ಖುಷಿಯ ಹೊನಲಿನಲಿ ಕೊಚ್ಚಿ ಹೋಗುತಿದೆ ಅಳುವ ಹಾಯಿದೋಣಿ
ಯಾವುದೂ ಶಾಶ್ವತವಲ್ಲ ಅನ್ನೋದು ಕಳೆದ ಮೂರು ದಿನಗಳಲ್ಲಿ ಮೂರು ರೀತಿಯಲ್ಲಿ ನಿರೂಪಿತ ವಾಗಿಹೋಯ್ತು. ಹದಿನೆಂಟು ವರ್ಷಗಳ ನಂತರ ಕಪ್ ಗೆದ್ದ ಆರ್ ಸಿಬಿ ತಂಡದ ಖುಷಿ ಇಪ್ಪತ್ನಾಲ್ಕು ಗಂಟೆಗಳಲ್ಲಿ ಶೋಕವಾಗಿ ಬದಲಾಯ್ತು. ಆರ್ಸಿಬಿ ಇನ್ನೂ ಹತ್ತು ಕಪ್ ಗೆದನ್ನು ನೋಡುವಷ್ಟು ಆಯಸ್ಸಿದೆ ಎಂದುಕೊಂಡಿದ್ದ ಹನ್ನೊಂದು ಮಂದಿ, ಕೆಲವೇ ಗಂಟೆಗಳ ಹಿಂದೆ, ತಾವು ಸಾಯ ಬಹುದು ಎಂಬ ಸುಳುಹೂ ಇಲ್ಲದವರು ಇವತ್ತಿಗೆ ಪಂಚಭೂತಗಳಲ್ಲಿ ಲೀನ.