Rakhi from Brahmakumaris: ಜಿಲ್ಲಾಧಿಕಾರಿ, ತಹಸೀಲ್ದಾರ್ಗೆ ಬ್ರಹ್ಮಕುಮಾರಿಯರಿಂದ ರಾಖಿ
ರಕ್ಷಾಬಂಧನವು ಸಹೋದರ–ಸಹೋದರಿಯರ ಪವಿತ್ರ ಬಾಂಧವ್ಯವನ್ನು ಸಾರುವ ಹಬ್ಬವಾಗಿದ್ದು, ‘ಒಬ್ಬ ದೇವರು–ಒಂದು ವಿಶ್ವ ಕುಟುಂಬ’ ಹಾಗೂ ‘ವಸುಧೈವ ಕುಟುಂಬಕಂ’ ಎಂಬ ವಿಶಾಲ ಮಾನವೀ ಯ ದೃಷ್ಟಿಕೋನದೊಂದಿಗೆ ಎಲ್ಲರಿಗೂ ರಾಖಿ ಕಟ್ಟಲಾಗುತ್ತಿದೆ ಎಂದು ಬ್ರಹ್ಮಕುಮಾರಿ ಶಾಂತಕ್ಕ ಅವರು ತಿಳಿಸಿದರು.
-
Ashok Nayak
Aug 26, 2026 10:26 PM
ಚಿಕ್ಕಬಳ್ಳಾಪುರ: ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿಯರು ರಕ್ಷಾಬಂಧನದ ಅಂಗವಾಗಿ ಜಿಲ್ಲಾಧಿಕಾರಿ ಜಿ.ಪ್ರಭು ಹಾಗೂ ತಹಸೀಲ್ದಾರ್ ಅವರಿಗೆ ರಾಖಿ ಕಟ್ಟಿ, ಸಿಹಿ ಹಂಚಿ ಶುಭಾಶಯ ಕೋರಿದರು.
ರಕ್ಷಾಬಂಧನವು ಸಹೋದರ–ಸಹೋದರಿಯರ ಪವಿತ್ರ ಬಾಂಧವ್ಯವನ್ನು ಸಾರುವ ಹಬ್ಬವಾಗಿದ್ದು, ‘ಒಬ್ಬ ದೇವರು–ಒಂದು ವಿಶ್ವ ಕುಟುಂಬ’ ಹಾಗೂ ‘ವಸುಧೈವ ಕುಟುಂಬಕಂ’ ಎಂಬ ವಿಶಾಲ ಮಾನವೀಯ ದೃಷ್ಟಿಕೋನದೊಂದಿಗೆ ಎಲ್ಲರಿಗೂ ರಾಖಿ ಕಟ್ಟಲಾಗುತ್ತಿದೆ ಎಂದು ಬ್ರಹ್ಮಕುಮಾರಿ ಶಾಂತಕ್ಕ ಅವರು ತಿಳಿಸಿದರು.
ಇದನ್ನೂ ಓದಿ: Chikkaballapur News: ಪಾರ್ಥೇನಿಯಂ ಮುಕ್ತ ಗ್ರಾಮ ನಿರ್ಮಾಣಕ್ಕೆ ಕೈಜೋಡಿಸಿ: ಡಾ. ಕೆ.ಎನ್.ಗೀತಾ
ಜಿಲ್ಲಾಧಿಕಾರಿ ಜಿ.ಪ್ರಭು ಹಾಗೂ ತಹಸೀಲ್ದಾರ್ ಅವರಿಗೆ ರಾಖಿ ಕಟ್ಟಿದ ಬ್ರಹ್ಮಕುಮಾರಿ ಶಾಂತಕ್ಕ, ತಿಲಕವಿಟ್ಟು ಸಿಹಿ ಹಂಚಿದರು. ಈ ಸಂದರ್ಭದಲ್ಲಿ ಇಂದ್ರಕ್ಕ ಹಾಗೂ ಶಿವಮ್ಮ ಸೇರಿದಂತೆ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಸಹೋದರಿಯರು ಉಪಸ್ಥಿತರಿದ್ದರು.