ಫೋಟೋ ಗ್ಯಾಲರಿ ಗುಜರಾತ್​ ವಿಮಾನ ಪತನ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Vishwavani Editorial: ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ

ಜಾತಿಗಣತಿಗಾಗಿ ರಾಜ್ಯ ಸರಕಾರವು ರು.167 ಕೋಟಿಯನ್ನು ವ್ಯಯ ಮಾಡಿದೆ, ಈಗಾಗಲೇ ದಶವಾರ್ಷಿಕ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಗಣತಿಯೂ ಸೇರಿಕೊಳ್ಳಲಿದೆ ಎಂದು ಪ್ರಧಾನಿ ಇತ್ತೀಚೆಗೆ ಹೇಳಿದ್ದರು. ಆ ಕಾರಣಕ್ಕಾಗಿ ರಾಜ್ಯ ಸರಕಾರ ನಡೆಸಲಿರುವ ಜಾತಿಗಣತಿ ಸಮೀಕ್ಷೆಯ ನಿಲುವನ್ನು ಕೆಲವರು ಪ್ರಶ್ನಿಸಿದ್ದಾರೆ.

ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ

Profile Ashok Nayak Jun 12, 2025 10:17 AM

ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿದ್ದಾರೆ. ಜಾತಿಗಣತಿ ಸಮೀಕ್ಷೆ ನಡೆದು ಒಂಭತ್ತು-ಹತ್ತು ವರ್ಷ ಗಳಾಗಿವೆ, ಹೀಗಾಗಿ ಕೆಲವರು ಅದರ ವಿರುದ್ಧ ಅಪಸ್ವರ ಎತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ನಡೆಸಲಿದ್ದು, 90 ದಿನದೊಳಗೆ ಆ ಕಾರ್ಯ ಮುಗಿಯಲಿದೆ ಎಂದೂ ಅವರು ಜಾತಿಗಣತಿ ಸಮೀಕ್ಷೆಯನ್ನು ಮತ್ತೊಮ್ಮೆ ಮಾಡುವ ರಾಜ್ಯ ಸರಕಾರದ ನಿರ್ಧಾರ ವನ್ನು ಬಲವಾಗಿ ಸಮರ್ಥಿಸಿದ್ದಾರೆ.

ಈ ಹಿಂದಿನ ಸಮೀಕ್ಷೆಯಲ್ಲಿ ಹಲವಾರು ಲೋಪದೋಷಗಳಿದ್ದವು, ಎಲ್ಲರಿಗೂ ನ್ಯಾಯಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕೆಂಬ ಉದ್ದೇಶಕ್ಕಾಗಿಯೇ ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ನಡೆಸುವ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಆದರೆ ಪ್ರತಿಪಕ್ಷವು ಸರಕಾರದ ಈ ನಿಲುವಿಗೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದೆಲ್ಲಾ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಸಿ.ಎಂ. ಬಲವಾಗಿ ಸಮರ್ಥಿಸಿಕೊಂಡು, ಇದೀಗ ಹೈಕಮಾಂಡ್ ಒತ್ತಡಕ್ಕೆ ಕಟ್ಟುಬಿದ್ದು ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾಜ್ಯದ ಪ್ರತಿಪಕ್ಷದ ನಾಯಕ ಸರಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.

ಇದನ್ನೂ ಓದಿ: Vishwavani Editorial: ಉಗ್ರವಾದದ ದಮನವಾಗಲಿ

ಜಾತಿಗಣತಿಗಾಗಿ ರಾಜ್ಯ ಸರಕಾರವು ರು.167 ಕೋಟಿಯನ್ನು ವ್ಯಯ ಮಾಡಿದೆ, ಈಗಾಗಲೇ ದಶ ವಾರ್ಷಿಕ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಗಣತಿಯೂ ಸೇರಿಕೊಳ್ಳಲಿದೆ ಎಂದು ಪ್ರಧಾನಿ ಇತ್ತೀಚೆಗೆ ಹೇಳಿದ್ದರು. ಆ ಕಾರಣಕ್ಕಾಗಿ ರಾಜ್ಯ ಸರಕಾರ ನಡೆಸಲಿರುವ ಜಾತಿಗಣತಿ ಸಮೀಕ್ಷೆಯ ನಿಲುವನ್ನು ಕೆಲವರು ಪ್ರಶ್ನಿಸಿದ್ದಾರೆ.

ಕೇಂದ್ರ ಸರಕಾರವು ಮುಂದಿನ ವರ್ಷವಷ್ಟೇ ಜನಗಣತಿ ನಡೆಸುವುದೆಂಬುವುದು ಈಗಾಗಲೇ ಖಚಿತವಾಗಿದೆ. ಹಾಗಾಗಿ ಈ ಹಿಂದಿನ ವರದಿಯಲ್ಲಿ ತನ್ನ ಕಡೆಯಿಂದ ಆಗಿದ್ದ ಲೋಪವನ್ನು ಆದಷ್ಟು ಬೇಗ ತಿದ್ದುವ ಉದ್ದೇಶವೂ ರಾಜ್ಯ ಸರಕಾರದ್ದಾಗಿರಬಹುದು. 90 ದಿನದಲ್ಲಿ ಈ ಸಲ ಜಾತಿಗಣತಿ ಪೂರ್ಣವಾಗಲಿದೆ ಎಂಬ ನಂಬಿಕೆ ರಾಜ್ಯ ಸರಕಾರಕ್ಕಿದೆ. ಆದರೆ ಈ ಸಲ ಮತ್ತೊಮ್ಮೆ ಜಾತಿಗಣತಿ ನಡೆಸಿದರೆ ಯಾವುದೇ ಲೋಪ ಆಗದಂತೆ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ ಎಂಬುವುದನಂತೂ ಸರಕಾರ ಮರೆಯಲೇಬಾರದು.

ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ನಡೆಸುವುದಾಗಿ ಸಿಎಂ ಸಿದ್ದರಾಮಯ್ಯ ಘೋಷಿಸಿ ದ್ದಾರೆ. ಜಾತಿಗಣತಿ ಸಮೀಕ್ಷೆ ನಡೆದು ಒಂಭತ್ತು-ಹತ್ತು ವರ್ಷಗಳಾಗಿವೆ, ಹೀಗಾಗಿ ಕೆಲವರು ಅದರ ವಿರುದ್ಧ ಅಪಸ್ವರ ಎತ್ತಿದ್ದಾರೆ. ಆ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ನಡೆಸಲಿದ್ದು, 90 ದಿನದೊಳಗೆ ಆ ಕಾರ್ಯ ಮುಗಿಯಲಿದೆ ಎಂದೂ ಅವರು ಜಾತಿಗಣತಿ ಸಮೀಕ್ಷೆಯನ್ನು ಮತ್ತೊಮ್ಮೆ ಮಾಡುವ ರಾಜ್ಯ ಸರಕಾರದ ನಿರ್ಧಾರವನ್ನು ಬಲವಾಗಿ ಸಮರ್ಥಿ ಸಿದ್ದಾರೆ.

ಈ ಹಿಂದಿನ ಸಮೀಕ್ಷೆಯಲ್ಲಿ ಹಲವಾರು ಲೋಪದೋಷಗಳಿದ್ದವು, ಎಲ್ಲರಿಗೂ ನ್ಯಾಯಬದ್ಧವಾಗಿ ಅವಕಾಶ ಕಲ್ಪಿಸಿಕೊಡಬೇಕೆಂಬ ಉದ್ದೇಶಕ್ಕಾಗಿಯೇ ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆ ನಡೆಸುವ ನಿರ್ಧಾರ ಮಾಡಲಾಗಿದೆ ಎಂದಿದ್ದಾರೆ. ಆದರೆ ಪ್ರತಿಪಕ್ಷವು ಸರಕಾರದ ಈ ನಿಲುವಿಗೆ ಭಾರೀ ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆ ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ, ಅಪೂರ್ಣ ಎಂದೆಲ್ಲಾ ಸಾರ್ವಜನಿಕ ವಲಯದಲ್ಲಿ ವಿರೋಧ ವ್ಯಕ್ತಪಡಿಸಿದ್ದರೂ ಅದನ್ನು ಸಿ.ಎಂ. ಬಲವಾಗಿ ಸಮರ್ಥಿಸಿಕೊಂಡು, ಇದೀಗ ಹೈಕಮಾಂಡ್ ಒತ್ತಡಕ್ಕೆ ಕಟ್ಟುಬಿದ್ದು ಮತ್ತೊಮ್ಮೆ ಜಾತಿಗಣತಿ ಸಮೀಕ್ಷೆಯ ನಿರ್ಧಾರ ಕೈಗೊಂಡಿದ್ದಾರೆ ಎಂದು ರಾಜ್ಯದ ಪ್ರತಿಪಕ್ಷದ ನಾಯಕ ಸರಕಾರದ ನಿರ್ಧಾರವನ್ನು ಟೀಕಿಸಿದ್ದಾರೆ.

ಜಾತಿಗಣತಿಗಾಗಿ ರಾಜ್ಯ ಸರಕಾರವು ರು.167 ಕೋಟಿಯನ್ನು ವ್ಯಯ ಮಾಡಿದೆ, ಈಗಾಗಲೇ ದಶವಾರ್ಷಿಕ ರಾಷ್ಟ್ರೀಯ ಜನಗಣತಿಯಲ್ಲಿ ಜಾತಿಗಣತಿಯೂ ಸೇರಿಕೊಳ್ಳಲಿದೆ ಎಂದು ಪ್ರಧಾನಿ ಇತ್ತೀಚೆಗೆ ಹೇಳಿದ್ದರು. ಆ ಕಾರಣಕ್ಕಾಗಿ ರಾಜ್ಯ ಸರಕಾರ ನಡೆಸಲಿರುವ ಜಾತಿಗಣತಿ ಸಮೀಕ್ಷೆಯ ನಿಲುವನ್ನು ಕೆಲವರು ಪ್ರಶ್ನಿಸಿದ್ದಾರೆ. ಕೇಂದ್ರ ಸರಕಾರವು ಮುಂದಿನ ವರ್ಷವಷ್ಟೇ ಜನಗಣತಿ ನಡೆಸುವುದೆಂಬುವುದು ಈಗಾಗಲೇ ಖಚಿತವಾಗಿದೆ.

ಹಾಗಾಗಿ ಈ ಹಿಂದಿನ ವರದಿಯಲ್ಲಿ ತನ್ನ ಕಡೆಯಿಂದ ಆಗಿದ್ದ ಲೋಪವನ್ನು ಆದಷ್ಟು ಬೇಗ ತಿದ್ದುವ ಉದ್ದೇಶವೂ ರಾಜ್ಯ ಸರಕಾರದ್ದಾಗಿರಬಹುದು. 90 ದಿನದಲ್ಲಿ ಈ ಸಲ ಜಾತಿಗಣತಿ ಪೂರ್ಣ ವಾಗಲಿದೆ ಎಂಬ ನಂಬಿಕೆ ರಾಜ್ಯ ಸರಕಾರಕ್ಕಿದೆ. ಆದರೆ ಈ ಸಲ ಮತ್ತೊಮ್ಮೆ ಜಾತಿಗಣತಿ ನಡೆಸಿದರೆ ಯಾವುದೇ ಲೋಪ ಆಗದಂತೆ ನೋಡಿಕೊಳ್ಳುವ ಬಹುದೊಡ್ಡ ಜವಾಬ್ದಾರಿ ರಾಜ್ಯ ಸರಕಾರದ ಮೇಲಿದೆ ಎಂಬುವುದನಂತೂ ಸರಕಾರ ಮರೆಯಲೇಬಾರದು.