ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Others

ಕೇವಲ 10 ರೂ.ಗೆ 10 ಗ್ರಾಂ ಪ್ರೋಟೀನ್: ಮಾರುಕಟ್ಟೆಗೆ ಬಂತು ವಿಶಿಷ್ಟ 'ಚನ್ನಾ ಸತ್ತು'

ಮಾರುಕಟ್ಟೆಗೆ ಬಂತು ವಿಶಿಷ್ಟ 'ಚನ್ನಾ ಸತ್ತು'

ಅತ್ಯುತ್ತಮ ಗುಣಮಟ್ಟದ ಕಡಲೆಯನ್ನು ಬಳಸಿ, ಹಳೆಯ ಕಾಲದ ಸಾಂಪ್ರದಾಯಿಕ 'ಮರಳಿನಲ್ಲಿ ಹುರಿಯುವ' ವಿಧಾನದಲ್ಲಿ ಈ ಸತ್ತು ಹಿಟ್ಟನ್ನು ತಯಾರಿಸಲಾಗಿದೆ. ಈ ವಿಧಾನದಿಂದಾಗಿ ಕಡಲೆಯ ನೈಸರ್ಗಿಕ ಸುವಾಸನೆ, ರುಚಿ ಮತ್ತು ಆಕರ್ಷಕ ಚಿನ್ನದ ಬಣ್ಣ ಹಾಗೆಯೇ ಉಳಿದುಕೊಳ್ಳುತ್ತದೆ. ಇದು ಅತ್ಯಂತ ನುಣ್ಣಗಿದ್ದು, ದೈನಂದಿನ ವಿವಿಧ ಅಡುಗೆಗಳಿಗೆ ಬಳಸಲು ಸುಲಭವಾಗಿದೆ.

₹1.2 ಲಕ್ಷ ಕೋಟಿ ಆದಾಯ, 13 ಲಕ್ಷ ಉದ್ಯೋಗ: ಕೇವಲ ಊಟ ತರುವುದಲ್ಲ, ದೇಶದ ಆರ್ಥಿಕತೆಯನ್ನೇ ಬದಲಿಸುತ್ತಿವೆ ಫುಡ್ ಡೆಲಿವರಿ ಆಪ್‌ಗಳು!

ದೇಶದ ಆರ್ಥಿಕತೆಯನ್ನೇ ಬದಲಿಸುತ್ತಿವೆ ಫುಡ್ ಡೆಲಿವರಿ ಆಪ್‌ಗಳು!

ಎನ್‌ಸಿಎಇಆರ್ ವರದಿಯ ಪ್ರಕಾರ, 2023-24ನೇ ಸಾಲಿನಲ್ಲಿ ಫುಡ್ ಡೆಲಿವರಿ ವಲಯವು ಬರೋ ಬ್ಬರಿ 1.2 ಲಕ್ಷ ಕೋಟಿ ರೂ.ಗೂ ಅಧಿಕ ಆದಾಯ ಗಳಿಸುವಲ್ಲಿ ಸಫಲವಾಗಿದೆ. ಜೊತೆಗೆ 13.7 ಲಕ್ಷ ಜನರಿಗೆ ನೇರ ಉದ್ಯೋಗ ನೀಡಿದೆ. ಅಚ್ಚರಿಯ ವಿಚಾರವೆಂದರೆ, ಈ ವಲಯದಲ್ಲಿ ಸೃಷ್ಟಿಯಾಗುವ ಪ್ರತಿಯೊಂದು ಉದ್ಯೋಗವು, ಇತರ ವಲಯಗಳಲ್ಲಿ ಪರೋಕ್ಷವಾಗಿ 2.7 ಹೊಸ ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ.

ಕಾರ್ಗಿಲ್ ವೀರರಿಗೆ ವಿಶೇಷ ನಮನ:‌ ಹಿಮಾಚಲ, ಲಡಾಖ್ ದಾಟಿ ದ್ರಾಸ್‌ನಲ್ಲಿ ಸಂಪನ್ನಗೊಂಡ 1,900 ಕಿ.ಮೀ. 'ಶೌರ್ಯ ವಿಜಯ್ ಯಾತ್ರೆ'

ಕಾರ್ಗಿಲ್ ವೀರರಿಗೆ ವಿಶೇಷ ನಮನ

1999ರ ಕಾರ್ಗಿಲ್ ಯುದ್ಧದಲ್ಲಿ ಮಡಿದ ವೀರ ಯೋಧರ ತ್ಯಾಗ, ಬಲಿದಾನ ಮತ್ತು ಶೌರ್ಯವನ್ನು ಸ್ಮರಿಸುವ ಉದ್ದೇಶದಿಂದ ಜಾವಾ ಯೆಜ್ಡಿ ಮೋಟಾರ್ ಸೈಕಲ್ಸ್ ಹಾಗೂ ಭಾರತೀಯ ಸೇನೆ ಜಂಟಿಯಾಗಿ ಆಯೋಜಿಸಿದ್ದ ಬೃಹತ್ ಬೈಕ್ ರ್‍ಯಾಲಿ 'ಶೌರ್ಯ ವಿಜಯ್ ಯಾತ್ರೆ' ಯಶಸ್ವಿಯಾಗಿ ಮುಕ್ತಾಯಗೊಂಡಿದೆ.

'ಕನ್ನಡ' ಪ್ರೇಮ, ಕಠಿಣ ಶ್ರಮ: ಕೋಲ್ಕತ್ತಾದಿಂದ ಬರಿಗೈಯಲ್ಲಿ ಬೆಂಗಳೂರಿಗೆ ಬಂದ ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್ ಈಗ ಸ್ವಂತ ಮನೆಯ ಒಡೆಯ!

ಸ್ವಿಗ್ಗಿ ಡೆಲಿವರಿ ಪಾರ್ಟ್‌ನರ್ ಈಗ ಸ್ವಂತ ಮನೆಯ ಒಡೆಯ!

ರೂಪ್‌ಚಂದ್ ಮೂಲತಃ ಕೋಲ್ಕತ್ತಾದವರು. ನಗರಕ್ಕೆ ಸಮೀಪದ ಸಣ್ಣ ಹಳ್ಳಿಯ ರೈತ ಕುಟುಂಬ ದಲ್ಲಿ ಜನಿಸಿದ ಇವರಿಗೆ ಶಾಲಾ ದಿನಗಳಲ್ಲಿ ಆಟೋಟ ಸ್ಪರ್ಧೆಗಳೆಂದರೆ ಅಚ್ಚುಮೆಟ್ಟು. ಓಟದ ಸ್ಪರ್ಧೆಗಳಲ್ಲಿ ಜಿಲ್ಲಾ ಮಟ್ಟದ ಕ್ರೀಡಾಪಟುವೂ ಆಗಿದ್ದರು. ಭಾರತೀಯ ಸೇನೆ ಸೇರಬೇಕು, ದೇಶಸೇವೆ ಮಾಡಬೇಕೆಂಬುದು ಇವರ ಬಹುದೊಡ್ಡ ಕನಸಾಗಿತ್ತು.

ಭಾರತದಲ್ಲಿ ಅಮೆಜಾನ್ ಪ್ರೈಮ್‌ ಗೆ 10ರ ಸಂಭ್ರಮ: ಗ್ರಾಹಕರ ನಂಬಿಕೆ ಗಳಿಸಲು ಕಾರಣರಾದ ತೆರೆಮರೆಯ ಶಕ್ತಿಗಳು

ಭಾರತದಲ್ಲಿ ಅಮೆಜಾನ್ ಪ್ರೈಮ್‌ ಗೆ 10ರ ಸಂಭ್ರಮ

ಕಳೆದ ಹತ್ತು ವರ್ಷಗಳಲ್ಲಿ ಪ್ರೈಮ್ ಸೇವೆಯು ಕೇವಲ ಉಚಿತ ಮತ್ತು ವೇಗದ ಡೆಲಿವರಿಯನ್ನು ಮೀರಿ ವ್ಯಾಪಕವಾಗಿ ವಿಸ್ತರಣೆಗೊಂಡಿದೆ. ಓಟಿಟಿಯಲ್ಲಿ ಸೂಪರ್ ಹಿಟ್ ಸಿನಿಮಾಗಳ ಮನರಂಜನೆ, ಪ್ರೈಮ್ ಡೇ ನಂತಹ ವಿಶೇಷ ಶಾಪಿಂಗ್ ಹಬ್ಬಗಳು ಹಾಗೂ ಗ್ರಾಹಕರ ಹಣ ಉಳಿತಾಯಕ್ಕೆ ಹೊಸ ಮಾರ್ಗಗಳನ್ನು ಪರಿಚಯಿಸುವ ಮೂಲಕ ಗ್ರಾಹಕರ ಬದಲಾಗುತ್ತಿರುವ ಅಗತ್ಯಗಳಿಗೆ ತಕ್ಕಂತೆ ಈ ಸದಸ್ಯತ್ವವು ನಿರಂತರ ವಾಗಿ ವಿಕಸನಗೊಂಡಿದೆ.

ಕಂಪನಿ-ನಿರ್ವಹಿತ ಸ್ಟುಡಿಯೊ ಆರಂಭಿಸಿ ಅಸ್ತಿತ್ವ ಬಲಪಡಿಸಿದ ಪೆಪ್ಪರ್‌ಫ್ರೈ

ಕಂಪನಿ-ನಿರ್ವಹಿತ ಸ್ಟುಡಿಯೊ ಆರಂಭಿಸಿ ಅಸ್ತಿತ್ವ ಬಲಪಡಿಸಿದ ಪೆಪ್ಪರ್‌ಫ್ರೈ

ಹೊಸ ಸ್ಟುಡಿಯೊ ಉದ್ಘಾಟನೆಯು ಪೆಪ್ಪರ್‌ಫ್ರೈನ ಓಮ್ನಿಚಾನೆಲ್ ವಿಸ್ತರಣಾ ಕಾರ್ಯತಂತ್ರದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲಾ ಗಿದ್ದು, ದೇಶಾದ್ಯಂತ ಗ್ರಾಹಕರಿಗೆ ಹೆಚ್ಚು ವೈಯಕ್ತಿಕ ಮತ್ತು ಅನುಭವಾತ್ಮಕ ಗೃಹ ಖರೀದಿ ಅನುಭವ ಒದಗಿಸುವ ಸಂಸ್ಥೆಯ ಬದ್ಧತೆಯನ್ನು ಮತ್ತಷ್ಟು ದೃಢಪಡಿಸುತ್ತದೆ

ತನಿಷ್ಕ್‌'ನಿಂದ ವಜ್ರಾಭರಣಗಳ ಸಂಗ್ರಹ ಸೋಲ್ಸ್ ಇನ್ ಸಿಂಫನಿ ಬಿಡುಗಡೆ

ತನಿಷ್ಕ್‌'ನಿಂದ ವಜ್ರಾಭರಣಗಳ ಸಂಗ್ರಹ ಸೋಲ್ಸ್ ಇನ್ ಸಿಂಫನಿ ಬಿಡುಗಡೆ

ಆಧುನಿಕ ಮಹಿಳೆಯರ ನಡುವಿನ ಆತ್ಮೀಯತೆ ಮತ್ತು ಸ್ನೇಹದಿಂದ ಸ್ಫೂರ್ತಿ ಪಡೆದ ಈ ಸಂಗ್ರಹವು, ಆ ಭಾವನೆಗಳನ್ನು ಅತ್ಯಾಧುನಿಕ ಆಭರಣಗಳಾಗಿ ಪರಿವರ್ತಿಸಿದೆ. ಸೊಗಸಾದ ವಿನ್ಯಾಸಗಳು ಮತ್ತು ಬಹು ಮುಖಿ ಶೈಲಿಗಳು ಈ ಆಭರಣಗಳ ವೈಶಿಷ್ಟ್ಯವಾಗಿದ್ದು, ಇವು ಒಗ್ಗಟ್ಟು ಮತ್ತು ಮಹಿಳೆಯರ ಜೀವನವನ್ನು ಶ್ರೀಮಂತಗೊಳಿಸುವ ಬಂಧಗಳನ್ನು ಪ್ರತಿಬಿಂಬಿಸುತ್ತವೆ.

ಸೌತ್‌ ಇಂಡಿಯಾ ಗ್ರಾಹಕರಿಗೆ ಡಿಶ್‌ ಟಿವಿಯಿಂದ ಹೊಸ ಪ್ಯಾಕೇಜ್‌ ಘೋಷಣೆ

ಸೌತ್‌ ಇಂಡಿಯಾ ಗ್ರಾಹಕರಿಗೆ ಡಿಶ್‌ ಟಿವಿಯಿಂದ ಹೊಸ ಪ್ಯಾಕೇಜ್‌ ಘೋಷಣೆ

ಹೊಸ ಪ್ಯಾಕ್‌ಗಳು ತಿಂಗಳಿಗೆ ಕೇವಲ ₹149ರಿಂದ ಆರಂಭವಾಗುತ್ತವೆ. ಈ ಯೋಜನೆಗಳಲ್ಲಿ ಮನರಂಜನೆ, ಸಿನಿಮಾಗಳು, ಪ್ರಾದೇಶಿಕ ಕಾರ್ಯಕ್ರಮಗಳು ಹಾಗೂ ಕ್ರೀಡಾ ಚಾನೆಲ್‌ಗಳ ಸಮೃದ್ಧ ಆಯ್ಕೆಯನ್ನು ಒಳಗೊಂಡಿದೆ. ತಮಿಳು, ತೆಲುಗು, ಕನ್ನಡ ಮತ್ತು ಮಲಯಾಳಂ ಭಾಷಿಕ ಕುಟುಂಬಗಳ ವೀಕ್ಷಣಾ ಅಭಿರುಚಿಯನ್ನು ಗಮನದಲ್ಲಿಟ್ಟುಕೊಂಡು ಪ್ಯಾಕ್‌ಗಳನ್ನು ವಿನ್ಯಾಸಗೊಳಿಸಲಾಗಿದೆ.

Saudi Arabia Bus Accident: ಮದೀನಾದಲ್ಲಿ ಭೀಕರ ರಸ್ತೆ ಅಪಘಾತ; ಭಾರತದ 42 ಮಂದಿ ಸಾವು

ಮದೀನಾದಲ್ಲಿ ಭೀಕರ ರಸ್ತೆ ಅಪಘಾತ; ಭಾರತದ 42 ಮಂದಿ ಸಾವು

Bus Accident in Madina: ಮೆಕ್ಕಾದಿಂದ ಮದೀನಾಕ್ಕೆ ತೆರಳುತ್ತಿದ್ದ ಬಸ್‌ ಡೀಸೆಲ್‌ ಟ್ಯಾಂಕರ್‌ಗೆ ಡಿಕ್ಕಿ ಹೊಡೆದು ಕನಿಷ್ಠ 42 ಪ್ರಯಾಣಿಕರು ಮೃತಪಟ್ಟಿದ್ದಾರೆ ಮುಂದು ಮೂಲಗಳು ತಿಳಿಸಿವೆ. ನವೆಂಬರ್‌ 17ರ ಮುಂಜಾನೆ 1:30ರ ಸುಮಾರಿಗೆ ಮುಫ್ರಿಹತ್‌ನಲ್ಲಿ ಈ ಭೀಕರ ಅಪಘಾತ ನಡೆದಿದೆ.

ಅಶೋಕ ವಿಶ್ವವಿದ್ಯಾಲಯದ ಮೂಲಕ ‘ಸಿವಿಂಕ್’ ಪೋರ್ಟಲ್ ಜಾರಿ, ನಾಗರಿಕ ದತ್ತಾಂಶ ಡಿಜಿಟಲೀಕರಣಗೊಳಿಸಿದ ಭಾರತದ ಮೊದಲ ನಗರಸಭೆ ನಂಜನಗೂಡು

ನಾಗರಿಕ ದತ್ತಾಂಶ ಡಿಜಿಟಲೀಕರಣ: ಭಾರತದ ಮೊದಲ ನಗರಸಭೆ ನಂಜನಗೂಡು

ನೈರ್ಮಲ್ಯ ಮತ್ತು ಕಸ ಸಂಗ್ರಹಣೆಯಿಂದ ಹಿಡಿದು ರಸ್ತೆ ನಿರ್ವಹಣೆ, ಆಸ್ತಿ ತೆರಿಗೆ ಮತ್ತು ಕಟ್ಟಡ ಪರವಾನಗಿಗಳವರೆಗೆ ಹಲವಾರು ಕಾರ್ಯಗಳನ್ನು ಒಳಗೊಂಡಿರುವ ಸಿವಿಂಕ್, ಅಸ್ಪಷ್ಟ ದೂರು ಪೋರ್ಟಲ್‌ಗಳ ಬದಲಿಗೆ ನಾಗರಿಕರು ಮತ್ತು ಸರ್ಕಾರಿ ಕಾರ್ಯಕರ್ತರ ನಡುವೆ ನೇರ, ಪಾರದರ್ಶಕ ಸಂಪರ್ಕಗಳನ್ನು ಒದಗಿಸುತ್ತದೆ.

Kenya Plane Crash: ಕೀನ್ಯಾದಲ್ಲಿ ವಿಮಾನ ಅಪಘಾತ; 11 ಮಂದಿ ಸಾವು

ಕೀನ್ಯಾದಲ್ಲಿ ವಿಮಾನ ಅಪಘಾತ; 11 ಮಂದಿ ಸಾವು

ಕೀನ್ಯಾದ ಕರಾವಳಿ ಪ್ರದೇಶ ಕ್ವಾಲೆಯಲ್ಲಿ ಮಾಸಾಯಿ ಮಾರಾ ರಾಷ್ಟ್ರೀಯ ಅಭಯಾರಣ್ಯಕ್ಕೆ ತೆರಳುತ್ತಿದ್ದ ಸಣ್ಣ ವಿಮಾನವೊಂದು ಅಪಘಾತಕ್ಕೀಡಾಗಿದ್ದು, 11 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮೃತರೆಲ್ಲರೂ ವಿದೇಶಿ ಪ್ರವಾಸಿಗರು ಎಂದು ಮೂಲಗಳು ಮಾಹಿತಿ ನೀಡಿವೆ.

Raj Thackeray's Party: ಮರಾಠಿ ಭಾಷೆ ವಿಚಾರಕ್ಕೆ ಪ್ರತಿಭಟನೆ; ರಾಜ್ ಠಾಕ್ರೆಯ ಎಂಎನ್‌ಎಸ್ ಕಾರ್ಯಕರ್ತರ ಬಂಧನ

ನಿಲ್ಲದ ಮರಾಠಿ-ಹಿಂದಿ ಭಾಷಾ ಸಂಘರ್ಷ

ಅನುಮತಿ ಇಲ್ಲದೆ ಮಹಾರಾಷ್ಟ್ರ ನವನಿರ್ಮಾಣ ಸೇನೆ ಕಾರ್ಯಕರ್ತರು ರ‍್ಯಾಲಿ ಆಯೋಜಿಸಿದ್ದು, ಇದರಿಂದ ಥಾಣೆ ಜಿಲ್ಲೆಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡು ಗೊಂದಲ ಉಂಟಾಗಿದೆ. ರ‍್ಯಾಲಿಗೆ ಅನುಮತಿಯಿಲ್ಲದಿದ್ದರೂ, ಎಂಎನ್‌ಎಸ್ ಕಾರ್ಯಕರ್ತರು ಮುಂಬೈಗೆ ಮೆರವಣಿಗೆ ಮೂಲಕ ತೆರಳಲು ಮುಂದಾಗಿದ್ದರು. ಆದರೆ ಎಂಎನ್‌ಎಸ್‌ನ ಥಾಣೆ ಮತ್ತು ಪಾಲ್ಘರ್ ಮುಖ್ಯಸ್ಥ ಅವಿನಾಶ್ ಜಾಧವ್ ಸೇರಿದಂತೆ ಇತರ ನಾಯಕರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

BJP leader Gopal Khemka: ಬಿಹಾರದಲ್ಲಿ ಗುಂಡಿಟ್ಟು ಬಿಜೆಪಿ ನಾಯಕ, ಉದ್ಯಮಿ ಗೋಪಾಲ್ ಖೇಮ್ಕಾ ಹತ್ಯೆ; ಕೊಲೆಯ ಭೀಕರ ದೃಶ್ಯ ಕ್ಯಾಮೆರಾದಲ್ಲಿ ಸೆರೆ

ಬಿಜೆಪಿ ನಾಯಕನನ್ನು ಗುಂಡಿಕ್ಕಿ ಹತ್ಯೆ; ವಿಡಿಯೊ ಇಲ್ಲಿದೆ

ಬಿಹಾರದ ಪ್ರಮುಖ ಉದ್ಯಮಿ ಮತ್ತು ಬಿಜೆಪಿ ನಾಯಕ ಗೋಪಾಲ್ ಖೇಮ್ಕಾ ಅವರನ್ನು ಶುಕ್ರವಾರ ರಾತ್ರಿ ಪಾಟ್ನಾದ ತಮ್ಮ ಮನೆಯ ಹೊರಗೆ ಗುಂಡು ಹಾರಿಸಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರು ವರ್ಷಗಳ ಹಿಂದೆ ಅವರ ಪುತ್ರ ಗುಂಜನ್ ಖೇಮ್ಕಾ ಅವರನ್ನು ಇದೇ ರೀತಿಯಲ್ಲಿ ಕೊಲೆ ಮಾಡಲಾಗಿತ್ತು.

Khalistani Terrorist: 1995ರಿಂದ ತಲೆಮರೆಸಿಕೊಂಡಿದ್ದ ಮೋಸ್ಟ್‌ ವಾಂಟೆಡ್‌ ಖಾಲಿಸ್ತಾನಿ ಉಗ್ರ ಅರೆಸ್ಟ್‌

ಖಾಕಿ ಬಲೆಗೆ ಬಿದ್ದ ಮೋಸ್ಟ್ ವಾಂಟೆಡ್ ಖಲಿಸ್ತಾನಿ ಉಗ್ರ

Khalistani Terrorist: ಕಳೆದ ಮೂರು ದಶಕಗಳಿಂದ ತಲೆಮರೆಸಿಕೊಂಡಿದ್ದ ಖಲಿಸ್ತಾನಿ ಗುಂಪಿನ ಸದಸ್ಯನನ್ನು ಪಂಜಾಬ್‌ನ ಅಮೃತಸರದ ಗ್ರಾಮವೊಂದರಲ್ಲಿ ಬುಧವಾರ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಂಗತ್ ಸಿಂಗ್ ಎಂಬಾತನ ಬಂಧನಕ್ಕೆ ₹25,000 ಬಹುಮಾನ ಘೋಷಿಸಲಾಗಿತ್ತು. ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ದಳ (ATS) ಮತ್ತು ಸಾಹಿಬಾಬಾದ್ ಪೊಲೀಸ್ ಠಾಣೆಯ ಅಧಿಕಾರಿಗಳ ಜಂಟಿ ತಂಡವು ಆತನನ್ನು ಬಂಧಿಸಿದೆ.

Anti-Sikh Riots: 1984ರ ಸಿಖ್ ವಿರೋಧಿ ಗಲಭೆ ಪ್ರಮುಖ ಸಾಕ್ಷಿಗೆ ಜೀವ ಬೆದರಿಕೆ

ಸಿಖ್ ವಿರೋಧಿ ದಂಗೆ ಪ್ರಕರಣದ ಸಾಕ್ಷಿಗೆ ಬೆದರಿಕೆ..!

1984 Anti-Sikh Riots: 1984ರ ಸಿಖ್ ವಿರೋಧಿ ಗಲಭೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಯಾಗಿ, ಪ್ರಮುಖ ಸಾಕ್ಷಿಯಾದ ಸುರೇಂದರ್ ಸಿಂಗ್ ಅವರು ಬೆದರಿಕೆಗಳಿಂದಾಗಿ ತಮ್ಮ ಹೇಳಿಕೆಯನ್ನು ಬದಲಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ವಿಷಯವನ್ನು ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ ಮಾಜಿ ಅಧ್ಯಕ್ಷ ಮಂಜೀತ್ ಸಿಂಗ್ ಜಿಕೆ, ಸೋಮವಾರ ರೋಸ್ ಅವೆನ್ಯೂ ಕೋರ್ಟ್‌ನಲ್ಲಿ ತಮ್ಮ ಸಾಕ್ಷ್ಯದ ವೇಳೆ ಬಹಿರಂಗಪಡಿಸಿದರು.

Astro Tips: ಹನುಮಂತನ ಪೂಜೆಗೆ ಮಂಗಳವಾರ ಶುಭ ದಿನ; ಪೂಜೆಯ ವಿಧಿ - ವಿಧಾನ ಹೇಗಿರಬೇಕು..?

ಹನುಮಂತನನ್ನು ಪೂಜಿಸುವಾಗ ಈ ನಿಯಮ ಪಾಲಿಸಿ

Astro tips: ಮಂಗಳವಾರ ಹನುಮಾನ್ ಪೂಜೆಗೆ ಶುಭ ದಿನ ಆಗಿದ್ದು, ಹನುಮಂತನನ್ನು ಪೂಜಿಸುವಾಗ ಸರಿಯಾದ ವಿಧಿ - ವಿಧಾನಗಳನ್ನು ತೆಗೆದುಕೊಳ್ಳುವುದು ಬಹಳ ಮುಖ್ಯ. ಮನೆಯಲ್ಲೇ ಹನುಮಂತನನ್ನು ಪೂಜಿಸುವುದು ಹೇಗೆ..? ಮನೆಯಲ್ಲಿ ಹನುಮಂತನನ್ನು ಪೂಜಿಸುವಾಗ ಯಾವೆಲ್ಲಾ ನಿಯಮಗಳನ್ನು ಪಾಲಿಸಬೇಕು..? ಮಾಹಿತಿ ಇಲ್ಲಿದೆ

Tips For Smartphone: ಮೊಬೈಲ್‌ ಫೋನ್‌ನ ಸ್ಟೋರೇಜ್‌ ಹೆಚ್ಚಿಸಬೇಕೆ? ಈ ಟಿಪ್ಸ್‌ ಫಾಲೋ ಮಾಡಿ

ಮೊಬೈಲ್‌ ಫೋನ್‌ನ ಸ್ಟೋರೇಜ್‌ ಹೆಚ್ಚಿಸಲು ಇಲ್ಲಿದೆ ಟಿಪ್ಸ್‌

ನಿತ್ಯವೂ ಏನಾದರೊಂದು ಫೋಟೊ, ವಿಡಿಯೊ, ಡೌನ್‌ಲೋಡ್‌ ಮಾಡಿರುವ ಅಪ್ಲಿಕೇಷನ್‌ ಹೀಗೆ ಹಲವು ಕಾರಣಗಳಿಗೆ ಮೊಬೈಲ್‌ ಫೋನ ಸ್ಟೋರೇಜ್‌ ತುಂಬಿ ಸರಾಗವಾಗಿ ಬಳಸಲು ತೊಡಕು ಎದುರಾಗುತ್ತದೆ. ಮೊಬೈಲ್ ಸಂಗ್ರಹ ಸಾಮರ್ಥ್ಯ ಖಾಲಿಯಾದಾಗಲೇ ಅನೇಕ ತೊಂದರೆ ಕಾಣಿಸಿಕೊಳ್ಳಲಾರಂಭಿಸುತ್ತದೆ. ಈ ಸಮಸ್ಯೆಗೆ ಇಲ್ಲಿದೆ ಪರಿಹಾರ.

Ambedkar Jayanti 2025: ಬದುಕು ಸುದೀರ್ಘವಾಗಿರುವುದಕ್ಕಿಂತ ಶ್ರೇಷ್ಠವಾಗಿರಬೇಕು: ಸಮಾನತೆಯ ಹರಿಕಾರ ಅಂಬೇಡ್ಕರ್ ನುಡಿಮುತ್ತು

ಅಂಬೇಡ್ಕರ್ ಸ್ಫೂರ್ತಿದಾಯಕ ನುಡಿಗಳಿವು

Dr Bhimrao Ambedkar: ಸಮಾನತೆಯ ಹರಿಕಾರ, ಸಂವಿಧಾನ ಶಿಲ್ಪಿ, ಹೊಸ ಭಾರತದ ನಿರ್ಮಾತೃ, ದೇಶ ಕಂಡ ಮಹಾನ್ ಚೇತನ ಡಾ. ಅಂಬೇಡ್ಕರ್ ಅವರ ಜನ್ಮ ದಿನ ಇಂದು (ಏ. 14). ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಬದುಕೇ ಎಲ್ಲರಿಗೂ ಸ್ಫೂರ್ತಿ. ದೇಶ ಕಂಡ ಈ ಮಹಾನ್ ನಾಯಕರ ಅದ್ಭುತ ಸಂದೇಶಗಳು ಇಲ್ಲಿವೆ.

Shankara Narayanan: ಮಗಳನ್ನು ಅತ್ಯಾಚಾರಗೈದು ಕೊಂದಿದ್ದ ಹಂತಕನನ್ನು ಹತ್ಯೆ ಮಾಡಿ ಸಂಚಲನ ಮೂಡಿಸಿದ್ದ ಶಂಕರನಾರಾಯಣನ್‌ ನಿಧನ

ಮಗಳ ಹಂತಕನನ್ನು ಕೊಂದ ತಂದೆ ಶಂಕರನಾರಾಯಣನ್‌ ಇನ್ನಿಲ್ಲ!

Shankara Narayanan: 2001 ಫೆಬ್ರವರಿ 9 ರಂದು ನಡೆದ ಈ ಸುದ್ದಿ ಕೇಳಿದ್ರೆ ಎಂಥವರಿಗೂ ಕರುಳು ಚುರುಕು ಎನ್ನುತ್ತದೆ, ಏನು ಅರಿಯದ, ಮುಂದೆ ಬಾಳಿ ಬದುಕಬೇಕಿದ್ದ ಶಂಕರನಾರಾಯಣರ ಪುತ್ರಿ ಕೃಷ್ಣಪ್ರಿಯ(13)ಳನ್ನು ಮುಹಮ್ಮದ್ ಕೋಯ ಎಂಬಾತ ತನ್ನ ಕಾಮ ತೃಷೆ ತೀರಿಸಿಕೊಳ್ಳಲು ಅತ್ಯಾಚಾರ ನಡೆಸಿ ಕೊಲೆಗೈದಿದ್ದನು. ಇದರಿಂದ ಹತಾಶೆಗೊಂಡ ತಂದೆ ಮಗಳ ಸಾವಿಗೆ ನ್ಯಾಯ ದೊರಕಿಸಲು ಕೊಲೆ ಪ್ರಕರಣದ ಆರೋಪಿಯನ್ನು ಕೊಂದಿದ್ದರು.

Driving License: ಫೈನ್‌ ಬಾಕಿ ಇದ್ಯಾ? ಹಾಗಿದ್ರೆ ಡ್ರೈವಿಂಗ್‌ ಲೈಸೆನ್ಸ್‌ ರದ್ದಾಗುವುದು ಗ್ಯಾರಂಟಿ!

ಡ್ರೈವಿಂಗ್‌ ಲೈಸೆನ್ಸ್‌ ಕ್ಯಾನ್ಸಲ್‌ ಆಗುತ್ತೆ- ಎಚ್ಚರ..ಎಚ್ಚರ!

DL Suspended: ಇತ್ತೀಚಿನ ದಿನಗಳಲ್ಲಿ ಸಂಚಾರ ನಿಯಮಗಳಲ್ಲಿ ಭಾರಿ ಬದಲಾವಣೆ ಆಗಿದೆ. ಅಪಘಾತಗಳನ್ನು ತಪ್ಪಿಸಲು ಮತ್ತು ಅದರಿಂದ ಉಂಟಾಗುವ ಸಾವು-ನೋವುಗಳ ಸಂಖ್ಯೆಯನ್ನು ತಗ್ಗಿಸಲು ಸಾರಿಗೆ ಇಲಾಖೆಯು ಹಲವು ಕ್ರಮಗಳನ್ನು ಕೈಗೊಂಡಿದೆ. ಇತ್ತೀಚಿಗೆ ಟ್ರಾಫಿಕ್‌ ನಿಯಮ ಉಲ್ಲಂಘನೆಗಳ ದಂಡದ ಮೊತ್ತವನ್ನೂ ಹಲವು ಪಟ್ಟು ಏರಿಸಲಾಗಿದೆ.

Student Detained: ರಣರಂಗವಾದ ಹೈದರಾಬಾದ್ ವಿವಿ, ಪೊಲೀಸರಿಂದ 53 ವಿದ್ಯಾರ್ಥಿಗಳ ಬಂಧನ

ಕ್ಯಾಂಪಸ್ ಭೂ ಸ್ವಾಧೀನದ ವಿರುದ್ಧ ವಿದ್ಯಾರ್ಥಿಗಳ ಪ್ರತಿಭಟನೆ

Student Detained: ಹೈದರಾಬಾದ್‌ ವಿಶ್ವವಿದ್ಯಾಲಯವು ನಾಟಕೀಯ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ತೆಲಂಗಾಣ ಸರ್ಕಾರದ ಒಂದು ನಿರ್ಧಾರದಿಂದ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ವಿವಿ ಕ್ಯಾಂಪಸ್‌ನ ಪೂರ್ವ ಭಾಗದಲ್ಲಿರುವ ಭೂಮಿಯನ್ನು ಸರ್ಕಾರ ಸ್ವಾಧೀನಪಡಿಸಿಕೊಂಡಿದೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಿದ ಹೈದರಾಬಾದ್ ವಿಶ್ವವಿದ್ಯಾಲಯದ ಹಲವಾರು ವಿದ್ಯಾರ್ಥಿಗಳನ್ನು ಪೊಲೀಸರು ಭಾನುವಾರ ಬಂಧಿಸಿದ್ದಾರೆ.

Viral Video: ‘ಇದು ಭಾರತವಲ್ಲ, ಅಮೆರಿಕ’... ಇಂಟರ್ನೆಟ್‌ನಲ್ಲಿ ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದ ಬಟ್ಟೆ ಒಣಗಿಸುವ ವಿಡಿಯೊ

ಹಲ್ ಚಲ್ ಸೃಷ್ಟಿಸಿದ ಬಟ್ಟೆ ಒಣಗಿಸುವ ಈ ವಿಡಿಯೊ

Viral Video: ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು, ಇದು ಇಂಡಿಯಾ ಅಲ್ಲ,ಅಮೆರಿಕ ಎಂಬ ಕ್ಯಾಪ್ಷನ್ ಕೊಟ್ಟ ವಿಡಿಯೊ... ಅಷ್ಟಕ್ಕೂ ಆ ತಲೆಬರಹ ಕೊಟ್ಟಿದ್ಯಾರು..? ಹಾಗೇ ಅನ್ನಲು ಕಾರಣವೇನು....? ಈ ವಿಡಿಯೊ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದರು ಗೊತ್ತಾ...? ಇಲ್ಲಿದೆ ನೋಡಿ ಇದರ ಕಂಪ್ಲೀಟ್ ಮಾಹಿತಿ.

Viral News: ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸಹಪಾಠಿಯಿಂದಲೇ ಕಪಾಳಮೋಕ್ಷ ಮಾಡಿಸಿದ ಶಿಕ್ಷಕಿ

ತಪ್ಪು ಉತ್ತರ ನೀಡಿದ ವಿದ್ಯಾರ್ಥಿಗಳಿಗೆ ಸಹಪಾಠಿಯಿಂದಲೇ ಕಪಾಳಮೋಕ್ಷ!

Viral News: ಸರ್ಕಾರಿ ಬಾಲಕಿಯರ ಶಾಲೆಯ ಶಿಕ್ಷಕಿಯೊಬ್ಬರು ಒಂದು ತರಗತಿಯ ವಿದ್ಯಾರ್ಥಿಗಳಿಗೆ ಪಾಠ ಮಾಡುವಾಗ ಪ್ರಶ್ನೆಗಳನ್ನು ಕೇಳಿದ್ದಾರೆ. ಯಾರೆಲ್ಲಾ ತಪ್ಪು ಉತ್ತರ ನೀಡಿದ್ದಾರೋ, ಅವರಿಗೆಲ್ಲಾ ಅದೇ ತರಗತಿಯ ಕ್ಲಾಸ್‌ ಲೀಡರ್‌ ಕೈಯಿಂದ ಕಪಾಳಮೋಕ್ಷ ಮಾಡಿಸಿದ್ದಾರೆ. ಪರಿಣಾಮ ಈಗ ಆ ಶಿಕ್ಷಕಿಯ ಮೇಲೆ ಪ್ರಕರಣ ದಾಖಲಾಗಿದ್ದು, ಸೋಷಿಯಲ್ ಮೀಡಿಯಾದಲ್ಲಿ ಈ ಸುದ್ದಿ ಚರ್ಚೆಯಾಗುತ್ತಿದೆ.

Baba Vanga's Prediction: ಏಲಿಯನ್‌ಗಳು ಯಾವ ದೇಶಕ್ಕೆ ಮೊಟ್ಟ ಮೊದಲ ಸಂದೇಶ ಕಳುಹಿಸಲಿದ್ದಾರೆ ಗೊತ್ತಾ? ಬಾಬಾ ವಂಗಾ ಭವಿಷ್ಯವಾಣಿ ಏನು?

ಏಲಿಯನ್ಸ್ ಬಗ್ಗೆ ಬಾಬಾ ವಂಗಾ ನುಡಿದ ಭವಿಷ್ಯವಾಣಿ ಏನು..?

Baba Vanga's Prediction: ಬಾಬಾ ವಂಗಾ ಅವರ ಪ್ರಕಾರ, ಏಲಿಯನ್‌ಗಳು 2125 ರಲ್ಲಿ ಹಂಗೇರಿಗೆ ತಮ್ಮ ಮೊತ್ತ ಮೊದಲ ಸಾಂಕೇತಿಕ ಸಂದೇಶಗಳನ್ನು ಕಳುಹಿಸಲಿದ್ದಾರೆ. ಇದಾದ ಬಳಿಕ, ಏಲಿಯನ್‌ಗಳೊಂದಿಗಿನ ಮೊದಲ ನೇರ ಸಂಪರ್ಕವು ಅಲ್ಲಿಯೇ ಸಂಭವಿಸಲಿದೆ. ಈ ವರ್ಷದಿಂದ ನಿಖರವಾಗಿ 100 ವರ್ಷಗಳ ನಂತರ, ಅಂದರೆ 2125 ರಲ್ಲಿ, ಅನ್ಯಗ್ರಹ ಜೀವಿಗಳು ಭೂಮಿಯ ಮೇಲೆ ಇಳಿಯಲು ಪ್ರಯತ್ನಿಸಲಿದ್ದು, ಹಂಗೇರಿಯನ್ನು ತಮ್ಮ ತಾಣವಾಗಿ ಆರಿಸಿಕೊಳ್ಳುತ್ತಾರೆ ಎಂದು ಅವರು ಹೇಳಿದ್ದಾರೆ.

Loading...