ಆಫ್ಘಾನ್ ಟೆಸ್ಟ್ ಪಂದ್ಯಕ್ಕೆ ಮೊಹಮ್ಮದ್ ಸಿರಾಜ್ ಅನುಮಾನ; ಔಕಿಬ್ ನಬಿ ತಂಡ ಸೇರ್ಪಡೆ ಸಾಧ್ಯತೆ
IND vs AFG One-off Test: ಒಂದೊಮ್ಮೆ ಸಿರಾಜ್ಗೆ ವಿಶ್ರಾಂತಿ ನೀಡಿದರೆ, ಎಡಗೈ ವೇಗಿ ಗುರ್ನೂರ್ ಬ್ರಾರ್ ಟೆಸ್ಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಔಕಿಬ್ ನಬಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.
Mohammed Siraj -
ನವದೆಹಲಿ, ಜೂ.3: ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಭಾರತ ತಂಡ(Team India) ಅಂತಿಮ ಸಿದ್ಧತೆಗಳು ನಡೆಸುತ್ತಿರುವಾಗಲೇ ವೇಗಿ ಮೊಹಮ್ಮದ್ ಸಿರಾಜ್(Mohammed Siraj) ಲಭ್ಯತೆಯ ಬಗ್ಗೆ ಅನಿಶ್ಚಿತತೆ ಎದುರಾಗಿದೆ. ತಂಡದ ಆಡಳಿತವು ಮುಂದಿನ 48 ಗಂಟೆಗಳಲ್ಲಿ ಅವರ ಕೆಲಸದ ಹೊರೆ ಕುರಿತು ಅಂತಿಮ ನಿರ್ಧಾರ ತೆಗೆದುಕೊಳ್ಳುವ ನಿರೀಕ್ಷೆಯಿದೆ.
ಇತ್ತೀಚೆಗೆ ಗುಜರಾತ್ ಟೈಟಾನ್ಸ್ ಜೊತೆಗಿನ 2026 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅಭಿಯಾನವನ್ನು ಪೂರ್ಣಗೊಳಿಸಿದ ಸಿರಾಜ್, ತಂಡದೊಂದಿಗೆ ಚಂಡೀಗಢಕ್ಕೆ ಬಂದ ನಂತರ ವೈದ್ಯಕೀಯ ಸಿಬ್ಬಂದಿಯ ಮೇಲ್ವಿಚಾರಣೆಯಲ್ಲಿದ್ದಾರೆ. ಮೇ 31 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಫೈನಲ್ ಸೇರಿದಂತೆ ಗುಜರಾತ್ನ ಪ್ರತಿಯೊಂದು ಪಂದ್ಯದಲ್ಲೂ ವೇಗದ ಬೌಲರ್ ಆಡಿದ್ದು, ಭಾರತ ರೆಡ್-ಬಾಲ್ ಕ್ರಿಕೆಟ್ಗೆ ಮರಳುವ ಮೊದಲು ಅವರಿಗೆ ವಿಶ್ರಾಂತಿ ನೀಡಬೇಕೆ ಎಂಬ ಬಗ್ಗೆ ಚರ್ಚೆಗಳು ನಡೆದಿವೆ.
ಒಂದೊಮ್ಮೆ ಸಿರಾಜ್ಗೆ ವಿಶ್ರಾಂತಿ ನೀಡಿದರೆ, ಎಡಗೈ ವೇಗಿ ಗುರ್ನೂರ್ ಬ್ರಾರ್ ಟೆಸ್ಟ್ಗೆ ಪದಾರ್ಪಣೆ ಮಾಡುವ ಸಾಧ್ಯತೆಯಿದೆ. ಜಮ್ಮು ಮತ್ತು ಕಾಶ್ಮೀರದ ವೇಗದ ಬೌಲರ್ ಔಕಿಬ್ ನಬಿಯನ್ನು ತಂಡಕ್ಕೆ ಸೇರಿಸಿಕೊಳ್ಳುವ ನಿರೀಕ್ಷೆಯಿದೆ.
Back to Test Cricket 🤍
— BCCI (@BCCI) June 3, 2026
🎥 #TeamIndia hits the nets as the red ball grind gets underway ahead of the #INDvAFG Test 🏏@IDFCFIRSTBank pic.twitter.com/bD3z1osQcB
ದೇಶೀಯ ಕ್ರಿಕೆಟ್ನಲ್ಲಿ ನಬಿ ಅತ್ಯುತ್ತಮ ಪ್ರದರ್ಶನ ನೀಡುವವರಲ್ಲಿ ಒಬ್ಬರಾಗಿದ್ದು, ಯಶಸ್ವಿ ರಣಜಿ ಟ್ರೋಫಿ ಅಭಿಯಾನದಲ್ಲಿ 60 ವಿಕೆಟ್ಗಳನ್ನು ಕಬಳಿಸಿ ಜಮ್ಮು ಮತ್ತು ಕಾಶ್ಮೀರ ಐತಿಹಾಸಿಕ ಪ್ರಶಸ್ತಿಯನ್ನು ಪಡೆಯುವಲ್ಲಿ ಸಹಾಯ ಮಾಡಿದ್ದರು. ಪ್ರಸ್ತುತ ಅವರು ಗುರ್ಜಪ್ನೀತ್ ಸಿಂಗ್, ಪ್ರಿನ್ಸ್ ಯಾದವ್, ಸರಾಂಶ್ ಜೈನ್, ಜೀಶನ್ ಅನ್ಸಾರಿ ಮತ್ತು ಶಿವಾಂಗ್ ಕುಮಾರ್ ಅವರೊಂದಿಗೆ ಟೆಸ್ಟ್ಗೆ ಮುಂಚಿತವಾಗಿ ಭಾರತೀಯ ತಂಡಕ್ಕೆ ಸಹಾಯ ಮಾಡುವ ಆರು ನೆಟ್ ಬೌಲರ್ಗಳಲ್ಲಿ ಒಬ್ಬರಾಗಿದ್ದಾರೆ.
ಭಾರತ vs ಅಫ್ಘಾನಿಸ್ತಾನ ಟೆಸ್ಟ್ಗೆ ನೆಟ್ ಬೌಲರ್ ಆಗಿ ಆಯ್ಕೆಯಾದ ಔಕಿಬ್ ನಬಿ
'ಸಿರಾಜ್ ದೀರ್ಘ ಕಾಲ ಆಡಿದ್ದಾರೆ ಮತ್ತು ಅವರಿಗೆ ವಿಶ್ರಾಂತಿ ನೀಡಿದರೆ, ಗುರ್ನೂರ್ ಆಡುವ ಮತ್ತು ನಬಿ ತಂಡಕ್ಕೆ ಸೇರುವ ಸಾಧ್ಯತೆ ಹೆಚ್ಚು' ಎಂದು ಮೂಲವೊಂದು ತಿಳಿಸಿದೆ ಎಂದು ಟೈಮ್ಸ್ ಆಫ್ ಇಂಡಿಯಾ ತಿಳಿಸಿದೆ.
ಭಾರತ ಟೆಸ್ಟ್ ತಂಡ: ಶುಭಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಕೆಎಲ್ ರಾಹುಲ್ (ಉಪನಾಯಕ), ಸಾಯಿ ಸುದರ್ಶನ್, ರಿಷಭ್ ಪಂತ್ (ವಿಕೆಟ್ ಕೀಪರ್), ದೇವದತ್ ಪಡಿಕ್ಕಲ್, ನಿತೀಶ್ ಕುಮಾರ್ ರೆಡ್ಡಿ, ವಾಷಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಮೊಹಮ್ಮದ್. ಸಿರಾಜ್, ಪ್ರಸಿದ್ಧ್ ಕೃಷ್ಣ, ಮಾನವ್ ಸುತಾರ್, ಗುರ್ನೂರ್ ಬ್ರಾರ್, ಹರ್ಷ್ ದುಬೆ, ಧ್ರುವ್ ಜುರೆಲ್ (ವಿಕೆಟ್ ಕೀಪರ್).