ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Profile

ಶಶಿಧರ ಹಾಲಾಡಿ

columnist

[email protected]

ಉಡುಪಿ ಜಿಲ್ಲೆಯ ಹಾಲಾಡಿಯವರಾದ ಶಶಿಧರ ಹಾಲಾಡಿಯವರು, ಕನ್ನಡ ಎಂ.ಎ. ಪದವಿಯಲ್ಲಿ ಮೊದಲ ರಾಂಕ್ ಮತ್ತು ಒಂದು ಚಿನ್ನದ ಪದಕ ಗಳಿಸಿದ್ದಾರೆ. ಛಾಯಾಗ್ರಹಣ, ಪರಿಸರ, ಚಾರಣ ಮತ್ತು ಸಾಹಿತ್ಯ ಇವರ ಹವ್ಯಾಸಗಳು. ಗ್ರಾಮೀಣ ಬದುಕು ಮತ್ತು ಪರಿಸರ ಚಿಂತನೆಗಳ ಹಲವು ಅಂಕಣಗಳನ್ನು ಬರೆದಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಷಯವನ್ನು ಒಳಗೊಂಡ ಇವರು ರಚಿಸಿದ ಅಬ್ಬೆ ಕಾದಂಬರಿಯನ್ನು ನಾಲ್ಕು ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿಶ್ವವಾಣಿಯಲ್ಲಿ "ಶಶಾಂಕಣ" ಅಂಕಣವನ್ನು ಪ್ರತಿ ಶುಕ್ರವಾರ ಬರೆಯುತ್ತಿದ್ದಾರೆ.

Articles
Shadhidhara Halady Honoured: ನದಿ ದಾಟಿ ಬಂದವರು ಬದಲಾವಣೆಗಳನ್ನು ವಿಶ್ಲೇಷಿಸುವ ಕೃತಿ

ನದಿ ದಾಟಿ ಬಂದವರು ಬದಲಾವಣೆಗಳನ್ನು ವಿಶ್ಲೇಷಿಸುವ ಕೃತಿ

ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನ ವತಿಯಿಂದ ಶನಿವಾರ ಆಯೋಜಿಸಿದ್ದ ದ್ವಾರನಕುಂಟೆ ಪಾತಣ್ಣ ಕಾದಂಬರಿ ಪ್ರಶಸ್ತಿಯನ್ನು ವಿಶ್ವವಾಣಿ ಪುರವಣಿ ವಿಭಾಗದ ಮುಖ್ಯಸ್ಥ ಶಶಿಧರ ಹಾಲಾಡಿ (Shashidhar Haladi, Head of Vishwavani Supplement Department) ಅವರಿಗೆ ಪ್ರದಾನ ಮಾಡಿ ಬಳಿಕ ಮಾತನಾಡಿದ ಅವರು, ಕಾದಂಬರಿಯು ಬ್ರಿಟಿಷರ ಆಳ್ವಿಕೆಯಿಂದ ಮುಕ್ತಿಗೊಳ್ಳುವ ಹೋರಾಟದ ಕಾಲಘಟ್ಟವನ್ನು ಹಾಗೂ ಅದರ ನಂತರದ ಸಾಮಾಜಿಕ-ರಾಜಕೀಯ ಬೆಳವಣಿಗೆಗಳನ್ನು ಸಾಹಿತ್ಯದ ಮೂಲಕ ವಿಶ್ಲೇಷಿಸುತ್ತದೆ

Shashidhara Halady Column: ಪರಿಸರ ಪಾಠ ನೀಡಿದ ಗುಡಿಸಲು ಶಾಲೆ !

Shashidhara Halady Column: ಪರಿಸರ ಪಾಠ ನೀಡಿದ ಗುಡಿಸಲು ಶಾಲೆ !

ಬಾಗೂರಿನ ದೇಗುಲದಲ್ಲಿ ಹಿಂದೆ ಶಾಲೆ ನಡೆಯುತ್ತಿದ್ದ ವಿಚಾರ ತಿಳಿದಾಗ, ನಮ್ಮ ಹಳ್ಳಿಯ ಶಾಲೆಯ ನೆನಪಾಯಿತು. ಅದೊಂದು ಏಕೋಪಾಧ್ಯಾಯ ಶಾಲೆ. 1959-60ರಲ್ಲಿ ಆರಂಭ ಗೊಂಡಾಗ, ಆ ಪುಟಾಣಿ ಶಾಲೆ ಮುಂದುವರಿಯಲ್ಲಿದ್ದ ಪುರಾತನ ಮಹಾಲಿಂಗೇಶ್ವರ ದೇವಾ ಲಯದ ಮುಖಮಂಟಪದಲ್ಲಿ ನಡೆಯುತ್ತಿದ್ದವು.

ಅಪೂರ್ವ ಒಳನೋಟಗಳು

ಅಪೂರ್ವ ಒಳನೋಟಗಳು

ಒಂದು ಉದಾಹರಣೆಯನ್ನು ನೋಡುವುದಾದರೆ, ‘ಸಂಕೀರ್ಣ ಸಂರಚನೆಯ ವದರಿಂಗ್ ಹೈಟ್ಸ್’ ಲೇಖನದಲ್ಲಿ ಬಂದಿರುವ ಆರಂಭದ ಸಾಲುಗಳಿವು: “ಕನ್ನಡದ ನವೋದಯ ಸಾಹಿತ್ಯ ಸಂದರ್ಭ ದಲ್ಲಿ ಇಂಗ್ಲಿಷ್ ಸಾಹಿತ್ಯಾಭ್ಯಾಸದ ಫಲವಾಗಿ ಕಾವ್ಯ, ಸಣ್ಣಕತೆ, ಕಾದಂಬರಿ, ಲಲಿತ ಪ್ರಬಂಧ ಹೀಗೆ ಹೊಸ ಸಾಹಿತ್ಯದ ವಿವಿಧ ಪ್ರಕಾರಗಳು ಹುಟ್ಟಿಕೊಂಡವು.

Shashidhara Halady honoured: 2025ರ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗೆ ಶಶಿಧರ ಹಾಲಾಡಿ ಭಾಜನ

ಶಶಿಧರ ಹಾಲಾಡಿ ಕೃತಿಗೆ ಪ್ರಶಸ್ತಿ

ದ್ವಾರನಕುಂಟೆ ಪಾತಣ್ಣ ಪ್ರತಿಷ್ಠಾನವು 2025ರ ಅತ್ಯುತ್ತಮ ಕಾದಂಬರಿ ಪ್ರಶಸ್ತಿಗೆ ಶಶಿ`ಧರ ಹಾಲಾಡಿ ಅವರು ರಚಿಸಿದ `"ನದಿ ದಾಟಿ ಬಂದವರು" ಆಯ್ಕೆಯಾಗಿದೆ. ಈ ಪ್ರಶಸ್ತಿಯು ರು.೨೫,೦೦೦/- ನಗದು ಮತ್ತು ಪ್ರಶಸ್ತಿ ಫಲಕವನ್ನು ಒಳಗೊಂಡಿದೆ ಎಂದು ಪ್ರತಿಷ್ಠಾನದ ಕಾರ್ಯದರ್ಶಿ ಬಿ.ಎಂ.ಹನೀಫ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Shashidhara Halady Column: ಕುದುರೆಯ ಬಾಲ ಮನೆಯಂಗಳದಲ್ಲಿ !

Shashidhara Halady Column: ಕುದುರೆಯ ಬಾಲ ಮನೆಯಂಗಳದಲ್ಲಿ !

ನಮ್ಮ ಹಳ್ಳಿಯ ಮನೆಯಲ್ಲಿ ಇಂಥದೊಂದು ಘಟನೆಗೆ ನನ್ನ ತಂಗಿ, ಭಾವ ಸಾಕ್ಷಿಯಾದರು. ಅದನ್ನು ಅವರ ಮಾತುಗಳಲ್ಲೇ ಕೇಳುವುದಾದರೆ: “ನಮ್ಮ ಮನೆಯ ಬೆಕ್ಕು ತನ್ನ ಬಾಯಲ್ಲಿ ಒಂದು ಹಾಂತೆಯನ್ನು ಕಚ್ಚಿಕೊಂಡು ಓಡಿ ಬಂತು. ಸಂಜೆಯ ಕತ್ತಲೆಯ ಸಮಯ. ಅದರ ಬಾಯಲ್ಲಿದ್ದ ಕೀಟವನ್ನು ಕಂಡು, ಹಚ ಹಚ ಎಂದು ಓಡಿಸಿದೆವು.

Shashidhara Halady Column: ಪುನರ್ಜನ್ಮ ಪಡೆದ ಒಂದು ಗೊಂಡಾರಣ್ಯ !

Shashidhara Halady Column: ಪುನರ್ಜನ್ಮ ಪಡೆದ ಒಂದು ಗೊಂಡಾರಣ್ಯ !

ಆಗುಂಬೆಯ ಸುತ್ತಲಿನ ದಟ್ಟ ಅರಣ್ಯವನ್ನು ನಾಶ ಮಾಡಿದರೆ, ಮುಂದಿನ ದಶಕಗಳಲ್ಲಿ ಶಿವಮೊಗ್ಗ, ಚಿಕ್ಕಮಗಳೂರು ಪರಿಸರದ ಹಳ್ಳಿಗಳಲ್ಲಿ ಕುಡಿಯುವ ನೀರಿನ ಅಭಾವ ತಲೆದೋರ ಬಹುದು ಎಂಬ ವಿಚಾರದ ಸ್ಥೂಲ ಅರಿವಿದ್ದರೂ, ಅಲ್ಲಿನ ಅರಣ್ಯ ನಾಶಕ್ಕೆ ಪ್ರಬಲವಾದ ನೆಪಗಳನ್ನು ಮುಂದೊಡ್ಡಿ, ಕೋಟಿಗಟ್ಟಲೆ ಅಂದಾಜು ವೆಚ್ಚದ ‘ಕಾಮಗಾರಿ’ ಗಳನ್ನು ಜಾರಿಗೆ ತರುವ ಪ್ರಯತ್ನ ನಡೆಯುತ್ತಿದೆ.

Shashidhara Halady Column: ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !

ಬೇಕೆ ಇಂತಹ ವಿನಾಶ! ಹೆದ್ದಾರಿಗಾಗಿ ಕಾಡು ನಾಶ !

ಪಶ್ಚಿಮ ಘಟ್ಟಗಳು ಮತ್ತು ಅದರ ಆಶ್ರಯದಲ್ಲಿ ಬೆಳೆದಿರುವ ವನಸಿರಿ - ಇದನ್ನು ಪಡೆದಿರುವ ನಮ್ಮ ರಾಜ್ಯವು ನಿಜಕ್ಕೂ ಅದೃಷ್ಟವಂತ ರಾಜ್ಯ! ಇಂತಹದೊಂದು ಅಪರೂಪದ ಕಾಡು ಪ್ರದೇಶವನ್ನು ಪಡೆದಿರುವ ನಮ್ಮ ರಾಜ್ಯದ ಜನರು ಸಹ ಅದೃಷ್ಟ ವಂತರು. ಇಂತಹ ಅಪರೂಪದ ಕಾಡು, ವನಸಿರಿ, ಜೀವ ವೈವಿಧ್ಯ ನಮ್ಮ ದೇಶದ ಅವೆಷ್ಟೋ ರಾಜ್ಯಗಳಲ್ಲಿ ಕಾಣ ಸಿಗದು!

Shashidhara Halady Column: ಹೀಗೂ ಇದೆ ಸೋಗುವೇಷದ ಉದಾಹರಣೆ !

Shashidhara Halady Column: ಹೀಗೂ ಇದೆ ಸೋಗುವೇಷದ ಉದಾಹರಣೆ !

ನಮ್ಮ ಹಳ್ಳಿಯಲ್ಲಿ ಇವು ಅಪರೂಪವೇನಲ್ಲ, ಸಾಕಷ್ಟು ಕಾಣಿಸುತ್ತವೆ. ಜತೆಗೆ, ನಾಲ್ಕಾರು ಪ್ರಭೇದದ ಕಡ್ಡಿಕೀಟಗಳೂ ನಮ್ಮ -ಸಲೆಯಲ್ಲಿವೆ. ಆದರೆ, ಮನುಷ್ಯನ ಕಣ್ಣಿಗೆ ಕಾಣಿಸುವುದು ಅಪರೂಪ. ಕಡ್ಡಿ ಕೀಟವನ್ನು ನಾನು ಮೊದಲ ಬಾರಿ ನೋಡಿದ್ದು ನಾಲ್ಕನೆಯ ತರಗತಿಯ ವಿದ್ಯಾರ್ಥಿಯಾಗಿದ್ದಾಗ. ನಮ್ಮ ಮನೆ ಎದುರಿನಲ್ಲಿದ್ದ ಗುಡಿಸಲಿನಂಥ ಪುಟ್ಟ ಕೊಟ್ಟಿಗೆಯಲ್ಲಿ, ಆ ಕೀಟವು ಕೊಟ್ಟಿಗೆಯ ಮರದ ಕಂಬದ ಮೇಲೆ ಕುಳಿತಿತ್ತು.

Shashidhara Halady Column: ನಾವು ಮರೆಯುತ್ತಿರುವ ಹಳೆಯ ತಿನಿಸುಗಳು !

ನಾವು ಮರೆಯುತ್ತಿರುವ ಹಳೆಯ ತಿನಿಸುಗಳು !

ಸಿಹಿ ಗುಂಬಳದ ಹೂವುಗಳೇ ಬೇಕು, ಅದರಲ್ಲೂ, ಗಂಡು ಹೂವುಗಳು ಬೇಕು. ಉದ್ದಗೆ, ತುಸು ದಪ್ಪಗೆ ಇರುವ ಸಿಹಿಗುಂಬಳದ ಹೂವುಗಳನ್ನು ಚೆನ್ನಾಗಿ ಕತ್ತರಿಸಿಕೊಂಡು, ಅಕ್ಕಿಹಿಟ್ಟಿನೊಂದಿಗೆ ಬೆರೆಸಬೇಕು. ಅದಕ್ಕೆ ಮೆಣಸಿನ ಕಾಯಿ ಮತ್ತು ಉಪ್ಪನ್ನು ಸೇರಿಸಬೇಕು. ನಂತರ, ದೋಸೆಯ ರೀತಿ ಕಾವಲಿಯ ಮೇಲೆ ಬೇಯಿಸಿದಾಗ ಗುಂಬಳಹೂವಿನ ದೋಸೆ ಸಿದ್ಧ. ಸ್ವಲ್ಪ ಜಾಸ್ತಿಯೇ ಎಣ್ಣೆಯನ್ನು ಸವರಿ ಬೇಯಿಸಿದರೆ, ಬಲು ರುಚಿ!

Shashidhara Halady Column: ಕಾಡು ಕಡಿದು ಅಭಿವೃದ್ಧಿಯೆ ? ಖಂಡಿತಾ ಕೂಡದು !

ಕಾಡು ಕಡಿದು ಅಭಿವೃದ್ಧಿಯೆ ? ಖಂಡಿತಾ ಕೂಡದು !

ನಿಜ, ಬೆಳೆಯುತ್ತಿರುವ ನಗರಗಳಿಗೆ, ಪಟ್ಟಣಗಳಿಗೆ ನೀರು ಬೇಕು, ಅಲ್ಲಿ ವಾಸಿಸುವ ಜನರಿಗೆ ‘ಕುಡಿಯುವ’ ನೀರು ಬೇಕು. ಅದನ್ನು ಒದಗಿಸುವುದು ಸರಕಾರದ ಕರ್ತವ್ಯವೂ ಹೌದು. ಆದರೆ, ಅದೇ ಸಮಯದಲ್ಲಿ, ಜನರ ಭವಿಷ್ಯದ ಹಿತಾಸಕ್ತಿಯನ್ನು ಕಾಪಾಡುವುದು ಸಹ ಸರಕಾರದ ಕರ್ತವ್ಯ ಎಂಬುದನ್ನು ಈ ‘ಕೆಲವರು’ ಮರೆಯುತ್ತಾರೆ!

Shashidhara Halady Column: ವಿದ್ಯಾರ್ಥಿಯೊಬ್ಬನು ಹೊಳೆಯುವ ಚಾಕು ಹಿಡಿದದ್ದು !

ವಿದ್ಯಾರ್ಥಿಯೊಬ್ಬನು ಹೊಳೆಯುವ ಚಾಕು ಹಿಡಿದದ್ದು !

ಅದೇ ಕಪ್ಪೆ ಕೊಯ್ಯುವ ಪ್ರಯೋಗ! ಹತ್ತನೆಯ ತರಗತಿಯಲ್ಲಿದ್ದಾಗಲೇ, ನಮ್ಮ ತರಗತಿಯ ಅಮಾ ಯಕ, ಗ್ರಾಮೀಣ ಹಿನ್ನೆಲೆಯ ಸ್ನೇಹಿತರು ತುಸು ಬೆರಗಿನಿಂದ, ತುಸು ಭಯದಿಂದ ಹೇಳುತ್ತಿದ್ದರು: ‘ಬರುವ ವರ್ಷ ಕಪ್ಪೆ ಕೊಯ್ಯುವ ಪ್ರಯೋಗ ನಮಗೂ ಉಂಟು’. ಹಿಂದೆಂದೂ ಯಾವುದೇ ಪ್ರಾಣಿಗೆ ಹಿಂಸೆ ಕೊಡದೇ ಇರುವ ನಮ್ಮಂಥ ವಿದ್ಯಾರ್ಥಿಗಳು, ಅಂಥ ಒಂದು ಪ್ರಯೋಗವನ್ನು ನೆನಪಿಸಿ ಕೊಂಡೇ ತುಸು ಹೀಕರಿಸಿಕೊಳ್ಳುತ್ತಿದ್ದುದೂ ನಿಜ!

Shashidhara Halady Column: ಎಚ್ದರವಿರಲಿ ಕಾಡು ಗುಡ್ಡಗಳಲ್ಲಿ ಅಲೆಯುವಾಗ !

ಎಚ್ದರವಿರಲಿ ಕಾಡು ಗುಡ್ಡಗಳಲ್ಲಿ ಅಲೆಯುವಾಗ !

ಬೆಟ್ಟ ಗುಡ್ಡಗಳಲ್ಲಿ ಅಲೆದಾಡುವ ಚಾರಣಿಗರು, ಎಡವಟ್ಟು ಮಾಡದಂತೆ, ಹುಲ್ಲಿಗೆ ಬೆಂಕಿ ಹಾಕದಂತೆ ಎಚ್ಚರಿಕೆಗಳನ್ನು ಕೈಗೊಂಡು, ಚಾರಣಕ್ಕೆ ಅವಕಾಶವನ್ನು ನೀಡುವುದು ಜವಾಬ್ದಾರಿಯುತ ಕ್ರಮ ಎನಿಸಬಹುದು; ಆದರೆ, ಕೆಲವು ಸೂಕ್ಷ್ಮ ತಾಣಗಳಿಗೆ ಒಟ್ಟಾರೆ ಚಾರಣವನ್ನೇ ನಿರ್ಬಂಧಿಸುವುದು ಎಷ್ಟು ಸರಿ? ಇದು ಚರ್ಚೆಗೆ ಒಳಬೇಕಾದ ವಿಷಯ.

Shashidhara Halady Column: ಒಂದು ಹಡಗಿನ ತುಂಬಾ ರಫ್ತಾದ ನುಗ್ಗೆಗಿಡದ ಬೀಜ

ಒಂದು ಹಡಗಿನ ತುಂಬಾ ರಫ್ತಾದ ನುಗ್ಗೆಗಿಡದ ಬೀಜ

ಬಡ ಜನರಿಗೆ ನುಗ್ಗೆಕಾಯಿಯನ್ನು ತಿನ್ನಿಸುವುದು ಎಂದು ನಿರ್ಧರಿಸಲಾಯಿತು. ಆದರೆ, ಅದರ ಗಿಡ, ಬೀಜ ಸುಲಭವಾಗಿ ಎಲ್ಲಿ ಸಿಗುತ್ತದೆ? ಅವರಿಗೆ ದೊರೆತ ಉತ್ತರ- ಭಾರತ! ಪೌಷ್ಟಿಕಾಂಶಗಳ ಆಗರ ನುಗ್ಗೆ ಕಾಯಿ, ನುಗ್ಗೆ ಸೊಪ್ಪು, ನುಗ್ಗೆ ಬೀಜಗಳ ಮೂಲ ಭಾರತ ಮತ್ತು ಸುತ್ತಮುತ್ತಲಿನ ದೇಶಗಳು. ನುಗ್ಗೆಕಾಯಿ ಯ ವಿಚಾರ ತಿಳಿದ ಕೂಡಲೇ, ಕಾಸ್ಟ್ರೋ ಅವರು ಅದರ ಕುರಿತು ಎಲ್ಲಾ ಮಾಹಿತಿಯನ್ನು ಕಲೆ ಹಾಕಿದರು.

Shashidhara Halady Column: ಗ್ರಾಮೀಣ ಜನರನ್ನೂ ಕಾಡುತ್ತಿರುವ ಸಕ್ಕರೆ ಕಾಯಿಲೆ !

ಗ್ರಾಮೀಣ ಜನರನ್ನೂ ಕಾಡುತ್ತಿರುವ ಸಕ್ಕರೆ ಕಾಯಿಲೆ !

ಪ್ರತಿ ಮನೆಯಲ್ಲಿಯೂ ಒಬ್ಬರಾದರೂ ‘ಸಕ್ಕರೆ ಕಾಯಿಲೆ’ಯವರು ಇದ್ದರು! ಅವರಲ್ಲಿ ಕೆಲವರು ತೀವ್ರ ಸ್ಥಿತಿ ತಲುಪಿ, ಇನ್ಸುಲಿನ್ ಇಂಜೆಕ್ಷನ್ ತೆಗೆದುಕೊಳ್ಳುವ ಸ್ಥಿತಿಯಲ್ಲಿದ್ದರು. ಇನ್ನೂ ಕೆಲವರು ಪ್ರತಿದಿನ ತಪ್ಪದೇ ಸಮಯಕ್ಕೆ ಸರಿಯಾಗಿ ಮಾತ್ರಗಳನ್ನು ತಿನ್ನುತ್ತಾ ತಮ್ಮ ಸಕ್ಕರೆ ಕಾಯಿಲೆಯನ್ನು ನಿಯಂತ್ರಣ ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದರು. ದೇವರಿಗೆ ಪೂಜೆ ತಪ್ಪಿದರೂ ಪರವಾಗಿಲ್ಲ- ಆದರೆ ಸಕ್ಕರೆ ಕಾಯಿಲೆಯ ಮಾತ್ರೆ ತಿನ್ನುವುದನ್ನು ತಪ್ಪಿಸುವಂತಿರಲಿಲ್ಲ!

Shashidhara Halady Column: ಆಂಗ್ಲರು ಇದಕ್ಕೆ ಇಟ್ಟಿದ್ದಾರೆ ಆಕರ್ಷಕ ಹೆಸರು !

ಆಂಗ್ಲರು ಇದಕ್ಕೆ ಇಟ್ಟಿದ್ದಾರೆ ಆಕರ್ಷಕ ಹೆಸರು !

ಕನ್ನಡದಲ್ಲಿ ತಾಳೆ ಮರ ಎಂಬ ಹೆಸರು ಸ್ಥಿರವಾಗಿದೆ. ಇಂಗ್ಲಿಷರು ಮಾತ್ರ ಇದಕ್ಕೆ ಬಹು ಸುಂದರ ಹೆಸರು ಇಟ್ಟಿದ್ದಾರೆ ‘ಐಸ್ ಆಪಲ್!’ ಥಂಡಾ ಸೇಬು! ನಿಜಕ್ಕೂ ಇದು ತಂಪಾದ ಮರ. ನೆರಳಿನ ತಂಪಿಗಿಂತಲೂ, ಇದರ ಹಣ್ಣನ್ನು ಸೇವಿಸಿದರೆ, ದೇಹಕ್ಕೆ ತಂಪು; ನೋಡಲು ಐಸ್ ರೀತಿ ಕಾಣಿಸುವುದರಿಂದಾಗಿ, ಇದನ್ನು ಆಂಗ್ಲರು ಐಸ್ ಆಪಲ್ ಎಂದು ಕರೆದಿರಬೇಕು!

Shashidhara Halady Column: ಸೋಲೋ ಟ್ರಿಪ್‌ʼನಲ್ಲಿ ಕಂಡ ಮಳೆಕೋಂಗಿಲ !

ಸೋಲೋ ಟ್ರಿಪ್‌ʼನಲ್ಲಿ ಕಂಡ ಮಳೆಕೋಂಗಿಲ !

ವಿಶಾಲ ಬಯಸೀಮೆಯ ಏಕಾಂಗಿ ಸ್ಥಳವೊಂದರಲ್ಲಿ ಥೆರೆಸಾಪುರ ಮತ್ತು ಅಲ್ಲಿನ ಚರ್ಚ್ ನಿಂತಿತ್ತು. ಅಲ್ಲಿಂದ ಮುಂದೆ ಸಿಗುವ ಮಣ್ಣುರಸ್ತೆಯಲ್ಲಿ ಒಂದೆರಡು ಕಿ.ಮೀ. ಸೈಕಲ್ ತುಳಿದೆ. ಆ ದಿನದ ಸೈಕಲ್ ಸವಾರಿಗೆ ಒಂದು ಸ್ಥೂಲ ಗುರಿಯಿತ್ತು: ಅದೇನೆಂದರೆ, ಆ ದಿಕ್ಕಿನಲ್ಲಿ ಸಾಗಿದರೆ, ಮುತ್ತಾನೆಗೆರೆ ಮತ್ತು ಆನೆಗೆರೆ ಎಂಬ ಎರಡು ದೊಡ್ಡ ಕೆರೆಗಳಿವೆ ಎಂದು ಸ್ಥಳೀಯ ಹುಡುಗರು ಹೇಳಿದ್ದರು.

Shashidhara Halady Column: ಇವೆಲ್ಲಾ ಬೇಕಿಲ್ಲವೇ ನಮ್ಮ ಮುಂದಿನ ತಲೆಮಾರಿಗೆ !

ಇವೆಲ್ಲಾ ಬೇಕಿಲ್ಲವೇ ನಮ್ಮ ಮುಂದಿನ ತಲೆಮಾರಿಗೆ !

ನಮ್ಮ ಮನೆಯ ಮೇಲ್ಭಾಗದಲ್ಲಿ ಹಲಸಿನ ಮರವೊಂದಿತ್ತು; ಅದರ ನೆರಳಿನಿಂದಾಗಿ, ಬೇಸಗೆಯಲ್ಲಿ ಸೆಕೆ ಕಡಿಮೆಯಾಗುತ್ತಿತ್ತು. ನಮ್ಮ ಹಳ್ಳಿಯಿಂದ ಕೆಲವು ಕಿ.ಮೀ. ಪೂರ್ವ ದಿಕ್ಕಿಗೆ ಸಾಗಿದರೆ, ಪಶ್ಚಿಮ ಘಟ್ಟ ಸಾಲಿನ ಗರ್ಭದಲ್ಲೇ ಎಂಬಂತೆ ಇರುವ ಕೆಲವು ಹಳ್ಳಿಗಳಲ್ಲಂತೂ, ಮನೆಗಳನ್ನೇ ತಮ್ಮ ಗರ್ಭದಲ್ಲಿ ಅಡಗಿಸಿಕೊಂಡಂತೆ ಮರ, ಗಿಡ, ಬಳ್ಳಿಗಳು ಬೆಳೆದಿರುತ್ತಿದ್ದವು.

Shashidhara Halady Column: ವಾಂಟರ್ಕ ಎಂಬ ಜೀವಿ ಗೊತ್ತೇ ನಿಮಗೆ !

Shashidhara Halady Column: ವಾಂಟರ್ಕ ಎಂಬ ಜೀವಿ ಗೊತ್ತೇ ನಿಮಗೆ !

ಮಳೆ ಕಡಿಮೆಯಾದರೂ ಹರಿಯುತ್ತಲೇ ಇರುವ ಈ ನೀರು ಸ್ಫಟಿಕ ಶುದ್ಧ. ಕ್ರಮೇಣ ಮಳೆ ಕಡಿಮೆ ಯಾಗುತ್ತದೆ; ಎರಡನೆಯ ಬೆಳೆಗಾಗಿ ಗದ್ದೆಗಳನ್ನು ಹಸನು ಮಾಡುವ ಸಮಯ. ಚಳಿಗಾಲದ ಆರಂಭ ದಲ್ಲಿ ಹೀಗೆ ಗದ್ದೆಯನ್ನು ಉಳುಮೆ ಮಾಡಿ, ಬೀಜ ಬಿತ್ತಿದಾಗ, ಅದೆಲ್ಲಿಂದಲೋ ಬರುವ ‘ವಾಂಟರ್ಕ’ ಗಳು ಗದ್ದೆ ಮತ್ತು ಅಗೇಡಿಯನ್ನು ಉಳುಮೆ ಮಾಡುವುದುಂಟು!

Shashidhara Halady Column: ನೋಡಲು ಚಂದ, ಆದರೆ ರೈತರಿಗೆ ಕಷ್ಟ !

ನೋಡಲು ಚಂದ, ಆದರೆ ರೈತರಿಗೆ ಕಷ್ಟ !

ಹಕ್ಕಲಿನ ಅಂಚಿನಲ್ಲೋ, ಹಾಡಿಯ ಮಧ್ಯದಲ್ಲೋ ಓಡಾಡುವ ಕಾಡುಕೋಳಿಗಳನ್ನು, ಇನ್ನೂ ಚಿಕ್ಕ ಗಾತ್ರದ ಚಿಟ್‌ಕೋಳಿಗಳನ್ನು ನೋಡಿದ್ದುಂಟು. ಮಳೆಗಾಲದಲ್ಲಿ ದೊಡ್ಡದಾಗಿ ಸದ್ದು ಮಾಡುತ್ತಾ ಕೂಗು ತ್ತಿದ್ದ ವಾಂಟಕೋಳಿಗಳನ್ನು ನೋಡಿದ್ದು ಹಲವು ಬಾರಿ; ಟಿಟ್ಟಿಭ, ಗೂಬೆ, ನೆತ್ತಿಂಗ ಇವೆಲ್ಲಾ ನಮ್ಮ ಹಳ್ಳಿ ಯಲ್ಲಿ ಸಾಮಾನ್ಯ ಮತ್ತು ಆಗಾಗ ಕಾಣಿಸುತ್ತಿದ್ದವು.

Shashidhara Halady Column: ಐತಿಹ್ಯಗಳ ಸುರಂಗದಲ್ಲಿ ವಂಡಾರು ಕಂಬಳ ಕೊಡಿ ಹಬ್ಬ

ಐತಿಹ್ಯಗಳ ಸುರಂಗದಲ್ಲಿ ವಂಡಾರು ಕಂಬಳ ಕೊಡಿ ಹಬ್ಬ

ಕರಾವಳಿಯುದ್ದಕ್ಕೂ ಸಾಗಿದ್ದ ಹೆದ್ದಾರಿಯಂಚಿನಲ್ಲಿದ್ದ ಊರು ಅದು. ಮೊದಲಿನಿಂದಲೂ ವಿದ್ಯಾ ಭ್ಯಾಸದ ಸೌಕರ್ಯವಿದ್ದ ಸ್ಥಳ. ಜತೆಯಲ್ಲಿ, ಕೇವಲ ೩ ಕಿ.ಮೀ. ದೂರದ ಕುಂದಾಪುರದಲ್ಲಿ ಕಾಲೇಜು, ಸರಕಾರಿ ಆಸ್ಪತ್ರೆ, ಎಡ್ವರ್ಡ್ ಮೆಮೋರಿಯಲ್ ಗ್ರಂಥಾಲಯ (ಸರಕಾರದ ಸುಪರ್ದಿನಲ್ಲಿದ್ದ ಸಾರ್ವಜನಿಕ ಗ್ರಂಥಾಲಯ), ಕಡಲು, ಕಿನಾರೆ, ಶೋಲಾ ಕಾಡು, ನದಿಸಂಗಮದ ತಾಣ ಎಲ್ಲವೂ ಇದ್ದ ಊರು.

Shashidhara Halady Column: ಬಾ ಎನ್ನ ಓದುಗನೇ, ಇಲ್ಲಿದೆ ಜ್ಞಾನವಿಧಿ !

Shashidhara Halady Column: ಬಾ ಎನ್ನ ಓದುಗನೇ, ಇಲ್ಲಿದೆ ಜ್ಞಾನವಿಧಿ !

ನಮ್ಮ ವಸತಿ ಸಂಕೀರ್ಣದ ಮುಂಭಾಗದ ವಿಶಾಲವಾದ ರಸ್ತೆಯಲ್ಲಿ ಬಸ್ಸುಗಳು ಬರುತ್ತವಾದರೂ, ಕೆಲವೇ ಕೆಲವು; ಅಂದರೆ ದಿನಕ್ಕೆ ನಾಲ್ಕಾರು ಮಾತ್ರ. ಆದ್ದರಿಂದ, ನಮ್ಮ ಮಗಳು ಕಚೇರಿಯಿಂದ ವಾಪಸು ಬರುವುದನ್ನೇ ಕಾದು ಕುಳಿತಿದ್ದು, ಸಂಜೆಯ ಹೊತ್ತಿನಲ್ಲಿ ವಾರಕ್ಕೆ ಒಂದೆರಡು ಬಾರಿಯಾದರೂ ವಾಚನಾಲಯಕ್ಕೆ ಭೇಟಿ ನೀಡುವುದು, ಅಲ್ಲಿನ ಸೋಜಿಗಳನ್ನು ಗಮನಿಸುವುದು ನಮ್ಮ ಹವ್ಯಾಸ ಎನಿಸಿತು.

Shashidhara Halady Column: ಸರಕಾರಿ ಶಾಲೆಯ ಹಾದಿಯಲ್ಲಿ ಕಲ್ಲುಮುಳ್ಳುಗಳು !

ಸರಕಾರಿ ಶಾಲೆಯ ಹಾದಿಯಲ್ಲಿ ಕಲ್ಲುಮುಳ್ಳುಗಳು !

ಐದನೆಯ ತರಗತಿಯಿಂದ ಏಳನೆಯ ತರಗತಿಯ ತನಕ ನಾನು ಓದಿದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ನಮ್ಮ ಮನೆಯಿಂದ ಸುಮಾರು ಮೂರು ಕಿ.ಮೀ. ದೂರದ ನಡಿಗೆ ದಾರಿ. ದಟ್ಟ ಕಾಡಿನ ಪಕ್ಕದಲ್ಲಿದ್ದ ‘ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಲಾಡಿ’ ಇದು ಇದ್ದುದು, ಪಡುಹಾಲಾಡಿಯಲ್ಲಿ. ಆ ಶಾಲೆಗೆ ಹೋಗಲು ಮೂರು ದಾರಿಗಳಿದ್ದವು; ಎಲ್ಲವೂ ಕಠಿಣವೇ.

Shashidhara Halady Column: ಈ ಕೀಟಗಳು ಕಡಿದರೆ ಅಪಾಯ ತಪ್ಪಿದ್ದಲ್ಲ!

Shashidhara Halady Column: ಈ ಕೀಟಗಳು ಕಡಿದರೆ ಅಪಾಯ ತಪ್ಪಿದ್ದಲ್ಲ!

ಫೇಸ್‌ಬುಕ್‌ನಲ್ಲಿ ಪ್ರತಿಕ್ರಿಯೆ ನೀಡಿದ್ದ ಹೆಚ್ಚಿನವರು ಆ ಗೂಡನ್ನು ಕೂಡಲೆ ತೆಗೆಸುವುದು ಒಳ್ಳೆಯದು, ಇಲ್ಲವಾದರೆ ಜೀವಕ್ಕೆ ಅಪಾಯವಿದೆ ಎಂದೇ ಬರೆದಿದ್ದರು. ಈ ಕೀಟಗಳ ಕುರಿತು ಇಂಟರ್‌ನೆಟ್‌ನಲ್ಲಿ ಹುಡುಕಿದೆ. ಜಪಾನ್‌ನಲ್ಲಿ ವರ್ಷಕ್ಕೆ ಸರಾಸರಿ ೩೦ ಮಂದಿ ಇವುಗಳ ಕಡಿತದಿಂತ ಸಾಯುತ್ತಾರಂತೆ! ಚೀನಾದಲ್ಲೂ ವಾರ್ಷಿಕ ಸರಾಸರಿ ೫೦ ಜನ ಇವು ಗಳಿಂದ ಸಾಯುತ್ತಾರೆ. ಒಂದು ಗೂಡಿನಲ್ಲಿ 500ಕ್ಕೂ ಹೆಚ್ಚಿನ ಕೀಟಗಳಿರುತ್ತವೆ.

Shashidhara Halady Column: ಮರಗಳೇ ಎನ್ನ ಮಕ್ಕಳು !

Shashidhara Halady Column: ಮರಗಳೇ ಎನ್ನ ಮಕ್ಕಳು !

ಮಕ್ಕಳಿಲ್ಲದ ಆ ದಂಪತಿಗೆ, ಆ ರಸ್ತೆಯುದ್ದಕ್ಕೂ ಬೆಳೆದು ನಿಂತ ಮರಗಳೇ ಮಕ್ಕಳು ಎನಿಸಿ ದವು. ಅವುಗಳು ಬೆಳೆಯುವುದನ್ನು ನೋಡುತ್ತಾ, ಅವುಗಳ ಪಾಲನೆ ಪೋಷಣೆ ಮಾಡುತ್ತಾ, ಬದುಕಿ ನಲ್ಲಿ ಪ್ರೀತಿಯನ್ನು ಕಂಡುಕೊಂಡರು ಆ ದಂಪತಿ. ಈ ನಡುವೆ, 1991ರಲ್ಲಿ ತಿಮ್ಮಕ್ಕ ನವರ ಪತಿ ಬಿಕ್ಕಲು ಚಿಕ್ಕಯ್ಯ ತೀರಿ ಹೋದಾಗ, ತಿಮ್ಮಕ್ಕ ಏಕಾಂಗಿಯಾದರು.

Loading...