ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ಶಶಿಧರ ಹಾಲಾಡಿ

columnist

info20@vishwavani.news

ಉಡುಪಿ ಜಿಲ್ಲೆಯ ಹಾಲಾಡಿಯವರಾದ ಶಶಿಧರ ಹಾಲಾಡಿಯವರು, ಕನ್ನಡ ಎಂ.ಎ. ಪದವಿಯಲ್ಲಿ ಮೊದಲ ರಾಂಕ್ ಮತ್ತು ಒಂದು ಚಿನ್ನದ ಪದಕ ಗಳಿಸಿದ್ದಾರೆ. ಛಾಯಾಗ್ರಹಣ, ಪರಿಸರ, ಚಾರಣ ಮತ್ತು ಸಾಹಿತ್ಯ ಇವರ ಹವ್ಯಾಸಗಳು. ಗ್ರಾಮೀಣ ಬದುಕು ಮತ್ತು ಪರಿಸರ ಚಿಂತನೆಗಳ ಹಲವು ಅಂಕಣಗಳನ್ನು ಬರೆದಿದ್ದಾರೆ. ಪರಿಸರಕ್ಕೆ ಸಂಬಂಧಿಸಿದ ವಿಷಯವನ್ನು ಒಳಗೊಂಡ ಇವರು ರಚಿಸಿದ ಅಬ್ಬೆ ಕಾದಂಬರಿಯನ್ನು ನಾಲ್ಕು ಪ್ರಶಸ್ತಿಗಳಿಗೆ ಭಾಜನವಾಗಿದೆ. ವಿಶ್ವವಾಣಿಯಲ್ಲಿ "ಶಶಾಂಕಣ" ಅಂಕಣವನ್ನು ಪ್ರತಿ ಶುಕ್ರವಾರ ಬರೆಯುತ್ತಿದ್ದಾರೆ.

Articles
Shashidhara Halady Column: ಕಪ್ಪು ಮಸಿ ಬಳಿಸಿಕೊಂಡ ಬೆಂಗಳೂರು

ಕಪ್ಪು ಮಸಿ ಬಳಿಸಿಕೊಂಡ ಬೆಂಗಳೂರು

ಹದಿನೆಂಟು ವರ್ಷದ ಐಪಿಎಲ್ ಇತಿಹಾಸದಲ್ಲಿ ಇದೇ ಮೊದಲ ಬಾರಿ ಕಪ್ ಗೆದ್ದ ಆರ್‌ಸಿಬಿ ತಂಡದ ಆಟಗಾರರನ್ನು ಮತ್ತು ವಿಶೇಷವಾಗಿ ಕೊಹ್ಲಿ ಮೊದಲಾದ ಜನಪ್ರಿಯ ಆಟಗಾರರನ್ನು ನೋಡ ಲೆಂದು ಹರಿದು ಬಂದ ಜನಸಾಗರವು, ಅಂಕೆ ಮೀರಿ ವರ್ತಿಸಿತು, ಕಾಲ್ತುಳಿತ ಸಂಭವಿಸಿತು, ಅದರಿಂದಾಗಿ ಹಲವರು ಸತ್ತರು; ಇನ್ನಷ್ಟು ಜನ ಗಾಯಗೊಂಡರು.

Shashidhara Halady Column: ಸ್ಪೂರ್ತಿ ತುಂಬುವ ಬರಹಗಳು

ಸ್ಪೂರ್ತಿ ತುಂಬುವ ಬರಹಗಳು

ನಮ್ಮೊಳಗೆ ಇರುವ ಬುದ್ಧ ಅದೆಷ್ಟೋ ಬಾರಿ ಸುಶುಪ್ತನಾಗಿರಬಹುದು; ಇಂದಿನ ಒತ್ತಡದ ಬದುಕಿನ ಧಾವಂತದಲ್ಲಿ, ನಾಗಾಲೋಟದಲ್ಲಿ, ಆತನ ಮಾತುಗಳನ್ನು ನಾವು ಕೇಳಿಸಿಕೊಳ್ಳದೇ ಇರಬಹುದು; ಆದರೆ ನಿಜವಾದ ಬದುಕಿನ ಗುರಿಯ ದಾರಿಯಲ್ಲಿ ಸಾಗಲು ನಮ್ಮೊಳಗಿರುವ ಬುದ್ಧನ ಮಾತುಗಳನ್ನು ಆಲಿಸ ಬೇಕು, ಆತನ ಯೋಚನೆಗಳನ್ನು ನಮ್ಮದಾಗಿಸಿಕೊಳ್ಳಬೇಕು.

Shashidhara Halady Column: ಸಣ್ಣ ಹೊಳೆ ದಾಟಲು ಒಂದೇ ಮರದ ಸಂಕ !

ಸಣ್ಣ ಹೊಳೆ ದಾಟಲು ಒಂದೇ ಮರದ ಸಂಕ !

ನಮ್ಮೂರಲ್ಲಿ ಸಂಕವನ್ನು ನಿರ್ಮಿಸುವುದು ಉದ್ದನೆಯ ಮರದ ಕಾಂಡದಿಂದ. ತೋಡು ಅಥವಾ ಹಳ್ಳದ ಒಂದು ದಡದಿಂದ ಇನ್ನೊಂದು ದಡಕ್ಕೆ ಅದನ್ನು ಹಾಸಿರುತ್ತಾರೆ; ಕೆಳಗೆ ರಭಸದಿಂದ ಹರಿವ ನೀರು; ಮೇಲಿರುವ ಆ ಮರದ ಸಂಕದ ಮೇಲೆ ನಡೆದು, ಒಂದು ದಡದಿಂದ ಇನ್ನೊಂದು ದಡಕ್ಕೆ ಹೋಗುವುದು ನಮ್ಮೂರಿನ ದಿನಚರಿಯ ಸಹಜ ಚಟುವಟಿಕೆಗಳಲ್ಲಿ ಒಂದು.

Shashidhara Halady Column: ಕಾಡಿನ ನಡುವೆ ಕಟ್ಟಿಕೊಂಡ ಬದುಕು !

ಕಾಡಿನ ನಡುವೆ ಕಟ್ಟಿಕೊಂಡ ಬದುಕು !

ಅಲ್ಲೊಂದು ಅವಿಭಕ್ತ ಕುಟುಂಬವು ಹಲವು ತಲೆಮಾರುಗಳಿಂದ ಬದುಕನ್ನು ಕಟ್ಟಿಕೊಂಡಿತ್ತು. ಆ ಮನೆಯಲ್ಲಿದ್ದ ಮಕ್ಕಳ ಸಂಖ್ಯೆಯೇ ಸುಮಾರು 30! ವಿಶೇಷವೆಂದರೆ, ಆ ಮನೆಯ ಒಡೆತನದಲ್ಲಿ ಎಂ ಬಂತೆ ಒಂದು ಸರಕಾರಿ ಶಾಲೆಯಿತ್ತು! ಮನೆಯಿಂದ ಅನತಿ ದೂರದಲ್ಲಿ, ಒಂದು ತೋಟದಿಂ ದಾಚೆ ಶಾಲಾ ಕಟ್ಟಡ

Shashidhara Halady Column: ಹಣ್ಣಿನಲ್ಲೂ ಇದೆ ಕೊಬ್ಬರಿ ಕಾಯಿ ರುಚಿ !

ಹಣ್ಣಿನಲ್ಲೂ ಇದೆ ಕೊಬ್ಬರಿ ಕಾಯಿ ರುಚಿ !

ಕಡಿಮೆ ಮಳೆ ಬರುವ ಬಯಲುಸೀಮೆಯ ಹಣ್ಣುಗಳ ರುಚಿ ಜಾಸ್ತಿ, ಸಿಹಿಯೂ ಜಾಸ್ತಿ- ಇದು ಅನುಭವ ಜನ್ಯ ಅಭಿಪ್ರಾಯ. ಹಲಸಿನ ಹಣ್ಣುಗಳ ಮಟ್ಟಿಗೆ ಹೇಳುವುದಾದರೆ, ಸಖರಾಯಪಟ್ಟಣದ ಸುತ್ತಮುತ್ತ ಲಿನ ಕೆಲವು ತಳಿಯ ಹಲಸಿನಲ್ಲಿ ವಿಶೇಷ ರುಚಿಯ ಹಣ್ಣುಗಳು ಸಿಗುತ್ತವೆ. ಅದೇ ರೀತಿ, ಹಾಸನ, ಚನ್ನರಾ ಯಪಟ್ಟಣದ ಸುತ್ತಮುತ್ತಲೂ ಉತ್ತಮ ರುಚಿಯ ಹಲಸು ದೊರೆಯುತ್ತದೆ. ಅರಕಲಗೂಡು ತಾಲೂಕಿ ನಲ್ಲಿ ‘ಮುತ್ತಿಗೆ’ ಎಂಬ ಹಳ್ಳಿಯಿದೆ. ಈ ಸುತ್ತಲೂ ಬೆಳೆಯುವ ಹಲಸಿನ ಹಣ್ಣುಗಳು ಮೈಸೂರು ಅರಸರ ಅರಮನೆಗೆ ಸರಬರಾಜು ಆಗುತ್ತಿದ್ದವಂತೆ!

Shashidhara Halady Column: ಇವರು ಇಪ್ಪತ್ತನೆಯ ಶತಮಾನದ ದೈತ್ಯ ಪ್ರತಿಭೆ !

ಇವರು ಇಪ್ಪತ್ತನೆಯ ಶತಮಾನದ ದೈತ್ಯ ಪ್ರತಿಭೆ !

ಕನ್ನಡದ ಸಾಹಿತಿಗಳ ಕುರಿತು ಅವರ ಮಕ್ಕಳು ಬರೆದ ಪುಸ್ತಕಗಳು ಕಡಿಮೆ ಎಂದೇ ಹೇಳಬಹುದು; ತೇಜಸ್ವಿಯವರು ತಮ್ಮ ತಂದೆಯ ಕುರಿತು ಬರೆದ ‘ಅಣ್ಣನ ನೆನಪು’ ಇಲ್ಲಿ ನೆನಪಾಗುತ್ತದೆ. ಶಿವರಾಮ ಕಾರಂತರನ್ನು ಅವರ ಮಕ್ಕಳು ಕರೆಯುತ್ತಿದ್ದುದು ‘ತಾತ’ ಎಂದು! ಆದ್ದರಿಂದ, ಮೂವರು ಮಕ್ಕಳು ಸೇರಿ ಕಾರಂತರ ಕುರಿತು ಬರೆದ ಪುಸ್ತಕಗಳನ್ನು ಕನ್ನಡದಲ್ಲಿ ‘ತಾತನ ನೆನಪು’ ಎಂದೂ ಕರೆಯ ಬಹುದು.

Shashidhara haladi Column: ಪ್ರಶಸ್ತಿಗಳ ಆಯ್ಕೆಯಲ್ಲಿ ವಶೀಲಿ ರಾಜಕಾರಣ !

ಪ್ರಶಸ್ತಿಗಳ ಆಯ್ಕೆಯಲ್ಲಿ ವಶೀಲಿ ರಾಜಕಾರಣ !

ತಮ್ಮ ಜೀವನದುದ್ದಕ್ಕೂ ಕಾಂಗ್ರೆಸ್ ಪಕ್ಷದಲ್ಲಿದ್ದರೂ, ರಾಜಕಾರಣದ ಭಾಗವಾಗಿ, ಪಕ್ಷ ಬದಲಿಸಿ, 1977ರ ಜನತಾ ಪಕ್ಷದ ನೇತೃತ್ವದ ಸಮ್ಮಿಶ್ರ ಸರಕಾರದ ಪ್ರಧಾನಿ ಹುದ್ದೆ ಸ್ವೀಕರಿಸಿದ್ದ ಮೊರಾರ್ಜಿ ದೇಸಾಯಿ ಯವರಿಗೆ, ಪಕ್ಕದ ದೇಶದವರು ಅದೇಕೆ ‘ನಿಶಾನ್-ಎ-ಪಾಕಿಸ್ತಾನ್’ ನೀಡಿದರು ಎಂಬುದೇ ಆ ದಿಗ್ಭ್ರಮೆಗೆ ಕಾರಣ. ಆ ಕ್ಷಣದಲ್ಲಿ ಭಾರತ ಸರಕಾರಕ್ಕೆ ಎದುರಾದ ಬಿಕ್ಕಟ್ಟು ಎಂದರೆ- ನಾವಿನ್ನೂ ಮೊರಾರ್ಜಿ ಅವರಿಗೆ ‘ಭಾರತ ರತ್ನ’ ನೀಡಿಲ್ಲ, ಪಾಕ್‌ನವರು ಅವರ ದೇಶದ ಅತ್ಯುನ್ನತ ಪ್ರಶಸ್ತಿ ನೀಡಿದ್ದಾರೆ, ಇದನ್ನು ಹೇಗೆ ನಿಭಾಯಿಸುವುದು- ಎಂಬುದು

Shashidhara Halady Column: ಪ್ರವಾಸಿಗರಿಗೆ ಗುಂಡಿಕ್ಕುವ ಮನಸ್ಥಿತಿ ಎಂಥದ್ದು ?

ಪ್ರವಾಸಿಗರಿಗೆ ಗುಂಡಿಕ್ಕುವ ಮನಸ್ಥಿತಿ ಎಂಥದ್ದು ?

ತಮ್ಮ ಊರುಗಳಿಗೆ ಬಂದವರನ್ನು ಸ್ಥಳೀಯರು ‘ಅತಿಥಿಗಳು’ ಎಂದೇ ತಿಳಿದು, ಕೈಲಾದ ವ್ಯವಸ್ಥೆ ಮಾಡಿ ಕೊಡುತ್ತಾರೆ. ಇಂದು ಪ್ರವಾಸೋದ್ಯಮದ ಹಿನ್ನೆಲೆಯಲ್ಲಿ, ಇಂಥ ವ್ಯವಸ್ಥೆ, ಸತ್ಕಾರವು ವಾಣಿಜ್ಯಕ ದೃಷ್ಟಿಕೋನವನ್ನು ಹೊಂದಿರುವುದು ನಿಜ; ಹೆಚ್ಚು ಜನ ಪ್ರವಾಸಿಗರು ಬಂದರೆ, ಹೆಚ್ಚು ಆದಾಯ ಎಂಬ ವಿಚಾರವೂ ಮುನ್ನೆಲೆಗೆ ಬಂದಿದೆ.

Shashidhara Halady Column: ಇವರು ಅತ್ಯುನ್ನತ ಹುದ್ದೆಯನ್ನು ಬೇಡವೆಂದರು !

ಇವರು ಅತ್ಯುನ್ನತ ಹುದ್ದೆಯನ್ನು ಬೇಡವೆಂದರು !

ಆಗ ಅಧಿಕಾರದಲ್ಲಿದ್ದದ್ದು ಇಂದಿರಾ ಗಾಂಧಿಯವರ ನೇತೃತ್ವದ ಸರಕಾರ. ಜೆಪಿ ಅವರ ಪರಿಕಲ್ಪನೆಯ ಸಂಪೂರ್ಣ ಕ್ರಾಂತಿಯಲ್ಲಿ 7 ವಿಭಾಗಗಳಿದ್ದವು: ರಾಜಕೀಯ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ತಾತ್ವಿಕ, ಶೈಕ್ಷಣಿಕ ಮತ್ತು ಅಧ್ಯಾತ್ಮ- ಈ ಏಳೂ ವಿಭಾಗಗಳಲ್ಲಿ ವ್ಯಾಪಕ ಬದಲಾವಣೆ ತಂದು, ಸಂಪೂರ್ಣ ಕ್ರಾಂತಿಯನ್ನು ದೇಶದಲ್ಲಿ ಜಾರಿಗೊಳಿಸಬೇಕು ಮತ್ತು ಇವೆಲ್ಲವೂ ಸರ್ವೋದಯದ ಆಶಯಗಳಾಗಿವೆ ಎಂದು ಹೇಳುತ್ತಿದ್ದರು.

Shashidhara Halady Column: ಹಣ್ಣುಗಳ ಮೆರವಣಿಗೆಗೆ ಬೇಸಗೆಯೇ ಬರಬೇಕೆ ?

ಹಣ್ಣುಗಳ ಮೆರವಣಿಗೆಗೆ ಬೇಸಗೆಯೇ ಬರಬೇಕೆ ?

ಸುರಗಿ ಹೂವಿನ ನೆನಪೇಕೆ ಆಯಿತೆಂದರೆ, ನಮ್ಮ ಹಳ್ಳಿಯಲ್ಲಿ ಸುಗಂಧಭರಿತ ಸುರಗಿ ಹೂವುಗಳನ್ನು ಕಾಣಬೇಕೆಂದರೆ, ಬೇಸಗೆಯೇ ಬರಬೇಕು! ಬೇಸಗೆಯ ಬಿಸಿಲಿನ ದಿನಗಳಲ್ಲೇ ಸುರಗಿ, ಬಕುಳ ಮೊದಲಾದ ಹೂವುಗಳು, ಹಲಸು, ಮಾವು, ಮುರಿನ, ಪನ್ನೇರಳೆ, ಚೇಂಪಿ (ಕಾಡುಸಂಪಿಗೆ), ಬುಕ್ಕ, ಬೆಳ ಮಾರು ಮೊದ ಲಾದ ಹಣ್ಣುಗಳು ಅವತರಿಸುತ್ತವೆ ಮತ್ತು ಇದು, ನಮಗೆಲ್ಲಾ, ಅಂದರೆ ಮಕ್ಕಳಿಗೆ, ಒಂದು ಸೋಜಿಗ ಎನಿಸುತ್ತಿತ್ತು.

Shashidhara Halady Column: ಬಿಸಿಲು ಕಾಲದಲ್ಲೇ ಪ್ರವಾಸ ! ನಮ್ಮೂರ ವಿಶೇಷ !

ಬಿಸಿಲು ಕಾಲದಲ್ಲೇ ಪ್ರವಾಸ ! ನಮ್ಮೂರ ವಿಶೇಷ !

ನಮ್ಮಲ್ಲಿ ಮಕ್ಕಳಿಗೆ ದೀರ್ಘ ರಜಾ ಸಿಗುವುದೇ ಎಪ್ರಿಲ್-ಮೇ ತಿಂಗಳುಗಳಲ್ಲಿ, ಇದೇ ಅವಧಿಯಲ್ಲಿ ಇಲ್ಲೆಲ್ಲಾ ಅತಿಯಾದ ಬಿಸಿಲು ಇರುವ ಋತು! ಈಚಿನ ನಾಲ್ಕಾರು ವರ್ಷಗಳಲ್ಲಂತೂ, ಗ್ಲೋಬಲ್ ವಾರ್ಮಿಂಗ್ ಮತ್ತು ಇತರ ಕಾರಣಗಳಿಂದಾಗಿ ಭೂ ತಾಪಮಾನವೇ ಅಧಿಕವಾಗಿದೆಯಂತೆ, ಅದೇ ರೀತಿ ನಮ್ಮ ರಾಜ್ಯದಲ್ಲೂ, ದೇಶದಲ್ಲೂ ಅತ್ಯಧಿಕ ಉಷ್ಣಾಂಶ ದಾಖಲಾಗುತ್ತಿದೆ.

Shashidhara Halady Column: ಹರನಗುಡ್ಡೆಯಲ್ಲಿ ಕಾಡುಹಣ್ಣುಗಳ ಹುಡುಕಾಟ !

ಹರನಗುಡ್ಡೆಯಲ್ಲಿ ಕಾಡುಹಣ್ಣುಗಳ ಹುಡುಕಾಟ !

ಹರನಗುಡ್ಡೆಗೆ ಸಾಗುವಾಗ ಸಿಗುವ ಹಾಡಿಯನ್ನು ದಾಟಿದರೆ ವಿಶಾಲ ಮೈದಾನ ಸಿಗುತ್ತದೆ. ಮುರಕ ಲ್ಲಿನ ಹಾಸು ಇದ್ದ ಆ ಎತ್ತರ ಪ್ರದೇಶದಲ್ಲಿ ದೊಡ್ಡ ಮರಗಳು ಕಡಿಮೆ. ಅಲ್ಲಲ್ಲಿ ಕುರುಚಲುಗಿಡಗಳು, ಮಿಕ್ಕಂತೆ ಆ ಪ್ರದೇಶದ ತುಂಬಾ ‘ಕರಡ’ ಬೆಳೆಯುತ್ತಿತ್ತು. ಅಪರೂಪ ಕ್ಕೆಂಬಂತೆ ಅಲ್ಲಿ ಮಾವಿನ ಮರವೂ ಬೆಳೆದಿ ದ್ದವು.

Shashidhara Halady Column: ಮಗಾ ನೀನು ಆಡು, ನಿನ್ನ ಆಪ್ಪ ಹೋತ !

ಮಗಾ ನೀನು ಆಡು, ನಿನ್ನ ಆಪ್ಪ ಹೋತ !

ಉಡುಪಿ ಜಿಲ್ಲೆಯ ಅವಿಭಜಿತ ಕುಂದಾಪುರ ತಾಲೂಕಿಗೆ ಮತ್ತು ಅದರ ಸರಹದ್ದಿನ ಪ್ರದೇಶ ಗಳಿಗೆ ಮಾತ್ರ ಸೀಮಿತವಾಗಿರುವ ಕುಂದಾಪ್ರ ಕನ್ನಡವು, ಬಹು ದೀರ್ಘಕಾಲದ ಅವಧಿಯಲ್ಲಿ, ಹೊರ ಭಾಷಾ ಪ್ರಭಾವಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಒಳಗೊಳ್ಳದೇ ಉಳಿದು ಬಂದಿರುವುದು ಸಹ ವಿಶೇಷ. ದಕ್ಷಿಣ ದಿಕ್ಕಿನಲ್ಲಿ ಕಲ್ಯಾಣಪುರ ಹೊಳೆ ಮತ್ತು ಉತ್ತರ ದಿಕ್ಕಿ ನಲ್ಲಿ ಬೈಂದೂರು ಗಡಿ, ಪೂರ್ವ ದಿಕ್ಕಿನಲ್ಲಿ ಸಹ್ಯಾದ್ರಿ ಶ್ರೇಣಿ- ಈ ಕಿರುಪ್ರದೇಶದಲ್ಲಿ ಬಳಕೆ ಯಲ್ಲಿರುವ ಕುಂದಾಪ್ರ ಕನ್ನಡದ ಪದಗಳನ್ನು, ನುಡಿಗಟ್ಟುಗಳನ್ನು ಈ ನಿಘಂಟಿನಲ್ಲಿ ಅಡಕಗೊಳಿಸಲಾಗಿದೆ

Shashidhara Halady Column: ಜನಪದ ನಂಬಿಕೆಗಳ ಆಗರ ಈ ಪ್ರಾಕೃತಿಕ ಸೊಬಗಿನ ಬಂಡೆ !

ಜನಪದ ನಂಬಿಕೆಗಳ ಆಗರ ಈ ಪ್ರಾಕೃತಿಕ ಸೊಬಗಿನ ಬಂಡೆ !

ಹಿಂದಿನ ದಿನಗಳಲ್ಲಿ ಅಲ್ಲಿ ಒಂದೆರಡು ಪುಟ್ಟ ಅಂಗಡಿಗಳಿದ್ದುದರಿಂದ ಪೇಟೆ ಎಂಬ ಹೆಸರು; ಅಲ್ಲಿರುವ ಬೃಹದಾಕಾರದ, ನೂರಾರು ವರ್ಷ ಹಳೆಯದಾದ ತಾರಿಮರದಿಂದಾಗಿ ಆ ಹಳ್ಳಿಗೆ ತಾರಿಕಟ್ಟೆ ಎಂಬ ಹೆಸರು ಬಂದಿದ್ದರೂ, ನಾನೀಗ ಪ್ರಸ್ತಾಪಿಸುತ್ತಿರುವುದು ಅಲ್ಲೇ ಸನಿಹದಲ್ಲಿದ್ದ ಮದಗವನ್ನು.

Shashidhara Halady Column: ಹೆಬ್ಬಲಸು: ಹೆಸರು ಮಾತ್ರ ಹಿರಿದು, ಗಾತ್ರದಲ್ಲಿ ಕಿರಿದು !

ಹೆಬ್ಬಲಸು: ಹೆಸರು ಮಾತ್ರ ಹಿರಿದು, ಗಾತ್ರದಲ್ಲಿ ಕಿರಿದು !

ಹೆಸರಿಗೆ ಹೆಬ್ಬಲಸು, ಅಂದರೆ ಹಿರಿದಾದ ಹಲಸು. ನೋಡಲು ಥೇಟ್ ಹಲಸಿನ ಹಣ್ಣಿನಂ ತೆಯೇ ಇರುತ್ತದೆ, ಆದರೆ ಗಾತ್ರ ಮಾತ್ರ ಬಹು ಕಿರಿದು. ಮಾವಿನ ಹಣ್ಣಿನ ಗಾತ್ರದ ಈ ಹಣ್ಣುಗಳ ಒಳಗೆ, ಹಲಸಿನ ರೀತಿಯ ತೊಳೆಗಳು. ಸಾಕಷ್ಟು ರುಚಿಕರ. ಇಂಥ ಅಪರೂಪದ ಹಣ್ಣುಗಳು ನಮ್ಮ ರಾಜ್ಯದಲ್ಲಿ ಬೆಳೆಯುತ್ತವೆ ಎಂಬುದು ಹೆಮ್ಮೆಯ ವಿಚಾರವೇ ಸರಿ.

Shashidhara Halady Column: ನಿಜಾರ್ಥದಲ್ಲಿ ರಕ್ತ ಹೀರುವವರು !

Shashidhara Halady Column: ನಿಜಾರ್ಥದಲ್ಲಿ ರಕ್ತ ಹೀರುವವರು !

ಗೊಣ್ಣೆಯ ಪುಟ್ಟ ರಾಶಿಯೇ ಚಲಿಸುವಂತೆ ಕಾಣಿಸುವ ‘ಜವಳೆ’ಗಳ ಸಂಬಂಧಿಗಳು ನಮ್ಮ ರಾಜ್ಯದ ಎಲ್ಲೆಡೆ ಕಾಣಸಿಗುತ್ತವೆ. ಬೆಂಗಳೂರಿನಂಥ ಕಾಂಕ್ರೀಟು ಕಾಡನ್ನು ಹೊಂದಿರುವ ನಗರದಲ್ಲೂ, ಮಳೆ ಬಂದಾಗ ಅಲ್ಲಲ್ಲಿ ಪುಟ್ಟ ಜವಳೆಗಳು ನಿಧಾನವಾಗಿ ಅತ್ತಿತ್ತ ತೆವಳುತ್ತಾ ಸಾಗುವುದನ್ನು ಕಾಣ ಬಹುದು

Shashidhara Halady Column: ದೆಹಲಿಯಲ್ಲೊಂದು ಆನೆಯ ಮೆರವಣಿಗೆ !

ದೆಹಲಿಯಲ್ಲೊಂದು ಆನೆಯ ಮೆರವಣಿಗೆ !

1912ರ ತನಕ ಕೊಲ್ಕೊತ್ತಾವು ಭಾರತದ ರಾಜಧಾನಿಯಾಗಿತ್ತು. ಕೊಲ್ಕೊತ್ತಾವು ಇಂಗ್ಲಿಷ್ ವಿದ್ಯಾ ಭ್ಯಾಸದ ಪ್ರಮುಖ ಕೇಂದ್ರವೂ ಆಗಿತ್ತು. ಹಲವು ಕಾಲೇಜುಗಳು ಅಲ್ಲಿದ್ದವು; 1857ರಲ್ಲೇ ಕೊಲ್ಕೊತ್ತಾ ವಿಶ್ವವಿದ್ಯಾ ಲಯವನ್ನು ಸ್ಥಾಪಿಸಲಾಗಿತ್ತು. ಅಂದು ಕೊಲ್ಕೊತ್ತಾವು ಬುದ್ಧಿಜೀವಿಗಳ, ವಿದ್ಯಾವಂತರ ನಾಡು. ಅಂದಿನ ಸಿರಿವಂತರ ಒಂದು ಗುರಿ ಎಂದರೆ, ಇಂಗ್ಲೆಂಡಿಗೆ ಮಕ್ಕಳನ್ನು ಕಳುಹಿಸಿ, ಉನ್ನತ ವಿದ್ಯಾಭ್ಯಾಸ ಕೊಡಿಸು ವುದು. ಇಂಗ್ಲಿಷ್ ಶಿಕ್ಷಣ ಪಡೆದರೆ ಮಾತ್ರ, ಬ್ರಿಟಿಷ್ ಸರಕಾರದ ಸವಲತ್ತುಗಳನ್ನು ಪಡೆಯಬಹುದು ಮತ್ತು ಸಾಹಿತ್ಯ, ಸಂಸ್ಕೃತಿಯ ವಲಯಗಳಲ್ಲೂ ಗುರುತಿಸಿಕೊಳ್ಳ ಬಹುದು ಎಂಬ ತಿಳಿವಳಿಕೆ ಅಂದಿನ ಸ್ಥಿತಿವಂತರಲ್ಲಿತ್ತು

Shashidhara Halady Column: ಇರುವೆಗಳನ್ನು ತಿನ್ನುವ ಹಾರುವ ಓತಿ !

Shashidhara Halady Column: ಇರುವೆಗಳನ್ನು ತಿನ್ನುವ ಹಾರುವ ಓತಿ !

ತೀರಾ ಅಪೂರ್ವವಲ್ಲದ ಈ ಹಾರುವ ಓತಿಯೊಂದಿಗೆ ನನ್ನ ಮುಖಾಮುಖಿ ಹಲವು ಮಜಲುಗಳದ್ದು. ವಿದ್ಯಾರ್ಥಿಯ ದಿನಗಳಲ್ಲಿ, ಮನೆಯಿಂದ ಮೂರು ಕಿ.ಮೀ. ದೂರವಿರುವ ಶಾಲೆಗೆ ನಡೆದು ಹೋಗುವಾಗ, ಪುಟ್ಟ ಅಡಿಕೆ ತೋಟದ ಅಂಚಿನಲ್ಲಿ ಸಾಗುತ್ತಿತ್ತು ನಮ್ಮ ದಾರಿ. ಅಲ್ಲಿದ್ದ ಪುರಾತನ ಅಡಿಕೆ ಮರಗಳ ಮೇಲೆ ಕೂತು, ತನ್ನ ಗಂಟಲಿನ ಹೊರಭಾಗದಲ್ಲಿರುವ ಹಳದಿ ನಾಲಿಗೆಯನ್ನು ಅಲ್ಲಾಡಿಸುತ್ತಾ ಕುಳಿತಿ ರುತ್ತಿತ್ತು ಹಾರುವ ಓತಿ.

Shashidhara Halady Column: ರೋಚಕತೆಯನ್ನೇ ಬಯಸುವ ಹೊಸ ದಿನಮಾನ !

Shashidhara Halady Column: ರೋಚಕತೆಯನ್ನೇ ಬಯಸುವ ಹೊಸ ದಿನಮಾನ !

ಹಳೆ ಆಟಗಾರರು ಇನ್ನಾದರೂ ಒಂದಷ್ಟು ರನ್ ಚಚ್ಚಲಿ ಎಂದು ವೀಕ್ಷಕರು ಆಸೆಪಡುತ್ತಿದ್ದಾರೆ, ಆ ಮೂಲಕ ರೋಚಕ ಅನುಭವಕ್ಕಾಗಿ ಕಾಯುತ್ತಿದ್ದಾರೆ. ಕ್ರಿಕೆಟ್ ಆಟವು ನಮ್ಮಲ್ಲಿ ಸಾರ್ವತ್ರಿಕ

Shashidhara Halady Column: ಬ್ರಿಟಿಷರ ವಿರುದ್ದ ಹೋರಾಡಿದ ವೈದ್ಯೆ

Shashidhara Halady Column: ಬ್ರಿಟಿಷರ ವಿರುದ್ದ ಹೋರಾಡಿದ ವೈದ್ಯೆ

ಬ್ರಿಟಿಷರನ್ನು ಭಾರತದಿಂದ ಓಡಿಸುವ ಉದ್ದೇಶ ದಿಂದ ಜಪಾನ್ ಸೇನೆಯ ಸಹಕಾರ ಪಡೆದು, 1944ರ ಸಮಯದಲ್ಲಿ ದಾಳಿ ಮಾಡಿ, ಅಸ್ಸಾಂನ ಕೆಲವು ಭೂಭಾಗಗಳನ್ನು ವಶಪಡಿಸಿಕೊಂಡ

Shashidhara Halady Column: ಉಪ್ಪಿನ ಸಾಗಣೆ ತಡೆಯಲು ತಂತ್ರ- ಕುತಂತ್ರ !

Shashidhara Halady Column: ಉಪ್ಪಿನ ಸಾಗಣೆ ತಡೆಯಲು ತಂತ್ರ- ಕುತಂತ್ರ !

Shashidhara Halady Column: ಉಪ್ಪಿನ ಸಾಗಣೆ ತಡೆಯಲು ತಂತ್ರ- ಕುತಂತ್ರ !

Shashidhara Halady Column: ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ !

Shashidhara Halady Column: ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ !

Shashidhara Halady Column: ಗುಕೇಶ್‌ ವಿಶ್ವ ಚೆಸ್‌ ಚಾಂಪಿಯನ್‌ !

Shashidhara Halady Column: ಕೊಡಿ ಹಬ್ಬ ಮತ್ತು ವಂಡಾರು ಕಂಬಳ

Shashidhara Halady Column: ಕೊಡಿ ಹಬ್ಬ ಮತ್ತು ವಂಡಾರು ಕಂಬಳ

ಈಗ ಒಂದೆರಡು ವರ್ಷಗಳಿಂದ, ಚಲನಚಿತ್ರದ ಪ್ರಭಾವದಿಂದ ‘ಕಂಬಳ’ ಎಂಬ ಪದ ನಮ್ಮ ರಾಜ್ಯದ ಎಲ್ಲರಿಗೂ ಪರಿಚಿತ ಎನಿಸಿದೆ. ಕೆಲವು ದಶಕಗಳ ಹಿಂದೆ ಕರಾವಳಿಯ ಹೊರಗಿನವರಿಗೆ

Shashidhara Halady Column: ಬೇಟೆಗಾರನೊಬ್ಬನ ಪರಿಸರ ಕಾಳಜಿ

Shashidhara Halady Column: ಬೇಟೆಗಾರನೊಬ್ಬನ ಪರಿಸರ ಕಾಳಜಿ

ದೇಶಕ್ಕೆ ದೊರಕುವ ಸ್ವಾತಂತ್ರ್ಯವು ಹೇಗೆ ಒಂದು ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಗಳನ್ನು ಕೊಡ ಬಲ್ಲದು ಮತ್ತು ಆ ಮೂಲಕ ಸ್ಥಳೀಯ ನಾಗರಿಕರ ಅಭಿವೃದ್ಧಿಗೆ