ವಿಡಿಯೋ ಫೋಟೋ ಗ್ಯಾಲರಿ ಫ್ಯಾಷನ್​ ಕ್ರೈಂ ಧಾರ್ಮಿಕ ವಿಶ್ವವಾಣಿ ಪ್ರಾಪರ್ಟಿ ಪ್ರವಾಸಿ ಪ್ರಪಂಚ ವಿದೇಶ ಸಂಪಾದಕೀಯ ಉದ್ಯೋಗ
Ad

Pavithra Bandhana Serial: ʻದಿಢೀರ್‌ ಅಂತ ನನ್ನ ಪಾತ್ರ ಮುಗಿದಿದ್ದು ವೀಕ್ಷಕರಿಗೆ ಬೇಸರವಾಗಿದೆʼ; ತಿಲಕ್‌ ದೇಶಮುಖ್‌ ಪಾತ್ರಧಾರಿ ಯಶಸ್‌ ಕೃಷ್ಣ

ʻಪವಿತ್ರ ಬಂಧನʼ ಧಾರಾವಾಹಿಯ ತಿಲಕ್ ದೇಶಮುಖ್ ಪಾತ್ರದ ಹಠಾತ್ ಅಂತ್ಯ ಪ್ರೇಕ್ಷಕರಲ್ಲಿ ಭಾರಿ ಬೇಸರ ಮೂಡಿಸಿದೆ. ನಟ ಯಶಸ್‌ ಕೃಷ್ಣ ಅವರು ಈ ಪಾತ್ರದ ಮೂಲಕ ಅಲ್ಪ ಅವಧಿಯಲ್ಲೇ ದೊಡ್ಡ ಜನಪ್ರಿಯತೆ ಗಳಿಸಿದ್ದರು. ಕಥೆಯ ಓಟಕ್ಕಾಗಿ ಪಾತ್ರ ಮುಕ್ತಾಯವಾಗುವುದು ಅನಿವಾರ್ಯ ಎಂದು ಯಶಸ್‌ ಸ್ಪಷ್ಟಪಡಿಸಿದ್ದಾರೆ.

Pavithra Bandhana: ʻನನ್ ಪಾತ್ರ ಅಂತ್ಯವಾಗೋದು ಗೊತ್ತಿತ್ತುʼ ಎಂದ ಯಶಸ್‌

-

Avinash GR
Avinash GR Apr 3, 2026 11:29 AM

ಕಲರ್ಸ್‌ ಕನ್ನಡದಲ್ಲಿ ಈಚೆಗೆಷ್ಟೇ ಶುರುವಾಗಿರುವ ಹೊಸ ಧಾರಾವಾಹಿ ʻಪವಿತ್ರ ಬಂಧನʼ ವೀಕ್ಷಕರ ಗಮನಸೆಳೆದಿದೆ. ಬಿಗ್‌ ಬಾಸ್‌ ಮೂಲಕ ಫೇಮಸ್‌ ಆಗಿರುವ ನಟ ಸೂರಜ್‌ ಸಿಂಗ್‌ ಅವರು ಈ ಸೀರಿಯಲ್‌ನಲ್ಲಿ ಹೀರೋ ಆಗಿದ್ದಾರೆ. ಜೊತೆಗೆ ಅವರ ಸಹೋದರ ತಿಲಕ್‌ ದೇಶಮುಖ್‌ ಎಂಬ ಪಾತ್ರವನ್ನು ನಟ ಯಶಸ್‌ ಕೃಷ್ಣ ನಿಭಾಯಿಸುತ್ತಿದ್ದರು. ಆದರೆ ಆ ಪಾತ್ರ ಆರಂಭದಲ್ಲೇ ಅಂತ್ಯ‌ ಕಂಡಿದೆ. ಆ ಬಗ್ಗೆ ಸ್ವತಃ ಯಶಸ್‌ ಕೃಷ್ಣ ಅವರೇ ವಿಶ್ವವಾಣಿ ಟಿವಿ ಜೊತೆಗೆ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಹೋದರ ಅಥವಾ ಗೆಳೆಯ ಇದ್ದರೆ ಹೀಗೆ ಇರಬೇಕು

ʻಪವಿತ್ರ ಬಂಧನʼ ಧಾರಾವಾಹಿಯಲ್ಲಿ ತಿಲಕ್‌ ಪಾತ್ರವು ಬೇಗನೇ ಮುಗಿದಿದ್ದರ ಬಗ್ಗೆ ಮನಬಿಚ್ಚಿ ಮಾತನಾಡಿರುವ ನಟ ಯಶಸ್ ಕೃಷ್ಣ, "ಈ ಧಾರಾವಾಹಿಯಲ್ಲಿ ನನ್ನ ಪಾತ್ರವು ಬಹಳ ಬೇಗನೇ ಮುಕ್ತಾಯವಾಗಲಿದೆ ಎಂಬ ವಿಷಯ ನನಗೆ ಮೊದಲೇ ತಿಳಿದಿತ್ತು. ಹಾಗಾಗಿ ಮಾನಸಿಕವಾಗಿ ನಾನು ಸಿದ್ಧನಿದ್ದೆ. ಆದರೆ, ನನ್ನ ಪಾತ್ರಕ್ಕೆ ಪ್ರೇಕ್ಷಕರಿಂದ ಇಷ್ಟೊಂದು ದೊಡ್ಡ ಮಟ್ಟದ ಪ್ರೀತಿ ಸಿಗುತ್ತದೆ ಎಂಬ ಕಲ್ಪನೆ ನನಗಿರಲಿಲ್ಲ. ತಿಲಕ್ ಸದಾ ಉತ್ಸಾಹದಿಂದ ಇರುತ್ತಿದ್ದ ಲವರ್ ಬಾಯ್ ಮತ್ತು ಗೆಳೆಯನಂತಹ ಪಾತ್ರವಾಗಿದ್ದರಿಂದ, ಜನರು ಆ ಪಾತ್ರದೊಂದಿಗೆ ಭಾವನಾತ್ಮಕವಾಗಿ ಕನೆಕ್ಟ್ ಆಗಿದ್ದರು. ಒಬ್ಬ ಸಹೋದರ ಅಥವಾ ಗೆಳೆಯ ಇದ್ದರೆ ಹೀಗೆ ಇರಬೇಕು ಎಂದು ಜನರು ಬಯಸುತ್ತಿದ್ದರು. ಹಾಗಾಗಿ, ಪಾತ್ರದ ಹಠಾತ್ ಅಂತ್ಯ ಪ್ರೇಕ್ಷಕರಿಗೆ ಬೇಸರ ತಂದಿದೆ. ಕಥೆಯ ಓಟಕ್ಕೆ ತಕ್ಕಂತೆ ನಿರ್ದೇಶಕರು ನಿರ್ಧಾರ ತೆಗೆದುಕೊಳ್ಳುವುದು ಅನಿವಾರ್ಯ" ಎಂದು ಹೇಳಿದ್ದಾರೆ.

ʻಬಿಗ್‌ ಬಾಸ್‌ʼ ಸೂರಜ್ ಸಿಂಗ್‌ಗೆ ಒಲಿದ 'ಪವಿತ್ರ ಬಂಧನ'; ಇನ್ಮೇಲೆ ಪ್ರತಿದಿನ ಕಲರ್ಸ್‌ ಕನ್ನಡದಲ್ಲಿ ಬರ್ತಾರೆ ವೈಲ್ಡ್ ಕಾರ್ಡ್ ಹೀರೋ!

ವೀಕ್ಷಕರೇ ಐಡಿಯಾ ಕೊಡ್ತಿದ್ದಾರೆ

"ಪಾತ್ರ ಮುಗಿದ ನಂತರ ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದ್ದಾರೆ. ಅನೇಕ ಪ್ರೇಕ್ಷಕರು ತಾವೇ ನಿರ್ದೇಶಕರಂತೆ ಆಲೋಚಿಸಿ, ನನ್ನ ಪಾತ್ರವನ್ನು ಮತ್ತೆ ಕಥೆಗೆ ತರಲು ಹಲವು ಆಸಕ್ತಿದಾಯಕ ಐಡಿಯಾಗಳನ್ನು ನೀಡುತ್ತಿದ್ದಾರೆ. ಈ ಸಲಹೆಗಳನ್ನು ನಮ್ಮ ನಿರ್ದೇಶಕರ ಗಮನಕ್ಕೆ ತರಬೇಕು, ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕು. ಆದರೂ ಕೆಲವೇ ಎಪಿಸೋಡ್‌ನಲ್ಲಿ ಕಾಣಿಸಿಕೊಂಡರೂ, ನನ್ನ ಪಾತ್ರಕ್ಕೆ ಇಷ್ಟೊಂದು ದೊಡ್ಡಮಟ್ಟದ ಜನಪ್ರಿಯತೆ ಸಿಕ್ಕಿರುವುದು ನನ್ನ ಪುಣ್ಯ" ಎನ್ನುತ್ತಾರೆ ಯಶಸ್‌ ಕೃಷ್ಣ.

ಸಿನಿಮಾಗಳಲ್ಲಿ ನಟಿಸುವ ಆಸೆ ಹೊಂದಿರುವ ಯಶಸ್ ಕೃಷ್ಣ

"ಮುಂದಿನ ದಿನಗಳಲ್ಲಿ ಸಿನಿಮಾಗಳಲ್ಲಿ ಸಕ್ರಿಯವಾಗಬೇಕು ಎಂಬುದು ನನ್ನ ಹಂಬಲವಾಗಿದೆ. ಸವಾಲಿನ ಪಾತ್ರಗಳನ್ನು ನಿರ್ವಹಿಸುವ ಆಸೆ ನನಗೂ ಇದೆ. ಚಿತ್ರರಂಗಕ್ಕೆ ಹೊಸಬನಾಗಿರುವುದರಿಂದ ಉತ್ತಮ ಅವಕಾಶಗಳಿಗಾಗಿ ಸ್ವಲ್ಪ ಕಾಯುವುದು ಅನಿವಾರ್ಯ. ಸದ್ಯದಲ್ಲೇ ಒಂದು ಒಳ್ಳೆಯ ಪ್ರಾಜೆಕ್ಟ್ ಮೂಲಕ ಮತ್ತೆ ಪ್ರೇಕ್ಷಕರ ಮುಂದೆ ಬರುತ್ತೇನೆ" ಎಂದು ಭರವಸೆ ನೀಡುತ್ತಾರೆ ನಟ ಯಶಸ್ ಕೃಷ್ಣ.

ಯಶಸ್‌ ಕೃಷ್ಣ ಸಂದರ್ಶನ



ಅಣ್ಣನ ಪಾತ್ರಧಾರಿ ಸೂರಜ್‌ ಬಗ್ಗೆ ಹೇಳಿದ್ದೇನು?

"ಸೂರಜ್ ಸಿಂಗ್‌ ಅವರು ಸೆಟ್‌ಗೆ ಬಂದ ತಕ್ಷಣ ಸ್ಕ್ರಿಪ್ಟ್ ಪಡೆದು ತಮ್ಮ ಪಾತ್ರಕ್ಕಾಗಿ ತುಂಬಾ ಕಠಿಣ ಪರಿಶ್ರಮ ಹಾಕುತ್ತಾರೆ. ಅವರ ಆ ತಯಾರಿ ಮೆಚ್ಚುವಂತಹದ್ದು. ಸೀರಿಯಲ್‌ನಿಂದ ನಾನು ಹೊರಗೆ ಬಂದಮೇಲೂ ಇಂದಿಗೂ ಆತ್ಮೀಯರಾಗಿದ್ದೇವೆ ಮತ್ತು ಆಗಾಗ ಭೇಟಿಯಾಗುತ್ತಿರುತ್ತೇವೆ" ಎನ್ನುತ್ತಾರೆ ಯಶಸ್‌ ಕೃಷ್ಣ.