ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಡಾ. ಸಾಧನಾಶ್ರೀ ಪಿ,

columnist

drsadhanashree@gmail.com

ಡಾ. ಸಾಧನಾಶ್ರೀ ಪಿ, ಎಂ.ಡಿ. (ಆಯುರ್ವೇದ), ಒಬ್ಬ ವಿಶಿಷ್ಟ ಆಯುರ್ವೇದ ವೈದ್ಯೆ , ಪಂಚಕರ್ಮ ತಜ್ಞೆ ಮತ್ತು ಸಮಗ್ರ ಆರೋಗ್ಯ ತಜ್ಞೆ . 2017 ರಿಂದ ಬೆಂಗಳೂರಿನ ಆರೋಗ್ಯವರ್ಧಿನಿ ಆಯುರ್ವೇದಾಲಯದ ಸಂಸ್ಥಾಪಕ-ನಿರ್ದೇಶಕರಾಗಿ, ಅವರು ವಿಶ್ವಾದ್ಯಂತ ರೋಗಿಗಳಿಗೆ ಆರೋಗ್ಯ ಸಮಾಲೋಚನೆಗಳು ಮತ್ತು ವಿಶೇಷ ಪಂಚಕರ್ಮ ಚಿಕಿತ್ಸೆಯನ್ನು ಒದಗಿಸುತ್ತಿದ್ದಾರೆ. ಡಾ. ಸಾಧನ ಅವರು ಯೋಗ ತಜ್ಞರಾಗಿ ಪ್ರಸವಪೂರ್ವ ಮತ್ತು ಪ್ರಸವದ ನಂತರದ ಯೋಗ ಬೋಧಕರಾಗಿಯೂ ಪ್ರಮಾಣೀಕರಿಸಲ್ಪಟ್ಟಿದ್ದಾರೆ . ಇವರು ವಿಶ್ವವಾಣಿ ಪತ್ರಿಕೆಯ ಅಂಕಣಕಾರರಾಗಿದ್ದಾರೆ ಮತ್ತು ಭರತನಾಟ್ಯ ಕಲಾವಿದರಾಗಿದ್ದಾರೆ. ಇವರು ಸಾಧನ ಸಂಗಮ ನೃತ್ಯ ಕೇಂದ್ರವೆಂಬ ತಮ್ಮ ಸಂಸ್ಥೆಯಲ್ಲಿ ನೂರಾರು ಕಲಾಸಕ್ತರಿಗೆ ಭರತ ನಾಟ್ಯವನ್ನು ಹೇಳಿಕೊಡುತ್ತಿದ್ದಾರೆ. ಇವರು ಆಧುನಿಕ ಜೀವನಶೈಲಿಯ ಅಗತ್ಯತೆಗಳೊಂದಿಗೆ ಅಧಿಕೃತ ಆಯುರ್ವೇದ ತತ್ವಗಳನ್ನು ಸಂಯೋಜಿ ಚಿಕಿತ್ಸೆಯನ್ನು ನೀಡುತ್ತಾರೆ. ಇವರು ಪ್ರಿವೆಂಟಿವ್ ಮೆಡಿಸಿನ್, ಮಹಿಳೆಯರ ಆರೋಗ್ಯ, ರೋಗನಿರೋಧಕ ಚಿಕಿತ್ಸೆ, ಮಕ್ಕಳ ಆರೈಕೆ, ಮಾನಸಿಕ ಯೋಗಕ್ಷೇಮ, ಜೀವನಶೈಲಿ ಮತ್ತು ದಿನಚರಿಗಳಲ್ಲಿ ಪರಿಣಿತಿ ಹೊಂದ್ದಿದ್ದಾರೆ. ಇವರು ಕಳೆದ ೨ ವರ್ಷಗಳಿಂದ ಸತತವಾಗಿ ಪ್ರತಿ ತಿಂಗಳು ಉಚಿತ ವೈದ್ಯಕೀಯ ಶಿಬಿರಗಳನ್ನು ಹಳ್ಳಿ ಪ್ರದೇಶಗಳಲ್ಲಿ ಆಯೋಜಿಸುತ್ತಾ ಬಂದಿದ್ದಾರೆ ಮತ್ತು ಪಾಡ್ಕಾಸ್ಟ್ಗಳು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೂಲಕ ಆಯುರ್ವೇದದ ಜಾಗತಿಕ ಜಾಗೃತಿಯ ಬಗ್ಗೆ ಶ್ರಮಿಸುತ್ತಿದ್ದಾರೆ. ಡಾ. ಸಾಧನಾ ಅವರು ಪಂಚಕರ್ಮದಲ್ಲಿ ಸ್ನಾತಕೋತ್ತರ ಎಂ.ಡಿ ಪರೀಕ್ಷೆಯಲ್ಲಿ (ಕರ್ನಾಟಕದಲ್ಲಿ 2 ನೇ ರ್ಯಾಂಕ್) ಮತ್ತು ಬಿ.ಎ.ಎಂ.ಎಸ್. ಶೈಕ್ಷಣಿಕ ಶ್ರೇಷ್ಠತೆಗಾಗಿ ಪ್ರತಿಷ್ಠಿತ ಜೀವಕ ಪ್ರಶಸ್ತಿಯನ್ನು ತಮ್ಮದಾ ಗಿಸಿಕೊಂಡಿದ್ದಾರೆ.ಅವರು ಭಾರತೀಯ ರಾಯಭಾರ ಕಚೇರಿ, ವಿಯೆಟ್ನಾಂ ಮತ್ತು ಭಾರತದಲ್ಲಿನ ರಾಷ್ಟ್ರೀಯ ಯುವ ಉತ್ಸವಗಳಂತಹ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಆಯುರ್ವೇದವನ್ನು ಪ್ರತಿನಿಧಿಸಿದ್ದಾರೆ. ಐಐಟಿ-ದೆಹಲಿ ಮತ್ತು ಆರ್ಬಿಐ-ಚೆನ್ನೈನಲ್ಲಿ , ರೋಟರಿ ಕ್ಲಬ್- ಶಿಮ್ಲ, ಕೆ ಎಲ್ ಯೂನಿವರ್ಸಿಟಿ- ತೆಲಂಗಾಣ ಮುಂತಾದ ಪ್ರತಿಷ್ಠಿತ ವೇದಿಕೆಗಳಲ್ಲಿ ಹೋಲಿಸ್ಟಿಕ್ ಹೆಲ್ತ್ ಕಾರ್ಯಾಗಾರ ಗಳನ್ನು ನಿರ್ವಹಿಸುವುದು, ಗೌರವಾನ್ವಿತ ಸಂಸ್ಥೆಗಳಲ್ಲಿ ಅತಿಥಿ ಉಪನ್ಯಾಸಗಳನ್ನು ನೀಡುವುದು ಮತ್ತು ವಿದ್ಯಾರ್ಥಿಗಳು ಮತ್ತು ವೃತ್ತಿಪರರಿಗೆ ಪ್ರೇರಕ ಉಪನ್ಯಾಸಗಳನ್ನು ಒಳಗೊಂಡಂತೆ ಅವರು ಹಲವಾರು ಕಾರ್ಯಕ್ರಮಗಳನ್ನು ನೀಡಿದ್ದಾರೆ. ಇವರ ಸಾಧನೆಯನ್ನು ಗುರುತಿಸಿ ಇವರಿಗೆ ಆರ್ಯಭಟ ಅಂತಾ ರಾಷ್ಟ್ರೀಯ ಯುವ ಪ್ರಶಸ್ತಿಯೂ ಲಭಿಸಿದೆ.

Articles
Dr Sadhanashree Column: ಮೂತ್ರಕೋಶದ ಕಲ್ಲು: ತಿಳಿದುಕೊಳ್ಳಿ ಆಯುರ್ವೇದದ ಸೊಲ್ಲು

ಮೂತ್ರಕೋಶದ ಕಲ್ಲು: ತಿಳಿದುಕೊಳ್ಳಿ ಆಯುರ್ವೇದದ ಸೊಲ್ಲು

ಭಾರತದಲ್ಲಿ ಸುಮಾರು 12 ಪ್ರತಿಶತ ಜನರ ಶತ್ರು ಈ ಅಶ್ಮರೀ! ಈ ಶತ್ರುವು ಸಹಿಸಲಾಗದ ನೋವು ಮತ್ತು ದುಃಖವನ್ನು ನೀಡುತ್ತದೆ. ನೋಡನೋಡುತ್ತಾ ಇದು ಇಷ್ಟು ಹೆಚ್ಚಾಗಲು ಕಾರಣ ಏನು ಗೊತ್ತೇ? ಬನ್ನಿ, ಮೂತ್ರಕೋಶದಲ್ಲಿ ಕಲ್ಲು ಬೆಳೆಯಲು ಆಯುರ್ವೇದದ ಶಾಸ್ತ್ರದಲ್ಲಿ ಹೇಳಿರುವ ಕೆಲವು ಪ್ರಮುಖ ಕಾರಣಗಳನ್ನು ತಿಳಿದು ಅದನ್ನು ತಿದ್ದಿಕೊಳ್ಳಲು ಪ್ರಯತ್ನ ಮಾಡೋಣ.

Dr Sadhanashree Column: ಪಂಚಕರ್ಮವು ಆಗದಿರಲಿ ನಿಮ್ಮ ಜೀವನದ ಅಯ್ಯೋ, ನಮ್ಮ ಕರ್ಮ !

ಪಂಚಕರ್ಮವು ಆಗದಿರಲಿ ನಿಮ್ಮ ಜೀವನದ ಅಯ್ಯೋ, ನಮ್ಮ ಕರ್ಮ !

ಇನ್ನೋರ್ವ ಮಹಿಳೆಯು ದೇಹದ ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಯಾವುದೋ ಒಂದು ಆನ್‌ಲೈನ್ ‘ಆಯುರ್ವೇದಿಕ್ ವೇಟ್ ಲಾಸ್ ಸೆಂಟರ್’ ಮೂಲಕ ಪಂಚಕರ್ಮ ಟ್ರೀಟ್ಮೆಂಟ್ ಅನ್ನು ತೆಗೆದುಕೊಂಡ ಒಂದು ಸನ್ನಿವೇಶ. ಟ್ರೀಟ್ಮೆಂಟ್ ಮುಗಿಯುವಷ್ಟರಲ್ಲಿ ಆರರಿಂದ ಏಳು ಕೆ.ಜಿಗಳಷ್ಟು ತೂಕ ಕಡಿಮೆಯಾಗಿದ್ದೇನೋ ನಿಜ. ಆದರೆ, ಟ್ರೀಟ್ಮೆಂಟ್ ಆದ ಸ್ವಲ್ಪ ದಿನಗಳಲ್ಲಿ ಹಲವಾರು ಸಮಸ್ಯೆ ಗಳನ್ನು ಎದುರಿಸಬೇಕಾಯಿತು.

Dr Sadhanashree Column: ಈ ಆಹಾರಗಳನ್ನು ನಿತ್ಯ ಸೇವಿಸಬಾರದು ಗೊತ್ತೇ ?

ಈ ಆಹಾರಗಳನ್ನು ನಿತ್ಯ ಸೇವಿಸಬಾರದು ಗೊತ್ತೇ ?

ರಕ್ತ ಪರೀಕ್ಷೆಗಳು ತೀವ್ರವಾದ ಜೀರ್ಣದ ತೊಂದರೆ, ಎಲೆಕ್ಟ್ರೋಲೈಟ್ ಅಸಮತೋಲನ ಮತ್ತು ಮೂತ್ರ ಪಿಂಡದ ಒತ್ತಡದ ಆರಂಭಿಕ ಚಿಹ್ನೆಗಳನ್ನು ಬಹಿರಂಗಪಡಿಸಿದವು. ಅವರ ನಿತ್ಯ ಆಹಾರದಲ್ಲಿ ಪ್ರೋಟೀನ್ ಸಮೃದ್ಧವಾಗಿದ್ದರೂ ಫೈಬರ್ ಸಮತೋಲನ, ಅಗತ್ಯವಾದ ಒಳ್ಳೆಯ ಜಿಡ್ಡುಗಳು, ಸೂಕ್ಷ್ಮ ಪೋಷಕಾಂಶಗಳು, ಒಳ್ಳೆಯ ಮಸಾಲೆಗಳು ಮತ್ತು ನೀರಿನಂಶದ ಕೊರತೆಯಿರುವ ಅವರ ಆಹಾರವು ಅವರ ಮೇಲೆ ಕೆಟ್ಟಪರಿಣಾಮ ಬೀರಿತು.

Dr Sadhanashree Column: ಸಂಸ್ಕಾರದಿಂದಲೇ ಸಾಧ್ಯ ಸ್ವಯಂ ಸಾಕ್ಷಾತ್ಕಾರ

ಸಂಸ್ಕಾರದಿಂದಲೇ ಸಾಧ್ಯ ಸ್ವಯಂ ಸಾಕ್ಷಾತ್ಕಾರ

ಆಯುರ್ವೇದದಲ್ಲಿ ‘ಸಂಸ್ಕಾರೋ ಹಿ ಗುಣಾಂತರಾಧಾನಮುಚ್ಯತೆ’ ಎಂದು ವಿವರಿಸುತ್ತಾರೆ. ಅಂದರೆ ಮಾನವನಲ್ಲಿ ಹುಟ್ಟಿನಿಂದಲೇ ಇರಬಹುದಾದ ದೋಷಗಳನ್ನು ತೆಗೆದು ಹಾಕಿ, ಕೊರತೆ ಇದ್ದರೆ ಅದನ್ನು ಪೂರ್ತಿ ಮಾಡಿ, ಇನ್ನಿತರ ಅವಶ್ಯಕತೆ ಇರುವ ಗುಣಗಳನ್ನು ತುಂಬಿ, ಒಳ್ಳೆಯ ಗುಣಗಳನ್ನು ಅತಿಶಯ ವಾಗಿ ಬೆಳೆಸುವುದೇ ‘ಸಂಸ್ಕಾರ’. ಇದನ್ನೇ ದೋಷಾಪನಯನ, ಗುಣಾಧಾನ ಮತ್ತು ಹೀನಾಂಗ ಪೂರಣ ಎಂದು ಕರೆಯುತ್ತಾರೆ. ಈ ಉದ್ದೇಶಗಳಿಗಾಗಿಯೇ ಆಚರಿಸಲ್ಪಡುವ ವಿಧಿ ಪೂರ್ವಕ ಪ್ರಕ್ರಿಯೆಗಳನ್ನು ಸಂಸ್ಕಾರವೆಂದು ಕರೆಯುತ್ತಾರೆ

Dr Sadhanashree Column: ಬೇಸಗೆಯ ಬೇಗೆಗೆ ಬೇಯದೆ ಬದುಕುವ ಬಗೆ

ಬೇಸಗೆಯ ಬೇಗೆಗೆ ಬೇಯದೆ ಬದುಕುವ ಬಗೆ

ಇನ್ನು ದಕ್ಷಿಣಾಯನವೆಂಬ ವಿಸರ್ಗ ಕಾಲದಲ್ಲಿ ಸೂರ್ಯನು ಪೃಥ್ವಿಗೆ ನೀರನ್ನು ಬಿಟ್ಟು ಕೊಡುತ್ತಾನೆ. ಈ ಕಾಲದಲ್ಲಿ ಮನುಷ್ಯನ ದೇಹದಲ್ಲಿ ಶಕ್ತಿ, ಬಲ ಮತ್ತು ವೀರ್ಯಗಳು ವೃದ್ಧಿ ಯಾಗುತ್ತದೆ. ಅಂದರೆ ವರ್ಷ ಋತುವಿನಲ್ಲಿ ಅತ್ಯಂತ ಕಡಿಮೆಯಿದ್ದ ಬಲವು ಹೇಮಂತ ಋತುವಿನಲ್ಲಿ ಅತ್ಯಧಿಕವಾಗುತ್ತದೆ.

Dr Sadhanashree Column: ನಿಮ್ಮ ನೇತ್ರಗಳ ಶತ್ರು- ಮಿತ್ರರ ಬಗ್ಗೆ ಬಲ್ಲಿರಾ... ?

ನಿಮ್ಮ ನೇತ್ರಗಳ ಶತ್ರು- ಮಿತ್ರರ ಬಗ್ಗೆ ಬಲ್ಲಿರಾ... ?

ಮಧ್ಯಮ ವಯಸ್ಸಿನಲ್ಲಿ ವೃತ್ತಿಪರ ತೊಂದರೆಗಳಾದ ಕಣ್ಣುರಿ, ಕಣ್ಣುಗಳ ಸುತ್ತ ಕಪ್ಪು ಕಲೆ, ತಲೆನೋವು ನಿದ್ರಾಹೀನತೆ ಸರ್ವೇಸಾಮಾನ್ಯವಾಗಿದೆ. ಕೆಲವರ ಜತೆ ನಾನು ಚರ್ಚೆ ಮಾಡುವಾಗ, ಕಣ್ಣಿನ ಆರೋಗ್ಯದ ಕುರಿತಾಗಿ ಮಾತನಾಡುವಾಗ ಅವರು, ‘ಈಗಿನ ಕಾಲದಲ್ಲಿ ಕನ್ನಡಕ ಹಾಕಿ ಕೊಳ್ಳಲೇಬೇಕು, ಏನೂ ಮಾಡಕ್ಕಾಗಲ್ಲ. ನಾರ್ಮಲ್ ಆಗ್ಬಿಟ್ಟಿದೆ!’ ಅಂತ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.

Dr Sadhanashree Column: ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ?!

ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ ?!

ಭಾರತದಲ್ಲಿ, ಅದರಲ್ಲೂ ವಿಶೇಷವಾಗಿ ಕರ್ನಾಟಕದಲ್ಲಿ ಅಕ್ಕಿಯೇ ಪ್ರಧಾನವಾದ ದ್ರವ್ಯ. ಎಲ್ಲರ ಮನೆ ಯಲ್ಲೂ ಅಕ್ಕಿಯ ಬಳಕೆ ಸರ್ವೇಸಾಮಾನ್ಯ. ಆದರೆ ಈ ಅಕ್ಕಿಯ ಬಗ್ಗೆ ನಮಗೆಷ್ಟು ಗೊತ್ತು? ಯಾವ ರೀತಿ ಬಳಸಿದರೆ ಯಾವ ಪರಿಣಾಮವಾಗುತ್ತದೆ ಎಂಬ ಅರಿವಿದೆಯೇ? ನಮಗೆ ಈ ಜ್ಞಾನ ವಿಲ್ಲದ ಕಾರಣವೇ ಅಕ್ಕಿಯ ಮೇಲೆ ಬರುವ ಅಪವಾದಗಳಿಗೆ ನಾವು ತಲೆ ಬಾಗಿ ಅಕ್ಕಿಯನ್ನು ನಮ್ಮ ದಿನನಿತ್ಯದ ಆಹಾರ ದಿಂದ ವರ್ಜಿಸುವ ದಿಕ್ಕಿನಲ್ಲಿ ಹೆಜ್ಜೆ ಹಾಕುತ್ತಿರುವುದು.

Dr Sadhanashree Column: ಹೃದಯ ಆಗಲಿ ನಿಮ್ಮ ಜೀವದ ಗೆಳೆಯ

ಹೃದಯ ಆಗಲಿ ನಿಮ್ಮ ಜೀವದ ಗೆಳೆಯ

ಹೃದ್ರೋಗದ ಕಾರಣಗಳನ್ನು ತಿಳಿದು ರೋಗ ಬಾರದಂತೆ ಮುನ್ನೆಚ್ಚರಿಕೆಯಿಂದಿರಲು ಸರಿಯಾದ ತಿಳಿವಳಿಕೆಯ ಅವಶ್ಯಕತೆಯಿದೆ. ಹಾಗಾಗಿ ಹೃದ್ರೋಗ ವಿಷಯದ ಆಯುರ್ವೇದೋಕ್ತ ಜ್ಞಾನ ಸಂಪತ್ತು ನಿಮ್ಮ ಮುಂದೆ. ಸ್ನೇಹಿತರೆ, ಕಾರಣವಿಲ್ಲದೆ ಕಾರ್ಯವಿಲ್ಲ! ಯಾವ ರೋಗವೂ ಕಾರಣ ವಿಲ್ಲದೆ ಬರದು. ಅಂತೆಯೇ ಹೃದ್ರೋಗವೂ! ಹಾಗಾಗಿ, ಹೃದಯವನ್ನು ರಕ್ಷಿಸಿಕೊಳ್ಳುವ ನಿಟ್ಟಿ ನಲ್ಲಿ ಅದಕ್ಕೆ ತೊಂದರೆ ಕೊಡುವ ಕಾರಣಗಳಿಂದ ದೂರವಿರುವುದೇ ಮೊದಲ ಹೆಜ್ಜೆ

Dr Sadhanashree Column: ಫಲಗಳ ರಾಜ ಮಾವು, ಆದರೆ ಅವನು ತರದಿರಲಿ ನೋವು

ಫಲಗಳ ರಾಜ ಮಾವು, ಆದರೆ ಅವನು ತರದಿರಲಿ ನೋವು

ವಿವಿಧ ರೀತಿಯ ರಾಸಾಯನಿಕ ವಸ್ತುಗಳನ್ನು ಬಳಸಿ ಕೃತ್ರಿಮವಾಗಿ ಹಣ್ಣು ಮಾಡಿದ ಮಾವಿನ ಗುಣಗಳು ಬೇರೆಯದಾಗಿರುತ್ತವೆ. ಕ್ಯಾಲ್ಸಿಯಂ ಕಾರ್ಬೈಡ್/ ಎಥಿಲಿನ್ ಗ್ಯಾಸ್ ಮುಂತಾದ ರಾಸಾ ಯನಿಕಗಳ ಉಪಯೋಗವು ಹಣ್ಣಿನ ಗುಣಮಟ್ಟವನ್ನು ಕಡಿಮೆ ಮಾಡಿ, ಆರೋಗ್ಯಕ್ಕೆ ಹಾನಿಕರ ವಾಗುವಂತೆ ಮಾಡುತ್ತದೆ. ಈ ರೀತಿಯ ಹಣ್ಣುಗಳು ದೇಹದಲ್ಲಿ ಉಷ್ಣತೆಯನ್ನು ಉಂಟುಮಾಡಿ ಶರೀರಬಾವು, ಉರಿಯೂತ, ಕಣ್ಣಿನ ಉರಿ, ನೀರು ಜಿನುಗು ವುದು ಇತ್ಯಾದಿಗಳಲ್ಲದೆ ಕ್ಯಾನ್ಸರ್‌ ನಂಥ ರೋಗ ಗಳಿಗೂ ಕಾರಣವಾಗುತ್ತದೆ

Dr Sadhanashree Column: ದಶವಿಧ ಪಾಪಗಳು ತರದಿರಲಿ ಸ್ವಾಸ್ಥ್ಯಕ್ಕೆ ಧಕ್ಕೆ !

ದಶವಿಧ ಪಾಪಗಳು ತರದಿರಲಿ ಸ್ವಾಸ್ಥ್ಯಕ್ಕೆ ಧಕ್ಕೆ !

ಸದಾ ಒಳ್ಳೆಯ ಕರ್ಮಗಳಲ್ಲಿ ತೊಡಗುವುದರಿಂದ ಆರೋಗ್ಯದ ಮೇಲೆ ಆಗುವ ಪ್ರಭಾವಗಳು ಹೀಗಿವೆ: ಒಳ್ಳೆಯ ಕೆಲಸಗಳು ದೇಹದಲ್ಲಿರುವ ಸ್ಟ್ರೆಸ್ ಹಾರ್ಮೋನ್- ಕಾರ್ಟಿಸಾಲ್ ಅನ್ನು ಕಡಿಮೆ ಮಾಡಿ ಒತ್ತಡ ಮತ್ತು ಆತಂಕವನ್ನು ನಿವಾರಿಸುತ್ತವೆ. ‘ಹ್ಯಾಪಿ ಹಾರ್ಮೋನ್’ ಎಂದೇ ಕರೆಯಲ್ಪಡುವ ಎಂಡಾರ್ಫಿನ್ ಅನ್ನು ದೇಹದಲ್ಲಿ ಸ್ರವಿಸಿ ನಮ್ಮ ಮಾನಸಿಕ ಸ್ಥಿತಿಯನ್ನು ಉತ್ತಮ ಗೊಳಿಸುವುದರ ಜತೆಗೆ ಮುದವನ್ನು ನೀಡುತ್ತವೆ.

Dr Sadhanashree Column: ಆಹಾರ ಸೇವನೆ ಎಂಬ ಯಜ್ಞದ ಹತ್ತು ನಿಯಮಗಳು

ಆಹಾರ ಸೇವನೆ ಎಂಬ ಯಜ್ಞದ ಹತ್ತು ನಿಯಮಗಳು

ಹೋಮದ ಸಂಪೂರ್ಣ ಫಲ ಪ್ರಾಪ್ತಿಯಾಗಲು ಕಟ್ಟುನಿಟ್ಟಾದ ನಿಯಮ-ನಿಷ್ಠೆಗಳನ್ನು ಹೇಗೆ ಪಾಲಿಸಬೇಕೋ, ಹಾಗೆಯೇ ನಾವು ಸೇವಿಸುವ ಆಹಾರದಿಂದ ಸಂಪೂರ್ಣ ಸ್ವಾಸ್ಥ್ಯದ ಸುಖ ವನ್ನು ಸವಿಯಬೇಕಾದರೆ ಆಹಾರ ಸೇವನೆಯ ನಿಯಮಗಳನ್ನು ಪಾಲಿಸಲೇಬೇಕು. ಹಾಗಾದರೆ ನಾವು ಸೇವಿಸುವ ಆಹಾರಕ್ಕೆ ಮತ್ತು ನಮ್ಮ ಜಠರಾಗ್ನಿಗೆ ಏಕೆ ಇಷ್ಟೊಂದು ಮಹತ್ವ ಗೊತ್ತೇ? ಚರಕಾಚಾರ್ಯರು ಹೇಳುವಂತೆ, ಶರೀರಬಲ, ಆರೋಗ್ಯ ಹಾಗೂ ಆಯಸ್ಸು ನಮ್ಮ ದೇಹದಲ್ಲಿ ರುವ ಅಗ್ನಿಯನ್ನೇ ಅವಲಂಬಿಸಿದೆ

Dr Sadhanashree Column: ಬಿಸಿಲಿನ ಬೇಗೆಯಿಂದ ಬಚಾವಾಗುವ ಬಗೆ

ಬಿಸಿಲಿನ ಬೇಗೆಯಿಂದ ಬಚಾವಾಗುವ ಬಗೆ

ಆಯುರ್ವೇದ ಸಮ್ಮತವಾದ ಕೆಲವು ವಿಶಿಷ್ಟ ಖಾದ್ಯಗಳನ್ನು ಇಂದು ನಿಮ್ಮ ಜತೆ ಹಂಚಿ ಕೊಳ್ಳಲು ಇಷ್ಟಪಡುತ್ತೇನೆ. ಈ ಖಾದ್ಯಗಳು ಶಿವಮೊಗ್ಗದ ಹಿರಿಯ ಆಯುರ್ವೇದ ವೈದ್ಯೆ ಡಾ. ನಿರ್ಮಲಾ ರವಿರಾಜ್‌ರವರ ಪಾಕಶಾಲೆಯಲ್ಲಿ ತಯಾರಾದ ಔಷಧಿಯ ಆಹಾರಗಳು. ಇವು ಈ ಬಿಸಿಲಿನಲ್ಲಿ ತಂಪಾಗಿಸಿ ಕೊಳ್ಳಲು ಹಾಗೂ ಹಮಾನದ ವ್ಯತ್ಯಾಸದಿಂದ ಆಗುವ ತೊಂದರೆ ಗಳಿಂದ ಆರೋಗ್ಯವನ್ನು ಕಾಪಾಡಿಕೊಳ್ಳಲು ಸಹಾಯಕ. ಆದರೆ, ನೆನಪಿಡಿ!

Dr Sadhanashree Column: ಆಂತರಿಕ ರಿಪುಗಳು ಅರಿಷದ್ವರ್ಗವಾದರೆ, ಬಾಹ್ಯರಿಪುಗಳಾರು ಬಲ್ಲಿರಾ ?

ಆಂತರಿಕ ರಿಪುಗಳು ಅರಿಷದ್ವರ್ಗವಾದರೆ, ಬಾಹ್ಯರಿಪುಗಳಾರು ಬಲ್ಲಿರಾ ?

ಯಾವುದೋ ಒಂದು ಡ್ರೈನೇಜ್ ಪೈಪ್‌ನಲ್ಲಿ ಸರಾಗವಾಗಿ ಹರಿದುಹೋದಂತೆ ನಮ್ಮ ದೇಹ ದಲ್ಲಿ ಅದು ಹರಿದುಹೋಗಲು ಸಾಧ್ಯವಿಲ್ಲ. ಯಾಕೆಂದರೆ ನಮ್ಮ ದೇಹವು ಒಂದು ಜೈವಿಕ ವ್ಯವಸ್ಥೆ. ನಾವು ನೀರು ಕುಡಿದ ಕೂಡಲೇ ತಕ್ಷಣವೇ ಅದು ಸಂಪರ್ಕಕ್ಕೆ ಬರುವುದು ನಮ್ಮ ಉದರದಲ್ಲಿ ಸ್ಥಿತವಾಗಿರುವ ಅಗ್ನಿಯ ಜತೆ

Dr Sadhanashree Column: ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವ ಅಭ್ಯಾಸವಿದೆಯಾ ?

ಬೇಸಿಗೆಯಲ್ಲಿ ಮಜ್ಜಿಗೆ ಕುಡಿಯುವ ಅಭ್ಯಾಸವಿದೆಯಾ ?

ಎಲ್ಲರಿಗೂ, ನಿತ್ಯವೂ, ಮೂರು ಹೊತ್ತೂ ಆಹಾರದಲ್ಲಿ ಆಗಷ್ಟೇ ಫ್ರಿಜ್‌ನಿಂದ ತೆಗೆದ ಗಟ್ಟಿ ಮೊಸರು ಬೇಕೇ ಬೇಕು. ತಿಂಡಿಯ ಹೊತ್ತಿನಲ್ಲಿ ಚಪಾತಿ, ಅವಲಕ್ಕಿ, ಉಪ್ಪಿಟ್ಟು, ಪರಾಠ, ದೋಸೆ, ರೊಟ್ಟಿ- ಎಲ್ಲದಕ್ಕೂ ಮೊಸರು ಬೇಕು. ಮಧ್ಯಾಹ್ನವು ಊಟದ ಕೊನೆಯಲ್ಲಿ ಅನ್ನದ ಜತೆ ಮೊಸರು ಮತ್ತು ಉಪ್ಪಿನಕಾಯಿ ಸೇವಿಸುವುದು ಫೇವರಿಟ್!

Dr Sadhanashree Column: ಊಟವಾದ ಮೇಲೆ ಬಾಳೆಹಣ್ಣನ್ನು ತಿನ್ನಬಾರದು

ಊಟವಾದ ಮೇಲೆ ಬಾಳೆಹಣ್ಣನ್ನು ತಿನ್ನಬಾರದು

ಬಾಳೆಹಣ್ಣು, ಕಬ್ಬು, ಕಮಲ ಕಂದ, ಕಮಲಬೀಜಗಳನ್ನು ಊಟದ ಶುರುವಿನಲ್ಲಿ ಸೇವಿಸ ಬೇಕು. ಇವು, ವಿಶೇಷವಾಗಿ ಬಾಳೆಹಣ್ಣು ಮತ್ತು ಕಬ್ಬುಗಳು ರುಚಿಯಲ್ಲಿ ಸಿಹಿ ಮತ್ತು ಜೀರ್ಣಕ್ಕೆ ಜಡ- ಎಂದರೆ ಇವು ಗಳು ಜೀರ್ಣವಾಗುವುದಕ್ಕೆ ಹೆಚ್ಚು ಸಮಯವನ್ನು ತೆಗೆದು ಕೊಳ್ಳುತ್ತವೆ

Dr Sadhanashree Column: 'ಪ್ರಯಾಣʼದಲ್ಲಿ ಪಾಲಿಸಿ, ಆಯುರ್ವೇದದ ʼಪ್ರಯಾಣʼ

ಪ್ರಯಾಣʼದಲ್ಲಿ ಪಾಲಿಸಿ, ಆಯುರ್ವೇದದ ʼಪ್ರಯಾಣʼ

ಮೇಳದಲ್ಲಿ ಲಕ್ಷಾಂತರ ಭಕ್ತರು, ಸಾಧು-ಸಂತರು, ಪೀಠಾಧಿಪತಿಗಳು ಮತ್ತು ಜನಸಾಮಾನ್ಯರು ಸೇರಿ ಕೊಂಡು ನದಿಯಲ್ಲಿ ಸ್ನಾನ ಮಾಡುತ್ತಾರೆ. ಇದು ಪಾಪವನ್ನು ತೊಡೆದು, ಮೋಕ್ಷವನ್ನು ನೀಡುತ್ತದೆ ಎಂಬ ನಂಬಿಕೆಯಿದೆ. ಇದು ಕೇವಲ ಧಾರ್ಮಿಕ ಕಾರ್ಯಕ್ರಮವಲ್ಲದೆ, ವೈದಿಕ ಸಂಸ್ಕೃತಿ, ಯೋಗ, ಧ್ಯಾನ ಮತ್ತು ಶ್ರದ್ಧಾಳು ಗಳ ಉತ್ಸಾಹವನ್ನು ಪ್ರದರ್ಶಿಸುವ ಅಚ್ಚುಕಟ್ಟಾದ ವೇದಿಕೆಯಾಗಿದೆ

Dr Sadhanashree Column: ಶಿರಸ್ಸೆಂಬ ಹೊನ್ನ ಕಳಸದ ಕಾಳಜಿ

ಶಿರಸ್ಸೆಂಬ ಹೊನ್ನ ಕಳಸದ ಕಾಳಜಿ

ನಮ್ಮ ದೇಹವನ್ನು ಒಂದು ಬಲಿಷ್ಠವಾದ ಮರಕ್ಕೆ ಹೋಲಿಸಿದರೆ ಅದರ ಸರ್ವೋನ್ನತ ಭಾಗದ ಲ್ಲಿರುವ ನಮ್ಮ ಶಿರಸ್ಸೇ ಆ ಮರದ ಬೇರುಗಳು. ಕೊಂಬೆಗಳಂತೆ ಇರುವುದು ಕೈಕಾಲು ಗಳು ಮತ್ತು ಮಧ್ಯಮ ಶರೀರ. ಮರದ ರೆಂಬೆಕೊಂಬೆಗಳು ಬಾಡಿ ಉದುರಿ ಹೋದರೆ ಮರದ ಅಸ್ತಿತ್ವಕ್ಕೆ ಭಯವಿಲ್ಲ

Dr Sadhanashree Column: ನಿಧಾನವೇ ಆಯುರ್ವೇದದ ವಿಧಾನ ?

ನಿಧಾನವೇ ಆಯುರ್ವೇದದ ವಿಧಾನ ?

ಆಯುರ್ವೇದ ಚಿಕಿತ್ಸೆ ಅಂದರೆ ಅಜ್ಜಿ ಹೇಳುವ ಅಡುಗೆ ಮನೆಯ ಚಿಕಿತ್ಸೆಗಳು. ಆಯುರ್ವೇದ ಔಷಧಿ ತೆಗೆದು ಕೊಂಡರೆ ಗ್ಯಾಂರಟಿ ಗಂಡು ಮಗು ಆಗುತ್ತೆ. ಆಯುರ್ವೇದ ವೈದ್ಯರು ಅಂದ್ರೆ ಅಳಲೇಕಾಯಿ ಪಂಡಿತರು. ವಾತ-ಪಿತ್ತ-ಕಫ ಬರಿ ಇಮ್ಯಾಜಿನೇಷನ್ ಅಷ್ಟೇ… ಇತ್ಯಾದಿ ಇತ್ಯಾದಿ … ಇವಿಷ್ಟು ಕಲ್ಪನೆಗಳು ಅಥವಾ ಅಭಿಪ್ರಾಯಗಳು ಒಂದು ಕಡೆಯಾದರೆ ಮತ್ತೊಂದು ಕಡೆ ಇರುವ ಬಹಳ ಮುಖ್ಯವಾದ ಅಭಿಪ್ರಾಯವೆಂದರೆ ಆಯುರ್ವೇದ ಔಷಧಿಗಳು ಮತ್ತು ಚಿಕಿತ್ಸೆಗಳು ಬಹಳ ನಿಧಾನ.

Dr Sadhanashree Column: ಆಯುರ್ವೇದದಲ್ಲಿ ಕೂದಲಿನ ಆರೈಕೆ ಹೇಗೆ ?

ಆಯುರ್ವೇದದಲ್ಲಿ ಕೂದಲಿನ ಆರೈಕೆ ಹೇಗೆ ?

ಮೊನ್ನೆ ಯಾವುದೋ ಒಂದು ಮದುವೆಯ ಸಮಾರಂಭಕ್ಕೆ ಹೋಗಿದ್ದೆ. ಮಂಟಪದಲ್ಲಿ ಗಂಡು ಹೆಣ್ಣಿನ ಶಾಸಗಳು ಬಹಳ ಉತ್ಸುಕತೆಯಿಂದ ನಡೆದಿತ್ತು. ಕೆಳಗೆ ಕುಳಿತಿದ್ದ ಹಿರಿಯರೂ ಸಹ ಮದುವೆಯ ಶಾಸ್ತ್ರದಲ್ಲಿ ತಲ್ಲೀನರಾಗಿ ಆಆನಂದವನ್ನು ಮತ್ತೆ ಮೆಲಕು ಹಾಕುತ್ತಿದ್ದರು. ಆದರೆ, ಇದೇ ಮಂಟಪದಲ್ಲಿ ಹಿಂದೆ ಮತ್ತೊಂದು ಪುಟ್ಟ ವಿಶಿಷ್ಟ ಸಮಾರಂಭವೊಂದು ನಡೆದಿತ್ತು. ಏನಪ್ಪಾ ಅದು ಅಂತ ನೋಡಿದರೆ, ಹೆಂಗಸರ ಮತ್ತು ಹೆಣ್ಣು ಮಕ್ಕಳ ಒಂದು ಪುಟ್ಟ ಚರ್ಚಾ ಕೂಟ.

Dr Sadhanashree Column: ಆಯುರ್ವೇದವು ಮಾಂಸಾಹಾರದ ವಿರೋಧಿಯೇ ?

ಆಯುರ್ವೇದವು ಮಾಂಸಾಹಾರದ ವಿರೋಧಿಯೇ ?

ಆಯುರ್ವೇದವೆಂಬ ಜೀವ ವಿಜ್ಞಾನ ಮತ್ತು ಜೀವನ ಜ್ಞಾನದ ಕುರಿತಾಗಿ ಜನರಲ್ಲಿ ಜ್ಞಾನಕ್ಕಿಂತ ಹೆಚ್ಚಾಗಿ ಅಜ್ಞಾವೇ ತುಂಬಿಹೋಗಿದೆ. ತಮಗಿರುವ ಅಲ್ಪಸ್ವಲ್ಪ ತಿಳಿವಳಿಕೆ ಮತ್ತು ಕಲ್ಪನೆಯ ಆಧಾರದ ಮೇಲೆಯೇ ಆಯುರ್ವೇದವನ್ನು ಅಳೆದು ತೂಗುವ ಸಂದರ್ಭಗಳನ್ನು ನಾನು ಎಷ್ಟೋ ಬಾರಿ ನೋಡಿದ್ದೇನೆ. ಅರ್ಧ ಬೆಂದ ಅರಿವಿನ ಸಹಾಯದಿಂದ, ಆಧಾರವಿಲ್ಲದೆ ಇಲ್ಲಸಲ್ಲದ ಆರೋಪಗಳನ್ನು ಎಸೆಯುವ ಜನರ ಸಾಹಸವು ಸೋಶಿಯಲ್ ಮೀಡಿಯಾದಲ್ಲಿ ಸರ್ವೇಸಾಮಾನ್ಯವಾಗಿ ಬಿಟ್ಟಿದೆ.