Viral Video: ಜಲಪಾತದಲ್ಲಿ ಜಲಕ್ರೀಡೆ ಆಡುತ್ತಿದ್ದವರು ಜೀವ ಉಳಿಸಿಕೊಳ್ಳಲು ಎದ್ದೋ ಬಿದ್ದು ಓಡಿದ್ಯಾಕೆ? ಬೆಚ್ಚಿಬೀಳಿಸುವ ವಿಡಿಯೊ ವೈರಲ್
ಉತ್ತರಾಖಂಡದ ಮಸ್ಸೂರಿ ಬಳಿಯ ಜನಪ್ರಿಯ ಕೆಂಪ್ಟಿ ಜಲಪಾತಕ್ಕೆ ಭೇಟಿ ನೀಡಿದ ಪ್ರವಾಸಿಗರು ನೀರಾಟವಾಡುತ್ತಿರುವಾಗ ಹಾವೊಂದನ್ನು ನೋಡಿ ಜೀವ ಉಳಿಸಿಕೊಳ್ಳಲು ಎದ್ದೊಬಿದ್ದೋ ಓಡಿದ್ದಾರೆ. ಈ ಘಟನೆಯ ವಿಡಿಯೊ ಈಗ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.


ಡೆಹ್ರಡೂನ್: ಇತ್ತೀಚೆಗೆ ಕೊಡೈಕೆನಾಲ್ನಲ್ಲಿ ಕೋತಿಯೊಂದು ಪ್ರವಾಸಿರ ಕೈಯಿಂದ 500 ರೂ. ಇರುವ ನೋಟು ಬಂಡಲ್ ಲಪಟಾಯಿಸಿಕೊಂಡು ಮರ ಏರಿ ಚೆಲ್ಲಾಪಿಲ್ಲಿ ಮಾಡಿ ಎಸೆದಿತ್ತು. ದುಡ್ಡು ಕಳೆದುಕೊಂಡ ಆ ಪ್ರವಾಸಿಗರು ಕೋತಿಯ ಚೇಷ್ಟೆಯಿಂದ ಶಾಕ್ ಆಗಿದ್ದರು. ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದೀಗ ರಜೆಯ ಮಜಾವನ್ನು ಕಳೆಯಲು ಜಲಪಾತಕ್ಕೆ ಭೇಟಿ ನೀಡಿದ ಪ್ರವಾಸಿಗರಿಗೆ ಹಾವೊಂದು ಶಾಕ್ ನೀಡಿದ ಘಟನೆ ನಡೆದಿದೆ. ಉತ್ತರಾಖಂಡದ ಮಸ್ಸೂರಿ ಬಳಿಯ ಕೆಂಪ್ಟಿ ಜಲಪಾತಕ್ಕೆ ಭೇಟಿ ನೀಡಿದ ಪ್ರವಾಸಿಗರು ಖುಷಿಯಿಂದ ನೀರಿನಲ್ಲಿ ಆಟವಾಡುತ್ತಿರುವಾಗ ಹಾವೊಂದುವ(Snake) ಕಾಣಿಸಿಕೊಂಡಿತ್ತು. ಇದರಿಂದ ಅವರು ಜೀವ ಉಳಿಸಿಕೊಳ್ಳಲು ದಿಕ್ಕೆಟ್ಟು ಓಡಿದ್ದಾರೆ. ಈ ಘಟನೆಯ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರು ಇದನ್ನು ನೋಡಿ ಶಾಕ್ ಆಗಿದ್ದಾರೆ.
ವೈರಲ್ ಆದ ವಿಡಿಯೋದಲ್ಲಿ ಒಂದಷ್ಟು ಮಂದಿ ಮಸ್ಸೂರಿ ಬಳಿಯ ಕೆಂಪ್ಟಿ ಜಲಪಾತದಲ್ಲಿ ನೀರಿನಲ್ಲಿ ಆಟವಾಡುತ್ತಿರುವ ದೃಶ್ಯ ಸೆರೆಯಾಗಿದೆ. ಆಗ ಅಲ್ಲಿ ಅನೀರಿಕ್ಷಿತವಾಗಿ ಹಾವೊಂದು ಬಂದಿದೆ. ಹಾವನ್ನು ನೋಡಿ ಅಲ್ಲಿದ್ದವರು ಭಯಬಿದ್ದು ಓಡಿದ್ದಾರೆ.
ವಿಡಿಯೊ ನೋಡಿ...
ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿ ಸಾಕಷ್ಟು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರೊಬ್ಬರು “ಅದು ಸ್ನಾನ ಮಾಡಲು ಬಂದಿರಬಹುದು. ಭಯಪಡಬೇಡಿ.” ಎಂದರೆ ಮತ್ತೊಬ್ಬರು, ಅದನ್ನು ಚಿಕ್ಕ ಮಗುವಿಗೆ ಹೋಲಿಸಿದ್ದಾರೆ. ಇನ್ನೊಬ್ಬರು, “ಹಾವು ಹೆಚ್ಚು ಹೆದರಿತ್ತೋ ಅಥವಾ ಜನರೋ ಎಂದು ಹೇಳಲು ಸಾಧ್ಯವಿಲ್ಲ” ಎಂದು ತಮಾಷೆ ಮಾಡಿದ್ದಾರೆ. ʼʼಪ್ರವಾಸಿಗರಿಗೆ ಎಚ್ಚರಿಕೆ ನೀಡಲು ಹಾವು ಬಂದಿರಬಹುದು” ಎಂದು ನೆಟ್ಟಿಗರೊಬ್ಬರು ಬರೆದಿದ್ದಾರೆ. ಈ ವಿಡಿಯೊವನ್ನು ಸೋಶಿಯಲ್ ಮಿಡಿಯಾದಲ್ಲಿ ಹಂಚಿಕೊಂಡಾಗಿನಿಂದ 11 ಲಕ್ಷ ವ್ಯೂವ್ಸ್ ಗಳಿಸಿದೆ.
ಕೆಂಪ್ಟಿ ಜಲಪಾತವು ಮಸ್ಸೂರಿ ಮತ್ತು ಸುತ್ತಮುತ್ತಲಿನ ಅತ್ಯಂತ ಜನಪ್ರಿಯ ಆಕರ್ಷಕ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಇಲ್ಲಿಗೆ ಪ್ರಕೃತಿ ಪ್ರಿಯರು ಹೆಚ್ಚು ಭೇಟಿ ನಿಡುತ್ತಾರೆ.
ಈ ಸುದ್ದಿಯನ್ನೂ ಓದಿ:Viral Video: ಪುರಿ ಜಗನ್ನಾಥ ದೇವಾಲಯದಲ್ಲಿ ನಡೆದ ಈ ಘಟನೆಗೂ ಏರ್ ಇಂಡಿಯಾ ವಿಮಾನ ಪತನಕ್ಕೂ ಏನು ಸಂಬಂಧ? ನೆಟ್ಟಿಗರ ವಾದವೇನು?
ಹಾವಿಗೆ ಸಂಬಂಧಪಟ್ಟ ಇನ್ನೊಂದು ಘಟನೆಯಲ್ಲಿ, ಉತ್ತರ ಪ್ರದೇಶದ ಅಮ್ರೋಹಾದಲ್ಲಿ ಕುಡಿದ ಮತ್ತಿನಲ್ಲಿದ್ದ ಜಿತೇಂದ್ರ ಕುಮಾರ್ ಎಂಬ ವ್ಯಕ್ತಿ ಹಾವನ್ನು ಹಿಡಿದು ಕುತ್ತಿಗೆಗೆ ಸುತ್ತಕೊಂಡು ಅದಕ್ಕೆ ಮುತ್ತಿಡಲು ಹೋಗಿ ಅದರಿಂದ ಕಚ್ಚಿಸಿಕೊಂಡಿದ್ದಾನೆ. ಈಗ ಆತ ಮೊರಾದಾಬಾದ್ನ ಖಾಸಗಿ ಆಸ್ಪತ್ರೆಯ ಐಸಿಯುವಿನಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಆತ ಹಾವಿಗೆ ಮುತ್ತಿಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.