RCB: ಆರ್ಸಿಬಿ ಮಾರಾಟಕ್ಕಿಲ್ಲ; ವದಂತಿಗೆ ತೆರೆ ಎಳೆದ ಮಾಲೀಕ
16,834 ಕೋಟಿ ರೂ.ಗೆ ಆರ್ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಯೋಚಿಸಲಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ, ಇವೆಲ್ಲ ಸುಳ್ಳು ಎಂದು ಡಿಯಾಜಿಯೊ ಸ್ಪಷ್ಟನೆ ನೀಡಿ ಈ ವದಂತಿಗೆ ಡಿಯಾಜಿಯೊ ತೆರೆ ಎಳೆದಿದೆ. ಇದರಿಂದ ಅಭಿಮಾನಿಗಳ ನಿರಾಳರಾಗಿದ್ದಾರೆ.


ಬೆಂಗಳೂರು: ಕನ್ನಡಿಗರ ನೆಚ್ಚಿನ ಫ್ರಾಂಚೈಸಿ ರಾಯಲ್ ಚಾಲೆಂಜರ್ ಬೆಂಗಳೂರು (ಆರ್ಸಿಬಿ) ಮಾರಾಟವಾಗಲಿದೆ ಎಂಬ ಸುದ್ದಿ ಹರಿದಾಡಿತ್ತು. ಆದರೆ ಇದನ್ನು ಆರ್ಸಿಬಿ ಮಾಲಕತ್ವ ಹೊಂದಿರುವ ಯುನೈಟೆಡ್ ಸ್ಪಿರಿಟ್ನ ಮಾತೃ ಸಂಸ್ಥೆ ಡಿಯಾಜಿಯೊ ತಳ್ಳಿ ಹಾಕಿದೆ. ನಮ್ಮ ತಂಡ ಮಾರಾಟಕ್ಕಿಲ್ಲ ಇವೆಲ್ಲ ಬರೀ ವದಂತಿಗಳಷ್ಟೇ ಎಂದು ಹೇಳಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ಐಪಿಎಲ್ ಕಪ್ ಗೆದ್ದ ಸಂಭ್ರಮಾಚರಣೆ ನಡೆಸುವಾಗ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಇದರ ಬೆನ್ನಲ್ಲೇ ಆರ್ಸಿಬಿಯನ್ನು ಬ್ಯಾನ್ ಮಾಡಲಾಗುವುದು, ಮಾರಾಟ ಮಾಡಲು ಅದರ ಮಾಲಕ ಸಂಸ್ಥೆ ಯೋಚಿಸುತ್ತಿದೆ ಎನ್ನಲಾಗಿತ್ತು. ಇದು ಆರ್ಸಿಬಿ ಅಭಿಮಾನಿಗಳಿಗೆ ಆತಂಕ ಉಂಟು ಮಾಡಿತ್ತು.
16,834 ಕೋಟಿ ರೂ.ಗೆ ಫ್ರಾಂಚೈಸಿಯನ್ನು ಮಾರಾಟ ಮಾಡಲು ಯೋಚಿಸಲಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ, ಇವೆಲ್ಲ ಸುಳ್ಳು ಎಂದು ಡಿಯಾಜಿಯೊ ಸ್ಪಷ್ಟನೆ ನೀಡಿ ಈ ವದಂತಿಗೆ ಡಿಯಾಜಿಯೊ ತೆರೆ ಎಳೆದಿದೆ. ಇದರಿಂದ ಅಭಿಮಾನಿಗಳ ನಿರಾಳರಾಗಿದ್ದಾರೆ.
2008 ರಲ್ಲಿ ಕಿಂಗ್ಫಿಷರ್ ಏರ್ಲೈನ್ಸ್ನ ಮಾಲೀಕರಾಗಿದ್ದ ವಿಜಯ್ ಮಲ್ಯ ಅವರು ಆರ್ಸಿಬಿ ಫ್ರಾಂಚೈಸಿಯನ್ನು ಸ್ಥಾಪಿಸಿದ್ದರು. ಆದರೆ ಮಲ್ಯ ಸಾಲದ ಸುಳಿಯಲ್ಲಿ ಸಿಲುಕಿಕೊಂಡ ಬಳಿಕ ಅವರು ಫ್ರಾಂಚೈಸಿಯನ್ನು ಡಯಾಜಿಯೊಗೆ ಭಾರತದಲ್ಲಿನ ತನ್ನ ಅಂಗಸಂಸ್ಥೆಯಾದ ಯುನೈಟೆಡ್ ಸ್ಪಿರಿಟ್ಸ್ಗೆ ಮಾರಾಟ ಮಾಡಿದ್ದರು.
ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದ ಎಲ್ಲ ಸಂಗತಿಗಳನ್ನು ಬುಧವಾರ ಬಹಿರಂಗಪಡಿಸಲಾಗುವುದು ಎಂದು ರಾಜ್ಯ ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ. ಪ್ರಕರಣ ಸಂಬಂಧ ಆರ್ಸಿಬಿ ಮಾರುಕಟ್ಟೆ ವಿಭಾಗದ ನಿಖಿಲ್ ಸೋಸಲೆ, ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ಸ್ ನಿರ್ದೇಶಕ ಸುನೀಲ್ ಮ್ಯಾಥ್ಯೂ, ಡಿಎನ್ನ ಮ್ಯಾನೇಜರ್ ಕಿರಣ್ ಕುಮಾರ್ ಮತ್ತು ಸಮಂತ್ ಮಾವಿನಕೆರೆ ಬಂಧನಕ್ಕೆ ಒಳಗಾಗಿದ್ದಾರೆ.