ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿನಾಯಕ ವೆಂ ಭಟ್ಟ

columnist

vinayakbhat1669@gmail.com

ವಿನಾಯಕ ವೆಂ ಭಟ್ಟರು ಮೂಲತಹ ಉತ್ತರ ಕನ್ನಡದ ಶಿರಸಿಯ ಸಮೀಪದ ಅಂಬ್ಲಿಹೊಂಡ ಎಂಬ ಹಳ್ಳಿಯವರು, ಧಾರವಾಡದಲ್ಲಿ ವಾಣಿಜ್ಯ ಪದವಿಪಡೆದ ಇವರು, ಭಾರತೀಯ ವಿದ್ಯಾಭವನದಿಂದ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸದ್ಯ, ಕಲ್ಯಾಣಿ ಸಮೂಹದ ಅಟೋಮೋಟಿವ ಅಕ್ಸಲ್ ಸಂಸ್ಥೆಯ ಮಾನವ ನಂಪನ್ಮೂಲ ವಿಭಾಗದ 'ಕಂಟ್ರಿ ಹೆಡ್' ಆಗಿ ಮೈಸೂರಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯಾಸಕ್ತರಾಗಿರುವ ಇವರು, ಈಗಾಗಲೇ ಕನ್ನಡದಲ್ಲಿ ೩ ಪುಸ್ತಕಗಳನ್ನು ಸಂಕಲಿಸಿರುತ್ತಾರೆ ಮತ್ತು ಅನೇಕ ಕವನಗಳನ್ನು ರಚಿಸಿರು ತ್ತಾರೆ. ಧಾರವಾಡ ಆಕಾಶವಾಣಿಯಿಂದ ಇವರ ಅನೇಕ ಕವನ ವಾಚನಗಳು ಪ್ರಸಾರವಾಗಿರುತ್ತವೆ. ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದ ಭಾಷಣಕಾರರೂ ಆಗಿದ್ದ ಇವರು. ತಮ್ಮ ಕಾಲೇಜುದಿನಗಳಿಂದ ವಿಶಾಲ ಕರ್ಣಾಟಕ. ನವನಾಡು, ಸಂಯುಕ್ತ ಕರ್ನಾಟಕ ಮುಂತಾದ ಕನ್ನಡದ ಪತ್ರಿಕೆಗಳ ಮತ್ತು ಪತ್ರಕರ್ತರುಗಳ ಜೊತೆಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಪ್ರಚಲಿತ ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಮ್ಮದೇ ಆದ ಪ್ರಖರ ವಿಶ್ಲೇಷಣೆಯನ್ನು ಹೊಂದಿರುವ ಇವರು, ಪ್ರಾಚೀನ ಸಂಸ್ಕೃತ ಸಾಹಿತ್ಯದ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.

Articles
Vinayaka V Bhat Column: ಸರಕಾರದ ಕೆಲಸವನ್ನು ಸರಕಾರವೇ ಮಾಡಿದರೆ ಚೆನ್ನ

Vinayaka V Bhat Column: ಸರಕಾರದ ಕೆಲಸವನ್ನು ಸರಕಾರವೇ ಮಾಡಿದರೆ ಚೆನ್ನ

ಸಮಾಜದ ಸಂಪನ್ಮೂಲಗಳನ್ನು ಬಳಸಿಕೊಂಡು ವ್ಯಾಪಾರ ವ್ಯವಹಾರ ಮಾಡಿ ಲಾಭಗಳಿಸುವ ಎಲ್ಲ ಸಂಸ್ಥೆಗಳೂ, ತಮ್ಮ ಲಾಭದ ಒಂದಿಷ್ಟು ಭಾಗವನ್ನು ಸಮಾಜಕ್ಕೇ ತಿರುಗಿ ನೀಡುವ ರೂಢಿಯಿಟ್ಟು ಕೊಂಡಿವೆ. ಹೀಗೆ, ಕಾರ್ಪೊರೇಟ್ ಸಂಸ್ಥೆಗಳು ಸಾಮಾಜಿಕ ಜವಾಬ್ದಾರಿಯ ಅಡಿಯಲ್ಲಿ (ಸಿಎಸ್‌ಆರ್) ನೀಡುವ ಹಣ, ಸರಕಾರಕ್ಕೆ ಕೊಡುವ ತೆರಿಗೆ ಮುಂತಾದ ಪಾವತಿಗಳ ಹೊರತಾಗಿರುತ್ತದೆ.

V‌inayaka V Bhat Column: ಸಂಘದ ಶತಮಾನೋತ್ಸವಕ್ಕೆ ಮೆರುಗು ತಂದ ಪ್ರಿಯಾಂಕ್

ಸಂಘದ ಶತಮಾನೋತ್ಸವಕ್ಕೆ ಮೆರುಗು ತಂದ ಪ್ರಿಯಾಂಕ್

‘ಸರಕಾರಿ ಜಾಗ, ಸರಕಾರಿ ಶಾಲಾ ಕಾಲೇಜು ಅವರಣ, ಮುಜರಾಯಿ ದೇವಸ್ಥಾನಗಳ ಜಾಗಗಳಲ್ಲಿ ಆರೆಸ್ಸೆಸ್ ನ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕು; ಅವರ ವಿಚಿತ್ರ ವೇಷಭೂಷಣ, ದೊಣ್ಣೆ ಹಿಡಿದು ಓಡಾಡುವ ಅವರ ವರ್ತನೆ ಹಾಗೂ ಅವರು ನಡೆಸುವ ಶಾಖೆಗಳು, ಮಕ್ಕಳ ಮನಸ್ಸಿನ ಮೇಲೆ ದ್ವೇಷದ ಭಾವನೆಯನ್ನು ಬಿತ್ತುತ್ತವೆ’ ಎನ್ನುವುದು ಖರ್ಗೆಯವರ ಅನಿಸಿಕೆ. ಖರ್ಗೆಯವರ ಹೇಳಿಕೆ ಬಂದಿದ್ದೇ ತಡ, ಆರೆಸ್ಸೆಸ್‌ಗೆ ಎಲ್ಲಿಲ್ಲದ ಮಹತ್ವ ಬಂದುಬಿಟ್ಟಿತು.

Vinayaka V Bhat Column: ಪ್ರತ್ಯೇಕ ಧರ್ಮವೆಂಬ ಅಪ್ರಸ್ತುತ ಪ್ರಸಂಗ...

Vinayaka V Bhat Column: ಪ್ರತ್ಯೇಕ ಧರ್ಮವೆಂಬ ಅಪ್ರಸ್ತುತ ಪ್ರಸಂಗ...

‘ರಾಷ್ಟ್ರೀಯ ಅಲ್ಪಸಂಖ್ಯಾತ’ ಸ್ಥಾನಮಾನವನ್ನು ಪಡೆದ ಆರು ಧರ್ಮಗಳೆಂದರೆ ಇಸ್ಲಾಂ, ಕ್ರಿಶ್ಚಿಯನ್, ಸಿಖ್, ಜೈನ, ಬೌದ್ಧ ಮತ್ತು ಝೋರಾಸ್ಟ್ರಿಯನ್. ಈ ಆರು ಧರ್ಮಗಳ ಜತೆಗೆ, ಭಾರತವು ಇತರ ಅನೇಕ ನಂಬಿಕೆಗಳು ಮತ್ತು ಆಧ್ಯಾತ್ಮಿಕ ಸಂಪ್ರದಾಯಗಳ ಅನುಯಾಯಿಗಳಿಗೆ ನೆಲೆಯಾಗಿದೆ ಎನ್ನುವುದು ವಿಶೇಷ.

Vinayak V Bhat Column: ನಾನು ಭಾರತವನ್ನು ಪ್ರೀತಿಸುತ್ತೇನೆ ಎನ್ನಲು ಮನವಿಲ್ಲ...

ನಾನು ಭಾರತವನ್ನು ಪ್ರೀತಿಸುತ್ತೇನೆ ಎನ್ನಲು ಮನವಿಲ್ಲ...

2025ರ ಸೆಪ್ಟೆಂಬರ್ 4ರಂದು, ಕಾನ್ಪುರದ ರಾವತ್ಪುರ ಪ್ರದೇಶದಲ್ಲಿ, ಈದ್-ಎ-ಮಿಲಾದ್-ಉನ್-ನಬಿ (ಪ್ರವಾದಿ ಮುಹಮ್ಮದ್ ಅವರ ಜನ್ಮದಿನ) ಗಾಗಿ ಇಸ್ಲಾಂ ಸಮುದಾಯದವರ ಮೆರವಣಿಗೆ ನಡೆಯುತ್ತಿತ್ತು. ಅಲ್ಲಿ ‘ಐ ಲವ್ ಮುಹಮ್ಮದ್’ ಎಂಬ ಬ್ಯಾನರ್ ಅನ್ನು ಪ್ರದರ್ಶಿಸಲಾಯಿತು. ಅದೇ ವೇಳೆ, ಹಿಂದೂ ಧಾರ್ಮಿಕ ಮೆರವಣಿಗೆಯು ಅದೇ ಹಾದಿಯಲ್ಲಿ ಹಾದು ಹೋಗುತ್ತಿತ್ತು.

Vinayaka V Bhat Column: ಸಂಸ್ಕೃತದ ಸೇವೆಯಲ್ಲಿ ಸುಧರ್ಮ ಕಂಡ ಸಾರ್ಥಕತೆ

ಸಂಸ್ಕೃತದ ಸೇವೆಯಲ್ಲಿ ಸುಧರ್ಮ ಕಂಡ ಸಾರ್ಥಕತೆ

ಸಂಸ್ಕೃತವನ್ನು ಬಹಳ ಇಷ್ಟಪಟ್ಟು ಕಲಿಯುತ್ತಿರುವ ನನ್ನ ಮಗನೂ ಪ್ರಥಮ ಭಾಷೆ ಸಂಸ್ಕೃತದಲ್ಲಿ 125ಕ್ಕೆ 125 ಅಂಕ ಗಳಿಸಿದ್ದರಿಂದ, ಅವನನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿತ್ತು. ಹೂವಿನ ಜತೆಗೆ ದಾರವೂ ದೇವರನ್ನು ಸೇರುವಂತೆ, ನಾನೂ ಮತ್ತು ನನ್ನ ಮಡದಿಯೂ ಈ ಅಪರೂಪದ ಕಾರ್ಯ ಕ್ರಮಕ್ಕೆ ಆತನ ಜತೆ ಹೋಗಿ ಸುಂದರ ಕಾರ್ಯಕ್ರಮವೊಂದಕ್ಕೆ ಸಾಕ್ಷಿಯಾಗಿದ್ದೆವು.

Vinayaka V Bhat Column: ಯುಗಪುರುಷನ ಸ್ವಾರ್ಥರಹಿತ ಸಾರ್ಥಕ 75 ವಸಂತಗಳು

ಯುಗಪುರುಷನ ಸ್ವಾರ್ಥರಹಿತ ಸಾರ್ಥಕ 75 ವಸಂತಗಳು

ಪ್ರಧಾನಿ ಮೋದಿಯವರ ರಾಜಕೀಯ ಪ್ರಯಾಣವು, ಅವರ ಇಪ್ಪತ್ತರ ವಯಸ್ಸಿನ ಆರಂಭದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಾಮಾನ್ಯ ಪ್ರಚಾರಕರಾಗಿ ಸೇರುವಲ್ಲಿಯಿಂದ ಆರಂಭ ವಾಯಿತು. ಶಿಸ್ತು, ಸಂಯಮ ಮತ್ತು ಸೈದ್ಧಾಂತಿಕ ಬದ್ಧತೆಯ ಸಂಸ್ಕೃತಿಯನ್ನು ಕಲಿಯುವುದರ ಮೂಲಕ ಸಂಘ ದೊಂದಿಗಿನ ಅವರ ಜೀವನ ರಚನಾತ್ಮಕವಾಗಿತ್ತು.

Vinayaka V Bhat Column: ಅಭಂಗವಾರಿ: ಭಾರತೀಯ ಭಜನಾ ಸಂಸ್ಖೃತಿಯ ಪುನರುತ್ಥಾನ

ಅಭಂಗವಾರಿ: ಭಾರತೀಯ ಭಜನಾ ಸಂಸ್ಖೃತಿಯ ಪುನರುತ್ಥಾನ

ಭಜನೆ ಎನ್ನುವುದು ಭಾರತೀಯ ಸಂಸ್ಕೃತಿಯ ಅವಿಭಾಜ್ಯ ಅಂಗವೇ ಆಗಿದೆ. ಬೆಳಗ್ಗೆ ಎದ್ದೇಳುವಾಗಿ ನಿಂದ ಹಿಡಿದು ರಾತ್ರಿ ಮಲಗುವವರೆಗೆ, ಊಟ ಮಾಡುವಾಗ, ಅಷ್ಟೇಕೆ ಸಂಗಾತಿಯೊಡನೆ ಸರಸವಾಡು ವಾಗಲೂ ಪ್ರತಿಕ್ಷಣಕ್ಕೂ ಭಜನೆ ಯುಕ್ತವಾಗಿದೆ ಎಂಬುದಾಗಿ ‘ಕೃಷ್ಣ ಎನಬಾರದೆ..’ ಎಂಬ ಪ್ರಸಿದ್ಧ ಕೀರ್ತನೆಯಲ್ಲಿ ಪುರಂದರದಾಸರು ಹೇಳುತ್ತಾರೆ.

Vinayak V Bhat Column: ಕಂಡವರೆಲ್ಲ ಮಾತಾಡುವಾಗ ಖಾವಂದರದೇಕೆ ಮೌನ ?

ಕಂಡವರೆಲ್ಲ ಮಾತಾಡುವಾಗ ಖಾವಂದರದೇಕೆ ಮೌನ ?

ಅಪರಾಧಿಯು ಧರ್ಮಸ್ಥಳ ದೇವಾಲಯದ ಪ್ರಮುಖರೊಂದಿಗೆ ಸಂಬಂಧ ಹೊಂದಿದ್ದಾನೆ ಎಂದು ಆಕೆಯ ಕುಟುಂಬ ಆರೋಪಿಸಿತ್ತಾದರೂ, ಸಿಬಿಐ ವಿಶೇಷ ನ್ಯಾಯಾಲಯವು ಪ್ರತಿವಾದಿಯ ವಿರುದ್ಧ ಯಾವುದೇ ಪುರಾವೆಗಳಿಲ್ಲದ ಕಾರಣ ಪ್ರಕರಣವನ್ನು ಖುಲಾಸೆಗೊಳಿಸಿತ್ತು. ಮುಂದೆ, ನೊಂದವರ ಕುಟುಂಬವು ಮತ್ತೊಂದು ಸಿಬಿಐ ತನಿಖೆಯನ್ನು ಕೇಳಿತ್ತು, ಆದರೆ ಕರ್ನಾಟಕ ಹೈಕೋರ್ಟ್ ಅವರ ಮನವಿಯನ್ನು ತಿರಸ್ಕರಿಸಿತ್ತು.

Vinayaka V Bhat Column: ಹೆಮ್ಮೆಯ ಕನ್ನಡತಿ ಬಾನು ಮುಷ್ತಾಕ್‌ ಅವರಿಗೆ ಕಳಕಳಿಯ ಪತ್ರ

ಹೆಮ್ಮೆಯ ಕನ್ನಡತಿ ಬಾನು ಮುಷ್ತಾಕ್‌ ಅವರಿಗೆ ಕಳಕಳಿಯ ಪತ್ರ

ನಿಮ್ಮ ಕಥೆಗಳನ್ನು, ನನ್ನನ್ನೂ ಸೇರಿ ಎಷ್ಟು ಜನ ಕನ್ನಡಿಗರು ಓದಿದ್ದಾರೋ ತಿಳಿಯದು. ಆದರೆ ನಿಮಗೆ ಪ್ರಶಸ್ತಿ ಬಂದ ಸುದ್ದಿ ತಿಳಿದು ಕರ್ನಾಟಕ ಸರಕಾರವಷ್ಟೇ ಅಲ್ಲ, ನೀವು ಕನ್ನಡಮಾತೆಯ ಹೆಮ್ಮೆಯ ಕುವರಿ ಎನ್ನುವ ಕಾರಣಕ್ಕಾಗಿ ಇಡೀ ಕರುನಾಡು ಸಂಭ್ರಮಿಸಿತು. ನಮ್ಮ ನಾಡಿನ ಹೆಣ್ಣುಮಗಳೊಬ್ಬಳಿಗೆ ಈ ಪ್ರತಿಷ್ಠಿತ ಪ್ರಶಸ್ತಿ ಬಂದಿದೆ ಎನ್ನುವುದೇ, ನಾಡು ಸಂತೋಷ ಪಡಲು ಪ್ರಮುಖ ಕಾರಣವಾಯ್ತು.

Vinayaka V Bhat Column: ಆತ್ಮಗೌರವವನ್ನೇ ಬಲಿಕೊಟ್ಟ ಮೇಲೆ, ಬದುಕಿದ್ದೂ ಸತ್ತಂತೆ

ಆತ್ಮಗೌರವವನ್ನೇ ಬಲಿಕೊಟ್ಟ ಮೇಲೆ, ಬದುಕಿದ್ದೂ ಸತ್ತಂತೆ

‘ವಿದ್ಯಾರ್ಥಿಗಳು ಮೌಲ್ಯವನ್ನ ಉಳಿಸಿಕೊಳ್ಳಬೇಕು’ ಎಂದು ಭಾಷಣಮಾಡುವ ಮಂತ್ರಿ ಮಹೋದಯರು ಗಳು, ಸದನದ ಕಲಾಪವನ್ನು ವೀಕ್ಷಿಸಲು ಶಾಲಾ ಕಾಲೇಜುಗಳ ಅದೇ ವಿದ್ಯಾರ್ಥಿ ಗಳು ಪ್ರೇಕ್ಷಕರ ಗ್ಯಾಲರಿಯಲ್ಲಿ ಬಂದು ಕುಳಿತಿರುತ್ತಾರೆ ಎನ್ನುವುದನ್ನೂ ಮರೆತು ಬೇಜವಾಬ್ದಾರಿಯಿಂದ ವರ್ತಿಸುವುದು ನಿಜಕ್ಕೂ ಖೇದಕರ.

Vinayaka V Bhat Column: ಸಭಾಮರ್ಯಾದೆಯನ್ನು ಸರ್ವಥಾ ಮರೆಯಬಾರದು

ಸಭಾಮರ್ಯಾದೆಯನ್ನು ಸರ್ವಥಾ ಮರೆಯಬಾರದು

ವೇದಿಕೆಯ ಮೇಲೆ ಒಬ್ಬರು ಮಾತನಾಡುತ್ತಿರುವಾಗ, ಸ್ವಾಗತ ಗೀತೆ ಹಾಡುತ್ತಿರುವಾಗ ಅಥವಾ ಇನ್ನಾವುದೋ ಕಲಾಪಗಳು ಅಲ್ಲಿ ನಡೆಯುತ್ತಿರುವಾಗ, ಅತಿಥಿಗಳು ಗಂಭೀರವಾಗಿದ್ದುಕೊಂಡು ಅದರ ಕಡೆಗೆ ಗಮನ ಕೊಡಬೇಕಾಗುತ್ತದೆ. ಅದುಬಿಟ್ಟು, ಪರಸ್ಪರರು ಮಾತನಾಡಿಕೊಳ್ಳುತ್ತಿರುವುದು ಅಥವಾ ಎದ್ದು ಅತ್ತಿಂದಿತ್ತ ಓಡಾಡುವುದು ಮಾಡಿದರೆ, ನೋಡುಗರಿಗೆ ಬಹಳ ಆಭಾಸವೆನಿಸುತ್ತದೆ.

Vinayak V Bhat Column: ಚುನಾವಣೆಗಳಲ್ಲಿ ಮಾತ್ರ ಮುನ್ನೆಲೆಗೆ ಬರುವ ಮನುಸ್ಮೃತಿ

ಚುನಾವಣೆಗಳಲ್ಲಿ ಮಾತ್ರ ಮುನ್ನೆಲೆಗೆ ಬರುವ ಮನುಸ್ಮೃತಿ

ಮನುಸ್ಮೃತಿಯನ್ನು ಸುಡುವ ಆಂದೋಲನದ ಬಲದಿಂದ ಮಾಯಾವತಿಯವರು ಒಂದೆರಡು ಬಾರಿ ಅಧಿಕಾರಕ್ಕೂ ಬಂದಿದ್ದರು. ಅಲ್ಲಿಂದ ಈಚೆಗೆ, ಚುನಾವಣೆಗಳು ಸಮೀಪಿಸುವಾಗ ಮನುಸ್ಮೃತಿ ಯನ್ನು ಸುಡುವುದು ಮತ್ತು ಅದರ ವಿರುದ್ಧ ಪುಂಖಾನುಪುಂಖವಾಗಿ ಹೇಳಿಕೆ ಗಳನ್ನು ಕೊಡುವುದು ಬಿಜೆಪಿ ಯನ್ನು ಹೊರತುಪಡಿಸಿದ ಭಾರತದ ಮಿಕ್ಕ ಕೆಲ ಪಕ್ಷಗಳ ರಾಜಕಾರಣಿಗಳಿಗೆ ಒಂದು ರೀತಿಯ ಹವ್ಯಾಸ (ಚಟ) ಆಗಿ ಬಿಟ್ಟಿದೆ.

Vinayak V Bhat Column: ಅಲ್ಲಿರುವುದು ನಮ್ಮನೆ...ಇಲ್ಲಿ ಬಂದೆ ಸುಮ್ಮನೆ !

ಅಲ್ಲಿರುವುದು ನಮ್ಮನೆ...ಇಲ್ಲಿ ಬಂದೆ ಸುಮ್ಮನೆ !

ಹಿಂದೆ ಹಳ್ಳಿಗಳಲ್ಲಿ ಆಧುನಿಕತೆಯ ಸ್ಪರ್ಶವೂ ಇರುತ್ತಿರಲಿಲ್ಲ. ಆಗ, ಅಲ್ಲಿನವರು ತಮ್ಮ ಜೀವಿತಾವಧಿ ಯನ್ನೆ ತಮ್ಮ ಕಸುಬು, ಕುಟುಂಬ ಜೀವನವನ್ನು ಸಾಗಿಸುವುದರ ಕಳೆದುಬಿಡುತ್ತಿದ್ದರು. ಮಳೆಗಾಲದ ಪ್ರಾರಂಭಕ್ಕೂ ಮುನ್ನ ಹತ್ತಿರದ ಪಟ್ಟಣಗಳಿಗೆ ತೆರಳಿ ಮಳೆಗಾಲಕ್ಕೆ ಸಾಕಾಗುವಷ್ಟು ಕಿರಾಣಿ ಸಾಮಾನು ಗಳನ್ನು ಸಂಗ್ರಹ ಮಾಡಿಟ್ಟುಕೊಳ್ಳುತ್ತಿದ್ದರು.

Vinayak V Bhat Column: ಶತಮಾನ ಕಳೆದರೂ ತಗ್ಗದ ಅಮೃತಾಂಜನದ ಘಮ

ಶತಮಾನ ಕಳೆದರೂ ತಗ್ಗದ ಅಮೃತಾಂಜನದ ಘಮ

ಅಂತೂ ಸುಗಂಧ ದ್ರವ್ಯಗಳಿಂದ ಆರಂಭವಾಗುವ ಜೀವನ, ಮಧ್ಯದಲ್ಲಿ ಬೇಬಿ ಪೌಡರ್‌ನಿಂದ ಶೃಂಗಾರಗೊಂಡು, ಅಮೃತಾಂಜನದಲ್ಲಿ ಮುಕ್ತಾಯವನ್ನು ಕಾಣುತ್ತದೆ ಎನ್ನಬಹುದು. ಆಗೆ ಮನೆ ಎಂದ ಮೇಲೆ ಅಮೃತಾಂಜನ, ಸುಟ್ಟಗಾಯಕ್ಕೆ ಹಚ್ಚುವ ಬರ್ನಾಲ ಮಲಾಮು ಇರಲೇಬೇಕು. ಇವಷ್ಟಿದ್ದರೆ, ಆ ಮನೆಗೆ ಯಾವ ವೈದ್ಯರ ಅಗತ್ಯವೂ ಇರುತ್ತಿರಲಿಲ್ಲ. ಪ್ರತಿ ಮನೆಯಲ್ಲಿ ಅದರಲ್ಲೂ ಹಳ್ಳಿಯ ಮನೆಗಳಲ್ಲಿ ಔಷಧಿ ಇಡುವುದಕ್ಕಾಗಿಯೇ ಒಂದು ಸಣ್ಣ ನಿರ್ದಿಷ್ಟ ಕಪಾಟು ಇರುತ್ತಿತ್ತು.

Vinayak V Bhat Column: ಕ್ರಿಕೆಟ್‌ ಕಾಶಿಯಲ್ಲಿ ಬಾಯಿತನಕ ಬಂದು ಕೈಜಾರಿದ ತುತ್ತು

ಕ್ರಿಕೆಟ್‌ ಕಾಶಿಯಲ್ಲಿ ಬಾಯಿತನಕ ಬಂದು ಕೈಜಾರಿದ ತುತ್ತು

30 ಬಾಲುಗಳನ್ನು ತಡೆದು ನಿಂತಿದ್ದ ಸಿರಾಜ್, ಆ ಬಾಲನ್ನೂ ಯಶಸ್ವಿಯಾಗಿಯೇ ತಡೆದಿದ್ದರು ಪಾಪ. ಆದರೆ ಅದು ನಿಧಾನವಾಗಿ ಉರುಳಿಕೊಂಡು ಹೋಗಿ ವಿಕೆಟ್ಟಿಗೆ ಮುತ್ತಿಕ್ಕಿ, ಬೇಲ್ಸ್ ಕೆಳಗೆ ಬಿತ್ತು. ತನ್ನಿಂದ ಸೋಲಾಯಿತ ಎನ್ನುವ ಭಾವನೆಯಿಂದ ಸಿರಾಜ್ ಕಣ್ಣೀರಾದರು. ಜಡೇಜಾ ಮಾತ್ರ ಸ್ತಬ್ಧವಾಗಿ ನಿಂತೇ ಇದ್ದರು.

Vinayaka V Bhat Column: ಮೋದಿಯನ್ನೂ ಮರೆಸುವವ ಸಿಗುವುದಾದರೆ ಸರಿ

ಮೋದಿಯನ್ನೂ ಮರೆಸುವವ ಸಿಗುವುದಾದರೆ ಸರಿ

75 ವರ್ಷ ತುಂಬಿದ ರಾಜಕಾರಣಿಗಳು ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು ಎಂಬ ಮೋಹನ್ ಭಾಗವತ್ ಮಾತು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಆಡಿರುವಂಥದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಈ ವರ್ಷದ ಸೆಪ್ಟೆಂಬರ್‌ಗೆ ಮೋದಿಯವರು 75 ವರ್ಷ ಪೂರೈಸ ಲಿದ್ದಾರೆ.

Vinayaka V Bhat Column: ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

ಪ್ರತಿವರ್ಷ ಜೂನ್ 25 ಬಂತೆಂದರೆ, ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿದ ಕಾಂಗ್ರೆಸ್ಸಿನ ನಿರ್ಧಾರದ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ನಾಗರಿಕರ ಸಂವಿಧಾನ ಪ್ರದತ್ತವಾದ ಹಕ್ಕು ಗಳನ್ನು ಕಸಿದುಕೊಂಡ ಈ ಕರಾಳ ಘಟನೆಗೆ 50 ವರ್ಷ ಸಂದ ಈ ಸಲ ಕೇಳಬೇಕೆ? ದೇಶದ ಎಲ್ಲ ಭಾಷೆಗಳ ಮಾಧ್ಯಮಗಳು ಸುಮಾರು ಒಂದು ತಿಂಗಳಿನಿಂದ ಈ ಘಟನೆಯ ಕುರಿತು ಪುಂಖಾನುಪುಂಖ ವಾಗಿ ಬರೆದವು.

Vinayak V Bhat Column: ಉತ್ತರದಲ್ಲೀಗ ಕಥಾವಾಚಕರದ್ದೇ ಕಾರುಬಾರು !

ಉತ್ತರದಲ್ಲೀಗ ಕಥಾವಾಚಕರದ್ದೇ ಕಾರುಬಾರು !

ಭಾರತೀಯರ ಕಥಾವಾಚನ ಅಥವಾ ಶ್ರವಣ ಪರಂಪರೆಗೆ ಇವೇ ಮೂಲವಿರಬೇಕು ಅನಿಸುತ್ತದೆ. ಭಾರತ ದಲ್ಲಿ ವಿಶೇಷವಾಗಿ ಹಿಂದಿ ಮಾತನಾಡುವ ಉತ್ತರದ ರಾಜ್ಯಗಳಲ್ಲಿ, ಪುರಾಣಗಳ ಮತ್ತು ಮಹಾಕಾವ್ಯಗಳ ಕಥೆಯನ್ನು ಸಾರ್ವಜನಿಕವಾಗಿ ಹೇಳುವುದು ಸಾಂಪ್ರದಾಯಿಕವಾಗಿ ನಡೆದು ಬಂದ ಪದ್ದತಿಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ, ಭಗವಂತನ ಲೀಲಾವಿನೋದದ ಕಥೆ ಹೇಳುವುದು ಒಂದು ಪವಿತ್ರ ಸಂಪ್ರದಾಯವಾಗಿದ್ದು, ಅದು ತಲೆಮಾರುಗಳಿಂದ ನಡೆದುಬಂದಿದೆ.

Vinayak V Bhat Column: ಈ ಸಾವುಗಳು ಅನಿವಾರ್ಯವಾ? ಅಪರಿಹಾರ್ಯವಾ?

ಈ ಸಾವುಗಳು ಅನಿವಾರ್ಯವಾ? ಅಪರಿಹಾರ್ಯವಾ?

ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾದ ಸಾವಿನ ಸೂತಕವು ಪರಿಹಾರ ವಾಗುವು ದರೊಳಗೆ, ಬೆಂಗಳೂರಿನ ಕಾಲ್ತುಳಿತದಿಂದುಂಟಾದ ಸಾವುಗಳ ನೋವು ಮನಸ್ಸಿನಿಂದ ಮಾಸುವುದ ರೊಳಗೆ ಅಹಮದಾಬಾದಿನಲ್ಲಿ ನಡೆದ ಘೋರ ವಿಮಾನದುರಂತವು ನಮ್ಮ ಗಾಯದ ಮೇಲೆ ಬರೆ ಎಳೆದಿದೆ.

Vinayaka V Bhat Column: ಸಂಸ್ಕೃತಕ್ಕೂ, ಸಂತನ ಸಾಧನೆಗೂ ಸಂದ ಜ್ಞಾನಪೀಠ

ಸಂಸ್ಕೃತಕ್ಕೂ, ಸಂತನ ಸಾಧನೆಗೂ ಸಂದ ಜ್ಞಾನಪೀಠ

“ಅರೆ! ಜಾತ್ಯತೀತ ರಾಷ್ಟ್ರದಲ್ಲಿ ಕಾವಿಧಾರಿಯೊಬ್ಬರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಗೌರವವನ್ನು ಕೊಡ ಮಾಡುವುದು ಅಂದರೇನು? ಬೇರೆ ಯಾರೂ ಸಿಗಲಿಲ್ಲವಾ? ಇದು ಹಿಂದೂಗಳ ಓಲೈಕೆಯಲ್ಲದೆ ಮತ್ತೇನು? ಹೇಗಿದ್ದರೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಮತ್ತು ರಾಮಭದ್ರಾಚಾರ್ಯರು ಪ್ರಧಾನಿ ಮೋದಿ ಯವರಿಗೆ ಅತ್ಯಾಪ್ತರು ಕೂಡ.

Vinayak V Bhat Column: ತಮಿಳು ತ(ರ)ಲೆಗಳ ನಡುವೆ ಕಂಡ ಕನ್ನಡದ ಚಾಮಿ

ತಮಿಳು ತ(ರ)ಲೆಗಳ ನಡುವೆ ಕಂಡ ಕನ್ನಡದ ಚಾಮಿ

ಒಳ್ಳೆಯ ಅನುಭವಿ ಚಾಲಕನಾತ. ಆದರೆ ದಾರಿಯುದ್ದಕ್ಕೂ ಮಾತಾಡುತ್ತಲೇ ಇದ್ದ. ಡ್ರೈವರು ಗಳೇ ಹಾಗೆ, ಒಂದೋ ಮಾತೇ ಆಡುವುದಿಲ್ಲ, ಇಲ್ಲದಿದ್ದರೆ ಮಾತು ನಿಲ್ಲಿಸುವುದೇ ಇಲ್ಲ. ಈತ ಸ್ವಲ್ಪ ವಾಚಾಳಿ ಎಂತಲೇ ಹೇಳಬಹುದಾದಷ್ಟು ಮಾತುಗಾರನಾಗಿದ್ದ. ಅವನ ಮಾತು ನಿಧಾನಕ್ಕೆ ತಮಿಳು ನಾಡು-ಕರ್ನಾಟಕ, ಕನ್ನಡ-ತಮಿಳು ಎನ್ನುವಲ್ಲಿಗೆ ಹೊರಳಿತು.

Vinayak V Bhat Column: ಕಿಂಡಿಯಿಂದಲ್ಲ, ಕನಕನ ಕಣ್ಣಿಂದ ನೋಡಬೇಕು

ಕಿಂಡಿಯಿಂದಲ್ಲ, ಕನಕನ ಕಣ್ಣಿಂದ ನೋಡಬೇಕು

ರಾಮಧಾನ್ಯ ಚರಿತೆಯೆಂಬ ಅವರ ಈ ಸರಳವಾದ ಮತ್ತು ವಿಶಿಷ್ಟವಾದ ಸಾಹಿತ್ಯವನ್ನು ಬಹಳ ಜನ ಅವರವರಿಗೆ ತಿಳಿದಂತೆ ವಿಶ್ಲೇಷಣೆ ಮಾಡಿದ್ದಾರೆ. ಬಹುಶೃತ ವಿದ್ವಾಂಸರಾಗಿದ್ದ ಡಾ.ಕೆ/ ಎಸ್. ನಾರಾಯಣಾಚಾರ್ಯರು ‘ಕನಕ ದರ್ಶನ’ ಎಂಬ ಸರಣಿ ಪ್ರವಚನವನ್ನೂ ಮಾಡಿದ್ದಾರೆ ಮತ್ತು ಅದು ಅಂತರ್ಜಾಲದಲ್ಲಿ ಲಭ್ಯವಿದೆ. ಆ ಪ್ರವಚನ ಮಾಲಿಕೆಯಲ್ಲಿ ಅವರು ಈ ರಾಮಧಾನ್ಯಚರಿತ್ರೆ ಯನ್ನೂ ಸಮನ್ವಯದ ಮೂಸೆಯಿಂದ ವಿಶ್ಲೇಷಣೆ ಮಾಡಿದ್ದಾರೆ.

Vinayak V Bhat Column: ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ಭಾರದ್ವಾಜ ಮುನಿಗಳ ಆಶ್ರಮಕ್ಕೆ ಬಂದ ಶ್ರೀರಾಮನು ಅವರಿಗೆ ನಮಿಸಿ, ನಿಮ್ಮ ಅಗ್ನಿಹೋತ್ರವೇ ಮುಂತಾದ ನಿತ್ಯ-ನೈಮಿತ್ತಿಕ ಕರ್ಮಗಳು, ಜಪ-ತಪಗಳು ಸುಸೂತ್ರವಾಗಿ ನಡೆಯುತ್ತಿವೆಯೇ? ಕ್ರೂರ ದಾನವರಿಂದ ಏನೂ ದುರ್ಘಟನೆಗಳು ಸಂಭವಿಸಲಿಲ್ಲ ತಾನೆ? ಎನ್ನುತ್ತಾ ಅವರ ಕುಶಲೋಪರಿಗಯ್ಯು ತ್ತಾನೆ. ಹೀಗೆ ಮಾರ್ಗ ಮಧ್ಯದಲ್ಲಿ ಋಷಿಮುನಿಗಳನ್ನು ಸಂದರ್ಶಿಸುತ್ತಾ ಸಾಗುವ ಶ್ರೀರಾಮನ ಪರಿವಾರದ ಅಯೋಧ್ಯಾಪುರದವರೆಗಿನ ಪ್ರಯಾಣವನ್ನು ಬಹು ಸುಂದರವಾಗಿ ದಾಸರು ವರ್ಣಿ ಸುತ್ತಾ ಸಾಗುತ್ತಾರೆ.

Vinayak V Bhat Column: ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ನಿಷಧರಾಜ ನಳ, ಅಯೋಧ್ಯಾಪತಿ ಶ್ರೀರಾಮ, ಕುರುಕುಲ ತಿಲಕನಾದ ನೀನು ಹಾಗೂ ಸತ್ಯಪಾಲನೆಗೆ ಖ್ಯಾತಿವೆತ್ತ ರಾಜಾ ಹರಿಶ್ಚಂದ್ರ. ಅವರುಗಳಲ್ಲಿ, ಶ್ರೀರಾಮನು ಅತ್ಯಂತ ಗುಣಶೀಲನಾಗಿದ್ದಾನೆ" ಎಂದು ಶಾಂಡಿಲ್ಯ ಮುನಿಯು ನುಡಿಯುತ್ತಾನೆ. “ಒಮ್ಮೆ ನೆಲ್ಲು (ವ್ರಿಹಿಗ) ಹಾಗೂ ರಾಗಿ (ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ, ಸರಿಯಾದ ನ್ಯಾಯ ವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿ ಸಿದ" ಎನ್ನುವ ಕಥೆಯ ಬಗ್ಗೆ ಉಲ್ಲೇಖಿಸುತ್ತಾ ಶಾಂಡಿಲ್ಯರು ಧರ್ಮರಾಜನಲ್ಲಿ ಕುತೂಹಲ ಹುಟ್ಟಿಸುತ್ತಾರೆ

Loading...