ಬಿರುಬೇಸಗೆಯ ದಿನಗಳಲ್ಲಿ ಹೊಮ್ಮುತ್ತದೆ ತಾರಕ ಸ್ವರ !
ನಮ್ಮ ಹಳ್ಳಿಯ ಜನರು ಅದೊಂದು ಹಕ್ಕಿಗೆ ಹೆಸರಿಟ್ಟ ಪರಿ ಮಾತ್ರ ಬೆರಗು ಹುಟ್ಟಿಸುವಂಥದ್ದು! ಆ ಹಕ್ಕಿಯ ಹೆಸರಿನ ಹಿಂದೆ ಪುಟ್ಟ ಕಥೆಯಿದೆ, ಜತೆಗೆ ರೈತಾಪಿ ಜನರು ತಲೆ ತಲಾಂತರದಿಂದ ಅನುಭವಿಸು ತ್ತಾ ಬಂದಿರುವ ಕಷ್ಟ, ವೇದನೆಗಳ ವ್ಯಥೆಯಿದೆ. ಸಾಮಾನ್ಯವಾಗಿ ಬೇಸಗೆಯ ದಿನಗಳಲ್ಲಿ ಮನೆಯ ಮುಂದಿನ ಹಾಡಿಯ ಮರಗಳ ಸಂದಿಯಲ್ಲಿ ಕುಳಿತ ಒಂದು ಹಕ್ಕಿ ‘ಹೋರಿ ಸತ್ತುಹೋಯಿತೋ’ ಎಂದು ಕೂಗುತ್ತದೆ.