ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಯಿಂದ ಹಾರ್ದಿಕ್ ಪಾಂಡ್ಯ ಔಟ್
India vs Afghanistan ODI series: ಪಾಂಡ್ಯ ಅವರ ಚೇತರಿಕೆ ಕಾರ್ಯವು ಬೆಂಗಳೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಬೆಂಬಲ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿ ಅವರು ಸ್ನಾಯುಸೆಳೆತದಿಂದಾಗಿ ಈ ಸರಣಿಯಲ್ಲಿ ಆಡುತ್ತಿಲ್ಲ.
Hardik Pandya -
ನವದೆಹಲಿ, ಜೂ.10: ಅಫ್ಘಾನಿಸ್ತಾನ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೂ ಮುನ್ನ ಭಾರತ ಏಕದಿನ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. ವಿರಾಟ್ ಕೊಹ್ಲಿ ನಂತರ, ಹಾರ್ದಿಕ್ ಪಾಂಡ್ಯ ಕೂಡ ಸರಣಿಯಿಂದ ಹೊರಬಿದ್ದಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದಾಗಿ ಹಾರ್ದಿಕ್ ಪಾಂಡ್ಯ ಹೊರಗುಳಿದಿದ್ದಾರೆ. ಅವರ ಅಂತರರಾಷ್ಟ್ರೀಯ ಕ್ರಿಕೆಟ್ ಕಮ್ಬ್ಯಾಕ್ ಮತ್ತಷ್ಟು ವಿಳಂಬವಾಗಲಿದೆ.
ಬಿಸಿಸಿಐ ಮೂಲಗಳು ಇಂಡಿಯಾ ಟುಡೇಗೆ ನೀಡಿದ ಮಾಹಿತಿ ಪ್ರಕಾರ, ಹಾರ್ದಿಕ್ ಕ್ವಾಡ್ರೈಸ್ಪ್ ಗಾಯದಿಂದ ಬಳಲುತ್ತಿದ್ದು ಗುಣವಾಗಲು ಮೂರು ವಾರಗಳು ಬೇಕಾಗಿದೆ ಎಂದಿದೆ. ಮಂಗಳವಾರವಷ್ಟೇ ಪಾಂಡ್ಯ ಮತ್ತು ರೋಹಿತ್ ಫಿಟ್ನೆಸ್ ಬಗ್ಗೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ಶ್ರೇಷ್ಠತಾ ಕೇಂದ್ರವು ಹಸಿರು ನಿಶಾನೆ ತೋರಿತ್ತು. ಇದರಿಂದಾಗಿ ಇಬ್ಬರೂ ಆಟಗಾರರು ಅಫ್ಗಾನಿಸ್ತಾನ ವಿರುದ್ಧದ ಮೂರು ಏಕದಿನ ಪಂದ್ಯಗಳ ಸರಣಿಯಲ್ಲಿ ಆಡುವುದು ಖಚಿತವಾಗಿತ್ತು. ಆದರೆ ಬುಧವಾರ ಹಾರ್ದಿಕ್ ಪಾಂಡ್ಯ ಫಿಟ್ ಇಲ್ಲದ ಕಾರಣ ಸರಣಯಿಂದ ಹೊರಗುಳಿಯಲ್ಲಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.
ಬೆನ್ನುನೋವಿನಿಂದಾಗಿ ಹಾರ್ದಿಕ್ ಅವರು ಜೂನ್ 2ರಿಂದ ಬೆಂಗಳೂರಿನ ಸಿಒಇಯಲ್ಲಿ ಚಿಕಿತ್ಸೆಯಲ್ಲಿದ್ದರು. ಜೂನ್ 11 ರಂದು ಧರ್ಮಶಾಲಾದಲ್ಲಿ ತಂಡವನ್ನು ಮತ್ತೆ ಸೇರುವ ನಿರೀಕ್ಷೆಯಿತ್ತು. ಆ ಪುನರಾಗಮನದ ಸಮಯವು ಈಗ ಅಡ್ಡಿಪಡಿಸಲ್ಪಟ್ಟಿದೆ, ವೈದ್ಯಕೀಯ ಸಲಹೆಯು ಅವರ ಕೆಲಸದ ಹೊರೆಯಲ್ಲಿ ತಕ್ಷಣದ ವಿರಾಮಕ್ಕೆ ಕಾರಣವಾಗಿದೆ.
ಭಾರತ 'ಎ' ಚೊಚ್ಚಲ ಪಂದ್ಯದಲ್ಲೇ ವೈಭವ್ ಸೂರ್ಯವಂಶಿ ವೈಫಲ್ಯ
ಪಾಂಡ್ಯ ಅವರ ಚೇತರಿಕೆ ಕಾರ್ಯವು ಬೆಂಗಳೂರಿನಲ್ಲಿ ಸೆಂಟರ್ ಆಫ್ ಎಕ್ಸಲೆನ್ಸ್ ಬೆಂಬಲ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿ ಮುಂದುವರಿಯುವ ನಿರೀಕ್ಷೆಯಿದೆ. ವಿರಾಟ್ ಕೊಹ್ಲಿ ಅವರು ಸ್ನಾಯುಸೆಳೆತದಿಂದಾಗಿ ಈ ಸರಣಿಯಲ್ಲಿ ಆಡುತ್ತಿಲ್ಲ.
ಕೊಹ್ಲಿ ಬದಲಿಗೆ ಯಶಸ್ವಿ ಜೈಸ್ವಾಲ್ ಆಯ್ಕೆಯಾಗಿದ್ದರೂ, ಬಿಸಿಸಿಐ ಹಾರ್ದಿಕ್ ಪಾಂಡ್ಯ ಅವರ ಬದಲಿ ಆಟಗಾರನನ್ನು ಇನ್ನೂ ಘೋಷಿಸಿಲ್ಲ ಅಥವಾ ಅವರ ಗಾಯವನ್ನು ದೃಢಪಡಿಸಿಲ್ಲ. ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿ ಶನಿವಾರ ಧರ್ಮಶಾಲಾದಲ್ಲಿ ಆರಂಭವಾಗಲಿದ್ದು, ಜೂನ್ 17 ಮತ್ತು 20 ರಂದು ಲಕ್ನೋ ಮತ್ತು ಚೆನ್ನೈನಲ್ಲಿ ಪಂದ್ಯಗಳು ನಡೆಯಲಿವೆ. ಟೆಸ್ಟ್ ಪದಾರ್ಪಣ ಪಂದ್ಯದಲ್ಲಿ ಒಟ್ಟು 7 ವಿಕೆಟ್ ಕಿತ್ತ ಮಾನವ್ ಸುತಾರ್ ಬದಲಿ ಆಟಗಾರನಾಗಿ ಅವಕಾಶ ಪಡೆಯುವ ಸಾಧ್ಯತೆಯೂ ಇದೆ.
ಭಾರತ ಪರಿಷೃತ ತಂಡ
ಶುಭಮನ್ ಗಿಲ್ (ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಇಶಾನ್ ಕಿಶನ್, ಹಾರ್ದಿಕ್ ಪಾಂಡ್ಯ, ನಿತೀಶ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಅರ್ಷದೀಪ್ ಸಿಂಗ್, ಪ್ರಿನ್ಸ್ ಯಾದವ್, ಪ್ರಸಿದ್ಧ್ ಕೃಷ್ಣ, ಗುರ್ನೂರ್ ಬ್ರಾರ್, ಹರ್ಷ ದುಬೆ.