ಫೋಟೋ ಗ್ಯಾಲರಿ ಬಿಗ್​ಬಾಸ್ T20 ವಿಶ್ವಕಪ್​ ವಿದೇಶ ವಿಶ್ವವಾಣಿ ಪ್ರಾಪರ್ಟಿ ಫ್ಯಾಷನ್​ ಧಾರ್ಮಿಕ ಕ್ರೈಂ ಪ್ರವಾಸಿ ಪ್ರಪಂಚ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಡಾ.ನಾ. ಸೋಮೇಶ್ವರ

columnist

info79@vishwavani.news

ಔದ್ಯೋಗಿಕ ವೈದ್ಯಕೀಯ ತಜ್ಞರು. 67 ಆರೋಗ್ಯ ಪುಸ್ತಕಗಳ ಪ್ರಕಟಣೆ. ಪ್ರಸ್ತುತ ವಿಶ್ವವಾಣಿಯಲ್ಲಿ “ಹಿಂದಿರುಗಿ ನೋಡಿದಾಗ’ ಅಂಕಣ ಬರಹ. ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ಕ್ವಿಜ಼್ ಮಾಸ್ಟರ್. ಸತತವಾಗಿ 4800 ಕಂತುಗಳ ಪ್ರಸಾರ. ಲಿಮ್ಕ ದಾಖಲೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ. ಕ್ವಿಜ಼್ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ.

Articles
Dr N Someshwara Column: ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಅಕ್ಟೋಬರ್ ೧೪, 1984. ಸ್ಟಿಫಾನಿ ಫೇ ಬ್ಲ್ಯೂಕ್ಲೈರ್ (ಬೇಬಿ ಫೇ) ಎಂಬ ಹೆಣ್ಣು ಮಗುವು ಹುಟ್ಟಿತು. ಈ ಮಗುವಿಗೆ ಹುಟ್ಟುವಾಗಲೇ, ಹೃದಯದ ಎಡಭಾಗವು ಬೆಳೆದಿರಲಿಲ್ಲ. ಹಾಗಾಗಿ ಹೃದಯವು ಶರೀರಕ್ಕೆ ಅಗತ್ಯವಾಗಿದ್ದ ರಕ್ತವನ್ನು ಪಂಪ್ ಮಾಡಲು ಅಸಮರ್ಥವಾಗಿತ್ತು. ಇದನ್ನು ತಾಂತ್ರಿಕ ವಾಗಿ ‘ಅರೆಬೆಳೆದ ಎಡ ಹೃದಯ ಲಕ್ಷಣಾವಳಿ’ (ಹೈಪೋಪ್ಲಾಸ್ಟಿಕ್ ಲೆಫ್ಟ್ ಹಾರ್ಟ್ ಸಿಂಡ್ರೋಮ್, ಎಚ್‌ಎಲ್‌ಎಚ್‌ಎಸ್) ಎಂದು ಕರೆಯುವ ಪದ್ಧತಿಯಿದೆ.

Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

ದಂಶಕಗಳು (ರೋಡೆಂಟ್ಸ್) ಎಂಬ ಪ್ರಾಣಿಗಳಿವೆ. ಇಲಿ, ಅಳಿಲು, ಮೊಲ, ಮುಳ್ಳು ಹಂದಿ, ಗಿನಿಪಿಗ್, ಬೀವರ್, ಹ್ಯಾಮ್‌ಸ್ಟರ್ ಮುಂತಾದ ಪ್ರಾಣಿಗಳಿವೆ. ಇದೇ ವರ್ಗಕ್ಕೆ ಸೇರಿದ ಹಾಗೂ ಅಮೆರಿಕ ಮತ್ತು ಕೆನಡಗಳಲ್ಲಿ ವಿಶೇಷವಾಗಿ ವಾಸಿಸುವ ಗ್ರೌಂಡ್‌ಹಾಗ್ (ಮಾರ್ಮೋಟ ಮೊನಾಕ್ಸ್) ಎಂಬ ಜೀವಿಯಿದೆ. ಹಾಗ್ ಎಂದರೆ ಹಂದಿಯಲ್ಲ. ಸ್ವಲ್ಪ ದೊಡ್ಡ ಅಳಿಲು. ಹಾಗಾಗಿ ಇದನ್ನು ನೆಲಅಳಿಲು ಎಂದು ಕರೆಯಬಹುದು.

Dr N Someshwara Column: ಬದುಕು ನೀಡುವ ಬದಲಿ ಜೋಡಣೆ

Dr N Someshwara Column: ಬದುಕು ನೀಡುವ ಬದಲಿ ಜೋಡಣೆ

ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಮಾಂಸಲಿ (ಪ್ಯಾನ್‌ಕ್ರಿಯಾಸ್) ಮತ್ತು ಕರುಳು. ಎರಡನೆಯ ವರ್ಗದಲ್ಲಿ ಯಶಸ್ವಿಯಾಗಿರುವ ಆದರೆ ಅಪರೂಪಕ್ಕೆ ನಡೆಸುವ ಬದಲಿ ಜೋಡಣೆಗಳು- ಗರ್ಭಕೋಶ, ಜಠರ ಮತ್ತು ಥೈಮಸ್ ಗ್ರಂಥಿ. ಮೂರನೆಯ ವರ್ಗದಲ್ಲಿ ಸಂಯುಕ್ತ ಅಂಗಗಳನ್ನು (ಒಂದಕ್ಕಿಂತ ಹೆಚ್ಚು ಅಂಗಗಳನ್ನು) ಬದಲಿ ಜೋಡಿಸುವುದುಂಟು- ಕೈ ಅಥವಾ ಬಾಹು, ಮುಖ, ಶಿಶ್ನ, ಧ್ವನಿ ಪೆಟ್ಟಿಗೆ ಹಾಗೂ ವಾಯುನಾಳ (ಟ್ರೇಕಿಯ).

Dr N Someshwara Column: ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ರೈಲು ಮಾರ್ಗವನ್ನು ನಿರ್ಮಿಸಲು ಅಡ್ಡ ಬರುತ್ತಿದ್ದ ಎಲ್ಲ ಬಂಡೆಗಳನ್ನು ಸಿಡಿಸಬೇಕಿತ್ತು. ಈ ಕೆಲಸವನ್ನು ಮಾಡುವುದರಲ್ಲಿ ಗೇಜ್ ಪರಿಣತನಾಗಿದ್ದ. ಮೊದಲು ಭೈರಿಗೆಯ ನೆರವಿನಿಂದ ಬಂಡೆಯಲ್ಲಿ ಒಂದು ಕುಣಿಯನ್ನು ಕೊರೆಯಬೇಕಿತ್ತು. ಆ ಕುಣಿಯೊಳಗೆ ಸಿಡಿಮದ್ದು (ಗನ್ ಪೌಡರ್) ತುಂಬಬೇಕಿತ್ತು. ಒಂದು ಫ್ಯೂಸ್ ಇಡಬೇಕಿತ್ತು.

Dr N Someshwara Column: ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಒಂದು ವೇಳೆ ವಿದ್ಯುಚ್ಛಕ್ತಿ ಉತ್ಪಾದನೆ ಏನಾದರೂ ನಿಂತುಹೋದರೆ, ತಕ್ಷಣ ಅದರ ಕೆಲಸವನ್ನು ನಿಭಾಯಿಸುವಂಥ ‘ಸ್ಟ್ಯಾಂಡ್ ಬೈ’ ವ್ಯವಸ್ಥೆಯೂ ಇರಬೇಕು. ವಿದ್ಯುತ್ತಿನ ಜತೆಯಲ್ಲಿ, ತನ್ನ ಅಗತ್ಯಕ್ಕೆ ಬೇಕಾದ ಇತರ ಎಲ್ಲ ವಸ್ತುಗಳನ್ನು ತಾನೇ ಪೂರೈಸಿ ಕೊಳ್ಳಬೇಕು. ಈ ಪಂಪು, ಅಗತ್ಯಕ್ಕೆ ತಕ್ಕ ಹಾಗೆ, ತನ್ನ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚು ಮಾಡಬೇಕಾಗುತ್ತದೆ; ಕೆಲವು ಸಲ ಸಾವಕಾಶವಾಗಿ ಪಂಪ್ ಮಾಡಬೇಕಾಗುತ್ತದೆ.

Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

ಪ್ರತಿಯೊಂದು ಶವಪೆಟ್ಟಿಗೆಯ ಒಳಗೆ ಒಂದು ಗಂಟೆಯನ್ನು ಇಡುತ್ತಿದ್ದರು. ಶವಪೆಟ್ಟಿಗೆಯಲ್ಲಿ ಇರುವವನು ನಿಜಕ್ಕೂ ಸತ್ತಿಲ್ಲದಿದ್ದರೆ, ಅವನು ಗಂಟೆಯನ್ನು ನಿರಂತರವಾಗಿ ಬಾರಿಸುತ್ತಿದ್ದನು. ಆಗ ಸ್ಮಶಾನದಲ್ಲಿ ನಿತ್ಯ ಕಾವಲಿರುವ ಯಾರಾದರೂ ಬಂದು ಅವನನ್ನು ಕಾಪಾಡುತ್ತಿದ್ದರು. ಆಗ ಒಂದು ಪ್ರಶ್ನೆಯು ವೈದ್ಯ ವಿಜ್ಞಾನಿಗಳನ್ನು ಕಾಡಿತು.

D‌r N Someshwara Column: ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ಎಲ್ಲ ರೀತಿಯ ಪೋಷಕಾಂಶಗಳನ್ನು ಹಾಗೂ ಅಗತ್ಯ ಪರಿಸರವನ್ನು ಒದಗಿಸಿದರೂ, ಜೀವಕೋಶಗಳು ಒಂದು ನಿಗದಿತ ಪ್ರಮಾಣದವರೆಗೆ ಪುನರುತ್ಪಾದನೆಯಾಗಿ ಆನಂತರ ಸ್ಥಗಿತವಾಗುತ್ತಿದ್ದವು. ಅವು ಏಕೆ ಸ್ಥಗಿತವಾದವು ಎಂಬುದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ವಿವರಣೆಯು ಅವರಿಗೆ ತಿಳಿದಿರಲಿಲ್ಲ. ಗೇ ಅವರ ಸಹಾಯಕಿಯು ಹೆನ್ರೀಟ್ಟಾಳ ಜೀವಕೋಶಗಳನ್ನು ಕೃಷಿಕೆಯ ಮಾಧ್ಯಮದಲ್ಲಿ ಬೆರೆಸಿದಳು. ಬೆಳೆಯಲು ಬಿಟ್ಟಳು.

Dr N Someshwara Column: ಸುಶ್ರುತನನ್ನು ಸ್ಮರಿಸದ ಮಧ್ಯಯುಗದ ಮುಸ್ಲಿಮರು

ಸುಶ್ರುತನನ್ನು ಸ್ಮರಿಸದ ಮಧ್ಯಯುಗದ ಮುಸ್ಲಿಮರು

ಮೆಸೊಪೊಟೋಮಿಯನ್ ಪ್ರದೇಶವನ್ನು ಆಳಿದ ಬ್ಯಾಬಿಲೋನಿಯನ್ನರ ‘ಇಸಗಿಲ್-ಕಿನ್-ಅಪ್ಲಿ’ ಎಂಬ ವೈದ್ಯನು ಕ್ರಿ.ಪೂ.1069ರಲ್ಲಿ ರೋಗನಿದಾನಿಕ ಕೈಪಿಡಿ (ಡಯಾಗ್ನೋಸ್ಟಿಕ್ ಹ್ಯಾಂಡ್‌ಬುಕ್) ಎಂಬ ವೈದ್ಯಕೀಯ ಪುಸ್ತಕವನ್ನು ಬರೆದ. ಆತ ಈ ಪುಸ್ತಕದಲ್ಲಿ ಕಣ್ಣುಗಳಿಗೆ ಬರುವ 12 ರೋಗಗಳನ್ನು ಪಟ್ಟಿ ಮಾಡಿ, ಅವುಗಳ ಲಕ್ಷಣಗಳನ್ನು ಹಾಗೂ ಚಿಕಿತ್ಸೆಯನ್ನು ಸೂಚಿಸಿದ.

Dr N Someshwara Column: ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಇದು ಉತ್ತಮ ಸಂಶೋಧಿತ ಬರಹ ಎಂದು ವಿದ್ವಾಂಸ ವಲಯದಲ್ಲಿ ಪ್ರಸಿದ್ಧವಾಗಿದೆ. ಹಾಗಾಗಿ ಈ ಪುಸ್ತಕದ ಸಾರಾಂಶವನ್ನು ಸ್ಥೂಲವಾಗಿ ನೋಡಬಹುದು. 1842. ಹೆನ್ರಿ ಗ್ರೇ, 15 ವರ್ಷದ ಹುಡುಗ ನಾಗಿದ್ದಾಗ ಸೈಂಟ್ ಜಾರ್ಜ್ ಆಸ್ಪತ್ರೆಯನ್ನು ಸೇರಿದ. ೧೦ ವರ್ಷಗಳ ಕಾಲ ಅಧ್ಯಯನ ಮಾಡಿದ. 25 ವರ್ಷವಾಗುವ ವೇಳೆಗೆ ಪ್ರಖ್ಯಾತ ವೈದ್ಯನಾದ. ಆ ವೇಳೆಗೆ ಸರ್ವ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಂಶೋಧನೆಗಳನ್ನು ಮಾಡಿ ಪ್ರಬಂಧಗಳನ್ನು ಪ್ರಕಟಿಸಿದ್ದ.

Dr N Someshwara Column: ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

ಅನ್ನಾಹಾರ ಮೈಥುನ ಮನರಂಜನೆಗಳನ್ನು ಮರೆತು ಬರೀ ನಿದ್ದೆ. ನಿದ್ರೆಯಿಂದ ಕೋಮಾಕ್ಕೆ ಜಾರುತ್ತಿದ್ದರು. ಆ ಕೋಮಾದಲ್ಲಿ ಅವರು ಯಾವಾಗ ಜೀವವನ್ನು ಬಿಡುತ್ತಿದ್ದರೋ... ಅದು ದೇವರಿಗೆ ಗೊತ್ತು. ನಾಮುಸೋಕ್ ಎಂಬ ಮಹಿಳೆಯು ಹೇಳಿದಳು ‘ನಮ್ಮಜ್ಜಿ ಮೂರು ವರ್ಷಗಳ ಕಾಲ ಮಲಗಿದ್ದಳು.

Dr N Someshwara Column: ನಮ್ಮ ವೈದ್ಯರು ಈ ಲಾಂಛನವನ್ನೇಕೆ ಆಯ್ದುಕೊಂಡರು ?

ನಮ್ಮ ವೈದ್ಯರು ಈ ಲಾಂಛನವನ್ನೇಕೆ ಆಯ್ದುಕೊಂಡರು ?

ಮಾನವ ಜನಾಂಗದಲ್ಲಿ ಲಾಂಛನಗಳು ಅನಾದಿ ಕಾಲದಿಂದಲೂ ಪ್ರಧಾನ ಪಾತ್ರವನ್ನು ವಹಿಸುತ್ತಾ ಬಂದಿವೆ. ನಮ್ಮ ಪೂರ್ವಜರು ತಮ್ಮ ತಮ್ಮ ಗುಂಪುಗಳನ್ನು ನಿಖರವಾಗಿ ಪತ್ತೆ ಹಚ್ಚಲು ಹಾಗೂ ಜಗತ್ತಿಗೆ ತಿಳಿಸಲು ತಮ್ಮದೇ ಆದ ಚಿಹ್ನೆಗಳನ್ನು ಬಳಸುತ್ತಿದ್ದರು. ಕ್ರಿ.ಶ.3-4ನೆಯ ಶತಮಾನದಲ್ಲಿ ರಚನೆಯಾದ ವಿಮಲಸೂರಿಯ ‘ಪೌಮಚರಿತೆ’ ಅಥವಾ ‘ಪದ್ಮಚರಿತ್ರೆ’ಯು ಒಂದು ಜೈನ ರಾಮಾಯಣದ ಕೃತಿ. ಇದರಲ್ಲಿ ಕವಿಯು ವಾನರರನ್ನು ಮನುಷ್ಯರೆಂದೇ ಚಿತ್ರಿಸುತ್ತಾ, ಅವರ ಕುಲಲಾಂಛನವು (ಟೋಟೆಮ್) ‘ವಾನರ’ ವಾಗಿತ್ತು ಎಂದು ದಾಖಲಿಸಿದ್ದಾನೆ.

Dr N Someshwara Column: ಅಪಸ್ಮಾರಿಗಳ ಬದುಕನ್ನು ಸಹನೀಯವಾಗಿಸಿದೆ ನಮ್ಮ ಸಂವಿಧಾನ

ಅಪಸ್ಮಾರಿಗಳ ಬದುಕನ್ನು ಸಹನೀಯವಾಗಿಸಿದೆ ನಮ್ಮ ಸಂವಿಧಾನ

ಇದು 40 ಜೇಡಿಮಣ್ಣಿನ ಹಲಗೆಗಳ ಸಂಗ್ರಹ. ಇದರಲ್ಲಿರುವ 26ನೆಯ ಜೇಡಿಮಣ್ಣಿನ ಹಲಗೆಯು ಅಪಸ್ಮಾರದ ಬಗ್ಗೆ ವಿವರಣೆಯನ್ನು ನೀಡುತ್ತದೆ. ಇದು ಅಪಸ್ಮಾರದ ಬಗ್ಗೆ, ಅದರ ನಮೂನೆಗಳ ಬಗ್ಗೆ, ಅದರಲ್ಲಿ ಸುದೀರ್ಘ ಅಪಸ್ಮಾರದ (ಸ್ಟೇಟಸ್ ಎಪಿಲೆಪ್ಟಿಕಸ್, 5 ನಿಮಿಷಗಳಿಗಿಂತಲೂ ಹೆಚ್ಚಿನ ಕಾಲ ಸೆಳವು ಕಂಡುಬರುವುದು) ವಿವರಣೆಯೂ ಸೇರಿದೆ.

Dr N Someshwara Column: ಅರೆಗಿವುಡರ ಬಾಳು ಬೆಳಗಿದ ಡಿಜಿಟಲ್‌ ಶ್ರವಣ ಸಾಧನಗಳು

ಅರೆಗಿವುಡರ ಬಾಳು ಬೆಳಗಿದ ಡಿಜಿಟಲ್‌ ಶ್ರವಣ ಸಾಧನಗಳು

ಒಬ್ಬನ ಕಣ್ಣು ಪೂರ್ಣ ಕಾಣದಾದರೆ ಅವನು ಅಂಧನಾಗುತ್ತಾನೆ. ನಮ್ಮ ಸಮಾಜವು ಕುರುಡರನ್ನು ಸಹಾನುಭೂತಿಯಿಂದ ಕಾಣುವಷ್ಟು ಕಿವುಡರನ್ನು ಕಾಣುವುದಿಲ್ಲ. ಅರೆಗಿವುಡರನ್ನು ಹಾಸ್ಯ ಮಾಡುವ ನಾಟಕಗಳು ಹಾಗೂ ಚಲನಚಿತ್ರಗಳು ನಮ್ಮಲ್ಲಿ ಸಾಕಷ್ಟು ಇವೆ. ಅರೆಗಿವುಡರು ನಮ್ಮ ಸಮಾಜದ ನಡುವೇ ತಮ್ಮ ಅಪಹಾಸ್ಯವನ್ನು ನಗುನಗುತ್ತಲೇ ಸಹಿಸಿಕೊಂಡು ಬದುಕನ್ನು ನಡೆಸುವುದು ಅನಿವಾರ್ಯವಾಗಿರುತ್ತದೆ.

Dr N Someshwara Column: ತಂಬಾಕು ವಿಶ್ವವ್ಯಾಪಿಯಾಗಲು ಗ್ರಹಣಗಳೇ ಕಾರಣವಾದವು !

ತಂಬಾಕು ವಿಶ್ವವ್ಯಾಪಿಯಾಗಲು ಗ್ರಹಣಗಳೇ ಕಾರಣವಾದವು !

ಗ್ರಹಣವು ಬಿಟ್ಟ ಕೂಡಲೇ, ಅವರು ತಂಬಾಕಿನ ಪ್ರಭಾವದಲ್ಲಿ, ತಾವೆಲ್ಲರೂ ಸೇರಿ ಹೇಗೆ ಸೂರ್ಯ-ಚಂದ್ರ ರನ್ನು ಮುಕ್ತಗೊಳಿಸಿದೆವೆಂದು ಹೇಳುತ್ತಾ, ಈ ಗ್ರಹಣಗಳ ಭವಿಷ್ಯವನ್ನು ನುಡಿಯುತ್ತಿದ್ದರು. ತಂಬಾಕಿನ ಪ್ರಭಾವದಲ್ಲಿ ಅವರು ನುಡಿಯುತ್ತಿದ್ದ ಭವಿಷ್ಯವು ನಿಜವೇ ಆಗುತ್ತದೆ ಎಂದು ಎಲ್ಲರೂ ನಂಬಿದ್ದರು.

Dr N Someshwara Column: ಒಡಲ ಮೇಲಿರುವ ಗಾಯಗಳು, ಹಿಂಸೆಯ ರುಜುವಾತಿನ ಸಹಿಗಳು

ಒಡಲ ಮೇಲಿರುವ ಗಾಯಗಳು, ಹಿಂಸೆಯ ರುಜುವಾತಿನ ಸಹಿಗಳು

ಸೀಸರನ ಆತ್ಮೀಯ ಮಿತ್ರನಾಗಿದ್ದ ಬ್ರೂಟಸ್ ಸಹ ತನ್ನ ಚೂರಿಯಿಂದ ಸೀಸರನ ತೊಂಡೆಸಂದಿಯ ಬಳಿ ಚುಚ್ಚಿದ. ಸೀಸರ್ ಅಲ್ಲೇ ಕುಸಿದುಬಿದ್ದು ಜೀವವನ್ನು ಬಿಟ್ಟ. ಜೂಲಿಯಸ್ ಸೀಸರನ ವೈದ್ಯ ಆಂಟೀಸ್ಟಿ ಯಸ್. ಇವನು ಸೀಸರನ ಮರಣೋತ್ತರ ಶವಪರೀಕ್ಷೆಯನ್ನು ನಡೆಸಿದ. ಸೀಸರನ ದೇಹದ ಮೇಲೆ ಒಟ್ಟು ೨೩ ತಿವಿದ ಗಾಯಗಳಿರುವುದನ್ನು ದಾಖಲಿಸಿದ.

Dr N Someshwara Column: ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು

ಎರಡು ಅಲಗಿನ ಖಡ್ಗ ಆಸ್ಪಿರಿನ್ನಿನ ದಶಾವತಾರಗಳು

ಮಾಂಸಾಹಾರಿ ಪ್ರಾಣಿಯೊಂದು ಮರದ ತೊಗಟೆಯನ್ನು ತಿನ್ನುತ್ತಿದೆಯೆಂದರೆ?! ಇದರಲ್ಲಿ ಎನೋ ವಿಶೇಷತೆಯಿರಬೇಕೆಂದು ಆ ಮರದ ತೊಗಟೆಯನ್ನು ಕಿತ್ತು ತನ್ನ ಚರ್ಮದ ಚೀಲದಲ್ಲಿ ತುಂಬಿಕೊಂಡ. ಆ ನಾಯಿಯನ್ನು ಎತ್ತಿಕೊಂಡು ತನ್ನ ಗುಹೆಗೆ ಬಂದ. ಸಂಜೆಯ ವೇಳೆಗೆ ನಾಯಿಯು ಸುಧಾರಿಸಿ ಕೊಂಡಿತ್ತು.

Dr N Someshwara Column: ರಾಮನು ಕಾಡಿಗೆ ಹೋದ ಮೇಲೆ ದಶರಥನೇಕೆ ಸತ್ತ ?

ರಾಮನು ಕಾಡಿಗೆ ಹೋದ ಮೇಲೆ ದಶರಥನೇಕೆ ಸತ್ತ ?

ನಿನ್ನ ಜೊತೆಯಲ್ಲಿ ನಾನೂ ಕಾಡಿಗೆ ಬಂದೆ ಎನ್ನುತ್ತಾ ಹಾಸಿಗೆಯಿಂದ ಮೇಲಕ್ಕೆದ್ದ ದಶರಥ. ಸಾವಿರ ಸಿಡಿಲುಗಳು ಒಮ್ಮೆಲೆ ಸಿಡಿದಂತೆ ಆಯಿತು. ತಕ್ಷಣವೇ ತನ್ನ ಹೃದಯವನ್ನು ಹಿಡಿದು ಕೊಂಡು ರಾಮಾ.... ಎಂದು ಕಿರುಚುತ್ತಾ ದಶರಥನು ಹಾಸಿಗೆಯ ಮೇಲೆ ಕುಸಿದು ಬಿದ್ದ. ಅಯ್ಯೋ... ಸ್ವಾಮಿ! ಏನಾಯಿತು ನಿಮಗೆ ಎಂದು ಕೌಸಲ್ಯೆಯು ದಶರಥನ ಬಳಿ ಬರುವಷ್ಟರಲ್ಲಿ, ದಶರಥನ ಜೀವವು ದೇಹವನ್ನು ಬಿಟ್ಟು ಹೊರಟು ಹೋಗಿತ್ತು.

Dr N Someshwara Column: ವೈದ್ಯವಿಜ್ಞಾನದ ಮಹಾನ್‌ ಉಪಕರಣ: ಇಂಜಕ್ಷನ್‌ ಸಿರಿಂಜ್

ವೈದ್ಯವಿಜ್ಞಾನದ ಮಹಾನ್‌ ಉಪಕರಣ: ಇಂಜಕ್ಷನ್‌ ಸಿರಿಂಜ್

‘ಸಿರಿಂಜ್’ ಎಂಬ ಶಬ್ದದ ಮೂಲ ಗ್ರೀಕ್ ಭಾಷೆಯ ‘ಸಿರಿಂಕ್ಸ್’ ಎಂಬ ಶಬ್ದ. ಇದನ್ನು ಕೊಳಲಿನಂಥ ಗಾಳಿವಾದ್ಯ ಎನ್ನಬಹುದು. ಇದು ಲ್ಯಾಟಿನ್ ಭಾಷೆಗೆ ಬಂದು ‘ಸಿರಿಂಗ’ ಎಂದಾಯಿತು. ಆನಂತರ ಫ್ರೆಂಚ್ ಮತ್ತು ಇಂಗ್ಲಿಷ್‌ನಲ್ಲಿ ‘ಸಿರಿಂಜ್’ ಎಂದು ಜನಪ್ರಿಯವಾಯಿತು. ಕನ್ನಡದಲ್ಲೂ ಇದನ್ನು ಸಿರಿಂಜ್ ಎನ್ನುತ್ತೇವೆ.

Dr N Someshwara Column: ಮಿಲಿಟರಿಯಿಂದ ತಾಯಂದಿರ ಆರೋಗ್ಯದವರೆಗೆ...

ಮಿಲಿಟರಿಯಿಂದ ತಾಯಂದಿರ ಆರೋಗ್ಯದವರೆಗೆ...

ಶಬ್ದ ಪ್ರಪಂಚವು ವಿಶಾಲವಾದದ್ದು. ನಾವು ಕೇಳುವ ಶಬ್ದಗಳ ವ್ಯಾಪ್ತಿ 20 ಹರ್ಟ್ಜ್ ಇಂದ 20000 ಹರ್ಟ್ಜ್‌ವರೆಗೆ ಮಾತ್ರ. 20 ಹರ್ಟ್ಜ್‌ಗಿಂತಲೂ ಕಡಿಮೆ ವ್ಯಾಪ್ತಿಯ ಶಬ್ದದ ಅಲೆಗಳಿಗೆ ‘ಅವಶ್ರವಣ ಅಲೆಗಳು’ ಅಥವಾ ‘ಇನ್- ಸೌಂಡ್’ ಎಂದು ಹೆಸರು. ಆನೆ, ಜಿರಾಫೆ, ಹಿಪ್ಪೋಪೊಟೋಮಸ್ ಮುಂತಾದ ಪ್ರಾಣಿಗಳು ಈ ವ್ಯಾಪ್ತಿಯಲ್ಲಿ ನಡೆಸುವ ಸಂವಹನವನ್ನು ನಾವು ಕೇಳಲಾರೆವು.

Dr N Someshwara Column: ಜೀವಗಳನ್ನು ಉಳಿಸುತ್ತಿರುವ ಪ್ರೇಮಪ್ರಸಂಗದ ಫಲ

ಜೀವಗಳನ್ನು ಉಳಿಸುತ್ತಿರುವ ಪ್ರೇಮಪ್ರಸಂಗದ ಫಲ

ಶಸ್ತ್ರವೈದ್ಯರು ತಮ್ಮ ಕೈಗಳನ್ನು, ಉಪಕರಣಗಳನ್ನು ಹಾಗೂ ಶಸ್ತ್ರಚಿಕಿತ್ಸಾ ಅವಧಿಯಲ್ಲಿ ನೂರಕ್ಕೆ ನೂರರಷ್ಟು ಕ್ರಿಮಿರಾಹಿತ್ಯ ಪರಿಸರ (ಏಸೆಪ್ಟಿಕ್ ಕಂಡೀಷನ್) ವನ್ನು ಪರಿಪಾಲಿಸಬೇಕು. ಅಕಸ್ಮಾತ್ ಎಲ್ಲಾದರೂ ದೋಷವುಂಟಾಗಿ ಸೋಂಕು ತಲೆದೋರಿದರೆ, ಆ ಸೋಂಕನ್ನು ಸಕಾಲದಲ್ಲಿ ಪರಿಣಾಮ ಕಾರಿಯಾಗಿ ನಿಗ್ರಹಿಸಲು ಸೂಕ್ತ ಪ್ರಬಲ ಪ್ರತಿಜೈವಿಕ ಔಷಧಿಗಳು ಇರಬೇಕು.

D‌r N Someshwara Column: ವೈದ್ಯ ವಿಜ್ಞಾನದ ಮುಂಗೋಳಿ: ಇಮ್‌ ಹೋಟೆಪ್

ವೈದ್ಯ ವಿಜ್ಞಾನದ ಮುಂಗೋಳಿ: ಇಮ್‌ ಹೋಟೆಪ್

ಸಕ್ಕಾರದಲ್ಲಿರುವ ಜೋಸರ್ ಮೆಟ್ಟಿಲಿನ ಪಿರಮಿಡ್ಡಿನ ವಾಸ್ತುಶಿಲ್ಪಿಯಾಗಿದ್ದ. ಇವುಗಳ ಜತೆಯಲ್ಲಿ ಇವನು ವಿದ್ವಾಂಸನಾಗಿದ್ದ, ಪುರೋಹಿತನಾಗಿದ್ದ ಹಾಗೂ ಸಮಸ್ತ ದೈಹಿಕ-ಮಾನಸಿಕ ಬೇನೆಗಳಿಗೆ ಉಪಶಮನವನ್ನು ನೀಡಬಲ್ಲವನಾಗಿದ್ದ. ‘ಇಮ್‌ಹೋಟೆಪ್’ ಎಂದರೆ ‘ಶಾಂತಿಯ ಜತೆಯಲ್ಲಿ ಬರು ವವನು’ ಎಂಬ ಅರ್ಥವನ್ನು ಧ್ವನಿಸುತ್ತಿತ್ತು.

Dr N Someshwara Column: ಬಿಳಿಚರ್ಮವೇ ಶ್ರೇಷ್ಠ ಎಂಬ ವ್ಯಸನವನ್ನು ಕಳೆದ ಅಧ್ಯಯನ

ಬಿಳಿಚರ್ಮವೇ ಶ್ರೇಷ್ಠ ಎಂಬ ವ್ಯಸನವನ್ನು ಕಳೆದ ಅಧ್ಯಯನ

ಮುರ್ರೆ ದ್ವೀಪದಲ್ಲಿದ್ದ ಪಾಲಿನೇಷಿಯನ್ನರ ಬಣ್ಣವನ್ನು ತಿಳಿಯುವ ಸಾಮರ್ಥ್ಯದ ಪ್ರಯೋಗವನ್ನು ಮಾಡಿದರು. ವಿಲಿಯಮ್ ಹಾಲ್ಸ್ ರಿವರ್ಸ್, ಸೂಕ್ಷ್ಮ ವರ್ಣವೈವಿಧ್ಯಗಳಿದ್ದ ನೀಲಿ ಮತ್ತು ಹಸಿರು ಬಣ್ಣಗಳ ಉಣ್ಣೆಯ ದಾರವನ್ನು ದ್ವೀಪವಾಸಿಗಳಿಗೆ ನೀಡಿದ. ಅವರು ಯುರೋಪಿಯನ್ನರಿಗಿಂತಲೂ ಹೆಚ್ಚು ನಿಖರವಾಗಿ ವಿವಿಧ ಬಣ್ಣಗಳ ಸೂಕ್ಷ್ಮ ಛಾಯಾ ವ್ಯತ್ಯಾಸಗಳನ್ನು ಗುರುತಿಸಿದರು.

Dr N Someshwara Column: ಯೋಜಿತ ಸಿ-ಸೆಕ್ಷನ್‌ ಮಾಡದಿರುವುದೇ ನಮಗಿರುವ ಏಕೈಕ ದಾರಿ

ಯೋಜಿತ ಸಿ-ಸೆಕ್ಷನ್‌ ಮಾಡದಿರುವುದೇ ನಮಗಿರುವ ಏಕೈಕ ದಾರಿ

‘ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಮೂಲಕ ಹುಟ್ಟಿದ ಮಕ್ಕಳಿಗೆ ಬಾಲ್ಯದ ರಕ್ತಾರ್ಬುದ ಅಥವಾ ಚೈಲ್ಡ್‌ಹುಡ್ ಲ್ಯೂಕೀಮಿಯ ಬರುವ ಸಾಧ್ಯತೆಯು ಹೆಚ್ಚಿರುತ್ತದೆ’ ಎನ್ನುವುದು ಈ ಲೇಖನದ ಒಂದು ಸಾಲಿನ ಸಾರಾಂಶ. ಈ ಸಂಶೋಧನೆಯು ವಿಶ್ವವಿಖ್ಯಾತ ಕರೋಲಿನ್ಸ್ಕ್ ಸಂಸ್ಥೆಯಲ್ಲಿ ನಡೆದಿದೆ. ಇದರ ನೇತೃತ್ವ ವನ್ನು ಕ್ರಿಸ್ಟಿನ-ಇವ್ಮಾರ್ಫಿಯ ಕಂಪಿತ್ಸಿ ಹಾಗೂ ತಂಡದವರು ನಿರ್ವಹಿಸಿದ್ದಾರೆ.

Dr N Someshwara Column: ಸುಮಸುಮ್ಮನೇ ಗರ್ಭಾಶಯವನ್ನು ಛೇದಿಸುತ್ತಾರಂತೆ !...ಹೌದಾ ?

ಸುಮಸುಮ್ಮನೇ ಗರ್ಭಾಶಯವನ್ನು ಛೇದಿಸುತ್ತಾರಂತೆ !...ಹೌದಾ ?

ಗರ್ಭಾಶಯದಲ್ಲಿ ಭ್ರೂಣವು ನಾಟಿ, ಪರಿಪೂರ್ಣ ಬೆಳೆದು, ಸುರಕ್ಷಿತವಾಗಿ ಹೊರಬರುವವರೆಗೂ ಗರ್ಭವೇ ಮಗುವಿನ ಮನೆ. ಈ ಜೀವಜಗತ್ತಿನಲ್ಲಿ ಸಂತಾನವರ್ಧನೆಗೆ ಗರ್ಭಾಶಯ ಅತ್ಯಗತ್ಯವಾದ ಅಂಗ. ಇಂಥ ಅಂಗವನ್ನು ಕೆಲವು ಸಂದರ್ಭಗಳಲ್ಲಿ ಛೇದಿಸಬೇಕಾಗುತ್ತದೆ. ಗರ್ಭಾಶಯದಲ್ಲಿ ಗಡ್ಡೆಗಳು ಬೆಳೆದಾಗ, ಅನಿಯಂತ್ರಿತ ಹಾಗೂ ಅಸಹಜ ರಕ್ತಸ್ರಾವವಾದಾಗ, ಕಿಬ್ಬೊಟ್ಟೆಯಲ್ಲಿ ಸಹಿಸಲಸಾಧ್ಯವಾದ ಸೋಂಕು-ನೋವು ಉಂಟಾದಾಗ, ಗರ್ಭಕೋಶವು ಜಾರಿದಾಗ ಹಾಗೂ ಗರ್ಭಾಶಯದ ಒಳಪೊರೆಯು ಎಡೆತಪ್ಪಿ ಬೆಳೆದಾಗ (ಎಂಡೋಮೆಟ್ರಿಯೋಸಿಸ್) ಗರ್ಭಾಶಯ ಛೇದನವನ್ನು ಮಾಡಬೇಕಾಗಿ ಬರಬಹುದು.

Loading...