Viral Video: ಫೇಸ್ಬುಕ್ ಮೂಲಕ ಪರಿಚಯವಾದ ಯುವಕನೊಂದಿಗೆ ಅನೈತಿಕ ಸಂಬಂಧ; ಸಾರ್ವಜನಿಕವಾಗಿ ಥಳಿಸಿ ಜೋಡಿಯನ್ನು ʼಶುದ್ಧೀಕರಿಸಿದʼ ಸ್ಥಳೀಯರು
ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ನಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಆಕೆಯ ಗೆಳೆಯನನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು, ಬೋರ್ವೆಲ್ಗೆ ಕಟ್ಟಿ ಹಾಕಿ ಥಳಿಸಿದ್ದಾರೆ. ಸದ್ಯ ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ.


ಹೈದರಾಬಾದ್: ತೆಲಂಗಾಣದ ಪೆದ್ದಪಲ್ಲಿ ಜಿಲ್ಲೆಯ ಸುಲ್ತಾನಾಬಾದ್ನಲ್ಲಿ ವಿವಾಹೇತರ ಸಂಬಂಧ ಹೊಂದಿದ್ದ ಮಹಿಳೆ ಮತ್ತು ಆಕೆಯ ಗೆಳೆಯನನ್ನು ಸ್ಥಳೀಯರು ರೆಡ್ ಹ್ಯಾಂಡ್ ಆಗಿ ಹಿಡಿದು, ಬೋರ್ವೆಲ್ಗೆ ಕಟ್ಟಿ ಹಾಕಿ ಥಳಿಸಿದ್ದಾರೆ. ಅಶೋಕ್ ನಗರ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು, ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ (Viral Video). ಸ್ವಾಮಿ ಮತ್ತು ಮೌನಿಕಾ ಮಾಡಬಾರದ್ದನ್ನು ಮಾಡಿ ಸಾರ್ವಜನಿಕರ ಕೈಯಲ್ಲಿ ಸಿಕ್ಕಿಬಿದ್ದು ಹೀಗೆ ಧರ್ಮದೇಟು ತಿಂದ ಜೋಡಿ (Crime News). ಫೇಸ್ಬುಕ್ ಮೂಲಕ ಇವರಿಬ್ಬರು ಪರಿಚಿತರಾಗಿದ್ದರು ಎನ್ನಲಾಗಿದೆ.
ಅಶೋಕ್ ನಗರದ ಮೌನಿಕಾ ಭುಪಾಲಪಲ್ಲಿ ಜಿಲ್ಲೆಯ ಸ್ವಾಮಿಯೊಂದಿಗೆ ಹಲವು ಸಮಯದಿಂದ ಅನೈತಿಕ ಸಂಬಂಧ ಹೊಂದಿದ್ದಳು. ಸ್ಥಳೀಯರ ಪ್ರಕಾರ ದೂರ ದೂರ ಊರಿನ ಇವರು ಫೇಸ್ಬುಕ್ ಮೂಲಕ ಪರಿಚಿತರಾಗಿದ್ದರು. ಈ ಪರಿಚಯ ಕ್ರಮೇಣ ಅನೈತಿಕ ಸಂಬಂದಕ್ಕೆ ಎಡೆ ಮಾಡಿಕೊಟ್ಟಿತ್ತು.
ವೈರಲ್ ವಿಡಿಯೊ ಇಲ್ಲಿದೆ:
యువకునితో మహిళ వివాహేతర సంబంధం.. కట్టేసి దేహ శుద్ధి చేసిన స్థానికులు
— Telugu Scribe (@TeluguScribe) May 31, 2025
పెద్దపల్లి జిల్లా సుల్తానాబాద్లో యువకునితో వివాహేతర సంబంధం పెట్టుకున్న మహిళ
మహిళను, యువకుడిని తాడుతో కట్టేసి యువకునికి దేహ శుద్ధి చేసిన స్థానికులు
సుల్తానాబాద్ అశోక్ నగర్లో నివాసముండే మౌనిక కు ఫేస్ బుక్… pic.twitter.com/EN8InU325X
ಈ ಸುದ್ದಿಯನ್ನೂ ಓದಿ: Viral Video: ರಾಜ್ಯದಲ್ಲಿ ಅನ್ಯಭಾಷಿಕರ ಅಟ್ಟಹಾಸ! ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಯುವತಿ
ಕಳೆದ 3 ದಿನಗಳಿಂ ಸ್ವಾಮಿಯು ಮೌನಿಕಾ ಮನೆಯಲ್ಲಿ ತಂಗಿದ್ದ. ಇದು ಸ್ಥಳೀಯರ ಗಮನಕ್ಕೆ ಬಂದು ಅವರ ಆಕ್ರೋಶದ ಕಟ್ಟೆ ಒಡೆದಿತ್ತು. ಹೀಗಾಗಿ ಇವರಿಬ್ಬರನ್ನು ಹೊರಗೆಳೆದ ಸ್ಥಳೀಯರು ಕಾನೂನನ್ನು ಕೈಗೆತ್ತಿಕೊಂಡು ಬೋರ್ವೆಲ್ಗೆ ಕಟ್ಟಿ ಹಾಕಿ ಥಳಿಸಿದರು. ಆ ಮೂಲಕ ಅನೈತಿಕ ಚಟುವಟಿಕೆಗೆ ತಕ್ಕ ʼಪಾಠʼ ಕಲಿಸಿದ್ದಾರೆ. ನೈತಿಕತೆಯನ್ನು ಉಲ್ಲಂಘಿಸಿದ ಸ್ವಾಮಿಯನ್ನು ಆ ಮೂಲಕ ʼಶುದ್ಧೀಕರಿಸಿದ್ದಾಗಿʼ ಸ್ಥಳೀಯರು ತಿಳಿಸಿದರು.
ಸದ್ಯ ಈ ವಿಡಿಯೊ ಇಂಟರ್ನೆಟ್ನಲ್ಲಿ ಹರಿದಾಡುತ್ತಿದ್ದು ನೆಟ್ಟಿಗರ ಗಮನ ಸೆಳೆದಿದೆ. ದಾರಿ ತಪ್ಪಿದ ಯುವ ಜನತೆಗೆ ಪಾಠ ಕಲಿಸಲು ಸ್ಥಳೀಯರು ಉತ್ತಮ ಕೆಲಸವನ್ನೇ ಮಾಡಿದ್ದಾರೆ ಎಂದು ಕೆಲವರು ಈ ಕೃತ್ಯವನ್ನು ಸಮರ್ಥಿಸಿಕೊಂಡರೆ, ಇನ್ನು ಹಲವರು ಇಂತಹ ಘಟನೆ ಸಮಾಜದ ಸ್ವಾಸ್ಥ್ಯ ಕೆಡಿಸುತ್ತದೆ ಎಂದು ಕಿಡಿ ಕಾರಿದ್ದಾರೆ. ಕಾನೂನು ಕೈಗೆತ್ತಿಕೊಳ್ಳುವ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ.
ಸಾರ್ವಜನಿಕವಾಗಿ ಈ ಜೋಡಿಗೆ ಥಳಿಸಿದ ಬಳಿಕ ಅವರನ್ನು ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಅಧಿಕಾರಿಗಳು ಬಂಧನವನ್ನು ದೃಢಪಡಿಸಿದ್ದಾರೆ ಮತ್ತು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
ಮಹಿಳೆಯನ್ನ ಮರಕ್ಕೆ ಕಟ್ಟಿ ಮನಬಂದಂತೆ ಥಳಿಸಿದ ಸಾರ್ವಜನಿಕರು
ರಾಯಚೂರು: ವ್ಯಕ್ತಿಯೋರ್ವನ ಸಾವಿಗೆ ಪರಿಚಯಸ್ಥ ಮಹಿಳೆಯೇ ಕಾರಣವೆಂದು ಆರೋಪಿಸಿ ಆಕೆಯನ್ನು ಮರಕ್ಕೆ ಕಟ್ಟಿಹಾಕಿ ಹಲ್ಲೆ ಮಾಡಿರುವ ಘಟನೆ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿಯಲ್ಲಿ ಇತ್ತೀಚೆಗೆ ನಡೆದಿತ್ತು. ಸ್ಥಳಕ್ಕೆ ಧಾವಿಸಿದ ಜಾಲಹಳ್ಳಿ ಠಾಣೆ ಪೊಲೀಸರು ಮಹಿಳೆಯನ್ನು ರಕ್ಷಿಸಿ, ಹಲ್ಲೆ ಆರೋಪದಡಿ ನಾಲ್ವರ ವಿರುದ್ಧ ದೂರು ದಾಖಲಿಸಿಕೊಂಡಿದ್ದರು.
ಕೆಲವು ದಿನಗಳ ಹಿಂದೆ ಹಿಂದೆ ಮೂರ್ಛೆ ರೋಗದಿಂದ ದುರುಗಪ್ಪ ಎಂಬಾತ ಮೃತಪಟ್ಟಿದ್ದ. ಆತನಿಗೆ ಪರಿಚಯವಿದ್ದ ಈ ಮಹಿಳೆಯ ಜತೆಗೆ ಆತ ಎಲ್ಲಿಗೋ ತೆರಳಿದ್ದ. ಆ ವೇಳೆ ದುರುಗಪ್ಪ ಮೃತಪಟ್ಟಿರುವ ಶಂಕೆಯಿಂದ ಮಹಿಳೆಯನ್ನು ಸಾರ್ವಜನಿಕವಾಗಿ ಕಟ್ಟಿಹಾಕಿ ಥಳಿಸಲಾಗಿತ್ತು. ಈ ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಅದೃಷ್ಟವಶಾತ್ ಪೊಲೀಸರು ಸಮಯಕ್ಕೆ ಸರಿಯಾಗಿ ಆಗಮಿಸಿ ಮಹಿಳೆಯನ್ನು ರಕ್ಷಿಸಿದ್ದರು.