ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿನಾಯಕ ವೆಂ ಭಟ್ಟ

columnist

vinayakbhat1669@gmail.com

ವಿನಾಯಕ ವೆಂ ಭಟ್ಟರು ಮೂಲತಹ ಉತ್ತರ ಕನ್ನಡದ ಶಿರಸಿಯ ಸಮೀಪದ ಅಂಬ್ಲಿಹೊಂಡ ಎಂಬ ಹಳ್ಳಿಯವರು, ಧಾರವಾಡದಲ್ಲಿ ವಾಣಿಜ್ಯ ಪದವಿಪಡೆದ ಇವರು, ಭಾರತೀಯ ವಿದ್ಯಾಭವನದಿಂದ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸದ್ಯ, ಕಲ್ಯಾಣಿ ಸಮೂಹದ ಅಟೋಮೋಟಿವ ಅಕ್ಸಲ್ ಸಂಸ್ಥೆಯ ಮಾನವ ನಂಪನ್ಮೂಲ ವಿಭಾಗದ 'ಕಂಟ್ರಿ ಹೆಡ್' ಆಗಿ ಮೈಸೂರಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯಾಸಕ್ತರಾಗಿರುವ ಇವರು, ಈಗಾಗಲೇ ಕನ್ನಡದಲ್ಲಿ ೩ ಪುಸ್ತಕಗಳನ್ನು ಸಂಕಲಿಸಿರುತ್ತಾರೆ ಮತ್ತು ಅನೇಕ ಕವನಗಳನ್ನು ರಚಿಸಿರು ತ್ತಾರೆ. ಧಾರವಾಡ ಆಕಾಶವಾಣಿಯಿಂದ ಇವರ ಅನೇಕ ಕವನ ವಾಚನಗಳು ಪ್ರಸಾರವಾಗಿರುತ್ತವೆ. ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದ ಭಾಷಣಕಾರರೂ ಆಗಿದ್ದ ಇವರು. ತಮ್ಮ ಕಾಲೇಜುದಿನಗಳಿಂದ ವಿಶಾಲ ಕರ್ಣಾಟಕ. ನವನಾಡು, ಸಂಯುಕ್ತ ಕರ್ನಾಟಕ ಮುಂತಾದ ಕನ್ನಡದ ಪತ್ರಿಕೆಗಳ ಮತ್ತು ಪತ್ರಕರ್ತರುಗಳ ಜೊತೆಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಪ್ರಚಲಿತ ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಮ್ಮದೇ ಆದ ಪ್ರಖರ ವಿಶ್ಲೇಷಣೆಯನ್ನು ಹೊಂದಿರುವ ಇವರು, ಪ್ರಾಚೀನ ಸಂಸ್ಕೃತ ಸಾಹಿತ್ಯದ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.

Articles
Vinayak V Bhat Column: ಕ್ರಿಕೆಟ್‌ ಕಾಶಿಯಲ್ಲಿ ಬಾಯಿತನಕ ಬಂದು ಕೈಜಾರಿದ ತುತ್ತು

ಕ್ರಿಕೆಟ್‌ ಕಾಶಿಯಲ್ಲಿ ಬಾಯಿತನಕ ಬಂದು ಕೈಜಾರಿದ ತುತ್ತು

30 ಬಾಲುಗಳನ್ನು ತಡೆದು ನಿಂತಿದ್ದ ಸಿರಾಜ್, ಆ ಬಾಲನ್ನೂ ಯಶಸ್ವಿಯಾಗಿಯೇ ತಡೆದಿದ್ದರು ಪಾಪ. ಆದರೆ ಅದು ನಿಧಾನವಾಗಿ ಉರುಳಿಕೊಂಡು ಹೋಗಿ ವಿಕೆಟ್ಟಿಗೆ ಮುತ್ತಿಕ್ಕಿ, ಬೇಲ್ಸ್ ಕೆಳಗೆ ಬಿತ್ತು. ತನ್ನಿಂದ ಸೋಲಾಯಿತ ಎನ್ನುವ ಭಾವನೆಯಿಂದ ಸಿರಾಜ್ ಕಣ್ಣೀರಾದರು. ಜಡೇಜಾ ಮಾತ್ರ ಸ್ತಬ್ಧವಾಗಿ ನಿಂತೇ ಇದ್ದರು.

Vinayaka V Bhat Column: ಮೋದಿಯನ್ನೂ ಮರೆಸುವವ ಸಿಗುವುದಾದರೆ ಸರಿ

ಮೋದಿಯನ್ನೂ ಮರೆಸುವವ ಸಿಗುವುದಾದರೆ ಸರಿ

75 ವರ್ಷ ತುಂಬಿದ ರಾಜಕಾರಣಿಗಳು ಸಾರ್ವಜನಿಕ ಜೀವನದಿಂದ ನಿವೃತ್ತರಾಗಬೇಕು ಎಂಬ ಮೋಹನ್ ಭಾಗವತ್ ಮಾತು, ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನೇ ಟಾರ್ಗೆಟ್ ಮಾಡಿ ಆಡಿರುವಂಥದ್ದು ಎಂದು ವಿಶ್ಲೇಷಿಸಲಾಗುತ್ತಿದೆ. ಏಕೆಂದರೆ ಈ ವರ್ಷದ ಸೆಪ್ಟೆಂಬರ್‌ಗೆ ಮೋದಿಯವರು 75 ವರ್ಷ ಪೂರೈಸ ಲಿದ್ದಾರೆ.

Vinayaka V Bhat Column: ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

ಹೊಸಬಾಳೆಯವರು ಹೊಸದೇನನ್ನೂ ಹೇಳಿರಲಿಲ್ಲ...

ಪ್ರತಿವರ್ಷ ಜೂನ್ 25 ಬಂತೆಂದರೆ, ದೇಶಾದ್ಯಂತ ತುರ್ತುಪರಿಸ್ಥಿತಿಯನ್ನು ಘೋಷಿಸಿದ ಕಾಂಗ್ರೆಸ್ಸಿನ ನಿರ್ಧಾರದ ಕುರಿತು ಚರ್ಚೆಗಳು ನಡೆಯುತ್ತಲೇ ಇರುತ್ತವೆ. ನಾಗರಿಕರ ಸಂವಿಧಾನ ಪ್ರದತ್ತವಾದ ಹಕ್ಕು ಗಳನ್ನು ಕಸಿದುಕೊಂಡ ಈ ಕರಾಳ ಘಟನೆಗೆ 50 ವರ್ಷ ಸಂದ ಈ ಸಲ ಕೇಳಬೇಕೆ? ದೇಶದ ಎಲ್ಲ ಭಾಷೆಗಳ ಮಾಧ್ಯಮಗಳು ಸುಮಾರು ಒಂದು ತಿಂಗಳಿನಿಂದ ಈ ಘಟನೆಯ ಕುರಿತು ಪುಂಖಾನುಪುಂಖ ವಾಗಿ ಬರೆದವು.

Vinayak V Bhat Column: ಉತ್ತರದಲ್ಲೀಗ ಕಥಾವಾಚಕರದ್ದೇ ಕಾರುಬಾರು !

ಉತ್ತರದಲ್ಲೀಗ ಕಥಾವಾಚಕರದ್ದೇ ಕಾರುಬಾರು !

ಭಾರತೀಯರ ಕಥಾವಾಚನ ಅಥವಾ ಶ್ರವಣ ಪರಂಪರೆಗೆ ಇವೇ ಮೂಲವಿರಬೇಕು ಅನಿಸುತ್ತದೆ. ಭಾರತ ದಲ್ಲಿ ವಿಶೇಷವಾಗಿ ಹಿಂದಿ ಮಾತನಾಡುವ ಉತ್ತರದ ರಾಜ್ಯಗಳಲ್ಲಿ, ಪುರಾಣಗಳ ಮತ್ತು ಮಹಾಕಾವ್ಯಗಳ ಕಥೆಯನ್ನು ಸಾರ್ವಜನಿಕವಾಗಿ ಹೇಳುವುದು ಸಾಂಪ್ರದಾಯಿಕವಾಗಿ ನಡೆದು ಬಂದ ಪದ್ದತಿಯಾಗಿದೆ. ಭಾರತೀಯ ಸಂಸ್ಕೃತಿಯಲ್ಲಿ, ಭಗವಂತನ ಲೀಲಾವಿನೋದದ ಕಥೆ ಹೇಳುವುದು ಒಂದು ಪವಿತ್ರ ಸಂಪ್ರದಾಯವಾಗಿದ್ದು, ಅದು ತಲೆಮಾರುಗಳಿಂದ ನಡೆದುಬಂದಿದೆ.

Vinayak V Bhat Column: ಈ ಸಾವುಗಳು ಅನಿವಾರ್ಯವಾ? ಅಪರಿಹಾರ್ಯವಾ?

ಈ ಸಾವುಗಳು ಅನಿವಾರ್ಯವಾ? ಅಪರಿಹಾರ್ಯವಾ?

ಪಹಲ್ಗಾಮ್‌ನ ಭಯೋತ್ಪಾದಕ ದಾಳಿಯಿಂದ ಪ್ರಾರಂಭವಾದ ಸಾವಿನ ಸೂತಕವು ಪರಿಹಾರ ವಾಗುವು ದರೊಳಗೆ, ಬೆಂಗಳೂರಿನ ಕಾಲ್ತುಳಿತದಿಂದುಂಟಾದ ಸಾವುಗಳ ನೋವು ಮನಸ್ಸಿನಿಂದ ಮಾಸುವುದ ರೊಳಗೆ ಅಹಮದಾಬಾದಿನಲ್ಲಿ ನಡೆದ ಘೋರ ವಿಮಾನದುರಂತವು ನಮ್ಮ ಗಾಯದ ಮೇಲೆ ಬರೆ ಎಳೆದಿದೆ.

Vinayaka V Bhat Column: ಸಂಸ್ಕೃತಕ್ಕೂ, ಸಂತನ ಸಾಧನೆಗೂ ಸಂದ ಜ್ಞಾನಪೀಠ

ಸಂಸ್ಕೃತಕ್ಕೂ, ಸಂತನ ಸಾಧನೆಗೂ ಸಂದ ಜ್ಞಾನಪೀಠ

“ಅರೆ! ಜಾತ್ಯತೀತ ರಾಷ್ಟ್ರದಲ್ಲಿ ಕಾವಿಧಾರಿಯೊಬ್ಬರಿಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಗೌರವವನ್ನು ಕೊಡ ಮಾಡುವುದು ಅಂದರೇನು? ಬೇರೆ ಯಾರೂ ಸಿಗಲಿಲ್ಲವಾ? ಇದು ಹಿಂದೂಗಳ ಓಲೈಕೆಯಲ್ಲದೆ ಮತ್ತೇನು? ಹೇಗಿದ್ದರೂ ಕೇಂದ್ರದಲ್ಲಿ ಬಿಜೆಪಿ ಸರಕಾರವಿದೆ ಮತ್ತು ರಾಮಭದ್ರಾಚಾರ್ಯರು ಪ್ರಧಾನಿ ಮೋದಿ ಯವರಿಗೆ ಅತ್ಯಾಪ್ತರು ಕೂಡ.

Vinayak V Bhat Column: ತಮಿಳು ತ(ರ)ಲೆಗಳ ನಡುವೆ ಕಂಡ ಕನ್ನಡದ ಚಾಮಿ

ತಮಿಳು ತ(ರ)ಲೆಗಳ ನಡುವೆ ಕಂಡ ಕನ್ನಡದ ಚಾಮಿ

ಒಳ್ಳೆಯ ಅನುಭವಿ ಚಾಲಕನಾತ. ಆದರೆ ದಾರಿಯುದ್ದಕ್ಕೂ ಮಾತಾಡುತ್ತಲೇ ಇದ್ದ. ಡ್ರೈವರು ಗಳೇ ಹಾಗೆ, ಒಂದೋ ಮಾತೇ ಆಡುವುದಿಲ್ಲ, ಇಲ್ಲದಿದ್ದರೆ ಮಾತು ನಿಲ್ಲಿಸುವುದೇ ಇಲ್ಲ. ಈತ ಸ್ವಲ್ಪ ವಾಚಾಳಿ ಎಂತಲೇ ಹೇಳಬಹುದಾದಷ್ಟು ಮಾತುಗಾರನಾಗಿದ್ದ. ಅವನ ಮಾತು ನಿಧಾನಕ್ಕೆ ತಮಿಳು ನಾಡು-ಕರ್ನಾಟಕ, ಕನ್ನಡ-ತಮಿಳು ಎನ್ನುವಲ್ಲಿಗೆ ಹೊರಳಿತು.

Vinayak V Bhat Column: ಕಿಂಡಿಯಿಂದಲ್ಲ, ಕನಕನ ಕಣ್ಣಿಂದ ನೋಡಬೇಕು

ಕಿಂಡಿಯಿಂದಲ್ಲ, ಕನಕನ ಕಣ್ಣಿಂದ ನೋಡಬೇಕು

ರಾಮಧಾನ್ಯ ಚರಿತೆಯೆಂಬ ಅವರ ಈ ಸರಳವಾದ ಮತ್ತು ವಿಶಿಷ್ಟವಾದ ಸಾಹಿತ್ಯವನ್ನು ಬಹಳ ಜನ ಅವರವರಿಗೆ ತಿಳಿದಂತೆ ವಿಶ್ಲೇಷಣೆ ಮಾಡಿದ್ದಾರೆ. ಬಹುಶೃತ ವಿದ್ವಾಂಸರಾಗಿದ್ದ ಡಾ.ಕೆ/ ಎಸ್. ನಾರಾಯಣಾಚಾರ್ಯರು ‘ಕನಕ ದರ್ಶನ’ ಎಂಬ ಸರಣಿ ಪ್ರವಚನವನ್ನೂ ಮಾಡಿದ್ದಾರೆ ಮತ್ತು ಅದು ಅಂತರ್ಜಾಲದಲ್ಲಿ ಲಭ್ಯವಿದೆ. ಆ ಪ್ರವಚನ ಮಾಲಿಕೆಯಲ್ಲಿ ಅವರು ಈ ರಾಮಧಾನ್ಯಚರಿತ್ರೆ ಯನ್ನೂ ಸಮನ್ವಯದ ಮೂಸೆಯಿಂದ ವಿಶ್ಲೇಷಣೆ ಮಾಡಿದ್ದಾರೆ.

Vinayak V Bhat Column: ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ಭಾರದ್ವಾಜ ಮುನಿಗಳ ಆಶ್ರಮಕ್ಕೆ ಬಂದ ಶ್ರೀರಾಮನು ಅವರಿಗೆ ನಮಿಸಿ, ನಿಮ್ಮ ಅಗ್ನಿಹೋತ್ರವೇ ಮುಂತಾದ ನಿತ್ಯ-ನೈಮಿತ್ತಿಕ ಕರ್ಮಗಳು, ಜಪ-ತಪಗಳು ಸುಸೂತ್ರವಾಗಿ ನಡೆಯುತ್ತಿವೆಯೇ? ಕ್ರೂರ ದಾನವರಿಂದ ಏನೂ ದುರ್ಘಟನೆಗಳು ಸಂಭವಿಸಲಿಲ್ಲ ತಾನೆ? ಎನ್ನುತ್ತಾ ಅವರ ಕುಶಲೋಪರಿಗಯ್ಯು ತ್ತಾನೆ. ಹೀಗೆ ಮಾರ್ಗ ಮಧ್ಯದಲ್ಲಿ ಋಷಿಮುನಿಗಳನ್ನು ಸಂದರ್ಶಿಸುತ್ತಾ ಸಾಗುವ ಶ್ರೀರಾಮನ ಪರಿವಾರದ ಅಯೋಧ್ಯಾಪುರದವರೆಗಿನ ಪ್ರಯಾಣವನ್ನು ಬಹು ಸುಂದರವಾಗಿ ದಾಸರು ವರ್ಣಿ ಸುತ್ತಾ ಸಾಗುತ್ತಾರೆ.

Vinayak V Bhat Column: ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ಕನಕದಾಸರ ರಾಮ (ಧಾನ್ಯ) ಚರಿತೆ: ಸಾರ ಸಂಗ್ರಹ

ನಿಷಧರಾಜ ನಳ, ಅಯೋಧ್ಯಾಪತಿ ಶ್ರೀರಾಮ, ಕುರುಕುಲ ತಿಲಕನಾದ ನೀನು ಹಾಗೂ ಸತ್ಯಪಾಲನೆಗೆ ಖ್ಯಾತಿವೆತ್ತ ರಾಜಾ ಹರಿಶ್ಚಂದ್ರ. ಅವರುಗಳಲ್ಲಿ, ಶ್ರೀರಾಮನು ಅತ್ಯಂತ ಗುಣಶೀಲನಾಗಿದ್ದಾನೆ" ಎಂದು ಶಾಂಡಿಲ್ಯ ಮುನಿಯು ನುಡಿಯುತ್ತಾನೆ. “ಒಮ್ಮೆ ನೆಲ್ಲು (ವ್ರಿಹಿಗ) ಹಾಗೂ ರಾಗಿ (ನರೆದಲೆಗ)ಗಳ ನಡುವೆ ಮೂಡಿದ್ದ ಜಗಳವನ್ನು ನಿವಾರಿಸಿ, ಸರಿಯಾದ ನ್ಯಾಯ ವನ್ನು ಹೇಳಿ ಶ್ರೀರಾಮನು ಧರ್ಮವನ್ನು ಪಾಲಿ ಸಿದ" ಎನ್ನುವ ಕಥೆಯ ಬಗ್ಗೆ ಉಲ್ಲೇಖಿಸುತ್ತಾ ಶಾಂಡಿಲ್ಯರು ಧರ್ಮರಾಜನಲ್ಲಿ ಕುತೂಹಲ ಹುಟ್ಟಿಸುತ್ತಾರೆ

Vinayak V Bhat Column: ನರೆದಲೆಗ ಮತ್ತು ವ್ರಿಹಿಗಗಳಲ್ಲಿ ಶ್ರೇಷ್ಠರು ಯಾರು ?

ನರೆದಲೆಗ ಮತ್ತು ವ್ರಿಹಿಗಗಳಲ್ಲಿ ಶ್ರೇಷ್ಠರು ಯಾರು ?

ಕೃಶಕಾಯನಿಗೆ ಅವನದ್ದೇ ಆದ ಆನುಕೂಲ್ಯಗಳಿದ್ದರೆ, ಪೀನ ದೇಹವಂತನಿಗೆ ಅವನದ್ದೇ ಆದ ಸೌಲಭ್ಯ ಗಳಿವೆ. ಹಾಗಾಗಿಯೇ, ಎಲ್ಲವನ್ನೂ ಪಕ್ಷಿನೋಟದಿಂದ, ಅಂದರೆ ಎತ್ತರದಿಂದ ನೋಡು ವವರಿಗೆ ಸಮಾಜದಲ್ಲಿ ಯಾವ ಅಸಮಾನತೆಗಳೂ ಕಾಣದೇ, ಎಲ್ಲವೂ ಭವ್ಯವವಾಗಿಯೂ ಸುಂದರವಾಗಿಯೂ ಗೋಚರಿಸುತ್ತವೆ.

Vinayak V Bhat Column: ಸುಮ್ನ ಇರಲಾರದೇ ಇರುವೆ ಬಿಟ್ಕಂಡಂತಾಯ್ತು !

ಸುಮ್ನ ಇರಲಾರದೇ ಇರುವೆ ಬಿಟ್ಕಂಡಂತಾಯ್ತು !

ರಾಹುಲ್ ತಮ್ಮ ಪ್ರದರ್ಶನವನ್ನು ಹಾಗೂ ತಂಡದ ಜಯವನ್ನು ಅವರು ಅತಿರೇಕವಾಗಿ ಸಂಭ್ರಮಿಸು ವವರಲ್ಲ. ಅವರೇನಿದ್ದರೂ ಗೆಲುವನ್ನು ಒಳಗೊಳಗೇ ಸಂಭ್ರಮಿಸುವ ವ್ಯಕ್ತಿ. ಆದರೆ ಅಂದು ಕ್ರೀಡಾಂಗಣದಲ್ಲಿ ರಾಹುಲ್ ವೈಲೆಂಟ್ ಆದಂತೆ ಕಂಡುಬಂತು. ಆರ್‌ಸಿಬಿ ವಿರುದ್ಧದ ಪಂದ್ಯವನ್ನು ಗೆದ್ದ ಜೋಶ್‌ನಲ್ಲಿ ಅವರು ತುಸು ಅಬ್ಬರದಲ್ಲೇ ಸಂಭ್ರಮಿಸಿದರು.

Vinayak V Bhat Column: ಈ ನೆತ್ತರಿಗೆ ಉತ್ತರಿಸುವ ದಾಯಿತ್ವ ನಮ್ಮ ಮೇಲಿದೆ

ಈ ನೆತ್ತರಿಗೆ ಉತ್ತರಿಸುವ ದಾಯಿತ್ವ ನಮ್ಮ ಮೇಲಿದೆ

ಭಾರತೀಯ ಸೈನ್ಯದ ಮೇಲೆ ನನಗೆ ನಂಬಿಕೆಯಿದೆ, ಆದರೆ ನಮ್ಮ ಮನಸ್ಥಿತಿ ಬದಲಾಗಬೇಕಿದೆ. ತಂದೆ ಯನ್ನು ಕಣ್ಣೆದುರಿಗೇ ಕಳೆದುಕೊಂಡ ವಿವರಿಸಲಾಗದ ನೋವಿದ್ದರೂ, ಇಷ್ಟೊಂದು ಜನ ಸೇರಿರುವುದು ನೋಡಿದರೆ ಸಮಾಧಾನವಾಗುತ್ತದೆ" ಎಂದು ತಂದೆಯ ಅಂತ್ಯಕ್ರಿಯೆಯ ವೇಳೆಯಲ್ಲಿ ಕಣ್ಣೀರೊರೆಸಿ ಕೊಳ್ಳುತ್ತಾ ಅವರ ಮಗ ಆಡಿದ ಮಾತುಗಳು ಇನ್ನೂ ನನ್ನ ಕಿವಿಯಲ್ಲಿ ಅನುರಣಿಸುತ್ತಿವೆ.

Vinayak V Bhat Column: ಸದಾ ವತ್ಸಲೆಯ ಸೇವೆಯಲ್ಲಿ ಸವೆದ ನೂರು ವರ್ಷ

ಸದಾ ವತ್ಸಲೆಯ ಸೇವೆಯಲ್ಲಿ ಸವೆದ ನೂರು ವರ್ಷ

ತ್ಯಾಗ-ಬಲಿದಾನಗಳೊಂದಿಗೆ 100 ವಸಂತಗಳನ್ನು ಕಂಡ ಆರೆಸ್ಸೆಸ್‌ನ ಯಶಸ್ಸು ಅನನ್ಯವಾಗಿದೆ. ದೇಶ ಭಕ್ತಿಯು ಕೇವಲ ಧ್ವಜಹಾರಿಸುವುದಕ್ಕೆ, ದೇಶಭಕ್ತಿ ಗೀತೆಗಳನ್ನು ಹಾಡುವುದಕ್ಕೆ, ರಾಷ್ಟ್ರೀಯ ಏಕತೆಯ ಪ್ರತಿಜ್ಞೆಯನ್ನು ಕೈಗೊಳ್ಳುವುದಕ್ಕೆ ಸೀಮಿತವಾಗಬಾರದು ಎಂಬ ಅರಿವನ್ನು ಜನರಲ್ಲಿ ಮೂಡಿಸಿದ ಕೀರ್ತಿ ಆರೆಸ್ಸೆಸ್‌ಗೆ ಸಲ್ಲಬೇಕು.

Vinayak V Bhat Column: ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಸಂಗೀತ ಕಲೆಯನ್ನು ದೇವರಿಂದ ಕೊಡುಗೆಯಾಗಿ ಪಡೆದುಕೊಂಡು ಬಂದ ಗಾಯಕರಲ್ಲಿ ೆಂಕಟೇಶ್ ಕುಮಾರ್ ಒಬ್ಬರು. ತಮ್ಮ ಸಾಂಪ್ರದಾಯಿಕ ಗಾಯನ ಶೈಲಿಯಿಂದಾಗಿ ಸಂಗೀತ ಪ್ರೇಮಿಗಳ ನೆಚ್ಚಿನ ಕಲಾವಿದರಾಗಿರುವ ಇವರು, ಗಾನಗಂಗೋತ್ರಿಯನ್ನು ಆಧುನಿಕ ಆಘಾತಗಳ ನಡುವೆಯೂ ಮಲಿನ ವಾಗಲು ಬಿಡದೆ ಪರಿಶುದ್ಧವಾಗಿಯೇ ಉಳಿಸಿಕೊಂಡು ಬಂದಿದ್ದಾರೆ.

Vinayaka V Bhat Column: ನೀತಿಯುತ ರಾಮಪಥ, ಇಂದಿಗೂ ಪ್ರಸ್ತುತ

ನೀತಿಯುತ ರಾಮಪಥ, ಇಂದಿಗೂ ಪ್ರಸ್ತುತ

ರಾಮ ತನ್ನ ಜೀವಿತಾವಧಿಯಲ್ಲಿ ಈ ಮಾತನ್ನು ಸರ್ವಥಾ ಪಾಲಿಸಿಕೊಂಡು ಬಂದಿರುವುದು ಅವನ ಚರಿತ್ರೆಯಿಂದ ನಮಗೆ ಅರಿವಾಗುತ್ತದೆ ಮತ್ತು ಆ ಕಾರಣಕ್ಕೇ ಜನ ಅವನನ್ನು ಆರಾಧಿಸು ತ್ತಾರೆ. ‘ಅಪಿ ಸ್ವರ್ಣಮಯೀ ಲಂಕಾ ನಮೇ ರೋಚತೆ ಲಕ್ಷ್ಮಣ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾ ದಪಿ ಗರೀಯಸಿ’ ಅಂದರೆ, ‘ಲಂಕೆಯು ಸ್ವರ್ಣಮಯವಾಗಿದ್ದರೂ ನನ್ನ ಜನ್ಮಭೂಮಿಯ ಮುಂದೆ ಇದು ನನ್ನನ್ನು ಆಕರ್ಷಿತವಾಗುವಂತೆ ಮಾಡುವುದಿಲ್ಲ

Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಯುಗಾದಿ ಹಬ್ಬ ಬಂತೆಂದರೆ ನಮಗೆ ಮೊದಲು ನೆನಪಾಗುವುದು ಬೇಂದ್ರೆ ಅಜ್ಜನ ಈ ಹಾಡು! ಇದರೊ ಳಗೆ ಅಡಗಿರುವ ಗಹನಾರ್ಥ ತಿಳಿಯದಿದ್ದರೂ, ಇದು ಯುಗಾದಿಯ ಹಾಡಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದೆ. 12 ಮಾಸಗಳ ಪುಂಜವಾದ ಕಾಲಗತಿಯು, ಒಂದು ಸಂವತ್ಸರದಿಂದ ಇನ್ನೊಂದಕ್ಕೆ ಪದಾರ್ಪಣೆ ಮಾಡುವ ಹೊಸ ಕಾಲಘಟ್ಟವನ್ನು ಭಾರತೀಯರು ‘ಯುಗಾದಿ’ ಎಂದು ಆಚರಿಸುತ್ತಾರೆ.

Vinayak V Bhat Column: ಸುಭಾಷಿತ: ಮರೆಯಾಗುತ್ತಿರುವ ಸಾರಭೂತ ಸಾಹಿತ್ಯ

ಸುಭಾಷಿತ: ಮರೆಯಾಗುತ್ತಿರುವ ಸಾರಭೂತ ಸಾಹಿತ್ಯ

ಮರುದಿನ ಶಾಲೆಯಲ್ಲಿ ಬೆಳಗ್ಗೆ ಪ್ರಾರ್ಥನೆ ಮುಗಿಯುತ್ತಿದ್ದಂತೆ, ಅಂದಿನ ವಾರ್ತಾಪತ್ರಿಕೆಯ ಮುಖಪುಟ ದ ತಲೆಬರಹ ಗಳು ಮತ್ತು ಅಮರವಾಣಿಯನ್ನು (ಕನ್ನಡ ಅಥವಾ ಸಂಸ್ಕೃತದ ಒಂದು ಸೂಕ್ತಿ) ಓದಿಸಿ, ಅದರ ಸರಳ ಅರ್ಥವನ್ನು ಹೇಳಲಾಗುತ್ತಿತ್ತು. ತರಗತಿಯ ಬೋರ್ಡಿನ ಮೇಲೂ ಸುಭಾಷಿತದ ಶ್ಲೋಕವನ್ನು ಬರೆಯುವ ಪರಿಪಾಠವಿತ್ತು

Vinayaka V Bhatta Column: ಕನ್ಯಾಸಮರ್ಪಣೆ ಎಂಬ ಭಾವೋತ್ಕರ್ಷದ ಕ್ಷಣ

ಕನ್ಯಾಸಮರ್ಪಣೆ ಎಂಬ ಭಾವೋತ್ಕರ್ಷದ ಕ್ಷಣ

ಎರಡು ವಿಭಿನ್ನ ಕುಟುಂಬಗಳ ನಡುವೆ ಸಂಬಂಧ ಬೆಸೆಯುವ, ಸಂಬಂಧವಿಲ್ಲದ ಎರಡು ಜೀವ ಗಳ ಮಿಲನವಾಗುವ ಸುಂದರ ಸಂದರ್ಭವನ್ನು ವಿವಾಹ, ಮದುವೆ, ಲಗ್ನ ಎಂಬೆಲ್ಲ ಹೆಸರು ಗಳಿಂದ ಕರೆಯಲಾಗುತ್ತದೆ. ಮಾನವರ ಬದುಕಿಗೆ ನಿಗದಿಪಡಿಸಲಾಗಿರುವ 16 ಸಂಸ್ಕಾರಗಳಲ್ಲಿ ವಿವಾಹಕ್ಕೆ ಪ್ರಾಧಾನ್ಯವಿದ್ದು, ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಅಸುರ, ಗಾಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ವಿಧದ ವಿವಾಹ ಪದ್ಧತಿಗಳನ್ನು ನಮ್ಮ ಪೂರ್ವಜರು ಗುರುತಿಸಿದ್ದಾರೆ.

Vinayak V Bhat Column: ದೇವರು: ಗುಂಡಪ್ಪನವರ ವಿಶಿಷ್ಟ ವಿಚಾರಧಾರೆ

ದೇವರು: ಗುಂಡಪ್ಪನವರ ವಿಶಿಷ್ಟ ವಿಚಾರಧಾರೆ

ದೇವರೆಂದರೆ ಯಾರು, ಎಲ್ಲಿದ್ದಾನೆ, ಅವನ ಸ್ವರೂಪ ಎಂಥದ್ದು? ಅವನಿರುವುದು ನಿಜವೇ? ಇದ್ದರೆ ನಮಗೇಕೆ ಕಾಣುವುದಿಲ್ಲ, ಕರೆದಾಗೇಕೆ ಬರುವುದಿಲ್ಲ? ಜೀವನವು ಸ್ವಾಭಾವಿಕವಾಗಿ ನಡೆದುಕೊಂಡು ಹೋಗುತ್ತಿರುವಾಗ ದೇವರಿಂದ ನಮಗೆ ಆಗಬೇಕಾ ದ್ದೇನು? ಮುಂತಾದ ಪ್ರಶ್ನೆಗಳು ‘ದೇವರನ್ನು ನಂಬು ತ್ತೇವೆ’ ಎನ್ನುವವರಲ್ಲೂ ಇರುವಂಥವೇ! ಇನ್ನು, ಪಾಪ-ಪುಣ್ಯಗಳು, ಅದರಿಂದುಂಟಾಗುವ ಫಲ-ಪರಿಣಾ ಮಗಳ ಕುರಿತೂ ಚರ್ಚೆಗಳಿವೆ. ಹಿಂದೂ ಧರ್ಮದ ಸೈದ್ಧಾಂತಿಕ ನಿಲುವಾದ ಪುನರ್ಜನ್ಮದ ಕುರಿತೂ ನಮಗೆ ನಂಬಿಕೆ-ಅಪನಂಬಿಕೆಗಳಿವೆ.

Vinayak V Bhat Column: ಕನ್ನಡಿಗರಿಗೊಲಿದ ಅದಿಕಾವ್ಯದ ಅಧ್ಯಯನ ಸೌಲಭ್ಯ

ಕನ್ನಡಿಗರಿಗೊಲಿದ ಅದಿಕಾವ್ಯದ ಅಧ್ಯಯನ ಸೌಲಭ್ಯ

ಪಂಡಿತನು ತಾನು ಕೊಟ್ಟ ಮಾತಿನಂತೆ ಸಂಪೂರ್ಣ ರಾಮಾಯಣ ಹೇಳಬೇಕೆಂದರೆ ವಾರ ಗಟ್ಟಲೆ ಕಾಲಾವಕಾಶ ಬೇಕು. ಆದರೆ ಆತ ಚತುರ ಬುದ್ಧಿ ಉಪಯೋಗಿಸಿ, ‘ಆದೌ ರಾಮ ತಪೋ ವನಾಭಿಗಮನಂ ಹತ್ವಾ ಮೃಗಂ ಕಾಂಚನಂ| ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|| ವಾಲಿನಿರ್ಹನನಂ ಸಮುದ್ರ ತರಣಂ ಲಂಕಾಪುರೀ ದಾಹನಂ| ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||’ ಅಂತ ರಾಮಾಯಣದ ಅತಿ ಮುಖ್ಯವಾದ ಘಟನೆಗಳನ್ನು ಹೊಂದಿಸಿ ಒಂದು ಶ್ಲೋಕ ರಚಿಸಿ ಹೇಳಿಬಿಟ್ಟನಂತೆ. ಈ ಏಕಶ್ಲೋಕಿ ರಾಮಾ ಯಣಕ್ಕೆ ‘ಮಜ್ಜಿಗೆ ರಾಮಾಯಣ’ ಎಂಬ ಹೆಸರು ಬಂತಂತೆ

Vinayak V Bhat Column: ಬಹುಮುಖಿ ಪ್ರತಿಭಾ ಸಂಪನ್ನ ಡಾ.ಕುಮಾರ್‌ ವಿಶ್ವಾಸ್

ಬಹುಮುಖಿ ಪ್ರತಿಭಾ ಸಂಪನ್ನ ಡಾ.ಕುಮಾರ್‌ ವಿಶ್ವಾಸ್

ವಿಶ್ವಾಸ್ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕುತೂಹಲಕಾರಿ ಸಂಗತಿ ಯೆಂದರೆ, ಅವರು ಅಣ್ಣಾ ಹಜಾರೆಯವರ ‘ಭ್ರಷ್ಟಾಚಾರ ವಿರೋಧಿ ಅಭಿಯಾನ’ವನ್ನು ಬೆಂಬ ಲಿಸಿದ್ದು, ಕೃತಿಚೌರ್ಯದ ಆರೋಪಗಳು ಮತ್ತು ಆಮ್ ಆದ್ಮಿ ಪಕ್ಷದ ನೀತಿಗಳನ್ನು ಕೆಲವೊಮ್ಮೆ ಬಹಿರಂಗವಾಗಿ ಟೀಕಿಸಿದ್ದು ಮುಂತಾದ ಕಾರಣಕ್ಕೆ ಆಗಾಗ ವಿವಾದಕ್ಕೀಡಾದದ್ದೂ ಇದೆ. ಒಟ್ಟಿನಲ್ಲಿ ಅವರ ಜೀವನವು ವೈವಿಧ್ಯಮ ಯವೂ ವರ್ಣರಂಜಿತವೂ ಆಗಿರುವುದಂತೂ ಖರೆ!

Vinayak V Bhat Column: ಉಚಿತಗಳ ಹರಿಕಾರ ಮಫ್ಲರ್‌ವಾಲನ ಮಹಾಪತನ

ಉಚಿತಗಳ ಹರಿಕಾರ ಮಫ್ಲರ್‌ವಾಲನ ಮಹಾಪತನ

ಚುನಾವಣಾ ಫಲಿತಾಂಶದ ದಿನ ದೆಹಲಿಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಯಲ್ಲಿ ತೊಡಗಿದರೆ, ಪ್ರಧಾನಿ ಮೋದಿಯವರು ಪಕ್ಷದ ಕಚೇರಿಯಿಂದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ ದರು. “ಸೇವೆ ಸಲ್ಲಿಸಲು ಬಿಜೆಪಿಗೆ ಅವಕಾಶ ನೀಡುವಂತೆ ಆಗ್ರಹಿಸಿ ದೆಹಲಿಯ ಪ್ರತಿಯೊಬ್ಬ ನಿವಾಸಿಗೂ ನಾನು ಪತ್ರ ಬರೆದಿದ್ದೆ. ಇಂದು ನಮ್ಮನ್ನು ನಂಬಿ ಮತನೀಡಿದ್ದಕ್ಕಾಗಿ ದೆಹಲಿಯ ಪ್ರತಿಯೊಂದು ಕುಟುಂಬಕ್ಕೂ ನಾನು ಕೃತಜ್ಞತೆಯಿಂದ ತಲೆಬಾಗುವೆ

Vinayak V Bhat  Column: ಭಾರತದಲ್ಲಿ ಆದಾಯ ತೆರಿಗೆ: ಸಿಂಹಾವಲೋಕನ

ಭಾರತದಲ್ಲಿ ಆದಾಯ ತೆರಿಗೆ: ಸಿಂಹಾವಲೋಕನ

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಡಲಾಗಿರುವ ರಘುವಂಶ ಮಹಾಕಾವ್ಯದ ಉಲ್ಲೇಖ. ಜನರ ಮೇಲೆ ತೆರಿಗೆ ಹಾಕುವುದು ರಾಜಾ ದಿಲೀಪನ ಕಾಲದಲ್ಲೂ ಇತ್ತು ಎಂಬುದನ್ನು ಮತ್ತು ಹಾಗೆ ಸಂಗ್ರಹಿಸಿದ ತೆರಿಗೆಯನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂಬುದನ್ನು ಹೇಳು ವುದು ಇಲಾಖೆಯ ಉದ್ದೇಶವಾಗಿರಲಿಕ್ಕೆ ಸಾಕು.

Loading...