ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

ಧರ್ಮಸ್ಥಳದಲ್ಲಿ 812 ಮಂದಿಯಿಂದ ಏಕಕಾಲದಲ್ಲಿ ಆಯುರ್ವೇದ ಆರೋಗ್ಯ ಕ್ರಮಗಳ ಅನುಷ್ಠಾನ

ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಆಯುರ್ವೇದದ ಸಾಂಪ್ರದಾಯಿಕ ದಿನಚರ್ಯ ಕ್ರಮಗಳ ಕುರಿತು ತಜ್ಞರು ಮಾಹಿತಿ ನೀಡಿದರು. ಪ್ರತಿ ಭಾಗವಹಿಸುವವರಿಗೂ ಸಂಖ್ಯೆಯುಳ್ಳ ಕುರ್ಚಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ಪ್ರತ್ಯೇಕ ಕಿಟ್‌ಗಳನ್ನು ಒದಗಿಸಲಾಗಿತ್ತು. ರಶ್ಮಿ ಇನ್‌ಸ್ಟಿಟ್ಯೂಟ್‌ ನ 100 ವಿದ್ಯಾರ್ಥಿ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು

ಧರ್ಮಸ್ಥಳದಲ್ಲಿ ಏಕಕಾಲದಲ್ಲಿ ಆಯುರ್ವೇದ ಆರೋಗ್ಯ ಕ್ರಮಗಳ ಅನುಷ್ಠಾನ

-

Profile
Ashok Nayak Sep 1, 2026 8:41 PM

ಧರ್ಮಸ್ಥಳ: ಆಯುರ್ವೇದದ ದಿನಚರ್ಯ ಕ್ರಮಗಳ ಮೂಲಕ ಇಂದ್ರಿಯಗಳ ಆರೋಗ್ಯ ಸಂರಕ್ಷಣೆಯ ಕುರಿತು ಜನಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಆಯೋಜಿಸಲಾದ ವಿಶೇಷ ಕಾರ್ಯಕ್ರಮದಲ್ಲಿ 812 ಮಂದಿ ಏಕಕಾಲದಲ್ಲಿ ಆಯುರ್ವೇದ ಆಧಾರಿತ ಇಂದ್ರಿಯ ಆರೋಗ್ಯ ಕ್ರಮಗಳನ್ನು ಅನುಸರಿಸುವ ಮೂಲಕ ಗಮನಾರ್ಹ ದಾಖಲೆ ನಿರ್ಮಿಸಿದರು.

“ಪುನರ್ವಸು 2.0 – ಅಂತರರಾಷ್ಟ್ರೀಯ ಇಂದ್ರಿಯ ಆರೋಗ್ಯ ಸಮ್ಮೇಳನ”ದ ಅಂಗವಾಗಿ ನಡೆದ ಈ ಕಾರ್ಯಕ್ರಮವನ್ನು ಆಪ್ತಾಸ್ ಆಯುರ್ವೇದ ಟ್ರಸ್ಟ್ (ರಿ.), ಕರ್ನಾಟಕ ವತಿಯಿಂದ, ರಶ್ಮಿ ಇನ್‌ ಸ್ಟಿಟ್ಯೂಟ್ ಆಫ್ ಆಯುರ್ವೇದ ಮೆಡಿಕಲ್ ಸೈನ್ಸಸ್, ಕೂಡ್ಲಿಗಿಯ ಅಧ್ಯಕ್ಷರಾದ ಡಾ. ರವಿಕುಮಾರ್ ಕೆ. ಎಂ. ಅವರ ಬೆಂಬಲದೊಂದಿಗೆ ಆಯೋಜಿಸಲಾಗಿತ್ತು.

“Maximum Participation in Simultaneous Ayurveda Dinacharya-Based Indriya Arogya Practices” ಎಂಬ ವಿಭಾಗದಲ್ಲಿ ನಡೆದ ಈ ದಾಖಲೆ ಪ್ರಯತ್ನಕ್ಕೆ India Book of Records (IBR ) ಮತ್ತು Asia Book of Records (ABR) ವತಿಯಿಂದ ತಾತ್ಕಾಲಿಕ ಮಾನ್ಯತೆ ದೊರೆತಿದೆ.

ಇದನ್ನೂ ಓದಿ: Dharmasthala: ಸರಕಾರಗಳಿಗೇ ಮಾದರಿಯಾದ ಧರ್ಮಸ್ಥಳದ ವಿಕಾಸ ಪಥ

ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಆಯುರ್ವೇದದ ಸಾಂಪ್ರದಾಯಿಕ ದಿನಚರ್ಯ ಕ್ರಮಗಳ ಕುರಿತು ತಜ್ಞರು ಮಾಹಿತಿ ನೀಡಿದರು. ಪ್ರತಿ ಭಾಗವಹಿಸುವವರಿಗೂ ಸಂಖ್ಯೆಯುಳ್ಳ ಕುರ್ಚಿ ಹಾಗೂ ಅಗತ್ಯ ಸಾಮಗ್ರಿಗಳನ್ನು ಒಳಗೊಂಡ ಪ್ರತ್ಯೇಕ ಕಿಟ್‌ಗಳನ್ನು ಒದಗಿಸಲಾಗಿತ್ತು. ರಶ್ಮಿ ಇನ್‌ಸ್ಟಿಟ್ಯೂಟ್‌ ನ 100 ವಿದ್ಯಾರ್ಥಿ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು. ಡಾ. ಅಶ್ವಿನ್ ಶಾಸ್ತ್ರಿ ಅವರು ಸ್ವಯಂಸೇವಕರಿಗೆ ತರಬೇತಿ ನೀಡಿದ್ದು, ವಿವಿಧ ಕ್ರಮಗಳನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.

ಪ್ರಾರ್ಥನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಚಂದನಾದಿ ಅಂಜನ, ನೇತ್ರ ಪ್ರಕ್ಷಾಳನ, ನೇತ್ರಾಂಜನ, ಅಣು ತೈಲ ನಸ್ಯ, ಕರ್ಣಾಭ್ಯಂಗ, ಮೂರ್ಚಿತ ತಿಲ ತೈಲದಿಂದ ಮುಖಾಭ್ಯಂಗ ಹಾಗೂ ತ್ರಿಫಲಾ ಕಷಾಯದಿಂದ ಗಂಡೂಷ ಸೇರಿದಂತೆ ವಿವಿಧ ಆಯುರ್ವೇದ ಆರೋಗ್ಯ ಕ್ರಮಗಳನ್ನು 812 ಮಂದಿ ಏಕಕಾಲದಲ್ಲಿ ನೆರವೇರಿಸಿದರು.

dharma_2

ಕಾರ್ಯಕ್ರಮದಲ್ಲಿ ಆಯುಷ್ ಸಚಿವಾಲಯದ ಸಲಹೆಗಾರ ಡಾ. ಕೌಸ್ತುಭ್ ಉಪಾಧ್ಯಾಯ, ಎಸ್‌ಡಿಎಂ ಸಂಸ್ಥೆಗಳ ನಿರ್ದೇಶಕ ಡಾ. ಪ್ರಸನ್ನ ನರಸಿಂಹ ರಾವ್, AIIA ನಿರ್ದೇಶಕ ಡಾ. ಪಿ. ಕೆ. ಪ್ರಜಾಪತಿ, ಡಾ. ಸತ್ಯನಾರಾಯಣ ಭಟ್, NCISM ಬೋರ್ಡ್ ಆಫ್ ಆಯುರ್ವೇದದ ಅಧ್ಯಕ್ಷ ಡಾ. ಅಲ್ಲಮಪ್ರಭು ಗುಡ್ಡ ಹಾಗೂ ಡಾ. ರಘುರಾಮ್ ಭಟ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

India Book of Records ಮತ್ತು Asia Book of Records ತೀರ್ಪುಗಾರ ಶ್ರೀ ಹರೀಶ್ ಎಚ್. ಆರ್. ಅವರು ದಾಖಲೆ ಪ್ರಯತ್ನವನ್ನು ವೀಕ್ಷಿಸಿ, 812 ಮಂದಿ ನಿಗದಿತ ಕ್ರಮಗಳನ್ನು ಏಕಕಾಲದಲ್ಲಿ ನೆರವೇರಿಸಿರುವುದನ್ನು ಘೋಷಿಸಿದರು. ಸಾಧನೆಯ ಅಂಗವಾಗಿ ಪ್ರಮಾಣಪತ್ರಗಳನ್ನು ಪ್ರದಾನ ಮಾಡಲಾಯಿತು. ಡಾ. ಶರದ್ ಕುಮಾರ್ ಎಂ. ಅವರು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಯನ್ನು ಹಾಗೂ ಡಾ. ರವಿಕುಮಾರ್ ಕೆ. ಎಂ. ಅವರು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಸಾಧನೆ ಯನ್ನು ಪ್ರತಿನಿಧಿಸಿದರು.

ಡಾ.ಅನುಪಮಾ ವಿ. ಚಿನ್ನಿಕಟ್ಟಿ ಅವರು ಕಾರ್ಯಕ್ರಮದ Master of Ceremony ಆಗಿ ನಿರೂಪಣೆ ಮತ್ತು ನಿರ್ವಹಣೆಯನ್ನು ಯಶಸ್ವಿಯಾಗಿ ಕೈಗೊಂಡರು. ಶಾಂತಿ ಮಂತ್ರದೊಂದಿಗೆ ಕಾರ್ಯಕ್ರಮ ಸಮಾಪ್ತಿಗೊಂಡಿತು.