Dr Sadhanashree Column: ಪಂಚಕರ್ಮವು ಆಗದಿರಲಿ ನಿಮ್ಮ ಜೀವನದ ಅಯ್ಯೋ, ನಮ್ಮ ಕರ್ಮ !
ಇನ್ನೋರ್ವ ಮಹಿಳೆಯು ದೇಹದ ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಯಾವುದೋ ಒಂದು ಆನ್ಲೈನ್ ‘ಆಯುರ್ವೇದಿಕ್ ವೇಟ್ ಲಾಸ್ ಸೆಂಟರ್’ ಮೂಲಕ ಪಂಚಕರ್ಮ ಟ್ರೀಟ್ಮೆಂಟ್ ಅನ್ನು ತೆಗೆದುಕೊಂಡ ಒಂದು ಸನ್ನಿವೇಶ. ಟ್ರೀಟ್ಮೆಂಟ್ ಮುಗಿಯುವಷ್ಟರಲ್ಲಿ ಆರರಿಂದ ಏಳು ಕೆ.ಜಿಗಳಷ್ಟು ತೂಕ ಕಡಿಮೆಯಾಗಿದ್ದೇನೋ ನಿಜ. ಆದರೆ, ಟ್ರೀಟ್ಮೆಂಟ್ ಆದ ಸ್ವಲ್ಪ ದಿನಗಳಲ್ಲಿ ಹಲವಾರು ಸಮಸ್ಯೆ ಗಳನ್ನು ಎದುರಿಸಬೇಕಾಯಿತು.


ಸ್ವಾಸ್ಥ್ಯವೆಂಬ ಸ್ವಾತಂತ್ರ್ಯ
ಒಬ್ಬ ಮಹಿಳೆಯು ಒಮ್ಮೆ ಯಾವುದೋ ರೆಸಾರ್ಟ್ಗೆ ತನ್ನ ಕುಟುಂಬದ ಜತೆಗೆ ರಜೆಯ ಸಮಯ ದಲ್ಲಿ ಹೋಗಿದ್ದರು. ಬೇಸಿಗೆಯ ಕಾಲವದು, ರೆಸಾರ್ಟ್ನಲ್ಲಿ ‘ಆಯುರ್ವೇದಿಕ್ ಸ್ಪಾ’ ಎಂಬ ವಿಶೇಷತೆ ಯನ್ನು ನೋಡಿ ತಾವು ಒಂದು ಬಾರಿಯಾದರೂ ಆಯುರ್ವೇದ ಚಿಕಿತ್ಸೆಯನ್ನು ಪಡೆಯಬೇಕೆಂಬ ಆಸೆಯಿಂದ ಅಲ್ಲಿ ಟ್ರೀಟ್ಮೆಂಟ್ ತೆಗೆದುಕೊಳ್ಳಲು ನಿರ್ಧರಿಸಿದರು. ರಾತ್ರಿ ಪ್ರಯಾಣ ಮಾಡಿ ಬಂದ ಮರುದಿನವೇ ಟ್ರೀಟ್ಮೆಂಟ್ಗಾಗಿ ಹಾಜರಾದರು. ರೆಸಾರ್ಟ್ನಲ್ಲಿ ಕೇಳಬೇಕೇ? ಬಫೆಟ್ ಬ್ರೇಕ್ ಫಾಸ್ಟ್. ಬಗೆಬಗೆಯ ತಿಂಡಿಗಳು. ಬೆಳಗ್ಗಿನ ಈ ವೈಭೋಗದ ಬ್ರೇಕ್- ಮುಗಿಸಿಕೊಂಡು ಒಂದು ಗಂಟೆಯ ನಂತರ ಟ್ರೀಟ್ಮೆಂಟ್ಗೆ ಹೋದರು. ಫೈವ್ ಸ್ಟಾರ್ ರೆಸಾರ್ಟ್ನ ವ್ಯವಸ್ಥೆಯು ಅದ್ಭುತವಾಗಿತ್ತು. ಸುಮಾರು ಎರಡು ಗಂಟೆಗಳ ಕಾಲದ ‘ಆಯುರ್ವೇದಿಕ್ ಸ್ಪಾ’ ಟ್ರೀಟ್ಮೆಂಟ್ ಮುಗಿಸಿಕೊಂಡು ಬಂದರು. ನಂತರ ಕೆಲದಿನಗಳ ಕಾಲ ಕುಟುಂಬದ ಜತೆ ಸುಂದರವಾದ ಸಮಯವನ್ನು ಕಳೆದು ಬೆಂಗಳೂರಿಗೆ ವಾಪಸ್ ಬಂದರು. ಬಂದ ಕೆಲವೇ ದಿನಗಳಲ್ಲಿ ಆರೋಗ್ಯದಲ್ಲಿ ಏರುಪೇರು ಗಮನಿಸಿದರು.
ಇನ್ನೋರ್ವ ಮಹಿಳೆಯು ದೇಹದ ಹೆಚ್ಚಿನ ತೂಕವನ್ನು ಕಡಿಮೆ ಮಾಡಿಕೊಳ್ಳಲು ಯಾವುದೋ ಒಂದು ಆನ್ಲೈನ್ ‘ಆಯುರ್ವೇದಿಕ್ ವೇಟ್ ಲಾಸ್ ಸೆಂಟರ್’ ಮೂಲಕ ಪಂಚಕರ್ಮ ಟ್ರೀಟ್ಮೆಂಟ್ ಅನ್ನು ತೆಗೆದುಕೊಂಡ ಒಂದು ಸನ್ನಿವೇಶ. ಟ್ರೀಟ್ಮೆಂಟ್ ಮುಗಿಯುವಷ್ಟರಲ್ಲಿ ಆರರಿಂದ ಏಳು ಕೆ.ಜಿಗಳಷ್ಟು ತೂಕ ಕಡಿಮೆಯಾಗಿದ್ದೇನೋ ನಿಜ. ಆದರೆ, ಟ್ರೀಟ್ಮೆಂಟ್ ಆದ ಸ್ವಲ್ಪ ದಿನಗಳಲ್ಲಿ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಯಿತು.
ಇದನ್ನೂ ಓದಿ: Dr Sadhanashree Column: ಸಂಸ್ಕಾರದಿಂದಲೇ ಸಾಧ್ಯ ಸ್ವಯಂ ಸಾಕ್ಷಾತ್ಕಾರ
ಸ್ನೇಹಿತರೇ, ಈ ರೀತಿಯಾದ ಎಷ್ಟೋ ಉದಾಹರಣೆಗಳನ್ನು ಸರ್ವೇಸಾಮಾನ್ಯವಾಗಿ ಕಾಣಬಹುದು. ನಾವು ದಿನನಿತ್ಯ ಆಯುರ್ವೇದ ಕ್ಲಿನಿಕ್ನಲ್ಲಿ ಪೇಷಂಟ್ಗಳನ್ನು ನೋಡುವಾಗ ಇಂತಹ ಅನಾಹುತ ಗಳನ್ನು ಕೇಳುತ್ತೇವೆ. ಆಯುರ್ವೇದ ಚಿಕಿತ್ಸೆಗಳು ಹಾಗೂ ಸ್ಪಾ ಟ್ರೀಟ್ಮೆಂಟ್ ಗಳು ಒಂದೇ ತರಹ ಎಂಬುದು ಜನರ ನಂಬಿಕೆ. ಮನಸ್ಸಿಗೆ ಬಂದಾಗಲೆ ಅಥವಾ ಬಿಡುವಿನ ಸಮಯ ಸಿಕ್ಕಾಗಲೆ ಹೋಗಿ ಒಂದು ಆಯುರ್ವೇದಿಕ್ ಬಾಡಿ ಮಸಾಜ್ ಮಾಡಿಸಿಕೊಂಡು ಬರುವುದು ಹಾವಳಿಯಾಗಿ ಬಿಟ್ಟಿದೆ.
ಕ್ಲಿನಿಕ್ಕಿಗೆ ಹಲವಾರು ಜನ ಕರೆಯನ್ನು ಮಾಡಿ, ‘ನನಗೆ ಸೊಂಟ ನೋವಿದೆ. ಒಂದು ದಿನದ ಆಯುರ್ವೇದಿಕ್ ಸ್ಪಾ ಮಸಾಜ್ ನಿಮ್ಮಲ್ಲಿ ಸಿಗುತ್ತದೆಯಾ?’ ಎಂಬ ಹಾಸ್ಯಾಸ್ಪದವಾದ ಪ್ರಶ್ನೆಗಳನ್ನು ಕೇಳುವವರಿದ್ದಾರೆ. ‘ನನಗೆ ಮೂರು ದಿನಗಳ ಬಿಡುವಿನ ಸಮಯವಿದೆ, ಆಯುರ್ವೇದಿಕ್ ಡಿಟಾಕ್ಸ್ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬಹುದಾ?’ ಎನ್ನುವ ಬೇಜವಾಬ್ದಾರಿ ಪ್ರಶ್ನೆಗಳು ಬರುವುದು ಉಂಟು.
‘ವಾರಕ್ಕೊಮ್ಮೆ ಔಷಧಿಯನ್ನು ಸೇವಿಸಿ ಬಾಡಿಯನ್ನು ಕ್ಲೀನ್ ಮಾಡಿಕೊಳ್ಳುವ ವಿಧಾನವನ್ನು ಸಜೆ ಮಾಡುತ್ತೀರಾ’ ಎಂದು ಕೇಳುವವರಿದ್ದಾರೆ. ಆಯುರ್ವೇದವೆಂದರೆ ಕೇವಲ ಬಾಡಿ ಮಸಾಜ್ ಗಳನ್ನು ಮಾಡುವ ಒಂದು ವ್ಯವಸ್ಥೆ ಎಂದು ನಂಬಿದವರು ಕೆಲವರಿದ್ದಾರೆ. ಹಾಗಾದರೆ ಆಯುರ್ವೇದದ ಪಂಚಕರ್ಮ ಎಂದರೇನು? ಅದು ಮತ್ತು ಸ್ಪಾ ನಲ್ಲಿ ಮಾಡುವ ಚಿಕಿತ್ಸೆಗಳು ಒಂದೇನಾ? ಪಂಚ ಕರ್ಮ ಚಿಕಿತ್ಸೆಯನ್ನು ಮಾಡಿಸಿಕೊಳ್ಳಬೇಕಾದಾಗ ನೆನಪಿನಲ್ಲಿಡಬೇಕಾದ ಅಂಶಗಳೇನು? ಎಂಬ ವಿಷಯಗಳ ಬಗ್ಗೆ ಇಂದಿನ ಲೇಖನದಲ್ಲಿ ಸ್ವಲ್ಪ ಗಮನಹರಿಸೋಣ.

ಮೊಟ್ಟ ಮೊದಲ ಪ್ರಶ್ನೆ-ಪಂಚಕರ್ಮ ಎಂದರೇನು? ಸ್ನೇಹಿತರೇ ಸಾಮಾನ್ಯವಾಗಿ ನಾವೆಲ್ಲರೂ ಕೇಳಿಯೇ ಇರುತ್ತೇವೆ, ‘ಆಯುರ್ವೇದವು ರೋಗಗಳನ್ನು ಬೇರಿನಿಂದ ಕಿತ್ತೊಗೆಯುತ್ತದೆ’ ಎಂದು. ಇದರ ವಿಶ್ಲೇಷಣೆಯನ್ನು ಮಾಡೋಣ. ನಮ್ಮ ದೇಹದಲ್ಲಿ ತ್ರಿದೋಷಗಳ, ಅಂದರೆ ವಾತ-ಪಿತ್ತ-ಕ-ಗಳ ಒಂದು ಜೈವಿಕ ವ್ಯವಸ್ಥೆಯನ್ನು ಕಾಣಬಹುದು. ದೇಹ-ಇಂದ್ರಿಯ- ಮನಸ್ಸುಗಳ ಕ್ರಿಯೆ ನಿರ್ದೇಶಿಸುವ, ನಿಯಂತ್ರಿಸುವ ಸಂಚಾಲಕ ವರ್ಗವೇ ಈ ತ್ರಿದೋಷಗಳು. ಕಣ್ಣು ಮಿಟುಕಿಸುವು ದರಿಂದ ಹಿಡಿದು ಪ್ರಸವದಲ್ಲಿ ಮಗುವಿನ ಜನನವಾಗುವ ಕ್ರಿಯೆಯ ತನಕ ಎಲ್ಲವೂ ನಡೆಯುವು ದಕ್ಕೆ ಈ ತ್ರಿದೋಷಗಳೇ ಕಾರಣ.
ನಮ್ಮ ದಿನನಿತ್ಯದ ಎಲ್ಲ ಚಟುವಟಿಕೆಗಳು ಸುಸೂತ್ರವಾಗಿ ನಡೆಯಲು ಹೇಗೆ ಈ ತ್ರಿದೋಷಗಳು ಸೂತ್ರಧಾರಿಗಳೋ, ಹಾಗೆಯೇ ರೋಗ ಬರುವುದಕ್ಕೂ ಈ ದೋಷಗಳೇ ಕಾರಣ. ಆಯುರ್ವೇದದಲ್ಲಿ ‘ರೋಗಸ್ತು ದೋಷವೈಷಮ್ಯಮ’ ಅಂತ ಹೇಳಲಾಗಿದೆ. ಅಂದರೆ, ನಮ್ಮ ಆಹಾರ-ವಿಹಾರ-ವ್ಯವಹಾರಗಳು ಕೆಟ್ಟಾಗ ಅದರ ಪರಿಣಾಮವಾಗಿ ಈ ದೋಷಗಳ ಸಹಜ ಕ್ರಿಯೆಗಳು ಹಾಳಾಗುತ್ತವೆ.
ಈ ದೋಷಗಳು ತಮ್ಮ ಪ್ರಾಕೃತಾವಸ್ಥೆಯಿಂದ ವಿಕೃತವಾದಾಗ ದೇಹದಲ್ಲಿ ರೋಗಗಳು ಪ್ರಾರಂಭ ವಾಗುತ್ತದೆ. ಆಯುರ್ವೇದದಲ್ಲಿ ಚಿಕಿತ್ಸೆಯ ಪ್ರಪ್ರಥಮ ಉದ್ದೇಶವೆಂದರೆ ಈ ವಿಕೃತವಾದ ದೋಷ ವನ್ನು ಪುನಃ ಪ್ರಾಕೃತಾವಸ್ಥೆಗೆ ತರುವುದು. ‘ದೋಷಸಾಮ್ಯಂ ಅರೋಗತಾ’ ಅಂದರೆ ಈ ದೋಷಗಳ ಸಮತೆಗೆ ಮರಳಿದರೆ ಅದೇ ಆರೋಗ್ಯದ ಸ್ಥಿತಿ.
ಹಾಗಾಗಿ ಬೇರೆ ಬೇರೆ ಔಷಧಿ-ಉಪಚಾರಗಳ ಮೂಲಕ ಈ ದೋಷಗಳನ್ನು ಮತ್ತೆ ಪ್ರಾಕೃತ ಸ್ಥಿತಿಗೆ ತರುವುದು ಆಯುರ್ವೇದ ಚಿಕಿತ್ಸೆಗಳ ಉದ್ದೇಶ. ಅಂತಹ ವಿವಿಧ ಉಪಾಯಗಳಲ್ಲಿ ಒಂದು ಈ ಪಂಚಕರ್ಮ ಅಥವಾ ಶೋಧನ ಕರ್ಮ.
ಪಂಚಕರ್ಮ ಅಥವಾ ಶೋಧನ ಎಂದರೆ ಶರೀರದಲ್ಲಿ ಉತ್ಕಟವಾದ, ವಿಕೃತವಾದ ದೋಷಗಳನ್ನು ದೇಹದಿಂದ ಹೊರಹಾಕಿ ದೇಹವನ್ನು ಶುದ್ಧಗೊಳಿಸುವ ಒಂದು ಕ್ರಮ. ರೋಗಕಾರಕ ದೋಷ ಗಳನ್ನು ದೇಹದಿಂದ ಹೊರಹಾಕಿದಾಗ ಬಹಳ ಸಹಜವಾಗಿಯೇ ಸ್ವಾಸ್ಥ್ಯ ಮರಳುತ್ತದೆ. ಇದು ಪಂಚಕರ್ಮದ ಮೂಲ ಉದ್ದೇಶ. ಆಯುರ್ವೇದ ವೈದ್ಯರ ಬಳಿ ಹೋದಾಗ ಅವರು, ಹಲವಾರು ಪ್ರಶ್ನೆಗಳ ಮೂಲಕ ನಿಮ್ಮ ದೇಹದಲ್ಲಿನ ದೋಷಗಳ ಅವಸ್ಥೆಯನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಪಡುತ್ತಾರೆ. ಈ ದೋಷಗಳು ದೇಹದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಹಾಳಾಗಿದ್ದರೆ ಕೇವಲ ಶಮನೌಷಧ ಮತ್ತು ಪಥ್ಯದಿಂದ ಅದನ್ನು ಸರಿದೂಗಿಸಬಹುದು.
ಆದರೆ, ಗುಣದಲ್ಲಿ ಅಥವಾ ಪ್ರಮಾಣದಲ್ಲಿ ಈ ದೋಷಗಳು ಅತಿಯಾಗಿ ವಿಕೃತಗೊಂಡಾಗ, ಹಾಳಾದಾಗ ಅವುಗಳನ್ನು ಕೇವಲ ಔಷಧಗಳಿಂದ ಅಥವಾ ಶಮನ ಚಿಕಿತ್ಸೆಯಿಂದ ಸರಿ ಮಾಡಲು ಸಾಧ್ಯವಿಲ್ಲ. ಬೇಡದ ದೋಷಗಳನ್ನು ದೇಹದಿಂದ ಹೊರಗೆ ಹಾಕಲೇಬೇಕಾದಂತಹ ಪರಿಸ್ಥಿತಿಯಲ್ಲಿ ದೇಹಕ್ಕೆ ತೊಂದರೆಯಾಗದ ಹಾಗೆ ಬಹಳ ನಾಜೂಕಾಗಿ ದೇಹವನ್ನು ಶುದ್ಧಿಗೊಳಿಸುವ ಪ್ರಕ್ರಿಯೆಗೆ ಪಂಚಕರ್ಮ ಎಂದು ಕರೆಯಬಹುದು.
ಪಂಚಕರ್ಮ ಅಂದರೆ ಐದು ಕರ್ಮಗಳು. ಸಾಮಾನ್ಯವಾಗಿ ಪ್ರಮುಖವಾದ ಐದು ಕರ್ಮಗಳ ಮೂಲಕ ನಾವು ದೇಹವನ್ನು ಶುದ್ಧಗೊಳಿಸುತ್ತೇವೆ. ಹಾಗಾಗಿ ಇದನ್ನು ಪಂಚಕರ್ಮ ಎಂದು ಕರೆಯಬಹುದು. ಪಂಚ ಕರ್ಮಗಳು- ವಮನ, ವಿರೇಚನ, ಬಸ್ತಿ, ನಸ್ಯ ಮತ್ತು ರಕ್ತಮೋಕ್ಷಣ. ಇವುಗಳಲ್ಲದೆ, ಇನ್ನೂ ಹಲವಾರು ಚಿಕಿತ್ಸಾ ಕ್ರಮಗಳ ಮೂಲಕ ದೇಹವನ್ನು ಶುದ್ಧಿಗೊಳಿಸಲು ಸಾಧ್ಯವಿದ್ದರೂ ಈ ಐದನ್ನೇ ಪಂಚಕರ್ಮಗಳೆಂದು ಕರೆಯಲು ಬಹಳ ಮುಖ್ಯ ಕಾರಣವೆಂದರೆ, ಇವುಗಳು ದೋಷಗಳನ್ನು ಬಹುಪ್ರಮಾಣದಲ್ಲಿ ದೇಹದಿಂದ ಹೊರಹಾಕುವ ಸಾಮರ್ಥ್ಯ ಹೊಂದಿವೆ.
ದೇಹವನ್ನು ಶುದ್ದಿಗೊಳಿಸುವುದು ಪಂಚಕರ್ಮದ ಬಹಳ ಮುಖ್ಯವಾದ ಕೆಲಸವಾದರೂ ಒಬ್ಬ ಆಯುರ್ವೇದ ವೈದ್ಯನು ಇವುಗಳನ್ನು ಹಲವಾರು ರೀತಿಗಳಲ್ಲಿ ಉಪಯೋಗಿಸಿಕೊಳ್ಳಬಹುದು. ಉದಾಹರಣೆಗೆ ಶೋಧನವನ್ನು ದೇಹ ತೆಳ್ಳಗಾಗಿಸಲೂ ಉಪಯೋಗಿಸಬಹುದು, ಅಂತೆಯೇ ದೇಹವನ್ನು ಪುಷ್ಟಿಗೊಳಿಸಲೂ ಬಳಸಬಹುದು. ರಸಾಯನ ಚಿಕಿತ್ಸೆಯಲ್ಲೂ ಇದನ್ನು ಬಳಸ ಲಾಗುತ್ತದೆ.
ಪಂಚಕರ್ಮದ ಐದು ಪ್ರಮುಖ ಕರ್ಮಗಳ ಬಗ್ಗೆ ಸ್ವಲ್ಪ ತಿಳಿದುಕೊಳ್ಳೋಣ,
೧. ವಮನ ಕರ್ಮ: ಸಾಮಾನ್ಯವಾಗಿ ದೇಹದಲ್ಲಿನ ಕಫ ದೋಷವು ವಿಕೃತಗೊಂಡಾಗ, ಸಹಜಾವಸ್ಥೆ ಗಿಂತ ಅತಿಯಾಗಿ ಉಲ್ಬಣಗೊಂಡಾಗ ಔಷಽಗಳನ್ನು ನೀಡಿ ವಾಂತಿ ಮಾಡಿಸುವ ಮೂಲಕ ಈ ವಿಕೃತವಾದ ಕಫ ದೋಷವನ್ನು ದೇಹದಿಂದ ಹೊರಹಾಕಿ ಶುದ್ಧಿ ಮಾಡಲಾಗುತ್ತದೆ. ಈ ಚಿಕಿತ್ಸಾ ಪ್ರಕಾರವಾದ ವಾಂತಿಯನ್ನು ಮಾಡಿಸುವ ಕ್ರಮವನ್ನು ವಮನ ಎಂದು ಕರೆಯಲಾಗುತ್ತದೆ.
೨. ವಿರೇಚನ ಕರ್ಮ: ನಾನು ಆಗಲೇ ಹೇಳಿದ ಹಾಗೆ, ದೇಹದಲ್ಲಿ ಮೂರು ದೋಷಗಳು ಎಲ್ಲ ಕರ್ಮಗಳನ್ನು ನಿಭಾಯಿಸುತ್ತವೆ. ಅದರಲ್ಲಿ ಎರಡನೇ ದೋಷವು ಪಿತ್ತ ದೋಷ. ದೇಹದಲ್ಲಿನ ಈ ಪಿತ್ತ ದೋಷವು ಕೆರಳಿದಾಗ ಔಷಧಿಗಳನ್ನು ನೀಡಿ ಭೇದಿಯ ಮೂಲಕ ಹೆಚ್ಚಾದ ಪಿತ್ತವನ್ನು ದೇಹ ದಿಂದ ಹೊರಹಾಕಲಾಗುತ್ತದೆ. ಈ ರೀತಿಯಾಗಿ ಚಿಕಿತ್ಸೆಯಂತೆ ನೀಡುವ ಭೇದಿಯನ್ನು ವಿರೇಚನ ಎಂದು ಕರೆಯಬಹುದು.
೩. ಬಸ್ತಿ ಕರ್ಮ: ದೇಹದಲ್ಲಿನ ಮತ್ತೊಂದು ಬಹಳ ಮುಖ್ಯವಾದಂತಹ ದೋಷವೆಂದರೆ ವಾತ ದೋಷ. ವಿವಿಧ ರೀತಿಯ ಕಷಾಯಗಳನ್ನು ಅಥವಾ ಸ್ನೇಹಗಳನ್ನು ಗುದದ್ವಾರದ ಮೂಲಕ ನೀಡಿ ತನ್ಮೂಲಕ ಕೆರಳಿದ ವಾತದೋಷವನ್ನು ದೇಹದಿಂದ ಹೊರಕ್ಕೆ ಹಾಕಿ ದೇಹವನ್ನು ಶುದ್ಧಿಗೊಳಿಸುವ ಪಂಚಕರ್ಮಕ್ಕೆ ಬಸ್ತಿ ಎಂದು ಕರೆಯಬಹುದು.
೪. ನಸ್ಯ ಕರ್ಮ: ಮೂಗಿನ ಮೂಲಕ ಔಷಧ ಪ್ರಯೋಗವನ್ನು ಮಾಡಿ, ತಲೆಯ ಮತ್ತು ಕತ್ತಿನ ಭಾಗಗಳಲ್ಲಿ ಸಂಚಿತಗೊಂಡ ದೋಷಗಳನ್ನು ಹೊರಹಾಕಿ ಶುದ್ಧಿ ಮಾಡುವ ಕರ್ಮವನ್ನು ನಸ್ಯ ಎಂದು ಕರೆಯಬಹುದು.
೫. ರಕ್ತ ಮೋಕ್ಷಣ ಕರ್ಮ: ವಿಕೃತವಾದ ರಕ್ತವನ್ನು, ರೋಗಕಾರಕವಾದ ಅಂಶಗಳುಳ್ಳ ದೋಷ ಪೂರಿತ ರಕ್ತ ವನ್ನು ದೇಹದಿಂದ ಹೊರಹಾಕುವ ಚಿಕಿತ್ಸಾ ಕ್ರಮವನ್ನು ರಕ್ತ ಮೋಕ್ಷಣ ಎಂದು ಕರೆಯುತ್ತೇವೆ. ಈ ಪಂಚ ಕರ್ಮಗಳನ್ನು ನಾವು ಮತ್ತೊಂದು ರೀತಿಯಾಗಿ ನಾವು ವಿಂಗಡಿಸ ಬಹುದು.
- ಸ್ವಸ್ಥರಲ್ಲಿ, ಆರೋಗ್ಯವಂತರಲ್ಲಿ ಮಾಡಬಹುದಾದ ಪಂಚಕರ್ಮಗಳು. ಇವು ಸಾಮಾನ್ಯವಾಗಿ ಎರಡು ವಿಧ. ದಿನಚರ್ಯೆಯಲ್ಲಿ ಪಂಚಕರ್ಮ: ನಿತ್ಯವೂ ಹಲವಾರು ಕಾರಣಗಳಿಂದ ವಿಕೃತ ಗೊಳ್ಳುವ ದೋಷಗಳನ್ನು ನಿತ್ಯ ಮಾಡುವ ಸ್ವಾಸ್ಥ್ಯರಕ್ಷಣಾ ಕರ್ಮಗಳ ಮೂಲಕ ದೇಹದಿಂದ ಹೊರಗೆ ಹಾಕಿ ಆ ದೋಷಗಳನ್ನು ಸರಿದೂಗಿಸಬಹುದು.
ಉದಾಹರಣೆಗೆ, ಅಭ್ಯಂಗ, ಶಿರೋಭ್ಯಂಗ, ನಸ್ಯ, ಶಿರೋಪಿಚು, ಉದ್ವರ್ತನ, ಮಾತ್ರಾಬಸ್ತಿ. ಇವು ಗಳನ್ನು ನಾವು ನಮ್ಮ ದಿನಚರ್ಯೆಯಲ್ಲಿ ನಿತ್ಯವೂ ಅಭ್ಯಾಸ ಮಾಡಿದಾಗ ವರ್ಷವಿಡೀ ಸ್ವಸ್ಥರಾ ಗಿರಲು ಸಾಧ್ಯವಾಗುತ್ತದೆ.
ಋತುಚರ್ಯೆಯಲ್ಲಿ ಪಂಚಕರ್ಮ: ಋತುವಿನ ವೈಪರಿತ್ಯದಿಂದ ದೇಹದಲ್ಲಿರುವ ದೋಷಗಳು ವಿಕೃತಗೊಳ್ಳುವುದು ಸಹಜ. ಈ ರೀತಿ ನೈಸರ್ಗಿಕವಾಗಿಯೇ ವಿಕೃತಗೊಂಡ ದೋಷಗಳನ್ನು ಸರಿದೂಗಿಸಲು ಸ್ವಸ್ಥರಿಗೂ ಪಂಚಕರ್ಮದ ಅವಶ್ಯಕತೆ ಇರುತ್ತದೆ. ಹಾಗಾಗಿ, ಸಾಮಾನ್ಯವಾಗಿ ವಸಂತ ಋತುವಿನಲ್ಲಿ ವಿಕೃತಗೊಂಡ ಕಫ ದೋಷವನ್ನು ಶಮನ ಮಾಡಲು ವಮನ ಕರ್ಮವನ್ನು ಮಾಡಲಾಗುತ್ತದೆ. ಇನ್ನು, ವರ್ಷ ಋತುವಿನಲ್ಲಿ ವಿಕೃತಗೊಂಡ ವಾತವನ್ನು ಸರಿದೂಗಿಸಲು ಬಸ್ತಿ ಕರ್ಮ ಮತ್ತು ಶರತ್ ಋತುವಿನಲ್ಲಿ ಕುಪಿತಗೊಂಡ ಪಿತ್ತವನ್ನು ಶಮನ ಮಾಡಲು ವಿರೇಚನ ಕರ್ಮವನ್ನು ಮಾಡಲಾಗುತ್ತದೆ.
ಇದಲ್ಲದೆ, ರಸಾಯನ ಚಿಕಿತ್ಸೆಯಲ್ಲೂ ಪಂಚಕರ್ಮವನ್ನು ಮಾಡಲಾಗುತ್ತದೆ. ದೇಹದಲ್ಲಿನ ಮುಪ್ಪಿನ ಲಕ್ಷಣಗಳನ್ನು ತಡೆಗಟ್ಟಿ, ಶರೀರ-ಇಂದ್ರಿಯ-ಮನಸ್ಸುಗಳ ವಿಶೇಷ ಶಕ್ತಿಗಳನ್ನು ಹೆಚ್ಚಿಸಲು ರಾಸಾಯನ ಚಿಕಿತ್ಸೆಗಳನ್ನು ಆಯುರ್ವೇದದಲ್ಲಿ ಮಾಡಲಾಗುತ್ತದೆ. ಯಾವುದೇ ರಸಾಯನ ಚಿಕಿತ್ಸೆ ಯನ್ನು ಮಾಡುವ ಮುನ್ನ ಪಂಚಕರ್ಮದ ಶೋಧನೆಯು ಅತ್ಯವಶ್ಯಕ.
ಅಂತೆಯೇ, ಗರ್ಭ ಧರಿಸುವ ಮುನ್ನ ಗಂಡ ಮತ್ತು ಹೆಂಡತಿ ಇಬ್ಬರೂ ಈ ಪಂಚಕರ್ಮಗಳನ್ನು ವೈದ್ಯರ ಸಲಹೆಯಂತೆ ತೆಗೆದುಕೊಂಡು, ನಂತರ ಗರ್ಭ ಧರಿಸಿದರೆ ಹುಟ್ಟುವ ಮಗು ಬಹಳ ಆರೋಗ್ಯಕರವಾಗಿದ್ದು, ಹಲವಾರು ಅನುವಂಶಿಕ ಕಾಯಿಲೆಗಳನ್ನು ತಡೆಗಟ್ಟಲು ಇದು ಸಹಕರಿಸು ತ್ತದೆ.
2.ರೋಗಿಗಳಲ್ಲಿ ಪಂಚ ಕರ್ಮ: ಪ್ರತಿಯೊಂದು ರೋಗದಲ್ಲಿಯೂ ಚಿಕಿತ್ಸೆಯನ್ನು ವಿವರಿಸುವಾಗ ಆಯುರ್ವೇದ ಆಚಾರ್ಯರು ಶಮನ ಚಿಕಿತ್ಸೆಯ ಜತೆಗೆ ಶೋಧನಾ ಚಿಕಿತ್ಸೆಯನ್ನು ಸಹ ವಿವರಿಸಿzರೆ. ಆಯುರ್ವೇದ ವೈದ್ಯರು ರೋಗ ಮತ್ತು ರೋಗಿ ಪರೀಕ್ಷೆಯನ್ನು ಮಾಡಿದ ನಂತರ ಆ ರೋಗಿಗೆ ಸೂಕ್ತವಾದ ಪಂಚಕರ್ಮ ಚಿಕಿತ್ಸೆಯನ್ನು ನಿರ್ಧರಿಸಿ ಮಾಡಲಾಗುತ್ತದೆ. ಸಾಮಾನ್ಯವಾಗಿ ವಾತ ದೋಷದಿಂದ ಉಂಟಾದ ರೋಗಗಳಲ್ಲಿ ಬಸ್ತಿ ಕರ್ಮ, ಪಿತ್ತ ದೋಷದಿಂದ ಉಂಟಾದ ವಿಕಾರಗಳಲ್ಲಿ ವಿರೇಚನ ಕರ್ಮ ಹಾಗೂ ಕಫ ದೋಷದಿಂದ ಉಂಟಾದ ವ್ಯಾಧಿಗಳಲ್ಲಿ ವಮನ ಕರ್ಮಗಳನ್ನು ವೈದ್ಯರು ಮಾಡುತ್ತಾರೆ.
ಸ್ನೇಹಿತರೇ, ಪಂಚ ಕರ್ಮವೆಂಬುದು ಯಾವುದೋ ಒಂದೆರಡು ದಿನಗಳಲ್ಲಿ ರಿಲ್ಯಾಕ್ಸೇಶನ್ಗೋಸ್ಕರ ಮಾಡಿಸಿಕೊಳ್ಳುವ ಟೈಮ್ ಪಾಸ್ ಟ್ರೀಟ್ಮೆಂಟ್ ಅಲ್ಲ ಇದೊಂದು ಬಹಳ ಗಂಭೀರವಾದಂತಹ ಚಿಕಿತ್ಸಾ ಪದ್ಧತಿ. ಇದರಲ್ಲಿ ಆಯುರ್ವೇದ ವೈದ್ಯರು ಬಹಳ ಕಟ್ಟುನಿಟ್ಟಾದ ತ್ರಿವಿಧ ಕರ್ಮಗಳನ್ನು ಅನುಸರಿಸುತ್ತಾರೆ. ಪೂರ್ವ ಕರ್ಮ, ಪ್ರಧಾನ ಕರ್ಮ ಮತ್ತು ಪಶ್ಚಾತ್ ಕರ್ಮ.
ಪೂರ್ವ ಕರ್ಮದಲ್ಲಿ ಮೊಟ್ಟ ಮೊದಲು ನೀವು ಈ ಶೋಧನಾಕರ್ಮವನ್ನು ಮಾಡಿಸಿಕೊಳ್ಳಲು ಅರ್ಹರೇ ಎಂದು ಪರೀಕ್ಷಿಸಿ ನಂತರ ‘ಅಗ್ನಿ’ ಅಂದರೆ ಹಸಿವು ಮತ್ತು ಜೀರ್ಣಶಕ್ತಿಯನ್ನು ಸರಿಪಡಿಸು ತ್ತಾರೆ. ನಂತರ ಸ್ನೇಹನ ಮತ್ತು ಸ್ವೇದನ ಎಂಬ ಎರಡು ಬಹಳ ಮುಖ್ಯವಾದ ಕರ್ಮಗಳನ್ನು ಮಾಡುತ್ತಾರೆ. ಇದರ ಉದ್ದೇಶವೆಂದರೆ ದೇಹದಲ್ಲಿ ಎಲ್ಲ ಕಡೆ ಹರಡಿರುವ ವಿಕೃತ ದೋಷವನ್ನು ಪಾಕ ಮಾಡಿ, ಕರಗಿಸಿ ಬೇರೆ ಬೇರೆ ಪ್ರದೇಶಗಳಿಂದ ನಮ್ಮ ಜೀರ್ಣಾಂಗ ವ್ಯೂಹಕ್ಕೆ ತರುವುದು. ಈ ಪೂರ್ವ ಕರ್ಮ ಬಹಳ ಮುಖ್ಯವಾದಂತಹ ಒಂದು ಹಂತ.
ಕಾರಣ, ದೋಷಗಳನ್ನು ಪಾಕ ಮಾಡಿ ನಮ್ಮ ಹೊಟ್ಟೆಯ ಭಾಗಕ್ಕೆ ಅದನ್ನು ತರದಿದ್ದರೆ, ನಂತರ ಕೊಡುವ ವಾಂತಿಯಾಗಲಿ, ಭೇದಿಯಾಗಲಿ ನಿಷ್ಪ್ರಯೋಜಕ. ಈ ಪೂರ್ವ ಕರ್ಮ ಮಾಡುವ ಮುನ್ನ ವೈದ್ಯರು ರೋಗಿಯ ಮತ್ತು ರೋಗದ ಸ್ಥಿತಿಗತಿಗಳನ್ನು ಬಹಳ ಸೂಕ್ಷ್ಮವಾಗಿ ಪರೀಕ್ಷಿಸಿ ನಂತರದ ಇಡೀ ಪಂಚಕರ್ಮವನ್ನು ಸಂಯೋಜಿಸುತ್ತಾರೆ..
ನಂತರ ಬರುವುದು ಪ್ರಧಾನ ಕರ್ಮ. ಇದರಲ್ಲಿ ರೋಗಿಗೆ ಮತ್ತು ರೋಗಕ್ಕೆ ಸರಿದೂಗುವ ಔಷಧ ಗಳನ್ನು ನೀಡಿ ವಾಂತಿ ಅಥವಾ ಭೇದಿ ಇತ್ಯಾದಿಗಳನ್ನು ಮಾಡಲಾಗುತ್ತದೆ.
ಪ್ರಧಾನ ಕರ್ಮದ ನಂತರ ಬರುವ ಮತ್ತೊಂದು ಮುಖ್ಯ ಘಟಕವೆಂದರೆ ಪಶ್ಚಾತ್ ಕರ್ಮ. ಪಂಚ ಕರ್ಮದ ನಂತರ ದೇಹ ಇಂದ್ರಿಯ ಮನಸ್ಸುಗಳು ಬಹಳ ಸೂಕ್ಷ್ಮದ ಸ್ಥಿತಿಯಲ್ಲಿರುತ್ತದೆ. ಬಹಳ ಕಾಳಜಿಯಿಂದ ಅಗ್ನಿಯ ಬಲ ಮತ್ತು ದೇಹದ ಬಲವನ್ನು ಪ್ರಾಕೃತ ಅವಸ್ಥೆಗೆ ತರಬೇಕಾಗುತ್ತದೆ. ಪಥ್ಯ, ಆಹಾರ ಕ್ರಮ ಮತ್ತು ವಿಶ್ರಾಂತಿಯ ಅವಶ್ಯಕತೆ ಇರುತ್ತದೆ.
ಬಹಳಷ್ಟು ಜನಕ್ಕೆ ಪ್ರಧಾನ ಕರ್ಮವು ಬಹಳ ಉತ್ತಮವಾದ ರೀತಿ ಸಾಗಿದ್ದರೂ ಪಶ್ಚಾತ್ ಕರ್ಮ ವನ್ನು ಸರಿಯಾಗಿ ಪಾಲಿಸದೆ ತೊಂದಯಾಗುತ್ತದೆ. ಇದು ಸಹ ವೈದ್ಯರ ಸಲಹೆಯಂತೆಯೇ ಮಾಡತಕ್ಕದ್ದು. ಪ್ರಧಾನ ಕರ್ಮಕ್ಕಿಂತಲೂ ಮುಖ್ಯವಾದ ಭಾಗ ಪಶ್ಚಾತ್ಕರ್ಮ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಈ ರೀತಿಯಾಗಿ ಆಯುರ್ವೇದ ಸಂಹಿತೆಗಳಲ್ಲಿ ವಿವರಿಸಿರುವ ಪೂರ್ವ ಕರ್ಮ, ಪ್ರಧಾನ ಕರ್ಮ ಮತ್ತು ಪಶ್ಚಾತ್ ಕರ್ಮ-ಈ ಮೂರನ್ನು ಸರಿಯಾಗಿ, ನುರಿತ ವೈದ್ಯರ ಉಪಸ್ಥಿತಿ ಯಲ್ಲಿ ಚಿಕಿತ್ಸೆಯನ್ನು ತೆಗೆದುಕೊಂಡಾಗ ಮಾತ್ರ ಅದು ಆಯುರ್ವೇದದ ಪಂಚಕರ್ಮವೆನಿಸಿ ಕೊಳ್ಳುತ್ತದೆ.
ಇವೆಲ್ಲ ಇರದ ಒಂದು ‘ಸ್ಪಾ ಟ್ರೀಟ್ಮೆಂಟ್’ ಎಂದಿಗೂ ಆಯುರ್ವೇದದ ಪಂಚಕರ್ಮವಾಗಲು ಸಾಧ್ಯವಿಲ್ಲ .ನೀವು ಅದನ್ನು ಕೇವಲ ‘ಬಾಡಿ ಮಸಾಜ್’ ಎಂದು ಬೇಕಾದರೆ ಕರೆದುಕೊಳ್ಳಿ, ಆದರೆ ಅದಕ್ಕೆ ಆಯುರ್ವೇದ ಎಂಬ ಒಂದು ಸ್ಥಾನವನ್ನು ನೀಡಿ ನಮ್ಮ ಶಾಸ್ತ್ರಕ್ಕೆ ಅವಮಾನ ಮಾಡಬೇಡಿ ಎಂಬುದೇ ನನ್ನ ಸವಿನಯ ಕೋರಿಕೆ.
ಪಂಚಕರ್ಮ ಎಂಬುದು ಒಂದು ದೊಡ್ಡ ವಿಜ್ಞಾನ. ಒಂದು ಚಿಕ್ಕ ಅಭ್ಯಂಗ ಮಾಡುವುದರ ಹಿಂದೆಯೂ ಒಂದು ವಿಜ್ಞಾನವಿದೆ, ಒಂದು ಕ್ರಮವಿದೆ. ಮನಸ್ಸಿಗೆ ಬೇಕಾದಾಗ ಹೋಗಿ ಮಸಾಜ್ ಮಾಡಿಸಿಕೊಂಡು ಬಂದು ನಂತರ ಬೇಕಾಬಿಟ್ಟಿ ವ್ಯವಹರಿಸುವುದರಿಂದ ದೇಹಕ್ಕೆ ಒಳ್ಳೆಯದಾಗುತ್ತದೆ ಎಂಬ ಭ್ರಮೆ ಬೇಡ. ಕಾರಣ, ರೋಗಿಯ ಸ್ಥಿತಿ, ಶಾರೀರಿಕ ಬಲ, ಅಗ್ನಿಯ ಬಲ, ರೋಗದ ಬಲ, ಸೇವಿಸುವ ಆಹಾರ, ವಾತಾವರಣ, ಮಾನಸಿಕ ಸ್ಥಿತಿ, ವಯಸ್ಸು, ಮಾಡುವ ಕೆಲಸ-ಈ ಎಲ್ಲ ವಿಷಯ ಗಳನ್ನು ಪರೀಕ್ಷಿಸದೆ ಮಾಡುವ ಚಿಕಿತ್ಸೆಗಳಿರಬಹುದು ಅಥವಾ ಒಂದು ಚಿಕ್ಕ ಸ್ಪಾ ಟ್ರೀಟ್ಮೆಂಟ್ ಇರಬಹುದು ದೇಹಕ್ಕೆ ತೊಂದರೆಯನ್ನು ತರುವುದು ಖಚಿತ.
ಹಾಗಾಗಿ, ತೊಂದರೆ ಇಲ್ಲದೆ ಪಂಚಕರ್ಮಗಳನ್ನು ಮಾಡಿಸಿಕೊಂಡು, ಚಿಕಿತ್ಸೆಯ ನಂತರ ಅದರ ಸಂಪೂರ್ಣ ಪ್ರಯೋಜನವನ್ನು ಪಡೆದುಕೊಂಡು ಆರೋಗ್ಯವಂತರಾಗಿರಬೇಕಾದರೆ ಇದನ್ನು ಶಾಸ್ತ್ರೋಕ್ತವಾಗಿ ವೈದ್ಯರ ಸಲಹೆಯಂತೆಯೇ ಮಾಡತಕ್ಕದ್ದು.
ಸರಿಯಾಗಿ ಮಾಡಿಸಿಕೊಂಡ ಪಂಚಕರ್ಮದಿಂದಾಗುವ ಪ್ರಯೋಜನಕ್ಕೆ ನಮ್ಮ ಶಾಸ್ತ್ರವು ಈ ರೀತಿಯಾಗಿ ಗ್ಯಾರಂಟಿಯನ್ನು ನೀಡುತ್ತದೆ. ‘ಜಿತಾ ಸಂಶೋಧನೈರ್ಯೆ ತು ನ ತೇಷಾಂ ಪುನರುದ್ಭವಃ’ ಒಂದು ಸಲ ಮಾಡಿಸಿಕೊಂಡ ಸಂಶೋಧನದಿಂದ ಜಿತವಾದ ದೋಷಗಳು ಮತ್ತೆ ಎಂದಿಗೂ ಉದ್ಭವ ಗೊಂಡು ಪುನಃ ಕಾಯಿಲೆಗಳನ್ನು ಉಂಟುಮಾಡುವುದಿಲ್ಲ! ಆದರೆ ಮೇಲೆ ಹೇಳಿದ ಕಂಡಿಷ ಅಪ್ಲೈ!