ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ನವೀನ್‌ ಸಾಗರ್‌

Executive Editor and Columnist

naveensagar2709@gmail.com

ಹತ್ತೊಂಬತ್ತು ವರ್ಷಗಳ ಪತ್ರಿಕೋದ್ಯಮ ವೃತ್ತಿ ಬದುಕು . ಹಾಯ್ ಬೆಂಗಳೂರ್. ಕನ್ನಡಪ್ರಭ, ವಿಶ್ವವಾಣಿ ಪತ್ರಿಕೆಗಳಲ್ಲಿ ವರದಿಗಾರಿಕೆ ಮತ್ತು ಸಂಪಾದಕೀಯ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ. ಕ್ರೈಂ, ರಾಜಕೀಯ, ಕ್ರೀಡೆ ಮತ್ತು ಸಿನಿಮಾ ಬರವಣಿಗೆ ಮೂಲಕ ಓದುಗರ ಮೆಚ್ಚುಗೆ ಗಳಿಸಿ ದ್ದಾರೆ. ಹಲವು ಪತ್ರಿಕೆಗಳಲ್ಲಿ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಅಂಕಣಕಾರರಾಗಿಯೂ ಗುರುತಿಸಿ ಕೊಂಡವರು. ರಂಗಭೂಮಿ, ರೇಡಿಯೋ ಕಾರ್ಯಕ್ರಮಗಳು, ನಟನೆ, ಸಿನಿಮಾ/ಧಾರಾವಾಹಿ ಬರವಣಿಗೆ, ನಿರ್ಮಾಣ, ಕಂಠದಾನ ಹೀಗೆ ಹಲವಾರು ಕ್ಷೇತ್ರಗಳ ಅನುಭವ. ಖಾಸಗಿ ಮನರಂಜನಾ ವಾಹಿನಿ ಯಲ್ಲಿಯೂ ಕಾರ್ಯ ನಿರ್ವಹಣೆ. ಪ್ರಸ್ತುತ ವಿಶ್ವವಾಣಿ ಸಮೂಹದ ಪ್ರವಾಸಿ ಪ್ರಪಂಚ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾಗಿದ್ದಾರೆ.

Articles
Naveen Sagar Column: ಖುಷಿಯ ಹೊನಲಿನಲಿ ಕೊಚ್ಚಿ ಹೋಗುತಿದೆ ಅಳುವ ಹಾಯಿದೋಣಿ

ಖುಷಿಯ ಹೊನಲಿನಲಿ ಕೊಚ್ಚಿ ಹೋಗುತಿದೆ ಅಳುವ ಹಾಯಿದೋಣಿ

ಯಾವುದೂ ಶಾಶ್ವತವಲ್ಲ ಅನ್ನೋದು ಕಳೆದ ಮೂರು ದಿನಗಳಲ್ಲಿ ಮೂರು ರೀತಿಯಲ್ಲಿ ನಿರೂಪಿತ ವಾಗಿಹೋಯ್ತು. ಹದಿನೆಂಟು ವರ್ಷಗಳ ನಂತರ ಕಪ್ ಗೆದ್ದ ಆರ್ ಸಿಬಿ ತಂಡದ ಖುಷಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಶೋಕವಾಗಿ ಬದಲಾಯ್ತು. ಆರ್‌ಸಿಬಿ ಇನ್ನೂ ಹತ್ತು ಕಪ್ ಗೆದನ್ನು ನೋಡುವಷ್ಟು ಆಯಸ್ಸಿದೆ ಎಂದುಕೊಂಡಿದ್ದ ಹನ್ನೊಂದು ಮಂದಿ, ಕೆಲವೇ ಗಂಟೆಗಳ ಹಿಂದೆ, ತಾವು ಸಾಯ ಬಹುದು ಎಂಬ ಸುಳುಹೂ ಇಲ್ಲದವರು ಇವತ್ತಿಗೆ ಪಂಚಭೂತಗಳಲ್ಲಿ ಲೀನ.

Naveen Sagar Column: ಹಣೆ ಮೇಲೆ ಬೋರ್ಡ್‌ ಹಾಕ್ಕೊಂಡ್‌ ಓಡಾಡಬೇಕಾ ?

ಹಣೆ ಮೇಲೆ ಬೋರ್ಡ್‌ ಹಾಕ್ಕೊಂಡ್‌ ಓಡಾಡಬೇಕಾ ?

ಕೆಲವರು ಸಾಕಷ್ಟು ನೋವಿನ ಮಧ್ಯೆಯೂ ಹೊರಗೆ ನಗುತ್ತ ಆರಾಮಾಗಿರುವ ಹಾಗೆ ನಟಿಸುತ್ತಿರು ತ್ತಾರೆ. ಅಂಥವರನ್ನೂ ನಾವು ಒಳಹೊಕ್ಕು ನಿಜ ಅರಿಯಬೇಕು ಅಂತೇನಿಲ್ಲ. ಅದು ಆತ್ಮೀಯರ ನಡುವೆ ಆಗುವಂಥದ್ದು. ಆದರೆ ದೈನಂದಿನ ಜೀವನದಲ್ಲಿ ನಾವು ವ್ಯವಹರಿಸುವ ಜನ ಮತ್ತು ನಮ್ಮ ಬದುಕಿನಲ್ಲಿ ಹಾದುಹೋಗುವ ಅಪರಿಚಿತರನ್ನು ನಾವು ಆ ಪರಿ ಒಳಹೊಕ್ಕು ಅರಿಯೋ ಅಗತ್ಯ ಇಲ್ಲದಿದ್ದರೂ, ಸ್ಟಿಕರ್/ಬೋರ್ಡ್ ಇಲ್ಲದೆಯೂ ಅವರ ಪರಿಸ್ಥಿತಿ ಏನಿದೆಯೋ ಏನೋ ಪಾಪ ಎಂಬಷ್ಟು ಅರ್ಥ ಮಾಡಿ ಕೊಳ್ಳಲು ಸಾಧ್ಯವಾಗಿಬಿಟ್ಟರೆ, ಬದುಕು ಸುಂದರವಾಗಿ ಬಿಡುತ್ತದೆ.

Naveen Sagar Column: 8 ವರ್ಷದ ಹಿಂದೆ ನಡೆದಿತ್ತು ಆಪರೇಷನ್‌ ಸಿಂದೂರ್‌ !

8 ವರ್ಷದ ಹಿಂದೆ ನಡೆದಿತ್ತು ಆಪರೇಷನ್‌ ಸಿಂದೂರ್‌ !

ಆಪರೇಶನ್ ಸಿಂದೂರ್‌ಗೆ ವಿರಾಮ ಸಿಕ್ಕು ವಾರಗಳೇ ಕಳೆದರೂ ಅದರ ಪ್ರಭಾವಳಿಯಿಂದ ಹೊರ ಬರೋದಕ್ಕೆ ಆಗಿಲ್ಲ. ಈ ಸಮಯದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಒಂದಷ್ಟು ಮೀಮ್‌ಗಳು ಹರಿದಾಡುತ್ತಿದ್ದವು. ಅಕ್ಷಯ್ ಕುಮಾರ್‌ಗೆ ಹೊಸ ಸಿನಿಮಾ ಮಾಡೋದಕ್ಕೆ ಕಥೆ ಸಿಕ್ತು, ಟೈಟಲ್ ಸಿಕ್ತು ಅಂತ. ದೇಶದಲ್ಲಿ ಯಾವುದೇ ಸ್ಪೂರ್ತಿದಾಯಕ ಘಟನೆ ನಡೆಯಲಿ, ರಿಯಲ್ ಹೀರೋ ಬಗ್ಗೆ ಸುದ್ದಿ ಬರಲಿ, ರಾಷ್ಟ್ರಪ್ರೇಮಕ್ಕೆ ಸಂಬಂಧಿಸಿದ ವಿಚಾರ ಚರ್ಚೆಯಾಗಲಿ ಅಥವಾ ಸೆನ್ಸೇಷನಲ್ ಸುದ್ದಿ ಹೊರ ಬರಲಿ, ಅಕ್ಷಯ್ ಕುಮಾರ್ ಈಗ ಅದನ್ನಿಟ್ಕೊಂಡು ಸಿನಿಮಾ ಮಾಡ್ತಾನೆ ಅಂತ ವ್ಯಂಗ್ಯವಾಣಿ ಶುರು ವಾಗುತ್ತೆ

Naveen Sagar Column: ಜಂಟ್ಲ್‌ ಮನ್‌ ಪಟ್ಟ ತಿರಸ್ಕರಿಸಿದ್ದ ಬ್ಯಾಡ್‌ ಬಾಯ್‌ ಸೈಮಂಡ್ಸ್‌ !

ಜಂಟ್ಲ್‌ ಮನ್‌ ಪಟ್ಟ ತಿರಸ್ಕರಿಸಿದ್ದ ಬ್ಯಾಡ್‌ ಬಾಯ್‌ ಸೈಮಂಡ್ಸ್‌ !

ಆಂಡ್ರ್ಯೂ ಸೈಮಂಡ್ಸ್ ನನ್ನು ಇವತ್ತು ನೆನಪಿಸಿಕೊಳ್ಳೋಕೆ ಕಾರಣ ಮೊನ್ನೆ ಮೇ ಹದಿನೈದಕ್ಕೆ ಆತ ಕಾರ್ ಅಪಘಾತದಲ್ಲಿ ತೀರಿಕೊಂಡು ಮೂರು ವರ್ಷವಾಯ್ತು. ಸೈಮಂಡ್ಸ್ ಬಹಳ ವರ್ಣರಂಜಿತ ಅಷ್ಟೇ ವಿವಾ ದಾತ್ಮಕ ಮತ್ತು ರೋಚಕ ಬದುಕು ಬದುಕಿ ಹೋದವ. ಟಿಪಿಕಲ್ ಕರಿಯರ್ ಜೋವಿ‌ಯಲ್ ನೇಚರ್ ಅವನೊಳಗಿತ್ತು.

Naveen Sagar Column: ಕೆನ್ನೆಗಲ್ಲದೇ ಬೇರೆಡೆ ಹೊಡೆದಾಗ ಏನು ಮಾಡ್ಬೇಕು ಮಿಸ್ಟರ್‌ ಗಾಂಧಿ ?

ಕೆನ್ನೆಗಲ್ಲದೇ ಬೇರೆಡೆ ಹೊಡೆದಾಗ ಏನು ಮಾಡ್ಬೇಕು ಮಿಸ್ಟರ್‌ ಗಾಂಧಿ ?

ಅತ್ತ ಭಾರತದ ಸೇನೆ ಉಗ್ರರ ನೆಲೆಗಳ ಮೇಲೆ ದಾಳಿ ಮಾಡಿ ಆಪರೇಷನ್ ಸಿಂದೂರ ಎಂಬ ಘೋಷ ಮೊಳಗಿಸ್ತಾ ಇದ್ರೆ... ಇತ್ತ ಕರ್ನಾಟಕ ಕಾಂಗ್ರೆಸ್ ಗಾಂಧಿಯ ಫೋಟೋ ಮೇಲೆ ಮನುಕುಲದ ಅತ್ಯಂತ ಶಕ್ತಿಯುತ ಶಸ್ತ್ರ ಎಂದರೆ ಶಾಂತಿ ಎಂದು ಬರೆದು ಪೋಸ್ಟ್ ಮಾಡಿತ್ತು. ಆಗ ನೆನಪಾಗಿದ್ದು ಮುನ್ನಾ‌ ಭಾಯ್ ಚಿತ್ರದ ಆ ದೃಶ್ಯ. ಬಲಗೆನ್ನೆಗೆ ಹೊಡೆದರೆ ಎಡಗೆನ್ನೆ ತೋರಿಸು ಅಂದ ಗಾಂಧಿ, ಎರಡೂ ಕೆನ್ನೆಗೆ ಹೊಡೆದಾಗ ಏನು ಮಾಡಬೇಕು ಅಂತ ಹೇಳೋದನ್ನ ಮರೆತಿದ್ರು

Naveen Sagar Column: ಮಗ ಎಲ್ಲಾ ಬಿಟ್ಟ, ಭಂಗಿ ನೆಟ್ಟ ಎಂಬಂತೆ ಆಗಬಾರದಲ್ಲವೇ ?!

ಮಗ ಎಲ್ಲಾ ಬಿಟ್ಟ, ಭಂಗಿ ನೆಟ್ಟ ಎಂಬಂತೆ ಆಗಬಾರದಲ್ಲವೇ ?!

ತಾವು ಸಿನಿಮಾದವರು ಅನ್ನೋದೂ ಬಹುಶಃ ಇಷ್ಟೊತ್ತಿಗೆ ಅವರಿಗೆಲ್ಲ ಮರೆತು ಹೋಗಿರಬಹುದು. ಹಿಂದೆಲ್ಲ ಒಬ್ಬ ನಟ ಇನ್ನೊಬ್ಬ ನಟನನ್ನು ಭೇಟಿ ಮಾಡಿದರೆ, ಯಾವ ಸಿನಿಮಾ ಮಾಡ್ತಿದೀಯ ಅಂತ ಕೇಳ್ಕೋತಾ ಇದ್ದವ್ರು, ಈಗ ಯಾವ ಲೀಗ್ ಆಡ್ತಾ ಇದೀಯ? ಅಂತ ಕ್ರಿಕೆಟ್ ಬಗ್ಗೆ ಮಾತಾಡಿ ಕೊಳ್ಳೋಷ್ಟು ಕ್ರಿಕೆಟಿನ ದಾಸರಾಗಿ ಹೋಗಿದ್ದಾರೆ.

Naveen Sagar Column: ಇದು ಅಣ್ಣಾವ್ರು ಹಾಡಿದ್ದ ಪ್ರೇಮ ಕಾಶ್ಮೀರವಲ್ಲ...ರಕ್ತ ಕಾಶ್ಮೀರ!

ಇದು ಅಣ್ಣಾವ್ರು ಹಾಡಿದ್ದ ಪ್ರೇಮ ಕಾಶ್ಮೀರವಲ್ಲ...ರಕ್ತ ಕಾಶ್ಮೀರ!

ರಾಜಣ್ಣನ ಬಾಯಲ್ಲಿ ‘ಓಹೋ ಪ್ರೇಮ ಕಾಶ್ಮೀರ’ ಎಂದು ಹಾಡಿಸಿಕೊಂಡ ಭೂಮಿ.. ‘ಅಲ್ಲ ನಾನು ರಕ್ತ ಕಾಶ್ಮೀರ’ ಎಂದು ಅಟ್ಟಹಾಸ ಮೆರೆದಿತ್ತು, ಇತ್ತೀಚಿನ ವರ್ಷಗಳಲ್ಲಿ ಪುಲ್ವಾಮಾ ದಾಳಿಯಲ್ಲಿ ಯೋಧರು ಹತರಾದಾಗ ಹೀಗೆ ಮನಸು ಮಗುಚಿಬಿದ್ದದ್ದು. ಆನಂತರ ಪುನೀತ್ ಅಕಾಲಿಕ ಮರಣ ಅತೀವವಾಗಿ ಡಿಪ್ರೆಸ್ ಮಾಡಿತ್ತು. ಆ ನಂತರದಲ್ಲಿ ಚೇತರಿಸಿಕೊಂಡ ಮನಸ್ಸಿಗೆ ಈ ಬಾರಿಯ ಕಾಶ್ಮೀರದ ದುರಂತ ಕೊಟ್ಟಿರೋ ನೋವು ನಿಜಕ್ಕೂ ಚಿಕ್ಕದಲ್ಲ

Naveen Sagar Column: ಮುಖ ನೋಡಿ ಮೊಳ ಹಾಕಬೇಡ ಗುಣನೋಡಿ ಅಳೆಯಮ್ಮ !

ಮುಖ ನೋಡಿ ಮೊಳ ಹಾಕಬೇಡ ಗುಣನೋಡಿ ಅಳೆಯಮ್ಮ!

ಮೊದಲೇ ರೂಪದ ವಿಚಾರಕ್ಕೆ ಟ್ರೋಲ್ ಮತ್ತು ಅಪಹಾಸ್ಯಕ್ಕೆ ಒಳಗಾಗ್ತಾ ಇದ್ದ ಷಣ್ಮುಖ, ಈಗ ರಾಜ್‌ ಕುಮಾರ್ ಅವರ ಹೆಸರನ್ನು ಸೇರಿಸಿಕೊಳ್ತಾ ಇದ್ದ ಹಾಗೇ, ರಾಜ್ ಕುಟುಂಬದಿಂದ ಬರ್ತಾ ಇರೋ ನಟ ಎಂಬ ಪ್ರಚಾರ ಶುರುವಾಗ್ತಾ ಇದ್ದ ಹಾಗೆ ಸೋಷಿಯಲ್ ಮೀಡಿಯಾ ಪ್ರಜೆಗಳ ಕೈ ಬೆರಳುಗಳು ಯದ್ವಾತದ್ವ ಸಡಿಲಗೊಂಡುಬಿಟ್ಟವು. ಷಣ್ಮುಖ ರಾಜ್‌ಕುಮಾರ್‌ನ ಫೋಟೋ ಇರೋ ಪ್ರತಿ ಪೋಸ್ಟಿನಲ್ಲೂ ಟಾಕ್ಸಿಕ್ ಕಮೆಂಟ್‌ಗಳ ಪ್ರವಾಹ.

Naveen Sagar Column: ಅಂತಿಮ ನಿಲ್ದಾಣದಲ್ಲಿ ಕ್ಯಾಪ್ಟನ್‌ ಕೂಲ್‌ ಧೋನಿಗೆ ಅಗ್ನಿಪರೀಕ್ಷೆ !

ಅಂತಿಮ ನಿಲ್ದಾಣದಲ್ಲಿ ಕ್ಯಾಪ್ಟನ್‌ ಕೂಲ್‌ ಧೋನಿಗೆ ಅಗ್ನಿಪರೀಕ್ಷೆ !

ವಿರೋಧಿಗಳ ಬಾಯಿ ಮುಚ್ಚಿಸೋಕೆ ಧೋನಿ ಏನು ಮಾಡಬೇಕು? ಧೋನಿ ಅಭಿಮಾನಿಯಾಗಿ ಈ ಬಾರಿಯ ಐಪಿಎಲ್‌ನಲ್ಲಿ ನನಗೂ ಒಂದಷ್ಟು ಅಸಮಾಧಾನ ಇದೆ. ಚೆನ್ನೈ ತಂಡದಲ್ಲಿ ಗೆಲ್ಲಲೇಬೇಕೆಂಬ ಕಿಚ್ಚು ಯಾವ ಆಟಗಾರನಲ್ಲೂ ಕಾಣ್ತಾ ಇಲ್ಲ. ‘ಪವರ್ ಪ್ಲೇ’ಗಳಲ್ಲಿ ಮಿಕ್ಕ ತಂಡಗಳು ಹತ್ತರ ಸರಾಸರಿ ಯಲ್ಲಿ ಚಚ್ಚುತ್ತಾ ಇದ್ದರೆ, ಚೆನ್ನೈ ಅ ಅರ್ಧಪಂದ್ಯವನ್ನು ಸೋಲ್ತಾ ಇದೆ.

Naveen Sagar Column: ಬಿಟ್ಟೂಬಿಡದೆ ಕಾಡುವ ಶ್ಯಾʼಮನ ಮಿಡಿʼಯುವ ಕಥೆ !

ಬಿಟ್ಟೂಬಿಡದೆ ಕಾಡುವ ಶ್ಯಾʼಮನ ಮಿಡಿʼಯುವ ಕಥೆ !

ಚಳಿಗಾಲದಲ್ಲಿ ಚಳಿ ಕಮ್ಮಿ ಇದ್ದರೂ ನಮಗೆ ಸಮಾಧಾನ ಇರಲ್ಲ. ಚಳಿಗಾಲವನ್ನು ಬಯ್ತೀವಿ. ಮಳೆಗಾಲದಲ್ಲಿ ಮಳೆ ಜಾಸ್ತಿ ಬಂದ್ರೂ ಗೋಳಾಡ್ತೀವಿ. ಕಮ್ಮಿ ಬಂದರೂ ಗೊಣಗಾಡ್ತೀವಿ. ಪ್ರಕೃತಿಗೆ ನಾವು ಒಗ್ಗಿಕೊಳ್ಳುವುದು ಅನಿವಾರ್ಯ ಅಂತ ಗೊತ್ತಿದ್ದರೂ ಅದರ ಮೇಲಿನ ಮುನಿಸು ಮುಗಿಯೋದಿಲ್ಲ.