ಆಷಾಢದಲ್ಲಿ ಮೈಸೂರಿನ ಅಂದವೇ ಬೇರೆ !
ಆಷಾಢ ಮಾಸದಲ್ಲಿ ಮೈಸೂರು ಇದಕ್ಕಿದ್ದಂತೆ ಬದಲಾಗಿ ಬಿಡುತ್ತದೆ. ಮೈಸೂರಿನ ಗಲ್ಲಿಗಲ್ಲಿಗಳಲ್ಲಿ ಆಷಾಢ ಶುಕ್ರವಾರ ಅನ್ನದಾನ ಮಾಡುವುದು ಅತಿ ಸಾಮಾನ್ಯ ವಿಷಯವಾಗಿದೆ. ತಾಯಿ ಚಾಮುಂಡೇ ಶ್ವರಿಯು ಶಕ್ತಿದೇವತೆಯಾಗಿರುವ ಕಾರಣ ಮಾಂಸಾಹಾರವನ್ನು ಕೂಡ ಹೇರಳವಾಗಿ ಮಾಡಿ ಹಂಚಲಾಗುತ್ತದೆ. ಮೈಸೂರಿಗೆ ಹೊಸದಾಗಿ ಬಂದು ನೆಲೆ ನಿಂತ ಮೊದಲ ಆಷಾಢದಲ್ಲಿ ಇದನ್ನು ನೋಡಿ ಅಚ್ಚರಿಪಟ್ಟಿದ್ದೆ. ಇದೇನೋ ಅಬ್ಬರು, ಇಬ್ಬರು ಮಾಡಿಸುತ್ತಾರೆ ಎಂದು ಕೊಂಡಿದ್ದೆ.