IPL 2025: ʻಜಸ್ಪ್ರೀತ್ ಬುಮ್ರಾ ಇರುವವರೆಗೂ ಪಂದ್ಯ ಮುಗಿಯಲ್ಲʼ-ಎಬಿ ಡಿ ವಿಲಿಯರ್ಸ್!
ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ 2025ರ ಐಪಿಎಲ್ ಟೂರ್ನಿಯ ಎಲಿಮಿನೇಟರ್ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವನ್ನು ಮಣಿಸುವ ಮೂಲಕ ಎರಡನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯಲಿದೆ. ಪಂಜಾಬ್ ಕಿಂಗ್ಸ್ ಎದುರು ಗೆದ್ದರೆ ಮುಂಬೈ ತಂಡ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ದ ಕಾದಾಟ ನಡೆಸಲಿದೆ.

ಜಸ್ಪ್ರೀತ್ ಬುಮ್ರಾಗೆ ಎಬಿಡಿ ಮೆಚ್ಚುಗೆ.

ನವದೆಹಲಿ: ಐದು ಬಾರಿ ಚಾಂಪಿಯನ್ಸ್ ಮುಂಬೈ ಇಂಡಿಯನ್ಸ್ ತಂಡ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಟೂರ್ನಿಯ ಫೈನಲ್ಗೆ ಪ್ರವೇಶ ಮಾಡಲು ಇನ್ನು ಕೇವಲ ಒಂದು ಹೆಜ್ಜೆ ಬಾಕಿ ಇದೆ. ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ, ಗುಜರಾತ್ ಟೈಟನ್ಸ್ (Gujarat Titans) ತಂಡವನ್ನು 20 ರನ್ಗಳಿಂದ ಸೋಲಿಸಿತ್ತು. ಇದೀಗ ಕ್ವಾಲಿಫೈಯರ್ -2 ರಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡವನ್ನು ಎದುರಿಸಲಿದೆ. ಮುಂಬೈ ಇಂಡಿಯನ್ಸ್ ತಂಡ ಈ ಪಂದ್ಯವನ್ನು ಗೆದ್ದರೆ, ಜೂನ್ 3 ರಂದು ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಎದುರಿಸಲಿದೆ. 2025ರ ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್ನ ನರೇಂದ್ರ ಮೋದಿ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ.
ಎರಡನೇ ಕ್ವಾಲಿಫೈಯರ್, ಫೈನಲ್ಗೆ ಮೊದಲು ನಡೆಯಲಿದೆ. ಆದರೆ ಅದಕ್ಕೂ ಮೊದಲು ಮಾಜಿ ಆರ್ಸಿಬಿ ದಂತಕಥೆ ಎಬಿ ಡಿವಿಲಿಯರ್ಸ್ ಮುಂಬೈ ಇಂಡಿಯನ್ಸ್ ತಂಡದ ಹಿರಿಯ ವೇಗಿ ಜಸ್ಪ್ರೀತ್ ಬುಮ್ರಾ ಬಗ್ಗೆ ಎದುರಾಳಿ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ. ಈ ಋತುವಿನಲ್ಲಿ ಜಸ್ಪ್ರೀತ್ ಬುಮ್ರಾ ಮರಳಿ ಬಂದಾಗಿನಿಂದ ಮುಂಬೈ ಇಂಡಿಯನ್ಸ್ ಪರ ಅದ್ಭುತ ಪ್ರದರ್ಶನವನ್ನು ತೋರುತ್ತಿದ್ದಾರೆ. ಪ್ರತಿಯೊಂದು ಪಂದ್ಯದಲ್ಲೂ ತಂಡವನ್ನು ಗೆಲ್ಲಿಸಲು ಅವರು ತಮ್ಮ ಎಲ್ಲಾ ಪ್ರಯತ್ನಗಳನ್ನು ಮಾಡಡುತ್ತಿದ್ದಾರೆ. ಇದೀಗ ಎರಡನೇ ಕ್ವಾಲಿಫೈಯರ್ ಹಾಗೂ ಫೈನಲ್ ಪಂದ್ಯದಲ್ಲಿಯೂ ಅದೇ ಲಯವನ್ನು ಮುಂದುವರಿಸಲು ಎದುರು ನೋಡುತ್ತಿದ್ದಾರೆ.
MI vs GT: ಗುಜರಾತ್ ಟೈಟನ್ಸ್ ಎಸಗಿದ್ದ ಸಾಲು-ಸಾಲು ತಪ್ಪುಗಳನ್ನು ರಿವೀಲ್ ಮಾಡಿದ ಉತ್ತಪ್ಪ!
ಜಸ್ಪ್ರೀತ್ ಬುಮ್ರಾ ಬಗ್ಗೆ ಎಬಿಡಿ ಹೇಳಿದ್ದಿದು
ಜಸ್ಪ್ರೀತ್ ಬುಮ್ರಾ ಪ್ರಸ್ತುತ ವಿಶ್ವದ ಶ್ರೇಷ್ಠ ಬೌಲರ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ. ಮಿಸ್ಟರ್ 360 ಡಿಗ್ರಿ ಎಂದೇ ಪ್ರಸಿದ್ಧರಾಗಿರುವ ಎಬಿ ಡಿವಿಲಿಯರ್ಸ್ ಕೂಡ ಇದನ್ನು ನಂಬುತ್ತಾರೆ. "ನಾಕೌಟ್ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಹೆಸರುವಾಸಿಯಾದ ಆಟಗಾರರು ತಮ್ಮ ಭಯವನ್ನು ಎದುರಿಸಿ ಉತ್ತಮ ಪ್ರದರ್ಶನವನ್ನು ತೋರುತ್ತಾರೆ. ಅರ್ಧದಾರಿಯಲ್ಲಿ ಯಾರೂ ಗುಜರಾತ್ ಟೈಟನ್ಸ್ಗೆ ಅವಕಾಶ ನೀಡಲಿಲ್ಲ, ಆದರೆ ಮುಂಬೈ ತನ್ನ ಧೈರ್ಯವನ್ನು ಉಳಿಸಿಕೊಂಡಿತು- ವಿಶೇಷವಾಗಿ ಜಸ್ಪ್ರೀತ್ ಬುಮ್ರಾ ಅವರು ನಿರ್ಣಾಯಕ ಸಂದರ್ಭಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಲೇ ಇರುತ್ತಾರೆ," ಎಂದು ಎಬಿಡಿ ಗುಣಗಾನ ಮಾಡಿದ್ದಾರೆ.
MI vs GT: 759 ರನ್ ಗಳಿಸಿ ಶುಭಮನ್ ಗಿಲ್ ದಾಖಲೆ ಮುರಿದ ಸಾಯಿ ಸುದರ್ಶನ್!
"ಜಸ್ಪ್ರೀತ್ ಬುಮ್ರಾ ಅವರನ್ನು ಕೊನೆಯವರೆಗೂ ಉಳಿಸಿಕೊಂಡಿದ್ದ ಹಾರ್ದಿಕ್ ಪಾಂಡ್ಯಗೆ ಇದರ ಶ್ರೇಯ ಸಲ್ಲಬೇಕು. ಸಾಯಿ ಸುದರ್ಶನ್ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನವನ್ನು ತೋರಿದ್ದಾರೆ. ಹಾಗಾಗಿ ಬುಮ್ರಾ ಅವರನ್ನು ತಡವಾಗಿ ಆಡಿಸುವುದು ಬುದ್ದಿವಂತಿಕೆಯ ನಡೆಯಾಗಿದೆ. ಕೊನೆಯ ಎರಡು ಓವರ್ಗಳನ್ನು ಬೌಲ್ ಮಾಡಲು ಬುಮ್ರಾ ಬರುವುದಕ್ಕೂ ಮುನ್ನ ನಾನು ನನ್ನ ಮಗನಿಗೆ, "ಅವರು ಬೌಲಿಂಗ್ ಮುಗಿಸುವವರೆಗೂ ಪಂದ್ಯ ಮುಗಿಯುವುದಿಲ್ಲʼ ಎಂದು ಹೇಳಿದ್ದೆ. ತಾವು ಅತ್ಯುತ್ತಮ ವೇಗದ ಬೌಲರ್ ಏಕೆಂದು ಅವರು ಮತ್ತೊಂದು ಸಾಬೀತುಪಡಿಸಿದ್ದಾರೆ," ಎಂದು ಎಬಿ ಡಿವಿಲಿಯರ್ಸ್ ಹೇಳಿದ್ದಾರೆ.