ಫೋಟೋ ಗ್ಯಾಲರಿ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ
Profile

ವಿನಾಯಕ ವೆಂ ಭಟ್ಟ

columnist

vinayakbhat1669@gmail.com

ವಿನಾಯಕ ವೆಂ ಭಟ್ಟರು ಮೂಲತಹ ಉತ್ತರ ಕನ್ನಡದ ಶಿರಸಿಯ ಸಮೀಪದ ಅಂಬ್ಲಿಹೊಂಡ ಎಂಬ ಹಳ್ಳಿಯವರು, ಧಾರವಾಡದಲ್ಲಿ ವಾಣಿಜ್ಯ ಪದವಿಪಡೆದ ಇವರು, ಭಾರತೀಯ ವಿದ್ಯಾಭವನದಿಂದ ಮಾನವ ಸಂಪನ್ಮೂಲ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುತ್ತಾರೆ. ಸದ್ಯ, ಕಲ್ಯಾಣಿ ಸಮೂಹದ ಅಟೋಮೋಟಿವ ಅಕ್ಸಲ್ ಸಂಸ್ಥೆಯ ಮಾನವ ನಂಪನ್ಮೂಲ ವಿಭಾಗದ 'ಕಂಟ್ರಿ ಹೆಡ್' ಆಗಿ ಮೈಸೂರಿನಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಮೊದಲಿನಿಂದಲೂ ಸಾಹಿತ್ಯಾಸಕ್ತರಾಗಿರುವ ಇವರು, ಈಗಾಗಲೇ ಕನ್ನಡದಲ್ಲಿ ೩ ಪುಸ್ತಕಗಳನ್ನು ಸಂಕಲಿಸಿರುತ್ತಾರೆ ಮತ್ತು ಅನೇಕ ಕವನಗಳನ್ನು ರಚಿಸಿರು ತ್ತಾರೆ. ಧಾರವಾಡ ಆಕಾಶವಾಣಿಯಿಂದ ಇವರ ಅನೇಕ ಕವನ ವಾಚನಗಳು ಪ್ರಸಾರವಾಗಿರುತ್ತವೆ. ಕಾಲೇಜು ದಿನಗಳಲ್ಲಿ ರಾಷ್ಟ್ರಮಟ್ಟದ ಭಾಷಣಕಾರರೂ ಆಗಿದ್ದ ಇವರು. ತಮ್ಮ ಕಾಲೇಜುದಿನಗಳಿಂದ ವಿಶಾಲ ಕರ್ಣಾಟಕ. ನವನಾಡು, ಸಂಯುಕ್ತ ಕರ್ನಾಟಕ ಮುಂತಾದ ಕನ್ನಡದ ಪತ್ರಿಕೆಗಳ ಮತ್ತು ಪತ್ರಕರ್ತರುಗಳ ಜೊತೆಗೆ ನಿಕಟ ಸಂಪರ್ಕ ಹೊಂದಿರುತ್ತಾರೆ. ಪ್ರಚಲಿತ ರಾಜಕೀಯ, ಆರ್ಥಿಕ, ಧಾರ್ಮಿಕ ಮತ್ತು ಸಾಮಾಜಿಕ ವಿದ್ಯಮಾನಗಳ ಕುರಿತು ತಮ್ಮದೇ ಆದ ಪ್ರಖರ ವಿಶ್ಲೇಷಣೆಯನ್ನು ಹೊಂದಿರುವ ಇವರು, ಪ್ರಾಚೀನ ಸಂಸ್ಕೃತ ಸಾಹಿತ್ಯದ ಕುರಿತು ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತಾರೆ.

Articles
Vinayak V Bhat Column: ಸದಾ ವತ್ಸಲೆಯ ಸೇವೆಯಲ್ಲಿ ಸವೆದ ನೂರು ವರ್ಷ

ಸದಾ ವತ್ಸಲೆಯ ಸೇವೆಯಲ್ಲಿ ಸವೆದ ನೂರು ವರ್ಷ

ತ್ಯಾಗ-ಬಲಿದಾನಗಳೊಂದಿಗೆ 100 ವಸಂತಗಳನ್ನು ಕಂಡ ಆರೆಸ್ಸೆಸ್‌ನ ಯಶಸ್ಸು ಅನನ್ಯವಾಗಿದೆ. ದೇಶ ಭಕ್ತಿಯು ಕೇವಲ ಧ್ವಜಹಾರಿಸುವುದಕ್ಕೆ, ದೇಶಭಕ್ತಿ ಗೀತೆಗಳನ್ನು ಹಾಡುವುದಕ್ಕೆ, ರಾಷ್ಟ್ರೀಯ ಏಕತೆಯ ಪ್ರತಿಜ್ಞೆಯನ್ನು ಕೈಗೊಳ್ಳುವುದಕ್ಕೆ ಸೀಮಿತವಾಗಬಾರದು ಎಂಬ ಅರಿವನ್ನು ಜನರಲ್ಲಿ ಮೂಡಿಸಿದ ಕೀರ್ತಿ ಆರೆಸ್ಸೆಸ್‌ಗೆ ಸಲ್ಲಬೇಕು.

Vinayak V Bhat Column: ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಪುಣ್ಯಾಶ್ರಮದ ಪ್ರಭೆಗೆ ಸಂದ ನಾಡೋಜ ಪದವಿ

ಸಂಗೀತ ಕಲೆಯನ್ನು ದೇವರಿಂದ ಕೊಡುಗೆಯಾಗಿ ಪಡೆದುಕೊಂಡು ಬಂದ ಗಾಯಕರಲ್ಲಿ ೆಂಕಟೇಶ್ ಕುಮಾರ್ ಒಬ್ಬರು. ತಮ್ಮ ಸಾಂಪ್ರದಾಯಿಕ ಗಾಯನ ಶೈಲಿಯಿಂದಾಗಿ ಸಂಗೀತ ಪ್ರೇಮಿಗಳ ನೆಚ್ಚಿನ ಕಲಾವಿದರಾಗಿರುವ ಇವರು, ಗಾನಗಂಗೋತ್ರಿಯನ್ನು ಆಧುನಿಕ ಆಘಾತಗಳ ನಡುವೆಯೂ ಮಲಿನ ವಾಗಲು ಬಿಡದೆ ಪರಿಶುದ್ಧವಾಗಿಯೇ ಉಳಿಸಿಕೊಂಡು ಬಂದಿದ್ದಾರೆ.

Vinayaka V Bhat Column: ನೀತಿಯುತ ರಾಮಪಥ, ಇಂದಿಗೂ ಪ್ರಸ್ತುತ

ನೀತಿಯುತ ರಾಮಪಥ, ಇಂದಿಗೂ ಪ್ರಸ್ತುತ

ರಾಮ ತನ್ನ ಜೀವಿತಾವಧಿಯಲ್ಲಿ ಈ ಮಾತನ್ನು ಸರ್ವಥಾ ಪಾಲಿಸಿಕೊಂಡು ಬಂದಿರುವುದು ಅವನ ಚರಿತ್ರೆಯಿಂದ ನಮಗೆ ಅರಿವಾಗುತ್ತದೆ ಮತ್ತು ಆ ಕಾರಣಕ್ಕೇ ಜನ ಅವನನ್ನು ಆರಾಧಿಸು ತ್ತಾರೆ. ‘ಅಪಿ ಸ್ವರ್ಣಮಯೀ ಲಂಕಾ ನಮೇ ರೋಚತೆ ಲಕ್ಷ್ಮಣ, ಜನನೀ ಜನ್ಮ ಭೂಮಿಶ್ಚ ಸ್ವರ್ಗಾ ದಪಿ ಗರೀಯಸಿ’ ಅಂದರೆ, ‘ಲಂಕೆಯು ಸ್ವರ್ಣಮಯವಾಗಿದ್ದರೂ ನನ್ನ ಜನ್ಮಭೂಮಿಯ ಮುಂದೆ ಇದು ನನ್ನನ್ನು ಆಕರ್ಷಿತವಾಗುವಂತೆ ಮಾಡುವುದಿಲ್ಲ

Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ

ಯುಗಾದಿ ಹಬ್ಬ ಬಂತೆಂದರೆ ನಮಗೆ ಮೊದಲು ನೆನಪಾಗುವುದು ಬೇಂದ್ರೆ ಅಜ್ಜನ ಈ ಹಾಡು! ಇದರೊ ಳಗೆ ಅಡಗಿರುವ ಗಹನಾರ್ಥ ತಿಳಿಯದಿದ್ದರೂ, ಇದು ಯುಗಾದಿಯ ಹಾಡಾಗಿ ಕನ್ನಡಿಗರ ಮನಸ್ಸಿನಲ್ಲಿ ನೆಲೆಯೂರಿದೆ. 12 ಮಾಸಗಳ ಪುಂಜವಾದ ಕಾಲಗತಿಯು, ಒಂದು ಸಂವತ್ಸರದಿಂದ ಇನ್ನೊಂದಕ್ಕೆ ಪದಾರ್ಪಣೆ ಮಾಡುವ ಹೊಸ ಕಾಲಘಟ್ಟವನ್ನು ಭಾರತೀಯರು ‘ಯುಗಾದಿ’ ಎಂದು ಆಚರಿಸುತ್ತಾರೆ.

Vinayak V Bhat Column: ಸುಭಾಷಿತ: ಮರೆಯಾಗುತ್ತಿರುವ ಸಾರಭೂತ ಸಾಹಿತ್ಯ

ಸುಭಾಷಿತ: ಮರೆಯಾಗುತ್ತಿರುವ ಸಾರಭೂತ ಸಾಹಿತ್ಯ

ಮರುದಿನ ಶಾಲೆಯಲ್ಲಿ ಬೆಳಗ್ಗೆ ಪ್ರಾರ್ಥನೆ ಮುಗಿಯುತ್ತಿದ್ದಂತೆ, ಅಂದಿನ ವಾರ್ತಾಪತ್ರಿಕೆಯ ಮುಖಪುಟ ದ ತಲೆಬರಹ ಗಳು ಮತ್ತು ಅಮರವಾಣಿಯನ್ನು (ಕನ್ನಡ ಅಥವಾ ಸಂಸ್ಕೃತದ ಒಂದು ಸೂಕ್ತಿ) ಓದಿಸಿ, ಅದರ ಸರಳ ಅರ್ಥವನ್ನು ಹೇಳಲಾಗುತ್ತಿತ್ತು. ತರಗತಿಯ ಬೋರ್ಡಿನ ಮೇಲೂ ಸುಭಾಷಿತದ ಶ್ಲೋಕವನ್ನು ಬರೆಯುವ ಪರಿಪಾಠವಿತ್ತು

Vinayaka V Bhatta Column: ಕನ್ಯಾಸಮರ್ಪಣೆ ಎಂಬ ಭಾವೋತ್ಕರ್ಷದ ಕ್ಷಣ

ಕನ್ಯಾಸಮರ್ಪಣೆ ಎಂಬ ಭಾವೋತ್ಕರ್ಷದ ಕ್ಷಣ

ಎರಡು ವಿಭಿನ್ನ ಕುಟುಂಬಗಳ ನಡುವೆ ಸಂಬಂಧ ಬೆಸೆಯುವ, ಸಂಬಂಧವಿಲ್ಲದ ಎರಡು ಜೀವ ಗಳ ಮಿಲನವಾಗುವ ಸುಂದರ ಸಂದರ್ಭವನ್ನು ವಿವಾಹ, ಮದುವೆ, ಲಗ್ನ ಎಂಬೆಲ್ಲ ಹೆಸರು ಗಳಿಂದ ಕರೆಯಲಾಗುತ್ತದೆ. ಮಾನವರ ಬದುಕಿಗೆ ನಿಗದಿಪಡಿಸಲಾಗಿರುವ 16 ಸಂಸ್ಕಾರಗಳಲ್ಲಿ ವಿವಾಹಕ್ಕೆ ಪ್ರಾಧಾನ್ಯವಿದ್ದು, ಬ್ರಾಹ್ಮ, ದೈವ, ಆರ್ಷ, ಪ್ರಾಜಾಪತ್ಯ, ಅಸುರ, ಗಾಂಧರ್ವ, ರಾಕ್ಷಸ ಮತ್ತು ಪೈಶಾಚ ಎಂಬ ವಿಧದ ವಿವಾಹ ಪದ್ಧತಿಗಳನ್ನು ನಮ್ಮ ಪೂರ್ವಜರು ಗುರುತಿಸಿದ್ದಾರೆ.

Vinayak V Bhat Column: ದೇವರು: ಗುಂಡಪ್ಪನವರ ವಿಶಿಷ್ಟ ವಿಚಾರಧಾರೆ

ದೇವರು: ಗುಂಡಪ್ಪನವರ ವಿಶಿಷ್ಟ ವಿಚಾರಧಾರೆ

ದೇವರೆಂದರೆ ಯಾರು, ಎಲ್ಲಿದ್ದಾನೆ, ಅವನ ಸ್ವರೂಪ ಎಂಥದ್ದು? ಅವನಿರುವುದು ನಿಜವೇ? ಇದ್ದರೆ ನಮಗೇಕೆ ಕಾಣುವುದಿಲ್ಲ, ಕರೆದಾಗೇಕೆ ಬರುವುದಿಲ್ಲ? ಜೀವನವು ಸ್ವಾಭಾವಿಕವಾಗಿ ನಡೆದುಕೊಂಡು ಹೋಗುತ್ತಿರುವಾಗ ದೇವರಿಂದ ನಮಗೆ ಆಗಬೇಕಾ ದ್ದೇನು? ಮುಂತಾದ ಪ್ರಶ್ನೆಗಳು ‘ದೇವರನ್ನು ನಂಬು ತ್ತೇವೆ’ ಎನ್ನುವವರಲ್ಲೂ ಇರುವಂಥವೇ! ಇನ್ನು, ಪಾಪ-ಪುಣ್ಯಗಳು, ಅದರಿಂದುಂಟಾಗುವ ಫಲ-ಪರಿಣಾ ಮಗಳ ಕುರಿತೂ ಚರ್ಚೆಗಳಿವೆ. ಹಿಂದೂ ಧರ್ಮದ ಸೈದ್ಧಾಂತಿಕ ನಿಲುವಾದ ಪುನರ್ಜನ್ಮದ ಕುರಿತೂ ನಮಗೆ ನಂಬಿಕೆ-ಅಪನಂಬಿಕೆಗಳಿವೆ.

Vinayak V Bhat Column: ಕನ್ನಡಿಗರಿಗೊಲಿದ ಅದಿಕಾವ್ಯದ ಅಧ್ಯಯನ ಸೌಲಭ್ಯ

ಕನ್ನಡಿಗರಿಗೊಲಿದ ಅದಿಕಾವ್ಯದ ಅಧ್ಯಯನ ಸೌಲಭ್ಯ

ಪಂಡಿತನು ತಾನು ಕೊಟ್ಟ ಮಾತಿನಂತೆ ಸಂಪೂರ್ಣ ರಾಮಾಯಣ ಹೇಳಬೇಕೆಂದರೆ ವಾರ ಗಟ್ಟಲೆ ಕಾಲಾವಕಾಶ ಬೇಕು. ಆದರೆ ಆತ ಚತುರ ಬುದ್ಧಿ ಉಪಯೋಗಿಸಿ, ‘ಆದೌ ರಾಮ ತಪೋ ವನಾಭಿಗಮನಂ ಹತ್ವಾ ಮೃಗಂ ಕಾಂಚನಂ| ವೈದೇಹೀ ಹರಣಂ ಜಟಾಯು ಮರಣಂ ಸುಗ್ರೀವ ಸಂಭಾಷಣಂ|| ವಾಲಿನಿರ್ಹನನಂ ಸಮುದ್ರ ತರಣಂ ಲಂಕಾಪುರೀ ದಾಹನಂ| ಪಶ್ಚಾದ್ರಾವಣ ಕುಂಭಕರ್ಣ ಹನನಂ ಏತದ್ಧಿ ರಾಮಾಯಣಂ||’ ಅಂತ ರಾಮಾಯಣದ ಅತಿ ಮುಖ್ಯವಾದ ಘಟನೆಗಳನ್ನು ಹೊಂದಿಸಿ ಒಂದು ಶ್ಲೋಕ ರಚಿಸಿ ಹೇಳಿಬಿಟ್ಟನಂತೆ. ಈ ಏಕಶ್ಲೋಕಿ ರಾಮಾ ಯಣಕ್ಕೆ ‘ಮಜ್ಜಿಗೆ ರಾಮಾಯಣ’ ಎಂಬ ಹೆಸರು ಬಂತಂತೆ

Vinayak V Bhat Column: ಬಹುಮುಖಿ ಪ್ರತಿಭಾ ಸಂಪನ್ನ ಡಾ.ಕುಮಾರ್‌ ವಿಶ್ವಾಸ್

ಬಹುಮುಖಿ ಪ್ರತಿಭಾ ಸಂಪನ್ನ ಡಾ.ಕುಮಾರ್‌ ವಿಶ್ವಾಸ್

ವಿಶ್ವಾಸ್ ಒಂದಲ್ಲಾ ಒಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಕುತೂಹಲಕಾರಿ ಸಂಗತಿ ಯೆಂದರೆ, ಅವರು ಅಣ್ಣಾ ಹಜಾರೆಯವರ ‘ಭ್ರಷ್ಟಾಚಾರ ವಿರೋಧಿ ಅಭಿಯಾನ’ವನ್ನು ಬೆಂಬ ಲಿಸಿದ್ದು, ಕೃತಿಚೌರ್ಯದ ಆರೋಪಗಳು ಮತ್ತು ಆಮ್ ಆದ್ಮಿ ಪಕ್ಷದ ನೀತಿಗಳನ್ನು ಕೆಲವೊಮ್ಮೆ ಬಹಿರಂಗವಾಗಿ ಟೀಕಿಸಿದ್ದು ಮುಂತಾದ ಕಾರಣಕ್ಕೆ ಆಗಾಗ ವಿವಾದಕ್ಕೀಡಾದದ್ದೂ ಇದೆ. ಒಟ್ಟಿನಲ್ಲಿ ಅವರ ಜೀವನವು ವೈವಿಧ್ಯಮ ಯವೂ ವರ್ಣರಂಜಿತವೂ ಆಗಿರುವುದಂತೂ ಖರೆ!

Vinayak V Bhat Column: ಉಚಿತಗಳ ಹರಿಕಾರ ಮಫ್ಲರ್‌ವಾಲನ ಮಹಾಪತನ

ಉಚಿತಗಳ ಹರಿಕಾರ ಮಫ್ಲರ್‌ವಾಲನ ಮಹಾಪತನ

ಚುನಾವಣಾ ಫಲಿತಾಂಶದ ದಿನ ದೆಹಲಿಯಾದ್ಯಂತ ಬಿಜೆಪಿ ಕಾರ್ಯಕರ್ತರು ಸಂಭ್ರಮಾಚರಣೆ ಯಲ್ಲಿ ತೊಡಗಿದರೆ, ಪ್ರಧಾನಿ ಮೋದಿಯವರು ಪಕ್ಷದ ಕಚೇರಿಯಿಂದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿ ದರು. “ಸೇವೆ ಸಲ್ಲಿಸಲು ಬಿಜೆಪಿಗೆ ಅವಕಾಶ ನೀಡುವಂತೆ ಆಗ್ರಹಿಸಿ ದೆಹಲಿಯ ಪ್ರತಿಯೊಬ್ಬ ನಿವಾಸಿಗೂ ನಾನು ಪತ್ರ ಬರೆದಿದ್ದೆ. ಇಂದು ನಮ್ಮನ್ನು ನಂಬಿ ಮತನೀಡಿದ್ದಕ್ಕಾಗಿ ದೆಹಲಿಯ ಪ್ರತಿಯೊಂದು ಕುಟುಂಬಕ್ಕೂ ನಾನು ಕೃತಜ್ಞತೆಯಿಂದ ತಲೆಬಾಗುವೆ

Vinayak V Bhat  Column: ಭಾರತದಲ್ಲಿ ಆದಾಯ ತೆರಿಗೆ: ಸಿಂಹಾವಲೋಕನ

ಭಾರತದಲ್ಲಿ ಆದಾಯ ತೆರಿಗೆ: ಸಿಂಹಾವಲೋಕನ

ಆದಾಯ ತೆರಿಗೆ ಇಲಾಖೆಯ ವೆಬ್‌ಸೈಟ್‌ನಲ್ಲಿ ಮಾಡಲಾಗಿರುವ ರಘುವಂಶ ಮಹಾಕಾವ್ಯದ ಉಲ್ಲೇಖ. ಜನರ ಮೇಲೆ ತೆರಿಗೆ ಹಾಕುವುದು ರಾಜಾ ದಿಲೀಪನ ಕಾಲದಲ್ಲೂ ಇತ್ತು ಎಂಬುದನ್ನು ಮತ್ತು ಹಾಗೆ ಸಂಗ್ರಹಿಸಿದ ತೆರಿಗೆಯನ್ನು ದೇಶದ ಅಭಿವೃದ್ಧಿ ಕಾರ್ಯಗಳಿಗೆ ಬಳಸಲಾಗುತ್ತದೆ ಎಂಬುದನ್ನು ಹೇಳು ವುದು ಇಲಾಖೆಯ ಉದ್ದೇಶವಾಗಿರಲಿಕ್ಕೆ ಸಾಕು.

Vinayak V Bhat Column: ಮಾತು ಮನಸ್ಸಿನ ಕೈಗನ್ನಡಿ, ಅಲ್ಲವೇ...?

ಮಾತು ಮನಸ್ಸಿನ ಕೈಗನ್ನಡಿ, ಅಲ್ಲವೇ...?

ವಿಶಿಷ್ಟ ಸಂದರ್ಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪ್ರಯಾಗ್‌ರಾಜ್‌ಗೆ ಭೇಟಿ ನೀಡಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಯೋಗಗುರು ಬಾಬಾ ರಾಮ್‌ದೇವ್ ಮತ್ತು ಅನೇಕ ಸಾಧುಗಳೊಂದಿಗೆ ತ್ರಿವೇಣಿ ಸಂಗಮದಲ್ಲಿ ಧಾರ್ಮಿಕಸ್ನಾನ ಮಾಡಿದರು. ಈ ಬೆಳವಣಿಗೆಯನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ವಿಡಂಬಿಸಿದರು

Vinayak V Bhat Column: ಅಧಿಕಾರ, ತ್ಯಾಗ ಮತ್ತು ರಾಜಕೀಯ ಅನಿವಾರ್ಯತೆ

ಅಧಿಕಾರ, ತ್ಯಾಗ ಮತ್ತು ರಾಜಕೀಯ ಅನಿವಾರ್ಯತೆ

ಡಾ.ಮನಮೋಹನ್ ಸಿಂಗ್ ಅವರು ನನಗಿಂತ ಉತ್ತಮ ಪ್ರಧಾನಿಯಾಗುತ್ತಾರೆ ಅನಿಸಿದ್ದರಿಂದ ಅವರನ್ನು ಆ ಹುದ್ದೆಗೆ ಆಯ್ಕೆಮಾಡಲಾಯಿತು" ಎಂದು ಅವರು ಉತ್ತರಿಸಿದ್ದರು. ಈ ವಿಷಯದಲ್ಲಿ ತಾವು ತ್ಯಾಗ ಮಾಡಿದ್ದಾಗಿ ಸೋನಿಯಾರಿಗೇ ಅನಿಸಿಲ್ಲ; ಆದರೆ ಕರ್ನಾಟಕದ ಕಾಂಗ್ರೆಸ್ಸಿಗರೇಕೋ ಸ್ಪರ್ಧೆಗೆ ಬಿದ್ದವ ರಂತೆ 20 ವರ್ಷಗಳ ಹಿಂದಿನ ಈ ಘಟನೆಯನ್ನು ನೆನಪಿಸಿಕೊಂಡು ಈಗ ಮಾತಾಡುತ್ತಿದ್ದಾರೆ.

Vinayak V Bhat Column: ಉದಾರಚರಿತರ ಮಹೌದಾರ್ಯವೆಂದರೆ ಇದೇನಾ ?

ಉದಾರಚರಿತರ ಮಹೌದಾರ್ಯವೆಂದರೆ ಇದೇನಾ ?

ವಾಲ್ಮೀಕಿ ರಾಮಾಯಣ ಹೊರತುಪಡಿಸಿ, ಗೋಸ್ವಾಮಿ ತುಳಸೀದಾಸರು ಬರೆದ ‘ರಾಮ ಚರಿತ ಮಾನಸ’ ಅಥವಾ ‘ತುಳಸಿ ರಾಮಾಯಣ’ ಭಾರತದಲ್ಲಿ ಹೆಚ್ಚು ಜನಪ್ರಿಯ. ಆದರೆ, ರಾಮಾ ಯಣ ವನ್ನು ವಾಲ್ಮೀಕಿಗಿಂತ ಮೊದಲು ರಾಮಭಕ್ತ ಹನುಮಂತ ಬರೆದಿದ್ದ ಎಂಬುದು ಕೆಲವರಿ ಗಷ್ಟೇ ಗೊತ್ತು

Vinayak V Bhat Column: ತೀರ್ಥಸ್ನಾನ, ಕ್ಷೇತ್ರಯಾತ್ರೆ ಮತ್ತು ಅಲೌಕಿಕತೆ...

ತೀರ್ಥಸ್ನಾನ, ಕ್ಷೇತ್ರಯಾತ್ರೆ ಮತ್ತು ಅಲೌಕಿಕತೆ...

ಭಾರತೀಯ ಸನಾತನ ಪರಂಪರೆಯಲ್ಲಿ, ಆಧ್ಯಾತ್ಮಿಕ ಉನ್ನತಿಯನ್ನು ತಲುಪಲು ಮತ್ತು ಮೋಕ್ಷವನ್ನು ಸಾಧಿಸಲು ತ್ರಿಕರಣಗಳ ಶುದ್ಧತೆಯ ಅಗತ್ಯವನ್ನು ಒತ್ತಿಹೇಳಲಾಗಿದೆ. ತ್ರಿಕರಣವೆಂದರೆ ಶರೀರ, ಮಾತು ಮತ್ತು ಮನಸ್ಸು . ಹಾಗೆ, ತ್ರಿಕರಣಗಳ ಶುದ್ಧತೆಯೇ ಪ್ರಮುಖ ಉದ್ದೇಶವಾಗಿ ತೀರ್ಥಯಾತ್ರೆಗಳನ್ನು ಮತ್ತು ಮಹಾನದಿಗಳಲ್ಲಿನ ಪುಣ್ಯಸ್ನಾನವನ್ನು ‘ನೇಮ’ವಾಗಿ ವಿಧಿಸಲಾಗಿದೆ.

Vinayak V Bhat Column: ಮನಮೋಹನ - ಮೌನದ ಕುರಿತು ನಾಲ್ಕು ಮಾತುಗಳು

ಮನಮೋಹನ - ಮೌನದ ಕುರಿತು ನಾಲ್ಕು ಮಾತುಗಳು

‘ಮೌನ’ ಎನ್ನುವುದು ಕೇವಲ ‘ಮಾತನಾಡದೇ ಇರುವ’ ಸ್ಥಿತಿಯಲ್ಲ ಎಂಬುದು ಮೊದಲಿಗೆ ಎಲ್ಲರಿಗೂ ಮನವರಿಕೆಯಾಗಬೇಕಾದ ವಿಷಯ. ಮೌನಕ್ಕೆ ಅತ್ಯಂತ ವಿಶಾಲಾರ್ಥವಿದೆ. ಮೌನ ಎಂಬುದು ಗುಣವೂ ಹೌದು, ದೋಷವೂ ಹೌದು. ಯಾವ್ಯಾವ ಸಂದರ್ಭಗಳಲ್ಲಿ ಸುಮ್ಮನಿರುವುದರಿಂದ ಸಂಘರ್ಷಗಳು ತಪ್ಪುತ್ತವೆಯೋ ಅಥವಾ ಸಂಬಂಧಗಳು ಉಳಿದುಕೊಳ್ಳುತ್ತವೆಯೋ, ಅಲ್ಲಿ ಅದು ‘ಗುಣ’ವಾಗಿ ಗಣಿಸ ಲ್ಪಡುತ್ತದೆ. ಆದರೆ, ಎಲ್ಲಿ ಮಾತು ಅತ್ಯವಶ್ಯವೋ ಅಲ್ಲಿ ಸುಮ್ಮನಿದ್ದರೆ, ಅದು ದೋಷವಾಗಿ ಪರಿಗಣಿತ ವಾಗುತ್ತದೆ.

Vinayak V Bhat Column: ಹಿಂದೂ ಸಮಾಜಕ್ಕೆ ಮುದ ನೀಡದ ಮೋಹನ ವಾಣಿ

ಹಿಂದೂ ಸಮಾಜಕ್ಕೆ ಮುದ ನೀಡದ ಮೋಹನ ವಾಣಿ

ಕಾಶಿ, ಮಥುರಾ, ಸಂಭಲ್ ಮತ್ತು ಇತರ ಪ್ರದೇಶಗಳಲ್ಲಿನ ಮಸೀದಿಗಳ ಸರ್ವೆ ನಡೆಸುವ ಕುರಿತು ಚರ್ಚೆ ಗಳು ನಡೆಯುತ್ತಿರುವಾಗಲೇ ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಸರಸಂಘ ಚಾಲಕ ಮೋಹನ್ ಭಾಗವತ್ ಅವರ ಇತ್ತೀಚಿನ ಹೇಳಿಕೆಯೊಂದು ಹಿಂದೂ ಹೋರಾಟಗಾರರ ಮತ್ತು ಸಾಧು-ಸಂತರ ಮುನಿಸಿಗೆ ಕಾರಣವಾಗಿದೆ. “ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕಿತ್ತು, ಈಗ ಆಗಿದೆ. ಇದು ಹಿಂದೂಗಳ ಪ್ರಮುಖ ಶ್ರದ್ಧಾ ಕೇಂದ್ರವಾಗಿದೆ.

Vinayak V Bhat Column: ತಬಲಾ ಇರುವವರೆಗೂ ಝಾಕಿರ್‌ ಅಮರ

Vinayak V Bhat Column: ತಬಲಾ ಇರುವವರೆಗೂ ಝಾಕಿರ್‌ ಅಮರ

ಸುಮಾರು 25 ವರ್ಷಗಳ ಹಿಂದೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪಂಡಿತ್ ಹರಿಪ್ರಸಾದ್ ಚೌರಾಸಿಯಾ ಅವರ ಸಂಗೀತ ಕಾರ್ಯಕ್ರಮ ಏರ್ಪಾಡಾಗಿತ್ತು. ಅವರ ಜತೆಗೆ ಉಸ್ತಾದ್ ಝಾಕಿರ್ ಹುಸೇನ್ ವೇದಿಕೆಗೆ ಬಂದರು, ಪ್ರೇಕ್ಷಕರಿಂದ ಚಪ್ಪಾಳೆಗಳ ಸುರಿಮಳೆಯಾಯಿತು. ಕಾರ್ಯಕ್ರಮ ಶುರುವಾಗಿ ಝಾಕಿರ್ ತಮ್ಮ ಕೈಚಳಕದ ಸಣ್ಣ ಝಲಕ್ ತೋರಿಸಿದ್ದೇ ತಡ, ಪ್ರೇಕ್ಷಕರಿಂದ ಮೆಚ್ಚುಗೆ ಚಪ್ಪಾಳೆಯ ಜತೆಗೆ ಶಿಳ್ಳೆಯೂ ಸೇರಿಕೊಂಡಿತ್ತು.

Vinayak V Bhat Column: ಸಾಮರಸ್ಯ-ಸಹಿಷ್ಣುತೆ ಇಂದಿನ ಅನಿವಾರ್ಯತೆ

ಸಾಮರಸ್ಯ-ಸಹಿಷ್ಣುತೆ ಇಂದಿನ ಅನಿವಾರ್ಯತೆ

ಮಣಿಮಂಜರಿ ಎಂಬ ಶುದ್ಧಾಂಗ ಅಪಲಾಪ’ ಎಂಬ ನನ್ನ ಲೇಖನಕ್ಕೆ (ನ.14) ಅನೇಕ ಉತ್ತಮ ಪ್ರತಿಕ್ರಿಯೆ ಗಳು ಬಂದವು. ಶಂಕರಾಚಾರ್ಯರ ಅವಹೇಳನ ಮಾಡುವ ತಾಮಸಿಕ ಮನಸ್ಥಿತಿಗಳನ್ನು ಸಾತ್ವಿಕವಾಗಿ ವಿರೋಧಿಸಿರು ವುದು, ಲೋಕಹಿತದ ದೃಷ್ಟಿಯಿಂದ ಮತಸಾಮರಸ್ಯದ ಅಗತ್ಯವನ್ನು ಎತ್ತಿ ಹೇಳಿರು ವುದು ಅನೇಕ ಓದುಗರ ಮನಮುಟ್ಟಿದೆಯೆಂದು ತಿಳಿದು ಸಂತಸವಾಯಿತು.

Vinayak V Bhat Column: ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತದ ಚತುರ ನಡೆ

ಐಸಿಸಿ ಚಾಂಪಿಯನ್ಸ್‌ ಟ್ರೋಫಿ: ಭಾರತದ ಚತುರ ನಡೆ

ಮುಂಬರುವ ಫೆಬ್ರವರಿಯಲ್ಲಿ ಪಾಕ್‌ನಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ಅಲ್ಲಿಗೆ ತೆರಳುವ ಸಂದರ್ಭ ಮತ್ತೆ ಬಂದಿದೆಯಾದರೂ, ಅದು ಸಾಕಾರಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ‘ಭಾರತ ಸರಕಾರದ ಸಲಹೆಯ ಮೇರೆಗೆ ನಮ್ಮ ತಂಡವು ಪಾಕಿಸ್ತಾನಕ್ಕೆ ಬರುತ್ತಿಲ್ಲ’ ಎಂದು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯು (ಬಿಸಿಸಿಐ) ಪಿಸಿಬಿಗೆ ಸ್ಪಷ್ಟವಾಗಿ ತಿಳಿಸಿದೆ.

Vinayak V Bhat Column: ಇವಿಎಂಗಳು ಶಾಪಮುಕ್ತ ವಾಗುವುದು ಯಾವಾಗ ?

ಇವಿಎಂಗಳು ಶಾಪಮುಕ್ತ ವಾಗುವುದು ಯಾವಾಗ ?

ಮಹಾರಾಷ್ಟ್ರ, ಜಾರ್ಖಂಡ್ ವಿಧಾನಸಭಾ ಚುನಾವಣೆಗಳ ಮತ್ತು ಕೆಲ ರಾಜ್ಯಗಳ ಉಪಚುನಾವಣಾ ಫಲಿತಾಂಶಗಳ ಕುರಿತು ಮತದಾನೋತ್ತರ ಸಮೀಕ್ಷೆಗಳು ಪ್ರಕಟವಾದವು. ಕರ್ನಾಟಕ ಸೇರಿದಂತೆ ಎಲ್ಲ ಕಡೆ ಎನ್‌ಡಿಎ ಪರವಾದ ಅಲೆಯಿದೆ ಎಂದು ಬಹುತೇಕ ಸಮೀಕ್ಷೆಗಳು ಅಭಿಪ್ರಾಯ ಪಟ್ಟವು. ಇವು ಬಿತ್ತರವಾಗುತ್ತಿದ್ದಂತೆ ಕರ್ನಾಟಕದಲ್ಲಿ ಮಂತ್ರಿ ಮಹದೇವಪ್ಪನವರು, “ಮತಯಂತ್ರಗಳ (ಇವಿಎಂ) ಮೇಲೆ ಯಾಕೋ ನಮಗೆ ಅನುಮಾನ ಬರ್ತಾ ಇದೆ" ಎನ್ನುತ್ತಾ ಫಲಿತಾಂಶಗಳಿಗೆ ಮೊದಲೇ ಸೋಲಿಗೆ ನಿರೀಕ್ಷಣಾ ಜಾಮೀನು ತೆಗೆದುಕೊಂಡುಬಿಟ್ಟರು.