Indi (Vijayapura) News: ರಕ್ತ ಪೂರೈಸುವ ಕಾರ್ಯ ಅವಳಿ ಸಹೋದರರ ನೇತೃತ್ವದಲ್ಲಿ ನಡೆಯುತ್ತಿರುವುದು ಸಂತಸ ತಂದಿದೆ
ಅವಳಿ ಸಹೋದರರು ಚಿಕ್ಕವರಿಂದಲೇ ಸಾರ್ವಜನಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಬಸವ ಜಯಂತಿಯಂದು ಸಾಮೂಹಿಕ ಮದುವೆ ಮಾಡಿ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ಹೊರೆ ತಪ್ಪಿಸಿದ್ದಾರೆ. ಇಂತಹ ಸಹೋದರರು ಮಾದರಿಯಾಗಿ ಪ್ರತೀವರ್ಷ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ.

ಇಂಡಿ: ಗೆಳೆಯರ ಬಳಗದಿಂದ ಹಮ್ಮಿಕೊಂಡಿದ್ದ ಬೃಹತ್ ರಕ್ತದಾನ ಶಿಬಿರದಲ್ಲಿ ರಕ್ತದಾನ ಮಾಡಿದರು.

ಇಂಡಿ: ರಕ್ತದಾನ ಇನ್ನೊಬ್ಬರ ಪ್ರಾಣ ಉಳಿಸಲು ಅತ್ಯಂತ ಸಹಕಾರಿಯಾಗಿರುತ್ತದೆ. ಅಂತಹ ರಕ್ತ ದಾನವನ್ನು ಸತತ 14 ವರ್ಷಗಳಿಂದಲೂ ಶಿಬಿರ ಹಮ್ಮಿಕೊಳ್ಳುವ ಮೂಲಕ ಸಾವಿರಾರು ಜನರಿಗೆ ಅವಶ್ಯವಿರುವ ರಕ್ತವನ್ನು ಪೂರೈಸುವ ಕಾರ್ಯ ಅವಳಿ ಸಹೋದರರ ನೇತೃತ್ವದಲ್ಲಿ ನಡೆಯು ತ್ತಿರುವುದು ಸಂತಸ ತಂದಿದೆ ಎಂದು ಆಲಮೇಲ ವಿರಕ್ತ ಮಠದ ಮಲ್ಲಿಬೊಮ್ಮಯ್ಯ ಶ್ರೀಗಳು ಹೇಳಿ ದರು.
ಅವರು ಸೋಮವಾರ ಸಾಯಂಕಾಲ ಸಿಂದಗಿ ರಸ್ತೆಯ ಪಕ್ಕದಲ್ಲಿ ಜಗಜ್ಯೋತಿ ಬಸವ ಸಮೀತಿ, ಕರ್ನಾಟಕ ರಕ್ಷಣಾವೇದಿಕೆ ಹಾಗೂ ಶಾಂತೇಶ್ವರ ಗೆಳೆಯರ ಬಳಗದ ಸಹಯೋಗದಲ್ಲಿ ಅನೀಲಗೌಡ, ಸುನೀಲಗೌಡ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಂಡ ಬೃಹತ್ ರಕ್ತದಾನ, ಸಸಿ ವಿತರಣೆ ಹಾಗೂ ಸಾಧನೆಗೈದ ರೈತರಿಗೆ ಮತ್ತು ಮಾಜಿ ಸೈನಿಕರಿಗೆ, ಪೌರಕಾರ್ಮಿಕರಿಗೆ ಸನ್ಮಾನ ಕಾರ್ಯ ಕ್ರಮದ ಸಾನಿಧ್ಯವಹಿಸಿ ಆಶೀರ್ವಚನ ನೀಡಿದರು.
ಅವಳಿ ಸಹೋದರರು ಚಿಕ್ಕವರಿಂದಲೇ ಸಾರ್ವಜನಿಕ ಕಾರ್ಯಗಳನ್ನು ಮಾಡುತ್ತಿದ್ದಾರೆ. ಕಳೆದ ಹತ್ತು ವರ್ಷಗಳ ಹಿಂದೆ ಬಸವ ಜಯಂತಿಯಂದು ಸಾಮೂಹಿಕ ಮದುವೆ ಮಾಡಿ ಇಪ್ಪತ್ತಕ್ಕೂ ಹೆಚ್ಚು ಕುಟುಂಬಗಳಿಗೆ ಆರ್ಥಿಕ ಹೊರೆ ತಪ್ಪಿಸಿದ್ದಾರೆ. ಇಂತಹ ಸಹೋದರರು ಮಾದರಿಯಾಗಿ ಪ್ರತೀವರ್ಷ ಜನ್ಮದಿನ ಆಚರಿಸಿಕೊಳ್ಳುತ್ತಿದ್ದಾರೆ. ಇವರ ಸಾರ್ವಜನಿಕ ಜೀವನ ಇನ್ನಷ್ಟು ಉತ್ತಮ ವಾಗಿ ಸಾಗಲಿ ಎಂದು ಶೂಭ ಹಾರೈಸಿದರು.
ಇದನ್ನೂ ಓದಿ: Indi (Vijayapura) News: ಎಸ್ಬಿಐ ಬ್ಯಾಂಕ್ ರೈತಪರ ಯೋಜನೆ ಹಮ್ಮಿಕೊಂಡು ಜನರ ವಿಶ್ವಾಸ ಗಳಿಸಿದೆ
ಜೈನಾಪೂರದ ರೇಣುಖ ಶಿವಾಚಾರ್ಯರು ಆಶೀರ್ವಚನ ನೀಡಿ, ದೇಶ ಕಾಯುವ ಸೈನಿಕರಿಗೆ, ಅನ್ನ ನೀಡುವ ರೈತರಿಗೆ, ಪುರವನ್ನು ಸ್ವಚ್ಛವಾಗಿಡುವ ಪೌರ ಕಾರ್ಮಿಕರಿಗೆ ಸತ್ಕರಿಸುವ ಕಾರ್ಯ ಅಲ್ಲದೆ ಜೀ ಉಳಿಸುವ ರಕ್ತದಾನ ಮಾಡುವ ಕಾರ್ಯ ಮಾಡಿದ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದರು.
ಮುಖಂಡರಾದ ಕಾಸುಗೌಡ ಬಿರಾದಾರ, ಜಗದೀಶ ಕ್ಷತ್ರಿ, ಧನರಾಜ ಮುಜಗೊಂಡ, ವೈ.ಜಿ. ಬಿರಾ ದಾರ, ಬಾಳು ಮುಳಜಿ, ಪುರಸಭೆ ಸದಸ್ಯ ಅನೀಲಗೌಡ ಬಿರಾದಾರ ಸೇರಿದಂತೆ ಇನ್ನಿತರರು ಮಾತನಾಡಿದರು.

ಕಾರ್ಯಕ್ರಮದಲ್ಲಿ 500 ಸಸಿಗಳನ್ನು ವಿತರಿಸಿದ್ದು, 70ಕ್ಕೂ ಹೆಚ್ಚು ಜನರು ರಕ್ತದಾನ ಮಾಡಿದರು.
14 ವರ್ಷದಲ್ಲಿ 1820 ಜನರಿಂದ ರಕ್ತದಾನ ಮಾಡಲಾಗಿದ್ದು, ಈ ಬಾರಿ 70 ಜನ ಪೌರಕಾರ್ಮಿಕರಿಗೆ ಹೊದಿಕೆ ಕಿಟ್ ವಿತರಿಸಲಾಯಿತು. ದೇಹದಾನ ಮಾಡಿದ ಶಿವು ಬಿಸನಾಳ ಹಾಗೂ ರಾಜ್ಯ ಮಟಟ್ದ ಅತ್ಯುತ್ತಮ ಶಿಕ್ಷಕಿ ಪ್ರಶಸ್ತಿ ವಿಜೇತೆ ಶಶಿಕಲಾ ಬಡಿಗೇರ ಅವರಿಗೆ ಸತ್ಕರಿಸಿ, ಗೌರವಿಸಲಾಯಿತು.
ಕಾರ್ಯಕ್ರಮದ ವೇದಿಕೆಯಲ್ಲಿ ಜಟ್ಟೆಪ್ಪ ರವಳಿ, ಪ್ರಶಾಂತ ಕಾಳೆ, ಅಜಿತ್ ಧನಶೆಟ್ಟಿ, ಅಯೂಬ ಬಾಗವಾನ, ದೇವೆಂದ್ರ ಕುಂಬಾರ, ಬಸವರಾಜ ಗುತ್ತೇದಾರ, ವಿಠ್ಠಲ ಕಂಬಾರ, ಸುಭಾಸ ಹಿಟ್ನಳ್ಳಿ, ಸೋಮು ನಿಂಬರಗಿಮಠ, ಸಂತೋಶ ಗವಳಿ, ಶ್ರೀಕಾಂತ ದೇವರ, ದತ್ತಾ ಬಂಡೇನವರ, ಪಿ.ಎಸ. ಹೊಸಮನಿ, ಜಾವೀದ್ ಮೋಮಿನ್ ಸೇರಿದಂತೆ ಇನ್ನಿತರರು ಇದ್ದರು.