ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಶಿಕ್ಷಣ

ಭಾರತಕ್ಕೆ ವಿಶ್ವದ ಅಗ್ರ ವಿಶ್ವವಿದ್ಯಾಲಯದ ಪ್ರವೇಶ: ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಪ್ರಾರಂಭಿಸಿದ UNSW ಸಿಡ್ನಿ

ಬೆಂಗಳೂರಿನಲ್ಲಿ ತನ್ನ ಕ್ಯಾಂಪಸ್ ಪ್ರಾರಂಭಿಸಿದ UNSW ಸಿಡ್ನಿ

ಆಸ್ಟ್ರೇಲಿಯಾದ ಅಗ್ರಗಣ್ಯ ವಿಶ್ವವಿದ್ಯಾಲಯ 'ಯುಎನ್‌ಎಸ್‌ಡಬ್ಲ್ಯೂ ಸಿಡ್ನಿ' (UNSW Sydney) ಭಾರತದಲ್ಲಿ ತನ್ನ ಮೊದಲ ಅಂತಾರಾಷ್ಟ್ರೀಯ ಕ್ಯಾಂಪಸ್ ಅನ್ನು ಪ್ರಾರಂಭಿಸಿದೆ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ವಿಕಸನಗೊಳ್ಳುತ್ತಿರುವ ಶಿಕ್ಷಣ ಪಾಲುದಾರಿಕೆಯಲ್ಲಿ ಮಹತ್ವದ ಮೈಲುಗಲ್ಲಾ ಗಿರುವ ಈ ಕ್ಯಾಂಪಸ್, 2026ರ ಆಗಸ್ಟ್‌ನಲ್ಲಿ ತನ್ನ ಶೈಕ್ಷಣಿಕ ಚಟುವಟಿಕೆಗಳನ್ನು ಆರಂಭಿಸಲು ಸಜ್ಜಾಗಿದೆ.

Bangalore University: ಕಳೆದ ಆರು ತಿಂಗಳಿಂದ ಮುಂದೂಡಿಕೆಯಾಗಿದ್ದ ಬೆಂಗಳೂರು ವಿವಿ ಪಿಎಚ್.ಡಿ ಪ್ರವೇಶ ಪ್ರಕ್ರಿಯೆ ಅಂತಿಮ ಘಟ್ಟಕ್ಕೆ; ಆಗಸ್ಟ್ 3, 4ರಂದು ಸಂದರ್ಶನ

ಬೆಂಗಳೂರು ವಿವಿ ಪಿಎಚ್.ಡಿ ಪ್ರವೇಶ ಪ್ರಕ್ರಿಯೆ; ಆ. 3, 4ರಂದು ಸಂದರ್ಶನ

Bangalore University PhD admission: ಬೆಂಗಳೂರು ವಿವಿ ಪಿಎಚ್‌.ಡಿ ಪ್ರವೇಶಕ್ಕೆ ಬೇರೆ ಬೇರೆ ಕಾರಣಗಳಿಂದಾಗಿ ಎರಡು ಬಾರಿ ಅಧಿಸೂಚನೆ ರದ್ದಾಗಿತ್ತು. ಮೂರನೇ ಬಾರಿ ಹೊರಡಿಸಿದ್ದ ಅಧಿಸೂಚನೆ ಪ್ರಕ್ರಿಯೆ ಇದೀಗ ಅಂತಿಮ ಘಟ್ಟಕ್ಕೆ ತಲುಪಿದ್ದು, ಆಕಾಂಕ್ಷಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗಿಲ್ಲ ಶೂ, ಸಾಕ್ಸ್, ನೋಟ್‌ಬುಕ್ಸ್‌; ಸರ್ಕಾರದ ನಿರ್ಲಕ್ಷ್ಯಕ್ಕೆ ಆಕ್ರೋಶ

ಎರಡು ತಿಂಗಳಾದರೂ ವಿದ್ಯಾರ್ಥಿಗಳಿಗಿಲ್ಲ ಶೂ, ಸಾಕ್ಸ್, ನೋಟ್‌ಬುಕ್ಸ್‌!

Chikkaballapur News: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್, ನೋಟ್‌ಬುಕ್ ಸೇರಿದಂತೆ ಅಗತ್ಯ ಮೂಲ ಸೌಲಭ್ಯಗಳನ್ನು ವಿತರಿಸಬೇಕು ಎಂದು ಆಗ್ರಹಿಸಿ, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ (ಎಐಡಿಎಸ್ಓ) ಶುಕ್ರವಾರ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಸ್ಕಿಲ್ ಕೋರ್ಸ್ ಪರಿಚಯಿಸಿದ ಬಿಎಂಎಸ್‌ಸಿಇ

ಸ್ಕಿಲ್ ಕೋರ್ಸ್ ಪರಿಚಯಿಸಿದ ಬಿಎಂಎಸ್‌ಸಿಇ

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಶಿಕ್ಷಣದ ಜತೆಗೆ ಕೌಶಲ್ಯ ಶಿಕ್ಷಣವನ್ನು ಕಲಿಸಿ ಕೊಡುವ ಉದ್ದೇಶದಿಂದ ಕಾಲೇಜು ವಾರ್ಷಿಕ 3.2ಕೋಟಿ ರೂ. ವೆಚ್ಚ ಮಾಡಿ ಈ ಸ್ಕಿಲ್ ಲ್ಯಾಬ್ ಅನ್ನು ತೆರೆದಿದೆ. ಇದರಿಂದ ವಿದ್ಯಾರ್ಥಿಗಳು ಪದವೀಧರರಾಗಿ ಹೊರ ಹೋಗುವ ಮುನ್ನ ಕೈಗಾರಿಕೆಗಳಿಗೆ ಅವಶ್ಯವಾಗಿ ಬೇಕಾಗುವ ಐದು ಕೌಶಲ್ಯವನ್ನು ಕಲಿಯಬಹುದಾಗಿದೆ.

ʼʼಕೌಶಲಾಧಾರಿತ ಶಿಕ್ಷಣಕ್ಕೆ ಒತ್ತು ನೀಡಿʼʼ: ವಿದ್ಯಾರ್ಥಿಗಳಿಗೆ ಸಹ ಪ್ರಧ್ಯಾಪಕಿ ಕಾವ್ಯ ಕರೆ

ವಿದ್ಯಾರ್ಥಿಗಳು ಕಲಿಕೆಯ ಜತೆಗೆ ಆತ್ಮವಿಶ್ವಾಸ ಬೆಳೆಸಿಕೊಳ್ಳಿ: ಕಾವ್ಯ

ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಮನಃಶಾಸ್ತ್ರ ವಿಭಾಗದ ವತಿಯಿಂದ ಸಮ್ಯಗ್ದರ್ಶನ ಸಭಾಭವನದಲ್ಲಿ ಬುಧವಾರ 'ಕಾಗ್ನಿಟೋ' ವಾರ್ಷಿಕ ಚಟುವಟಿಕೆಗಳ ಕಾರ್ಯಕ್ರಮ ಜರುಗಿತು. ಎಸ್‌.ಡಿ.ಎಂ. ನ್ಯಾಚುರೋಪತಿ ಕಾಲೇಜಿನ ಮನಃಶಾಸ್ತ್ರ ವಿಭಾಗದ ಸಹ ಪ್ರಧ್ಯಾಪಕಿ ಕಾವ್ಯ ಎಂ. ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

Pavagada News: ಸಮಾಜದ ಒಳಿತಿಗಾಗಿ ಮಾಡಿದ ಸಾಧನೆ, ಸೇವೆಯೇ ಶಾಶ್ವತ: ನಿವೃತ್ತ ಮುಖ್ಯ ಶಿಕ್ಷಕ ಮಂಜುನಾಥ್

ಸಮಾಜದ ಒಳಿತಿಗಾಗಿ ಮಾಡಿದ ಸಾಧನೆ, ಸೇವೆಯೇ ಶಾಶ್ವತ: ಮಂಜುನಾಥ್

Pavagada News: ಪಾವಗಡ ತಾಲೂಕಿನ ಪೊನ್ನಸಮುದ್ರ ಗ್ರಾಮದ ಶ್ರೀ ವಿನಾಯಕ ವಿದ್ಯಾಪೀಠ ಪ್ರೌಢಶಾಲೆಯಲ್ಲಿ 1996-97, 1997-98 ಹಾಗೂ 1998-99ನೇ ಸಾಲಿನ ಹಳೆಯ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ಹಳೆಯ ವಿದ್ಯಾರ್ಥಿಗಳ ಸ್ನೇಹ ಸಮ್ಮಿಲನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

NEET UG 2026: ಆಲ್ ಇಂಡಿಯಾ ಟಾಪ್ 10 ರಲ್ಲಿ ನಾಲ್ಕು ಆಕಾಶ್ ವಿದ್ಯಾರ್ಥಿಗಳಿಗೆ ಸ್ಥಾನ

NEET UG 2026: ಟಾಪ್ 10 ರಲ್ಲಿ ನಾಲ್ಕು ಆಕಾಶ್ ವಿದ್ಯಾರ್ಥಿಗಳಿಗೆ ಸ್ಥಾನ

ಪರೀಕ್ಷಾ ಪೂರ್ವಸಿದ್ಧತಾ ಸೇವೆಗಳಲ್ಲಿ ಮುಂಚೂಣಿಯಲ್ಲಿರುವ ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ (AESL), ಬೆಂಗಳೂರು ಶಾಖೆಯ ತರಗತಿ ಕಾರ್ಯಕ್ರಮದ ವಿದ್ಯಾರ್ಥಿ ಜೋಹಾನ್ ಜಾಬ್, ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (NEET UG) 2026 ರಲ್ಲಿ ಆಲ್ ಇಂಡಿಯಾ ರ‍್ಯಾಂಕ್ (AIR) 69 ಅನ್ನು ಪಡೆಯುವ ಮೂಲಕ ಬೆಂಗಳೂರು ನಗರಕ್ಕೆ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದ್ದಾರೆ ಎಂದು ಹೆಮ್ಮೆಯಿಂದ ಘೋಷಿಸುತ್ತಿದೆ.

ʼʼವೈದ್ಯಕೀಯ ಶಿಕ್ಷಣದಲ್ಲಿ ಹಿರಿಯ ನಾಗರಿಕರಿಗೆ ಮೀಸಲಾತಿ ಏಕಿಲ್ಲ?ʼʼ ಕೋರ್ಟ್‌ ಮೊರೆ ಹೋದ 71 ವರ್ಷದ ನೀಟ್‌ ಅಭ್ಯರ್ಥಿ

ಹಿರಿಯ ನಾಗರಿಕರಿಗೆ ಮೀಸಲಾತಿ ನೀಡಬೇಕು ಎಂದ 71 ವರ್ಷದ ಅಶೋಕ್‌

Allahabad High Court: ವೈದ್ಯಕೀಯ ಶಿಕ್ಷಣದಲ್ಲಿ ಹಿರಿಯ ನಾಗರಿಕರಿಗೆ ಮೀಸಲಾತಿ ನೀಡಬೇಕೆಂದು ಆಗ್ರಹಿಸಿ ಉತ್ತರ ಪ್ರದೇಶದ 71 ವರ್ಷದ ನೀಟ್‌ ಅಭ್ಯರ್ಥಿ ಅಶೋಕ್‌ ಬಾಹರ್‌ ಕೋರ್ಟ್‌ ಮೊರೆ ಹೋಗಿದ್ದಾರೆ. ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ ಅಶೋಕ್‌ ಎಂಬಿಬಿಎಸ್‌ ಪ್ರವೇಶದಲ್ಲಿ ಶೇಕಡಾ 1ರಷ್ಟು ಮೀಸಲಾತಿಯನ್ನು ಅರ್ಹ ಹಿರಿಯ ನಾಗರಿಕರಿಗೆ ನೀಡಬೇಕು ಎಂದು ಹೇಳಿದ್ದಾರೆ.

NEET UG Result 2026: ನೀಟ್‌ ಮರುಪರೀಕ್ಷೆ ಫಲಿತಾಂಶ ಪ್ರಕಟ; ವೈದ್ಯಕೀಯ ಕೋರ್ಸ್‌ ಪ್ರವೇಶಕ್ಕೆ ಅರ್ಹತೆ ಪಡೆದ 11.21 ಲಕ್ಷ ಅಭ್ಯರ್ಥಿಗಳು

ನೀಟ್‌ ಫಲಿತಾಂಶ ಪ್ರಕಟ; ಅರ್ಹತೆ ಪಡೆದ 11.21 ಲಕ್ಷ ಅಭ್ಯರ್ಥಿಗಳು

21 ಜೂನ್ ರಂದು ಭಾರತದ 551 ನಗರಗಳು ಮತ್ತು ವಿದೇಶದ 14 ನಗರಗಳಲ್ಲಿ ಒಟ್ಟು 5,440 ಕೇಂದ್ರಗಳಲ್ಲಿ ನೀಟ್ ಪರೀಕ್ಷೆಗೆ ಸುಮಾರು 20 ಲಕ್ಷ ಅಭ್ಯರ್ಥಿಗಳು ಹಾಜರಾಗಿದ್ದರು. ಇವರಲ್ಲಿ 11.21 ಲಕ್ಷ ಅಭ್ಯರ್ಥಿಗಳು ವೈದ್ಯಕೀಯ, ದಂತವೈದ್ಯಕೀಯ, ಆಯುಷ್ (AYUSH) ಮತ್ತು ಇತರೆ ಕೋರ್ಸ್‌ಗಳ ಪ್ರವೇಶಾತಿಗೆ ಅರ್ಹತೆ ಪಡೆದಿದ್ದಾರೆ.

ಕತಾರ್‌ ಶಾಲೆಗಳಲ್ಲಿ ಕನ್ನಡ ಭಾಷೆ ಅನುಷ್ಠಾನಕ್ಕೆ ಭಾರತೀಯ ರಾಯಭಾರ ಕಚೇರಿ ಬೆಂಬಲ: ಹರೀಶ್ ಪಾಂಡೆ

ಕತಾರ್‌ ಶಾಲೆಗಳಲ್ಲಿ ಕನ್ನಡಭಾಷೆ ಅನುಷ್ಠಾನಕ್ಕೆ ಬೆಂಬಲ: ಹರೀಶ್ ಪಾಂಡೆ

ಕತಾರ್‌ನ ಸ್ಥಳೀಯ ಶಾಲೆಗಳಲ್ಲಿ ಕನ್ನಡ ಭಾಷೆಯನ್ನು ಪಠ್ಯಕ್ರಮದ ಭಾಗವಾಗಿ ಅನುಷ್ಠಾನಗೊಳಿಸಲು ಭಾರತೀಯ ರಾಯಭಾರ ಕಚೇರಿಯಿಂದ ಅಗತ್ಯವಿರುವ ಎಲ್ಲಾ ರೀತಿಯ ಆಡಳಿತಾತ್ಮಕ ಮತ್ತು ಸಾಂಸ್ಥಿಕ ಬೆಂಬಲವನ್ನು ನೀಡುವುದಾಗಿ ಭಾರತೀಯ ರಾಯಭಾರ ಕಚೇರಿಯ ಪ್ರಥಮ ಕಾರ್ಯದರ್ಶಿ (ಶಿಕ್ಷಣ ಮತ್ತು ಸಾಂಸ್ಕೃತಿಕ) ಹರೀಶ್ ಪಾಂಡೆ ತಿಳಿಸಿದ್ದಾರೆ.

ಶಿಕ್ಷಕರ ಪ್ರಗತಿಗೆ ನಾಂದಿ ಹಾಡಿದ ಕ್ಯಾಟಲಿಸ್ಟ್ ಸರ್ಕಲ್: ಪರಮ್ ಫೌಂಡೇಶನ್-ಕಾರ್ನೆಗೀ ಜಂಟಿ ಯಶಸ್ವಿ

ಶಿಕ್ಷಕರ ಪ್ರಗತಿಗೆ ನಾಂದಿ ಹಾಡಿದ ಕ್ಯಾಟಲಿಸ್ಟ್ ಸರ್ಕಲ್

Param Foundation: ಪರಮ್ ಫೌಂಡೇಶನ್ ಹಾಗೂ ಅಮೆರಿಕದ ಪ್ರತಿಷ್ಠಿತ ಕಾರ್ನೆಗೀ ಸೈನ್ಸ್ ಸೆಂಟರ್ ಜಂಟಿಯಾಗಿ ವರ್ಷದ ಅವಧಿಯ 'ಕ್ಯಾಟಲಿಸ್ಟ್ ಸರ್ಕಲ್' ಶಿಕ್ಷಕರ ಪ್ರಗತಿ ತರಬೇತಿ ಅಭಿಯಾನವನ್ನು ಆಯೋಜಿಸಲಾಗಿತ್ತು. ತರಬೇತಿ ಅಭಿಯಾನದ ಸಮಾರೋಪದ ಅಂಗವಾಗಿ 'ಅಂತಿಮ ಪ್ರದರ್ಶನ ಮತ್ತು ಸಮಾರೋಪ' ಕಾರ್ಯಕ್ರಮ ಜರುಗಿತು.

ಆಕಾಶ್ ಎಜುಕೇಷನಲ್ ಸರ್ವೀಸಸ್ ಲಿಮಿಟೆಡ್ʼನಿಂದ ರಾಷ್ಟ್ರೀಯ ವೈದ್ಯರ ದಿನ ಆಚರಣೆ

ಎಇಎಸ್ಎಲ್ʼನಿಂದ ರಾಷ್ಟ್ರೀಯ ವೈದ್ಯರ ದಿನ ಆಚರಣೆ

ವಾರ್ಷಿಕ ನೀಟ್ ಪರೀಕ್ಷೆಗಳ ಮೂಲಕ ಸಾಧಿಸುವ ಸಾಧನೆಗಳು ಮಾಧ್ಯಮಗಳಲ್ಲಿ ಹೆಚ್ಚಾಗಿ ಕೇಂದ್ರ ಬಿಂದುವಾಗಿದ್ದರೂ, ಎಇಎಸ್ಎಲ್ ನ ನೈಜ ಕಥೆಯು ವಿವಿಧ ತಲೆಮಾರುಗಳ ವಿದ್ಯಾರ್ಥಿ ಗಳ ಮೇಲೆ ದೀರ್ಘಕಾಲೀನ ಪ್ರಭಾವ ಬೀರುವ ಮೂಲಕ ಶಾಶ್ವತವಾಗಿ ಸೃಷ್ಟಿಸಿರುವ ಪರಂಪರೆಯ ಬಗ್ಗೆ. ಕಳೆದ 10 ವರ್ಷಗಳಲ್ಲಿ, ಆಕಾಶಿಯರು 13 ನೀಟ್ ಎಂಬಿಬಿಎಸ್ 1 ಶ್ರೇಯಾಂಕಗಳನ್ನು ಪಡೆದು ಕೊಂಡಿದ್ದಾರೆ

ನೀಟ್ ಮರು ಪರೀಕ್ಷೆ: ನಿರ್ಬಂಧ ಮುಕ್ತಾಯದ ಬಳಿಕ ಮತ್ತೆ ಟೆಲಿಗ್ರಾಮ್ ಆ್ಯಪ್ ಆ್ಯಕ್ಟೀವ್‌

ನೀಟ್ ಮರು ಪರೀಕ್ಷೆ ನಿರ್ಬಂಧ ಬಳಿಕ ಟೆಲಿಗ್ರಾಮ್ ಮತ್ತೆ ಕಾರ್ಯಾರಂಭ

ನೀಟ್ ಮರು ಪರೀಕ್ಷೆ ಹಿನ್ನೆಲೆಯಲ್ಲಿ ದೇಶಾದ್ಯಂತ ಜೂನ್ 16ರಂದು ಕೇಂದ್ರ ಸರ್ಕಾರವು ಟೆಲಿಗ್ರಾಮ್ ಮತ್ತು ಅದರ ಸಂಬಂಧಿತ ಯುಆರ್ ಎಲ್ ಗಳನ್ನು ಜೂನ್ 22ರವರೆಗೆ ನಿರ್ಬಂಧಿಸಲು ನಿರ್ದೇಶಿಸಿತ್ತು. ಇದೀಗ ಈ ನಿರ್ಬಂಧದ ಅವಧಿ ಕೊನೆಯಾಗಿದ್ದರಿಂದ ಟೆಲಿಗ್ರಾಮ್ ಅಪ್ಲಿಕೇಶನ್ ಮತ್ತೆ ಕಾರ್ಯಾರಂಭ ಮಾಡತೊಡಗಿದೆ. ಆದರೂ ಕೆಲವೆಡೆ ಈ ನಿರ್ಬಂಧ ಮುಂದುವರಿದೆ ಎನ್ನುವ ಆರೋಪಗಳು ಕೇಳಿ ಬಂದಿವೆ.

"ಕಾಕ್ರೋಚ್ ಜನತಾ ಪಾರ್ಟಿ ದೇಶ ವಿಭಜನೆ ಶಕ್ತಿಗಳ 'ಬಿ ಟೀಮ್'ʼ: ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ವಾಗ್ದಾಳಿ

ಸಿಜೆಪಿ ವಿರುದ್ಧ ಸಚಿವ ಧರ್ಮೇಂದ್ರ ಪ್ರಧಾನ ತೀವ್ರ ವಾಗ್ದಾಳಿ

Dharmendra Pradhan: ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ಕಾಕ್ರೋಚ್ ಜನತಾ ಪಾರ್ಟಿ ಸಂಘಟನೆಯನ್ನು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ತೀವ್ರವಾಗಿ ಟೀಕಿಸಿದ್ದಾರೆ. ಸಿಜೆಪಿ ದೇಶವನ್ನು ಅಸ್ಥಿರಗೊಳಿಸಲು ಯತ್ನಿಸುವ ಶಕ್ತಿಗಳ ಬಿ ಟೀಮ್ ಎಂದು ಆರೋಪಿಸಿದ ಅವರು, ಪ್ರಜಾಪ್ರಭುತ್ವದಲ್ಲಿ ತಿರಸ್ಕೃತರಾದ ಕೆಲವರು ಬೇರೆ ರೂಪದಲ್ಲಿ ವ್ಯವಸ್ಥೆಯ ವಿರುದ್ಧ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ 22 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದ ನೀಟ್ ಮರುಪರೀಕ್ಷೆ ಯಶಸ್ವಿಯಾಗಿ ಮತ್ತು ಪಾರದರ್ಶಕವಾಗಿ ನಡೆದಿದೆ ಎಂದು ಅವರು ತಿಳಿಸಿದ್ದಾರೆ.

ನಾಳೆ ನೀಟ್‌ ಮರುಪರೀಕ್ಷೆ; ದೇಶಾದ್ಯಂತ ಬಿಗಿ ಭದ್ರತೆ: ಡ್ರೆಸ್‌ ಕೋಡ್‌ ಹೇಗಿರಬೇಕು? ಎಕ್ಸಾಂ ಸೆಂಟರ್‌ಗೆ ಏನು ತರಬಾರದು?

ನಾಳೆ ನೀಟ್‌ ಮರುಪರೀಕ್ಷೆ; ಡ್ರೆಸ್‌ ಕೋಡ್‌ ಹೇಗಿರಬೇಕು?

NEET-UG 2026 RE-test: ಸಾಕಷ್ಟು ಭದ್ರತೆಯ ನಡುವೆ, ಸರ್ಪಗಾವಲಿನಲ್ಲಿ ನೀಟ್-ಯುಜಿ ಮರುಪರೀಕ್ಷೆ ನಾಳೆ (ಜೂನ್‌ 21) ನಡೆಯಲಿದೆ. ಇದಕ್ಕಾಗಿ ದೇಶಾದ್ಯಂತ ವ್ಯಾಪಕ ಸಿದ್ಧತೆ ನಡೆಸಲಾಗಿದೆ. ಮತ್ತೊಮ್ಮೆ ಯಾವುದೇ ಯಡವಟ್ಟು ಆಗದಂತೆ ಎನ್‌ಟಿಎ ಎಚ್ಚರಿಕೆ ವಹಿಸಿದ್ದು, ಅಭ್ಯರ್ಥಿಗಳಿಗೆ ಮಾರ್ಗಸೂಚಿ ಪ್ರಕಟಿಸಿದೆ. ಅದೇನು ಎನ್ನುವ ವಿವರ ಇಲ್ಲಿದೆ.

ತಮಿಳುನಾಡಿನಲ್ಲಿ ಹೆಲಿಕಾಪ್ಟರ್ ಹಾರಾಟ ಕಂಡು ದಂಗಾದ ಜನ; ನೀಟ್‌ ಪ್ರಶ್ನೆ ಪತ್ರಿಕೆ ಸಾಗಾಟಕ್ಕೆ ರಾಷ್ಟ್ರವ್ಯಾಪಿ ವಾಯುಪಡೆಯ ನಿಯೋಜನೆ

ನೀಟ್‌ ಮರುಪರೀಕ್ಷೆಗಾಗಿ ರಾಷ್ಟ್ರವ್ಯಾಪಿ ವಾಯುಪಡೆಯ ನಿಯೋಜನೆ

NEET Examination Security: ನೀಟ್‌ ಮರುಪರೀಕ್ಷೆಗಾಗಿ ಕೇಂದ್ರ ವ್ಯಾಪಕ ಸಿದ್ಧತೆ ಮಾಡಿಕೊಂಡಿದೆ. ಪ್ರಶ್ನೆ ಪತ್ರಿಕೆ ಮುದ್ರಣ ಕೇಂದ್ರಗಳಿಂದ ಹೊರಬಂದ ಕ್ಷಣದಿಂದ ಪರೀಕ್ಷಾ ಕೇಂದ್ರವನ್ನು ತಲುಪುವವರೆಗೆ ಅಧಿಕಾರಿಗಳು ಅಸಾಧಾರಣ ಸುರಕ್ಷಾ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಾರೆ. ಮೊಹರು ಮಾಡಿದ ಪ್ರಶ್ನೆ ಪತ್ರಿಕೆಗಳನ್ನು ಮೊದಲು ದೆಹಲಿಯಿಂದ ಪ್ರಾದೇಶಿಕ ಕೇಂದ್ರಗಳಿಗೆ ವಿಮಾನದ ಮೂಲಕ ಸಾಗಿಸಲಾಗುತ್ತದೆ.

Ashoka University: ಅಶೋಕ ವಿವಿ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕ

ಅಶೋಕ ವಿವಿ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕ

Ashoka University: ಉನ್ನತ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯಾದ 'ಅಶೋಕ ವಿಶ್ವವಿದ್ಯಾಲಯ'ದ ನೂತನ ಉಪಕುಲಪತಿಯಾಗಿ ಪ್ರೊ. ರಿಷಿಕೇಶ ಟಿ. ಕೃಷ್ಣನ್ ನೇಮಕವಾಗಿದ್ದಾರೆ. ವಿಶ್ವವಿದ್ಯಾಲಯದ ಆಡಳಿತ ಮಂಡಳಿಯು ನಡೆಸಿದ ಕಟ್ಟುನಿಟ್ಟಿನ ಆಯ್ಕೆ ಪ್ರಕ್ರಿಯೆಯ ನಂತರ ಈ ನೇಮಕ ಮಾಡಲಾಗಿದೆ.

PES University: ಸಂಶೋಧನೆ, ಕೌಶಲ್ಯ ಅಭಿವೃದ್ಧಿ ಸಹಯೋಗಕ್ಕೆ ಇ-ಗವ್ ಗ್ಲೋಬಲ್ ಜತೆ ಪಿಇಎಸ್ ವಿಶ್ವವಿದ್ಯಾಲಯ ಒಪ್ಪಂದ

ಇ-ಗವ್ ಗ್ಲೋಬಲ್ ಜತೆ ಪಿಇಎಸ್ ವಿಶ್ವವಿದ್ಯಾಲಯ ಒಪ್ಪಂದ

PES University: ಪಿಇಎಸ್ ವಿಶ್ವವಿದ್ಯಾಲಯವು ವಿದ್ಯಾರ್ಥಿಗಳ ನಾವೀನ್ಯತೆ, ಡಿಜಿಟಲ್ ಸಾರ್ವಜನಿಕ ಮೂಲಸೌಕರ್ಯ (ಡಿಪಿಐ), ಸಂಶೋಧನೆ, ಇಂಟರ್ನ್‌ಶಿಪ್‌ಗಳು, ಕೌಶಲ್ಯ ಅಭಿವೃದ್ಧಿ ಮತ್ತು ಉದ್ಯಮದ ತೊಡಗಿಸಿಕೊಳ್ಳುವಿಕೆಯಲ್ಲಿ ಸಹಯೋಗಕ್ಕಾಗಿ ಫೈವ್ ಥ್ರೆಡ್ಸ್ ಫೌಂಡೇಶನ್, ಇ-ಗವ್ ಗ್ಲೋಬಲ್ ಜತೆ ತಿಳಿವಳಿಕೆ ಒಪ್ಪಂದಕ್ಕೆ (ಎಂಒಯು) ಸಹಿ ಹಾಕಿದೆ.

ಕೆಲಸದ ಜೊತೆಯಲ್ಲೇ ಬಿಟ್ಸ್‌ ಪಿಲಾನಿಯಿಂದ ಎಂಬಿಎ! AM/NS Indiaದ ಚೊಚ್ಚಲ ಬ್ಯಾಚ್‌ಗೆ ಪದವಿ ಪ್ರದಾನ

AM/NS Indiaದ ಚೊಚ್ಚಲ ಬ್ಯಾಚ್‌ಗೆ ಪದವಿ ಪ್ರದಾನ

ಉದ್ಯೋಗಿಗಳು ತಮ್ಮ ಕೆಲಸವನ್ನು ಬಿಡದೆಯೇ ಹೊಸ ಕೌಶಲ್ಯಗಳನ್ನು ಕಲಿಯಲು 'ವರ್ಕ್ ಇಂಟಿಗ್ರೇಟೆಡ್ ಲರ್ನಿಂಗ್ ಪ್ರೋಗ್ರಾಮ್' ಸಹಾಯ ಮಾಡುತ್ತದೆ. ಈಗಾಗಲೇ ಬಿಟ್ಸ್ ಪಿಲಾನಿ ಜೊತೆ ಸೇರಿ 'ಬಿ.ಟೆಕ್ ಪ್ರೊಸೆಸ್ ಎಂಜಿನಿಯರಿಂಗ್' ಕೋರ್ಸ್ ಅನ್ನು ಯಶಸ್ವಿಯಾಗಿ ನಡೆಸಿದ್ದ ಕಂಪನಿ, ಭವಿಷ್ಯದ ಲೀಡರ್‌ಗಳನ್ನು ಸೃಷ್ಟಿಸುವ ಉದ್ದೇಶದಿಂದ 'ಮ್ಯಾನು ಫ್ಯಾಕ್ಚರಿಂಗ್ ಮ್ಯಾನೇಜ್‌ಮೆಂಟ್ ಎಂಬಿಎ' ಕೋರ್ಸ್ ಅನ್ನು ಆರಂಭಿಸಿತ್ತು.

KCET Results 2026: ಸಿಇಟಿ ಫಲಿತಾಂಶ; ಎಂಜಿನಿಯರಿಂಗ್‌ ವಿಭಾಗದಲ್ಲಿ ತನಿಷಾ ಕಾರ್ತಿಕ್ ಪ್ರಥಮ ಸ್ಥಾನ; ಟಾಪರ್ಸ್‌ ಪಟ್ಟಿ ಇಲ್ಲಿದೆ

ಸಿಇಟಿ 2026 ಫಲಿತಾಂಶ; ಟಾಪರ್ಸ್‌ ಪಟ್ಟಿ ಇಲ್ಲಿದೆ ನೋಡಿ

ಉನ್ನತ ಶಿಕ್ಷಣ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರು ಸಿಇಟಿ ಫಲಿತಾಂಶ ಪ್ರಕಟಿಸಿದ್ದಾರೆ. ಎಂಜಿನಿಯರಿಂಗ್, ಫಾರ್ಮಸಿ, ಕೃಷಿ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಸಿಇಟಿ ರ‍್ಯಾಂಕ್ ಪ್ರಮುಖವಾಗಿದೆ. ಇನ್ನು ಈ ಬಾರಿ ಯಾವ ವಿಭಾಗದಲ್ಲಿ ಯಾರು ಟಾಪರ್ಸ್‌ ಆಗಿದ್ದಾರೆ ಎಂಬ ಮಾಹಿತಿ ಇಲ್ಲಿದೆ.

ಉತ್ತರ ಪತ್ರಿಕೆಯೇ ನಾಪತ್ತೆ, ಮರುಮೌಲ್ಯಮಾಪನಕ್ಕೆ ಅಡ್ಡಿ: ದ್ವಿತೀಯ ಪಿಯುಸಿ ಸಿಬಿಎಸ್ಇ ವಿದ್ಯಾರ್ಥಿ ಅಳಲು

ಉತ್ತರ ಪತ್ರಿಕೆ ನಾಪತ್ತೆ: ವಿದ್ಯಾರ್ಥಿ ದೂರು

ಮರುಮೌಲ್ಯ ಮಾಪನಕ್ಕೆಂದು ಉತ್ತರ ಪತ್ರಿಕೆಯನ್ನು ಕೇಳಲಾಗಿದ್ದು, ಅದರಲ್ಲಿ ಒಂದು ಉತ್ತರ ಪತ್ರಿಕೆ ನಾಪತ್ತೆಯಾಗಿದೆ ಎಂದು ದ್ವಿತೀಯ ಪಿಯುಸಿ ವಿದ್ಯಾರ್ಥಿಯೊಬ್ಬ ಸಾಮಾಜಿಕ ಮಾಧ್ಯಮದ ಮೂಲಕ ಅಳಲು ತೋಡಿಕೊಂಡಿದ್ದಾನೆ. ಈ ಘಟನೆ ದೆಹಲಿಯಲ್ಲಿ ನಡೆದಿದ್ದು, ಸಿಬಿಎಸ್ಇ ವಿದ್ಯಾರ್ಥಿ ತನಿಷ್ಕ್ ವ್ಯಾಟ್ಸ್ ಅವರ ಜೀವಶಾಸ್ತ್ರ ಉತ್ತರ ಪತ್ರಿಕೆ ಕಾಣೆಯಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

KCET Results 2026: ನಾಳೆ ಮಧ್ಯಾಹ್ನ 2 ಗಂಟೆಗೆ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡುವುದು ಹೇಗೆ?

ನಾಳೆ ಮಧ್ಯಾಹ್ನ ಸಿಇಟಿ ಫಲಿತಾಂಶ ಪ್ರಕಟ; ರಿಸಲ್ಟ್‌ ನೋಡುವುದು ಹೇಗೆ?

ಏ.23 ಮತ್ತು ಏ.24ರಂದು ರಾಜ್ಯದ 745 ಪರೀಕ್ಷಾ ಕೇಂದ್ರಗಳಲ್ಲಿ ನಡೆದ ಸಿಇಟಿ ಪರೀಕ್ಷೆಗೆ 3.1 ಲಕ್ಷ ವಿದ್ಯಾರ್ಥಿಗಳು ಹಾಜರಾಗಿದ್ದರು. ರಾಜ್ಯದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ಬಹಳ ಮಹತ್ವದ್ದಾಗಿದ್ದು, ಇದರಲ್ಲಿ ಪಡೆದ ರ‍್ಯಾಂಕ್‌ ಆಧರಿಸಿ ಕಾಲೇಜುಗಳಲ್ಲಿ ಪ್ರವೇಶ ಪಡೆಯಬಹುದಾಗಿದೆ.

ಪಿಇಎಸ್ ವಿವಿಯ ವಿದ್ಯಾರ್ಥಿನಿ ಕಾವೇರಿ ಶರ್ಮಾಗೆ AMD ಸ್ಲಿಂಗ್ಶಾಟ್ ಐಡಿಯಾ ಚಾಲೆಂಜ್ 2026ರಲ್ಲಿ ರಾಷ್ಟ್ರೀಯ ಮನ್ನಣೆ

AMD ಸ್ಲಿಂಗ್ಶಾಟ್ ಐಡಿಯಾ ಚಾಲೆಂಜ್‌ರಲ್ಲಿ ಕಾವೇರಿ ಶರ್ಮಾಗೆ 2ನೇ ಸ್ಥಾನ

PES University: ಪಿಇಎಸ್ ವಿಶ್ವವಿದ್ಯಾಲಯದ 6ನೇ ಸೆಮಿಸ್ಟರ್ ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿನಿ ಕಾವೇರಿ ಶರ್ಮಾ, AMD ಸ್ಟಿಂಗ್ಯಾಟ್ ಐಡಿಯಾ ಚಾಲೆಂಜ್ 2026ರ ಗ್ರಾಂಡ್ ಫಿನಾಲೆಯಲ್ಲಿ ತನ್ನ ಅತ್ಯುತ್ತಮ ಕೊಡುಗೆಗಾಗಿ ಎರಡನೇ ಸ್ಥಾನ ಪಡೆದಿದ್ದಾರೆ.

ಬೆಂಗಳೂರಿನಲ್ಲಿ ಶಾಲಾ ಸುರಕ್ಷತೆ ಮತ್ತು ಮೂಲಸೌಕರ್ಯ ಉನ್ನತೀಕರಣ

ಬೆಂಗಳೂರಿನಲ್ಲಿ ಶಾಲಾ ಸುರಕ್ಷತೆ ಮತ್ತು ಮೂಲಸೌಕರ್ಯ ಉನ್ನತೀಕರಣ

ಶಾಲಾ ಆವರಣದ ಸುರಕ್ಷತೆಯನ್ನು ಬಲಪಡಿಸಲು, ತಂಡವು ವೀಡಿಯೊ ಸರ್ವೆಲೆನ್ಸ್ ವ್ಯವಸ್ಥೆಯನ್ನು ಪೂರೈಸಿ ಅಳವಡಿಸಿತು ಹಾಗೂ ಶಾಲೆಯ ಮುಖ್ಯ ಪ್ರವೇಶ ದ್ವಾರವನ್ನು ಉನ್ನತೀಕರಿಸಿತು. ಸಂಭಾವ್ಯ ಅಪಾಯಗಳನ್ನು ಕಡಿಮೆ ಮಾಡಲು ಶಾಲೆಯ ವಿದ್ಯುತ್ ವ್ಯವಸ್ಥೆಯನ್ನು ನವೀಕರಿಸುವ ಮೂಲಕ ಸ್ವಯಂಸೇವಕರು ಪ್ರಮುಖ ಸೌಲಭ್ಯ ಸುಧಾರಣೆಗಳನ್ನೂ ಕೈಗೊಂಡರು.

Loading...