ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Profile

ಡಾ.ನಾ. ಸೋಮೇಶ್ವರ

columnist

[email protected]

ಔದ್ಯೋಗಿಕ ವೈದ್ಯಕೀಯ ತಜ್ಞರು. 67 ಆರೋಗ್ಯ ಪುಸ್ತಕಗಳ ಪ್ರಕಟಣೆ. ಪ್ರಸ್ತುತ ವಿಶ್ವವಾಣಿಯಲ್ಲಿ “ಹಿಂದಿರುಗಿ ನೋಡಿದಾಗ’ ಅಂಕಣ ಬರಹ. ಚಂದನ ವಾಹಿನಿಯಲ್ಲಿ ಥಟ್ ಅಂತ ಹೇಳಿ ಕ್ವಿಜ಼್ ಕಾರ್ಯಕ್ರಮದ ಕ್ವಿಜ಼್ ಮಾಸ್ಟರ್. ಸತತವಾಗಿ 4800 ಕಂತುಗಳ ಪ್ರಸಾರ. ಲಿಮ್ಕ ದಾಖಲೆ. ಕರ್ನಾಟಕ ಸಾಹಿತ್ಯ ಅಕಾಡೆಮಿ, ಕರ್ನಾಟಕ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯ ಪ್ರಶಸ್ತಿ ಪುರಸ್ಕೃತ. ಕ್ವಿಜ಼್ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿದೆ.

Articles
Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

Dr N Someshwara Column: ಅವರು ನಕ್ಕು ನಕ್ಕು ಸಾಯುತ್ತಿದ್ದರು !

ನಗು ಎಂದರೆ ಸುಮ್ಮನೆಯ ನಗು ವಲ್ಲ. ಗಹಗಹಿಸುವ ನಗು. ಇದು ಸಹಜ ನಗುವಲ್ಲ. ರೋಗಗ್ರಸ್ತ ನಗು. ನಿರಂತರವಾಗಿ ಗಹಗಹಿಸಿ ನಗುತ್ತಲೇ ಇರುತ್ತಾನೆ. ನಗುವು ನಿಲ್ಲುವುದೇ ಇಲ್ಲ. ಹಗಲೂ ರಾತ್ರಿ ನಗುತ್ತಲೇ ಇರುತ್ತಾನೆ. ದೇಹವು ಸೊರಗಿ ಸೊರಗಿ ಬರೀ ಮೂಳೆಗಳು ಕಾಣುತ್ತಿದ್ದರೂ ನಗು ಮಾತ್ರ ನಿಲ್ಲುವುದಿಲ್ಲ. ಹೀಗೆ ತಿಂಗಳುಗಟ್ಟಲೆ ನಕ್ಕು ನಕ್ಕು ಒಂದು ದಿನ ಸಾಯುತ್ತಾನೆ. ಹಾಗಾಗಿ ಪಾಶ್ಚಾತ್ಯ ಪತ್ರಕರ್ತರು ಈ ಕಾಯಿಲೆಯನ್ನು ‘ಲಾಫಿಂಗ್ ಡಿಸೀಸ್’ ಎಂದು ಕರೆದರು.

Dr N Someshwara Column: ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಬಂಜೆಂಬ ಶಬುದವ ಬಿಡಿಸಿದವರ ನೋವು-ನಲಿವಿನ ಕಥೆ

ಆಯುರ್ವೇದವು ಮಕ್ಕಳಿಲ್ಲದ ಸ್ಥಿತಿಯನ್ನು ‘ವಂಧ್ಯತ್ವ’ ಎಂದು ಕರೆದಿದೆ. ಮಕ್ಕಳಾಗ ಬೇಕಾದರೆ ‘ನಾಲ್ಕು ಗರ್ಭ ಸಂಭವ ಸಾಮಾಗ್ರಿ’ಗಳು ಅಗತ್ಯ. ಮೊದಲನೆಯದು ಋತು. ಒಂದು ಬೀಜವು ಮೊಳೆಯಬೇಕಾದರೆ ಅದಕ್ಕೆ ಅನುಕೂಲಕರ ಋತು ಅಗತ್ಯ. ಎಲ್ಲ ಋತುಗಳಲ್ಲೂ ಬೀಜ ಮೊಳೆಯದು. ಹಾಗಾಗಿ ಮಕ್ಕಳಾಗಲೂ ‘ಫಲವಂತಿಕೆಯ ಅವಧಿ’ (ಫರ್ಟೈಲ್ ವಿಂಡೋ) ಎನ್ನುವುದು ಇರುತ್ತದೆ.

Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

Dr N Someshwara Column: ಸಾವಿಗೆ ಸವಾಲು ಹಾಕಿ ಗೆದ್ದ ವಿಜ್ಞಾನಿಗಳು !

ವೇದಕಾಲದ ಋಷಿಗಳಿಗೆ ಯಾವುದೋ ಒಂದು ಕ್ಷಣದಲ್ಲಿ ಹೇಗೆ ನಿರ್ದಿಷ್ಟ ಮಂತ್ರವು ಸುರಿಸು ತ್ತದೆಯೋ, ಹಾಗೆಯೇ ವಿಜ್ಞಾನಿಗಳಿಗೂ ಪರಿಹಾರವು ಮಿಂಚಿನಂತೆ ಹೊಳೆಯುತ್ತದೆ. ಅಂಥ ಮಿಂಚಿನ ಹೊಳಹು ‘ಹೃದಯದ ಗತಿನಿಯಂತ್ರಕ’ದ (ಕಾರ್ಡಿಯಾಕ್ ಪೇಸ್‌ ಮೇಕರ್) ಆವಿಷ್ಕಾರಕ್ಕೆ ಅನುವು ಮಾಡಿಕೊಟ್ಟ ಕಥೆಯು ರೋಚಕವಾಗಿದೆ.

Dr N Someshwara Column: ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು

ಅವನ ಸಂಶೋಧನೆಯು ಅವನ ಜೀವವನ್ನು ಉಳಿಸಿತು

ರಕ್ತವು 120-140 ಎಂಎಂಎಚ್‌ಜಿ ಒತ್ತಡದಲ್ಲಿ ಮಹಾಧಮನಿಯನ್ನು ಪ್ರವೇಶಿಸುತ್ತದೆ. ಮಹ ಧಮನಿಯಿಂದ ಹೊರಡುವ ಅನೇಕ ರಕ್ತನಾಳಗಳ ಮೂಲಕ, ರಕ್ತವು ದೇಹದ ಎಲ್ಲ ಭಾಗಗಳಿಗೆ ರವಾನೆಯಾಗುತ್ತದೆ. ಕೆಲವರು ರಕ್ತದ ಏರೊತ್ತಡದಿಂದ (ಹೈ ಬ್ಲಡ್ ಪ್ರೆಶರ್) ನರಳುವುದುಂಟು. ಈ ಏರೊತ್ತಡವನ್ನು ನಿಯಂತ್ರಿಸದಿದ್ದರೆ, ಗರಿಷ್ಠ 140 ಎಂಎಂಎಚ್‌ಜಿ ಯಲ್ಲಿ ಸಾಗಬೇಕಾದ ರಕ್ತವು 180 ಎಂಎಂಎಚ್‌ಜಿ ಅಥವಾ ಅದಕ್ಕಿಂತ ಹೆಚ್ಚಿನ ಒತ್ತಡದಲ್ಲಿ ಸಾಗಬಹುದು.

Dr N Someshwara Column: ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ

ಇಂಗ್ಲೆಂಡಿನ ಹಸಿರು ಮಕ್ಕಳ ʼಶಂಖ ಪಾಷಾಣʼದ ಕಥೆ

ಇಂಗ್ಲಂಡಿನಲ್ಲಿ ಕೈಗಾರಿಕಾ ಕ್ರಾಂತಿಯ ಕಾರಣ, ಕಲ್ಲಿದ್ದಿಲಿನ ಉಪಯೋಗವು ಮಿತಿಮೀರಿತ್ತು. ಎಲ್ಲೆಲ್ಲೂ ಕಪ್ಪು ಮಸಿಯದೇ ಕಾರು ಬಾರು. ಮನೆಯ ಒಳ-ಹೊರ ಗೋಡೆಗಳಲ್ಲಿ ಕಪ್ಪು ಛಾಯೆ ಯಿಂದ ಕೂಡಿದ್ದ ಕಾರಣ, ಜನರ ಮನಸ್ಸೂ ಸಹ ಒಂದು ರೀತಿ ಮಂಕುಬಡಿದಂತಿತ್ತು.

Dr N Someshwara Column: ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು

ಅದೃಶ್ಯ-ಅಗೋಚರ: ಸಂಪರ್ಕ ಮಾಧ್ಯಮ, ವಾಸನಾ ದ್ರವ್ಯಗಳು

ಮಾನವ ಮತ್ತೊಬ್ಬ ಮಾನವನೊಂದಿಗೆ ಮಾತಿನ ಮೂಲಕ, ಪಶು-ಪಕ್ಷಿಗಳು ತಮಗೆ ಅರ್ಥವಾಗು ವಂಥ ಶಬ್ದಗಳ ಮೂಲಕ ಸಂಪರ್ಕ ನಡೆಸುತ್ತವೆ. ಇವೆರಡರ ಲಭ್ಯವಿಲ್ಲದ ಕೆಲವು ಜೀವಿಗಳು ವಾಸನಾಯುಕ್ತ ವಾದ ಹಲವು ಸಾವಯವ ಸಂಕೀರ್ಣ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸುವುದರ ಮೂಲಕ ಸಂಪರ್ಕ ನಡೆಸುತ್ತವೆ.

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

Dr N Someshwara Column: ಅವನು ಮುಖಗಳನ್ನು ಹೊಲಿಯುತ್ತಿದ್ದ !

ಛೇದನಕೆ ಒಳಗಾಗಿದ್ದ ಕಿವಿ, ಮೂಗು ಮುಂತಾದ ಅಂಗಗಳನ್ನು ಮರುರೂಪಿಸುವ ಶಸ್ತ್ರ ಚಿಕಿತ್ಸಾ ತಂತ್ರಗಳನ್ನು ಅಭಿವೃದ್ಧಿಪಡಿಸಿ, ಸುರೂಪಿಕಾ ಶಸ್ತ್ರ ವಿಜ್ಞಾನಕ್ಕೆ (ಪ್ಲಾಸ್ಟಿಕ್ ಸರ್ಜರಿ) ಭದ್ರಬುನಾದಿ ಹಾಕಿ ‘ಸುರೂಪಿಕ ಶಸ ವೈದ್ಯಕೀಯ ಪಿತಾಮಹ’ ಎಂಬ ಅಭಿದಾನಕ್ಕೆ ಪಾತ್ರರಾದವರು ಸುಶ್ರುತ ಮಹರ್ಷಿಗಳು. ಇವರ ಈ ಜ್ಞಾನವು ಮಧ್ಯಪ್ರಾಚ್ಯದ ಮುಸ್ಲಿಂ ವೈದ್ಯರ ಮೂಲಕ ಯುರೋಪ್ ಖಂಡಕ್ಕೆ ಹರಡಿತು.

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

Dr N Someshwara Column: ಎರಡು ನೀಲಿ ಚರ್ಮದ ಕಥೆಗಳು

ವೈಜ್ಞಾನಿಕ ಕಥೆ ಎಂದರೆ ತಮ್ಮ ತಮ್ಮ ಕಲ್ಪನೆಯನ್ನು ಮನಸ್ಸಿಗೆ ಬಂದ ಹಾಗೆ ಹರಿಯಬಿಡುವ ಹಾಗೆ ಇಲ್ಲ. ವೈಜ್ಞಾನಿಕ ಕಥೆ, ಕಾದಂಬರಿ ಇಲ್ಲವೇ ಚಲನಚಿತ್ರಗಳಲ್ಲಿ ಒಂದು ವೈಜ್ಞಾನಿಕ ಎಳೆಯಿಲ್ಲದ ಕಥೆಯನ್ನು ವಿಸ್ತರಿಸುವ ಪ್ರಯತ್ನವನ್ನು ಯಾರೂ ಮಾಡುವುದಿಲ್ಲ. ಅಂಥ ಒಂದು ಎಳೆಯು ನಾವೀ ಜನರ ನೀಲಿ ಚರ್ಮದ ಹಿನ್ನೆಲೆಯಲ್ಲಿದೆ.

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

Dr N Someshwara Column: ಬೆರಗು ಮೂಡಿಸುವ ಅಂಬಲಿ ಮೀನು

‘ಸ್ಟಾರೋ ಕ್ಲಾಡಿಯ’ ಎಂಬ ಅಂಬಲಿ ಮೀನು ಕೇವಲ 0.5 ಮಿ.ಮೀ. ಇರುತ್ತದೆ. ಅದೇ ‘ಸಯನಿಯ ಕ್ಯಾಪಿಲ್ಲೇಟ’ ಎಂಬ ಬೃಹತ್ ಅಂಬಲಿ ಮೀನಿನ ಲತಾಬಾಹುಗಳು 100-120 ಅಡಿ ಉದ್ದವಿರುತ್ತವೆ. ಹಾಗಾಗಿ ಕೆಲವರು ಈ ಅಂಬಲಿ ಮೀನನ್ನು ‘ಸಾಗರದ ಅತ್ಯಂತ ಉದ್ದನೆಯ ಜೀವಿ’ ಎಂದು ಕರೆಯುವರು.

Dr N Someshwara Column: ಹುಟ್ಟು, ಸಾವು ಮತ್ತು ಚಿರಂಜೀವತ್ವ !

Dr N Someshwara Column: ಹುಟ್ಟು, ಸಾವು ಮತ್ತು ಚಿರಂಜೀವತ್ವ !

ಆಕೆಯು ನೇರವಾಗಿ ಬುದ್ಧನ ಬಳಿಗೆ ಬಂದು, ಅವನ ಪದತಲದಲ್ಲಿ ಮಗನ ಕಳೇಬರವನ್ನು ಇಟ್ಟು, ತನ್ನ ಮಗನಿಗೆ ಜೀವಕೊಡುವಂತೆ ಪ್ರಾರ್ಥಿಸುತ್ತಾಳೆ. ಆಕೆಯ ಅಳಲನ್ನು ಕೇಳಿದ ಭಗವಾನ್ ಬುದ್ಧ “ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತಂದರೆ ನಿನ್ನ ಮಗನನ್ನು ಬದುಕಿಸುವೆ" ಎನ್ನುತ್ತಾನೆ. ಕಿಸಾ ಗೌತಮಿಯು ಸಾವಿಲ್ಲದ ಮನೆಯಿಂದ ಸಾಸಿವೆ ಕಾಳನ್ನು ತರಲು ಇಡೀ ಶ್ರಾವಸ್ತಿ ನಗರದ ಮನೆಯೊಂದನ್ನೂ ಬಿಡದೆ ಸುತ್ತುತ್ತಾಳೆ. ಆದರೆ ಎಲ್ಲರ ಮನೆಯಲ್ಲಿಯೂ ಒಬ್ಬರಲ್ಲ ಒಬ್ಬರು ಸತ್ತೇ ಇರುತ್ತಾರೆ. ಸಂಜೆಯ ವೇಳೆಗೆ ಕಿಸಾ ಗೌತಮಿಗೆ ಜ್ಞಾನೋದಯವಾಗುತ್ತದೆ.

Dr N Someshwara Column: ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಹದ್ದಿನ ಕಣ್ಣು, ಸಿಂಹದ ಗುಂಡಿಗೆ ಹಾಗೂ ನಾರಿಯ ಕೋಮಲ ನರಗಳು

ಆಸ್ಪತ್ರೆಯ ಹೊರಗೆ ವೈದ್ಯರು ಜೋಲುಮುಖವನ್ನು ಹಾಕಿಕೊಂಡು ನಿಂತಿದ್ದರು. ಹರ್ನಿಯವು ಸಿಡಿದಿರಬೇಕು, ಸೋಂಕು ಉದರಾದ್ಯಂತ ವ್ಯಾಪಿಸಿದೆ. ಅಂತಿಮ ಘಟ್ಟವನ್ನು ತಲುಪಿದೆ. ಈ ಮಗು ಇನ್ನು ಕೆಲವೇ ಗಂಟೆಗಳ ಅತಿಥಿ ಮಾತ್ರ... ಎಂದು ಮೆಲುದನಿಯಲ್ಲಿ ಅಲವತ್ತು ಕೊಂಡರು.

Dr N Someshwara Column: ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಮಂಗನ ಹೃದಯವನ್ನು ಮಗುವಿಗೆ ಬದಲಿ ಜೋಡಿಸಿದರು !

ಅಕ್ಟೋಬರ್ ೧೪, 1984. ಸ್ಟಿಫಾನಿ ಫೇ ಬ್ಲ್ಯೂಕ್ಲೈರ್ (ಬೇಬಿ ಫೇ) ಎಂಬ ಹೆಣ್ಣು ಮಗುವು ಹುಟ್ಟಿತು. ಈ ಮಗುವಿಗೆ ಹುಟ್ಟುವಾಗಲೇ, ಹೃದಯದ ಎಡಭಾಗವು ಬೆಳೆದಿರಲಿಲ್ಲ. ಹಾಗಾಗಿ ಹೃದಯವು ಶರೀರಕ್ಕೆ ಅಗತ್ಯವಾಗಿದ್ದ ರಕ್ತವನ್ನು ಪಂಪ್ ಮಾಡಲು ಅಸಮರ್ಥವಾಗಿತ್ತು. ಇದನ್ನು ತಾಂತ್ರಿಕ ವಾಗಿ ‘ಅರೆಬೆಳೆದ ಎಡ ಹೃದಯ ಲಕ್ಷಣಾವಳಿ’ (ಹೈಪೋಪ್ಲಾಸ್ಟಿಕ್ ಲೆಫ್ಟ್ ಹಾರ್ಟ್ ಸಿಂಡ್ರೋಮ್, ಎಚ್‌ಎಲ್‌ಎಚ್‌ಎಸ್) ಎಂದು ಕರೆಯುವ ಪದ್ಧತಿಯಿದೆ.

Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

Dr N Someshwara Column: ಮೃತ್ಯುಂಜಯನಾಗಿಬಿಟ್ಟನೇ ಈ ನರಮಾನವ ?

ದಂಶಕಗಳು (ರೋಡೆಂಟ್ಸ್) ಎಂಬ ಪ್ರಾಣಿಗಳಿವೆ. ಇಲಿ, ಅಳಿಲು, ಮೊಲ, ಮುಳ್ಳು ಹಂದಿ, ಗಿನಿಪಿಗ್, ಬೀವರ್, ಹ್ಯಾಮ್‌ಸ್ಟರ್ ಮುಂತಾದ ಪ್ರಾಣಿಗಳಿವೆ. ಇದೇ ವರ್ಗಕ್ಕೆ ಸೇರಿದ ಹಾಗೂ ಅಮೆರಿಕ ಮತ್ತು ಕೆನಡಗಳಲ್ಲಿ ವಿಶೇಷವಾಗಿ ವಾಸಿಸುವ ಗ್ರೌಂಡ್‌ಹಾಗ್ (ಮಾರ್ಮೋಟ ಮೊನಾಕ್ಸ್) ಎಂಬ ಜೀವಿಯಿದೆ. ಹಾಗ್ ಎಂದರೆ ಹಂದಿಯಲ್ಲ. ಸ್ವಲ್ಪ ದೊಡ್ಡ ಅಳಿಲು. ಹಾಗಾಗಿ ಇದನ್ನು ನೆಲಅಳಿಲು ಎಂದು ಕರೆಯಬಹುದು.

Dr N Someshwara Column: ಬದುಕು ನೀಡುವ ಬದಲಿ ಜೋಡಣೆ

Dr N Someshwara Column: ಬದುಕು ನೀಡುವ ಬದಲಿ ಜೋಡಣೆ

ಹೃದಯ, ಶ್ವಾಸಕೋಶ, ಯಕೃತ್ತು, ಮೂತ್ರಪಿಂಡ, ಮಾಂಸಲಿ (ಪ್ಯಾನ್‌ಕ್ರಿಯಾಸ್) ಮತ್ತು ಕರುಳು. ಎರಡನೆಯ ವರ್ಗದಲ್ಲಿ ಯಶಸ್ವಿಯಾಗಿರುವ ಆದರೆ ಅಪರೂಪಕ್ಕೆ ನಡೆಸುವ ಬದಲಿ ಜೋಡಣೆಗಳು- ಗರ್ಭಕೋಶ, ಜಠರ ಮತ್ತು ಥೈಮಸ್ ಗ್ರಂಥಿ. ಮೂರನೆಯ ವರ್ಗದಲ್ಲಿ ಸಂಯುಕ್ತ ಅಂಗಗಳನ್ನು (ಒಂದಕ್ಕಿಂತ ಹೆಚ್ಚು ಅಂಗಗಳನ್ನು) ಬದಲಿ ಜೋಡಿಸುವುದುಂಟು- ಕೈ ಅಥವಾ ಬಾಹು, ಮುಖ, ಶಿಶ್ನ, ಧ್ವನಿ ಪೆಟ್ಟಿಗೆ ಹಾಗೂ ವಾಯುನಾಳ (ಟ್ರೇಕಿಯ).

Dr N Someshwara Column: ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ಸಿಡಿಮದ್ದು ಸ್ಫೋಟಕ್ಕೆ ಕಬ್ಬಿಣದ ಸರಳು ಮಿದುಳನ್ನು ಹೊಕ್ಕಿತು !

ರೈಲು ಮಾರ್ಗವನ್ನು ನಿರ್ಮಿಸಲು ಅಡ್ಡ ಬರುತ್ತಿದ್ದ ಎಲ್ಲ ಬಂಡೆಗಳನ್ನು ಸಿಡಿಸಬೇಕಿತ್ತು. ಈ ಕೆಲಸವನ್ನು ಮಾಡುವುದರಲ್ಲಿ ಗೇಜ್ ಪರಿಣತನಾಗಿದ್ದ. ಮೊದಲು ಭೈರಿಗೆಯ ನೆರವಿನಿಂದ ಬಂಡೆಯಲ್ಲಿ ಒಂದು ಕುಣಿಯನ್ನು ಕೊರೆಯಬೇಕಿತ್ತು. ಆ ಕುಣಿಯೊಳಗೆ ಸಿಡಿಮದ್ದು (ಗನ್ ಪೌಡರ್) ತುಂಬಬೇಕಿತ್ತು. ಒಂದು ಫ್ಯೂಸ್ ಇಡಬೇಕಿತ್ತು.

Dr N Someshwara Column: ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಮೊದಲ ಬಾರಿಗೆ ಮೃತ್ಯುವನ್ನು ಸೋಲಿಸಿದ ಮೃತ್ಯುಂಜಯ

ಒಂದು ವೇಳೆ ವಿದ್ಯುಚ್ಛಕ್ತಿ ಉತ್ಪಾದನೆ ಏನಾದರೂ ನಿಂತುಹೋದರೆ, ತಕ್ಷಣ ಅದರ ಕೆಲಸವನ್ನು ನಿಭಾಯಿಸುವಂಥ ‘ಸ್ಟ್ಯಾಂಡ್ ಬೈ’ ವ್ಯವಸ್ಥೆಯೂ ಇರಬೇಕು. ವಿದ್ಯುತ್ತಿನ ಜತೆಯಲ್ಲಿ, ತನ್ನ ಅಗತ್ಯಕ್ಕೆ ಬೇಕಾದ ಇತರ ಎಲ್ಲ ವಸ್ತುಗಳನ್ನು ತಾನೇ ಪೂರೈಸಿ ಕೊಳ್ಳಬೇಕು. ಈ ಪಂಪು, ಅಗತ್ಯಕ್ಕೆ ತಕ್ಕ ಹಾಗೆ, ತನ್ನ ಪಂಪಿಂಗ್ ಸಾಮರ್ಥ್ಯವನ್ನು ಹೆಚ್ಚು ಮಾಡಬೇಕಾಗುತ್ತದೆ; ಕೆಲವು ಸಲ ಸಾವಕಾಶವಾಗಿ ಪಂಪ್ ಮಾಡಬೇಕಾಗುತ್ತದೆ.

Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

Dr N Someshwara Column: ಸತ್ತವನು ಎದ್ದು ಉಸಿರಾಡಿದಾಗ!...

ಪ್ರತಿಯೊಂದು ಶವಪೆಟ್ಟಿಗೆಯ ಒಳಗೆ ಒಂದು ಗಂಟೆಯನ್ನು ಇಡುತ್ತಿದ್ದರು. ಶವಪೆಟ್ಟಿಗೆಯಲ್ಲಿ ಇರುವವನು ನಿಜಕ್ಕೂ ಸತ್ತಿಲ್ಲದಿದ್ದರೆ, ಅವನು ಗಂಟೆಯನ್ನು ನಿರಂತರವಾಗಿ ಬಾರಿಸುತ್ತಿದ್ದನು. ಆಗ ಸ್ಮಶಾನದಲ್ಲಿ ನಿತ್ಯ ಕಾವಲಿರುವ ಯಾರಾದರೂ ಬಂದು ಅವನನ್ನು ಕಾಪಾಡುತ್ತಿದ್ದರು. ಆಗ ಒಂದು ಪ್ರಶ್ನೆಯು ವೈದ್ಯ ವಿಜ್ಞಾನಿಗಳನ್ನು ಕಾಡಿತು.

D‌r N Someshwara Column: ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ವಿಜ್ಞಾನಕ್ಕೆ ಮಹಾನ್‌ ತಿರುವು ನೀಡಿದ ಚಿರಂಜೀವಿ ಹೆನ್ರೀಕ್ಟಾಲ್ಯಾಕ್ಸ್

ಎಲ್ಲ ರೀತಿಯ ಪೋಷಕಾಂಶಗಳನ್ನು ಹಾಗೂ ಅಗತ್ಯ ಪರಿಸರವನ್ನು ಒದಗಿಸಿದರೂ, ಜೀವಕೋಶಗಳು ಒಂದು ನಿಗದಿತ ಪ್ರಮಾಣದವರೆಗೆ ಪುನರುತ್ಪಾದನೆಯಾಗಿ ಆನಂತರ ಸ್ಥಗಿತವಾಗುತ್ತಿದ್ದವು. ಅವು ಏಕೆ ಸ್ಥಗಿತವಾದವು ಎಂಬುದಕ್ಕೆ ಯಾವುದೇ ರೀತಿಯ ವೈಜ್ಞಾನಿಕ ವಿವರಣೆಯು ಅವರಿಗೆ ತಿಳಿದಿರಲಿಲ್ಲ. ಗೇ ಅವರ ಸಹಾಯಕಿಯು ಹೆನ್ರೀಟ್ಟಾಳ ಜೀವಕೋಶಗಳನ್ನು ಕೃಷಿಕೆಯ ಮಾಧ್ಯಮದಲ್ಲಿ ಬೆರೆಸಿದಳು. ಬೆಳೆಯಲು ಬಿಟ್ಟಳು.

Dr N Someshwara Column: ಸುಶ್ರುತನನ್ನು ಸ್ಮರಿಸದ ಮಧ್ಯಯುಗದ ಮುಸ್ಲಿಮರು

ಸುಶ್ರುತನನ್ನು ಸ್ಮರಿಸದ ಮಧ್ಯಯುಗದ ಮುಸ್ಲಿಮರು

ಮೆಸೊಪೊಟೋಮಿಯನ್ ಪ್ರದೇಶವನ್ನು ಆಳಿದ ಬ್ಯಾಬಿಲೋನಿಯನ್ನರ ‘ಇಸಗಿಲ್-ಕಿನ್-ಅಪ್ಲಿ’ ಎಂಬ ವೈದ್ಯನು ಕ್ರಿ.ಪೂ.1069ರಲ್ಲಿ ರೋಗನಿದಾನಿಕ ಕೈಪಿಡಿ (ಡಯಾಗ್ನೋಸ್ಟಿಕ್ ಹ್ಯಾಂಡ್‌ಬುಕ್) ಎಂಬ ವೈದ್ಯಕೀಯ ಪುಸ್ತಕವನ್ನು ಬರೆದ. ಆತ ಈ ಪುಸ್ತಕದಲ್ಲಿ ಕಣ್ಣುಗಳಿಗೆ ಬರುವ 12 ರೋಗಗಳನ್ನು ಪಟ್ಟಿ ಮಾಡಿ, ಅವುಗಳ ಲಕ್ಷಣಗಳನ್ನು ಹಾಗೂ ಚಿಕಿತ್ಸೆಯನ್ನು ಸೂಚಿಸಿದ.

Dr N Someshwara Column: ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಮನುಕುಲ ರಚಿಸಿದ ಸಾರ್ವಕಾಲಿಕ ಶ್ರೇಷ್ಠ ಗ್ರಂಥ: ಗ್ರೇಸ್‌ ಅನಾಟಮಿ

ಇದು ಉತ್ತಮ ಸಂಶೋಧಿತ ಬರಹ ಎಂದು ವಿದ್ವಾಂಸ ವಲಯದಲ್ಲಿ ಪ್ರಸಿದ್ಧವಾಗಿದೆ. ಹಾಗಾಗಿ ಈ ಪುಸ್ತಕದ ಸಾರಾಂಶವನ್ನು ಸ್ಥೂಲವಾಗಿ ನೋಡಬಹುದು. 1842. ಹೆನ್ರಿ ಗ್ರೇ, 15 ವರ್ಷದ ಹುಡುಗ ನಾಗಿದ್ದಾಗ ಸೈಂಟ್ ಜಾರ್ಜ್ ಆಸ್ಪತ್ರೆಯನ್ನು ಸೇರಿದ. ೧೦ ವರ್ಷಗಳ ಕಾಲ ಅಧ್ಯಯನ ಮಾಡಿದ. 25 ವರ್ಷವಾಗುವ ವೇಳೆಗೆ ಪ್ರಖ್ಯಾತ ವೈದ್ಯನಾದ. ಆ ವೇಳೆಗೆ ಸರ್ವ ವಿದ್ವಾಂಸರ ಮೆಚ್ಚುಗೆಗೆ ಪಾತ್ರವಾದ ಸಂಶೋಧನೆಗಳನ್ನು ಮಾಡಿ ಪ್ರಬಂಧಗಳನ್ನು ಪ್ರಕಟಿಸಿದ್ದ.

Dr N Someshwara Column: ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

ನಿದ್ರೆಯಿಂದ ಕೋಮಾಕ್ಕೆ, ಕೋಮಾದಿಂದ ಸಾವಿನೆಡೆಗೆ

ಅನ್ನಾಹಾರ ಮೈಥುನ ಮನರಂಜನೆಗಳನ್ನು ಮರೆತು ಬರೀ ನಿದ್ದೆ. ನಿದ್ರೆಯಿಂದ ಕೋಮಾಕ್ಕೆ ಜಾರುತ್ತಿದ್ದರು. ಆ ಕೋಮಾದಲ್ಲಿ ಅವರು ಯಾವಾಗ ಜೀವವನ್ನು ಬಿಡುತ್ತಿದ್ದರೋ... ಅದು ದೇವರಿಗೆ ಗೊತ್ತು. ನಾಮುಸೋಕ್ ಎಂಬ ಮಹಿಳೆಯು ಹೇಳಿದಳು ‘ನಮ್ಮಜ್ಜಿ ಮೂರು ವರ್ಷಗಳ ಕಾಲ ಮಲಗಿದ್ದಳು.

Dr N Someshwara Column: ನಮ್ಮ ವೈದ್ಯರು ಈ ಲಾಂಛನವನ್ನೇಕೆ ಆಯ್ದುಕೊಂಡರು ?

ನಮ್ಮ ವೈದ್ಯರು ಈ ಲಾಂಛನವನ್ನೇಕೆ ಆಯ್ದುಕೊಂಡರು ?

ಮಾನವ ಜನಾಂಗದಲ್ಲಿ ಲಾಂಛನಗಳು ಅನಾದಿ ಕಾಲದಿಂದಲೂ ಪ್ರಧಾನ ಪಾತ್ರವನ್ನು ವಹಿಸುತ್ತಾ ಬಂದಿವೆ. ನಮ್ಮ ಪೂರ್ವಜರು ತಮ್ಮ ತಮ್ಮ ಗುಂಪುಗಳನ್ನು ನಿಖರವಾಗಿ ಪತ್ತೆ ಹಚ್ಚಲು ಹಾಗೂ ಜಗತ್ತಿಗೆ ತಿಳಿಸಲು ತಮ್ಮದೇ ಆದ ಚಿಹ್ನೆಗಳನ್ನು ಬಳಸುತ್ತಿದ್ದರು. ಕ್ರಿ.ಶ.3-4ನೆಯ ಶತಮಾನದಲ್ಲಿ ರಚನೆಯಾದ ವಿಮಲಸೂರಿಯ ‘ಪೌಮಚರಿತೆ’ ಅಥವಾ ‘ಪದ್ಮಚರಿತ್ರೆ’ಯು ಒಂದು ಜೈನ ರಾಮಾಯಣದ ಕೃತಿ. ಇದರಲ್ಲಿ ಕವಿಯು ವಾನರರನ್ನು ಮನುಷ್ಯರೆಂದೇ ಚಿತ್ರಿಸುತ್ತಾ, ಅವರ ಕುಲಲಾಂಛನವು (ಟೋಟೆಮ್) ‘ವಾನರ’ ವಾಗಿತ್ತು ಎಂದು ದಾಖಲಿಸಿದ್ದಾನೆ.

Dr N Someshwara Column: ಅಪಸ್ಮಾರಿಗಳ ಬದುಕನ್ನು ಸಹನೀಯವಾಗಿಸಿದೆ ನಮ್ಮ ಸಂವಿಧಾನ

ಅಪಸ್ಮಾರಿಗಳ ಬದುಕನ್ನು ಸಹನೀಯವಾಗಿಸಿದೆ ನಮ್ಮ ಸಂವಿಧಾನ

ಇದು 40 ಜೇಡಿಮಣ್ಣಿನ ಹಲಗೆಗಳ ಸಂಗ್ರಹ. ಇದರಲ್ಲಿರುವ 26ನೆಯ ಜೇಡಿಮಣ್ಣಿನ ಹಲಗೆಯು ಅಪಸ್ಮಾರದ ಬಗ್ಗೆ ವಿವರಣೆಯನ್ನು ನೀಡುತ್ತದೆ. ಇದು ಅಪಸ್ಮಾರದ ಬಗ್ಗೆ, ಅದರ ನಮೂನೆಗಳ ಬಗ್ಗೆ, ಅದರಲ್ಲಿ ಸುದೀರ್ಘ ಅಪಸ್ಮಾರದ (ಸ್ಟೇಟಸ್ ಎಪಿಲೆಪ್ಟಿಕಸ್, 5 ನಿಮಿಷಗಳಿಗಿಂತಲೂ ಹೆಚ್ಚಿನ ಕಾಲ ಸೆಳವು ಕಂಡುಬರುವುದು) ವಿವರಣೆಯೂ ಸೇರಿದೆ.

Dr N Someshwara Column: ಅರೆಗಿವುಡರ ಬಾಳು ಬೆಳಗಿದ ಡಿಜಿಟಲ್‌ ಶ್ರವಣ ಸಾಧನಗಳು

ಅರೆಗಿವುಡರ ಬಾಳು ಬೆಳಗಿದ ಡಿಜಿಟಲ್‌ ಶ್ರವಣ ಸಾಧನಗಳು

ಒಬ್ಬನ ಕಣ್ಣು ಪೂರ್ಣ ಕಾಣದಾದರೆ ಅವನು ಅಂಧನಾಗುತ್ತಾನೆ. ನಮ್ಮ ಸಮಾಜವು ಕುರುಡರನ್ನು ಸಹಾನುಭೂತಿಯಿಂದ ಕಾಣುವಷ್ಟು ಕಿವುಡರನ್ನು ಕಾಣುವುದಿಲ್ಲ. ಅರೆಗಿವುಡರನ್ನು ಹಾಸ್ಯ ಮಾಡುವ ನಾಟಕಗಳು ಹಾಗೂ ಚಲನಚಿತ್ರಗಳು ನಮ್ಮಲ್ಲಿ ಸಾಕಷ್ಟು ಇವೆ. ಅರೆಗಿವುಡರು ನಮ್ಮ ಸಮಾಜದ ನಡುವೇ ತಮ್ಮ ಅಪಹಾಸ್ಯವನ್ನು ನಗುನಗುತ್ತಲೇ ಸಹಿಸಿಕೊಂಡು ಬದುಕನ್ನು ನಡೆಸುವುದು ಅನಿವಾರ್ಯವಾಗಿರುತ್ತದೆ.

Loading...