ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkanayakanahalli(Tumkur) News: ಹಳ್ಳಿಗಳು ಆಹಾರ ಉತ್ಪತ್ತಿಯ ನೆಲೆ ಬೀಡು, ಇದರ ಸಂರಕ್ಷಣೆ ಎಲ್ಲರ ಹೊಣೆ

ಶೆಟ್ಟಿಕೆರೆ ರೈತ ಸಂಪರ್ಕ ಕೇಂದ್ರ ಅಧಿಕಾರಿ ಮಲ್ಲಿಕಾರ್ಜುನ್‌ರವರು ಇಲಾಖೆಯಿಂದ ದೊರೆಯುವ ಬಿತ್ತನೆ ಬೀಜ, ಔಷಧಿ, ರಸ ಗೊಬ್ಬರಗಳ ಮಾಹಿತಿ ನೀಡಿ ರಿಯಾಯತಿ ದರದಲ್ಲಿ ದೊರೆಯಲಿದೆ ಎಂದರು. ಆರ್ಥಿಕ ಸಾಕ್ಷರಥಾ ಕೇಂದ್ರದ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡಿ, ಬ್ಯಾಂಕ್‌ ಗಳಿಂದ ರೈತರಿಗೆ ದೊರೆಯುವ ಕೇಂದ್ರ ಸರ್ಕಾರದ ವಿಮಾ ಯೋಜನೆಗಳ ಮಾಹಿತಿ ನೀಡಿ, ಈ ಸಮಲತ್ತು ಗಳನ್ನು ಅರ್ಹರು ಪಡೆಯಿರಿ

ಹಳ್ಳಿಗಳು ಆಹಾರ ಉತ್ಪತ್ತಿಯ ನೆಲೆ ಬೀಡು, ಇದರ ಸಂರಕ್ಷಣೆ ಎಲ್ಲರ ಹೊಣೆ

ಚಿಕ್ಕನಾಯಕನಹಳ್ಳಿ ತಾಲ್ಲೂಕು ಸಾಸಲು ಗ್ರಾಮದ ತೋಟವೊಂದರಲ್ಲಿ ರಸ ಸೋರುವ ರೋಗಕ್ಕೊಳಗಾದ ತೆಂಗಿನ ಮರಕ್ಕೆ ಗಾಂಧಿ ಸಹಜ ಬೇಸಾಯ ತಂಡದಿಂದ ರೈತರಿಗೆ ಪ್ರಾತ್ಯಕ್ಷಿತೆಯ ಮೂಲಕ ಚಿಕಿತ್ಸೆ ನೀಡಲಾಯಿತು.

Profile Ashok Nayak May 31, 2025 4:22 PM

ಚಿಕ್ಕನಾಯಕನಹಳ್ಳಿ: ಹಳ್ಳಿಗಳು ಸಂಪದ್ಭರಿತವಾದಾಗ ದೇಶದ ಅಭಿವೃದ್ದಿ ಗೋಚರಿಸಲಿದೆ ಎಂದು ಕೊನೆಹಳ್ಳಿ ವಿಜ್ಞಾನ ಕೇಂದ್ರದ ವಿಜ್ಞಾನಿ ದರ್ಶನ್ ತಿಳಿಸಿದರು. ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ದಿವ್ಯಜ್ಯೋತಿ ಸಂಜೀವಿನಿ ಒಕ್ಕೂಟ ಹಾಗೂ ಆರ್ಥಿಕ ಸಾಕ್ಷರಥಾ ಕೇಂದ್ರದ ಸಹಯೋಗ ದಲ್ಲಿ ನಡೆದ ಕೃಷಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ಹಳ್ಳಿಗಳು ಆಹಾರ ಉತ್ಪತ್ತಿಯ ನೆಲೆ ಬೀಡಾಗಿದೆ, ಇದರ ಸಂರಕ್ಷಣೆ ಎಲ್ಲರ ಹೊಣೆಯಾಗಬೇಕು. ಈ ಭಾಗದಲ್ಲಿ ಹೆಚ್ಚು ತೆಂಗು ಹಾಗೂ ಅಡಿಕೆ ಬೆಳೆಯಿದ್ದು, ರೋಗಬಾಧೆ ಹಾಗೂ ಕೀಟಬಾಧೆಯಿಂದ ಬಳಲಿರುವ ತೋಟಗಳ ಆರೈಕೆ ಯಲ್ಲಿ ಕೃಷಿ ವಿಜ್ಞಾನ ರೈತರ ಜೊತೆಗೂಡಲಿದೆ. ಇಂತಹ ಯಾವುದೇ ಸಮಸ್ಯೆಗಳು ಕಂಡು ಬಂದರೆ ಕೃಷಿ ಸಖಿ ಹಾಗೂ ನಮ್ಮ ಗಮನಕ್ಕೆ ತಂದರೆ ಸೂಕ್ತ ಮಾರ್ಗದರ್ಶನ ನೀಡಲಾಗುವುದೆಂದರು.

ಇದನ್ನೂ ಓದಿ: Chikkanayakanahalli (Tumkur) News: ದೇವಾಲಯದ ಸನ್ನಿಧಿಯಲ್ಲೇ ವಾಮಾಚಾರ, ಭ್ರಷ್ಟಾಚಾರದ ಜಾಲ !

ಹೆಸರಘಟ್ಟದ ತೋಟಗಾರಿಕಾ ವಿಜ್ಞಾನಿ ಲಕ್ಷ್ಮೀಶ್‌ ರೆಡ್ಡಿ ಮಾತನಾಡಿ, ಹೊಸ ಹೊಸ ಸಂಶೋಧನೆ ಗಳು ತೆಂಗು ಹಾಗೂ ಅಡಿಕೆಯ ಮೇಲೆ ನಡೆಯುತ್ತಿದೆ. ಇದರ ಫಲಿತಾಂಶದ ಪ್ರಯೋಜನಗಳನ್ನು ಮುಂದಿನ ದಿನಗಳಲ್ಲಿ ರೈತರಿಗೆ ತಲುಪಿಸಲಾಗುವುದೆಂದರು. ಶೆಟ್ಟಿಕೆರೆ ರೈತ ಸಂಪರ್ಕ ಕೇಂದ್ರ ಅಧಿಕಾರಿ ಮಲ್ಲಿಕಾರ್ಜುನ್‌ರವರು ಇಲಾಖೆಯಿಂದ ದೊರೆಯುವ ಬಿತ್ತನೆ ಬೀಜ, ಔಷಧಿ, ರಸ ಗೊಬ್ಬರಗಳ ಮಾಹಿತಿ ನೀಡಿ ರಿಯಾಯತಿ ದರದಲ್ಲಿ ದೊರೆಯಲಿದೆ ಎಂದರು. ಆರ್ಥಿಕ ಸಾಕ್ಷರಥಾ ಕೇಂದ್ರದ ಸಲಹೆಗಾರರಾದ ಆರ್.ಎಂ.ಕುಮಾರಸ್ವಾಮಿ ಮಾತನಾಡಿ, ಬ್ಯಾಂಕ್‌ಗಳಿಂದ ರೈತರಿಗೆ ದೊರೆಯುವ ಕೇಂದ್ರ ಸರ್ಕಾರದ ವಿಮಾಯೋಜನೆಗಳ ಮಾಹಿತಿ ನೀಡಿ, ಈ ಸಮಲತ್ತು ಗಳನ್ನು ಅರ್ಹರು ಪಡೆಯಿರಿ ಎಂದರು.

30cnh2ep ok

ತುಮಕೂರಿನ ದೊಡ್ಡಹೊಸೂರಿನ ಗಾಂಧಿ ಸಹಜ ಬೇಸಾಯ ಕೇಂದ್ರದ ತಂಡದಿಂದ ಸಾಸಲು ಗ್ರಾಮದ ಪ್ರಭುಸ್ವಾಮಿ ತೋಟದಲ್ಲಿ ತೆಂಗಿನ ಮರಕ್ಕೆ ತಗುಲಿದ್ದ ರಸಸೋರುವ ಮತ್ತು ಅಣಬೆ ರೋಗವನ್ನು ತಡೆಗಟ್ಟಲು ಪ್ರಾತ್ಯಕ್ಷಿತೆಯ ಮೂಲಕ ಚಿಕಿತ್ಸೆ ನೀಡಿ ರೈತರಿಗೆ ಮನವರಿಕೆ ಮಾಡಿದರು. ಸಾವಯವ ಹಾಗೂ ಸಹಜ ಕೃಷಿಯ ಬಗ್ಗೆ ಮಾಹಿತಿ ನೀಡಲಾಯಿತು.

ಈ ಕಾರ್ಯಾಗಾರದಲ್ಲಿ ಎನ್‌ಆರ್‌ಎಲ್‌ಎಂ ಪ್ರಾಯೋಜಕ ಭರತ್, ದಿವ್ಯಜ್ಯೋತಿ ಸಂಜೀವಿನಿ ಒಕ್ಕೂಟದ ಶೋಭ, ಕೃಷಿ ಸಖಿ ಶೀಲಾ, ಸಾವಯವ ಕೃಷಿಕ ಚನ್ನಬಸವಯ್ಯ, ಭಟ್ಟರಹಳ್ಳಿ ಮಲ್ಲಿಕಾ ರ್ಜುನ್, ಶಿಕ್ಷಕರಾದ ಕುಮಾರಸ್ವಾಮಿ, ರಾಜಶೇಖರ್, ಲೋಕೇಶ್, ಪ್ರವೀಣ್, ಕವಿತಾ ಮುಂತಾದವ ರಿದ್ದರು.

ತಾಲ್ಲೂಕಿನ ಸಾಸಲು ಗ್ರಾಮದಲ್ಲಿ ದಿವ್ಯಜ್ಯೋತಿ ಸಂಜೀವಿನಿ ಒಕ್ಕೂಟ ಹಾಗೂ ಆರ್ಥಿಕ ಸಾಕ್ಷರಥಾ ಕೇಂದ್ರದ ಸಹಯೋಗದಲ್ಲಿ ನಡೆದ ಕೃಷಿ ಕಾರ್ಯಾಗಾರವನ್ನು ಗಣ್ಯರು ಉದ್ಘಾಟಿಸಿದರು.