಸ ವಿಷಯವನ್ನು ಆಯ್ದುಕೊಂಡು, ಅದನ್ನು ಆಳವಾಗಿ ಅಧ್ಯಯನ ಮಾಡಿ, eನಪ್ರಸರಣದ ಜತೆಗೆ ಅಲ್ಲಲ್ಲಿ ಕೊಡುವ ಗುದ್ದುಗಳು, ವ್ಯಂಗ್ಯ, ಅಣಕಗಳು ಒಳ್ಳೆಯ ಕಚಗುಳಿಯನ್ನೂ ನೀಡುತ್ತವೆ. ‘ತಿಳಿರು ತೋರಣ’ ನನ್ನ ಪ್ರೀತಿಯ ಅಂಕಣ. ಇದನ್ನು ಬರೆಯು ತ್ತಿರುವ ಜೋಶಿಯವರಿಗೂ, ಪ್ರಕಟಿಸುತ್ತಿರುವ ‘ವಿಶ್ವವಾಣಿ’ ಪ್ರತಿಕೆಗೂ ಅನಂತ ಧನ್ಯವಾದಗಳು.

Readers Colony: ಲೇಖನ ಚೆನ್ನಾಗಿದೆ

Readers Colony: ಲೇಖನ ಚೆನ್ನಾಗಿದೆ

ಗೋಪಾಡಿ ಶ್ರೀನಿವಾಸ ರಾವ್ ಅವರ ಕುರಿತಾಗಿ ಕೇಶವ ಪ್ರಸಾದ್ ಅವರು ಬರೆದ ಪರಿಚಯಾತ್ಮಕ ಲೇಖನ (ಡಿ.12) ಚೆನ್ನಾಗಿ ಮೂಡಿಬಂದಿದೆ. ನಮ್ಮ ಕರ್ನಾಟಕದ ಹೋಟೆಲ್ ಉದ್ಯಮವು ಇಡೀ ಜಗತ್ತನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತದೆ. ಉಡುಪಿ ಹೋಟೆಲ್, ಅಡಿಗಾಸ್, ಮಯ್ಯಾ, ಕಾಮತ್, ಎಂಟಿಆರ್, ಶಾನಭಾಗ ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.

Readers Colony: ಜನ ಪ್ರತಿನಿಧಿಗಳು ಎಲ್ಲಿ?

Readers Colony: ಜನ ಪ್ರತಿನಿಧಿಗಳು ಎಲ್ಲಿ?

ಸುಮಾರು ಮೂರು ತಿಂಗಳಿನಿಂದ, ಬೆಂಗಳೂರು ಮಹಾನಗರಿಯಲ್ಲಿನ ರಸ್ತೆ ಗುಂಡಿಗಳ ಬಗ್ಗೆಯೇ ಮಾಧ್ಯಮಗಳು ಸಾರ್ವಜನಿಕರು, ಉದ್ಯಮಿಗಳು ಹಾಗೂ ಸಹಜವಾಗಿ ವಿಪಕ್ಷೀಯರಿಂದ ಟೀಕೆಗಳು ಹೊಮ್ಮುತ್ತಲೇ ಇವೆ. ಸರಕಾರವೂ ನಿದ್ರೆಯಿಂದ ಎಚ್ಚೆತ್ತುಕೊಂಡಂತೆ, ಕೋಟ್ಯಂತರ ರುಪಾಯಿ ಮಂಜೂರು ಮಾಡಿ ರಸ್ತೆ ಗುಂಡಿಗಳಿಗೆ ತೇಪೆ ಹಾಕಲು ಆರಂಭಿಸಿದೆ

Readers Colony: ಶಕ್ತಿಶಾಲಿಯ ಅಶಕ್ತತೆ

Readers Colony: ಶಕ್ತಿಶಾಲಿಯ ಅಶಕ್ತತೆ

ನಾವು ಯಶಸ್ಸನ್ನು ಸಾಧಿಸಲು ಯತ್ನಿಸುವಾಗ, ನಮ್ಮ ಆಪ್ತರನ್ನು ಕಡೆಗಣಿಸುವುದು ಅಥವಾ ನಮ್ಮ ವೈಯಕ್ತಿಕ ಮೌಲ್ಯಗಳಲ್ಲಿ ರಾಜಿ ಮಾಡಿಕೊಳ್ಳುವುದು ಸಾಮಾನ್ಯ. ಇಂಥ ಸನ್ನಿವೇಶಗಳನ್ನು ಎದುರಿಸು ವಾಗ ಹೇಗೆ ಸಮತೋಲನವನ್ನು ಕಾಯ್ದುಕೊಳ್ಳಬೇಕು ಎಂಬುದರ ಬಗ್ಗೆಯೂ ಈ ಲೇಖನ ಸಂದೇಶ ವನ್ನು ನೀಡುವುದಲ್ಲದೆ, ಉತ್ತಮ ಜೀವನಕ್ಕೆ ಸೂಕ್ತವಾದ ಮಾರ್ಗವನ್ನೂ ಸೂಚಿಸುತ್ತದೆ.

Readers Colony: ಇದು ‘ಟಿವಿ’ ರಾಮಾಯಣ!

ಇದು ‘ಟಿವಿ’ ರಾಮಾಯಣ!

ನಮಗೆ ಯಾವುದೂ ಹೊಂದಾಣಿಕೆಯೇ ಆಗುವುದಿಲ್ಲ ಅಂತಾದರೆ, ನಾವು ನೋಡಬೇಕಾದ ವಾರ್ತೆ ಯಾವುದು? ಯಾವುದನ್ನು ನೋಡಬೇಕೆಂದು ನಾವು ಟಿವಿಯ ವಾರ್ತೆಯನ್ನು ಹಚ್ಚಿದ್ದು? ಎನ್ನು ವುದೇ ಕೊನೆಗೂ ನಿರ್ಣಯವಾಗುವುದಿಲ್ಲ. ಹೀಗಾಗಿ ವಾರ್ತೆಯ ಸಹವಾಸವೇ ಬೇಡ ಅಂತ ಹೆಂಗಸರು ನೋಡುವ ಧಾರಾವಾಹಿಗೆ ಬಂದರೆ, ಅದು ಒಂದು ತಿಂಗಳ ಹಿಂದೊಮ್ಮೆ ಹೀಗೆಯೇ ಬೇಜಾರು ಬಂದಾಗ ಹಚ್ಚಿದಾಗ ಇದ್ದ ಅದೇ ಜಾಗದಲ್ಲೇ, ಅಲ್ಲಿಯೇ ಕಥೆ ಬಿದ್ದಿರುತ್ತದೆ.

ಇವು ಕೃಷಿಗೂ ಪೂರಕ

ಇವು ಕೃಷಿಗೂ ಪೂರಕ

ದ್ವಿದಳ ಧಾನ್ಯದ ಸಸ್ಯಗಳು ಅತಿವೃಷ್ಟಿ ಅಥವಾ ಅನಾವೃಷ್ಟಿಯಂಥ ವಾತಾವರಣವನ್ನೂ ತಾಳಿಕೊಳ್ಳ ಬಲ್ಲ ಶಕ್ತಿಯನ್ನು ಹೊಂದಿವೆ. ಕಡಿಮೆ ಬಂಡವಾಳದಲ್ಲಿ ಹೆಚ್ಚು ಲಾಭ ನೀಡುವ ಈ ಬೆಳೆಗಳು ರೈತರಿಗೆ ಆರ್ಥಿಕವಾಗಿ ಪ್ರಯೋಜನಕಾರಿಯಾಗಿರುವುದರ ಜತೆಗೆ, ಪರಿಸರ ರಕ್ಷಣೆಯ ವಿಷಯದಲ್ಲೂ ದಾರಿ ತೋರುತ್ತವೆ.

Readers Colony: ಸಂವಿಧಾನದ ಜತೆ ಚೆಲ್ಲಾಟ

ಸಂವಿಧಾನದ ಜತೆ ಚೆಲ್ಲಾಟ

ರಾಜೇಂದ್ರ ಪ್ರಸಾದ್, ಹರೇಂದ್ರ ಕುಮಾರ್ ಮುಖರ್ಜಿ, ಬೆನೆಗಲ್ ನರಸಿಂಗ ರಾವ್, ಅಂಬೇಡ್ಕರ್ ಮೊದ ಲಾದ ಮಹಾಮಹಿಮರು ರಚಿಸಿದ ನಮ್ಮ ಸಂವಿಧಾನವನ್ನು, ತಮ್ಮ ಸ್ವಾರ್ಥಕ್ಕಾಗಿ ಮನ ಬಂದಂತೆ ಬದಲಾಯಿಸಿ, ತುರ್ತು ಪರಿಸ್ಥಿತಿಯನ್ನು ಹೇರಿದ ಇಂದಿರಾರ ಕ್ರಮವನ್ನು ಮತ್ತು ಅದರ ಕರಾಳ ಪರಿಣಾಮವನ್ನು ಅತ್ಯಂತ ವಿವರವಾಗಿ ಪ್ರಸ್ತುತಪಡಿಸಿದ್ದಾರೆ ಗುರುರಾಜ ಗಂಟಿಹೊಳೆ (ಜುಲೈ 3). ಈ ದೇಶ ಮತ್ತು ಸಂವಿಧಾನವನ್ನು ತಮ್ಮ ಕುಟುಂಬದ ಆಸ್ತಿಯೇನೋ ಎಂಬಂತೆ ಧಾರ್ಷ್ಟ್ಯದಿಂದ ಅಹಂಕಾರದಿಂದ ನಡೆಸಿಕೊಂಡಿದ್ದರು ಇಂದಿರಾ ಗಾಂಧಿ

ಕಾದು ನೋಡೋಣ...

ಕಾದು ನೋಡೋಣ...

ಕೇವಲ ಒಂದು ಮತದಿಂದ ಅಂಗೀಕಾರಗೊಂಡ One Big Beautiful Bill ಹೆಸರಿನ ಅಮೆರಿಕದ ವಿಧೇಯಕವು ಭಾರತೀಯರ ಪಾಲಿಗೆ ದೊಡ್ಡ ಹೊಡೆತವೇ ಆಗಿದೆ. ಇನ್ನು ಮುಂದೆ, ಭಾರತೀಯರು ಅಮೆರಿಕದಲ್ಲಿ ದುಡಿದ ಹಣವನ್ನು ಭಾರತಕ್ಕೆ ಕಳುಹಿಸಿದರೆ ಶೇ.3.5ರಷ್ಟು ತೆರಿಗೆ ಅನ್ವಯವಾ ಗುತ್ತದೆ. ಇದು ಎಚ್೧ ಬಿ, ಎಲ್ ೧, ಎ- ೧ ಗ್ರೀನ್ ಕಾರ್ಡ್ ಹೊಂದಿದವರಿಗೂ ಅನ್ವಯ.

ಅನಾಗರಿಕ ನಡವಳಿಕೆ

ಅನಾಗರಿಕ ನಡವಳಿಕೆ

ಇದೊಂದು ಅನಾಗರಿಕ ನಡವಳಿಕೆ, ರಾಜ್ಯಸರಕಾರಕ್ಕೂ ಕೆಟ್ಟ ಹೆಸರು. ಇದು ನಿಜಕ್ಕೂ ತಲೆ ತಗ್ಗಿಸುವ ಘಟನೆ. ಇವರು ಇನ್ನೂ ಯಾವ ಶತಮಾನದಲ್ಲಿ ಇದ್ದಾರೆ ? ಈ ಮಕ್ಕಳ ಪೋಷಕರಿಗೆ ಶಿಕ್ಷಣಾಧಿಕಾರಿಗಳು ತಿಳಿವಳಿಕೆ ಹೇಳಬಾರದೇ? ಗ್ರಾಮೀಣ ಪ್ರದೇಶದಲ್ಲಿ ಇನ್ನೂ ಜಾತಿ ವ್ಯವಸ್ಥೆ ಆಚರಣೆಯಲ್ಲಿ ಇರುವುದಕ್ಕೆ ಇದೊಂದು ಜ್ವಲಂತ ಉದಾಹರಣೆ.

Readers Colony: ಅರ್ಥಪೂರ್ಣ ಅಂಕಣ

ಅರ್ಥಪೂರ್ಣ ಅಂಕಣ

ಶಿಶಿರ್ ಹೆಗಡೆಯವರ ‘ಶಿಶಿರಕಾಲ’ ಅಂಕಣ (ಜೂ.20) ತುಂಬಾ ಅರ್ಥಪೂರ್ಣವಾಗಿದೆ. ಕಾಲಾನು ಕಾಲಕ್ಕೆ ನಾವು ಅನೇಕ ಅದ್ಭುತ ವೈಜ್ಞಾನಿಕ ಸಾಧನೆಗಳನ್ನು ಕಾಣುತ್ತ ಬಂದಿದ್ದರೂ, ಜೀವದ ಅಸ್ತಿತ್ವದ ಕುರಿತಾದ ಮತ್ತು ಬ್ರಹ್ಮಾಂಡದ ಬಗೆಗಿನ ಇನ್ನೂ ಅನೇಕ ಪ್ರಶ್ನೆಗಳಿಗೆ ಅದು ಉತ್ತರಗಳನ್ನು ಹುಡುಕು ವುದು ಬಾಕಿಯಿದೆ.

Readers Colony: ಜಗತ್ತು ವಿನಾಶದತ್ತ ..?!

ಜಗತ್ತು ವಿನಾಶದತ್ತ ..?!

ಬೆಂಗಳೂರಿನಲ್ಲಿ ಕಾಲ್ತುಳಿತಕ್ಕೆ ಕಾರಣವಾಗುವಷ್ಟು ಭಾರಿ ಸಂಖ್ಯೆಯ ಜನರನ್ನು ಸೇರಿಸುವಲ್ಲಿ ಸಾಮಾಜಿಕ ಜಾಲತಾಣಗಳ ಪಾತ್ರವನ್ನೂ ಅಲ್ಲಗಳೆಯಲಾಗದು. ಅಹಮದಾಬಾದ್ ದುರಂತಕ್ಕೆ ವಿಮಾನದ ತಾಂತ್ರಿಕ ದೋಷ ಕಾರಣವಾಗಿರುವ ಸಾಧ್ಯತೆ ಇದೆ. ಇರಾನಿನ ಅಣು ಸೌಕರ್ಯಗಳನ್ನು ಗುರಿಯಾಗಿಟ್ಟುಕೊಂಡು ಇಸ್ರೇಲ್ ನಡೆಸಿರುವ ದಾಳಿಯು ಮೂರನೇ ಮಹಾಯುದ್ಧಕ್ಕೆ ಮುನ್ನುಡಿ ಯಾದೀತು.

Readers Colony: ಹೊಸ ಮೈಲಿಗಲ್ಲು

Readers Colony: ಹೊಸ ಮೈಲಿಗಲ್ಲು

ವಿಶ್ವವಾಣಿ ಬಳಗದ ‘ಪ್ರವಾಸಿ ಪ್ರಪಂಚ’ ವಾರಪತ್ರಿಕೆಯು ನಿಜಕ್ಕೂ ಕನ್ನಡ ಪತ್ರಿಕೋದ್ಯಮದಲ್ಲಿನ ಒಂದು ಮೈಲಿಗಲ್ಲು ಎಂದರೆ ತಪ್ಪಾಗಲಾರದು. ಇದರ ಪುಟಪುಟಗಳತ್ತ ಕಣ್ಣು ಹಾಯಿಸಿದಷ್ಟೂ ಅನುಪಮ ಮಾಹಿತಿಗಳು. ಮುತ್ತಿನಂಥ ಅಕ್ಷರಜೋಡಣೆ, ಗುಣಮಟ್ಟದ ಮುದ್ರಣ, ಮುಖಪುಟಕ್ಕೆ ಶೋಭೆ ತರಬಲ್ಲಂಥ ಆರ್ಟ್ ಪೇಪರ್‌ನ ಬಳಕೆ ಇವನ್ನೆಲ್ಲಾ ನೋಡುತ್ತಿರುವಂತೆಯೇ ಓದುಗರು ಕಳೆದು ಹೋಗು ತ್ತಾರೆ.

Readers Colony: ಕಾನೂನು ಕ್ರಮ ಅಗತ್ಯ

ಓದುಗರ ಓಣಿ: ಕಾನೂನು ಕ್ರಮ ಅಗತ್ಯ

ವೀಲಿಂಗ್ ಮಾಡುವ ಸಾಕಷ್ಟು ಮಂದಿಯ ಬಳಿ ವಾಹನ ಚಾಲನಾ ಪರವಾನಗಿಯೂ ಇರುವುದಿಲ್ಲ. ವೀಲಿಂಗ್ ಕುರಿತಾಗಿ ಹೈಕೋರ್ಟ್ ಈಗಾಗಲೇ ಕಳವಳ ವ್ಯಕ್ತಪಡಿಸಿದ್ದು, ಇದು ಸದರಿ ಸಮಸ್ಯೆಯ ತೀವ್ರತೆ ಯನ್ನು ಒತ್ತಿ ಹೇಳುತ್ತದೆ. ಆದ್ದರಿಂದ, ವೀಲಿಂಗ್ ನಿಯಂತ್ರಣಕ್ಕೆ ಸರಕಾರವು ಕಠಿಣ ಕಾನೂನು ಜಾರಿ ಗೊಳಿಸಿ, ಜನರನ್ನು ಕಾಪಾಡುವತ್ತ ಗಮನ ಹರಿಸಬೇಕು.

Loading...