Hari Paraak Column: ಕಮಲ್ ಹಸನ್ ಹಂಗೆಲ್ಲ ಮಾತಾಡಿದ್ರೆ ʼಶಿವʼ ಮೆಚ್ತಾನಾ ?
ಸಿನಿಮಾ ನೋಡೋ ಸಾಮಾನ್ಯ ಪ್ರೇಕ್ಷಕ ಯಾವತ್ತೂ ಸಿನಿಮಾಗೆ ಎಷ್ಟು ದುಡ್ಡು ಹಾಕಿದ್ದೀರಾ, ಏನೇನು ಸರ್ಕಸ್ ಮಾಡಿದ್ದೀರಾ ಅಂತ ಕೇಳಲ್ಲ, ಅವನಿಗೆ ಸಿನಿಮಾ ಇಷ್ಟ ಆದ್ರೆ ಅಷ್ಟೇ ಸಾಕು. ಅಂದಿನ ಬಂಗಾ ರದ ಮನುಷ್ಯ, ನಾಗರಹಾವು ಚಿತ್ರಗಳಿಂದ ಹಿಡಿದು ನಂತರದ ನಂಜುಂಡಿ ಕಲ್ಯಾಣ, ರಾಮಾಚಾರಿ, ಯಜಮಾನ, ಜನುಮದ ಜೋಡಿ, ಮುಂಗಾರು ಮಳೆಯಂಥ ಸಿನಿಮಾ ಗಳನ್ನು, ‘ಅಯ್ಯೋ, ಕಡಿಮೆ ಬಜೆಟ್ನಲ್ಲಿ ಮಾಡಿದ್ದೀರಾ’ ಅಂತ ಅವನು ಯಾವತ್ತೂ ತಿರಸ್ಕಾರ ಮಾಡಿಲ್ಲ.


ತುಂಟರಗಾಳಿ
ಸಿನಿಗನ್ನಡ
ಚಿತ್ರರಂಗದಲ್ಲಿ ಈಗ ಮಾತೆತ್ತಿದರೆ ಪ್ಯಾನ್ ಇಂಡಿಯಾ ಸಿನಿಮಾ, ಹೈ ಬಜೆಟ್ ಚಿತ್ರ, ಟೆಕ್ನಿಕಲಿ ಬ್ರಿಲಿಯಂಟ್, ಹೊಸ ಅಲೆಯ ಚಿತ್ರ ಅಂತೆ ಮಾತುಗಳು ಶುರುವಾಗಿವೆ. ಕೆಲವರಂತೂ ಮಿತಿಮೀರಿದ ಉತ್ಸಾಹದಲ್ಲಿ ಮಾಮೂಲಿ ಲವ್ ಸ್ಟೋರಿ, ಫ್ಯಾಮಿಲಿ ಸ್ಟೋರಿಗಳು ಇರೋ ಸಿನಿಮಾಗಳು ಓಡೋದೇ ಇಲ್ಲ ಅಂತ ಷರಾ ಬರೆದುಬಿಟ್ಟಿದ್ದಾರೆ. ನಿಮ್ಮಲ್ಲಿ ಅದೇ ಕಾಲೇಜ್ ಲವ್ ಸ್ಟೋರಿ, ತಾಯಿ ಸೆಂಟಿ ಮೆಂಟ್ ಸಿನಿಮಾಗಳು ಇದ್ದರೆ ಅವನ್ನೆಲ್ಲ ಮೂಲೆಗೆ ಎತ್ತಿಡಿ ಅಂತ ಆದೇಶ ಹೊರಡಿಸಿ ಬಿಟ್ಟಿದ್ದಾರೆ.
ಇವೆಲ್ಲ, ಇತ್ತೀಚೆಗೆ ದೊಡ್ಡ ಬಜೆಟ್ನ, ಮಿತಿ ಮೀರಿದ ಅಬ್ಬರ ಇರೋ ಸಿನಿಮಾಗಳು ಬಂದಿದ್ದರ ಸೈಡ್ ಎಫೆಕ್ಟ್ ಎನ್ನಬಹುದು. ಸಾಮಾನ್ಯ ಪ್ರೇಕ್ಷಕರು ಇಂಥ ಚಿತ್ರಗಳ ಅಬ್ಬರ ನೋಡಿ ಹೀಗೆ ಮರುಳಾಗೋದು ಆಶ್ಚರ್ಯವೇನಲ್ಲ. ಆದರೆ ಅದು ಸತ್ಯ ಅಲ್ಲ. ಸಿನಿಮಾರಂಗದಲ್ಲಿ ಏನೇ ಪ್ರಯೋ ಗಗಳಾಗಲೀ, ಎಷ್ಟೇ ಹೈ ಬಜೆಟ್ ಸಿನಿಮಾಗಳು, ಏನೇ ಸೋ ಕಾಲ್ಡ್ ಕಂಟೆಂಟ್ ಬೇಸ್ಡ್ ಸಿನಿಮಾಗಳು ಬಂದರೂ ಮಾನವೀಯತೆ ಟಚ್ ಇರೋ ಹ್ಯೂಮ್ಯಾನಿಟಿ ಓರಿಯೆಂಟೆಡ್ ಸಿನಿಮಾಗಳಿಗೆ ಎಂದಿಗೂ ಸಾವಿಲ್ಲ.
ಸಿನಿಮಾ ನೋಡೋ ಸಾಮಾನ್ಯ ಪ್ರೇಕ್ಷಕ ಯಾವತ್ತೂ ಸಿನಿಮಾಗೆ ಎಷ್ಟು ದುಡ್ಡು ಹಾಕಿದ್ದೀರಾ, ಏನೇನು ಸರ್ಕಸ್ ಮಾಡಿದ್ದೀರಾ ಅಂತ ಕೇಳಲ್ಲ, ಅವನಿಗೆ ಸಿನಿಮಾ ಇಷ್ಟ ಆದ್ರೆ ಅಷ್ಟೇ ಸಾಕು. ಅಂದಿನ ಬಂಗಾರದ ಮನುಷ್ಯ, ನಾಗರಹಾವು ಚಿತ್ರಗಳಿಂದ ಹಿಡಿದು ನಂತರದ ನಂಜುಂಡಿ ಕಲ್ಯಾಣ, ರಾಮಾಚಾರಿ, ಯಜಮಾನ, ಜನುಮದ ಜೋಡಿ, ಮುಂಗಾರು ಮಳೆಯಂಥ ಸಿನಿಮಾ ಗಳನ್ನು, ‘ಅಯ್ಯೋ, ಕಡಿಮೆ ಬಜೆಟ್ನಲ್ಲಿ ಮಾಡಿದ್ದೀರಾ’ ಅಂತ ಅವನು ಯಾವತ್ತೂ ತಿರಸ್ಕಾರ ಮಾಡಿಲ್ಲ.
ಇದನ್ನೂ ಓದಿ: Hari Paraak Column: ಸಾಲಗಾರ ಮಲ್ಯಗೆ ಸಿಗುತ್ತಿರುವ ಸವಲತ್ತು - ಮಲ್ಯವರ್ಧಿತ ಸೇವೆ
ಇನ್ನು ಮುಂದೆಯೂ ಅದು ಹಾಗೇ ಇರುತ್ತದೆ. ಹಾಗಾಗಿ, ‘ಅಯ್ಯೋ, ದೊಡ್ಡ ಬಜೆಟ್ ಇದ್ದಾರ ಸಿನಿಮಾಗಳು ಮಾತ್ರ ಗೆಲ್ತಾವೆ’ ಅಂತ ಯಾರೂ ಗಾಬರಿಗೊಳ್ಳುವ ಅಗತ್ಯವಿಲ್ಲ. ಆದರೆ ಈಗಿನ ಪ್ರೇಕ್ಷಕರಿಗೆ ಗಂಭೀರವಾದ ಜತೆಗೆ ಪ್ರಾಮಾಣಿಕವಾದ ಕಂಟೆಂಟ್ ಕೊಡಬೇಕಿದೆ. ಕೆಲವು ನಿರ್ದೇಶ ಕರು ಅದನ್ನು ಮಾಡಲು ಪ್ರಯತ್ನ ಪಡ್ತಾ ಇದ್ದರೂ ಮಿತಿಮೀರಿದ ಅಶ್ಲೀಲತೆ ಬಳಸುವ ಮೂಲಕ ತಮ್ಮನ್ನ ತಾವೇ ಹಾಳು ಮಾಡಿಕೊಳ್ಳುತ್ತಿದ್ದಾರೆ. ಅದನ್ನು ಬಿಟ್ಟು, ಪ್ರಾಮಾಣಿಕವಾಗಿ ಒಳ್ಳೆಯ ಸಿನಿಮಾ ಮಾಡುವ ಕಡೆಗೆ ಗಮನ ಕೊಟ್ಟರೆ ಇವತ್ತಿಗೂ ಸಣ್ಣ ಬಜೆಟ್ ಚಿತ್ರಗಳೂ ಕೋಟಿ ಕೋಟಿ ಬಾಚುವ ಸಾಧ್ಯತೆಗಳಂತೂ ಖಂಡಿತಾ ಇವೆ.
ಲೂಸ್ ಟಾಕ್- ರಿಲ್ಯಾಕ್ಸ್ಡ್ ಕನ್ನಡಿಗ
ಕಮಲ್ ಹಾಸನ್ ತಮಿಳಿನಿಂದ ಕನ್ನಡ ಹುಟ್ಟಿದ್ದು ಅಂದುಬಿಟ್ರ?
- ಅಯ್ಯೋ, ಭಾಷೆಯ ಅಮಲಿನಲ್ಲಿ ಹೇಳಿದ್ದಾರೆ. ‘ಅಮಲ್’ ಹಾಸನ್ ಅಂದ್ಕೊಂಡು ಸುಮ್ನಾದ್ರೆ ಆಯ್ತು
ಆದ್ರೂ ಅಷ್ಟು ದೊಡ್ಡ ನಟ, ಸಣ್ಣ ಮಕ್ಕಳ ಥರ ಹೇಳಿಕೆ ಕೊಡಬಾರದಿತ್ತು ಅಲ್ವಾ?
- ಹಾಗಿದ್ರೆ ಅಮುಲ್ ಬೇಬಿ ಥರ, ಅಮುಲ್ ಹಾಸನ್ ಅಂದ್ಕೊಂಡು ಸುಮ್ನಾದ್ರೆ ಆಯ್ತು.
ಆಗ ಸೋನು ನಿಗಮ್ ಮಾತಾಡಿದ್ರು, ಈಗ ಕಮಲ್ ಹಾಸನ್. ಇದರ ಬಗ್ಗೆ ಏನಂತೀರ?
- ಸೋನು ನಿಗಮ್ ಮಾತಾಡಿದ್ದು ಸರಿ ಇದ್ರೂ ಅವರ ಭಾಷೆ ಸರಿ ಇರಲಿಲ್ಲ. ಕಮಲ್ ಹಾಸನ್ ಅವರು ಭಾಷೆ ಬಗ್ಗೆನೇ ಮಾತಾಡಿದ್ದು ಸರಿ ಇರಲಿಲ್ಲ
ನೀವ್ ಹಿಂಗೇ ಸುಮ್ನೆ ಇದ್ರೆ ಎಲ್ಲರೂ ಕನ್ನಡದ ಬಗ್ಗೆ ಮಾತಾಡ್ತಾರೆ?
- ಕನ್ನಡ ಮಾತಾಡೋರೇ ಕಮ್ಮಿ ಆಗ್ತಾ ಇರುವಾಗ ಕನ್ನಡದ ಬಗ್ಗೆ ಮಾತಾಡ್ತಾ ಇರೋರು ಜಾಸ್ತಿ ಆಗ್ತಿದ್ದಾರೆ ಅಂದ್ಕೊಂಡ್ ಸುಮ್ನಾದ್ರೆ ಆಯ್ತು
ಆದ್ರೂ ಕಮಲ್ ಹಾಸನ್ ಹಂಗೆ ಮಾತಾಡಿದ್ರೆ ‘ಶಿವ’ ಮೆಚ್ತಾನಾ?
- ಶಿವಣ್ಣ ತಮ್ಮ ನಟನೆಯ ‘ಶಿವ ಮೆಚ್ಚಿದ ಕಣ್ಣಪ್ಪ’ ಸಿನಿಮಾ ಥರದ್ದೇ ‘ಕಣ್ಣಪ್ಪ’ ಅನ್ನೋ
ಇನ್ನೊಂದ್ ಹೊಸ ಸಿನಿಮಾದ ಪ್ರಮೋಷನ್ ಮಾಡ್ತಾ ಇದ್ದಾರೆ. ಹಂಗಾಗಿ ಇದರ ಬಗ್ಗೆ ತಲೆ ಕೆಡಿಸಿಕೊಂಡಿಲ್ಲ.
(ಕಾಲ್ಪನಿಕ ಸಂದರ್ಶನ)
ನೆಟ್ ಪಿಕ್ಸ್
ಖೇಮು ಹುಟ್ಟಾ ಕುರುಡ, ಜತೆಗೆ ಹುಟ್ಟಾ ಕುಡುಕ. ಊರಲ್ಲಿರೋ ಎಲ್ಲಾ ಬಾರುಗಳು, ಪಬ್ಬುಗಳು ಅವನಿಗೆ ಚೆನ್ನಾಗಿ ಗೊತ್ತಿದ್ದವು. ಕುರುಡನಾದ್ರೂ ಹೋದ ಕಡೆಯ ಹುಡುಗಿಯರನ್ನ ಪಟಾಯಿಸಿ ‘ಪ್ಲೇಬಾಯ್’ ಎನಿಸಿಕೊಂಡಿದ್ದ. ಹೀಗಿದ್ದ ಖೇಮು ಒಂದಿನ ಒಂದು ಹೊಸ ಪಬ್ಬಿಗೆ ಹೋದ. ಖೇಮುಗೆ ಒಂದು ಸ್ಪೆಷಲ್ ಕಲೆ ಇತ್ತು. ಏನಂದ್ರೆ ಅಲ್ಲಿ ಕುಡಿಯುವಾಗ ತಿನ್ನೋಕೆ ಅಂತ ಫುಡ್ ತರಿಸುವಾಗ ಅವನು ಆ ಡಿಷ್ನಲ್ಲಿ ಅದ್ದಿ ತೆಗೆದ ಸ್ಪೂನ್ ಅನ್ನು ಮೂಸಿ ನೋಡಿ ಅದು ಯಾವ ಡಿಷ್ ಎಂದು ಕಂಡುಹಿಡಿದು ಆರ್ಡರ್ ಮಾಡುತ್ತಿದ್ದ.
ಅಂದು ಕೂಡಾ ಒಂದು ಹೊಸ ಪಬ್ಬಿಗೆ ಹೋಗಿದ್ದರಿಂದ ವೈಟರ್ನ ಕರೆದು, ಡ್ರಿಂಕ್ಸ್ ಹೇಳಿದ. ಸೈಡ್ ಡಿಶ್ ಏನು ಕೊಡ್ಲಿ ಅಂತ ಅವನು ಕೇಳಿದಾಗ ಖೇಮು, “ನೀವು ತಯಾರಿಸಿದ ಡಿಶ್ನಲ್ಲಿ ಇಟ್ಟಿರೋ ಸ್ಪೂನ್ ತಗೊಂಡ್ ಬಾ. ಸ್ಮೆಲ್ ನೋಡಿ ಹೇಳ್ತೀನಿ" ಅಂದ. ವೈಟರ್ ಗೆ ಆಶ್ಚರ್ಯ ಆದ್ರೂ, ಸರಿ ಅಂತ ಒಳಗೆ ಹೋಗಿ ಒಂದು ಸ್ಪೂನ್ ತಗೊಂಡ್ ಬಂದು ಕೊಟ್ಟ.
ಖೇಮು ಅದನ್ನು ಮೂಸಿ ನೋಡಿ, “ಸರಿ, ಈ ಚೈನೀಸ್ ಶೆಜ್ವಾನ್ ಫುಡ್ ಚಿಕನ್ ಚೆನ್ನಾಗಿರುತ್ತೆ, ಒಂದ್ ಪ್ಲೇಟ್ ತಗೊಂಡ್ ಬಾ" ಅಂದ. ವೈಟರ್ಗೆ ಆಶ್ಚರ್ಯ ಆಯ್ತು. ಸರಿ ಒಂದು ಪ್ಲೇಟ್ ಅದೇ ಚಿಕನ್ ತಂದುಕೊಟ್ಟ. ಖೇಮು ಮುಂದಿನ ಬಾರಿ ಇನ್ನೊಂದು ಡಿಷ್ ಆರ್ಡರ್ ಮಾಡುವಾಗ ಮತ್ತೆ ಸ್ಪೂನ್ ತಗೊಂಡ್ ಬಾ ಅಂದ. ಈ ಬಾರಿ ಅವನನ್ನು ಆಟ ಆಡಿಸಬೇಕು ಅಂತ ಡಿಸೈಡ್ ಮಾಡಿದ ವೈಟರ್, ಅಡುಗೆ ಮನೆಯಲ್ಲಿ ಕೆಲಸ ಮಾಡುತ್ತಿದ್ದ ತನ್ನ ಹೆಂಡತಿಯನ್ನು ಕರೆದು, “ಈ ಸ್ಪೂನ್ ಅನ್ನು ನಿನ್ನ ಬಾಯಲ್ಲಿ ಒಂದು ಸಲ ಚೀಪಿ, ಆಮೇಲೆ ಅದನ್ನು ನಿನ್ನ ಲಿಪ್ಸ್ಟಿಕ್ಗೆ ಒರೆಸಿಕೊಡು" ಅಂದ. ಹೆಂಡ್ತಿ ಯಾಕೆ ಅಂದ್ಳು. ಸುಮ್ನೆ ಹೇಳಿದಷ್ಟು ಮಾಡು ಅಂತ ಮಾಡಿಸಿ ಆ ಸ್ಪೂನ್ ಅನ್ನು ತಗೊಂಡ್ ಬಂದು ಖೇಮುಗೆ ಕೊಟ್ಟ. ಖೇಮು ಅದನ್ನು ಮೂಸಿ ನೋಡಿ ಹೇಳಿದ “ಓ, ಲಿಂಡಾ ಈವಾಗ ನಿಮ್ ಹೋಟ್ಲಲ್ಲಿ ಕೆಲ್ಸ ಮಾಡ್ತಾ ಇದ್ದಳಾ?’
ಲೈನ್ ಮ್ಯಾನ್
ಆರ್ಸಿಬಿ ವಿರುದ್ಧ ಸೆಂಚುರಿ ಹೊಡೆದು ಪಲ್ಟಿ ಹೊಡೆದ ರಿಷಭ್ ಪಂತ್ಗೆ ಅವರ ಟೀಮ್ ಓನರ್ ಹೇಳಿದ್ದು
- ಪಲ್ಟಿ ಹೊಡೆದ್ರೂ, ತಿಪ್ಪರಲಾಗ ಹಾಕಿದ್ರೂ ಗೆಲ್ಲೋಕಾಗ್ಲಿಲ್ಲ
ಈ ಬಾರಿ ಐಪಿಎಲ್ನಲ್ಲಿ ಸಿಲ್ಕೀ ಟಚ್ನಲ್ಲಿದ್ದ ಸಾಯಿ ಸುದರ್ಶನ್ ಅವರದ್ದು
- ಸುದರ್ಶನ್ ಸಿಲ್ಕ್ಸ್ ಮತ್ತು ಸುದರ್ಶನ್ ಸ್ಕಿಲ್ಸ್
ಹೊಂಬಾಳೆ ಫಿಲ್ಮ್ಸ್ ಜತೆ ಹೃತಿಕ್ ರೋಷನ್ ಸಿನಿಮಾ
- ಈ ಸಲ ಕೆಜಿಎಫ್, ಸಲಾರ್ ಥರ ಕತ್ತಲು ಕತ್ತಲ ಸಿನಿಮಾ ಮಾಡೋಕಾಗಲ್ಲ, ಬೆಳಕು ಇರ್ಬೇಕು. ಯಾಕಂದ್ರೆ ಹೃತಿಕ್ ಹೆಸರ ‘ರೋಷನ್’ ಇದೆ.
ಸ್ಮೋಕಿಂಗ್ ಸ್ಟೋರಿ
- ತುಂಬಾ ಸಿಗರೇಟ್ ಸೇದುತ್ತಿದ್ದ ಹುಡುಗನಿಗೆ ಕ್ಯಾನ್ಸರ್ ಬಂತು. ಡಾಕ್ಟರು, “ಇನ್ನು ಮುಗೀತು, ಏನೂ ಮಾಡೋಕಾಗಲ್ಲ, ಬೇಕಿದ್ರೆ ಚಿಕಿತ್ಸೆ ಮಾಡ್ತೀವಿ, ಆದ್ರೆ ಪ್ರಯೋಜನ ಇಲ್ಲ" ಅಂದ್ರು. ಆದ್ರೆ ಆ ಹುಡುಗ ಹಠ ಬಿಡಲಿಲ್ಲ, “ನನಗೆ ಬದುಕ ಬೇಕು ಅನ್ನೋ ಜೀವನೋತ್ಸಾಹ, ಆತ್ಮಸ್ಥೈರ್ಯ ತುಂಬಾ ಇದೆ. ಅದಕ್ಕಿಂತ ಹೆಚ್ಚಾಗಿ ಇಚ್ಛಾಶಕ್ತಿ ಇದೆ. ನೀವು ಚಿಕಿತ್ಸೆ ಮುಂದುವರಿಸಿ, ನಾನು ಬದುಕೇ ಬದುಕ್ತೀನಿ" ಅಂದ.
ಡಾಕ್ಟರಿಗೂ ಹೊಸ ಹುಮ್ಮಸ್ಸು ಬಂತು. ಅದೇ ಹುರುಪಿನಿಂದ ಚಿಕಿತ್ಸೆ ಮುಂದುವರಿಸಿದ್ರು. ಆದ್ರೆ, ಮರುದಿನವೇ ಆ ಹುಡುಗ ಸತ್ತುಹೋದ. Moral of the story: ವಿಲ್ ಪವರ್ಗಿಂತ ‘ವಿಲ್ಸ’ ಪವರ್ ದೊಡ್ದು...