ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Viral Video: ಕಂತೆ ಕಂತೆ ಹಣವನ್ನು ಕಿಟಕಿಯಿಂದ ಎಸೆದ ಎಂಜಿನಿಯರ್‌; ವಿಡಿಯೊ ಫುಲ್‌ ವೈರಲ್‌; ಅಷ್ಟಕ್ಕೂ ಆಗಿದ್ದೇನು?

ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಪ್ರಕರಣದ ಕುರಿತು ನಿಗಾ ಇರಿಸಿರುವ ಜಾಗೃತ ಇಲಾಖೆ ಅಧಿಕಾರಿಗಳು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ಬೈಕುಂಠ ನಾಥ್ ಸಾರಂಗಿಯ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ಅವರಿಂದ 2 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಜಾಗೃತ ಇಲಾಖೆ ಅಧಿಕಾರಿಗಳು ನಿವಾಸದ ಮೇಲೆ ದಾಳಿ ನಡೆಸಲು ಬಂದಾಗ ಸಾರಂಗಿಯು ತನ್ನ ಅಪಾರ್ಟ್‌ಮೆಂಟ್‌ನ ಕಿಟಕಿಯ ಮೂಲಕ 500 ರೂ. ಗಳ ಕಂತೆಗಳನ್ನು ಹೊರಗೆ ಎಸೆದಿದ್ದಾನೆ.

500 ರೂ. ನೋಟಿನ ಕಂತೆಗಳನ್ನು ಎಸೆದ ಭೂಪ!

ಭುವನೇಶ್ವರ: ಜಾಗೃತ ಇಲಾಖೆ ಅಧಿಕಾರಿಗಳು ದಾಳಿ (Vigilance Department Raid) ನಡೆಸಿದ್ದರಿಂದ ಹೆದರಿದ ರಾಜ್ಯ ಸರ್ಕಾರಿ ಉದ್ಯೋಗಿಯೊಬ್ಬ (government employee) ಹಣದ ಕಂತೆಗಳನ್ನು ತನ್ನ ಅಪಾರ್ಟ್‌ಮೆಂಟ್‌ನ ಕಿಟಕಿಯ ಮೂಲಕ ಹೊರಗೆ ಎಸೆದಿರುವ ಘಟನೆ ಒಡಿಶಾದ (Odisha) ಭುವನೇಶ್ವರದಲ್ಲಿ (Bhubaneswar) ನಡೆದಿದೆ. ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯ (Rural Development Department ) ಮುಖ್ಯ ಎಂಜಿನಿಯರ್ ಬೈಕುಂಠ ನಾಥ್ ಸಾರಂಗಿಯ ಮನೆ ಮೇಲೆ ಜಾಗೃತ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ವೇಳೆ ಆತ ತನ್ನ ಹಣವನ್ನು ರಕ್ಷಿಸಿಕೊಳ್ಳಲು ಅಪಾರ್ಟ್‌ಮೆಂಟ್‌ನ ಕಿಟಕಿಯ ಮೂಲಕ 500 ರೂ. ಗಳ ಕಂತೆಗಳನ್ನು ಎಸೆದಿದ್ದಾನೆ ಎನ್ನಲಾಗಿದೆ.

ಭ್ರಷ್ಟಾಚಾರ ಮತ್ತು ಅಕ್ರಮ ಆಸ್ತಿ ಪ್ರಕರಣದ ಕುರಿತು ನಿಗಾ ಇರಿಸಿರುವ ಜಾಗೃತ ಇಲಾಖೆ ಅಧಿಕಾರಿಗಳು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆಯ ಮುಖ್ಯ ಎಂಜಿನಿಯರ್ ಬೈಕುಂಠ ನಾಥ್ ಸಾರಂಗಿಯ ನಿವಾಸಗಳ ಮೇಲೆ ದಾಳಿ ನಡೆಸಿದ್ದಾರೆ. ಈಗಾಗಲೇ ಅವರಿಂದ 2 ಕೋಟಿ ರೂ. ಗಳಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ.

ಜಾಗೃತ ಇಲಾಖೆ ಅಧಿಕಾರಿಗಳು ನಿವಾಸದ ಮೇಲೆ ದಾಳಿ ನಡೆಸಲು ಬಂದಾಗ ಸಾರಂಗಿಯು ತನ್ನ ಅಪಾರ್ಟ್‌ಮೆಂಟ್‌ನ ಕಿಟಕಿಯ ಮೂಲಕ 500 ರೂ. ಗಳ ಕಂತೆಗಳನ್ನು ಹೊರಗೆ ಎಸೆದಿದ್ದಾನೆ. ಸಾರಂಗಿಗೆ ಸೇರಿರುವ ಒಡಿಶಾದ ಅಂಗುಲ್, ಭುವನೇಶ್ವರ ಮತ್ತು ಪಿಪಿಲಿ (ಪುರಿ) ನಲ್ಲಿರುವ ಒಟ್ಟು ಏಳು ಸ್ಥಳಗಳಲ್ಲಿ ಏಕಕಾಲದಲ್ಲಿ ದಾಳಿ ನಡೆಸಿ ಜಾಗೃತ ಇಲಾಖೆ ಅಧಿಕಾರಿಗಳು ಸುಮಾರು 2.1 ಕೋಟಿ ರೂ. ಗಳನ್ನು ವಶಪಡಿಸಿಕೊಂಡಿದ್ದಾರೆ.

ನೋಟುಗಳ ಕಂತೆ ಎಸೆದಿರುವ ವಿಡಿಯೊ ಇಲ್ಲಿದೆ



ಇದರಲ್ಲಿ ಅಂಗುಲ್‌ನ ಕರದಗಾಡಿಯಾದಲ್ಲಿ ಎರಡು ಅಂತಸ್ತಿನ ವಸತಿ ಮನೆ, ಭುವನೇಶ್ವರದ ದುಂದುಮಾದಲ್ಲಿ ಒಂದು ಫ್ಲಾಟ್, ಪುರಿಯಲ್ಲಿ ಮತ್ತೊಂದು ಫ್ಲಾಟ್, ಅಂಗುಲ್‌ನ ಶಿಕ್ಷ್ಯಕಪಾದದಲ್ಲಿರುವ ಸಾರಂಗಿ ಅವರ ಸಂಬಂಧಿಯ ಮನೆ, ಅಂಗುಲ್‌ನಲ್ಲಿ ತಂದೆಯ ಮನೆ, ಅಂಗುಲ್‌ನಲ್ಲಿ ಎರಡು ಅಂತಸ್ತಿನ ತಂದೆಯ ಕಟ್ಟಡ, ಕಚೇರಿ ಕೊಠಡಿಗಳು ಸೇರಿವೆ. ತನಿಖೆಗೆ ಅಧಿಕಾರಿಗಳು ಆಗಮಿಸುತ್ತಿದ್ದಂತೆ ಸಾರಂಗಿ ತಮ್ಮ ಫ್ಲಾಟ್‌ನ ಕಿಟಕಿಯಿಂದ ಹೊರಗೆ ನಗದು ಬಂಡಲ್‌ಗಳನ್ನು ಎಸೆದು ವಿಲೇವಾರಿ ಮಾಡಲು ಪ್ರಯತ್ನಿಸಿದರು. ಆದರೆ ಬಳಿಕ ಸಾಕ್ಷಿಗಳ ಸಮ್ಮುಖದಲ್ಲಿ ಇದನ್ನು ಅಧಿಕಾರಿಗಳು ವಶಕ್ಕೆ ಪಡೆದರು.

ಅಂಗುಲ್‌ನಲ್ಲಿರುವ ಸಾರಂಗಿಯ ನಿವಾಸದಲ್ಲಿ 1.1 ಕೋಟಿ ರೂ. ಮತ್ತು ಭುವನೇಶ್ವರ ಫ್ಲಾಟ್‌ನಲ್ಲಿ ಮತ್ತೊಂದು ಕೋಟಿ ರೂ. ಪತ್ತೆಯಾಗಿದೆ. ಸಾರಂಗಿಯು ತಮ್ಮ ಆದಾಯ ಮೂಲಗಳಿಗಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಲಾಗಿದೆ.

ಇದನ್ನೂ ಓದಿ: KTPP Bill: ಮುಸ್ಲಿಂ ಮೀಸಲು ವಿಧೇಯಕ ರಾಷ್ಟ್ರಪತಿಗೆ ಕಳಿಸಲು ಕರ್ನಾಟಕ ಸರ್ಕಾರ ಚಿಂತನೆ

ಎಂಟು ಉಪ ಪೊಲೀಸ್ ವರಿಷ್ಠಾಧಿಕಾರಿಗಳು, 12 ಇನ್ಸ್‌ಪೆಕ್ಟರ್‌ಗಳು ಮತ್ತು ಆರು ಸಹಾಯಕ ಸಬ್-ಇನ್‌ಸ್ಪೆಕ್ಟರ್ ಗಳು ಸೇರಿದಂತೆ 26 ಪೊಲೀಸ್ ಅಧಿಕಾರಿಗಳ ತಂಡ ಮತ್ತು ಇತರ ಸಹಾಯಕ ಸಿಬ್ಬಂದಿ ಸೇರಿ ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಶೋಧ ಕಾರ್ಯಾಚರಣೆಯ ವಿಡಿಯೊಗಳು ವೈರಲ್ ಆಗಿದ್ದು, ಇದರಲ್ಲಿ ಅಧಿಕಾರಿಗಳು ನಗದು ರಾಶಿಗಳನ್ನು ಎಣಿಸುತ್ತಿರುವುದನ್ನು ಕಾಣಬಹುದು.